ಮಿಸ್ಸಿಂಗ್ ಬಾಯ್ ಚಿತ್ರ, ನಿಧಾನವಾಗಿ ಚಿತ್ರರಸಿಕರವನ್ನು ಆವರಿಸಿಕೊಳ್ಳುತ್ತಿದೆ. ನೈಜ ಘಟನೆ ಆಧರಿತ ಕಥೆ ಹೊಂದಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಕಿಚ್ಚ ಸುದೀಪ್, ನಾನಿ, ಶಿವಣ್ಣ ಮೊದಲಾದವರ ಗಮನ ಸೆಳೆದಿದೆ. ಈಗ ರಾಜಕಾರಣಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ಚುನಾವಣೆಯ ಬಿಡುವಿಲ್ಲದ ಶೆಡ್ಯೂಲ್ ನಡುವೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಸಿದ್ದರಾಮಯ್ಯ. ಯಾವುದೇ ಚಿತ್ರ, ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭವಾಗಲಿ ಎಂದಿದ್ದಾರೆ.
ಸಿದ್ದು ಒಬ್ಬರೇ ಅಲ್ಲ, ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಘುರಾಮ್ ನಿರ್ದೇಶನದ ಚಿತ್ರದಲ್ಲಿ ಗುರುನಂದನ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.