` rachita ram - chitraloka.com | Kannada Movie News, Reviews | Image

rachita ram

  • ಪುನೀತ್, ಸುದೀಪ್‍ಗೆ ಐ ಲವ್ ಯೂನಲ್ಲಿ ಇಷ್ಟವಾಗಿದ್ದೇನು..?

    upendra received dfferent reactions

    ಐ ಲವ್ ಯೂ ಚಿತ್ರ ಗೆದ್ದಿದೆ. ದಿನೇ ದಿನೇ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಇದರ ಮಧ್ಯೆ ಹಾಡಿನ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಈ ಎಲ್ಲದರ ಮಧ್ಯೆ ಉಪೇಂದ್ರಗೆ ತಮ್ಮ ಪಾತ್ರದ ಬಗ್ಗೆ ಸಿಕ್ಕಿರುವ ಫೀಡ್‍ಬ್ಯಾಕ್ ಬಹಳ ಖುಷಿ ಕೊಟ್ಟಿದೆ. 40 ದಾಟಿರುವ ಹೀರೋಗೆ ನೀವು 15 ವರ್ಷ ಚಿಕ್ಕೋರಾಗಿ ಕಾಣ್ತಿದ್ದೀರಿ ಅಂದ್ರೆ ಖುಷಿಯಾಗದೇ ಇರೋದಿಲ್ವಾ..?

    ಪುನೀತ್, ಸುದೀಪ್, ನಿರ್ಮಾಪಕ ಮುನಿರತ್ನ ಅವರೆಲ್ಲರಿಗೂ ನನ್ನ ಡ್ಯಾನ್ಸ್ ಇಷ್ಟವಾಗಿದೆ. ನನ್ನ ಅತ್ತಿಗೆ ಎ ಮತ್ತು ಉಪೇಂದ್ರ ಚಿತ್ರದಲ್ಲಿರೋ ಹಾಗೆ ಯಂಗ್ ಆಗಿ ಕಾಣ್ತಿದ್ದೀಯ ಅಂದ್ರು. ನನ್ನ ಅಣ್ಣನ ಮಗ ನಿರಂಜನ್ ನನಗಿಂತ ಯಂಗ್ ಆಗಿ ಕಾಣ್ತಿದ್ದೀರಾ ಎಂದು ಹೇಳಿದ.

    ಚಿತ್ರ ನೋಡಿದ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಫೋನ್ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ, ಮೆಸೇಜ್ ಮಾಡುವ ಮೂಲಕ ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಉಪೇಂದ್ರ. ಅಂದಹಾಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದವರೆಲ್ಲ ಕುಟುಂಬಸ್ಥರೇ ಎನ್ನುವುದನ್ನು ಒತ್ತಿ ಹೇಳ್ತಾರೆ ಉಪ್ಪಿ.

    ಅದೆಲ್ಲಕ್ಕಿಂತ ಉಪ್ಪಿಗೆ ಖುಷಿ ಕೊಟ್ಟಿರೋದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಫೀಡ್‍ಬ್ಯಾಕ್. ಯಾಕಂದ್ರೆ, ಚಿತ್ರದ ಕಲೆಕ್ಷನ್ನು ಭರ್ಜರಿಯಾಗಿದೆ.

  • ಪ್ರಜ್ವಲ್ ಜೊತೆ ರಚಿತಾ ರಾಮ್

    rachita ram to pair opposite prajwal devaraj

    ಅರ್ಜುನ್ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್‍ಗೆ ವಿಭಿನ್ನತೆಯ ಟಚ್ ಕೊಟ್ಟ ನಿರ್ದೇಶಕ ಪಿ.ಸಿ.ಶೇಖರ್, ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೀರೋ. ಚಿತ್ರದ ಕಥೆಗೆ ಪ್ರಜ್ವಲ್ ದೇವರಾಜ್ ಓಕೆ ಎಂದಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರೋದು ರಚಿತಾ ರಾಮ್.

    ರಚಿತಾ ರಾಮ್ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರಂತೆ. ಆದರೆ, ಇನ್ನೂ ಅಧಿಕೃತಗೊಂಡಿಲ್ಲ. ಜೋಡಿ ಪಕ್ಕಾ ಆದರೆ, ಪ್ರಜ್ವಲ್-ರಚಿತಾ ರಾಮ್ ಜೋಡಿಯ ಪ್ರಥಮ ಚಿತ್ರವಾಗಲಿದೆ ಪಿ.ಸಿ.ಶೇಖರ್ ಸಿನಿಮಾ.

  • ಪ್ರೀತಿಪ್ರೇಮ ಪುಸ್ತಕದ್ ಬದ್ನೇಕಾಯ್ ಎಂದಿದ್ದ ಜಾಗದಲ್ಲೇ ಐ ಲವ್ ಯೂ

    same place opposite scene in i love you shooting

    ನೀನ್ ಕೊಟ್ರೆ ನಾನ್ ಕೊಡ್ತೀನಿ. ನಾನ್ ಕೊಡ್ಲಿಲ್ಲ ಅಂದ್ರೆ ನೀನ್ ಕೊಡಲ್ಲ. ಇಷ್ಟು ವಿಶಾಲವಾದ ಪ್ರಪಂಚದಲ್ಲಿ ನೀನು ಪ್ರೀತಿ ಅನ್ನೋ ಪುಟ್ಟ ಸರ್ಕಲ್‍ನಲ್ಲಿ ನಿಂತಿದ್ದೀಯ. ಜೀವನದ ಪ್ರಾಬ್ಲಂ ಅನ್ನೋದು ಜೀಪ್ ರೂಪದಲ್ಲಿ ಬಂದ್ರೆ, ನೀನು ಸರ್ಕಲ್‍ನಿಂದ ಹೊರಗೆ ಬರ್ತೀಯಾ.. ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್. ಹೀಗೆ ಡೈಲಾಗ್ ಹೊಡೆದಿದ್ದ ಉಪೇಂದ್ರರ ಎ ಚಿತ್ರ ನೆನಪಿದ್ಯಾ..?

