` rachita ram - chitraloka.com | Kannada Movie News, Reviews | Image

rachita ram

  • ನಟಸಾರ್ವಭೌಮ ಎಷ್ಟನೇ ನಂಬರ್..?

    natasarvabhouma is puneeth's 28th or 41st film

    ನಟಸಾರ್ವಭೌಮ, ಪುನೀತ್ ರಾಜ್‍ಕುಮಾರ್ ಅವರ ಎಷ್ಟನೇ ಸಿನಿಮಾ. ಪುನೀತ್ ಅವರಿಗಿಂತಲೂ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂದಹಾಗೆ  ಪುನೀತ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ತಮ್ಮ 6ನೇ ತಿಂಗಳಲ್ಲಿ. ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯವದು. ಪುನೀತ್ ಆಗಿನ್ನೂ 6 ತಿಂಗಳ ಮಗು. ರಾಜ್-ಜಯಮಾಲಾ ಜೋಡಿ ಮುದ್ದು ಮಗುವಾಗಿ ಕಾಣಿಸಿಕೊಂಡಿದ್ದರು ಅಪ್ಪು.

    ಅದಾದ ಮೇಲೆ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಚಲಿಸುವ ಮೋಡಗಳು, ಹೊಸ ಬೆಳಕು.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ಅಪ್ಪು, ನಾಯಕರಾಗಿ ನಟಿಸಿದ ಮೊದಲ ಸಿನಿಮಾ ಅಪ್ಪು.

    ಹೀರೋ ಆಗಿ ಅಪ್ಪು ಮೊದಲ ಸಿನಿಮಾ ಆದರೆ, ನಟನಾಗಿ ಪ್ರೇಮದ ಕಾಣಿಕೆ ಮೊದಲ ಸಿನಿಮಾ. ಹೀಗಾಗಿ ಹೀರೋ ಅಪ್ಪುಗೆ ನಟಸಾರ್ವಭೌಮ 28ನೇ ಚಿತ್ರವಾದರೆ, ಕಲಾವಿದನಾಗಿ ಇದು 41ನೇ ಸಿನಿಮಾ. 

  • ನಟಸಾರ್ವಭೌಮ ಕಲೆಕ್ಷನ್ ಎಷ್ಟು..? - ರಾಕ್‍ಲೈನ್ ಸ್ಪೀಕಿಂಗ್

    rockline venkatesh talks about natasarvabhouma

    ನಟಸಾರ್ವಭೌಮ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಎನ್ನುವಂತಹ ಪ್ರತಿಕ್ರಿಯೆಗಳೇ ಸಿಗುತ್ತಿರುವಾಗ ಚಿತ್ರದ ಕಲೆಕ್ಷನ್ ಎಷ್ಟಾಗಿರಬಹುದು..? ನಟಸಾರ್ವಭೌಮ ಹೊಸ ದಾಖಲೆ ಬರೆಯಿತಾ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವುದು ಸತ್ಯ. ಇದಕ್ಕೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ರಿಲೀಸ್ ಆಗಿ ಇನ್ನೂ ಕೆಲವೇ ದಿನಗಳಾಗಿವೆ. ಈಗಲೇ ಅಧಿಕೃತ ಎಂದು ಲೆಕ್ಕ ಹೇಳುವುದು ಕಷ್ಟ. ಅಂದಾಜಿನ ಲೆಕ್ಕ ಸಿಗಬಹುದು. ನನಗೆ ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಾಗಿದೆ. ಇನ್ನು ಬರುವುದೆಲ್ಲವೂ ಲಾಭ. ಒಂದೆರಡು ವಾರ ಕಳೆದ ಬಳಿಕ ಅಧಿಕೃತ ಮಾಹಿತಿ ಸಿಗಲಿದೆ' ಎಂದಿದ್ದಾರೆ ರಾಕ್‍ಲೈನ್.

    ಅಂದಹಾಗೆ ಇದು ಕೆಜಿಎಫ್ ದಾಖಲೆಯನ್ನೇನೂ ಮುರಿದಿಲ್ಲ. ಕೆಜಿಎಫ್ ಸಿನಿಮಾನೇ ಬೇರೆ. ನಟಸಾರ್ವಭೌಮ ಚಿತ್ರವೇ ಬೇರೆ. ಒಂದಕ್ಕೊಂದು ಕಂಪೇರ್ ಮಾಡೋದೇ ಸರಿಯಲ್ಲ. ನನ್ನ ಬ್ಯಾನರ್‍ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ನಟಸಾರ್ವಭೌಮ. ಚಿತ್ರವನ್ನು 350 ಥಿಯೇಟರುಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ಇನ್ನಷ್ಟು ಸೆಂಟರ್‍ಗಳಿಂದ ಬೇಡಿಕೆ ಬರುತ್ತಿದೆ ಎಂದಿದ್ದಾರೆ ರಾಕ್‍ಲೈನ್.

  • ನಟಸಾರ್ವಭೌಮ ಚಿತ್ರದಲ್ಲಿ ಭೂತ ಯಾರು..?

    who is ghost in natasarvabhouma

    ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ, ಚಿತ್ರದ ಒಂದು ರಹಸ್ಯ ಸೋರಿಕೆಯಾಗಿಬಿಟ್ಟಿದೆ. ಚಿತ್ರದಲ್ಲಿ ಒಂದು ದೆವ್ವ ಅರ್ಥಾತ್ ಭೂತ ಅಂದ್ರೆ ಆತ್ಮವೊಂದು ಇರಲಿದೆ. ಪುನೀತ್ ಪಾಲಿಗೆ ಇದು ಮೊತ್ತಮೊದಲ ಹಾರರ್ ಸಿನಿಮಾ ಆಗಲಿದೆ. ಹಾಗಾದರೆ, ದೆವ್ವ ಯಾರು..?

