` rachita ram - chitraloka.com | Kannada Movie News, Reviews | Image

rachita ram

  • ಆಯಷ್ಮಾನ್ ಭವ ಟಿಕೆಟ್ ಬುಕ್ಕಿಂಗ್ ಓಪನ್

    ayushmanbhava ticket booking open

    ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರ ಹುಟ್ಟಿಸಿರುವ ಕುತೂಹಲ ಸಣ್ಣ ಮಟ್ಟದ್ದಲ್ಲ. ದ್ವಾರಕೀಶ್ ಬ್ಯಾನರ್, ಪಿ.ವಾಸು, ಶಿವರಾಜ್ ಕುಮಾರ್ ಕಾಂಬಿನೇಷನ್ ಇದೆ ಎನ್ನುವ ಒಂದೇ ಒಂದು ಅಂಶವೇ ಪ್ರೇಕ್ಷಕರಿಗೆ ಥ್ರಿಲ್ ಹುಟ್ಟಿಸಿದೆ. ಅವರ ಜೊತೆಯಲ್ಲಿ ಅನಂತ್ ನಾಗ್, ಸುಹಾಸಿನಿ ಪ್ರಮುಖ ಪಾತ್ರದಲ್ಲಿದ್ದಾರೆ, ಗುರುಕಿರಣ್ ಅವರ ೧೦೦ನೇ ಚಿತ್ರವೂ ಇದೇ ಎಂದು ಗೊತ್ತಾದ ಮೇಲೆ ಕುತೂಹಲ ಮೌಂಟ್ ಎವರೆಸ್ಟ್ ಎತ್ತರಕ್ಕೇರಿದೆ. ಇದೇ ನವೆಂಬರ್ ೧೫ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಕೂಡಾ ಶುರುವಾಗಿದೆ.

    ಚಿತ್ರದ ವಿತರಣೆ ಜವಾಬ್ದಾರಿಯನ್ನು ಜಯಣ್ಣ ಫಿಲಂಸ್ ಮತ್ತು ಕಾರ್ತಿಕ್ ಗೌಡ ವಹಿಸಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಕ್ರೇಜ್ ಜೋರಾಗಿದೆ.

  • ಆಯುಷ್ಮಾನ್ ಭವ : ವಿಶೇಷ ದಾಖಲೆಗಳ ಸಿನಿಮಾ

    ayushmanbhava speciality

    ಆಯುಷ್ಮಾನ್ ಭವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಚಿತಾ ರಾಮ್ ಅಭಿನಯದ ಸಿನಿಮಾ. ಇದೇ ವಾರ ರಿಲೀಸ್ ಆಗುತ್ತಿರುವ ಆಯುಷ್ಮಾನ್ ಭವದಲ್ಲಿ ದಾಖಲೆಗಳ ಸುರಿಮಳೆಯೇ ಇದೆ ಎನ್ನುವುದು ವಿಶೇಷ.

    ಆಯುಷ್ ವಿಶೇಷ ನಂ.1 : ದ್ವಾರಕೀಶ್ ನಿರ್ಮಾಣದ 52ನೇ ಸಿನಿಮಾ ಆಯುಷ್ಮಾನ್ ಭವ

    ಆಯುಷ್ ವಿಶೇಷ ನಂ.2 : ದ್ವಾರಕೀಶ್ ಚಿತ್ರ ಬ್ಯಾನರ್‍ಗೆ ಈಗ ವಜ್ರಮಹೋತ್ಸವ ಸಂಭ್ರಮ

    ಆಯುಷ್ ವಿಶೇಷ ನಂ.3 : ಪಿ.ವಾಸು, ಶಿವರಾಜ್ ಕುಮಾರ್ ಜೊತೆಯಾಗಿರುವ 2ನೇ ಸಿನಿಮಾ.

    ಆಯುಷ್ ವಿಶೇಷ ನಂ.4 : ದ್ವಾರಕೀಶ್, ಪಿ.ವಾಸು ಜೊತೆಯಾಗಿರುವ 2ನೇ ಸಿನಿಮಾ

    ಆಯುಷ್ ವಿಶೇಷ ನಂ.5 : ಶಿವರಾಜ್ ಕುಮಾರ್‍ಗೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ

    ಆಯುಷ್ ವಿಶೇಷ ನಂ.6 : ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾ ಆಯುಷ್ಮಾನ್ ಭವ

    ಆಯುಷ್ ವಿಶೇಷ ನಂ.7 : ದ್ವಾರಕೀಶ್ ಬ್ಯಾನರ್‍ನಲ್ಲಿ ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ನಟಿಸಿದ್ದಾರೆ. ದ್ವಾರಕೀಶ್ ಚಿತ್ರ ಶುರುವಾಗಿದ್ದು ರಾಜ್ ಚಿತ್ರದ ಮೂಲಕ. 50ನೇ ವರ್ಷದ ಸಂಭ್ರಮದಲ್ಲಿರೋವಾಗ ಶಿವಣ್ಣ ಹೀರೋ

  • ಆಯುಷ್ಮಾನ್ ಭವ ಆಡಿಯೋ ಲಾಂಚ್ : ದಿಗ್ಗಜರ ಸಮಾಗಮ

    ayushmanbhava audio launched

    ಆಯುಷ್ಮಾನ್ ಭವ, ಇದೇ ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿರುವ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿರುವ ಬಹುತೇಕರು ದಿಗ್ಗಜರೇ. ಅದು ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೂ ಸಾಬೀತಾಯ್ತು.

    ಇದು ದ್ವಾರಕೀಶ್ ಚಿತ್ರದ 52ನೇ ಸಿನಿಮಾ. ಅದೂ ದ್ವಾರಕೀಶ್ ಬ್ಯಾನರ್‍ಗೆ 50ನೇ ವರ್ಷ ತುಂಬಿರುವ ಗೋಲ್ಡನ್ ಜ್ಯುಬಿಲಿ ವೇಳೆ ಬರುತ್ತಿರುವ ಚಿತ್ರವಿದು. ನಿರ್ಮಾಪಕ ದ್ವಾರಕೀಶ್.

    ಶಿವರಾಜ್ ಕುಮಾರ್ ಹೀರೋ ಆಗಿರುವ ಚಿತ್ರಕ್ಕೆ ಪಿ.ವಾಸು ನಿರ್ದೇಶನವಿದೆ. ಜೊತೆಯಲ್ಲಿ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಚಿತಾ ರಾಮ್ ನಾಯಕಿ. ಹೀಗೆ ದಿಗ್ಗಜರೇ ತುಂಬಿಕೊಂಡಿರುವ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದವರು ಕೂಡಾ ದಿಗ್ಗಜರೇ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ.

