` rachita ram - chitraloka.com | Kannada Movie News, Reviews | Image

rachita ram

  • Vijayalakshmi Urs Turns Producer With Production No 1

    vijaylakshmi urs turns prodcer

    Vijayalakshmi Urs who was the chief of Kanteerava Studio has turned producer with a new film which is all set to be launched on the 12th of December. Chief Minister Siddaramaiah will be launching the film.

    The new untitled film which stars Upendra and Rachita Ram is being directed by Madesh. Vijayalakshmi Urs herself has written the story of the film. Rajesh Katta is the cameraman, while Sadhu Kokila has been roped in as the music director of the film.

    KFCC president Sa Ra Govindu, KFPA president Muniratna, KCA chairman S V Rajendra Singh Babu, MLC Dr Jayamala and others are expected to be present during the occasion.

  • What We Take Home is Important - Sudeep

    ranna image

    Actor-producer-director Sudeep has said that it is not important whether a film is big or small. What what we take home from that film is very important. Sudeep was talking during the first press meet of his latest film 'Ranna' which is all set to be released on the 04th of June.

    'This is the best team I have worked with in the recent times. It took a little time to complete the film because there were reasons for the delay. The delay is not due to any deliberate reasons, instead it is because of technical reasons' said Sudeep.

    ranna_pressmeet1.jpg

    Talking about the film, 'It is not important whether it is small or big. What is important is what we take home from the film. I have some wonderful memories regarding this film and I am very much happy about the way the film has shaped up' said Sudeep.

  • ಅಡೆತಡೆ ಗೆದ್ದ ಅಯೋಗ್ಯ, ಆಂಧ್ರ ಸವಾರಿಗೆ ರೆಡಿ

    ayogya to release in andhra

    ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಸಿನಿಮಾ. ಕಳೆದೊಂದು ವಾರದಿಂದ ಬಾಕ್ಸಾಫೀಸ್‍ನಲ್ಲಿ ಮ್ಯಾಜಿಕ್ ಮಾಡಿರುವ ಅಯೋಗ್ಯ, ಈಗ ಆಂಧ್ರಪ್ರದೇಶಕ್ಕೂ ಕಾಲಿಟ್ಟಿದೆ. ಅದೂ ಅಡೆತಡೆಗಳನ್ನು ದಾಟಿ ಹೈದರಾಬಾದ್‍ನಲ್ಲಿ ತೆರೆ ಕಾಣುತ್ತಿದೆ.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಸಿನಿಮಾವನ್ನು ಹೈದರಾಬಾದ್‍ನ ಮಲ್ಟಿಪ್ಲೆಕ್ಸ್‍ಗಳಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದ್ದರು. ಆದರೆ, ಅಲ್ಲಿನ ಫಿಲಂ ಚೇಂಬರ್, ಹೈದರಾಬಾದ್‍ನಲ್ಲಿ ಕನ್ನಡ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಕೊಡಬೇಕಿತ್ತು. ಈ ಹೊಸ ತಕರಾರಿನ ವಿರುದ್ಧ ಚಿತ್ರತಂಡ ಗರಂ ಆಗಿತ್ತು. ಸತೀಶ್, ಬಹಿರಂಗವಾಗಿಯೇ ಆಂಧ್ರಪ್ರದೇಶ ಫಿಲಂಚೇಂಬರ್ ವಿರುದ್ಧ ಸಿಟ್ಟಾಗಿದ್ದರು. ಅವರ ಸಿನಿಮಾಗಳನ್ನು ನಮ್ಮಲ್ಲಿ ಇಷ್ಟಬಂದಂತೆ ಬಿಡುಗಡೆ ಮಾಡ್ತಾರೆ. ಆದರೆ, ನಮ್ಮ ಸಿನಿಮಾಗಳನ್ನು ಅಲ್ಲಿ ಬಿಡುಗಡೆ ಮಾಡೋಕೆ ಇಲ್ಲದ ಷರತ್ತು ಹಾಕ್ತಾರೆ ಎಂದು ಆಕ್ರೋಶಗೊಂಡಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶದಿಂದ ವಿವಾದ ಬಗೆಹರಿದಿದ್ದು, ಮುಂದಿನ ವಾರದಿಂದ ಹೈದರಾಬಾದ್ ಮಲ್ಟಿಪ್ಲೆಕ್ಸುಗಳಲ್ಲಿ 6 ಸ್ಕ್ರೀನುಗಳಲ್ಲಿ ಅಯೋಗ್ಯ ಚಿತ್ರ ಪ್ರದರ್ಶನಗೊಳ್ಳಲಿದೆ. ಒಂದು ಯಶಸ್ವಿ ಚಿತ್ರವನ್ನು ಹೊರರಾಜ್ಯದಲ್ಲಿ ಬಿಡುಗಡೆ ಮಾಡೋಕೆ ಎದುರಾಗುವ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್.

  • ಅದ್ಧೂರಿ ಅಯೋಗ್ಯ 

    ayogya is sathish's biggest film

    ನೀನಾಸಂ ಸತೀಶ್ ಅವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಅಯೋಗ್ಯ ಸ್ಪೆಷಲ್. ಏಕೆ ಗೊತ್ತಾ..? ಇಷ್ಟು ದೊಡ್ಡ ಮಟ್ಟದಲ್ಲಿ ಸತೀಶ್ ಅವರ ಹಿಂದಿನ ಯಾವ ಸಿನಿಮಾಗಳೂ ತೆರೆ ಕಂಡಿರಲಿಲ್ಲ. 

    ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಯೋಗ್ಯ ರಿಲೀಸ್ ಆಗುತ್ತಿದೆ. ದೇಶದ 16 ರಾಜ್ಯಗಳಲ್ಲಿ ಹಾಗೂ 66 ದೇಶಗಳಲ್ಲಿಏಕಕಾಲಕ್ಕೆ ರಿಲೀಸ್ ಆಗುತ್ತಿರುವುದು ಅಯೋಗ್ಯನ ದಾಖಲೆ.

    ಸಿನಿಮಾ ಶುರುವಾಗಿ ಹೆಚ್ಚೂ ಕಡಿಮೆ 1 ವರ್ಷವಾಗಿದೆ. ಚಿತ್ರದ 4 ಹಾಡುಗಳೂ ಹಿಟ್ ಆಗಿವೆ. ಸಾಮಾನ್ಯವಾಗಿ ಸಿನಿಮಾದ ಒಂದು ಹಾಡು ಹಿಟ್ ಆದರೆ ಸಾಕು, ಚಿತ್ರತಂಡ ಹ್ಯಾಪಿಯಾಗಿಬಿಡುತ್ತೆ. ಆದರೆ, ಅಯೋಗ್ಯನ 4 ಹಾಡುಗಳೂ ಹಿಟ್ ಆಗಿರುವುದು ಚಿತ್ರತಂಡಕ್ಕೆ ಡಬಲ್ ಖುಷಿ. ಜೊತೆಗೆ ಚಿತ್ರದ ಮೂಲಕ ಸತೀಶ್, ಮತ್ತೊಮ್ಮೆ ಮಂಡ್ಯ ಸ್ಟೈಲ್‍ಗೆ ವಾಪಸ್ ಆಗಿದ್ದಾರೆ.

    ಸಿನಿಮಾದಲ್ಲಿರೋದು ಹಳ್ಳಿಯ ಕಥೆ. ಬಚ್ಚೇಗೌಡ ಮತ್ತು ಸಿದ್ದೇಗೌಡ ಎಂಬ ಇಬ್ಬರ ಫೈಟಿಂಗ್ ಸ್ಟೋರಿ. ರವಿಶಂಕರ್ ಮತ್ತು ನೀನಾಸಂ ಸತೀಶ್... ಮುಖಾಮುಖಿಯಾಗಿರೋದು ಇದೇ ಮೊದಲು. ರಚಿತಾ ರಾಮ್ ಜೊತೆ ನೀನಾಸಂ ಸತೀಶ್ ಕೂಡಾ ಇದೇ ಮೊದಲು. ನಿರ್ದೇಶಕ ಮಹೇಶ್ ಕುಮಾರ್‍ಗೆ ಇದು ಫಸ್ಟ್ ಸಿನಿಮಾ. 

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಅಯೋಗ್ಯ ಚಿತ್ರದ ಕಥೆಯನ್ನು ಇಷ್ಟಪಟ್ಟು, ಅದ್ಧೂರಿಯಾಗಿ ನಿರ್ಮಿಸಿರುವ ಜೊತೆಯಲ್ಲೇ ಅದ್ಧೂರಿಯಾಗಿ ತೆರೆಗೂ ತರುತ್ತಿದ್ದಾರೆ.

  • ಅಪ್ಪು ಅಭಿಮಾನಿಗಳ ಸೈನ್ಯಕ್ಕೆ ರಾಕ್‍ಲೈನ್ ಮನವಿ ಇದು

    rockline venkatesh requests fans to help curb piracy

    ನಟಸಾರ್ವಭೌಮ ಚಿತ್ರದ ರಿಲೀಸ್ ಆಗುವುದಕ್ಕೂ ಮುನ್ನವೇ ಚಿತ್ರತಂಡವನ್ನು ಕಾಡುತ್ತಿರುವುದು ಪೈರಸಿ. ಇದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರನ್ನೂ ಕಂಗೆಡಿಸಿದೆ. ಹೀಗಾಗಿಯೇ.. ಅವರು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಸಹ, ಅವರು ಒಂದು ದೊಡ್ಡ ಸೈನ್ಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದು ಅಪ್ಪು ಅಭಿಮಾನಿಗಳ ಸೈನ್ಯ.

    ನಟಸಾರ್ವಭೌಮ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಪೈರಸಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಡಬೇಡಿ. ಹಾಗೆ ಹರಡುವವರನ್ನು ಕಂಡರೆ, ತಕ್ಷಣ ನಮಗೆ ಮಾಹಿತಿ ನೀಡಿ. ಅಭಿಮಾನಿಗಳೇ ಬೆನ್ನೆಲುಬು. ಅವರೇ ಇಂತಹ ಪೈರಸಿಯನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ ರಾಕ್‍ಲೈನ್ ವೆಂಕಟೇಶ್. ನಟಸಾರ್ವಭೌಮ ಸಿನಿಮಾ, ನಾಳೆ ರಿಲೀಸ್ ಆಗುತ್ತಿದೆ.

  • ಅಪ್ಪು ಮೇಲೆ ರಚಿತಾಗಿರೋ ಬೇಸರ ಅದೊಂದೇ..

    rachita's dream dance with appu still pending

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಎದುರು ನಟಿಸಿರುವ ರಚಿತಾ ರಾಮ್‍ಗೆ, ಅಪ್ಪು ಜೊತೆ ಇದು 2ನೇ ಸಿನಿಮಾ. ಪುನೀತ್ ಜೊತೆ 2 ಚಿತ್ರಗಳಲ್ಲಿ ನಟಿಸಿರುವ ಖುಷಿಯಿದ್ದರೂ, ಅವರ ಆಸೆ ಕಂಪ್ಲೀಟ್ ಈಡೇರಿಲ್ಲ. ಈಗಲೂ ರಚಿತಾಗೆ ಅದೊಂದು ಬೇಸರ ಇದೆಯಂತೆ.

    ಚಿತ್ರರಂಗಕ್ಕೇ ಗೊತ್ತಿರೋ ಹಾಗೆ ಅಪ್ಪು ಅದ್ಭುತ ಡ್ಯಾನ್ಸರ್. ಆದರೆ, 2 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ರಚಿತಾಗೆ ಪುನೀತ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ  ಸಿಕ್ಕಿಲ್ಲ. 