    ಐ ಲವ್ ಯೂ ಎಂದು ಬೆನ್ನು ಬೀಳುವ ಚಾಂದಿನಿಗೆ, ಉಪೇಂದ್ರ ಜೀವನ ಪಾಠ ಮಾಡೋ ಎ ಚಿತ್ರದ ಆ ಸೀನ್ ಸೂಪರ್ ಹಿಟ್ ಆಗಿತ್ತು. ಈಗ.. ಅದೇ ಜಾಗದಲ್ಲಿ.. ಅದೇ ನಂದಿಬೆಟ್ಟದಲ್ಲಿ ಅದೇ ಉಪೇಂದ್ರ, ರಚಿತಾ ರಾಮ್‍ಗೆ ಐ ಲವ್ ಯೂ ಎಂದಿದ್ದಾರೆ. ಇದು ಐ ಲವ್ ಯೂ ಚಿತ್ರಕ್ಕಾಗಿ.

    ಆರ್. ಚಂದ್ರು ನಿದೇಶನದ ಐ ಲವ್ ಯೂ ಚಿತ್ರದಲ್ಲಿ ಎ ಚಿತ್ರದ ಸೀನ್ ನೆನಪಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇತಿಹಾಸವನ್ನು ನೆನಪಿಸಿಕೊಳ್ಳುವುದು ಯಾರಿಗಾದರೂ ಖುಷಿ ಕೊಡುತ್ತೆ. ಇದು ಎ ಚಿತ್ರದಂತೆ ತಲೆಗೆ ಹುಳ ಬಿಡಲ್ಲ. ನೋಡುಗನ ಹೃದಯ ತಟ್ಟುವ ಸಿನಿಮಾ ಎಂದಿದ್ದಾರೆ ಉಪೇಂದ್ರ.

  • ಫಸ್ಟ್ ನೈಟ್ ಎಲ್ಲರೂ ಏನ್ ಮಾಡ್ತಾರೆ? : ಡಿಂಪಲ್ ಪ್ರಶ್ನೆಗೆ ಎಲ್ರೂ ಕಂಗಾಲ್

    ಫಸ್ಟ್ ನೈಟ್ ಎಲ್ಲರೂ ಏನ್ ಮಾಡ್ತಾರೆ? : ಡಿಂಪಲ್ ಪ್ರಶ್ನೆಗೆ ಎಲ್ರೂ ಕಂಗಾಲ್

    ಲವ್ ಯೂ ರಚ್ಚು ಚಿತ್ರದ ಹಾಡು ರಿಲೀಸ್ ಆಗಿದೆ. ಮುದ್ದು ನೀನು.. ಅನ್ನೋ ಹಾಡು.. ಆ ಹಾಡಿನಲ್ಲಿರೋ ಅಜೇಯ್ ರಾವ್, ರಚಿತಾ ರೊಮ್ಯಾನ್ಸ್.. ನೋಡುಗರನ್ನು ಬೆಚ್ಚಚ್ಚಚ್ಚಗಾಗಿಸೋ ರಚಿತಾ ರಾಮ್.. ಹಾಡು ಹಿಟ್ ಆಗಿದೆ. ಆದರೆ.. ಎಲ್ಲರದ್ದೂ ಒಂದೇ ಪ್ರಶ್ನೆ. ಐ ಲವ್ ಯೂ ನಂತರ ರಚಿತಾ ರಾಮ್ ಅಂತಾ ದೃಶ್ಯಗಳಲ್ಲಿ ನಟಿಸೋದಿಲ್ಲ ಎಂದಿದ್ದರು. ಹಾಗಾದರೆ ರಚಿತಾ ರಾಮ್ ಆ ಪ್ರತಿಜ್ಞೆ ಮುರಿದಿದ್ದು ಏಕೆ..? ಇಂತಾದ್ದೊಂದು ಪ್ರಶ್ನೆ ರಚಿತಾಗೆ ಎದುರಾಗಿದ್ದು ಸುದ್ದಿಗೋಷ್ಟಿಯಲ್ಲಿ.

    ಮದುವೆ ಆದ ಮೇಲೆ ಫಸ್ಟ್ ನೈಟ್ ಇರುತ್ತಲ್ಲಾ.. ಅಲ್ಲಿ ಎಲ್ಲರೂ ಏನ್ ಮಾಡ್ತಾರೆ? ನಂಗೆ ಗೊತ್ತಿಲ್ಲ. ನಂಗಿನ್ನೂ ಮದುವೆ ಆಗಿಲ್ಲ. ರೊಮ್ಯಾನ್ಸ್ ಮಾಡ್ತಾರೆ ಅಲ್ವಾ..? ಅದನ್ನೇ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದು ಉತ್ತರಿಸಿದ ರಚಿತಾ ರಾಮ್, ಮಾಡಲ್ಲ ಎಂದು ಹೇಳಿದ್ದ ದೃಶ್ಯದಲ್ಲಿ ನಟಿಸಿದ್ದೇನೆ ಎಂದರೆ ಅದಕ್ಕೊಂದು ರೀಸನ್ ಇರುತ್ತೆ ಅಲ್ವಾ..? ಸಿನಿಮಾ ರಿಲೀಸ್ ಆದ ಮೇಲೆ ನಿಮಗೇ ಗೊತ್ತಾಗುತ್ತೆ. ಆಗ ನೋಡಿ ಹೇಳಿ.. ಎಂದು ವಿವಾದಕ್ಕೆ ಫುಲ್ ಸ್ಟಾಪ್ ಇಡೋ ಪ್ರಯತ್ನ ಮಾಡಿದರು.

    ಗುರುದೇಶಪಾಂಡೆ ನಿರ್ಮಾಣದ ಲವ್ ಯೂ ರಚ್ಚು ಚಿತ್ರಕ್ಕೆ ಶಂಕರ್ ರಾಜ್ ಡೈರೆಕ್ಟರ್. ಮಣಿಕಾಂತ್ ಕದ್ರಿ ಸಂಗೀತ ನೀಡಿರೋ ಹಾಡಿಗೆ ಧ್ವನಿ ನೀಡಿರೋದು ಸಿದ್ದ್ ಶ್ರೀರಾಮ್ ಮತ್ತು ಸುಪ್ರಿಯಾ ರಾಮ್. ನಾಗಾರ್ಜುನ್ ಶರ್ಮಾ ಅವರು ಬರೆದಿರೋ ಹಾಡಿನ ಸಾಹಿತ್ಯಕ್ಕೆ ಅಷ್ಟೇ ರೊಮ್ಯಾಂಟಿಕ್ ಆಗಿ ಕಿಕ್ ಕೊಟ್ಟಿರೋದು ರಚಿತಾ ರಾಮ್ ಮತ್ತು ಅಜೇಯ್ ರಾವ್.

