` ಪುನೀತ್ ಹೇಳಿದ ಮುತ್ತಿನಂತಾ ಮಾತುಗಳು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
appu speak up
Anjaniputra Movie Image

ಪುನೀತ್ ರಾಜ್‍ಕುಮಾರ್ ಹೆಸರಾಗಿರುವುದು ಸರಳತೆಗೆ. ವಿನಯಕ್ಕೆ. ಆ ಗುಣವೇ ಅವರನ್ನು ಪವರ್ ಸ್ಟಾರ್ ಆಗಿಸಿದೆ. ಎಲ್ಲರನ್ನೂ ಪ್ರೀತಿಸುವ ಅವರ ಆ ಗುಣವೇ ಚಿತ್ರರಂಗದಲ್ಲಿ ಅವರ ಗೌರವ ಇಮ್ಮಡಿಗೊಳ್ಳುವಂತೆ ಮಾಡಿದೆ. ಈಗ ಅಂಜನೀಪುತ್ರದ ಬಿಡುಗಡೆಯ ಸಮಯ. ರಾಜಕುಮಾರನ ಸಕ್ಸಸ್ ನಂತರ ಬಿಡುಗಡೆಯಾಗುತ್ತಿರುವ ಚಿತ್ರ, ಭರ್ಜರಿ ನಿರೀಕ್ಷೆ ಹುಟ್ಟಿಸಿದೆ. ಈ ಸಮಯದಲ್ಲಿ ಅವರು ಆಡಿರುವ ಈ ಮಾತುಗಳೇ, ಅವರೇಕೆ ರಾಜಕುಮಾರ ಎಂಬುದನ್ನು ಸಾರಿ ಹೇಳುತ್ತವೆ.

ಹರ್ಷ ಅವರ ಜೊತೆ ನನ್ನ ಸ್ನೇಹ ಸುಮಾರು 20 ವರ್ಷಗಳದ್ದು. ಅವರು ಕೊರಿಯಾಗ್ರಫರ್ ಆದ ದಿನದಿಂದಲೂ ಒಟ್ಟಿಗೇ ಸಿನಿಮಾ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ. 

ಮೇಕಿಂಗ್ ವಿಚಾರಕ್ಕೆ ಬಂದರೆ, ಹರ್ಷ ಅವರ ಎಂಜಾಯ್ ಮಾಡುತ್ತಾ ಶೂಟಿಂಗ್ ಮುಗಿಸಿದ್ದೇನೆ. ಅದರ ಕ್ರೆಡಿಟ್ ಸಲ್ಲಬೇಕಿರೋದು ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಿರ್ದೇಶಕ ಹರ್ಷ ಅವರಿಗೆ.

ಇದು ರೀಮೇಕ್ ಆಗಿದ್ದರೂ, ವೊರಿಜಿನಲ್ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಹಾಡುಗಳು ಹಾಗೂ ಸಾಹಸ ದೃಶ್ಯಗಳು ನನಗೇ ಅಚ್ಚರಿ ಹುಟ್ಟಿಸುವಂತೆ ಮೂಡಿಬಂದಿವೆ. ಥ್ಯಾಕ್ಸ್ ಟು ರವಿವರ್ಮ.

ರಶ್ಮಿಕಾ ಅವರಿಗೆ ನನ್ನ ವಯಸ್ಸಿನ ಅರ್ಧದಷ್ಟು ವಯಸ್ಸು. ಆದರೆ, ರಿಯಲಿ ವಂಡರ್‍ಫುಲ್.

ರಮ್ಯ ಕೃಷ್ಣ ಅವರ ಜೊತೆ ನಟಿಸಿದ್ದೇನೆ ಎನ್ನುವುದೇ ನನಗೆ ಖುಷಿ. ಸಾಧುಕೋಕಿಲ, ರವಿಶಂಕg, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ.. ಅವರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಅವರೆಲ್ಲ ಜೊತೆ ನಾನೂ ನಟಿಸಿದ್ದೆನೆ ಎಂಬ ಸಂಭ್ರಮವಿದೆ.

 

ಹೀಗೆ ಪುನೀತ್ ನಿರರ್ಗಳವಾಗಿ ಮಾತನಾಡುತ್ತಾ, ಸಹಕಲಾವಿದರನ್ನು ಹೊಗಳುತ್ತಾ ಹೋಗುತ್ತಾರೆ. ಅದು ಕೇವಲ ತೋರಿಕೆಗೆ ಅನ್ನಿಸೋದಿಲ್ಲ. ಏಕೆಂದರೆ, ಅವರು ಇರೋದೇ ಹಾಗೆ. ಅದ್ಸರಿ, ಅಂಜನೀಪುತ್ರ ನೋಡಿದ್ರಾ..?