ಭರಾಟೆ ಚಿತ್ರದ ರಿಲೀಸ್ ಗುಂಗಿನಲ್ಲಿರುವ ಶ್ರೀಮುರಳಿ ಸುತ್ತ ಒಂದು ಹ್ಯಾಪಿ ಹ್ಯಾಪಿ ನ್ಯೂಸ್ ಹರಿದಾಡುತ್ತಿದೆ. ಆ ಹ್ಯಾಪಿ ನ್ಯೂಸ್ ನಿಜವಾಗಿದ್ದೇ ಆದರೆ, ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಮತ್ತೆ ಒಂದಾಗಲಿದ್ದಾರೆ.
ಶ್ರೀಮುರಳಿ ವೃತ್ತಿ ಜೀವನಕ್ಕೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರವದು. ಅವರೀಗ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಡೈರೆಕ್ಟರ್. ಸಂಬಂಧದಲ್ಲಿ ಶ್ರೀಮುರಳಿಯ ಭಾವ.
ಪ್ರಶಾಂತ್ ನೀಲ್ ಕೆಜಿಎಫ್ ಮುಗಿಸಿಕೊಂಡ ನಂತರ ಶ್ರೀಮುರಳಿ ಅವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಭರಾಟೆ ಮುಗಿದೊಡನೆ ಮದಗಜ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.