  • ಫೆ.3ರಿಂದಲೇ ನಟಸಾರ್ವಭೌಮನ ಟಿಕೆಟ್ ಬುಕ್ ಮಾಡಿ

    natasarvabhouma booking from feb 3rd

    ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್‍ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.

    ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್‍ಫುಲ್ ಬೋರ್ಡ್ ಗ್ಯಾರಂಟಿ.

    ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

     

  • ಫೆ.4ರಿಂದ 100 ಮನೆ ಮನೆಗೆ..

    ಫೆ.4ರಿಂದ 100 ಮನೆ ಮನೆಗೆ..

    2021ರಲ್ಲಿ ರಿಲೀಸ್ ಆಗಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದ ಸಿನಿಮಾ 100. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಜೊತೆ ಪೊಲೀಸರನ್ನೂ ಸೆಳೆದಿದ್ದ ಸಿನಿಮಾ. ರಮೇಶ್, ರಚಿತಾ ರಾಂ, ಪೂರ್ಣ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ಮಾಲತಿ ಸುಧೀರ್ ಮೊದಲಾದವರು ನಟಿಸಿದ್ದ ಸಿನಿಮಾದ ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಸಿನಿಮಾ ಒಟಿಟಿಗೆ ಬರುತ್ತಿದೆ.

    ರಮೇಶ್ ರೆಡ್ಡಿ ನಿರ್ಮಾಣದ 100 ಝೀ 5ನಲ್ಲಿ ರಿಲೀಸ್ ಆಗುತ್ತಿದ್ದು, ಫೆಬ್ರವರಿ 4ರಿಂದ ಪ್ರೇಕ್ಷಕರಿಗೆ ಸಿಗಲಿದೆ.

  • ಬಾಕ್ಸಾಫೀಸ್‍ನಲ್ಲಿ ಅಯೋಗ್ಯನ ಆರ್ಭಟ

    ayogya running successfully

    ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಇದೇ ಶುಕ್ರವಾರ ರಿಲೀಸ್ ಆಗಿರುವ ಸಿನಿಮಾ, ಮೂರೇ ದಿನಕ್ಕೆ 4 ಕೋಟಿ ಗಳಿಕೆ ಮಾಡಿದೆಯಂತೆ. ಹಳೇ ಮೈಸೂರು ಭಾಗದಲ್ಲಂತೂ ಚಿತ್ರ ಮಂದಿರಗಳು ತುಂಬಿ ತುಳುಕಿವೆ.

    ರಾಜ್ಯಾದ್ಯಂತ 280 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನದ ಭಾಗ್ಯ ಸಿಕ್ಕಿದೆ. ಮಂಡ್ಯ ಸೊಗಡಿನ ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಮಕ್ ಸಿನಿಮಾದಲ್ಲೂ ಗೆಲುವಿನ ಮ್ಯಾಜಿಕ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್, ಅಯೋಗ್ಯ ಚಿತ್ರದಲ್ಲೂ ಯೋಗ ಕಂಡಿದ್ದಾರೆ.

  • ಬಾಬ್ ಕಟ್ ರಚಿತಾ.. ಬ್ಯೂಟಿಫುಲ್ ರಚಿತಾ.. ಡಿಂಪಲ್ ಕ್ವೀನ್`ಗೆ ಬರ್ತ್ ಡೇ ಗಿಫ್ಟ್

    ಬಾಬ್ ಕಟ್ ರಚಿತಾ.. ಬ್ಯೂಟಿಫುಲ್ ರಚಿತಾ.. ಡಿಂಪಲ್ ಕ್ವೀನ್`ಗೆ ಬರ್ತ್ ಡೇ ಗಿಫ್ಟ್

    ಗಾಂಧೀ ಜಯಂತಿಯ ಮಾರನೇ ದಿನ ರಚಿತಾ ರಾಮ್ ಅವರ ಹುಟ್ಟುಹಬ್ಬ. ಈ ಬಾರಿ ರಚಿತಾ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್ ಆಗಿತ್ತು. ರಚಿತಾ ರಾಮ್ ನಟಿಸುತ್ತಿರುವ ಸಿನಿಮಾಗಳ ಟೀಂ ರಚಿತಾ ಬರ್ತ್‍ಡೇಯನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಿದವು.

    ರಚಿತಾ ರಾಮ್ ನಟಿಸುತ್ತಿರು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರ ಫಸ್ಟ್ ಲುಕ್ ರಿಲೀಸ್ ಮಾಡಿತು. ಶಬರಿಯಲ್ಲಿ ರಚಿತಾ ರಾಮ್, ಬಾಬ್ ಕಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಡಿಂಪಲ್ ಲುಕ್ ಸಖತ್ ಡಿಫರೆಂಟ್ ಆಗಿದೆ. ನವೀನ್ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಕಿರಣ್ ಕುಮಾರ್ ನಿರ್ಮಾಪಕ.

    ಲವ್ ಯೂ ರಚ್ಚು ಚಿತ್ರತಂಡ ರಚಿತಾ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿತು. ನೋಡುತಾ ನನ್ನನೇ ಕೂತಿರು ಸುಮ್ಮನೇ.. ಹಾಡು ನೋಡ ನೋಡುತ್ತಲೇ ಯುವ ಹೃದಯಗಳ ಕದ ತಟ್ಟಿತು. ಗುರು ದೇಶ್‍ಪಾಂಡೆ ನಿರ್ಮಾಣದ ಚಿತ್ರದಲ್ಲಿ ಅಜಯ್ ರಾವ್ ಇದೇ ಮೊದಲ ಬಾರಿಗೆ ರಚಿತಾ ಎದುರು ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಶಂಕರ್ ರಾಜ್ ನಿರ್ದೇಶನದ ಲವ್ ಯೂ ರಚ್ಚು ರೊಮ್ಯಾಂಟಿಕ್ ಹಾಡು ಮೋಡಿ ಮಾಡುತ್ತಿದೆ.