    ರಚಿತಾ, ಅನುಪಮಾ ನಾಯಕಿಯರು. ಬಿ.ಸರೋಜಾದೇವಿಯವರದ್ದೊಂದು ಪ್ರಧಾನ ಪಾತ್ರ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ.. ಮೊದಲಾದವರು ಚಿತ್ರದಲ್ಲಿದ್ದಾರೆ. ಇವರಲ್ಲೇ ಒಬ್ಬರು.. ಅಥವಾ ಇವರನ್ನು ಹೊರತುಪಡಿಸಿ ಒಬ್ಬರು ಚಿತ್ರದಲ್ಲಿ ದೆವ್ವವಾಗಿರ್ತಾರೆ ಅನ್ನೋದು ಕನ್‍ಫರ್ಮು. ಟ್ರೇಲರ್‍ನಲ್ಲಿಯೂ ಆ ಗುಟ್ಟು ಹೇಳೋದಿಲ್ವಂತೆ ನಿರ್ದೇಶಕ ಪವನ್ ಒಡೆಯರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಹೀಗೆಯೇ ಭರ್ಜರಿ ಸದ್ದು ಮಾಡುತ್ತಿದೆ. ರಿಲೀಸ್ ಡೇಟು ಕೂಡಾ ಹತ್ತಿರವಾಗುತ್ತಿದೆ.

  • ನಟಸಾರ್ವಭೌಮನ ಮದ್ಯಪ್ರಾಚ್ಯ ಓಟ ಶುರು

    natasarvabhouma releasing today in middle east

    ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮ ಸಿನಿಮಾ, ಮದ್ಯಪ್ರಾಚ್ಯ ದೇಶಗಳ ಸವಾರಿ ಶುರು ಮಾಡಿದೆ. ಇಂದಿನಿಂದ ಅಂದ್ರೆ, ಫೆಬ್ರವರಿ 21ರಿಂದ ಫೆಬ್ರವರಿ 27ರವರೆಗೆ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಯುಎಇ, ಒಮನ್, ಕುವೈತ್, ಕತಾರ್, ಬಹರೈನ್, ಶಾರ್ಜಾ, ಅಬುಧಾಬಿಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ನಟಸಾರ್ವಭೌಮನ ಯಾರೋ ನೀನು ಹಾಡಿನ ವಿಡಿಯೋ ಬಂತು

    natasarvabhouma yaro naanu video song

    ನಟಸಾರ್ವಭೌಮ ಚಿತ್ರದ ಯಾರೋ ನೀನು ಹಾಡು ಸೂಪರ್ ಹಿಟ್. ಈ ಯುಗಳ ಗೀತೆಯ ಅಕ್ಷರಗಳ ಮೋಡಿಗೆ ಮರುಳಾಗಿದ್ದವರಿಗೆಲ್ಲ ಈಗ ವಿಡಿಯೋ ನೋಡುವ ಚಾನ್ಸ್. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ, ಕಣ್ತುಂಬಿಕೊಂಡು.. ಮತ್ತೊಮ್ಮೆ ಹಾಡು ನೋಡಬೇಕಲ್ಲ ಎನಿಸಿದವರಿಗಾಗಿಯೇ.. ಈ ಯುಗಳ ಗೀತೆಯ ಹೂರಣ ತೆರೆದಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್.

    ಮತ್ತೊಮ್ಮೆ.. ಮಗದೊಮ್ಮೆ ಕೇಳುವಂತಿರುವ ಹಾಡು, ರಚಿತಾ ರಾಮ್.. ಪುನೀತ್ ಅವರನ್ನು ಕನಸಿನಲ್ಲಿಯೇ ಪ್ರೀತಿಸುವ ಗೀತೆ. ಹಾಡಿನ ಕೊರಿಯೋಗ್ರಫಿಯೂ ಅಷ್ಟೇ ಚೆನ್ನಾಗಿದೆ. ಡಿ.ಇಮಾನ್ ಮ್ಯೂಸಿಕ್ ನೀಡಿರುವ ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರೇಮಕವಿ ಕವಿರಾಜ್. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿರುವ ಸುಂದರ ಗೀತೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತೆ.

  • ನಡುರಾತ್ರಿಗೇ ನರ್ತಿಸುತ್ತಾನೆ ನಟಸಾರ್ವಭೌಮ

    natasarvabhouma shows will starts at mid night

    ಪವರ್ ಸ್ಟಾರ್ ಚಿತ್ರಗಳು ಮುಂಜಾನೆ ಶೋ ಕಾಣುವುದು ಹೊಸದೇನೂ ಅಲ್ಲ. ಆದರೆ, ಈ ಬಾರಿ ನಟಸಾರ್ವಭೌಮನ ಮ್ಯಾಜಿಕ್ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ಮುಂಜಾನೆ 4 ಗಂಟೆ ಶೋಗೆ ಇಡೀ ಥಿಯೇಟರ್ ಬುಕ್ ಮಾಡಿದ್ದ. ಆದರೆ ಆತನ ಶೋಗಿಂತಲೂ ಮೊದಲೇ ನಟ್ಟ ನಡುರಾತ್ರಿಯಲ್ಲಿಯೇ ನಟಸಾರ್ವಭೌಮ ಪ್ರದರ್ಶನ ಶುರುವಾಗಲಿದೆ.