    ಅಂದಹಾಗೆ ಈ ಚಿತ್ರದ ಮೂಲಕ 100 ಚಿತ್ರಗಳಿಗೆ ಸಂಗೀತ ನಿರ್ದೇಶನ ಪೂರೈಸಿರುವ ಗುರುಕಿರಣ್ ಕೂಡಾ ಈಗ ದಿಗ್ಗಜರ ಸಾಲಿಗೇ ಸೇರಿಬಿಟ್ಟರು. ಇನ್ನೊಂದು ವಿಶೇಷವೆಂದರೆ, ಈ ದಿಗ್ಗಜರನ್ನೆಲ್ಲ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ್ದು ಯೋಗೀಶ್ ದ್ವಾರಕೀಶ್.

     

  • ಆಯುಷ್ಮಾನ್ ಭವ ಗ್ರಾಫಿಕ್ಸ್ ಎಫೆಕ್ಟ್‍ಗೆ ಖರ್ಚಾಗಿದ್ದೆಷ್ಟು ಕೋಟಿ..?

    ayushaman bhava's another attraction is visual effects

    ಶಿವಣ್ಣ, ಪಿ.ವಾಸು, ದ್ವಾರಕೀಶ್ ಬ್ಯಾನರ್ ಕಾಂಬಿನೇಷನ್ನಿನ ಆಯುಷ್ಮಾನ್ ಭವ, ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಚಿತ್ರದ ಇಂಟ್ರೆಸ್ಟಿಂಗ್ ವಿಷಯಗಳೂ ಹೊರಬೀಳುತ್ತಿವೆ. ವಾಸು ಚಿತ್ರ ಎಂದ ಮೇಲೆ ಅಲ್ಲೊಂದು ಅದ್ಭುತ ಕಥೆ ಇರುತ್ತೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬಾರಿ ಕಥೆಯಷ್ಟೇ ಅಲ್ಲ, ಚಿತ್ರದಲ್ಲಿ ಅದ್ಭುತವಾದ ಗ್ರಾಫಿಕ್ಸ್ ಕೂಡಾ ಇದೆಯಂತೆ.

    ಚಿತ್ರದ ಗ್ರಾಫಿಕ್ಸ್, ವಿಷ್ಯುಯಲ್ಸ್ ಎಫೆಕ್ಟ್‍ಗೆಂದೇ ಸುಮಾರು 2 ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಯೋಗೀಶ್ ದ್ವಾರಕೀಶ್. ಹೆಚ್ಚೂ ಕಡಿಮೆ 1 ಗಂಟೆಯ ದೃಶ್ಯ ವೈಭವವನ್ನು ಗ್ರಾಫಿಕ್ಸಿನಿಂದಲೇ ಸಿಂಗರಿಸಿದ್ದಾರಂತೆ.

    ಶಿವಣ್ಣ ಜೊತೆ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅನಂತ್‍ನಾಗ್, ನಿಧಿ ಸುಬ್ಬಯ್ಯ, ಸಾಧುಕೋಕಿಲ ಮೊದಲಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಚಿತ್ರವಿದು. 

  • ಆಯುಷ್ಮಾನ್ ಭವ ಟೀಸರ್ ರಿಲೀಸ್ ಮುಹೂರ್ತ ಫಿಕ್ಸ್

    ayushmanbhava teaser release date fixed

    ಆಯುಷ್ಮಾನ್ ಭವ, ದ್ವಾರಕೀಶ್ ಬ್ಯಾನರಿನಲ್ಲಿ ಶಿವಣ್ಣ ನಟಿಸಿರುವ ಚಿತ್ರ. ಪಿ.ವಾಸು, ಶಿವಣ್ಣ ಜೋಡಿಗೆ ಇದು 2ನೇ ಸಿನಿಮಾ. ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಮೊದಲಾದವರು ನಟಿಸಿರುವ ಚಿತ್ರ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.

    ಹಾಡುಗಳ ಲಿರಿಕಲ್ ವಿಡಿಯೋ ಬಿಟ್ಟಿರುವ ಚಿತ್ರತಂಡ ಈಗ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದೆ. ಅಕ್ಟೋಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ಟೀಸರ್ ರಿಲೀಸ್ ಆಗಲಿದೆ. ಹೇಗಿರಲಿದೆ ಸಿನಿಮಾ..? ಮತ್ತೊಂದು ಸೈಕಲಾಜಿಕಲ್ ಥ್ರಿಲ್ಲರ್..? ವೇಯ್ಟ್ ಮಾಡಿ..

  • ಆಯುಷ್ಮಾನ್ ಭವ ಪಕ್ಕಾ ಫ್ಯಾಮಿಲಿ ಸಿನಿಮಾ

    ayushmanbhava comes with many surprises

    ಕೆಲವು ಚಿತ್ರಗಳಿರುತ್ತವೆ. ಕೆಟಗರಿ ಬೇರೆ ಬೇರೆ. ಯುವಕರು, ಹುಡುಗಿಯರು, ಪಡ್ಡೆ ಹೈಕ್ಳು, ಮಲ್ಟಿಪ್ಲೆಕ್ಸ್ ಎ ಕ್ಲಾಸ್.. ಹೀಗೆ ಒಂದೊAದು ವರ್ಗಕ್ಕೇ ಮೀಸಲಾದ ಚಿತ್ರಗಳಿರುತ್ತವೆ. ಆದರೆ, ಆಯುಷ್ಮಾನ್ ಭವ ಹಾಗಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್.

    ಶಿವಣ್ಣ ನಟಿಸಿರುವ, ದ್ವಾರಕೀಶ್ ಚಿತ್ರವಾಗಿರೋ ಕಾರಣ ನೋ ಡಬಲ್ ಮೀನಿಂಗ್. ನೋ ಅಶ್ಲೀಲತೆ. ಒಂದು ಚೆಂದದ ಕಥೆ ಇದ್ದೇ ಇರುತ್ತೆ ಎನ್ನುವುದು ೧೦೦% ಪಕ್ಕಾ.

    ಪಿ.ವಾಸು ಡೈರೆಕ್ಷನ್ ಆಗಿರೋ ಕಾರಣ ಅಪ್ಪಟ ಕೌಟುಂಬಿಕ ಸಿನಿಮಾ ಆಗಿರುತ್ತೆ. ಒಂದೊಳ್ಳೆ ಕಥೆ ಇರುತ್ತೆ ಅನ್ನೋದ್ರಲ್ಲಿ ನೋ ಡೌಟ್. ಗುರುಕಿರಣ್ ಹಾಡುಗಳು ಹೃದಯಕ್ಕೇ ನಾಟುತ್ತಿವೆ.

    ಅನಂತ್ ನಾಗ್, ಸುಹಾಸಿನಿ, ರಚಿತಾ ರಾಮ್ ಎಲ್ಲರೂ ಇರುವಾಗ ಕಥೆಯಲ್ಲೇನೋ ಸ್ಪೆಷಾಲಿಟಿ ಇದ್ದೇ ಇದೆ ಎಂದರ್ಥ.