  • ಬಾಲಯ್ಯ ಸಿನಿಮಾಗೆ ರಚಿತಾ ನಾಯಕಿಯಂತೆ..!

    rachita ram heroine for balakrishna;s movie

    ಕನ್ನಡದಲ್ಲಿ ಮಹಾರಾಣಿಯಂತೆ ಮೆರೆಯುತ್ತಿರುವ ರಚಿತಾ ರಾಮ್ ಅವರಿಗೆ ತೆಲುಗಿನಲ್ಲೂ ದೊಡ್ಡ ಅವಕಾಶದ ಬಾಗಿಲು ತೆರೆದಿದೆ. ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ತೆಲುಗಿನಲ್ಲಿ ಬೊಯಪಟಿ ಸೀನು ನಿರ್ದೇಶನದ ಚಿತ್ರದಲ್ಲಿ ಬಾಲಯ್ಯ ಎದುರು ರಚಿತಾ ರಾಮ್ ಹೀರೋಯಿನ್ ಎನ್ನುತ್ತಿದೆ ಟಾಲಿವುಡ್.

    ಇತ್ತ ರಚಿತಾ ರಾಮ್ ಕೂಡಾ ಸುದ್ದಿಗೆ ಓಕೆ ಎಂದಿಲ್ಲ. ಅತ್ತಲಿಂದಲೂ ಅಧಿಕೃತ ಮಾಹಿತಿ ಇಲ್ಲ. ಬೊಯಪಟಿ ಚಿತ್ರಗಳೆಂದರೆ ಅಲ್ಲಿ ಫುಲ್ ಮಾಸ್. ಈ ಮೊದಲು ಬಾಲಯ್ಯಗಾಗಿ ಸಿಂಹ, ಲೆಜೆಂಡ್ ಚಿತ್ರಗಳನ್ನು ನಿರ್ದೇಶಿಸಿದ್ದವರು. ಈ ಚಿತ್ರದಲ್ಲಿ ನಟಿಸಿದರೆ ರಚಿತಾ ರಾಮ್ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಲಿದೆ.

  • ಬುಲ್‍ಬುಲ್ ರಚಿತಾ.. ಏಪ್ರಿಲ್ ಡಿಸೋಜಾ

    rachitha's next film is april

    ಮೈಯ್ಯೆಲ್ಲ ಕಪ್ಪು ಕಪ್ಪು.. ಕಣ್ಣಲ್ಲೇನೋ ಬಯ.. ಕೆದರಿದ ಕೂದಲು.. ನೋಡಿದ್ರೆ, ಇದು ಡಿಂಪಲ್ ಕ್ವೀನ್ ರಚಿತಾನಾ ಎನ್ನಬೇಕು..? ಹಾಗಿದೆ ಲುಕ್ಕು. ಇದು ಏಪ್ರಿಲ್ ಡಿಸೋಜಾ ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿರುವ ಅವತಾರ. ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ರಚಿತಾ ಹೇಳಿಕೊಂಡಿದ್ದು ನೆನಪಿದೆ ತಾನೇ.. ಆ ಚಿತ್ರವೇ ಇದು, ಏಪ್ರಿಲ್ ಡಿಸೋಜಾ.

    ಇದು ಸಸ್ಪೆನ್ಸ್ ಥ್ರಿಲ್ಲರ್. ಚಿತ್ರದಲ್ಲಿ ರಚಿತಾ ಪಾತ್ರ, ಏಪ್ರಿಲ್‍ನಲ್ಲಿ 2ನೇ ಬಾರಿಗೆ ಬದುಕುವ ಚಾನ್ಸ್ ಪಡೆಯುತ್ತೆ. ಹಾಗಾದರೆ, ಅವರು ಸತ್ತು ಹೋಗಿರ್ತಾರಾ..? ಸುಮ್ ಸುಮ್ನೆ ಪ್ರಶ್ನೆ ಕೇಳ್ಬೇಡಿ ಮತ್ತೆ. ಅದೇ ಸಿನಿಮಾ ಸಸ್ಪೆನ್ಸ್. ಏಪ್ರಿಲ್ ಅಂದ್ರೆ, ವಸಂತ ಮಾಸದ 2ನೇ ತಿಂಗಳು. ಹೀಗಾಗಿ ಚಿತ್ರ ಮತ್ತು ಪಾತ್ರಕ್ಕೆ ಏಪ್ರಿಲ್ ಡಿಸೋಜಾ ಎಂದು ಹೆಸರಿಟ್ಟಿದ್ದೇವೆ. ಡಿಸೋಜ ಎನ್ನುವುದು ಪುರುಷನ ಹೆಸರಲ್ಲವಾ..? ಪ್ರಶ್ನೆಗೆ ಉತ್ತರ ಈಗಲ್ಲ.

    ಇದು ಸತ್ಯ ರಾಯುಲು ಎಂಬುವವರು ನಿರ್ದೇಶಿಸುತ್ತಿರುವ ಸಿನಿಮಾ. ಯಾವತ್ತೋ ರೀಡರ್ಸ್ ಡೈಜೆಸ್ಟ್‍ನಲ್ಲಿ ಓದಿದ್ದ ಕಥೆ, ಈಗ ಸಿನಿಮಾ ರೂಪಕ್ಕಿಳಿದಿದೆ. ಚಿತ್ರದ ನಿರ್ಮಾಪಕರು ನಾರಾಯಣ್ ಬಾಬು.

    Related Articles :-

    Rachita Ram's next Film is 'April'

  • ಬುಲ್‍ಬುಲ್‍ಗೆ ಉಪ್ಪಿ ಪ್ರೇಮಪಾಠ.. 

    uppi turns love guru

    ಈ ಪ್ರೀತಿ ಪ್ರೇಮ ಅನ್ನೋದೆಲ್ಲ ಪುಸ್ತಕದ್ ಬದ್ನೇಕಾಯ್ ಅಂದಿದ್ದ ಉಪ್ಪಿ, ಈಗ ರಚಿತಾರಾಮ್‍ಗೆ ಮೋಡಿಯನ್ನೇ ಮಾಡಿಬಿಟ್ಟಿದ್ದಾರೆ. ಉಪ್ಪಿಗಿಂತ ರುಚಿ ಬೇರೆಯಿಲ್ಲ, ಒಪ್ಪಿಕೊಂಡೋರೂ ದಡ್ಡರಲ್ಲ ಎಂದಿದ್ದಕ್ಕೋ ಏನೋ.. ತಾನು ದಡ್ಡಿ ಅಲ್ಲ ಅಂತಾ ತೋರಿಸಿದ್ದಾರೆ ಬುಲ್‍ಬುಲ್. ಅಂದ್ರೆ ಇಷ್ಟೆ, ಉಪ್ಪಿ ಹೇಳಿದ್ದು ನಮ್ಮ ಬುಲ್‍ಬುಲ್‍ಗೆ ಇಷ್ಟವಾಗಿ ಹೋಗಿದೆ.