    ಸಂಜಯ್ ನಗರದ ವೈಭವ್ ಚಿತ್ರಮಂದಿರದಲ್ಲಿ - ಬೆಳಗ್ಗೆ 4 ಗಂಟೆಗೆ ಶಾರದಾ, ಚಂದ್ರೋದಯ, ಬಾಲಾಜಿ ಥಿಯೇಟರ್‍ಗಳಲ್ಲಿ - ಬೆಳಗ್ಗೆ 6 ಗಂಟೆಗೆ ಮಂಗಳೂರಿನಲ್ಲಿ - ಬೆಳಗ್ಗೆ 7 ಗಂಟೆಗೆ

    ಊರ್ವಶಿ ಚಿತ್ರಮಂದಿರ - ಬೆಳಗ್ಗೆ 4 ಗಂಟೆಗೆ ಪ್ರದರ್ಶನ ಫಿಕ್ಸ್ ಆಗಿದೆ. ಆದರೆ, ಅಚ್ಚರಿಯೆಂದರೆ, ಕೆಲವೊಂದು ಥಿಯೇಟರು ಮಧ್ಯರಾತ್ರಿ 12 ಗಂಟೆಗೇ ಶೋ ಶುರು ಮಾಡುವ ಸುಳಿವು ಕೊಟ್ಟಿವೆ. ಅಭಿಮಾನಿಗಳಿಂದ ಬೇಡಿಕೆಯಿದ್ದು, ಮಧ್ಯರಾತ್ರಿಯೇ ರಿಲೀಸ್ ಶೋ ಕೊಡುವುದಕ್ಕೆ ಮುಂದಾಗಿವೆ. ಬಿಬಿಎಂಪಿ ಅನುಮತಿ ಸಿಕ್ಕ ಮೇಲೆ ಥಿಯೇಟರುಗಳು ಟೈಮಿಂಗ್ಸ್ ಪ್ರಕಟಿಸಲಿವೆ.

  • ನನ್ನ ವೈಯಕ್ತಿಕ ಬದುಕನ್ನು ನಗೆಪಾಟಲು ಮಾಡಬೇಡಿ - ರಚಿತಾ ರಾಮ್

    rachita ram requests not to make fun of her personal life

    ಇತ್ತೀಚೆಗೆ ದೇವೇಗೌಡರ ಕುಟುಂಬ ಶೃಂಗೇರಿಯಲ್ಲಿ ಶತಚಂಡಿಕಾ ಹೋಮ ನಡೆಸುತ್ತಿತ್ತು. ಶೃಂಗೇರಿಯಲ್ಲಿ ಗೌಡರ ಕುಟುಂಬ ಇರುವಾಗಲೇ ಅಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಮುಂದಿನದ್ದನ್ನು ಕಲ್ಪನೆ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ರಚಿತಾ ರಾಮ್ ಸುತ್ತ ಗಾಸಿಪ್ಪುಗಳೋ ಗಾಸಿಪ್ಪುಗಳು. ಸ್ವತಃ ರಚಿತಾ ರಾಮ್ ನಾನು ಬಂದಿರುವುದು ದೇವಸ್ಥಾನಕ್ಕೆ. ಒಂದು ವಾರ ಮೊದಲೇ ಪ್ಲಾನ್ ಮಾಡಿಕೊಂಡಿದ್ದೆ. ಗೌಡರ ಕುಟುಂಬ ಇಲ್ಲಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ಶೃಂಗೇರಿ ಶಾರದಾಂಬೆ ದರ್ಶನ ಮುಗಿಸಿ ಗೌಡರ ಕುಟುಂಬವನ್ನು ಭೇಟಿ ಕೂಡಾ ಮಾಡದೆ ತೆರಳಿದರು. ಇಷ್ಟಾದರೂ ವದಂತಿಗಳು ನಿಲ್ಲಲೇ ಇಲ್ಲ. ಕೊನೆಗೆ ಸ್ವತಃ ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‍ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

    ನನ್ನ ಬಗೆಗಿನ ವದಂತಿಗಳನ್ನು ನಂಬಬೇಡಿ. ನನ್ನ ಮದುವೆ ನಿಶ್ಚಯವಾಗಿಲ್ಲ. ಹಾಗೇನಾದರೂ ಆದರೆ ನಾನೇ ಹೇಳುತ್ತೇನೆ. ದಯವಿಟ್ಟು ನನ್ನ ವೈಯಕ್ತಿಕ ವಿಷಯಗಳನ್ನು ನಗೆಪಾಟಲು ಮಾಡಬೇಡಿ. ನಿಮ್ಮ ಮನರಂಜನೆಗೆ ನನ್ನ ಪರ್ಸನಲ್ ವಿಷಯಗಳಲ್ಲಿ ಸುಳ್ಳು ಸೃಷ್ಟಿಸಬೇಡಿ ಎಂದಿದ್ದಾರೆ.

  • ನನ್ನದು ಇಲ್ಲಿ ವೇಶ್ಯೆಯ ಪಾತ್ರ.. ಆದರೆ..

    ನನ್ನದು ಇಲ್ಲಿ ವೇಶ್ಯೆಯ ಪಾತ್ರ.. ಆದರೆ..

    ರಚಿತಾ ರಾಮ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮಾನ್ಸೂನ್ ರಾಗದಲ್ಲಿ. ಚಿತ್ರದ ಟ್ರೇಲರಿನಲ್ಲಿ ಇರೋ ಏಕೈಕ ಡೈಲಾಗ್ ಕೂಡ ಅವರದ್ದೇ. ಉಳಿದಂತೆ ಇಡೀ ಟ್ರೇಲರಿನಲ್ಲಿ ಗೆಲ್ಲೋದು ಅನೂಪ್ ಸಿಳೀನ್ ಮ್ಯೂಸಿಕ್ ಮತ್ತು ಡಾಲಿ, ರಚಿತಾ, ಸುಹಾಸಿನಿ, ಅಚ್ಯತ್, ಯಶಾ ಶಿವಕುಮಾರ್ ಅವರ ಕಣ್ಣುಗಳ ಆಟ.