    ಸಾಹಸ ದೃಶ್ಯಗಳ ಝಲಕ್ ಟ್ರೇಲರಿನಲ್ಲೇ ಸಿಕ್ಕಿದೆ. ನೀರಿನೊಳಗೆ, ಟ್ರೇನ್ ಮೇಲೆ, ಕಡಿನಲ್ಲಿ ನಡೆದಿರುವ ಸಾಹಸಗಳು ಮೈ ನವಿರೇಳಿಸುತ್ತವಂತೆ. ಶಿವಣ್ಣ ೫೭ರ ವಯಸ್ಸಿನಲ್ಲೂ ಡ್ಯೂಪ್ ಇಲ್ಲದೆ ಸಾಹಸ ಮಾಡಿದ್ದಾರೆ.

    ಇಷ್ಟೆಲ್ಲ ವಿಶೇಷಗಳಿರೋ ಸಿನಿಮಾ ಈಗ ಥಿಯೇಟರುಗಳಲ್ಲಿದೆ. ಯಶಸ್ವೀಭವ ಎಂದುಬಿಡಿ.

  • ಆಯುಷ್ಮಾನ್ ಭವ ಬೇರೆಯದೇ ಅನುಭವ - ರಚಿತಾ ರಾಮ್

    rachita ram feels proud to work with p vasu

    ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡದ ಬಹುತೇಕ ಎಲ್ಲ ಸ್ಟಾರ್‍ಗಳ ಜೊತೆ ನಟಿಸಿರುವ ನಾಯಕಿ. ಸ್ಟಾರ್‍ಗಳ ಹೀರೋಯಿನ್, ಲಕ್ಕಿ ಹೀರೋಯಿನ್ ಎಂದೇ ಗುರುತಿಸಿಕೊಳ್ಳೋ ರಚಿತಾ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್‍ಗೆ ನಾಯಕಿಯಾಗಿದ್ದಾರೆ. ವಿಲನ್‍ನಲ್ಲಿ ಒಂದು ಹಾಡಿನಲ್ಲಿ ಕುಣಿದಿದ್ದ ರಚಿತಾ, ರುಸ್ತುಂನಲ್ಲಿ ನಟಿಸಿದ್ದರೂ ವಿವೇಕ್ ಒಬೇರಾಯ್ ಜೋಡಿಯಾಗಿದ್ದರು. ಇದು ಮೊದಲನೇ ಮುಖಾಮುಖಿ. ಆದರೆ ರಚಿತಾಗೆ ಆಯುಷ್ಮಾನ್ ಭವ ಸಿಕ್ಕಾಪಟ್ಟೆ ಸ್ಪೆಷಲ್ ಎನಿಸಿರುವುದಕ್ಕೆ ಹಲವು ಕಾರಣ ಇದೆ. ಅದು ಪಿ.ವಾಸು ಡೈರೆಕ್ಷನ್.

    ಮೊದಲ ದಿನವೇ ನೀವು ಹೇಗೆ ನಟಿಸುತ್ತೀರೋ ಗೊತ್ತಿಲ್ಲ. ನೋಡೋಣ ಎಂದಿದ್ದರಂತೆ ವಾಸು. ನಟಿಸಲು ಶುರು ಮಾಡಿದ ಮೇಲೆ ಇವರಿನ್ನೂ ಯಾಕೆ ತಮಿಳು, ತೆಲುಗುಗೆ ಹೋಗಿಲ್ಲ ಎಂದಿದ್ದರಂತೆ. ಶಾಟ್ ಮುಗಿದ ಮೇಲೆ ಎಲ್ಲರೂ ರಚಿತಾ ಪರ್ಫಾಮೆನ್ಸ್‍ಗೆ ಕ್ಲಾಪ್ ಮಾಡಿ ಎನ್ನುತ್ತಿದ್ದರಂತೆ. ಹಿರಿಯ ನಿರ್ದೇಶಕದ ಮೆಚ್ಚುಗೆ ನನ್ನ ಕಾನ್ಫಿಡೆನ್ಸ್ ಹೆಚ್ಚಿಸಿತು. ಮೊದಲು ಮೈಕ್‍ನಲ್ಲಿ ಬೈದರೂ, ನಂತರ ಸೀನ್ ಮುಗಿದ ಮೇಲೆ ಪ್ರಶಂಸೆ ಮಾಡುತ್ತಿದ್ದರು ಎನ್ನುತ್ತಾರೆ ರಚಿತಾ ರಾಮ್.

    ಬೆಳಗ್ಗೆ 8ಕ್ಕೆ ಸೆಟ್ಟಿಗೆ ಹೋದರೆ ವಾಪಸ್ ಬರುವವರೆಗೆ ಬಟ್ಟೆ ಹಿಂಡಿದಂತೆ ಹಿಂಡಿ ಹಾಕಿ ಕೆಲಸ ತೆಗೀತಿದ್ರು ಎನ್ನುವ ರಚಿತಾ ರಾಮ್ ಅವರಿಗೆ ಹಿಂದಿನ ಸಿನಿಮಾಗಳದ್ದೆಲ್ಲ ಒಂದು ತೂಕವಾದರೆ, ಆಯುಷ್ಮಾನ್ ಭವ ಚಿತ್ರವೇ ಇನ್ನೊಂದು ತೂಕ.

    ಒಟ್ಟಿನಲ್ಲಿ ರಚಿತಾಗೆ ದ್ವಾರಕೀಶ್ ಬ್ಯಾನರಿನಲ್ಲಿ ಇದು ಮೊದಲ ಸಿನಿಮಾ. ಶಿವಣ್ಣ ಜೊತೆ ನಾಯಕಿಯಾಗಿ ಮೊದಲ ಸಿನಿಮಾ. ಅಷ್ಟೇ ಅಲ್ಲ, ಪಿ.ವಾಸು ನಿರ್ದೇಶನದಲ್ಲೂ ಮೊದಲನೇ ಸಿನಿಮಾ.

     

  • ಆಯುಷ್ಮಾನ್ ಭವ ರಿಲೀಸ್ ಲೇಟ್ - ಅಸಲಿ ಕಾರಣ ಹೇಳಿದ ಶಿವಣ್ಣ

    shivanna reveals the reason behind delay in ayushmanbahav release

    ನಿರೀಕ್ಷೆ ನಿಜವಾಗಿದೆ. ಆಯುಷ್ಮಾನ್ ಭವ ಚಿತ್ರ ಬಿಡುಗಡೆ ತಡವಾಗಿದ್ದಕ್ಕೆ ನಿಜವಾದ ಕಾರಣ ಈಗ ಹೊರಬಿದ್ದಿದೆ. ಅದನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಆಯುಷ್ಮಾನ್ ಭವ ಬಿಡುಗಡೆ ವಿಳಂಬಕ್ಕೆ ಕಾರಣವಾಗಿದ್ದು, ಅನಿಮಲ್ ಬೋರ್ಡ್.

