ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ದೇಶದ ಕೋಟ್ಯಂತರ ಹಿಂದೂಗಳ ಶತಶತಮಾನಗಳ ಕನಸು. ಆ ಕನಸು ಈಗ ಈಡೇರುತ್ತಿದೆ. ಮಂದಿರ ಕಟ್ಟುವ ಕುರಿತು ಇದ್ದ ಎಲ್ಲ ಕಾನೂನು ವಿವಾದಗಳನ್ನೂ ಬಗೆಹರಿಸಿಕೊಂಡ ಮೇಲೆ ರಾಮಮಂದಿರ ಕಟ್ಟುವ ಕೆಲಸ ಶುರುವಾಗಿದೆ. ಈ ಮಂದಿರಕ್ಕೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸುವುದಾಗಿ ಸಂಘಟಕರು ಘೋಷಿಸಿದ್ದಾರೆ. ದೇಣಿಗೆ ನೀಡುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.
ಕನ್ನಡದಲ್ಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿರುವುದು ನಟಿ ಪ್ರಣೀತಾ ಸುಭಾಷ್. ಸ್ವತಃ 1 ಲಕ್ಷ ರೂ. ದೇಣಿಗೆ ನೀಡಿ, ಎಲ್ಲರಿಗೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ ಪ್ರಣೀತಾ. ಜೈ ಶ್ರೀರಾಮ್.