    ನನಗೆ ಈ ತಂಡದೊಂದಿಗೆ ಇದು 2ನೇ ಸಿನಿಮಾ. ಚಿತ್ರದ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ಕೇಳಿ ತಕ್ಷಣ ಒಪ್ಪಿಕೊಂಡೆ. ನನ್ನದು ಇಲ್ಲಿ ವೇಶ್ಯೆಯ ಪಾತ್ರ. ನಿರ್ದೇಶಕರೇನೋ ಶೂಟ್ ಆದ ನಂತರ ಒಮ್ಮೆ ನೋಡಿ. ಇಷ್ಟವಾಗದಿದ್ದರೆ ಬೇರೆ ಶೂಟ್ ಮಾಡುತ್ತೇವೆ ಎಂದಿದ್ದರು. ಆದರೆ.. ಪಾತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ನನಗೆ ಇಡೀ ತಂಡದ ಮೇಲೆ ನಂಬಿಕೆಯಿತ್ತು. ಪಾತ್ರಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ. ನಿರ್ದೇಶಕರು ಹೇಳಿದ್ದಷ್ಟನ್ನು ಮಾಡಿದ್ದೇನೆ ಎಂದಿದ್ದಾರೆ ರಚಿತಾ ರಾಮ್.

    ಡಾಲಿ ಧನಂಜಯ್ ಅವರನ್ನು ನಟರಾಕ್ಷಸ ಎಂದೇಕೆ ಕರೆಯುತ್ತಾರೆ ಅನ್ನೋದು ಅವರೊಂದಿಗೆ ನಟಿಸುವಾಗ ಅರ್ಥವಾಯಿತು. ನನ್ನ ಪಾತ್ರ ಮತ್ತು ಅಭಿನಯ ಚಿತ್ರದಲ್ಲಿ ಅಷ್ಟು ಚೆನ್ನಾಗಿದ್ದರೆ ಅದಕ್ಕೆ ಡಾಲಿ ಧನಂಜಯ್ ಕೂಡಾ ಕಾರಣ. ಅವರ ಜೊತೆ ನಟನೆಯಲ್ಲಿ ಸ್ಪರ್ಧಿಸೋದು ನಿಜಕ್ಕೂ ಸವಾಲು ಎಂದಿದ್ದಾರೆ ಡಿಂಪಲ್ ಕ್ವೀನ್.

    ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕ. ಆಗಸ್ಟ್ 19ರಂದು ರಿಲೀಸ್ ಆಗುತ್ತಿರುವ ಚಿತ್ರದ ಟ್ರೇಲರ್ ಒಂದೊಳ್ಳೆ ಕಂಟೆಂಟ್ ಚಿತ್ರದಲ್ಲಿದೆ ಅನ್ನೋದನ್ನ ಹೃದಯಕ್ಕೆ ತಟ್ಟುವಂತೆ ಹೇಳಿದೆ.

  • ನವೆಂಬರ್‍ಗೆ ಆಯುಷ್ಮಾನ್ ಭವ

    ayushman bhav may release in november

    ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರ ಆಯುಷ್ಮಾನ್ ಭವ. ಆನಂದ್ ಎಂದು ಮೊದಲು ಟೈಟಲ್ ಇಟ್ಟುಕೊಂಡಿದ್ದ ಚಿತ್ರಕ್ಕೆ ಆಯುಷ್ಮಾನ್ ಭವ ಎಂದು ಟೈಟಲ್ ಬದಲಿಸಲಾಯ್ತು. ಶಿವಲಿಂಗ ಚಿತ್ರದ ನಂತರ ಶಿವಣ್ಣ ಮತ್ತು ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

    ಇದೇ ಮೊದಲ ಬಾರಿಗೆ ರಚಿತಾ ರಾಮ್, ಶಿವರಾಜ್‍ಕುಮಾರ್‍ಗೆ ನಾಯಕಿಯಾಗಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.

    ಚಿತ್ರವನ್ನು ನವೆಂಬರ್‍ನಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಲವು ವಿಶೇಷಗಳ ಕಾರಣಕ್ಕೇ ಗಮನ ಸೆಳೆದಿರುವ ಆಯುಷ್ಮಾನ್ ಭವ ರಿಲೀಸ್‍ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

  • ನಾನೆಲ್ಲಿ ಹಾಗೆ ಹೇಳಿದ್ದೇನೆ..? - ಪ್ರಿಯಾಂಕಾ ಉಪೇಂದ್ರಗೆ ರಚಿತಾ ರಾಮ್ ಪ್ರಶ್ನೆ

    rachita clarifies on her statement regarding bold scenes

    ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಬಗ್ಗೆ, ಅವರ ಮಾತುಗಳ ಬಗ್ಗೆ ಸಿಟ್ಟಾಗಿರುವುದಕ್ಕೆ ರಚಿತಾ ರಾಮ್ ಹೇಳಿರೋದಿಷ್ಟು. 

    ನಾನು ಎಲ್ಲಿಯೂ ಆ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಲ್ಲ. ಆ ಪಾತ್ರ ಮಾಡಬಾರದಾಗಿತ್ತು ಎಂದೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ.

    ನಾನು ಹೇಳಿದ್ದು ಆ ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಎಂದು. ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದೇನೆ. ಅಷ್ಟೆ.