    ಭುಜದ ನೋವಿತ್ತು. ಯೋಗಿ ಬೇಡ ಎಂದಿದ್ದರೂ ಕೇಳದೆ ಎಲ್ಲ ಕೆಲಸವನ್ನೂ ಮುಗಿಸಿಕೊಟ್ಟಿದ್ದೆ. ನವೆಂಬರ್ ೧ಕ್ಕೆ ರಿಲೀಸ್ ಮಾಡಿ ಎಂದು ನಾನೇ ಹೇಳಿದ್ದೆ. ಯೋಗಿಯೂ ಎಲ್ಲ ಮುತುವರ್ಜಿ ವಹಿಸಿ ಎಲ್ಲವನ್ನೂ ಸಿದ್ಧಪಡಿಸಿದರು. ಅವುಗಳ ಜೊತೆಗೆ ಅನಿಮಲ್ ಬೋರ್ಡ್ ವತಿಯಿಂದ ಪ್ರಮಾಣ ಪತ್ರ ಸಿಗುವುದು ತಡವಾಯಿತು ಎಂದಿದ್ದಾರೆ.

    ನನ್ನ ಆರಂಭದ ದಿನಗಳಲ್ಲಿ ಇಂಥದ್ದೆಲ್ಲ ಇರಲಿಲ್ಲ. ನನ್ನ ೩ನೇ ಚಿತ್ರದಲ್ಲೇ ಚಿರತೆ ಜೊತೆ ಫೈಟ್ ಮಾಡಿದ್ದೆ. (ಮನ ಮೆಚ್ಚಿದ ಹುಡುಗಿ) ಮೊಸಳೆ ಜೊತೆ ಫೈಟ್ ಮಾಡಿದ್ದೆ. ಆಗೆಲ್ಲ ಯಾವ ಸಮಸ್ಯೆಗಳೂ ಇರಲಿಲ್ಲ. ಈಗ ಸಮಸ್ಯೆ ಆಗುತ್ತಿದೆ. ನಮಗೂ ಅವರ ಬಗ್ಗೆ ಗೌರವ ಇದೆ. ಆದರೆ, ಸಿನಿಮಾ ರಂಗದ ಬಗ್ಗೆ ಒಂಚೂರು ವಿನಾಯಿತಿ ಇರಲಿ ಎಂದಿದ್ದಾರೆ.

    ಅಷ್ಟೇ ಅಲ್ಲ, ಇದನ್ನೆಲ್ಲ ಮಾಡುವ ಬದಲು ದೇಶಾದ್ಯಂತ ಮಾಂಸಾಹಾರವನ್ನೇ ನಿಷೇಧಿಸಿಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ ಶಿವಣ್ಣ.

  • ಆಯುಷ್ಮಾನ್ ಭವ.. ಇಲ್ಲೂ ಇದೆಯಾ ದೆವ್ವ..?

    ayushmanbhava spikes interest

    ಪಿ.ವಾಸು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಗಳಿಗೆ ಫೇಮಸ್. ದೆವ್ವಗಳನ್ನೂ ಬಿಟ್ಟಿಲ್ಲ. ವಿಷ್ಣುಗೆ ಆಪ್ತಮಿತ್ರದಂತ ಸೈಕಲಾಜಿಕಲ್ ಥ್ರಿಲ್ಲರ್, ಆಪ್ತರಕ್ಷಕದಲ್ಲಿ ರಿಯಲ್ ದೆವ್ವದ ಚಿತ್ರ ಕೊಟ್ಟಿದ್ದ ಪಿ.ವಾಸು, ಶಿವರಾಜ್ ಕುಮಾರ್ ಅವರಿಗೆ ಶಿವಲಿಂಗ ಎಂಬ ದೆವ್ವದಂತಾ ಹಿಟ್ ಕೊಟ್ಟಿದ್ದವರು. ಈಗ ಆಯುಷ್ಮಾನ್ ಭವ ಟೀಸರ್ ಹೊರಬಿದ್ದಿದೆ. ದೆವ್ವ ಇದೆಯಾ..? ಅಥವಾ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾ..? ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ ಆಯುಷ್ಮಾನ್ ಭವ ಟೀಸರ್.

    ನೀನ್ ಶಬ್ಧಾನಾ ಇಷ್ಟ ಪಡ್ತಿದ್ದೀಯ ಅಂದ್ರೆ, ನಿನ್ನ ದೇಹದಲ್ಲಿ ತಾಳ ಇನ್ನೂ ಇದೆ ಎಂದಾಯ್ತು ಅನ್ನೋ ಡೈಲಾಗ್, ಇದು ಸೈಕಲಾಜಿಕಲ್  ಥ್ರಿಲ್ಲರ್ ಇರಬಹುದಾ ಎನ್ನಿಸಿದ್ರೆ, ರಚಿತಾ ರಾಮ್ ಅವರ ಲುಕ್ ಬೇರೇನೋ ಕಥೆ ಹೇಳುತ್ತೆ. ಒಂದು ಎನರ್ಜೆಟಿಕ್ ಆ್ಯಕ್ಷನ್ ಮತ್ತು ಪಿ.ವಾಸು ಅವರ ಇಷ್ಟದ ಟ್ರೈನ್ ಪ್ರತ್ಯಕ್ಷವಾಗುತ್ತೆ.

    ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ಬರುತ್ತಿರೋ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ, ಸುಧಾ ಬೆಳವಾಡಿ, ಜೈಜಗದೀಶ್, ಶಿವಾಜಿಪ್ರಭು ನಟಿಸಿದ್ದಾರೆ.

  • ಆಯುಷ್ಮಾನ್ ಭವ.. ಹಾಡುಗಳೇ ವಿಸ್ಮಯ..!

    ayushmanbhava songs mesmerize evryone

    ಶಿವರಾಜ್ ಕುಮಾರ್, ಪಿ.ವಾಸು, ದ್ವಾರಕೀಶ್ ಬ್ಯಾನರ್, ಗುರುಕಿರಣ್, ರಚಿತಾ ರಾಮ್, ಅನಂತ್ ನಾಗ್ ಕಾಂಬಿನೇಷನ್ನಿನ ಸಿನಿಮಾ ಆಯುಷ್ಮಾನ್ ಭವ. ವಿಶೇಷವೆಂದರೆ, ದ್ವಾರಕೀಶ್ ಚಿತ್ರಕ್ಕೆ 50 ವರ್ಷ ಪೂರೈಸಿರುವ ಹೊತ್ತಿನಲ್ಲಿ ಬಂದಿರುವ ಚಿತ್ರದ ಮೂಲಕವೇ ಗುರುಕಿರಣ್ ಸೆಂಚುರಿ ಬಾರಿಸುತ್ತಿದ್ದಾರೆ.

    ಈಗ ಚಿತ್ರದ ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಸರ ಸರ..ಸರ ಧುಮುಕೊ ನೀರಿಗೆ.. ಗರಿಗೆದರುತ ಹಾರೋ ಹಕ್ಕಿಗೆ.. ಎಂಬ ಹಾಡಿದು. ಈಗಾಗಲೇ ಆಯುಷ್ಮಾನ್ ಭವ ಚಿತ್ರದ ಕೃಷ್ಣಾ ನೀ ಬೇಗನೆ ಬಾರೋ.. ಮತ್ತು ಥಕಿಟ ಥಕಿಟ ಹಾಡುಗಳ ಲಿರಿಕಲ್ ವಿಡಿಯೋ ಹೊರಬಿದ್ದಿವೆ.

