` ಗಾಳಿಪಟ-2 : ಶರಣ್, ರಿಷಿ ಔಟ್. ಗಣೇಶ್, ದಿಗಂತ್ ಇನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
breaking news from gaalipata 2 team
Gaalipata 2

ಗಾಳಿಪಟ-2, ಯೋಗರಾಜ್ ಭಟ್ಟರ ಚಿತ್ರ. ಶೂಟಿಂಗ್ ಶುರುವಾಗಬೇಕಿರುವ ಚಿತ್ರದಲ್ಲಿ ಒಂದು ಅನಿರೀಕ್ಷಿತ ಬದಲಾವಣೆಯಾಗಿದೆ. ಪ್ಲಾನ್ ಪ್ರಕಾರ ಚಿತ್ರದಲ್ಲಿ ಶರಣ್, ರಿಷಿ ಹಾಗೂ ಪವನ್ ಕುಮಾರ್ ನಾಯಕರು. ಆದರೆ, ಈಗ ಆ ಮೂವರಲ್ಲಿ ಇಬ್ಬರು ಹೊರಹೋಗಿದ್ದಾರೆ. ಶರಣ್ ಮತ್ತು ರಿಷಿ. ಇಬ್ಬರು ಒಳಗೆ ಬಂದಿದ್ದಾರೆ ಗಣೇಶ್ ಮತ್ತು ದಿಗಂತ್. ಅದಕ್ಕೆಲ್ಲ ಕಾರಣ ಸ್ಕ್ರಿಪ್ಟ್.

ನಿರ್ಮಾಪಕ ಮಹೇಶ್ ದಾನಣ್ಣವರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಡೆವಲಪ್ ಆಗುತ್ತಾ ಹೋದಂತೆ ಈ ಪಾತ್ರಗಳಿಗೆ ಗಣೇಶ್ ಮತ್ತು ದಿಗಂತ್ ಅವರೇ ಸೂಕ್ತ ಎನ್ನಿಸೋಕೆ ಶುರುವಾಯ್ತು. ಹೀಗಾಗಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಶರಣ್ ತುಂಬಾ ಒಳ್ಳೆಯ ನಟ. ಅವರು ಈ ಚಿತ್ರಕ್ಕಾಗಿ ಕೆಲವು ತಿಂಗಳು ಕೆಲಸ ಮಾಡಿದ್ದಾರೆ. ನಾವು ಈ ಚಿತ್ರದಲ್ಲಿ ಶರಣ್ ಅವರನ್ನು ಮಿಸ್ ಮಾಡಿಕೊಂಡರೂ, ಗಾಳಿಪಟ-2 ಮುಗಿದ ಮೇಲೆ ಶರಣ್-ಯೋಗರಾಜ್ ಭಟ್ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾ ಶುರು ಮಾಡುತ್ತಿದ್ದೇನೆ ಎಂದಿದ್ದಾರೆ ಮಹೇಶ್.

ಯೋಗರಾಜ್ ಭಟ್ಟರ ಸೋದರ ಮೃತಪಟ್ಟಿದ್ದು, ಸದ್ಯಕ್ಕೆ ಹುಟ್ಟೂರಿನಲ್ಲಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.