` rachita ram - chitraloka.com | Kannada Movie News, Reviews | Image

rachita ram

  • ಡಿಂಪಲ್ ಕ್ವೀನ್ ಪಂಕಜ ಕಸ್ತೂರಿ ಆಗ್ತಾರಾ..?

    rachita ram image

    ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಕೋಕಿಲ ಆಗೋಕೆ ರೆಡಿಯಾಗುತ್ತಿದ್ದಾರೆ. ಕನ್ನಡದಲ್ಲೀಗ ಕೊಲಮಾವು ಕೋಕಿಲ ಚಿತ್ರದ ರೀಮೇಕ್ ನಡೆಯುತ್ತಿದ್ದು, ರಚಿತಾ ರಾಮ್ ನಾಯಕಿಯಾಗುತ್ತಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಕೊಲಮಾವು ಕೋಕಿಲ, ಡ್ರಗ್ಸ್ ಜಾಲ, ಅದರೊಳಗೇ ಇದ್ದು ತಪ್ಪಿಸಿಕೊಳ್ಳಲು ಬಯಸುವ ನಾಯಕಿ, ಕಳ್ಳ-ಪೊಲೀಸ್ ಆಟದ ರೋಚಕ ಕಥಾ ಹಂದರ ಹೊಂದಿತ್ತು. ಈಗ ಆ ಕಥೆ ಕನ್ನಡದಲ್ಲಿ ಸಿನಿಮಾ ಆಗುತ್ತಿದೆ. ಅಲ್ಲಿ ನಯನತಾರಾ ಹೀರೋಯಿನ್ ಆಗಿದ್ದರು.

    you_tube_chitraloka1.gif

    ಕನ್ನಡ್ ಗೊತ್ತಿಲ್ಲ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ, ಈ ಚಿತ್ರಕ್ಕೆ ನಿರ್ದೇಶಕ. ಕನ್ನಡದಲ್ಲಿ ಅತೀ ಹೆಚ್ಚು ಬ್ಯುಸಿ ಇರುವ ರಚಿತಾ ರಾಮ್, ಈಗ ತೆಲುಗಿನಲ್ಲೂ ಕಾಲಿಟ್ಟಿದ್ದಾರೆ. ಸೂಪರ್ ಮಚ್ಚಿ ಚಿತ್ರದ ಚಿತ್ರೀಕರಣ ಮುಗಿಸಿರೋ ರಚಿತಾ, ಕನ್ನಡದಲ್ಲಿ ಐ ಲವ್ ಯೂ, ಏಪ್ರಿಲ್, ವೀರಂ, ಲಿಲ್ಲಿ.. ಹೀಗೆ ಸಾಲು ಸಾಲು ಚಿತ್ರಗಳಿಗೆ ಯೆಸ್ ಎಂದಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ಶುರುವಾಗಲಿದೆ.

    ಕನ್ನಡದಲ್ಲಿ ಚಿತ್ರಕ್ಕೆ ಪಂಕಜ ಕಸ್ತೂರಿ ಅನ್ನೋ ಟೈಟಲ್ ಫೈನಲ್ ಆಗುವ ಸಾಧ್ಯತೆ ಇದೆ. ಚಿತ್ರದ ಸ್ಕ್ರಿಪ್ಟ್‍ನ್ನು ಘಾಟಿ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದಾರೆ ಮಯೂರ ರಾಘವೇಂದ್ರ.

  • ಡಿಂಪಲ್ ಕ್ವೀನ್ ಸೂಪರ್ ಮಚ್ಚಿ

    dimple queen's telugu movie journey begins

    ಅಕ್ಕನ ಮದುವೆ ಮುಗಿಸಿದ್ದೇ ತಡ, ಡಿಂಪಲ್ ಕ್ವೀನ್ ಹೈದರಾಬಾದ್ ಸೇರಿಕೊಂಡಿದ್ದಾರೆ. ಸೂಪರ್ ಮಚ್ಚಿ ಎನ್ನುತ್ತಿದ್ದಾರೆ. ಯೆಸ್.. ಈಗ ರಚಿತಾ ರಾಮ್ ಟಾಲಿವುಡ್ನ ಸೂಪರ್ ಮಚ್ಚಿ ಚಿತ್ರದ ಶೂಟಿಂಗ್ನಲ್ಲಿದ್ದಾರೆ.

    ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಹೀರೋ ಆಗಿರುವ ಸಿನಿಮಾ ಸೂಪರ್ ಮಚ್ಚಿ. ಐ ಲವ್ ಯೂ ಚಿತ್ರದ ತೆಲುಗು ವರ್ಷನ್ ಮೂಲಕ ತೆಲುಗರಿಗೆ ಪರಿಚಿತರಾಗಿದ್ದ ರಚಿತಾ, ಈಗ ತೆಲುಗು ಸಿನಿಮಾದಲ್ಲೇ ನಾಯಕಿ. ಸೂಪರ್ ಮಚ್ಚಿಗೆ ಪುಲಿ ವಾಸಿ ನಿರ್ದೇಶಕ. ಕಲ್ಯಾಣ್ ದೇವ್ಗೆ ಇದು 2ನೇ ಸಿನಿಮಾ

  • ಡಿಂಪಲ್ ಕ್ವೀನ್ ಹಿಂದೆ ಉಪ್ಪಿ ಅಲೆದಾಟ

    i love you film lyrical video released

    ಎ ಚಿತ್ರದಲ್ಲಿ ಚಾಂದಿನಿ ಹಿಂದೆ, ಪ್ರೀತ್ಸೆ ಚಿತ್ರದಲ್ಲಿ ಸೋನಾಲಿ ಬೇಂದ್ರೆ ಹಿಂದೆ, ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್, ದಾಮಿನಿ, ಪ್ರೇಮಾ ಹಿಂದೆ ಪ್ರೀತಿಗಾಗಿ ಅಲೆದಾಡಿದ್ದ ಉಪ್ಪಿ, ಈಗ ರಚಿತಾ ರಾಮ್ ಬೆನ್ನು ಬಿದ್ದಿದ್ದಾರೆ. ಪ್ರೀತ್ಸೆ ಪ್ರೀತ್ಸೆ ಎನ್ನುತ್ತಿದ್ದಾರೆ. ಐ ಲವ್ ಯೂ ಎನ್ನುತ್ತಿದ್ದಾರೆ. ಐ ಲವ್ ಯೂ ಚಿತ್ರದಲ್ಲಿ.