    ವಿಶೇಷವೆಂದರೆ ತಮ್ಮ 100ನೇ ಚಿತ್ರದಲ್ಲಿ ಗುರುಕಿರಣ್ ಬಳಸಿರುವ ಮ್ಯೂಸಿಕ್. ಇದುವರೆಗೆ ಗುರುಕಿರಣ್ ಚಿತ್ರದಲ್ಲಿ ಕಾಣಿಸದೇ ಇರುವ ಹೊಸತನದ ಸ್ಪರ್ಶ ಆಯುಷ್ಮಾನ್ ಭವ ಚಿತ್ರದ ಹಾಡುಗಳಲ್ಲಿದೆ. ಕನ್ನಡದ ಹಳೆಯ ಸಂಗೀತ ಮಾಂತ್ರಿಕರನ್ನು ನೆನಪಿಸಿಕೊಂಡೇ 100ನೇ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟ ಹಾಗಿದೆ ಗುರುಕಿರಣ್. ಗುನುಗುವ ಹಾಡುಗಳು.

  • ಆಯುಷ್ಮಾನ್ ಭವಕ್ಕೆ ಅಭಿಮಾನಿಗಳ ಸಿದ್ಧತೆ

    fans gears up for ayushmanbhava release

    ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನದಯ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಸಿದ್ಧತೆಯೂ ಜೋರಾಗಿದೆ. ಆ ದಿನ ಕಟೌಟ್ ಕಟ್ಟಬೇಕು. ಹಾರ ಹಾಕಬೇಕು. ಥಿಯೇಟರಿನಲ್ಲಿ ತೋರಣ, ಬಣ್ಣದ ಪೇಪರ್ ಕಟ್ಟಬೇಕು. ದೇವಸ್ಥಾನಗಳಲ್ಲಿ ಪೂಜೆ ಆಗಬೇಕು, ಕುಂಭಳಕಾಯಿ ಒಡೆಯಬೇಕು. ಪಟಾಕಿ ಸಿಡಿಸಬೇಕು, ಆಯುಷ್ಮಾನ್ ಭವ ಪೋಸ್ಟರ್ ಮೆರವಣಿಗೆ ಆಗಬೇಕು, ಆರತಿ ಎತ್ತಬೇಕು, ಕ್ಷೀರಾಭಿಷೇಕ ಮಾಡಬೇಕು.. ಇಷ್ಟೆಲ್ಲ ಆದ ಮೇಲೆ ಹಾಡು, ಕುಣಿತ ಇಲ್ದೇ ಇರುತ್ತಾ..?

    ಆಯುಷ್ಮಾನ್ ಭವ ಸಿನಿಮಾ ಕೂಡಾ ಇದಕ್ಕೆ ಹೊರತಾಗಿಲ್ಲ. ಮೊದಲೇ ದ್ವಾರಕೀಶ್ ಬ್ಯಾನರ್‌ನಲ್ಲಿ ನಟಿಸಿರುವ ಚಿತ್ರವಿದು. ಶಿವಣ್ಣ, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್,ಸುಹಾಸಿನಿ ಇವರೆಲ್ಲ ಇರೋ ಚಿತ್ರಕ್ಕೆ ಪಿ.ವಾಸು ಡೈರೆಕ್ಷನ್. ಗುರುಕಿರಣ್ ಅವರ ೧೦೦ನೇ ಸಿನಿಮಾ. ಅಬ್ಬಾ ಇಷ್ಟೆಲ್ಲ ವಿಶೇಷ ಇದ್ದ ಮೇಲೆ ಶಿವಣ್ಣನ ಆಯುಷ್ಮಾನ್ ಭವ ಹಬ್ಬವಾಗದಿದ್ದರೆ ಹೇಗೆ..? ನವೆಂಬರ್ ೧೫ ಅಭಿಮಾನಿಗಳ ಪಾಲಿಗೆ ಆಯುಷ್ಮಾನ್ ಭವ ಹಬ್ಬ.

  • ಇನ್ನು ಮೇಲೆ ಡಿಂಪಲ್ ಕ್ವೀನ್ ಧ್ವನಿಯನ್ನೂ ಕೇಳಬಹುದು..!

    rachitha ram to dub her voice

    ಬುಲ್‍ಬುಲ್ ರಚಿತಾ ರಾಮ್, ಅಭಿಮಾನಿಗಳ ಪಾಲಿಗೆ ಡಿಂಪಲ್ ಕ್ವೀನ್. ಈ ಗುಳಿಗೆನ್ನೆಯ ಚೆಲುವೆ ಕೊನೆಗೂ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅಲ್ಲಲ್ಲ.. ಬಾಯನ್ನೇ ಹಾಕಿದ್ದಾರೆ. ಇಷ್ಟು ದಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದ ರಚಿತಾ ರಾಮ್, ಕೊನೆಗೂ ಡಬ್ಬಿಂಗ್ ಮಾಡೋಕೆ ನಿರ್ಧರಿಸಿದ್ದಾರೆ.

    ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಸ್ವತಃ ರಚಿತಾ ರಾಮ್ ತಮ್ಮ ಧ್ವನಿಯನ್ನೇ ನೀಡಲಿದ್ದಾರಂತೆ. ಇದುವರೆಗೆ ನೀವು ಕೇಳಿದ್ದ ಧ್ವನಿ ರಚಿತಾ ರಾಮ್ ಅವರದ್ದಲ್ಲ ಅನ್ನೋದೂ ನಿಮಗೆ ಗೊತ್ತಿರಲಿ. ನಿರ್ದೇಶಕ ಪ್ರೀತಮ್ ಗುಬ್ಬಿ, ಸ್ವತಃ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ.

