` 45, - chitraloka.com | Kannada Movie News, Reviews | Image

45,

  • ಅರ್ಧ ಕೋಣ.. ಅರ್ಧ ಹಸು : ಅರ್ಜುನ್ ಜನ್ಯಾ 45ಕ್ಕೆ ಮುಹೂರ್ತ

    ಅರ್ಧ ಕೋಣ.. ಅರ್ಧ ಹಸು : ಅರ್ಜುನ್ ಜನ್ಯಾ 45ಕ್ಕೆ ಮುಹೂರ್ತ

    ಇದೊಂದು ಫಿಲಾಸಫಿಕಲ್ ಚಿತ್ರವಂತೆ. ಅರ್ಧ ಕೋಣ.. ಇನ್ನರ್ಧ ಹಸು ಇರುವ ಪೋಸ್ಟರ್ ಹೊರಬಿಟ್ಟಿದ್ದಾರೆ ಅರ್ಜುನ್ ಜನ್ಯ. ಕೋಣ ಎಂದರೆ ನೆನಪಾಗುವುದು ಯಮ. ಹಸು ಎಂದರೆ ಈಶ್ವರ. ಇಬ್ಬರೂ ಒಟ್ಟಿಗೇ ನೆನಪಾದರೆ ಕಣ್ಮುಂದೆ ಬರುವುದು ಮಾರ್ಕಂಡೇಯ ಪುರಾಣ. ಹೀಗೆಲ್ಲ ನೆನಪು ಮಾಡುತ್ತಿರುವ ಚಿತ್ರ 45. ಕೆಲವು ತಿಂಗಳ ಹಿಂದೆಯೇ ಘೋಷಿಸಿದ್ದ 45 ಚಿತ್ರಕ್ಕೆ ಈಗ ಮುಹೂರ್ತವೂ ಆಗಿದೆ.  

    ಚಿತ್ರ ಸೆಟ್ಟೇರಿರುವುದು ಈಗಲೇ. ಆದರೆ ನಾವು ಈಗಾಗಲೇ ಚಿತ್ರವನ್ನು ನೋಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿ, ಹೀರೋಗಳಾದ ಶಿವಣ್ಣ, ರಾಜ್ ಬಿ.ಶೆಟ್ಟಿ.

    ನಮಗೆ ಚಿತ್ರದ ಕಥೆ ಹೇಳಿ ಆಗಿತ್ತು. ಕಥೆ ಚೆನ್ನಾಗಿತ್ತು. ಓಕೆ ಎಂದ ಮೇಲೂ ಚಿತ್ರ ಮೂವ್ ಆಗುತ್ತಿರಲಿಲ್ಲ. ತಿಂಗಳುಗಳಾದ ಮೇಲೆ ಅರ್ಜುನ್ ಜನ್ಯ ಅವರನ್ನು ಕೇಳಿದರೆ ಅವರು ಆಗಲೇ ಚಿತ್ರವನ್ನು ತೋರಿಸಿದ್ದರು ಆನಿಮೇಷನ್ನಿನಲ್ಲಿ ತೋರಿಸಿದರು. ಅರ್ಜುನ್ ಜನ್ಯ ಅವರ ಮೇಲೆ ಇನ್ನಷ್ಟು ನಂಬಿಕೆ ಬಂತು ಎನ್ನುತ್ತಾರೆ ರಮೇಶ್ ರೆಡ್ಡಿ. ಸ್ವತಃ ನಿರ್ದೇಶಕರೂ ಆಗಿರುವ ರಾಜ್ ಬಿ.ಶೆಟ್ಟಿಗೆ ಜನ್ಯ ಅವರ ತಯಾರಿ ಭರವಸೆ ಹುಟ್ಟಿಸಿದೆ. ರಾಜ್ ಬಿ.ಶೆಟ್ಟಿಯವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿರುವುದು ಕೌಸ್ತುಭ ಮಣಿ.

    ಇನ್ನು ಶಿವರಾಜ್ ಕುಮಾರ್ ಅವರಿಗಂತೂ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ನೋಡಿಯೇ ಉತ್ಸಾಹ ಮೂಡಿದೆ. ನೋಡ್ತಾ ಇರಿ, ಈ ಚಿತ್ರ ರಿಲೀಸ್ ಆದ್ಮೇಲೆ ಅರ್ಜುನ್ ಜನ್ಯ, ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ ಎನ್ನುತ್ತಾರೆ ಶಿವಣ್ಣ.

    ‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

  • ಶಿವಣ್ಣ-ಉಪ್ಪಿ-ಅರ್ಜುನ್ ಜನ್ಯ ಚಿತ್ರಕ್ಕೆ ಕೌಸ್ತುಭ ಹೀರೋಯಿನ್

    ಶಿವಣ್ಣ-ಉಪ್ಪಿ-ಅರ್ಜುನ್ ಜನ್ಯ ಚಿತ್ರಕ್ಕೆ ಕೌಸ್ತುಭ ಹೀರೋಯಿನ್

    ಅರ್ಜುನ್ ಜನ್ಯ ಜೊತೆಗೂಡಿ ಶಿವಣ್ಣ 45 ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಹಾಗೂ ಉಪೇಂದ್ರ ಜೋಡಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜೊತೆ ರಾಜ್ ಬಿ.ಶೆಟ್ಟಿ ಕೂಡಾ ಇದ್ದಾರೆ. ಒಂದೆಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಈ ಚಿತ್ರಕ್ಕೂ ಟೈಂ ಕೊಟ್ಟಿದ್ದಾರೆ. ಚಿತ್ರಕ್ಕೀಗ ಹೀರೋಯಿನ್ ಆಯ್ಕೆಯಾಗಿದೆ.

    ಕೌಸ್ತುಭ ಮಣಿ ಈ ಚಿತ್ರಕ್ಕೆ ನಾಯಕಿ. ನನ್ನರಸಿ ರಾಧೆ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ಹುಡುಗಿ ಕೌಸ್ತುಭ ಮಣಿ. ಕೌಸ್ತುಭ, ರಾಜ್ ಬಿ.ಶೆಟ್ಟಿಯವರಿಗೆ ನಾಯಕಿಯಂತೆ.

    ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ  'ರಾಮಾಚಾರಿ 2.0'  ಚಿತ್ರದಲ್ಲೂ ಕೌಸ್ತುಭ ನಟಿಸಿದ್ದಾರೆ. ನಟಿಯಾಗಿ, ನಾನು ಹೊಸ ಉದ್ಯಮಗಳನ್ನು ಅನ್ವೇಷಿಸಲು ಮತ್ತು ಅನುಭವಿಸಲು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗಲಿದೆ. ನಟಿಯಾಗಬೇಕು ಎಂಬ ಕನಸೇ ಕಂಡಿರದ ಕೌಸ್ತುಭ, ನಟಿಯಾಗಿದ್ದು ಮಾತ್ರ ವಿಶೇಷ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು.

    ಕೌಸ್ತುಭ ಮಣಿ ಬಣ್ಣದ ಲೋಕಕ್ಕೆ ಬರುವುದಕ್ಕೆ ಕಾರಣ ಮಾನ್ವಿತಾ ಕಾಮತ್ ಅಂತೆ. ಫ್ಯಾಷನ್ ಶೋವೊಂದರಲ್ಲಿ ಮಾನ್ವಿತಾ ಅವರನ್ನು ಭೇಟಿ ಮಾಡಿದ್ದರಂತೆ. ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಕೌಸ್ತುಭ ಅವರನ್ನು ಮಾನ್ವಿತಾ ಅವರು ಸೀರಿಯಲ್ ತಂಡವೊಂದಕ್ಕೆ ಪರಿಚಯ ಮಾಡಿಸಿಕೊಟ್ಟರಂತೆ. ಅಲ್ಲಿಂದ ನನ್ನರಸಿ ರಾಧೆಯ ಬಣ್ಣದ ಲೋಕದ ಜರ್ನಿ ಶುರುವಾಯ್ತು. ಇದೀಗ ಶಿವಣ್ನ-ಉಪ್ಪಿ-ರಾಜ್ ಬಿ.ಶೆಟ್ಟಿ ನಟಿಸುತ್ತಿರುವ ಮಲ್ಟಿಸ್ಟಾರ್ ಚಿತ್ರಕ್ಕೆ ಹೀರೋಯಿನ್ ಆಗಿದ್ದಾರೆ. ಅಂದಹಾಗೆ ಚಿತ್ರದಲಿ ಶಿವಣ್ಣ ಹಾಗೂ ಉಪೇಂದ್ರ ಅವರಿಗೆ ನಾಯಕಿಯರು ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ.