` ಅಪ್ಪ ಇದ್ದಿದ್ದರೆ ಖುಷಿ ಪಡ್ತಾ ಇದ್ರು - ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan remembers his father in thoogudeepa album
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಣ್ಣಲ್ಲಿ ಏನೋ ಹೆಮ್ಮೆ.. ಸಂತೃಪ್ತಿ.. ಅಂಥಾದ್ದೊಂದು ಭಾವನೆ ಮೂಡಿಸಿರುವುದು ತೂಗುದೀಪ ಡೈನೆಸ್ಟಿ. ತೂಗುದೀಪ ಶ್ರೀನಿವಾಸ್ ಅವರಿಗಾಗಿಯೇ ಒಂದು ಆಲ್ಬಂ ಮಾಡಲಾಗಿದ್ದು, ಅದು ನಾಳೆ (ಅಕ್ಟೋಬರ್ 31) ರಿಲೀಸ್ ಆಗಲಿದೆ. ಅ ವಿಡಿಯೋ ಆಲ್ಬಂಗಾಗಿ ದರ್ಶನ್ ಮಾತನಾಡಿದ್ದಾರೆ. ಅಪ್ಪ ಇರಬೇಕಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ನನ್ನ ತಂದೆ ಯಾವಾಗಲೂ ಒಂದು ಮಾತು ಹೇಳ್ತಾ ಇದ್ರು. ಕಲಾವಿದ ಯಾವತ್ತೂ ಕೂಡಾ ಹೊರಗಿನವರ ಸ್ವತ್ತು. ಆಮೇಲೆ ಆತ ಮನೆಯವರ ಆಸ್ತಿ ಎನ್ನುತ್ತಿದ್ದರು. ಈ ಅಕ್ಟೋಬರ್ 16ಕ್ಕೆ ತಂದೆ ದೂರವಾಗಿ 23 ವರ್ಷ. ಅವರು ಈಗಲೂ ಜೀವಂತವಾಗಿದ್ದಾರೆ ಅನ್ನೋದಕ್ಕೆ ಈ ಆಲ್ಬಂ ಸಾಕ್ಷಿ. ಅಪ್ಪ ಬದುಕಿದ್ದರೆ, ಈ ವಿಡಿಯೋ ನೋಡಿದ್ದರೆ ಖಂಡಿತಾ ಖುಷಿ ಪಡುತ್ತಿದ್ದರು ಎಂದಿದ್ದಾರೆ ದರ್ಶನ್. ಆಲ್ಬಂ ಮಾಡಿದ ತೂಗುದೀಪ ಡೈನೆಸ್ಟಿ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ.