ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ಚೆಲುವೆ ಚಮಕ್ ತೋರಿಸಿ ಹೋದ ನಂತರ ಕನ್ನಡದಲ್ಲಿ ಕಾಣಿಸಿಕೊಂಡೇ ಇಲ್ಲ. 2018ರಲ್ಲಿ ರಶ್ಮಿಕಾರ ಒಂದೇ ಒಂದು ಕನ್ನಡ ಸಿನಿಮಾ ಇರಲಿಲ್ಲ. 2019ರ ಆರಂಭದಲ್ಲೇ ಯಜಮಾನ ಜೊತೆ ಕಾಣಿಸಿಕೊಳ್ತಿರೋ ರಶ್ಮಿಕಾ ಮಂದಣ್ಣ, ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.
ಚಿತ್ರದ ಹಾಡುಗಳ ಚಿತ್ರೀಕರಣದ ವೇಳೆ ದರ್ಶನ್ ಅವರಿಗೆ ಆ್ಯಕ್ಸಿಡೆಂಟ್ ಆಗಿ ಕೈಗೆ ಪೆಟ್ಟಾಗಿತ್ತು. ಕೆಲವೇ ದಿನ ವಿಶ್ರಾಂತಿ ಬಳಿಕ ಅವರು ಶೂಟಿಂಗಿಗೆ ಬಂದರು. ಯಾವುದೇ ನೆಪ ಹೇಳಲಿಲ್ಲ. ನಮ್ಮ ನೋವು ಏನೇ ಇದ್ದರೂ, ನೆಪ ಹೇಳದೆ ಕೆಲಸ ಮಾಡಬೇಕು ಅನ್ನೋದು ದರ್ಶನ್ ಅವರನ್ನು ನೋಡಿದ ನಂತರ ಗೊತ್ತಾಯಿತು ಎಂದಿದ್ದಾರೆ ರಶ್ಮಿಕಾ.
ನಮ್ಮ ನೋವನ್ನು ಒಳಗೇ ಇಟ್ಟುಕೊಂಡು ಮುಂದುವರಿಯಬೇಕು. ಇಲ್ಲದೇ ಹೋದರೆ ನಾವು ಕೆಲಸಕ್ಕೆ ಗೌರವ ಕೊಡುತ್ತಿಲ್ಲ ಎಂದರ್ಥ. ದರ್ಶನ್ ಎಷ್ಟು ಶ್ರಮಜೀವಿ ಅನ್ನೋದು ಆಮೇಲೆ ಗೊತ್ತಾಯ್ತು ಎಂದಿದ್ದಾರೆ ರಶ್ಮಿಕಾ.
ಯಜಮಾನ ಚಿತ್ರದ ಒಂದು ಮುಂಜಾನೆ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಭರ್ಜರಿ ಸದ್ದು ಮಾಡುತ್ತಿದೆ.