    ನನಗೆ ಇನ್ನೂ ಒಂದು ಚಿತ್ರದಲ್ಲಿ ಅಪ್ಪು ಜೊತೆ ನಟಿಸುವ ಅವಕಾಶ ಸಿಕ್ಕೇ ಸಿಗುತ್ತೆ. ಆಗ ನನ್ನ ಮೊದಲ ಡಿಮ್ಯಾಂಡ್, ಅಪ್ಪು ಜೊತೆ ಒಂದು ಡ್ಯಾನ್ಸ್ ಬೇಕು ಅನ್ನೋದು ಅಂತಾರೆ ರಚಿತಾ.

  • ಅಪ್ಪುಗೆ ಅವಮಾನ ಮಾಡಿಲ್ಲ. ದಯವಿಟ್ಟು ಕ್ಷಮಿಸಿ : ಪ್ರೇಮ್, ರಕ್ಷಿತಾ, ಪ್ರೇಮ್, ರಚಿತಾ, ಅಕುಲ್ ಕ್ಷಮೆಯಾಚನೆ

    ಅಪ್ಪುಗೆ ಅವಮಾನ ಮಾಡಿಲ್ಲ. ದಯವಿಟ್ಟು ಕ್ಷಮಿಸಿ : ಪ್ರೇಮ್, ರಕ್ಷಿತಾ, ಪ್ರೇಮ್, ರಚಿತಾ, ಅಕುಲ್ ಕ್ಷಮೆಯಾಚನೆ

    ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ.. ಹಾಡು ಬಿಡುಗಡೆ ವೇಳೆ ಪುನೀತ್ ರಾಜ್ಕುಮಾರ್ ಫೋಟೋಗೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ರಚಿತಾ ರಾಮ್, ಅಕುಲ್ ಬಾಲಾಜಿ.. ಎಲ್ಲರೂ ಕ್ಷಮೆ ಕೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆ ನಂತರ ಅಪ್ಪು ಫೋಟೋ ಎದುರು ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರತಂಡ ಮಾಡಿರುವ ಈ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ನಮ್ಮವರೇ.. ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡೋಣ. ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ಗೆ ಅವಮಾನ ಆಗುವಂತೆ ನಡೆದುಕೊಂಡಿರುವುದು ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದರು ಸಾ.ರಾ. ಗೋವಿಂದು.

    ವಿವಾದವಾಗುತ್ತಿದ್ದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ. ಇದು ಉದ್ದೇಶಪೂರ್ವಕ ಅಲ್ಲ. ಅಚಾನಕ್ ಆಗಿ ನಡೆದ ಅಚಾತುರ್ಯ. ಅಪ್ಪು ನಮ್ಮ ಮನಸ್ಸಿನಲ್ಲಿದ್ದಾರೆ. ಹಾಡು ಶುರುವಾಗುವುದೇ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ. ಶಾಂಪೇನ್ ಬಾಟಲ್ ಓಪನ್ ಹಾಡು ಬಿಡುಗಡೆ ಕಾರ್ಯಕ್ರಮದ ಒಂದು ಅಂಗವಾಗಿತ್ತು. ಅಪ್ಪು ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಪ್ರೇಮ್.

    ಒಂದು ಅಚಾತುರ್ಯವಾಗಿದೆ. ದಯವಿಟ್ಟು ಕ್ಷಮೆ ಇರಲಿ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ ಯಾವುದೇ ಕನ್ನಡಿಗರಿಗೂ ಇರಲ್ಲ. ನಾನೂ ಚಿತ್ರದ ಭಾಗವಾಗಿರೋದ್ರಿಂದ ಕ್ಷಮೆ ಕೇಳುತ್ತಿದ್ದೇನೆ. ಉದ್ದೇಶಪೂರ್ವಕವಾಗಿ ಅಲ್ಲದೆ ನಡೆದಿರುವ ತಪ್ಪನ್ನು ಅಪ್ಪು ಅಭಿಮಾನಿಗಳು ಕ್ಷಮಿಸುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ ರಚಿತಾ ರಾಮ್.

    ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡಾ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಇದು ಉದ್ದೇಶಪೂರ್ವಕ ಅಲ್ಲ. ಅಪ್ಪು ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಶಾಂಪೇನ್ ಬಾಟಲ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಿಗೆ ಬೇಸರವಾಗಿದೆ. ಇಡೀ ಚಿತ್ರತಂಡದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ರಕ್ಷಿತಾ ಪ್ರೇಮ್.

    ಕಾರ್ಯಕ್ರಮದ ನಿರೂಪಕರಾಗಿದ್ದ ಅಕುಲ್ ಬಾಲಾಜಿ, ತಾಂತ್ರಿಕ ಸಮಸ್ಯೆಯಿಂದಾಗಿ ಶಾಂಪೇನ್ ಬಾಟಲ್ ಓಪನ್ ಮಾಡುವ ವೇಳೆ ಅಪ್ಪು ಫೋಟೋ ಬಂತು. ಆದರೂ.. ಆಗಿರುವ ಅಪಚಾರಕ್ಕೆ ಕ್ಷಮೆಯಿರಲಿ ಎಂದಿದ್ದಾರೆ.

  • ಅಬ್ಬಾ.. ಬುಲ್‍ಬುಲ್ ಸಖತ್ ಹಾಟ್ ಮಗಾ..

    rachita ram looks glamorous

    ಅಯೋಗ್ಯ ಚಿತ್ರದಲ್ಲಿ ಅಪ್ಪಟ ಮಂಡ್ಯ ಹುಡುಗಿಯಾಗಿ ಕಂಗೊಳಿಸಿದ್ದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನನ್ನೇ ಪ್ರೀತಿಸು ಎಂಬ ಹಾಡಿನಲ್ಲಿ ರಚಿತಾ ರಾಮ್ ಅವರ ಹಾಟ್ ಲುಕ್ ಅಬ್ಬಾ ಎನ್ನುವಂತಿದೆ. 