  • ಇಲ್ಲ..ಇಲ್ಲ..ಇಲ್ಲ.. ನಂಗ್ಯಾರೂ ಬಾಯ್‍ಫ್ರೆಂಡ್ ಇಲ್ಲ - ರಚಿತಾ ರಾಮ್

    rachita ram gives clarification about her marriage rumors

    ನೀವು ಎಂಗೇಜ್ ಆಗಿದ್ದೀರಂತೆ. ಕೈಲಿರೋ ಸಿನಿಮಾಗಳೆಲ್ಲ ಮುಗಿಸಿದ್ ಕೂಡ್ಲೇ ಮದ್ವೆ ಆಗ್ತಿದ್ದೀರಂತೆ. ನಿಮ್ಮ ಬಾಯ್‍ಫ್ರೆಂಡ್ ರಾಜಕಾರಣಿಯೊಬ್ಬರ ಮಗನಂತೆ. ನಮಗೂ ಹೇಳಲ್ವಾ.. ಹೀಗೆ ಇತ್ತೀಚೆಗೆ ರಚಿತಾ ರಾಮ್, ಹೋದಲ್ಲಿ.. ಬಂದಲ್ಲಿ.. ನಿಂತಲ್ಲಿ.. ಕೂತಲ್ಲಿ.. ಸಿಕ್ಕಲ್ಲೆಲ್ಲ ಅವರಿಗೆ ಇದೇ ಪ್ರಶ್ನೆ ಎದುರಾಗ್ತಾ ಇದೆ. ಅದಕ್ಕೆ ತಕ್ಕಂತೆ ಕೈತುಂಬಾ ಸಿನಿಮಾಗಳು. ಅಯೋಗ್ಯ ಮುಗಿಯುತ್ತಿದ್ದಂತೆ, ಸೀತಾರಾಮ ಕಲ್ಯಾಣ ರೆಡಿಯಾಗಿದೆ. ಐ ಲವ್ ಯೂ ತೆರೆಗೆ ಬರುತ್ತಿದೆ. ನಟಸಾರ್ವಭೌಮ ರಿಲೀಸ್‍ಗೆ ರೆಡಿಯಿದೆ. ಹೀಗಾಗಿ ಮಾಧ್ಯಮಗಳಿಗೆ ಸಿಗುತ್ತಲೇ ಇದ್ದಾರೆ ರಚಿತಾ ರಾಮ್. ಹೀಗೆ ಪದೇ ಪದೇ ಎದುರಾಗುವ ಪ್ರಶ್ನೆಗಳಿಗೆ ಮೊದ ಮೊದಲು ಗುಳಿಕೆನ್ನೆಯನ್ನು ಕೆಂಪು ಮಾಡಿಕೊಂಡು ನಗುನಗುತ್ತಲೇ ಉತ್ತರಿಸುತ್ತಿದ್ದ ರಚಿತಾ, ಈಗ ಬೇಸತ್ತು ಹೋಗಿದ್ದಾರೆ. 

    ನನಗೆ ಯಾರೂ ಬಾಯ್‍ಫ್ರೆಂಡ್ ಇಲ್ಲ. ಯಾರನ್ನೂ ನಾನು ಲವ್ ಮಾಡ್ತಾ ಇಲ್ಲ. ನನ್ನನ್ನು ಮದುವೆಯಾಗೋಕೆ ಯಾವ ರಾಜಕಾರಣಿಯೂ, ರಾಜಕಾರಣಿಯ ಮಗನೂ ನನ್ನ ಮನೆ ಬಾಗಿಲಿಗೆ ಬಂದಿಲ್ಲ. ನಾನು ಮದುವೆಗೆ ರೆಡಿ ಇದ್ದೇನೆ. ಎಂತಹ ಹುಡುಗ ಬೇಕು ಅನ್ನೋದು ನನ್ನ ತಂದೆ ತಾಯಿಗೆ ಗೊತ್ತು. ನನಗೂ ನನ್ನ ಮದುವೆ, ಗಂಡನ ಬಗ್ಗೆ ಕನಸು, ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತ ಹುಡುಗ ಬೇಕು. ಸದ್ಯಕ್ಕಂತೂ ನನ್ನ ಸಂಪೂರ್ಣ ಗಮನ ಸಿನಿಮಾ ಮೇಲಿದೆ. ಪದೇ ಪದೇ ನನ್ನ ಮದುವೆ ವಿಚಾರ ಕೆದಕಬೇಡಿ. ಸಾಧ್ಯವಾದರೆ, ನೀವೇ ಒಂದೊಳ್ಳೆ ಹುಡುಗನನ್ನು ತೋರಿಸಿ. ನೋಡೋಣ ಎಂದಿದ್ದಾರೆ ರಚಿತಾ ರಾಮ್.

  • ಇಲ್ಲಿ ಖಾಕಿ ತೊಟ್ಕೊಂಡು ಅಲ್ಲಿ ರಚಿತಾ ರಾಮ್ ಮಿಸ್ಸಿಂಗ್ ಅನ್ನೋದಾ ಚಿರು..?

    chiru looks out for missing rachita ram in april

    ಖಾಕಿ, ಸದ್ಯದಲ್ಲೇ ರಿಲೀಸ್ ಆಗುತ್ತಿರೋ ಚಿರಂಜೀವಿ ಸರ್ಜಾ ಹೀರೋ ಆಗಿರೋ ಸಿನಿಮಾ. ಈ ಚಿತ್ರದಲ್ಲಿ ಕಾಮನ್ ಮ್ಯಾನ್ ಪವರ್ ತೋರಿಸೋಕೆ ಹೊರಟಿರೋ ಚಿರು, ಅಲ್ಲಿ ಇನ್ನೊಂದ್ ಕಡೆ ರಚಿತಾ ರಾಮ್ ಮಿಸ್ಸಿಂಗ್ ಅಂತಾ ಬೋರ್ಡ್ ಹಿಡ್ಕೊಂಡು ಹೊರಟಿದ್ದಾರೆ.

    ಯೆಸ್, ಇದು ಏಪ್ರಿಲ್ ಚಿತ್ರದ ಪೋಸ್ಟರ್. ವಿಶೇಷ ಅಂದ್ರೆ ರಚಿತಾ ರಾಮ್ ಕೂಡಾ ಪುಟ್ಟ ಮಗುವೊಂದರ ಫೋಟೋ ಹಿಡ್ಕೊಂಡು ಮಿಸ್ಸಿಂಗ್ ಅಂತಿದ್ರೆ, ರಚಿತಾ ಮತ್ತು ಮಗು ಇಬ್ಬರೂ ಇರೋ ಫೋಟೋ ಹಿಡ್ಕೊಂಡು ಚಿರು ನಿಂತಿದ್ದಾರೆ.

    ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಚಿರಂಜೀವಿ ಸರ್ಜಾ, ಈಗ ಖಾಕಿ ಚಿತ್ರದ ರಿಲೀಸ್ ಖುಷಿಯಲ್ಲಿದ್ದಾರೆ.

  • ಉಪ್ಪಿ ಐ ಲವ್ ಯೂ ಹಾಡು ಬಿಡುಗಡೆಗೆ ರಾಜಮೌಳಿ

    rajamouli to release i love you songs

    ಉಪೇಂದ್ರ-ಆರ್.ಚಂದ್ರು-ರಚಿತಾ ರಾಮ್ ಕಾಂಬಿನೇಷನ್‍ನ ಐ ಲವ್ ಯೂ ಸಿನಿಮಾದ ಆಡಿಯೋ ಲಾಂಚ್‍ಗೆ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಬರುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಐ ಲವ್ ಯೂ ಚಿತ್ರದ ಆಡಿಯೋ ಲಾಂಚ್‍ನ್ನೇ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ ಚಂದ್ರು. ಜನವರಿ 12ರಂದು, ದಾವಣಗೆರೆಯಲ್ಲಿ ಆಡಿಯೋ ಲಾಂಚ್ ಆಗಲಿದೆ. 

