ಯುವರತ್ನ ಮೂಲಕ ಸೆನ್ಸೇಷನ್ ಸೃಷ್ಟಿಸಲು ಸಿದ್ಧರಾಗಿರೋ ಪುನೀತ್, ಚಿತ್ರದ ಬಿಡಗಡೆಗೆ ಮುನ್ನ ಶಿರಡಿ ಮತ್ತು ಕೊಲ್ಹಾಪುರ ಯಾತ್ರ ಕೈಗೊಂಡಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ವಿಜಯ್ ಕಿರಗಂದೂರು ಅವರಿಗೆ ಈ ದೇವಸ್ಥಾನಗಳ ಮೇಲೆ ಅಪಾರ ನಂಬಿಕೆ. ಕೆಜಿಎಫ್ ಬಿಡುಗಡೆಗೂ ಮುನ್ನ ಕೂಡ ಇದೇ ರೀತಿ ದೇವರ ಆಶೀರ್ವಾದ ಬೇಡಿದ್ದರು. ಈಗ ಪುನೀತ್, ಸಂತೋಷ್ ಜೊತೆ ಕೊಲ್ಹಾಪುರದ ಮಹಾಲಕ್ಷ್ಮಿ ಮತ್ತು ಶಿರಡಿ ಸಾಯಿಬಾಬಾ ಮಂದಿರಗಳಿಗೆ ಭೇಟಿ ಕೊಟ್ಟು, ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.