    ರಚಿತಾ ರಾಮ್ ಅವರ ಸೌಂದರ್ಯ ಹಾಗೂ ಅವರ ಗುಳಿಕೆನ್ನೆಯ ಮೇಲೆ ಹಾಡು ಬರೆಯಲಾಗಿದೆಯಂತೆ. ಡಿಂಪಲ್ ಕ್ವೀನ್ ಡಿಂಪಲ್ ಮೇಲೆ ಬರೆದಿರುವ ಹಾಡಿನಲ್ಲೇ ಬುಲ್‍ಬುಲ್ ಇಷ್ಟು ಹಾಟ್ ಆಗಿ ನಟಿಸಿರೋದು.

    ಆ ಕಾಸ್ಟ್ಯೂಮ್‍ನಲ್ಲಿ ರಚಿತಾ ರಾಮ್ ಗ್ಲಾಮರಸ್ ಆಗಿ ಕಾಣುತ್ತಾರೆ. ಅವರೊಬ್ಬ ಪಕ್ಕಾ ಪ್ರೊಫೆಷನಲ್. ರಚಿತಾ ಅವರ ಕಂಫರ್ಟ್‍ನೆಸ್‍ಗಾಗಿ ಸೆಟ್‍ನಲ್ಲಿ ನಿರ್ದೇಶಕರು, ಕ್ಯಾಮೆರಾಮನ್ ಮಾತ್ರ ಇದ್ದೆವು ಎಂದಿದ್ದಾರೆ ಚಂದ್ರು. ಉಪೇಂದ್ರ ನಾಯಕರಾಗಿರುವ ಐ ಲವ್ ಯೂ ಚಿತ್ರ, ಶುರುವಾದಾಗಿನಿಂದಲೂ ದಿನೇ ದಿನೇ ನಿರೀಕ್ಷೆ ಹೆಚ್ಚಿಸುತ್ತಿದೆ.

  • ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

    ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

    ಅಭಿಷೇಕ್ ಅಂಬರೀಷ್ ಮೊದಲ ಚಿತ್ರದಲ್ಲಿ ಚೆಂದದ ಹಾಡಿಗೆ ಹೆಜ್ಜೆ ಹಾಕಿದ್ದ ರಚಿತಾ ರಾಮ್, ಈಗ ಅಭಿಗೆ ಹೀರೋಯಿನ್ ಆಗುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ನಲ್ಲಿ ರಚಿತಾ ರಾಮ್ ಹೀರೋಯಿನ್. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಇಲ್ಲಿ ರಗಡ್ ಬಾಯ್ ಆಗಿದ್ದಾರೆ.

    ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಹೀರೋಯಿನ್ ಆಗಿ ಕೃಷ್ಣ ತುಳಸಿ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ.

    ಸುಧೀರ್ ಕೆ.ಎಂ.ನಿರ್ಮಾಣದ ಸಿನಿಮಾ, ಫಸ್ಟ್ ಲುಕ್ನಿಂದಲೇ ಗಮನ ಸೆಳೆದಿದೆ. ದುನಿಯಾ ಸೂರಿ-ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಕಾಂಬಿನೇಷನ್ ಸೆನ್ಸೇಷನ್ ಸೃಷ್ಟಿಸಿದೆ.

  • ಅಮರ್‍ನಲ್ಲಿ ದಚ್ಚು-ರಚ್ಚು ಕೊಡವರ ಹಾಡು

    darshan and rachita to dance for kodava dance number

    ಅಮರ್ ಚಿತ್ರ ರಿಲೀಸ್‍ಗೆ ರೆಡಿಯಾಗಿರುವಾಗಲೇ, ಆ ಚಿತ್ರದಲ್ಲಿನ ಒಂದು ಹಾಡು ಕುತೂಹಲ ಹುಟ್ಟಿಸುತ್ತಿದೆ. ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರದಲ್ಲಿ ದರ್ಶನ್, ರಚಿತಾ ರಾಮ್ ಗೆಸ್ಟ್ ರೋಲ್‍ಗಳಲ್ಲಿದ್ದಾರೆ. ಅವರು ಈ ಚಿತ್ರದಲ್ಲಿ ಜೋಡಿಯೂ ಹೌದು. ಈ ಜೋಡಿಗೊಂದು ಹಾಡಿದೆ. ಆ ಹಾಡು ಕೊಡವರ ಶೈಲಿಯಲ್ಲಿದೆ ಅನ್ನೋದು ವಿಶೇಷ.

    ನಿರ್ದೇಶಕ ನಾಗಶೇಖರ್, ಹಾಡನ್ನು ವಿಭಿನ್ನವಾಗಿ ಚಿತ್ರೀಕರಿಸಿದ್ದು, ಹಾಡಿಗೆ ಬುಲ್‍ಬುಲ್ ಜೊತೆ ಹೆಜ್ಜೆ ಹಾಕಿದ್ದಾರಂತೆ ದರ್ಶನ್. ಹಾಡು ಬರೆದಿರುವುದು ಕಿರಣ್ ಕಾವೇರಪ್ಪ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡಿಗೆ ದನಿಯಾಗಿರುವುದು ಮತ್ತೊಬ್ಬ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್.

    ವಿಶೇಷಗಳ ಸರಮಾಲೆಯನ್ನೇ ಹೊತ್ತು ತರುತ್ತಿರುವ ಅಮರ್ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರಿಗೆ ಭಾರಿ ನಿರೀಕ್ಷೆಯಿರುವುದು ಸುಳ್ಳಲ್ಲ.

  • ಅಯೋಗ್ಯನ 25ನೇ ದಿನದ ಸಂಭ್ರಮ

    ayogya celebrates 25 days

    ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಚಿತ್ರಮಂದಿರಗಳಲ್ಲಿ, ಬಾಕ್ಸಾಫೀಸ್‍ನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ, 25 ದಿನ ಪೂರೈಸಿದೆ. ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಅಯೋಗ್ಯ ಚಿತ್ರದ ಈ ಸಂಭ್ರಮಾಚರಣೆ ನರ್ತಕಿ ಚಿತ್ರಮಂದಿರದಲ್ಲಿ ನಡೆಯಿತು.

    ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ನೀನಾಸಂ ಸತೀಶ್, ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಎಸ್.ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  • ಅಯೋಗ್ಯನ ಜೋಡಿಯಾದ ಬುಲ್‍ಬುಲ್ ರಚಿತಾ

    rachith ram in ayogya

    ಅಯೋಗ್ಯ - ಗ್ರಾಮ ಪಂಚಾಯಿತಿ ಸದಸ್ಯ. ಇದು ನೀನಾಸಂ ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಸತೀಶ್ ನೀನಾಸಂ ಜೊತೆ ರಚಿತಾಗೆ ಇದು ಮೊದಲ ಚಿತ್ರ.

    ಚಿತ್ರದಲ್ಲಿ ರಚಿತಾ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಗ್ರಾಜ್ಯುಯೇಟ್ ಹುಡುಗಿ ಬೇರೆ. ಯೋಗರಾಜ್ ಭಟ್‍ರ ಶಿಷ್ಯೆಸ್. ಮಹೇಶ್ ನಿರ್ದೇಶಿಸುತ್ತಿರುವ ಚಿತ್ರ, ಮಾಮೂಲಿ ಸ್ಟೈಲ್ ಚಿತ್ರಗಳಿಗಿಂತ ಡಿಫರೆಂಟ್ ಸಿನಿಮಾ ಎನ್ನಲಾಗ್ತಿದೆ.

    ಇತ್ತೀಚೆಗೆ ರಚಿತಾ ರಾಮ್, ದುನಿಯಾ ವಿಜಯ್ ಜೊತೆಗಿನ ಕನಕ ಮತ್ತು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಆಯ್ಕೆಯಾಗಿದ್ದರು. ನಂತರ ಭರ್ಜರಿ ಚಿತ್ರದ ಪ್ರಮೋಷನ್‍ಗೆ ತೊಂದರೆಯಾಗುತ್ತೆ ಎಂದು ಹೇಳಿ ಎರಡೂ ಚಿತ್ರಗಳಿಂದ ಹೊರಬಂದಿದ್ದರು. ಸದ್ಯಕ್ಕೆ ರಚಿತಾ ಉಪ್ಪಿರುಪ್ಪಿ ಮತ್ತು ಭರ್ಜರಿ ಚಿತ್ರಗಳನ್ನು ಹೊರತುಪಡಿಸಿ ಒಪ್ಪಿಕೊಂಡಿರುವ ಚಿತ್ರ ಇದೊಂದೇ.

     

  • ಅಯೋಗ್ಯನ ಹಾಡುಗಳಿಗೆ ಅದ್ಭುತ ರೆಸ್ಪಾನ್ಸ್

    ayogya songs get good response

    ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಒಂದು ಶುಭ ಸುದ್ದಿ. ಚಿತ್ರದ ಹಾಡುಗಳು ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿವೆ. 1 ಮಿಲಿಯನ್‍ಗೂ ಹೆಚ್ಚು ಜನ ಚಿತ್ರದ ಹಾಡುಗಳನ್ನ ಇಷ್ಟಪಟ್ಟಿದ್ದಾರೆ.

    ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಎಂಬ ವಿಜಯ್ ಪ್ರಕಾಶ್ ಹಾಡಿರುವ ಟಪ್ಪಾಂಗುಚ್ಚಿ  ಹಾಡು ಭರ್ಜರಿ ಸೌಂಡು ಮಾಡ್ತಿದೆ. ನನ್ನ ಸಿನಿಮಾದ ಹಾಡೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನನಗೆ ಹೊಸ ಅನುಭವ. ಇಂಥದ್ದೇ ಯಶಸ್ಸು ಚಿತ್ರಕ್ಕೂ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸತೀಶ್.

    ಅಷ್ಟೇ ಅಲ್ಲ, ಟಗರು ಚಿತ್ರದ ಟೈಟಲ್ ಸಾಂಗ್ ಹಾಡಿದ್ದ ಆಂಥೋನಿ, ಅಯೋಗ್ಯ ಚಿತ್ರದ ಟೈಟಲ್ ಸಾಂಗ್‍ಗೂ ಧ್ವನಿಯಾಗಿದ್ದಾರೆ. ಆ ಹಾಡು ಕೂಡಾ ಸೂಪರ್ ಹಿಟ್.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತು ನಿರ್ದೇಶಕ ಚೇತನ್ ಮಹೇಶ್ ಪ್ರೇಕ್ಷಕರ ಸ್ವಾಗತಕ್ಕೆ ಖುಷಿಯಾಗಿದ್ದಾರೆ.

  • ಅಯೋಗ್ಯನಿಗೆ ಅರ್ಜುನ್ ಜನ್ಯ ಏನ್ ಹೇಳಿದ್ರು ಗೊತ್ತಾ..?

    sathish ninasam has high hope from ayogya

    ಅಯೋಗ್ಯ.. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಸಿನಿಮಾ. ಈ ಸಿನಿಮಾದ ಹಾಡುಗಳ ಬಗ್ಗೆ ಸತೀಶ್ ಆರಂಭದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರಂತೆ. ಆಗ ಅರ್ಜುನ್ ಜನ್ಯಾ ``ಸತೀಶ್, ನೀವು ಆರಾಮವಾಗಿರಿ, ತಲೆ ಕೆಡಿಸಿಕೊಳ್ಳಬೇಡಿ. ಹಾಯಾಗಿ ನಿದ್ದೆ ಮಾಡಿ'' ಎಂದಿದ್ದರಂತೆ. ಅವರು ಅಷ್ಟು ಕಾನ್ಫಿಡೆನ್ಸ್ ಆಗಿ ಹೇಳಿದ್ದು ಹೇಗೆ ಅನ್ನೋದು  ಗೊತ್ತಾಗಿದ್ದು ಹಾಡುಗಳು ಹೊರಬಂದ ಮೇಲೆ. ಏಕೆಂದರೆ, ಅಯೋಗ್ಯ ಚಿತ್ರದ ಹಾಡುಗಳೆಲ್ಲ ದಾಖಲೆ ಬರೆಯುತ್ತಿವೆ.

    ಏನಮ್ಮಿ ಏನಮ್ಮಿ ಹಾಡು.. ಡಬ್‍ಸ್ಮಾಶ್‍ನಲ್ಲೂ ದಾಖಲೆ ಬರೆದಿದೆ. ಹಿಂದೆ ಹಿಂದೆ ಹೋಗು ಹಾಡು ಕೂಡಾ ಸೂಪರ್ ಡ್ಯೂಪರ್ ಹಿಟ್. ಟಾಪ್ 10 ಹಾಡುಗಳ ಲಿಸ್ಟ್‍ನಲ್ಲಿ ಅಯೋಗ್ಯನ ಹಾಡುಗಳು ಖಾಯಂ ಆಗಿವೆ.

    ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಬೇರ್ಯಾವ ಚಿತ್ರದ ಮೇಲೂ ನಾನು ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಾಡು ಹಿಟ್ ಆಗಿರೋದು ನೋಡಿದ್ರೆ, ಈ ಸಿನಿಮಾ ಪವಾಡ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಅಂತಾರೆ ಸತೀಶ್.

    ಚಮಕ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡುವಾಗ ತಮಗೆ ತಾವೇ ಕನೆಕ್ಟ್ ಆಗುತ್ತಾರೆ ಅನ್ನೋದು ಸತೀಶ್ ವಿಶ್ವಾಸ.

  • ಅರಬ್, ಕತಾರ್‌ನಲ್ಲಿ ಆಯುಷ್ಮಾನ್ ಭವ

    ayushmanbhava to release in arab countries

    ಶಿವಣ್ಣ, ದ್ವಾರಕೀಶ್, ಪಿ.ವಾಸು, ರಚಿತಾ ರಾಮ್ ಕಾಂಬಿನೇಷನ್ನಿನ ಆಯುಷ್ಮಾನ್ ಭವ ಅರಬ್ ರಾಷ್ಟçಗಳಲ್ಲೂ ಸದ್ದು ಮಾಡ್ತಿದೆ. ದುಬೈ, ಅಬುದಾಭಿ, ಕತಾರ್‌ನಲ್ಲೂ ರಿಲೀಸ್ ಆಗಿರುವ ಆಯುಷ್ಮಾನ್ ಭವ, ಪ್ರೇಕ್ಷಕರ ಮನಸ್ಸು ಗೆದ್ದಿದೆ.

    ಬುದ್ದಿಮಾಂದ್ಯ ಯುವತಿಯಾಗಿ ರಚಿತಾ ರಾಮ್, ಆಕೆಯನ್ನು ಸರಿಪಡಿಸುವ ಡಾಕ್ಟರ್ ಆಗಿ ಶಿವಣ್ಣ ಅಭಿನಯ ಈಗಾಗಲೇ ಮೋಡಿ ಮಾಡಿದೆ. ಅನಂತ್ ನಾಗ್, ಸುಹಾಸಿನಿ ಜೋಡಿ ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರೆ, ಗುರುಕಿರಣ್ ಸಂಗೀತ ಚಿತ್ರದ ಜೀವಾಳ. ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವೊಂದು ಮತ್ತೊಮ್ಮೆ ಯಶಸ್ಸಿನ ಹಾದಿಯಲ್ಲಿದೆ.

     

  • ಅರೆರೆ..ಬುಲ್ ಬುಲ್ 7 ವರ್ಷ ಆಗ್ ಹೋಯ್ತಾ..?

    Darshan, Rachita Ram in Bul Bul Movie

    ರಚಿತಾ ರಾಮ್ ಚಿತ್ರರಂಗಕ್ಕೆ 7 ವರ್ಷಗಳಾಗಿ ಹೋಯ್ತಾ..? ಹೌದು, ಸ್ವತಃ ಅವರಿಗೂ ಅಚ್ಚರಿಯೇ. ಕನ್ನಡದಲ್ಲಿ ರಚಿತಾ ರಾಮ್ ಒಂಥರಾ ಲಕ್ಕಿ ಹೀರೋಯಿನ್. ಅವರು ನಟಿಸಿದ್ದ ಚಿತ್ರಗಳು ಸೋತಿದ್ದೇ ಕಡಿಮೆ.

    Bul Bul Movie Review

    ಬುಲ್ ಬುಲ್ ಮೂಲಕ ತೆರೆಗೆ ಬಂದ ರಚಿತಾ ರಾಮ್ ಇದುವರೆಗೆ ನಟಿಸಿದ್ದ ಚಿತ್ರಗಳ ಒಟ್ಟು ಸಂಖ್ಯೆ 20. ದರ್ಶನ್, ಶಿವರಾಜ್‍ಕುಮಾರ್, ಪುನೀತ್, ಸುದೀಪ್, ಗಣೇಶ್, ಧ್ರುವ ಸರ್ಜಾ, ಶ್ರೀಮುರಳಿ,  ಉಪೇಂದ್ರ, ರಮೇಶ್ ಅರವಿಂದ್, ನಿಖಿಲ್, ದುನಿಯಾ ವಿಜಯ್, ನೀನಾಸಂ ಸತೀಶ್ ಜೊತೆ ನಟಿಸಿದ್ದಾರೆ. ಏಕ್ ಲವ್ ಯಾ, ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ. ಮುಂದಿನ ಭರ್ಜರಿ ನಿರೀಕ್ಷೆಯಲ್ಲಿದೆ.