    `ರಾಜಮೌಳಿ ಅವರನ್ನು ನಾನೇ ಕೇಳಿಕೊಂಡೆ. ಅವರು ಬಳ್ಳಾರಿಯಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ನಾನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದಾಗ ಓಕೆ ಎಂದು ಒಪ್ಪಿಕೊಂಡರು' ಎಂದು ವಿವರ ನೀಡಿದ್ದಾರೆ ಆರ್.ಚಂದ್ರು.

    ಆಡಿಯೋ ಲಾಂಚ್‍ಗೆ ರಜನಿಕಾಂತ್ ಅವರನ್ನೂ ಆಹ್ವಾನಿಸಲು ಚಿಂತನೆ ನಡೆದಿದೆ. ಉಪೇಂದ್ರ ಅವರು ರಜನಿ ಸಂಪರ್ಕದಲ್ಲಿದ್ದಾರೆ. ಅದೇ ದಿನ ರಜನಿಕಾಂತ್‍ರ ಪೆಟ್ಟಾ ರಿಲೀಸ್ ಇದೆ. ಬರುತ್ತಾರೋ.. ಇಲ್ಲವೋ.. ಕನ್‍ಫರ್ಮ್ ಇಲ್ಲ ಎಂದಿದ್ದಾರೆ ಚಂದ್ರು. ಚಿತ್ರವನ್ನು ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧಗೊಂಡಿದೆ.

  • ಉಪ್ಪಿ ಐ ಲವ್ ಯೂ.. ಇಲ್ಲಿ ಎಲ್ಲವೂ ಇರುತ್ತದೆ..!

    i love you censored u/a

    ಉಪೇಂದ್ರ, ಎ, ಉಪೇಂದ್ರ, ಪ್ರೀತ್ಸೆ ಚಿತ್ರದ ಸ್ಟೈಲ್‍ನಲ್ಲಿ ಬರ್ತಾರೆ. ರಚಿತಾ ರಾಮ್, ಸಿಕ್ಕಾಪಟ್ಟೆ ಹಾಟ್ ಹಾಟ್ ಆಗಿ ನಟಿಸಿದ್ದಾರೆ. ಆರ್.ಚಂದ್ರು, ಇದು ಕಂಪ್ಲೀಟ್ ನನ್ನ ಸಿನಿಮಾ ಅಲ್ಲ.. ಇದು ಪಕ್ಕಾ ಉಪ್ಪಿ + ಚಂದ್ರು ಸಿನಿಮಾ ಎಂದು ಘೋಷಿಸಿಬಿಟ್ಟಿದ್ದಾರೆ.

    ಇಲ್ಲಿ ಎಲ್ಲವೂ ಇರುತ್ತದೆ.. ಕಡ್ಡಾಯವಾಗಿ ಕುಟುಂಬ ಸಮೇತ ಬನ್ನಿ ಎಂದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದ್ದಾರೆ ಆರ್.ಚಂದ್ರು.

    ಹೀಗೆ ಹಲವು ವಿಶೇಷಣ ಹೊತ್ತುಕೊಂಡಿರೋ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇಲ್ಲಿ ಎಲ್ಲವೂ ಇರುತ್ತದೆ ಎನ್ನುತ್ತಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆ ಮೇಲೆ ತರುತ್ತಿದೆ. ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಐ ಲವ್ ಯೂ.

  • ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ

    ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ

    ಜೋಗಿ ಪ್ರೇಮ್ ಮತ್ತೊಮ್ಮೆ ಲವ್ ಸ್ಟೋರಿ ಮೂಲಕ ಕಿಕ್ಕೇರಿಸೋಕೆ ಬರುತ್ತಿದ್ದಾರೆ. ಬಹುಶಃ ಎಕ್ಸ್‍ಕ್ಯೂಸ್ ಮಿ ನಂತರ ಪ್ರೇಮ್ ಸಿನಿಮಾಗಳಲ್ಲಿ ಲವ್ ಸ್ಟೋರಿ ಇರುತ್ತಾದರೂ, ಲವ್ ಸ್ಟೋರಿಯನ್ನೇ ಸಿನಿಮಾ ಮಾಡಿರಲಿಲ್ಲ. ಅದೆಲ್ಲವನ್ನೂ ಮೀರಿಸುವಂತೆ ಏಕ್ ಲವ್ ಯಾ ಚಿತ್ರದ ಮೂಲಕ ಬರುತ್ತಿರೋ ಪ್ರೇಮ್, ಮತ್ತೊಮ್ಮೆ ಹಾಡುಗಳ ಗುಂಗು ಹಿಡಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಹಾಡುಗಳು ಪ್ರೇಮಿಗಳ ಹೃದಯದಲ್ಲೇ ಟೆಂಟ್ ಹಾಕಿವೆ. ಈಗ 3ನೇ ಹಾಡು ಬರುತ್ತಿದೆ.

    ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ.. ಅನ್ನೋ ಹಾಡಿದು. ಹಾಡಿನಲ್ಲಿ ಎಣ್ಣೆ ಬಾಟಲಿಯನ್ನು ಬಾಯ್ತುಂಬಾ ಇಟ್ಟುಕೊಂಡು ಮತ್ತೇರಿಸೋದು ಡಿಂಪಲ್ ಕ್ವೀನ್. ಜೊತೆಯಲ್ಲಿರೋದು ಚಿತ್ರದಿಂದ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿರೊ ರಕ್ಷಿತಾ ಪ್ರೇಮ್ ತಮ್ಮ ರಾಣಾ. ಹಾಡಿಗೆ ಅಷ್ಟೇ ಕಿಕ್ಕು ಕೊಟ್ಟಿರೋದು ಮಂಗ್ಲಿ. 4 ಭಾಷೆಗಳಲ್ಲಿ ರಿಲೀಸ್ ಆಗಲಿರೋ ಚಿತ್ರದ ಈ ಹಾಡು ರಿಲೀಸ್ ಆಗೋದು ನವೆಂಬರ್ 12ರ ಸಂಜೆ 5 ಗಂಟೆಗೆ.

  • ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

    ಏಕ್ ಲವ್ ಯಾ ಟ್ರೇಲರ್ ರಿಲೀಸ್ ಸದ್ಯಕ್ಕಿಲ್ಲ. ರಿಲೀಸ್?

    ಇದೇ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಏಕ್ ಲವ್ ಯಾ. ಜೋಗಿ ಪ್ರೇಮ್ ಡೈರೆಕ್ಷನ್‍ನ ಚಿತ್ರದ ಮೂಲಕ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡಬೇಕಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಒಂದು ಲೆವೆಲ್ಲಿಗೆ ಪ್ರಚಾರವನ್ನೂ ಮುಗಿಸಿತ್ತು ಪ್ರೇಮ್ ಟೀಂ. ಜೊತೆಗೆ ರಚಿತಾ ರಾಮ್-ರಾಣಾ ಕಿಸ್ಸಿಂಗ್ ಬೇರೆಯದೇ ಸೆನ್ಸೇಷನ್ ಸೃಷ್ಟಿಸಿತ್ತು.