    ಉಪ್ಪಿ ಸರ್ ಮಾತು ಕೇಳಿದ್ಮೇಲೆ ಪ್ರೀತಿ ಅನ್ನೋದು ಜೀವನದ ಒಂದು ಭಾಗ ಅಷ್ಟೆ ಅನ್ನಿಸೋಕೆ ಶುರುವಾಗಿದೆ. ಒಬ್ಬ ಹುಡುಗ ಒಂದು ಹುಡುಗಿಯನ್ನ ಪ್ರೀತಿಸ್ತಿದ್ದಾನೆ ಅಂದ್ರೆ, ಅದಕ್ಕೆ ಏನ್ ಕಾರಣ ಇರಬಹುದು ಅನ್ನೋದನ್ನ ತಿಳಿದುಕೊಳ್ಳುವಷ್ಟು ಶಕ್ತಳಾಗಿದ್ದೇನೆ ಎಂದಿರೋದು ರಚಿತಾ ರಾಮ್. 

    ರಚಿತಾ ರಾಮ್‍ಗೆ ಉಪ್ಪಿ ಇಷ್ಟೆಲ್ಲ ಪ್ರೇಮೋದಯ ಮಾಡಿಸಿರೋದು ಐ ಲವ್ ಯು ಚಿತ್ರದ ಸೆಟ್‍ನಲ್ಲಿ. ಉಪೇಂದ್ರ ಒಂಥರಾ ನಂಗೆ ಲವ್‍ಗುರು ಇದ್ದಂತೆ ಎಂದಿದ್ದಾರೆ ರಚಿತಾ.

    ಆರ್.ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರ, ತೆಲುಗಿನ ಅರ್ಜುನ್ ರೆಡ್ಡಿ ಮಾದರಿಯಲ್ಲಿ ಇರಲಿದೆಯಂತೆ. ಆದರೆ, ಅಷ್ಟು ಬೋಲ್ಡ್ ದೃಶ್ಯಗಳಿರಲ್ಲ. ಕಥೆ ಹೊಸದಾಗಿದೆ ಎಂದಿದ್ದಾರೆ ರಚಿತಾ ರಾಮ್.

  • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

    rachita in bhat shashank's movie

    ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

    ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

    ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

  • ಭಟ್ಟರ ಗರಡಿಗೆ ರಚಿತಾ ರಾಮ್

    ಭಟ್ಟರ ಗರಡಿಗೆ ರಚಿತಾ ರಾಮ್

    ಯೋಗರಾಜ್ ಭಟ್ ಮತ್ತು ಬಿ.ಸಿ.ಪಾಟೀಲ್ ಮೊದಲ ಬಾರಿಗೆ ಜೊತೆಯಾಗಿರುವ ಗರಡಿ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವ ಚಿತ್ರ ಗರಡಿ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ರಚಿತಾ, ಭಟ್ಟರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಹೀರೋ. ಪಕ್ಕಾ ಹಳ್ಳಿ ಸೊಗಡಿನ ಗರಡಿ ಮನೆಯ ಕಥೆ ಇರೋ ಗರಡಿ ಚಿತ್ರದಲ್ಲಿ ರಚಿತಾ ರಾಮ್ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾರೆ.  

  • ಭಟ್ಟರ ಗರಡಿಯಿಂದ ರಚಿತಾ ರಾಮ್ ಔಟ್. ಸೋನಲ್ ಇನ್

    ಭಟ್ಟರ ಗರಡಿಯಿಂದ ರಚಿತಾ ರಾಮ್ ಔಟ್. ಸೋನಲ್ ಇನ್

    ಯೋಗರಾಜ್ ಭಟ್ ಅವರ ಹೊಸ ಚಿತ್ರ ಗರಡಿ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವ ಹೊತ್ತಿನಲ್ಲೇ ನಾಯಕಿಯ ಬದಲಾವಣೆ ಆಗಿದೆ. ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಅನ್ನೋದನ್ನು ದೊಡ್ಡದಾಗಿಯೇ ಘೋಷಿಸಿತ್ತು ಚಿತ್ರತಂಡ. ಈಗ ರಚಿತಾ ರಾಮ್ ಹೊರಬಿದ್ದಿದ್ದಾರೆ. ರಚಿತಾ ಜಾಗಕ್ಕೆ ಬಂದಿರೋದು ಸೋನಲ್ ಮಂಥೆರೋ.

    ಭಟ್ಟರ ಪಂಚತಂತ್ರ ಚಿತ್ರದ ಮೂಲಕವೇ ದೊಡ್ಡ ಸದ್ದು ಮಾಡಿದ್ದ ಸೋನಲ್ ಸದ್ಯಕ್ಕೆ ಜಮೀರ್ ಪುತ್ರ ಹೀರೋ ಆಗಿರುವ ಬನಾರಸ್, ಬುದ್ದಿವಂತ 2 ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಶಸ್ ಸೂರ್ಯ ನಾಯಕನಾಗಿರೋ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ನಿರ್ಮಾಪಕರು. ಗರಡಿ ಮನೆ ಮತ್ತು ಪೈಲ್ವಾನರ ಕಥೆ ಇರೋ ಚಿತ್ರ ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದೆ.

    ರಚಿತಾ ಹೊರಕ್ಕೆ ಹೋಗೋಕೆ ಏನು ಕಾರಣ ಅನ್ನೋದು ಗೊತ್ತಾಗಿಲ್ಲ. ಇತ್ತೀಚೆಗೆ ರಚಿತಾ ರಾಮ್ ಮೊದಲು ಒಪ್ಪಿಕೊಂಡು ನಂತರ ಹೊರಬಂದ ಚಿತ್ರಗಳ ಸಾಲಿಗೀಗ ಗರಡಿಯೂ ಸೇರಿದೆ..