    ಐ ಲವ್ ಯೂ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ.. ಎಂದು ಶುರುವಾಗುವ ಹಾಡು, ಪ್ರೇಕ್ಷಕರನ್ನು ಥ್ರಿಲ್ಲಾಗಿಸಿದೆ. ಆರ್. ಚಂದ್ರು ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಐ ಲವ್ ಯೂ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆಯ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ.

  • ಡಿಂಪಲ್ ಕ್ವೀನ್..ಓನ್ಲಿ ಫಾರ್ ಸ್ಟಾರ್ ಹೀರೋಸ್

    rachitha ram

    ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್. ಬುಲ್‍ಬುಲ್ ರಚಿತಾ ಎಂದೇ ಕರೆಸಿಕೊಳ್ಳುವ ಬೆಡಗಿ ರಚಿತಾ. ಅವರ ಇನ್ನೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ರಚಿತಾ ರಾಮ್ ನಟಿಸುವುದು ಸ್ಟಾರ್‍ಗಳ ಜೊತೆ ಮಾತ್ರಾನಾ..? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ.

    ರಚಿತಾ ರಾಮ್ ಚಿತ್ರರಂಗ ಪ್ರವೇಶಿಸಿದ್ದು 2013ರಲ್ಲಿ. ಅದೂ ಚಾಲೆಂಜಿಂಗ್ ಸ್ಟಾರ್ ಜೊತೆ, ಬುಲ್ ಬುಲ್ ಚಿತ್ರದ ಮೂಲಕ. ಆ ಚಿತ್ರದಿಂದಲೇ ರಚಿತಾರಾಮ್ ಬುಲ್‍ಬುಲ್ ರಚಿತಾ ಎಂದು ಗುರುತಿಸಿಕೊಂಡರು. ಈ ನಾಲ್ಕು ವರ್ಷಗಳಲ್ಲಿ ಅವರು ನಟಿಸಿರುವುದು 8 ಚಿತ್ರಗಳಲ್ಲಿಮಾತ್ರ. ಮತ್ತು ಎಲ್ಲವೂ ಸ್ಟಾರ್ ಚಿತ್ರಗಳು.

    ನೀವೇ ನೋಡಿ. ದರ್ಶನ್ ಜೊತೆ ಎರಡು ಚಿತ್ರ (ಬುಲ್‍ಬುಲ್, ಅಂಬರೀಷ), ಪುನೀತ್ ರಾಜ್‍ಕುಮಾರ್(ಚಕ್ರವ್ಯೂಹ), ಸುದೀಪ್(ರನ್ನ), ಶ್ರೀಮುರಳಿ(ರಥಾವರ),ದಿಲ್ ರಂಗೀಲಾ(ಗಣೇಶ್),ಪುಷ್ಪಕವಿಮಾನ(ರಮೇಶ್ ಅರವಿಂದ್), ಭರ್ಜರಿ(ಧ್ರುವ ಸರ್ಜಾ), ಉಪ್ಪಿರುಪ್ಪಿ(ಉಪೇಂದ್ರ).. ಹೀಗೆ ನಟಿಸಿರುವ ಮತ್ತು ನಟಿಸುತ್ತಿರುವ ಚಿತ್ರಗಳೆಲ್ಲ ಸ್ಟಾರ್ ಚಿತ್ರಗಳೇ. 

    ಇನ್ನು ಅತಿಥಿ ನಟಿಯಾಗಿ ಕಾಣಿಸಿಕೊಂಡ ಜಗ್ಗುದಾದ, ಮುಕುಂದ ಮುರಾರಿ ಚಿತ್ರಗಳೂ ಕೂಡಾ ಸ್ಟಾರ್ ಹೀರೋಗಳಿದ್ದ ಚಿತ್ರಗಳೇ. ಹೀಗಾಗಿಯೇ ರಚಿತಾ ರಾಮ್ ಓನ್ಲಿ ಫಾರ್ ಸ್ಟಾರ್ ಹೀರೋಸ್ ಎನ್ನುತ್ತಿರುವುದು. ಚಿತ್ರರಂಗಕ್ಕೆ ಬಂದು 4 ವರ್ಷ ಕಳೆದು, 8 ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದರೂ, ಅವುಗಳಲ್ಲಿ ಒಂದೇ ಒಂದು ಹೊಸಬರ ಚಿತ್ರವಿಲ್ಲ ಎನ್ನುವುದೇ ಇದಕ್ಕೆ ಕಾರಣ.

  • ಡಿಂಪಲ್ ಕ್ವೀನ್‍ಗೆ ಕಣ್ಣು ಕಾಣಲ್ಲ..!

    dimple queen tp play role of visually challenged

    ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ನಾಗಶೇಖರ್ ಸಿನಿಮಾ. ಸಂಜಯ್ ಅಲಿಯಾಸ್ ಸಂಜು ಚಿತ್ರಕ್ಕೆ ರಚಿತಾ ಹೀರೋಯಿನ್. ರಚಿತಾ ರಾಮ್ ಟೀಂಗೆ ಬಂದಿರೋದನ್ನ ಸ್ಪಷ್ಟಪಡಿಸಿದ್ದಾರೆ ನಾಗಶೇಖರ್. ಸದ್ಯಕ್ಕೆ ನಾಗಶೇಖರ್ ಮೈನಾ ಚಿತ್ರದ ಹಿಂದಿ ವರ್ಷನ್‍ನಲ್ಲಿ ಬ್ಯುಸಿ.

    ಅಂದಹಾಗೆ ಇದು ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್ ಅಲ್ಲ. ಇದು ಮನ ಮಿಡಿಯುವ ಪ್ರೇಮಕಥೆ. ಚಿತ್ರದಲ್ಲಿ ರಚಿತಾ ರಾಮ್ ವಿಕಲಚೇತನಳ ಪಾತ್ರ ಮಾಡುತ್ತಿದ್ದಾರೆ. ಅಂದರೆ ಅಂಧಳ ಪಾತ್ರ ಎಂದಿದ್ದಾರೆ ನಾಗಶೇಖರ್. ಸಿನಿಮಾ ವರ್ಷದ ಕೊನೆಗೆ ಶುರುವಾಗಲಿದೆ.