    ಇಷ್ಟೆಲ್ಲ ಆಗಿ ಇವತ್ತು ಅರ್ಥಾತ್ ಜನವರಿ 4ಕ್ಕೆ ರಿಲೀಸ್ ಆಗಬೇಕಿದ್ದ ಏಕ್ ಲವ್ ಯಾ ಟ್ರೇಲರ್ ಬಿಡುಗಡೆ ಮುಂದಕ್ಕೆ ಹೋಗಿದೆ. ನೀಡಿರುವುದು ತಾಂತ್ರಿಕ ಕಾರಣಗಳೇ ಆದರೂ, ಕಾರಣ ಬೇರೆಯದೇ ಇದೆ ಎನ್ನಲಾಗಿದೆ. ಅಕಸ್ಮಾತ್ ಸರ್ಕಾರ 50:50 ರೂಲ್ಸ್ ಜಾರಿಗೆ ತಂದರೆ ಏನು ಮಾಡುವುದು ಎಂಬ ಭಯ ಚಿತ್ರ ತಂಡದ್ದು. ಟ್ರೇಲರ್ ರಿಲೀಸ್ ಮಾಡದೆ ಪ್ರಚಾರ ಮಾಡುವುದೂ ಕಷ್ಟ. ಹೀಗಾಗಿ ಚಿತ್ರದ ರಿಲೀಸ್ ಕೂಡಾ ಮುಂದಕ್ಕೆ ಹೋದರೆ ಆಶ್ಚರ್ಯವಿಲ್ಲ.

    ಆದರೆ ಸದ್ಯಕ್ಕಂತೂ ಜೋಗಿ ಪ್ರೇಮ್ ಜನವರಿ 21ಕ್ಕೆ ಸಿನಿಮಾ ರಿಲೀಸ್ ಮಾಡುವುದು ಪಕ್ಕಾ ಎಂದಿದ್ದಾರೆ. ಚಿತ್ರದ ಇನ್ನೊಂದು ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

  • ಏಕ್ ಲವ್ ಯಾ ಮೀಟ್ ಮಾಡಣ..

    ಏಕ್ ಲವ್ ಯಾ ಮೀಟ್ ಮಾಡಣ..

    ಅದು ಚಿತ್ರದ ಹಾಡೂ ಹೌದು.. ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಇನ್ವಿಟೇಷನ್ನೂ ಹೌದು.. ಅಪ್ಪ ಅಮ್ಮ ಮದುವೆಯಾಗು ಎನ್ನುತ್ತಿದ್ದರೂ.. ಕಿವಿಗೆ ಬಿದ್ದೇ ಇಲ್ಲ ಎಂದು ಓಡಾಡೋ ಯುವಕ ಯುವತಿಯರ ರಾಷ್ಟ್ರಗೀತೆಯೂ ಹೌದು.. ಅದು ಏಕ್ ಲವ್ ಯಾ ಹಾಡು.. 5ನೇ ಹಾಡು.. ಮೀಟ್ ಮಾಡಣ..

    ಈಗಾಗಲೇ ಚಿತ್ರದ 4 ಹಾಡುಗಳು ರಿಲೀಸ್ ಆಗಿವೆ. ನಾಲ್ಕಕ್ಕೆ ನಾಲ್ಕೂ ಹಿಟ್. 5ನೇ ಹಾಡು ರಿಲೀಸ್ ಆಗುತ್ತಿರೋದು ಶಿವಮೊಗ್ಗದಲ್ಲಿ. ರಿಲೀಸ್ ಆಗಲಿರೋ ಹಾಡಿನ ಸಾಹಿತ್ಯದ ಟೋಟಲ್ ಶಕ್ತಿಯೇ ಮೀಟ್ ಮಾಡಣ..

    ರಕ್ಷಿತಾ ಪ್ರೇಮ್ ಸೋದರ ರಾಣಾ ಹೀರೋ ಆಗಿ ಎಂಟ್ರಿ ಕೊಡ್ತಿರೋ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಮತ್ತು ರಚಿತಾ ರಾಮ್ ಹೀರೋಯಿನ್ಸ್. ತುಂಟಾಟ, ತರಲೆ, ರೊಮ್ಯಾನ್ಸ್, ಹಾಟ್ ಕಿಸ್.. ಎಲ್ಲವೂ ಇರೋ ಚಿತ್ರ ಏಕ್ ಲವ್ ಯಾ. ಅರ್ಜುನ್ ಜನ್ಯಾ ಈಗಾಗಲೇ ಗುಂಗು ಹಿಡಿಸಿದ್ದಾಗಿದೆ. ಜೋಗಿ ಪ್ರೇಮ್ ಚಿತ್ರ ಎಂದಮೇಲೆ ಅಷ್ಟು ಸದ್ದು ಮಾಡಲೇ ಬೇಕು. ಓಕೆ.. ಮೀಟ್ ಮಾಡಣ..

  • ಏಕ್ ಲವ್ ಯಾ ರಿಲೀಸ್ ಯಾವಾಗ?

    ಏಕ್ ಲವ್ ಯಾ ರಿಲೀಸ್ ಯಾವಾಗ?

    ಜೋಗಿ ಪ್ರೇಮ್ ನಿರ್ದೇಶನದ, ರಕ್ಷಿತಾ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಏಕ್ ಲವ್ ಯಾ ಚಿತ್ರ ಈಗಾಗಲೇ ಭರ್ಜರಿ ಸದ್ದು ಮಾಡ್ತಿದೆ. ರಾಣಾ ರಚಿತಾ ಲಿಪ್ ಲಾಕ್, ಬಿಡುಗಡೆಯಾಗಿರೋ ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟು ಹಾಕಿವೆ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಬೇಕಿತ್ತು.

    ಚಿತ್ರದ ರಿಲೀಸ್ ಮುಂದೆ ಹಾಕಿದ್ದಾರೆ ಪ್ರೇಮ್. ಏಕ್ ಲವ್ ಯಾ ಜನವರಿ 21ಕ್ಕೆ ರಿಲೀಸ್ ಆಗುತ್ತಿಲ್ಲ. ಮತ್ತೆ ಯಾವಾಗ? ಹೇಳುತ್ತೇನೆ. ಖಂಡಿತಾ ಒಂದೊಳ್ಳೆ ಡೇಟ್ ಫಿಕ್ಸ್ ಮಾಡ್ತೇನೆ ಎಂದಿದ್ದಾರೆ ಪ್ರೇಮ್.

    ರಾಣಾ ಎದುರು ರೀಷ್ಮಾ ನಾಣಯ್ಯ ಹೀರೋಯಿನ್ ಆಗಿದ್ದಾರೆ. ರಚಿತಾ ರಾಮ್ ಅಷ್ಟೇ ಪ್ರಮುಖ ಪಾತ್ರದಲ್ಲಿದ್ದಾರೆ.