ಬಿಡುಗಡೆಗೆ ಸಿದ್ಧವಾಗಿರುವ ಟೈಗರ್ ಗಲ್ಲಿ ಅಬ್ಬರದಿಂದಲೇ ಬರುತ್ತಿದೆ. ಚಿತ್ರದಲ್ಲಿ ಎಲ್ಲಿ ನೋಡಿದರೂ ಅಬ್ಬರ. ಪ್ರತಿ ಪಾತ್ರದಲ್ಲೂ ಕಾಣಿಸುತ್ತಿರುವುದು ಆಕ್ರೋಶ. ಈ ಚಿತ್ರದ ವಿಶೇಷವೇನು ಗೊತ್ತಾ..? ಈ ಚಿತ್ರದಲ್ಲಿ ಬರೋಬ್ಬರಿ 9 ನಿರ್ದೇಶಕರಿದ್ದಾರೆ.
ಹೌದು, ಈ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಒಬ್ಬರೇ. ಆದರೆ, ಚಿತ್ರದಲ್ಲಿ ಕೆಲಸ ಮಾಡಿರುವುದು ಒಟ್ಟು 9 ನಿರ್ದೇಶಕರು. ಶಿವಮಣಿ, ಸಾಯಿಕೃಷ್ಣ, ಅಯ್ಯಪ್ಪ ಪಿ. ಶರ್ಮಾ, ಆನಂದ್, ಗಿರಿರಾಜ್, ಮ್ಯಾಥ್ಯೂ ರಾಜನ್, ಥ್ರಿಲ್ಲರ್ ಮಂಜು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಕೆ.ವಿ. ರಾಜು ಅವರು ಸಹಾಯ ಮಾಡಿದ್ದಾರೆ. ಅಲ್ಲಿಗೆ ಚಿತ್ರಕ್ಕೆ ದುಡಿದ ನಿರ್ದೇಶಕರ ಒಟ್ಟು ಸಂಖ್ಯೆ 10ಕ್ಕೆ ತಲುಪಿದೆ.
ಇನ್ನು ಇವರಲ್ಲಿ ಬಹುತೇಕರು ಚಿತ್ರ ನಿರ್ಮಾಣದಲ್ಲೂ ಕೈ ಆಡಿಸಿದವರು. ನಾಯಕ ನೀನಾಸಂ ಸತೀಶ್ ಸೇರಿದಂತೆ ಬಹುತೇಕ ನಿರ್ದೇಶಕರು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದವರೇ. ಒಟ್ಟಿನಲ್ಲಿ ಟೈಗರ್ ಗಲ್ಲಿಯಲ್ಲಿ ಕುತೂಹಲ ಹುಟ್ಟಿಸುವ ಅಂಶಗಳಿಗಂತೂ ಬರವೇ ಇಲ್ಲ.
Related Articles :-
ಶಿವಣ್ಣನಿಗೆ ಅವಾಜ್ ಹಾಕಿದ್ದಕ್ಕೆ ಟೈಗರ್ ಗಲ್ಲಿಗೆ ಎಂಟ್ರಿ..
ಗಂಟೆ ಹೊಡೆದ್ರೆ ಶಿವ..ತಮಟೆ ಹೊಡೆದ್ರೆ ಯಮ
ಬೆಂಗಳೂರಿನ ಟೈಗರ್ ಗಲ್ಲಿ ಎಲ್ಲಿದೆ ಗೊತ್ತಾ..?