ಮೀಟೂ ಬಿರುಗಾಳಿಗೆ ಸ್ಟಾರ್ ನಟರಷ್ಟೇ ಅಲ್ಲ, ಚಿತ್ರ ನಿರ್ಮಾಪಕ, ನಿರ್ದೇಶಕರೂ ಕಂಗಾಲಾಗಿದ್ದಾರೆ. ಸಿನಿಮಾದಲ್ಲಿ ಎಲ್ಲರ ಪಾತ್ರ ಮುಗಿದ ಮೇಲೆ ಈ ರೀತಿ ಆರೋಪ ಕೇಳಿ ಬಂದರೆ ಏನು ಮಾಡೋದು ಅನ್ನೋದು ನಿರ್ಮಾಪಕರು, ನಿರ್ದೇಶಕರ ಆತಂಕ. ಅರ್ಜುನ್ ಸರ್ಜಾ, ಶೃತಿ ಹರಿಹರನ್ ವಿಚಾರದಲ್ಲಿ ಸಂಧಾನ ಸಭೆಯೂ ಮುರಿದುಬಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದೆ.
ನಿರ್ಮಾಪಕರ ಹಿತರಕ್ಷಣೆಗಾಗಿ ಪ್ರೊಡ್ಯೂಸರ್ಸ್ ಪ್ರೊಟೆಕ್ಷನ್ ಕಮಿಟಿ (ಪಿಪಿಸಿ) ರಚನೆಗೆ ಮುಂದಾಗಿದೆ. ಈ ಸಮಿತಿಯಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಇರುತ್ತಾರೆ. ವಾಣಿಜ್ಯ ಮಂಡಳಿಯ ಅಕ್ಟೋಬರ್ 30ರ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಲಿದೆಯಂತೆ. ಎಲ್ಲವೂ ಚುರುಕಾಗಿ ನಡೆದರೆ, ಇನ್ನೊಂದೆರಡು ವಾರಗಳಲ್ಲಿ ಪಿಪಿಸಿ ಅಸ್ಥಿತ್ವಕ್ಕೆ ಬರಲಿದೆ.