    ಇನ್ನು ಮುಂದೆ ಬೋಲ್ಡ್ ಪಾತ್ರ ಮಾಡಲ್ಲ ಎಂದಿದ್ದು ಐ ಲವ್ ಯೂ ಚಿತ್ರದ ಪಾತ್ರದ ಕುರಿತು ಅಲ್ಲ. ನನ್ನ ಫ್ಯಾನ್ಸ್‍ಗೆ ಅಂತಹ ಪಾತ್ರ ಇಷ್ಟ ಆಗಲ್ಲ. ಹಾಗಾಗಿ ಇನ್ನು ಮುಂದೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲ್ಲ ಎಂದು. ಅಷ್ಟೇ ಹೊರತು ಮತ್ತೇನಿಲ್ಲ.

    ಇದೇ ಶುಕ್ರವಾರ ತೆರೆ ಕಾಣುತ್ತಿರುವ ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರ & ರಚಿತಾ ರಾಮ್ ಹಸಿಬಿಸಿ ದೃಶ್ಯಗಳು ಹವಾ ಎಬ್ಬಿಸಿವೆ. ರಚಿತಾ ರಾಮ್ ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದ ಚಿತ್ರ ಟ್ರೇಲರ್‍ಗಳ ಮೂಲಕವೇ ಗಮನ ಸೆಳೆದಿದ್ದು 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಹಾಗೂ 3 ರಾಜ್ಯಗಳಲ್ಲಿ ರಿಲೀಸ್ ಆಗುತ್ತಿದೆ.

  • ನಾನೇ ಉಪೇಂದ್ರ ಅಂದ್ರು ರಚಿತಾ

    rachita ram says she is female verison of upendra in i love you

    ಐ ಲವ್ ಯೂ ಚಿತ್ರದ ಟ್ರೇಲರ್, ಆ ಟ್ರೇಲರ್‍ನಲ್ಲಿರೋ ಹಾಟ್ ಹಾಟ್ ದೃಶ್ಯಗಳು, ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ನಟಿಸಿರೋ ರಚಿತಾ ರಾಮ್, ಜೊತೆಗೆ ಬೆಚ್ಚಿ ಬೀಳಿಸುವ ಡೈಲಾಗುಗಳು.. ಇವೆಲ್ಲವನ್ನೂ ನೋಡಿದವರಿಗೆ ರಚಿತಾ ರೋಲ್ ಎಂಥದ್ದಿರಬಹುದು ಎನ್ನುವ ಕುತೂಹಲ ಹುಟ್ಟುವುದು ಸಹಜವೇ. ಅದಕ್ಕೆಲ್ಲ ರಚಿತಾ ರಾಮ್ ಹೇಳಿರೋದು ಇಷ್ಟೆ..

    `ನಾನು ಉಪೇಂದ್ರ ಅವರ ಫಿಮೇಲ್ ವರ್ಷನ್. ನನ್ನ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ. ಎಲ್ಲರೂ ಕೇವಲ ಬೋಲ್ಡ್ ದೃಶ್ಯಗಳ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾರೆ. ಆ ದೃಶ್ಯಗಳಲ್ಲಿ ನಟಿಸುವಾಗ ನಾನೆಷ್ಟು ಮುಜುಗರ ಅನುಭವಿಸಿದೆ ನನಗಷ್ಟೇ ಗೊತ್ತು. ಸಿನಿಮಾ ನೋಡಿದ ಮೇಲೆ ಜನ ಖಂಡಿತಾ ಕೇವಲ ನನ್ನ ಪಾತ್ರದ ಬಗ್ಗೆ ಮಾತನಾಡುತ್ತಾರೆ' ಇದು ರಚಿತಾ ರಾಮ್ ಕಾನ್ಫಿಡೆನ್ಸು.

    ಆರ್.ಚಂದ್ರು ನಿರ್ದೇಶನದ ಸಿನಿಮಾ, ಇದೇ ಶುಕ್ರವಾರ ತೆರೆಗೆ ಬರುತ್ತಿದ್ದು, 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರದರ್ಶನ ಕಾಣಲಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಐ ಲವ್ ಯೂ.

  • ನಿಖಿಲ್ ಕುಮಾರಸ್ವಾಮಿ ರಾಜ.. ರಾಣಿ ರಚಿತಾ.. 

    seetharama kalyana raja rani song

    ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡು ರಿಲೀಸ್ ಆಗಿದೆ. ಇದು ಸೀತಾರಾಮ ಕಲ್ಯಾಣದ ಹಾಡು. ಹಾಡು ಇರುವುದೇ ರಚಿತಾ ರಾಮ್ ಮೇಲೆ. ಗುಳಿಕೆನ್ನೆ ಚೆಲುವೆಯನ್ನು ಹಾಡಿನಲ್ಲಿ ಮನಮೋಹಿನಿ, ಹಟ್ಟಿ ಚಿನ್ನದ ಗಣಿ, ಮುದ್ದು ಗಿಣಿ, ಕಾಳಿದಾಸನ ಕಾವ್ಯ ಎಂದೆಲ್ಲ ಬಣ್ಣಿಸಲಾಗಿದೆ.

    ಪ್ರೇಮ ನಿವೇದನೆಯ ಹಾಡು, ಹಾಡಿನ ವಿಡಿಯೋದಲ್ಲಿ ಬಳಸಿರುವ ಫೋಟೋಗಳಲ್ಲಿ ನಿಖಿಲ್-ರಚಿತಾ ಕೆಮಿಸ್ಟ್ರಿ ಶೃಂಗಾರ ಕಾವ್ಯದಂತಿದೆ. ನಿರ್ದೇಶಕ ಹರ್ಷ, ಲಿರಿಕಲ್ ಹಾಡನ್ನೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

    ಸುಕನ್ಯ ಸಾಹಿತ್ಯ ಬರೆದಿರುವ ಹಾಡಿಗೆ ಅನೂಪ್ ರೂಬಿನ್ಸ್ ಸಂಗೀತ ಸಂಯೋಜಿಸಿದ್ದು, ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್‍ನ್ನು ರಿಲೀಸ್ ಮಾಡಿರುವುದು ಸಿಎಂ ಕುಮಾರಸ್ವಾಮಿ. 