  • ಡಿಂಪಲ್ ಸ್ಟೆಪ್ಪಿಗೆ ಡಾಲಿ ಶಿಳ್ಳೆ ಹೊಡೆದು ಬಂದಾಗ..

    ಡಿಂಪಲ್ ಸ್ಟೆಪ್ಪಿಗೆ ಡಾಲಿ ಶಿಳ್ಳೆ ಹೊಡೆದು ಬಂದಾಗ..

    ಮುದ್ದು ಮುದ್ದು ಮುಖದ ಮುಗ್ಧ ಚೆಲುವೆ ರಚಿತಾ ರಾಮ್.. ಕಣ್ಣಿಗೆ ಕೂಲಿಂಗ್ ಗ್ಲಾಸು.. ಮುಖದ ತುಂಬಾ ನಗು.. ಎಂದಿನಂತೆ ನೋಡುವವರೆನ್ನೆಲ್ಲ ಹಳ್ಳಕ್ಕೆ ಬೀಳಿಸೋ ಗುಳಿಕೆನ್ನೆ.. ನಿಧಾನವಾಗಿ ಹುಡುಗರ ಹೆಜ್ಜೆ ಹಾಕುತ್ತಿದ್ದರೆ..

    ರೋಮಾಂಚನ ಹುಟ್ಟಿಸುವ ಅನೂಪ್ ಸಿಳೀನ್ ಮ್ಯೂಸಿಕ್.. ಮಾತಿಲ್ಲ.. ಕಥೆಯಿಲ್ಲ. ಬರೀ ಸಂಗೀತ ಸಿಂಚನ.. ನಡುವೆ ರೋಮಾಂಚನ..

    ಹಾಗೆ ರಚಿತಾ ಸ್ಟೆಪ್ಪು ಹಾಕುತ್ತಿದ್ದರೆ ಶಿಳ್ಳೆ ಹೊಡೆದು ಎಂಟ್ರಿ ಕೊಡ್ತಾರೆ ಡಾಲಿ ಧನಂಜಯ್. ಬಿಳಿ ಪಂಚೆ, ಬಿಳಿ ಶರಟಿನ ಕನ್ನಡದ ಸಂಸ್ಕøತಿಯ ಪ್ರತೀಕದಂತಿರೋ ಡಾಲಿ ಎಂಟ್ರಿಯಾದ ಮೇಲೆ ಇಬ್ಬರೂ ಸೇರಿ ಕುಣಿಯತೊಡಗುತ್ತಾರೆ. ಮಾನ್ಸೂನ್ ರಾಗ ಚಿತ್ರಕ್ಕೆ ಇಬ್ಬರೂ ಪ್ರೇಕ್ಷಕರನ್ನು ಕರೆಯುತ್ತಿರುವುದು ಹೀಗೆ..

    ಮುಂದಿನ ವಾರ ಮಾನ್ಸೂನ್ ರಾಗ ರಿಲೀಸ್ ಆಗುತ್ತಿದೆ. ಎಸ್.ಎ.ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕರಾಗಿದ್ದಾರೆ. ಇದೇ ಮೊದಲ ಬಾರಿಗೆ ರಚಿತಾ ರಾಮ್ ಮತ್ತು ಡಾಲಿ ಜೋಡಿಯಾಗಿದ್ದಾರೆ. ಕರಾವಳಿ ಸೆನ್ಸೇಷನ್ ಯಶಾ ಶಿವಕುಮಾರ್ ಕೂಡಾ ಇದ್ದಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಮೊದಲಾದ ಘಟಾನುಘಟಿ ತಾರಾಗಣದಲ್ಲಿ ಪ್ರೇಕ್ಷಕರಿಗೆ ಮೊದಲು ಸೆಳೆಯುತ್ತಿರೋದು ಅನೂಪ್ ಸಿಳೀನ್ ಸಂಗೀತವೇ.

  • ಡಿಂಪಲ್ ಸ್ಥಾನಕ್ಕೆ ಶಾನ್ವಿ..!

    Shanvi Replaces Rachita Ram In 'Kasturi Mahal'

    ರಚಿತಾ ರಾಮ್ ಮೊದಲು ಒಪ್ಪಿಕೊಂಡು ನಂತರ ನೋ ಎಂದಿದ್ದ ಸಿನಿಮಾ ಕಸ್ತೂರಿ ಮಹಲ್. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ಇದು ದಿನೇಶ್ ಬಾಬು ಚಿತ್ರ. ಕಥೆಯೂ ಚೆನ್ನಾಗಿದೆ. ಅವರ ಚಿತ್ರಗಳಲ್ಲಿ ಪಾತ್ರಗಳಿಗೆ ಒಳ್ಳೆಯ ಸ್ಕೋಪ್ ಇರುತ್ತೆ. ದಿನೇಶ್ ಬಾಬು ಚಿತ್ರಗಳಲ್ಲಿ ಅವಕಾಶ ಸಿಗುವುದೇ ಹೆಮ್ಮೆಯ ವಿಷಯ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಶಾನ್ವಿ.

    ಚಿತ್ರದಲ್ಲಿ 300 ವರ್ಷಗಳಷ್ಟು ಹಳೆಯ ಕಥೆ ಹೇಳುತ್ತಿದ್ದು, ಇಡೀ ಚಿತ್ರದ ಕಥೆ ನನ್ನ ಸುತ್ತವೇ ಸುತ್ತಲಿದೆ. ಎಕ್ಸೈಟಿಂಗ್ ಆಗಿದ್ದೇನೆ ಎಂದಿರೋ ಶಾನ್ವಿ, ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ.

  • ಡಿಂಪಿ ಸೆನ್ಸೇಷನ್ : 100 ರಿಲೀಸ್.. ಎಣ್ಣೆ ಸಾಂಗ್ ಹಿಟ್.. ಮುದ್ದು ಸಾಂಗೂ ಹಿಟ್..