  • ಮಂಡ್ಯದ್ ಮೇಲೆ ರಚಿತಾಗೆ ಲವ್ವೋ.. ಲವ್ವು

    rachita is in love with mandya

    ಮಂಡ್ಯದ ಜನ ಯಾರಿಗೆ ಇಷ್ಟವಾಗಲ್ಲ ಹೇಳಿ. ಗಾಂಧಿನಗರದವರಿಗಂತೂ ಮಂಡ್ಯ ಅಂದ್ರೆ ಮನೆ ಇದ್ದಂಗೆ. ಮಂಡ್ಯದ ಮೇಲೆ ಸಿನಿಮಾ ಮಂದಿಗೆ ವಿಶೇಷ ಪ್ರೀತಿ ಇದೆ. ಈಗ.. ಮಂಡ್ಯದ ಮೇಲೆ ಸಿಕ್ಕಾಪಟ್ಟೆ ಲವ್ವಾಗಿ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಅಯೋಗ್ಯ ಸಿನಿಮಾ.

    ಮಂಡ್ಯ ಭಾಷೆ, ಆ ಶೈಲಿ ನಂಗೆ ಹೊಸದು. ಹೀಗಾಗಿ ಹೇಗೆ ಮಾಡೋದು ಅನ್ನೋ ಟೆನ್ಷನ್‍ನಲ್ಲಿದ್ದೆ. ನಟ ಸತೀಶ್ ಮತ್ತು ನಿರ್ದೇಶಕ ಮಹೇಶ್, ಭಾಷೆಯನ್ನು ಹೇಳಿಕೊಟ್ರು. ಅವರಿಗೆ ಏನ್ ಬೇಕು ಅನ್ನೋದು ಪಕ್ಕಾ ಗೊತ್ತಿತ್ತು. ಹೀಗಾಗಿ ಈಸಿಯಾಗಿ ಹೋಯ್ತು. ಅಲ್ದೆ ಮಂಡ್ಯದ ಹುಡುಗೀರು ಹೇಗೆ ವರ್ತಿಸ್ತಾರೆ.. ಜಡೆ ಹೇಗ್ ಹಾಕ್ಕೊಳ್ತಾರೆ.. ಹುಡುಗರು ಚುಡಾಯಿಸಿದ್ರೆ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನೆಲ್ಲ ಮಂಡ್ಯದ ಹುಡುಗಿಯರಿಂದಲೇ ತಿಳಿದುಕೊಂಡೆ. ಶೂಟಿಂಗ್ ವೇಳೆ ಮಂಡ್ಯದ ಹುಡುಗಿಯೊಬ್ಬಳು ಗೆಳತಿಯಾಗಿ ಸಿಕ್ಕಳು. ಈಗ.. ನಂಗೆ ಮಂಡ್ಯದ ಮೇಲೆ ಲವ್ವಾಗಿ ಹೋಗಿದೆ ಅಂದೋರು ರಚಿತಾ ರಾಮ್. ಅವರು ಅಯೋಗ್ಯ ಚಿತ್ರದ ನಾಯಕಿ.

    ಚಿತ್ರದಲ್ಲಿ ನಂದಿನಿ ಅನ್ನೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಚಿತಾ, ಅಪ್ಪನನ್ನು ಪ್ರೀತಿಸುವ ಮಗಳಾಗಿ ನಟಿಸಿದ್ದಾರೆ. ಹಳ್ಳಿ ಹುಡುಗಿ, ವಿದ್ಯಾವಂತೆ. ಲಂಗ ದಾವಣಿ, ಸೆಲ್ವಾರ್ ಕಮೀಜ್‍ನಲ್ಲಿ ಜನ ನನ್ನನ್ನು ಟ್ರೆಡಿಷನಲ್ ಲುಕ್‍ನಲ್ಲಿ ಇಷ್ಟಪಡ್ತಾರೆ ಅನ್ನೋ ಕಾನ್ಫಿಡೆನ್ಸ್ ರಚಿತಾಗಿದೆ. ಚಮಕ್ ಚಂದ್ರಶೇಖರ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗ್ತಿದೆ.

  • ಮತ್ತೆ ಏಪ್ರಿಲ್ : ರಚಿತಾ ಜೊತೆ ಚಿರು

    chiranjeeivi joins rachita's april

    ಏಪ್ರಿಲ್ ಅನ್ನೋ ಹೆಸರಿನ ಚಿತ್ರದ ಪೋಸ್ಟರ್ ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಪೋಸ್ಟರಿನಲ್ಲಿ ರಚಿತಾ ರಾಮ್ ಅವರನ್ನು ನೋಡಿದವರು ವ್ಹಾವ್.. ಎಂದಿದ್ದರು. ರಚಿತಾ ಕೂಡಾ ಸಖತ್ ಕಾನ್ಫಿಡೆನ್ಸಿನಲ್ಲಿದ್ದರು. ಆದರೆ, ಪೋಸ್ಟರಿಗೇ ಸುಮ್ಮನಾಗಿದ್ದ ಚಿತ್ರತಂಡ, ಸೈಲೆಂಟ್ ಆಗಿತ್ತು. ಕೊನೆಗೆ ರಚಿತಾ ಅವರೇ ಚಿತ್ರದಿಂದ ಹೊರಬಂದಿದ್ದೇನೆ ಎಂದಿದ್ದರು. ಆದರೆ, ಮುಗಿದೇ ಹೋಯ್ತು ಎಂದುಕೊಂಡಿದ್ದ ಸಿನಿಮಾ ಮತ್ತೆ ಶುರುವಾಗಿದೆ.

    8ಎಂಎಂ ಎಂಬ ಚಿತ್ರ ನಿರ್ಮಾಪಕರು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಸತ್ಯರಾಯಲ್ ನಿರ್ದೇಶಕ. ವಿಶೇಷವೆಂದರೆ, ಚಿತ್ರಕ್ಕೆ ಚಿರಂಜೀವಿ ಸರ್ಜಾ ಎಂಟ್ರಿ ಆಗಿದೆ. ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರವಾದರೂ, ಚಿರು ಪಾತ್ರದ ವಿಶೇಷತೆಗಾಗಿ ಓಕೆ ಎಂದಿದ್ದಾರೆ. ಡಿಸೆಂಬರ್‍ನಲ್ಲಿ ಶೂಟಿಂಗ್ ಶುರುವಾಗಬಹುದು.