    ಅರೆ.. ನಾನು ಬಂದು 7 ವರ್ಷವಾಗಿ ಹೋಯ್ತಾ ಎಂದು ನೆನಪಿಸಿಕೊಂಡಿರುವ ರಚಿತಾ ರಾಮ್, ತಮಗೆ ಅವಕಾಶ ನೀಡಿದ ತೂಗುದೀಪ ಪ್ರೊಡಕ್ಷನ್ಸ್‍ಗೆ ಧನ್ಯವಾದ ಅರ್ಪಿಸಿದ್ದಾರೆ.

     

  • ಅರೆರೇ.. ರಚಿತಾ.. ಏನಿದು ಧೂಮಲೀಲೆ..?

    why is rachita ram smoking

    ರಚಿತಾ ರಾಮ್ ಅವರ ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿರುವುದಂತೂ ಸತ್ಯ. ರಚಿತಾ ರಾಮ್ ಹೋಮ್ಲಿ ಗರ್ಲ್. ಗ್ಲಾಮರಸ್ ಆಗಿ ನಟಿಸಿದ್ದರೂ.. ಅಲ್ಲೊಂದು ಬೌಂಡರಿ ಹಾಕಿಕೊಂಡೇ ಇರುವ ರಚಿತಾ, ಅದನ್ನು ಸ್ವಲ್ಪ ಮೀರಿ ಹೋಗಿದ್ದು ಐ ಲವ್ ಯೂ ಚಿತ್ರದಲ್ಲಿ. ಇನ್ನೊಮ್ಮೆ ಅಂತಾ ಪಾತ್ರ ಮಾಡಲ್ಲ ಎಂದಿದ್ದ ರಚಿತಾ, ಈಗ ಸಿಗರೇಟು ಹೊಗೆ ಬಿಡುತ್ತಿರುವ ಫೋಟೋ ರಿವೀಲ್ ಆಗಿ ವೈರಲ್ ಆಗಿದೆ.

    ಅಂದಹಾಗೆ ಇದು ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಸ್ಟಿಲ್ ಅಂತೆ. ಇದು ಹೇಗೆ ಲೀಕ್ ಆಯ್ತೋ ಗೊತ್ತಿಲ್ಲ ಎಂದಿರುವ ಪ್ರೇಮ್, ರಚಿತಾ ರಾಮ್ ಪಾತ್ರದ ಕುತೂಹಲವನ್ನೂ ಹೆಚ್ಚಿಸಿದ್ದಾರೆ.

    ಚಿತ್ರದಲ್ಲಿ ರಚಿತಾ ರಾಮ್, ಸಿಗರೇಟು ಸೇದುವ ದೃಶ್ಯವಿದೆ. ಅಷ್ಟೇ ಅಲ್ಲ.. ಇನ್ನೂ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ ರಚಿತಾ ಎನ್ನುವ ಪ್ರೇಮ್ ಅಚ್ಚರಿ ಹುಟ್ಟಿಸಿದ್ದಾರೆ. ರಕ್ಷಿತಾ ಪ್ರೇಮ್ ಸೋದರ ರಾಣಾ ನಟಿಸುತ್ತಿರುವ ಚಿತ್ರವಿದು.

  • ಆ 3 ಕಾರಣ ಸಾಕಿತ್ತು.. ರಚಿತಾ ಓಕೆ ಎನ್ನೋಕೆ..!

    main reason why rachita accepted natasarvabhouma

    ರಚಿತಾ ರಾಮ್, ಈಗ ಡಿಂಪಲ್ ಸ್ಟಾರ್. ಬೆನ್ನು ಬೆನ್ನಿಗೇ ಅವರ ಚಿತ್ರಗಳು ರಿಲೀಸ್ ಆಗುತ್ತಿವೆ. ಸೀತಾರಾಮ ಕಲ್ಯಾಣ, ಚಿತ್ರಮಂದಿರಗಳಲ್ಲಿ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ನಟಸಾರ್ವಭೌಮ ರಿಲೀಸ್ ಆಗುತ್ತಿದೆ. ನಟಸಾರ್ವಭೌಮ ಚಿತ್ರದ ಮೊದಲ ಆಯ್ಕೆ ರಚಿತಾ ಆಗಿರಲಿಲ್ಲ. ಆದರೂ.. ಅವರು ಪಾತ್ರದ ಆಫರ್ ಬಂದ ಕೂಡಲೇ ಓಕೆ ಎಂದಿದ್ದೇಕೆ ಗೊತ್ತಾ..?

    ಕಾರಣ ನಂ.1 - ಪುನೀತ್ ರಾಜ್ ಕುಮಾರ್

    ಪುನೀತ್ ಜೊತೆ ಅದಾಗಲೇ ಚಕ್ರವ್ಯೂಹ ಚಿತ್ರದಲ್ಲಿ ಅಭಿನಯಿಸಿದ್ದ ರಚಿತಾ ರಾಮ್, ಸಿಗುತ್ತಿರುವ 2ನೇ ಅವಕಾಶವನ್ನೂ ಬಿಡೋಕೆ ತಯಾರಿರಲಿಲ್ಲ. ಪುನೀತ್ ಹೀರೋ ಎಂದ ಕೂಡಲೇ ಓಕೆ ಎಂದರು.

    ಕಾರಣ ನಂ. 2 - ಪವನ್ ಒಡೆಯರ್ 

    ಪವನ್ ಒಡೆಯರ್ ಅವರ ಸಿನಿಮಾಗಳ ಬಗ್ಗೆ ಕೇಳಿದ್ದೆ. ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಅವಕಾಶ ಸಿಕ್ಕಾಗ ಬಿಡಬೇಕು ಎನ್ನಿಸಲಿಲ್ಲ.

    ಕಾರಣ ನಂ.3 - ರಾಕ್‍ಲೈನ್ ವೆಂಕಟೇಶ್

    ಕನ್ನಡದ ಅತಿದೊಡ್ಡ ನಿರ್ಮಾಪಕರು ಅವರು. ಅವರ ಬ್ಯಾನರ್‍ನಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳೋಕೆ ಸಾಧ್ಯವೇ ಇರಲಿಲ್ಲ. ಅವರು ಕೇಳಿದ ಕೂಡಲೇ, ಯೆಸ್ ಎಂದುಬಿಟ್ಟೆ.