  • ನಿಮ್ಮ ಊರಿಗೂ ಬರ್ತಾರೆ.. ನಟಸಾರ್ವಭೌಮ..

    natasarvabhouma team will soon travel across karnataka

    ನಟಸಾರ್ವಭೌಮ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಏಕಕಾಲದಲ್ಲಿ 550 ಶೋ ಪ್ರದರ್ಶನಗಳ ಮೂಲಕ ನಟಸಾರ್ವಭೌಮ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದಾನೆ. ಮೊದಲೇ ಯೋಜಿಸಿದಂತೆ ಚಿತ್ರತಂಡ ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಹೊರಟಿದೆ.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಗಿ, ಅಭಿಮಾನಿಗಳೊಂದಿಗೆ ಸಿನಿಮಾ ನೋಡುವ ಪ್ಲಾನ್ ಮಾಡಿದೆ ಚಿತ್ರತಂಡ. ನಾಳೆಯಿಂದ ವಿದೇಶಗಳಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಅಮೆರಿಕದಲ್ಲಿ 46 ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಚೀನಿ ಭಾಷೆಗೆ ಡಬ್ ಆಗುತ್ತಿದೆ. 

    ಒಟ್ಟಿನಲ್ಲಿ ನಟಸಾರ್ವಭೌಮನಿಗೆ ಪ್ರೇಕ್ಷಕ ಶರಣಾಗಿ ಹೋಗಿದ್ದಾನೆ.

  • ನಿಮ್ಮ ಊರಿಗೇ ಬರ್ತಾನೆ ನಟಸಾರ್ವಭೌಮ. ಟೈಂ ತಿಳ್ಕೊಳಿ

    natasarvabhouma is coming to your city

    ನಟಸಾರ್ವಭೌಮ ಸೂಪರ್ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರೊಂದಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಪುನೀತ್ ರಾಜ್‍ಕುಮಾರ್. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಯಾತ್ರೆ ಪೂರೈಸಿರುವ ಅಪ್ಪು, ಈ ಬಾರಿ ಉತ್ತರ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಮಾರ್ಚ್ 3ರಂದು ಭಾನುವಾರ ಪುನೀತ್ ಅಭಿಮಾನಿಗಳ ಜೊತೆಯಲ್ಲಿರ್ತಾರೆ.

    ಮಾರ್ಚ್ 3 : ಭಾನುವಾರ

    ಬೆಳಗ್ಗೆ 10ಕ್ಕೆ - ಹಾವೇರಿ

    ಬೆಳಗ್ಗೆ 11.30 - ರಾಣೆಬೆನ್ನೂರು

    ಮಧ್ಯಾಹ್ನ 1ಕ್ಕೆ - ದಾವಣಗೆರೆ

    ಮಧ್ಯಾಹ್ನ 2.30 - ಚಿತ್ರದುರ್ಗ

    ಮಧ್ಯಾಹ್ನ 3.30 - ಹಿರಿಯೂರು

    ಸಂಜೆ 4.30 - ಶಿರಾ 

    ಸಂಜೆ 5.30 - ತುಮಕೂರು

    ಈಗ ರೆಡಿಯಾಗಬೇಕಿರೋದು ನೀವು. ನಟಸಾರ್ವಭೌಮನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಈಗ ರಿಯಲ್ಲಾಗಿಯೇ ಪುನೀತ್ ಜೊತೆ ಕೈ ಕುಲುಕಬಹುದು.

  • ನಿಮ್ಮ ರಾಜ, ರಾಣಿಯ ಜೊತೆ ಹಾಡು ಹಾಡಿ.. 6364741243ಗೆ ಕಳಿಸಿ.. ಬಹುಮಾನ ಗೆಲ್ಲಿ..!

    sing a song and win active

    ಸೀತಾರಾಮ ಕಲ್ಯಾಣ ಚಿತ್ರದ ಸೂಪರ್ ಹಿಟ್ ಹಾಡುಗಳಲ್ಲೊಂದು ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ತಂಡ, ಈಗ ಚಿತ್ರರಸಿಕರಿಗೊಂದು ಬ್ಯೂಟಿಫುಲ್ ಸ್ಪರ್ಧೆಯನ್ನಿಟ್ಟಿದೆ. ನೀವು ಮಾಡಬೇಕಾದ್ದು ಇಷ್ಟೆ..

    ನಿಮ್ಮ ಸಂಗಾತಿಯ ಜೊತೆ.. ನೀವು ರಾಜನಾಗಿದ್ದರೆ ರಾಣಿಯ ಜೊತೆ.. ರಾಣಿಯಾಗಿದ್ದರೆ ರಾಜನ ಜೊತೆ.. ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡಿಗೆ ನಿಮ್ಮದೇ ಸ್ಟೈಲ್‍ನಲ್ಲಿ ನೃತ್ಯ ಮಾಡಿ. ವಿಡಿಯೋ ಮಾಡಿ. 6364741243ಗೆ ಕಳಿಸಿ.. 