    ಡಿಂಪಿ ಸೆನ್ಸೇಷನ್ : 100 ರಿಲೀಸ್.. ಎಣ್ಣೆ ಸಾಂಗ್ ಹಿಟ್.. ಮುದ್ದು ಸಾಂಗೂ ಹಿಟ್..

    ಈ ವಾರದ ಸೆನ್ಸೇಷನಲ್ ಸ್ಟಾರ್ ರಚಿತಾ ರಾಮ್. ಒಂದು ಕಡೆ ರಚಿತಾ ರಾಮ್ ಮತ್ತು ರಮೇಶ್ ಅರವಿಂದ್ ಕಾಂಬಿನೇಷನ್ನಿನ 100 ಸಿನಿಮಾ ಥ್ರಿಲ್ಲರ್ ಸೆನ್ಸೇಷನ್ ಸೃಷ್ಟಿಸಿದೆ. ಇದೇ ವಾರ ರಿಲೀಸ್ ಆಗುತ್ತಿದೆ. ರಮೇಶ್ ಅವರೇ ಡೈರೆಕ್ಟ್ ಮಾಡಿರೋ ಸಿನಿಮಾ ಆಗಿರೋ ಕಾರಣ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿರೋದು ಸೈಬರ್ ಕ್ರೈಂ ಸ್ಟೋರಿ.

    ಅದೇ ಖುಷಿಯಲ್ಲಿರೋ ರಚಿತಾಗೆ ಇನ್ನೊಂದು ಕಿಕ್ ಕೊಟ್ಟಿರೋದು ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಎಣ್ಣೆ ಸಾಂಗ್. ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ ಹಾಡು.. ಈ ಹಾಡು ರೆಕಾರ್ಡ್ ಬರೆದಿದ್ದು 30 ಲಕ್ಷಕ್ಕೂ ಹೆಚ್ಚು ಜನ ಹಾಡನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ.

    ಮತ್ತೊಂದು ರಚಿತಾ ರಾಮ್ ಅವರೇ ಕೊಟ್ಟಿರೋ ಕಿಕ್ಕು. ಸಖತ್ ಬೋಲ್ಡ್ ಆಗಿ ನಟಿಸಿದ್ದ ಲವ್ ಯೂ ರಚ್ಚು ಚಿತ್ರದ ಮುದ್ದು ನೀನು ಹಾಡು ಕೂಡಾ 20 ಲಕ್ಷಕ್ಕೂ ಹಿಟ್ಸ್ ಪಡೆದಿದೆ.

    ಒಟ್ಟಿನಲ್ಲಿ ಒಂದೆಡೆ ಥ್ರಿಲ್ ಕೊಡೋಕೆ ಬರುತ್ತಿರೋ ರಚಿತಾ.. ಇನ್ನೊಂದ್ ಕಡೆ ಕಿಕ್ ಹತ್ತಿಸಿಕೊಂಡಿದ್ದಾರೆ. ಮತ್ತೊಂದ್ ಕಡೆ ಕಿಕ್ ಹೆಚ್ಚಿಸುತ್ತಿದ್ದಾರೆ. ಟೋಟ್ಟಲ್ಲಿ.. ಸೆನ್ಸೇಷನ್.

  • ತಮಿಳಿಗೆ ಐ ಲವ್ ಯೂ, ಉಪ್ಪಿ ಪಾತ್ರದಲ್ಲಿ ವಿಜಯ್ ಸೇತುಪತಿನಾ..? ಕಾರ್ತಿನಾ..?

    i kove you in tamil

    ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಿ ದೂಳೆಬ್ಬಿಸುತ್ತಿರುವ ಚಿತ್ರ ಐ ಲವ್ ಯೂ. ಆರ್.ಚಂದ್ರು ನಿರ್ದೇಶನದ ಸಿನಿಮಾ ಹೌಸ್‍ಫುಲ್ ಆಗಿ ಮುನ್ನುಗ್ಗುತ್ತಿರುವಾಗಲೇ, ಚಿತ್ರಕ್ಕೆ ಕಾಲಿವುಡ್‍ನಿಂದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಂಗಳೂರಿಗೆ ಬಂದು ಸಿನಿಮಾ ನೋಡಿದ ನಿರ್ಮಾಪಕ ಸಂಜಯ್ ಕಾಲ್ವಾನಿ, ತಮಿಳಿನಲ್ಲಿ ಡೈರೆಕ್ಷನ್ ಮಾಡುವಂತೆ ಆರ್.ಚಂದ್ರುಗೆ ಆಫರ್ ಕೊಟ್ಟಿದ್ದಾರೆ. ಅಡ್ವಾನ್ಸ್‍ನ್ನೂ ಕೊಟ್ಟಿದ್ದಾರೆ.

    ಹೌದು, ಚಿತ್ರವನ್ನು ತಮಿಳಿನಲ್ಲಿ ಮಾಡುತ್ತಿರುವುದು ನಿಜ. ನಾನೇ ಅಲ್ಲಿಯೂ ನಿರ್ದೇಶಕ. ಅಡ್ವಾನ್ಸ್ ಕೂಡಾ ಕೊಟ್ಟಿದ್ದಾರೆ ಎಂದಿರುವ ಚಂದ್ರು, ತಮಿಳಿನ ನೇಟಿವಿಟಿಗೆ ತಕ್ಕಂತೆ ಸ್ಕ್ರಿಪ್ಟ್‍ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಿದ್ದಾರಂತೆ. ಉಪೇಂದ್ರ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ಅಥವಾ ಕಾರ್ತಿ ನಟಿಸಬಹುದು ಎಂಬ ಸುದ್ದಿಯಿದೆ.

    ಈಗಾಗಲೇ ತೆಲುಗಿನಲ್ಲಿ ಕೃಷ್ಣಮ್ಮ ಕಲಿಪಿ ಇದ್ದರೇನಿ ಚಿತ್ರ ನಿರ್ದೇಶಿಸಿರುವ ಚಂದ್ರು, ಐ ಲವ್ ಯೂ ಮೂಲಕ ತಮಿಳಿಗೂ ಕಾಲಿಡಲಿದ್ದಾರೆ. ಉಪೇಂದ್ರ, ರಚಿತಾರಾಮ್, ಸೋನುಗೌಡ ಅಭಿನಯದ ಐ ಲವ್ ಯೂ ಸಿನಿಮಾ, ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಚಿತ್ರದ ಯಶಸ್ಸಿಗೆ ಕಾರಣ

  • ತಮ್ಮನ ಚಿತ್ರಕ್ಕೆ ಕೊಡವರ ಗೀತೆಗೆ ದಚ್ಚು ಡ್ಯಾನ್ಸ್

    darshan rachita's kodava song released

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಡವನಾಗಿದ್ದಾರೆ. ಕೊಡವರೆಂದರೆ, ತಕ್ಷಣ ನೆನಪಾಗುವುದು ಜನರಲ್ ಕಾರಿಯಪ್ಪ, ತಿಮ್ಮಯ್ಯ. ಸಿನಿಮಾದಲ್ಲಿ ಕೊಡವರೆಂದರೆ ತಕ್ಷಣ ನೆನಪಾಗೋದು ಮುತ್ತಿನ ಹಾರ. ಕೊಡವರ ವೀರ.. ಹುಲಿ ಕೊಂದ ಧೀರ ಹಾಡು. ಈ ಬಾರಿ ಕೊಡವನಾಗಿ ಮುಂದೆ ಬಂದಿದ್ದಾರೆ ದರ್ಶನ್. ತಮ್ಮ ಅಮರ್ ಚಿತ್ರಕ್ಕಾಗಿ ದರ್ಶನ್ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

    ಜೋರು ಪಾರು ಆಟ ಆಡೋಣ.. ಎಂಬ ಹಾಡು, ಸಂಪೂರ್ಣ ಕೊಡವ ಭಾಷೆಯಲ್ಲೇ ಇರುವುದು ವಿಶೇಷ. ಕಿರಣ್ ಕಾವೇರಪ್ಪ ಬರೆದಿರೋ ಹಾಡಿಗೆ ಧ್ವನಿ ನೀಡಿರುವುದು ಜೆಸ್ಸಿ ಗಿಫ್ಟ್. ಅರ್ಜುನ್ ಜನ್ಯ ಸಂಗೀತದ ಹಾಡು ಅದ್ಭುತವಾಗಿದೆ ಅನ್ನೋದು ನಿರ್ದೇಶಕ ನಾಗಶೇಖರ್ ಸರ್ಟಿಫಿಕೇಟ್. ನಾಗಶೇಖರ್ ನಿರ್ದೇಶನದ ಚಿತ್ರಗಳಲ್ಲಿ ಹಾಡು ಕೇಳುವಂತಿರುತ್ತವೆ ಹಾಗೂ ಕಣ್ಣು ಮಿಸುಕದೆ ನೋಡುವಂತಿರುತ್ತವೆ. ಹೀಗಾಗಿ ಹಾಡು ಹೇಗೆ ಬಂದಿರಬಹುದು ಅನ್ನೋ ಕುತೂಹಲ ಕನ್ನಡಿಗರಿಗೂ ಇದೆ.

  • ತಮ್ಮನಿಗಾಗಿ.. ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಟಪ್ಪಾಂಗುಚ್ಚಿ

    rakshitha to dance with rachita in ek love ya

    ರಕ್ಷಿತಾ ಪ್ರೇಮ್ ಮದುವೆಯ ನಂತರ ಬೆಳ್ಳಿತೆರೆಯಿಂದ ದೂರವೇ ಉಳಿದುಬಿಟ್ಟಿದ್ದಾರೆ. 2007ರಲ್ಲಿ ರಿಲೀಸ್ ಆದ ತಾಯಿಯ ಮಡಿಲು ಚಿತ್ರವೇ ಕೊನೆ. ಅದಾದ ನಂತರ ರಕ್ಷಿತಾ ಬಣ್ಣ ಹಚ್ಚಿಲ್ಲ. ಈಗ ಮತ್ತೆ ಬರುತ್ತಿದ್ದಾರೆ. ಅದೂ ಡಿಂಪಲ್ ಕ್ವೀನ್ ಜೊತೆ.

    ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಅವರ ಸೋದರ ರಾಣಾ ಹೀರೋ. ಆ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ರಕ್ಷಿತಾ, ರಚಿತಾ ಜೊತೆ ಹೆಜ್ಜೆ ಹಾಕಲಿದ್ದಾರೆ.

    ಅಂದಹಾಗೆ ಇದು ಲವ್ ಫೇಲ್ಯೂರ್ ಸಾಂಗ್. ಅದೂ ಹುಡುಗರದ್ದಲ್ಲ. ಹುಡುಗೀರದ್ದು. ಹುಡುಗೀರು ಕುಡ್ಕೊಂಡ್ ಲವ್ ಫೇಲ್ಯೂರ್ ಸಾಂಗ್ ಹಾಡಿದ್ರೆ ಹೆಂಗಿರುತ್ತೆ.. ಅನ್ನೋ ಹುಳ ಬಿಟ್ಟೇ ಹಾಡಿಗೆ ರೆಡಿಯಾಗಿದ್ದಾರೆ ಪ್ರೇಮ್. ಗೆಟ್ ರೆಡಿ ಟು.. ಎಣ್ಣೆಗೂ.. ಹೆಣ್ಣಿಗೂ.. ಎಲ್ಲಿಂದ ಲಿಂಕಿದೆ ಭಗವಂತಾ..

  • ತೆಲುಗಿಗೆ ಹೊರಟು ನಿಂತ ಬುಲ್ಬುಲ್ ರಚಿತಾ

    rachitha ready to act in tollywood

    ರಚಿತಾ ರಾಮ್, ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಬುಲ್ ಬುಲ್ ಚಿತ್ರದಿಂದ ಎಂಟ್ರಿ ಕೊಟ್ಟ ರಚಿತಾ, ಈಗಾಗಲೇ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಟಾಪ್ ನಟರ ಜೊತೆ ನಟಿಸಿದ್ದಾರೆ.