    ಅದಕ್ಕೆ ತಕ್ಕಂತೆ, ಕಥೆ, ಪಾತ್ರ ಎಲ್ಲವೂ ಅದ್ಭುತವಾಗಿದೆ ಎನ್ನುತ್ತಾರೆ ರಚಿತಾ ರಾಮ್.

  • ಆಗಲ್ಲ ಎಂದಿದ್ದವರು ಮತ್ತೆ ಬಂದಿದ್ದು ಹೇಗೆ..?

    rachitha ram in johnny johnny yes papa

    ಜಾನಿ ಜಾನಿ ಯೆಸ್ ಪಪ್ಪಾ.. ಚಿತ್ರದ ಶೂಟಿಂಗ್ ಶುರುವಾಗಿಬಿಟ್ಟಿದೆ. ಹೊಸ ಪದ್ಮಾವತಿ ಹಾಡಿನ ಶೂಟಿಂಗ್ ನಡೆಯುತ್ತಿದೆ. ಹೊಸ ಪದ್ಮಾವತಿ ಹಾಡಿನಲ್ಲಿ ದುನಿಯಾ ವಿಜಿ ಜೊತೆ ಹೆಜ್ಜೆ ಹಾಕಿರುವುದು ರಚಿತಾ ರಾಮ್.

    ಆದರೆ ಕುತೂಹಲ ಅದಲ್ಲ. ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದವರು ರಚಿತಾ ರಾಮ್. ಆದರೆ, ಈ ಗುಳಿಗೆನ್ನೆ ಹುಡುಗಿ ಡೇಟ್ಸ್ ಸಮಸ್ಯೆ ಎಂದು ಹೇಳಿ ಚಿತ್ರದಿಂದ ಹಿಂದೆ ಸರಿದಿದ್ದರು. ಆ ನಂತರ ಆ ಜಾಗಕ್ಕೆ ಶ್ರದ್ಧಾ ಶ್ರೀನಾಥ್ ಬಂದಿದ್ದರು. ಶ್ರದ್ಧಾ ಹೀರೋಯಿನ್ ಎಂಬುದೂ ದೊಡ್ಡ ಸುದ್ದಿಯಾಗಿತ್ತು. ಆದರೆ, ಶೂಟಿಂಗ್ ಶುರುವಾಗುವ ವೇಳೆ ಶ್ರದ್ಧಾ ಹೋಗಿ ಮತ್ತೆ ರಚಿತಾ ಬಂದಿದ್ದಾರೆ.

    ಏನ್ ಕಥೆ ಅಂದ್ರೆ, ಗೊತ್ತಾಗಿರೋದು ಮತ್ತದೇ ಡೇಟ್ ಸಮಸ್ಯೆ. ಈಗ ಶ್ರದ್ಧಾಗೆ ಡೇಟ್ ಸಮಸ್ಯೆಯಂತೆ. ರಚಿತಾ ಅವರ ಡೇಟ್ಸ್ ಕ್ಲಿಯರ್ ಆಗಿದೆಯಂತೆ. ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರ ಆರಂಭದಲ್ಲೇ ಇಷ್ಟೆಲ್ಲ ಸದ್ದು ಸುದ್ದಿ ಮಾಡಿದೆ.

    Related Articles :-

    Rachita Ram Is The Heroine For Johnny Johnny Yes Papa

    Rachita Ram For Johnny Johnny Yes Papa

    Duniya Vijay And Preetham Gubbi Back With Johnny Johnny Yes Papa

  • ಆಗಸ್ಟ್ 19ಕ್ಕೆ ಮಾನ್ಸೂನ್ ರಾಗ : ತುಳು ಹಾಡು ಹೇಗಿದೆ ನೋಡಿದ್ರಾ?

    ಆಗಸ್ಟ್ 19ಕ್ಕೆ ಮಾನ್ಸೂನ್ ರಾಗ : ತುಳು ಹಾಡು ಹೇಗಿದೆ ನೋಡಿದ್ರಾ?

    ತುಳು, ಪರಭಾಷೆಯೇನಲ್ಲ. ಕನ್ನಡದ್ದೇ ಉಪಭಾಷೆ. ಕರಾವಳಿಯಲ್ಲಿ ಆ ಭಾಷೆಯ ಸೊಗಡು ಕೇಳುವುದೇ ಚೆಂದ. ಈಗ ಮಾನ್ಸೂನ್ ರಾಗ ಚಿತ್ರದಲ್ಲಿ ತುಳುವಿನಲ್ಲೇ ಒಂದು ಹಾಡು ಸಿದ್ಧವಾಗಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಮಾನ್ಸೂನ್ ರಾಗ ಚಿತ್ರದಲ್ಲಿನ ರಾಗ ಸುಧಾ ಇಂಟ್ರೊ ಸೀನ್‍ನ ಹಾಡು ಇರೋದು ತುಳುವಿನಲ್ಲಿ. ಹಾಡಿಗೆ ಹೆಜ್ಜೆ ಹಾಕಿರೋದು ತುಳು ಚಿತ್ರರಂಗದ ಸೆನ್ಸೇಷನ್ ಯಶಾ ಶಿವಕುಮಾರ್.

    ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಹಾಡಿಗೆ ಸಾಹಿತ್ಯ ಒದಗಿಸಿರೋದು ಗಣೇಶ್ ಉಪಾಧ್ಯ. ಎ.ಆರ್.ವಿಖ್ಯಾತ್ ನಿರ್ಮಾಪಕರಾಗಿದ್ದು ಎಸ್.ಎ.ರವೀಂದ್ರನಾಥ್ ನಿರ್ದೇಶನವಿದೆ. ಮಾನ್ಸೂನ್ ರಾಗ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ.

    ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರೋ ಚಿತ್ರದಲ್ಲಿ ಸುಹಾಸಿನಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.