    ಕಳಿಸಿದ್ರೆ ಮುಂದ.. ಮುಂದೇನು ಅಂತೀರೇನು.. ನೀವು ಸೀತಾರಾಮ ಕಲ್ಯಾಣ ಚಿತ್ರತಂಡದ ಜೊತೆ ಔತಣಕೂಟದಲ್ಲಿ ಭಾಗವಹಿಸಬಹುದು. ಒಬ್ಬ ಅದೃಷ್ಟಶಾಲಿಗೆ ಹೋಂಡಾ ಆ್ಯಕ್ಟಿವಾ ಉಡುಗೊರೆಯಾಗಿ ಸಿಗಲಿದೆ. ಇನ್ನೇಕೆ ತಡ.. ಟಿಕ್ ಟಾಕ್ ಆ್ಯಪ್ ಆನ್ ಮಾಡಿ.

  • ನೋ ಲಾಜಿಕ್.. ಓನ್ಲಿ ನಗು ಟಾನಿಕ್.. ಜಾನಿ ಮ್ಯಾಜಿಕ್

    johnny johnny is a complete riot

    ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಸ್ಪೆಷಲ್ ಏನು..? ಕಾಮಿಡಿ. ಕಾಮಿಡಿ ಬಿಟ್ಟರೆ ಬೇರೆ ಏನಿದೆ..? ಕಾಮಿಡಿಯೇ ಎಲ್ಲ... ಇದರಲ್ಲಿ ನಗುವನ್ನು ಬಿಟ್ಟು ಬೇರೇನೂ ಹುಡುಕಬೇಡಿ. ಲಾಜಿಕ್‍ನ್ನು ಕೂಡಾ ಹುಡುಕಬೇಡಿ. ಇದು ದುನಿಯಾ ವಿಜಯ್ ಹೇಳೋ ಮಾತು.

    ಜಾನಿ ಮೇರಾ ನಾಮ್ ಬಂದ 7 ವರ್ಷಗಳ ನಂತರ ಜಾನಿ ಜಾನಿ ಯೆಸ್ ಪಪ್ಪಾ ಬರುತ್ತಿದೆ. ಈ 7 ವರ್ಷಗಳಲ್ಲಿ ಜಾನಿ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅವನದ್ದೇ ಒಂದು ವೆಬ್‍ಸೈಟ್ ಇದೆ. ಫುಲ್ ಇಂಗ್ಲಿಷ್ ಹೊಡಿತಾನೆ. ಸಖತ್ ಸ್ಟೈಲಿಶ್ ಆಗಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ರಮ್ಯಾಗೆ ಕಾಳು ಹಾಕಿದ್ದ ಜಾನಿ, ಇಲ್ಲಿ ರಚಿತಾಗೆ ಗಾಳ ಹಾಕ್ತಾನೆ. 

    ಆದರೆ, ಕಾಮಿಡಿಯ ಆಚೆ ಯಾವುದೂ ಹೋಗಲ್ಲ. ಥಿಯೇಟರ್ ಒಳಗೆ ಎಂಟ್ರಿ ಕೊಡುವ ಪ್ರೇಕ್ಷಕ ನಗೋಕೆ ಶುರು ಮಾಡಿದ್ರೆ, ಸಿನಿಮಾ ಮುಗಿಯುವವರೆಗೂ ನಗ್ತಾನೇ ಇರ್ತಾನೆ. ಸ್ಕ್ರಿಪ್ಟ್ ಹಾಗಿದೆ. ಅದರ ಕ್ರೆಡಿಟ್ಟು ಪ್ರೀತಮ್ ಗುಬ್ಬಿದು ಅಂತಾರೆ ವಿಜಯ್.

  • ಪದ್ಮಾವತಿ..ಹೊಸ ಪದ್ಮಾವತಿ.. ಯೆಸ್ ಪಪ್ಪಾ..

    hosa padmavathi craze

    ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಹೊಸ ಹಾಡು. ಹೊಸ ಪದ್ಮಾವತಿಯಾಗಿ ಬಂದಿರೋ ರಚಿತಾ ರಾಮ್, ದುನಿಯಾ ವಿಜಯ್ ಜೋಡಿಯ ಹಾಡಿನ ಟೀಸರ್ ದೊಡ್ಡ ಹವಾ ಎಬ್ಬಿಸಿದೆ. ಊರಿಗೊಬ್ಳೇ ಪದ್ಮಾವತಿ ಹಾಡಿನಿಂದ ರಮ್ಯಾಗೆ ಪದ್ಮಾವತಿ ಇಮೇಜ್ ಕೊಟ್ಟಿದ್ದ ಪ್ರೀತಂ ಗುಬ್ಬಿ ನಿರ್ದೇಶನದ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.

    ಚಿತ್ರದ ಹಾಡಿನಲ್ಲಿ ರಚಿತಾ ರಾಮ್, ಇದುವರೆಗೆ ಕಾಣಿಸದೇ ಇರುವಷ್ಟು ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಹಾಡು ಎಂದಿನಂತೆ ಟಪ್ಪಾಂಗುಚ್ಚಿ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡಿಗೆ, ಸಾಹಿತ್ಯ ಕಿರಿಕ್ ಪಾರ್ಟಿ ಖ್ಯಾತಿಯ ಧನಂಜಯ್ ರಂಜನ್ ಅವರದ್ದು.