  • ಮತ್ತೆ ಸ್ಲಿಮ್ಮಾದರು ಡಿಂಪಲ್ ಕ್ವೀನ್

    rachita ram sheds 7 kgs in 25 days

    ರಚಿತಾ ರಾಮ್... ಈಗ ಹಿಟ್ ಮೇಲೆ ಹಿಟ್ ಕೊಟ್ಟು ಮಿನುಗುತ್ತಿರುವ ತಾರೆ. ಅಯೋಗ್ಯ ಚಿತ್ರ ಹಿಟ್ ಆಗುವುದರೊಂದಿಗೆ ರಚಿತಾ ಲಕ್ಕಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ಆದರೆ, ಇಲ್ಲೊಂದು ವ್ಯತ್ಯಾಸ ಗಮನಿಸಬೇಕು. ಅಯೋಗ್ಯ ಸಿನಿಮಾದಲ್ಲಿ ರಚಿತಾ, ತುಸು ದಪ್ಪಗಾದಂತೆ ಕಂಡಿದ್ದರು. ಅಷ್ಟೇ ಅಲ್ಲ, ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮ ಸಿನಿಮಾಗಳಲ್ಲೂ ಅಷ್ಟೆ. ಸಪೂರ ಸುಂದರಿ ರಚಿತಾ, ದುಂಡು ದುಂಡಗೆ ಕಾಣ್ತಾರೆ. ಆದರೆ, ಈಗ ರಚಿತಾ ಕಂಪ್ಲೀಟ್ ಚೇಂಜ್.

    ಸ್ವಲ್ಪ ದಪ್ಪಗಾಗಿದ್ದ ರಚಿತಾ, 25 ದಿನಗಳಲ್ಲಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಾನು ಮೊದಲು ಇದ್ದಿದ್ದೇ ಸಣ್ಣಗೆ. ಅದೇಕೋ ಒಂದ್ಸಲ, ನಾನು ದಪ್ಪಗಾದರೆ ಹೇಗೆ ಕಾಣಬಹುದು ಎನ್ನಿಸಿತು. ಡಯಟ್ ಮತ್ತು ವರ್ಕೌಟ್ ಎರಡನ್ನೂ ಬಿಟ್ಟು, ದಪ್ಪಗಾದರೆ. ಊಟ ಜಾಸ್ತಿ ಆಯ್ತು. ಮೈಕೈ ತುಂಬಿಕೊಂಡು ಚಬ್ಬಿಚಬ್ಬಿಯಾಗಿಬಿಟ್ಟೆ. ಅಯೋಗ್ಯ, ಸೀತಾರಾಮ ಕಲ್ಯಾಣದಲ್ಲಿ ಹಾಗೆಯೇ ನಟಿಸಿದೆ. ಈಗ.. ದಪ್ಪಗಾಗಿದ್ದು ಸಾಕು ಎನ್ನಿಸಿದೆ. ಮತ್ತೆ ಡಯಟ್ ಶುರುವಾಗಿದೆ.

    65 ಕೆಜಿಯಿದ್ದ ನಾನು, ಮತ್ತೆ 58ಕ್ಕೆ ಇಳಿದಿದ್ದೇನೆ. ಇದು ಹೊಸ ಪ್ರಾಜೆಕ್ಟ್‍ಗಾಗಿ ನಡೆಸ್ತಾ ಇರೋ ಕಸರತ್ತೇನಲ್ಲ. ನನಗೆ ಅನ್ನಿಸಿದ್ದು ಅಷ್ಟೆ ಎಂದಿದ್ದಾರೆ ರಚಿತಾ. ರಚಿತಾ ಅವರಿಗೆ ಈಗ ಫಿಟ್‍ನೆಸ್ ಟ್ರೈನರ್ ಆಗಿರೋದು  360 ಶ್ರೀನಿವಾಸ್. ರಚಿತ ಆರೋಗ್ಯವಾಗಿದ್ದಾರೆ. ಹೀಗಾಗಿ ಸರಳ ವರ್ಕೌಟ್ ಮಾಡಿದರೆ ಸಾಕು. ಅವರು ತುಂಬಾ ಶ್ರದ್ಧೆಯಿಂದ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಕ್ರೆಡಿಟ್ಟನ್ನೆಲ್ಲ ರಚಿತಾ ರಾಮ್ ಶ್ರದ್ಧೆಗೇ ಕೊಟ್ಟುಬಿಟ್ಟಿದ್ದಾರೆ 360 ಶ್ರೀನಿವಾಸ್.

  • ಮೀನಾಕ್ಷಿ ರಚಿತಾ ರಾಮ್

    meenakshi rachita ram

    ರಚಿತಾ ರಾಮ್ ತೆಲುಗಿಗೆ ಹೋಗಿದ್ದು ಬ್ರೇಕಿಂಗ್ ನ್ಯೂಸ್ ಅಲ್ಲ, ಅವರೀಗ ಮೀನಾಕ್ಷಿಯಾಗಿರೋದು ಸೆನ್ಸೇಷನ್ ನ್ಯೂಸ್. ಹೌದು, ತೆಲುಗಿನಲ್ಲಿ ಚಿರಂಜೀವಿಯವರ ಅಳಿಯ ಕಲ್ಯಾಣ್ ದೇವ್ ಜೊತೆ ರಚಿತಾ ರಾಮ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಸೂಪರ್ ಮಚ್ಚಿ ಎಂದು ಟೈಟಲ್ ಎನ್ನಲಾಗಿತ್ತು. ಆದರೆ, ಟೈಟಲ್ ಅದಲ್ಲ, ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಎಂಬ ಟೈಟಲ್ ಫೈನಲ್ ಆಗಿದೆಯಂತೆ.

    ಮೀನಾಕ್ಷಿಯಾಗಿರೋದು ರಚಿತಾ ರಾಮ್. ಅಂದಹಾಗೆ ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಬರಲಿದೆ. ಪುಲಿ ವಾಸು ನಿರ್ದೇಶನದ...ಮೀನಾಕ್ಷಿ ಚಿತ್ರದ ಮೂಲಕ ರಚಿತಾ ರಾಮ್ ಟಾಲಿವುಡ್‍ನಲ್ಲಿ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

  • ಮೀನಾಕ್ಷಿ ಶೂಟಿಂಗ್ : ರಚಿತಾ ರಾಮ್ ಪ್ರಿಕಾಷನ್ಸ್ ಏನು..?