    ಈಗ ಈ ಕನ್ನಡದ ಡಿಂಪಲ್ ಕ್ವೀನ್, ತೆಲುಗಿಗೆ ಹೊರಟಿದ್ದಾರಂತೆ. ಅದಕ್ಕೆಂದೇ ವಿಶೇಷ ಫೋಟೋಶೂಟ್ ಮಾಡಿಸಿರುವ ರಚಿತಾ, ಕೆಲವು ತೆಲುಗು ನಿರ್ಮಾಪಕರಿಂದ ಕಥೆಯನ್ನೂ ಕೇಳಿದ್ದಾರಂತೆ. ಸದ್ಯಕ್ಕೆ ಯಾವುದೂ ಫೈನಲೈಸ್ ಆಗಿಲ್ಲ.ಆದರೆ, ತೆಲುಗಿನಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ ರಚಿತಾ ರಾಮ್.

    ಕನ್ನಡದಿಂದ ತೆಲುಗಿಗೆ ವಲಸೆ ಹೋದ ನಟಿಯರ ದೊಡ್ಡ ಲಿಸ್ಟೇ ಇದೆ. ಸೌಂದರ್ಯ, ಪ್ರೇಮಾ, ಪ್ರಿಯಾಮಣಿ, ರಕ್ಷಿತಾ ಮೊದಲಾದವರೆಲ್ಲ ತೆಲುಗಿನಲ್ಲೂ ಸ್ಟಾರ್ ಆಗಿ ಮಿಂಚಿದವರು. ಅಂಥದ್ದೇ ಅದೃಷ್ಟ ರಚಿತಾಗೂ ಒಲಿಯುತ್ತಾ..?

  • ತೆಲುಗಿನಲ್ಲಿ ರಚಿತಾ ಚಮಕ್ ಮಾಡ್ತಾರಂತೆ..!

    rachitha ram o act in telugu chamak

    ಗೋಲ್ಡನ್ ಸ್ಟಾರ್ ಗಣೇಶ್, ರಶ್ಮಿಕಾ ಮಂದಣ್ಣ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಚಮಕ್, ಬಾಕ್ಸಾಫೀಸ್‍ನಲ್ಲೂ ಚಮಕ್ ಮಾಡ್ತಿರೋದು ಗೊತ್ತಿರೋ ವಿಷಯಾನೇ. ತೆಲುಗಿನಲ್ಲೂ ಚಮಕ್ ಮಾಡೋ ಇಂಗಿತ ವ್ಯಕ್ತಪಡಿಸಿದ್ದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಈಗ ತೆಲುಗು ಚಮಕ್‍ನ ಒಂದೊಂದೇ ವಿಷಯವನ್ನು ಹೊರಹಾಕತೊಡಗಿದ್ದಾರೆ.

    ತೆಲುಗಿನಲ್ಲಿ ಮಾಡಲಿರುವ ಚಮಕ್‍ಗೆ ಹೀರೋ ಆಗಿ ನಾನಿ ಆಯ್ಕೆ ಫೈನಲ್ ಹಂತದಲ್ಲಿದೆಯಂತೆ. ಇನ್ನು ರಶ್ಮಿಕಾ ಮಂದಣ್ಣ ಅವರ ಪಾತ್ರವನ್ನು ತೆಲುಗಿನಲ್ಲಿ ರಚಿತಾ ರಾಮ್ ಮಾಡುವ ಸಾಧ್ಯತೆಗಳಿವೆ. ಅಂದಹಾಗೆ ತೆಲುಗಿನಲ್ಲೂ ಕೂಡಾ ಚಂದ್ರಶೇಖರ್ ಅವರೇ ನಿರ್ಮಾಪಕರು.

    ರಚಿತಾ ರಾಮ್, ನಾಯಕಿಯಾಗಿ ನಟಿಸುತ್ತಿರುವ ಅಯೋಗ್ಯ ಚಿತ್ರಕ್ಕೆ ಇದೇ ಚಂದ್ರಶೇಖರ್ ನಿರ್ಮಾಪಕ. ಈ ಜೋಡಿ ತೆಲುಗು ಚಮಕ್‍ನಲ್ಲೂ ಕಂಟಿನ್ಯೂ ಆಗುತ್ತಿದೆ. ಆದರೆ, ಸದ್ಯಕ್ಕೆ ಯಾವುದೂ ಫೈನಲ್ ಅಲ್ಲ. ಅಧಿಕೃತ ಅಲ್ಲ.

  • ದಟ್ ಈಸ್ ಪುನೀತ್ ಪವರ್ 

    natasarvabhouma rules box office on weekdays too

    ಸಾಮಾನ್ಯವಾಗಿ ಸ್ಟಾರ್‍ಗಳ ಚಿತ್ರಗಳು ರಿಲೀಸ್ ಆದರೆ ಮೊದಲೆರಡು ದಿನ, ವೀಕೆಂಡ್ ಭರ್ಜರಿ ಹೌಸ್‍ಫುಲ್ ಶೋ ಇರುತ್ತವೆ. ಥಿಯೇಟರುಗಳು ತುಂಬಿ ತುಳುಕುತ್ತವೆ. ಪುನೀತ್ ಸಿನಿಮಾಗಳೂ ಅದಕ್ಕೆ ಹೊಸದಲ್ಲ. ಆದರೆ, ಪುನೀತ್ ಸಿನಿಮಾಗಳು ಬೇರೆಯವರಿಗಿಂತ ಡಿಫರೆಂಟ್ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ ನಟಸಾರ್ವಭೌಮ.

    ಕನ್ನಡದಲ್ಲಿ ಮೊದಲ ದಿನವೇ ಮಹಿಳಾ ಪ್ರೇಕ್ಷಕರು ಮತ್ತು ಕುಟುಂಬದವರನ್ನು ಥಿಯೇಟರಿಗೆ ಕರೆತರುವ ಶಕ್ತಿ ಇರುವುದು ಪುನೀತ್ ರಾಜ್‍ಕುಮಾರ್‍ಗೆ. ಈಗ ವೀಕೆಂಡ್ ನಂತರ ಅಂದರೆ, ಸೋಮವಾರ, ಮಂಗಳವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ ನಟಸಾರ್ವಭೌಮ.