    Related Articles :-

    'Hosa Padmavathi' First Look Released

    ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

  • ಪಿ.ವಾಸು ಬೇಸರಕ್ಕೆ ಕಾರಣವಾಯ್ತು ರಚಿತಾ ರಾಮ್ ಆಡಿದ ಆ ಮಾತು

    p vasu upset over rachita ram's words

    ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗ್ಯಾಕೋ ಪದೇ ಪದೇ  ವಿವಾದಗಳಿಗೆ ಸಿಲುಕುತ್ತಿದ್ದಾರೆ. ಈ ಬಾರಿ ರಚಿತಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಹಿರಿಯ ನಿರ್ದೇಶಕ ಪಿ.ವಾಸು. ಆಯುಷ್ಮಾನ್ ಚಿತ್ರದ ಸುದ್ದಿಗೋಷ್ಟಿ ವೇಳೆ ರಚಿತಾ ರಾಮ್ ಆಡಿದ್ದ ಅ ಒಂದು ಮಾತಿಗೆ ಪಿ.ವಾಸು ಅಸಮಾಧಾನ ಹೊರಹಾಕಿದ್ದಾರೆ.

    ಕೆಟ್ಟದ್ದಕ್ಕೂ.. ಒಳ್ಳೆಯದ್ದಕ್ಕೂ ನಾನೇ ಕಾರಣವಂತೆ. ಇದೆಲ್ಲ ಹೇಗೆ ಹೇಳೋಕೆ ಸಾಧ್ಯ..? ರಚಿತಾ ರಾಮ್ ಅವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ವಾಸು. ಇಷ್ಟೆಲ್ಲ ಆಗಿಯೂ ಚಿತ್ರದಲ್ಲಿ ರಚಿತಾ ಒಳ್ಳೆಯ ಅಭಿನಯ ನೀಡಿದ್ದಾರೆ ಅನ್ನೋದನ್ನು ಮರೆಯೋದಿಲ್ಲ. ಪ್ರೇಕ್ಷಕರು ರಚಿತಾ ಅವರನ್ನು ಖಂಡಿತಾ ಮೆಚ್ಚಿಕೊಳ್ತಾರೆ ಎಂದಿದ್ದಾರೆ ವಾಸು.

    ಪಿ.ವಾಸು ಅವರ ಜೊತೆ ರಚಿತಾ ರಾಮ್ ಅವರಿಗೆ ಇದು ಮೊದಲ ಚಿತ್ರ. ಶಿವಣ್ಣ ಹೀರೋ ಆಗಿರುವ ಚಿತ್ರವಿದು. ದ್ವಾರಕೀಶ್ ಬ್ಯಾನರ್‍ಗೆ 50 ವರ್ಷ ತುಂಬಿರುವ ಈ ಹೊತ್ತಿನಲ್ಲಿ ಅವರ ಬ್ಯಾನರ್‍ನ 52ನೇ ಸಿನಿಮಾ ತೆರೆಗೆ ಬರುತ್ತಿದೆ. ನವೆಂಬರ್ 1ರಂದು ರಿಲೀಸ್ ಆಗುತ್ತಿದೆ ಆಯುಷ್ಮಾನ್ ಭವ.

  • ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

    puneeth rajkumar, rachitha ram image

    ರಚಿತಾ ರಾಮ್, ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್. ಪುನೀತ್ ಜೊತೆ ಎರಡನೇ ಬಾರಿ ನಾಯಕಿಯಾಗುತ್ತಿರುವ ಚೆಲುವೆ. ನಟಸಾರ್ವಭೌಮ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪ್ರಿಯಾಂಕಾ ಜಾಗಕ್ಕೆ ಈಗ ರಚಿತಾ ಬಂದಿದ್ದಾರೆ. ನಾಯಕಿಯ ದಿಢೀರ್ ಬದಲಾವಣೆಗೆ ಡೇಟ್ಸ್ ಸಮಸ್ಯೆ ಕಾರಣ ಎಂದಿದ್ದರು ನಿರ್ದೇಶಕ ಪವನ್ ಒಡೆಯರ್. ಆದರೆ, ಈಗ ಅಭಿಮಾನಿಗಳ ಸಮಸ್ಯೆ ಶುರುವಾಗಿದೆ.

    ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #ರಚಿತಾಬೇಡ ಎಂಬ ಅಭಿಯಾನವನ್ನೇ ನಡೆಸಿಬಿಟ್ಟಿದ್ದಾರೆ. ಚಕ್ರವ್ಯೂಹ ಚಿತ್ರದ ಪ್ರೊಮೋಷನ್ ವೇಳೆ, ಇದು ನಿಮ್ಮ ಅಪ್ಪು ಸಿನಿಮಾ, ನಿಮಗೆ ಇಷ್ಟವಾಗುತ್ತೆ ಎಂದು ಹೇಳಿದ್ದರು ರಚಿತಾ. ಹಾಗಾದರೆ, ಇದು ನಿಮ್ಮ ಸಿನಿಮಾ ಅಲ್ವಾ ಎಂದು ರೊಚ್ಚಿಗೆದ್ದಿದ್ದರು ಅಭಿಮಾನಿಗಳು. ಪುನೀತ್ ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.

    ಆ ಘಟನೆಯನ್ನು ಪುನೀತ್ ಮರೆತಿದ್ದರೂ, ಅಭಿಮಾನಿಗಳು ಮರೆತಿಲ್ಲ. ಇನ್ನೂ ಸಿನಿಮಾ ಆರಂಭದ ಹಂತದಲ್ಲಿದೆ. ಈಗಲೇ ಬೇರೆ ನಾಯಕಿಯನ್ನು ಆಯ್ಕೆ ಮಾಡಿ ಎಂದು ನಿರ್ದೇಶಕ ಪವನ್ ಒಡೆಯರ್ ಬೆನ್ನು ಬಿದ್ದಿದ್ದಾರೆ. ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ.

  • ಪುನೀತ್ ಸ್ಟೈಲ್ ಹಿಂದಿನ ಸ್ಟಾರ್ ಯಾರು ಗೊತ್ತಾ..?

    he is the secret star behind puneeth's style

    ಪುನೀತ್ ರಾಜ್‍ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?

    ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್‍ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.