    rachita ram takes higher pre cautions

    ಸಿನಿಮಾ ಶೂಟಿಂಗ್ ಶುರುವಾಗಿದೆ. ತೆಲುಗಿನಲ್ಲಿ ಸ್ವಲ್ಪ ಬೇಗನೇ ಶುರುವಾದ ಕಾರಣ, ಸೂಪರ್ ಮಚ್ಚಿ ಚಿತ್ರದ ಶೂಟಿಂಗ್‍ಗೆ ತೆರಳಿದ್ದಾರೆ ರಚಿತಾ ರಾಮ್. ಅದು ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಅನ್ನೋ ಹೆಸರಲ್ಲಿ ಕನ್ನಡಕ್ಕೂ ಬರುತ್ತಿದೆ. ಹೈದರಾಬಾದ್‍ನಲ್ಲಿ ನಡೆಯುತ್ತಿರೋ ಆ ಶೂಟಿಂಗ್‍ನಲ್ಲಿ ರಚಿತಾ ರಾಮ್ ಹಾಗೂ ಚಿತ್ರತಂಡ ತೆಗೆದುಕೊಂಡಿರೋ ಮುನ್ನೆಚ್ಚರಿಕೆಗಳು ಅಚ್ಚರಿಯಾಗುವಂತಿವೆ.

    ರಚಿತಾ ರಾಮ್ ಇಲ್ಲಿಂದ ಹೈದರಾಬಾದ್‍ಗೆ ಹೋಗಿದ್ದು ಕಾರ್‍ನಲ್ಲಿ. ವಿಮಾನ ಇಲ್ಲ. ಅಲ್ಲಿ ಉಳಿದುಕೊಂಡಿರೋ ಹೋಟೆಲ್‍ನಲ್ಲಿ ಬೇರೆಯವರಿಗೆ ನೋ ಎಂಟ್ರಿ. ರಚಿತಾ ಮನೆಯವರಿಗೂ ಪ್ರವೇಶ ಇಲ್ಲ.

    ಇನ್ನು ಸೆಟ್‍ನಲ್ಲಿ ಆರಂಭದ ದಿನ ಎಲ್ಲರಿಗೂ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತಂತೆ. ಆದರೆ, ಅದನ್ನು ಧರಿಸಿ ಚಿತ್ರೀಕರಣ ಮಾಡಲು ಅಸಾಧ್ಯವಾಯ್ತು. ಹೀಗಾಗಿ ಈಗ ಎಲ್ಲರೂ ಮಾಸ್ಕ್, ಗ್ಲೌಸ್, ಫೇಸ್ ಗಾರ್ಡ್  ಬಳಸುತ್ತಿದ್ದಾರೆ. ಸೆಟ್‍ಗೆ ಬರುವ ಹೊಸಬರು ಸ್ಯಾನಿಟೈಸರ್ ಬಳಸಿಯೇ ಬರಬೇಕು. ಅವರು ತರುವ ವಸ್ತುಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಕ್ಯಾಮೆರಾ ಮತ್ತಿತರ ವಸ್ತುಗಳಿಗೂ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಊಟ, ತಿಂಡಿಯ ವ್ಯವಸ್ಥೆ ನಿರ್ಮಾಪಕರು, ನಿರ್ದೇಶಕರ ಮನೆಯಿಂದಲೇ ಆಗುತ್ತಿದೆ.

    ಇನ್ನು ರಚಿತಾ ಅವರ ಮೇಕಪ್ ಸ್ವತಃ ಅವರದ್ದೇ. ನೋ ಮೇಕಪ್ ಮ್ಯಾನ್. ಚಿತ್ರದಲ್ಲಿದ್ದ ರೊಮ್ಯಾಂಟಿಕ್ ಮತ್ತು ಕ್ಲೋಸಪ್ ದೃಶ್ಯಗಳ ಚಿತ್ರೀಕರಣ ಮೊದಲೇ ಮುಗಿದಿತ್ತು. ಹೀಗಾಗಿ ಅಂತಹ ದೃಶ್ಯಗಳ ಅಗತ್ಯ ಬಂದಿಲ್ಲ. ಇನ್ನೊಂದು ಹಾಡಿನ ಚಿತ್ರೀಕರಣಕ್ಕೆ 150 ಜ್ಯೂ.ಆರ್ಟಿಸ್ಟ್‍ಗಳು ಬೇಕಿತ್ತು. ಈಗ ಅವರಿಲ್ಲದೇ ಹಾಡಿನ ಪ್ಲಾನ್ ಮಾಡಿ ಶೂಟ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ ರಚಿತಾ ರಾಮ್.

    ಇನ್ನು ಚಿತ್ರದ ಹೀರೋ ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರು ತಮ್ಮ ಮನೆಯ ಔಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದು ಕುಟುಂಬದಿಂದ ದೂರವಿದ್ದಾರೆ. ನಾನೂ ಕೂಡಾ ಶೂಟಿಂಗ್ ಮುಗಿಸಿ ಬಂದವಳು 14 ದಿನ ಕ್ವಾರಂಟೈನ್ ಆಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ರಚಿತಾ. 

  • ಮುತ್ತು ಕೊಡೋಕೆ ರೆಡಿಯಾದ್ರು ನೀನಾಸಂ ಸತೀಶ್

    ayogya heads towards 100 days

    ಅಯೋಗ್ಯ.. ಮಹೇಶ್ ನಿರ್ದೇಶನದ ಮೊದಲ ಸಿನಿಮಾ. ಚಂದ್ರಶೇಖರ್ ನಿರ್ಮಾಣದ ಚಿತ್ರ ಸೂಪರ್ ಹಿಟ್ ಆಗಿ ಈಗಲೂ ಪ್ರದರ್ಶನ ಕಾಣುತ್ತಿದೆ. ಈಗ ಅಯೋಗ್ಯ, ದಾಖಲೆ ಬರೆಯಲು ರೆಡಿಯಾಗಿದೆ. ಸಿನಿಮಾ ಶತದಿನೋತ್ಸವ ಸಮೀಪಿಸಿದೆ.

    100ಕ್ಕೆ ಮುತ್ತು ಕೊಡುವ ಸಮಯ ಹತ್ತಿರವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನೀನಾಸಂ ಸತೀಶ್ 100ರ ಮುತ್ತಿನ ಸಂಭ್ರಮದ ಸುಳಿವು ಕೊಟ್ಟಿದ್ದಾರೆ. ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾ ನೀನಾಸಂ ಸತೀಶ್ ವೃತ್ತಿ ಜೀವನದ ಸೂಪರ್ ಹಿಟ್ ಸಿನಿಮಾ ಆಗಿದೆ.