    ಹೀಗಾಗಿ ಥಿಯೇಟರುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಶೋಗಳ ಸಂಖ್ಯೆಯೂ ಹೆಚ್ಚಿದೆ. ವಿದೇಶದಲ್ಲೂ ಬಿಡುಗಡೆಯಾಗುತ್ತಿರುವ ನಟಸಾರ್ವಭೌಮ, ಪುನೀತ್ ಸಿನಿಮಾಗಳ ಹಿಂದಿನವುಗಳಿಗಿಂತ ಡಿಫರೆಂಟ್ ಎನ್ನುವುದೇ ವಿಶೇಷ. ದಟ್ ಈಸ್ ಪುನೀತ್ ರಾಜ್‍ಕುಮಾರ್.

  • ದರ್ಶನ್‍ಗೆ ಮತ್ತೆ ಬುಲ್‍ಬುಲ್ ಜೋಡಿ

    darshan and rachitha ram to pair again

    ಸದ್ಯಕ್ಕೆ ಕುರುಕ್ಷೇತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್, 51ನೇ ಚಿತ್ರಕ್ಕೆ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ, ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.

    ಈ ಚಿತ್ರದಲ್ಲಿ ದರ್ಶನ್‍ಗೆ ರಚಿತಾ ರಾಮ್ ಆಯ್ಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಚಿತ್ರತಂಡ ರಚಿತಾ ಅವರನ್ನು ಸಂಪರ್ಕಿಸಿದ್ದು, ಇನ್ನೂ ಫೈನಲ್ ಆಗಿಲ್ಲ.

    ರಚಿತಾ ರಾಮ್, ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದೇ ಬುಲ್‍ಬುಲ್ ಚಿತ್ರದ ಮೂಲಕ. ದರ್ಶನ್‍ಗೆ ಜೋಡಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಚಿತಾ, ನಂತರ ಅಂಬರೀಷ ಚಿತ್ರದಲ್ಲೂ ದರ್ಶನ್‍ಗೆ ಜೋಡಿಯಾಗಿದ್ದರು. ಈ ಚಿತ್ರದಲ್ಲಿ ಮತ್ತೆ ಇಬ್ಬರೂ ಜೋಡಿಯಾದರೆ, ಹ್ಯಾಟ್ರಿಕ್ ಆಗಬಹುದು.

    ಸದ್ಯಕ್ಕೆ ರಚಿತಾ, ಜಾನಿ ಜಾನಿ ಯೆಸ್ ಪಪ್ಪಾ ಹಾಗೂ ಅಯೋಗ್ಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 

  • ದಾಖಲೆ ಮೊತ್ತಕ್ಕೆ ನಟಸಾರ್ವಭೌಮ ಸೇಲ್..!

    natasarvabhouma distribution rights sold for record sum

    ಪುನೀತ್ ಚಿತ್ರಗಳು ಎಂದರೆ ವಿತರಕರು ಸಾಲುಗಟ್ಟುತ್ತಾರೆ. ಜೊತೆಗೆ ಈ ಬಾರಿ ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಎಂಬುದೂ ಸೇರಿ ನಟಸಾರ್ವಭೌಮನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿತ್ರದ ಟ್ರೇಲರ್ ಎಬ್ಬಿಸಿದ ಹವಾ ನೋಡಿದ ವಿತರಕರು, ಚಿತ್ರವನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರಂತೆ.

    ಧೀರಜ್ ಎಂಟರ್‍ಪ್ರೈಸಸ್ ಚಿತ್ರವನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದು, 350ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪುನೀತ್, ರಚಿತಾ ರಾಮ್, ಅನುಪಮಾ, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ, ರವಿಶಂಕರ್ ಸೇರಿದಂತೆ ಭರ್ಜರಿ ತಾರಾಗಣ ಇರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ.

  • ನಟಸಾರ್ವಭೌಮ ಆಡಿಯೋ ಅದ್ಧೂರಿ

    natavabhouma audio launch in hubbali

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಅಡಿಯೋ ಲಾಂಚ್ ಅದ್ಧೂರಿಯಾಗಿ ನೆರವೇರಿದೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಪ್ಪು ಸಿನಿಮಾದ ಹಾಡುಗಳ ಬಿಡುಗಡೆಯಾಗಿದೆ. 

    ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಸಂಶಯಗಳಿದ್ದವು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಪುನೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದಷ್ಟೇ ಅಲ್ಲ, ಅದ್ಭುತ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರು.

    ಪುನೀತ್ ಜೊತೆ ಅಷ್ಟೇ ಅದ್ಭುತವಾಗಿ ಹೆಜ್ಜೆ ಹಾಕಿದ ರಚಿತಾ ರಾಮ್, ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು. ನಿರೂಪಕಿ ಅನುಶ್ರೀ ಅವರ ಉತ್ತರ ಕರ್ನಾಟಕ ಶೈಲಿಯ ನಿರೂಪಣೆ ಗಮನ ಸೆಳೆಯಿತು.

    ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ, ರಿಲೀಸ್‍ಗೆ ರೆಡಿಯಾಗಿದ್ದು, ಪ್ರಚಾರದ ಕೆಲಸಕ್ಕೆ ಆಡಿಯೋ ಲಾಂಚ್ ಮೂಲಕ ಮುಂದಾಗಿದೆ ಚಿತ್ರತಂಡ.

  • ನಟಸಾರ್ವಭೌಮ ಎಷ್ಟನೇ ನಂಬರ್..?

    natasarvabhouma is puneeth's 28th or 41st film

    ನಟಸಾರ್ವಭೌಮ, ಪುನೀತ್ ರಾಜ್‍ಕುಮಾರ್ ಅವರ ಎಷ್ಟನೇ ಸಿನಿಮಾ. ಪುನೀತ್ ಅವರಿಗಿಂತಲೂ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂದಹಾಗೆ  ಪುನೀತ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ತಮ್ಮ 6ನೇ ತಿಂಗಳಲ್ಲಿ. ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯವದು. ಪುನೀತ್ ಆಗಿನ್ನೂ 6 ತಿಂಗಳ ಮಗು. ರಾಜ್-ಜಯಮಾಲಾ ಜೋಡಿ ಮುದ್ದು ಮಗುವಾಗಿ ಕಾಣಿಸಿಕೊಂಡಿದ್ದರು ಅಪ್ಪು.

    ಅದಾದ ಮೇಲೆ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಚಲಿಸುವ ಮೋಡಗಳು, ಹೊಸ ಬೆಳಕು.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ಅಪ್ಪು, ನಾಯಕರಾಗಿ ನಟಿಸಿದ ಮೊದಲ ಸಿನಿಮಾ ಅಪ್ಪು.

    ಹೀರೋ ಆಗಿ ಅಪ್ಪು ಮೊದಲ ಸಿನಿಮಾ ಆದರೆ, ನಟನಾಗಿ ಪ್ರೇಮದ ಕಾಣಿಕೆ ಮೊದಲ ಸಿನಿಮಾ. ಹೀಗಾಗಿ ಹೀರೋ ಅಪ್ಪುಗೆ ನಟಸಾರ್ವಭೌಮ 28ನೇ ಚಿತ್ರವಾದರೆ, ಕಲಾವಿದನಾಗಿ ಇದು 41ನೇ ಸಿನಿಮಾ. 

  • ನಟಸಾರ್ವಭೌಮ ಕಲೆಕ್ಷನ್ ಎಷ್ಟು..? - ರಾಕ್‍ಲೈನ್ ಸ್ಪೀಕಿಂಗ್

    rockline venkatesh talks about natasarvabhouma

    ನಟಸಾರ್ವಭೌಮ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಎನ್ನುವಂತಹ ಪ್ರತಿಕ್ರಿಯೆಗಳೇ ಸಿಗುತ್ತಿರುವಾಗ ಚಿತ್ರದ ಕಲೆಕ್ಷನ್ ಎಷ್ಟಾಗಿರಬಹುದು..? ನಟಸಾರ್ವಭೌಮ ಹೊಸ ದಾಖಲೆ ಬರೆಯಿತಾ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವುದು ಸತ್ಯ. ಇದಕ್ಕೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ರಿಲೀಸ್ ಆಗಿ ಇನ್ನೂ ಕೆಲವೇ ದಿನಗಳಾಗಿವೆ. ಈಗಲೇ ಅಧಿಕೃತ ಎಂದು ಲೆಕ್ಕ ಹೇಳುವುದು ಕಷ್ಟ. ಅಂದಾಜಿನ ಲೆಕ್ಕ ಸಿಗಬಹುದು. ನನಗೆ ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಾಗಿದೆ. ಇನ್ನು ಬರುವುದೆಲ್ಲವೂ ಲಾಭ. ಒಂದೆರಡು ವಾರ ಕಳೆದ ಬಳಿಕ ಅಧಿಕೃತ ಮಾಹಿತಿ ಸಿಗಲಿದೆ' ಎಂದಿದ್ದಾರೆ ರಾಕ್‍ಲೈನ್.

    ಅಂದಹಾಗೆ ಇದು ಕೆಜಿಎಫ್ ದಾಖಲೆಯನ್ನೇನೂ ಮುರಿದಿಲ್ಲ. ಕೆಜಿಎಫ್ ಸಿನಿಮಾನೇ ಬೇರೆ. ನಟಸಾರ್ವಭೌಮ ಚಿತ್ರವೇ ಬೇರೆ. ಒಂದಕ್ಕೊಂದು ಕಂಪೇರ್ ಮಾಡೋದೇ ಸರಿಯಲ್ಲ. ನನ್ನ ಬ್ಯಾನರ್‍ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ನಟಸಾರ್ವಭೌಮ. ಚಿತ್ರವನ್ನು 350 ಥಿಯೇಟರುಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ಇನ್ನಷ್ಟು ಸೆಂಟರ್‍ಗಳಿಂದ ಬೇಡಿಕೆ ಬರುತ್ತಿದೆ ಎಂದಿದ್ದಾರೆ ರಾಕ್‍ಲೈನ್.

  • ನಟಸಾರ್ವಭೌಮ ಚಿತ್ರದಲ್ಲಿ ಭೂತ ಯಾರು..?

    who is ghost in natasarvabhouma

    ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ, ಚಿತ್ರದ ಒಂದು ರಹಸ್ಯ ಸೋರಿಕೆಯಾಗಿಬಿಟ್ಟಿದೆ. ಚಿತ್ರದಲ್ಲಿ ಒಂದು ದೆವ್ವ ಅರ್ಥಾತ್ ಭೂತ ಅಂದ್ರೆ ಆತ್ಮವೊಂದು ಇರಲಿದೆ. ಪುನೀತ್ ಪಾಲಿಗೆ ಇದು ಮೊತ್ತಮೊದಲ ಹಾರರ್ ಸಿನಿಮಾ ಆಗಲಿದೆ. ಹಾಗಾದರೆ, ದೆವ್ವ ಯಾರು..?

    ರಚಿತಾ, ಅನುಪಮಾ ನಾಯಕಿಯರು. ಬಿ.ಸರೋಜಾದೇವಿಯವರದ್ದೊಂದು ಪ್ರಧಾನ ಪಾತ್ರ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ.. ಮೊದಲಾದವರು ಚಿತ್ರದಲ್ಲಿದ್ದಾರೆ. ಇವರಲ್ಲೇ ಒಬ್ಬರು.. ಅಥವಾ ಇವರನ್ನು ಹೊರತುಪಡಿಸಿ ಒಬ್ಬರು ಚಿತ್ರದಲ್ಲಿ ದೆವ್ವವಾಗಿರ್ತಾರೆ ಅನ್ನೋದು ಕನ್‍ಫರ್ಮು. ಟ್ರೇಲರ್‍ನಲ್ಲಿಯೂ ಆ ಗುಟ್ಟು ಹೇಳೋದಿಲ್ವಂತೆ ನಿರ್ದೇಶಕ ಪವನ್ ಒಡೆಯರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಹೀಗೆಯೇ ಭರ್ಜರಿ ಸದ್ದು ಮಾಡುತ್ತಿದೆ. ರಿಲೀಸ್ ಡೇಟು ಕೂಡಾ ಹತ್ತಿರವಾಗುತ್ತಿದೆ.