` leader ramaiah, - chitraloka.com | Kannada Movie News, Reviews | Image

leader ramaiah,

  • ಜೂ.ಸಿದ್ದರಾಮಯ್ಯ ಆಗ್ತಾರಾ ನಿರೂಪ್ ಭಂಡಾರಿ?

    ಜೂ.ಸಿದ್ದರಾಮಯ್ಯ ಆಗ್ತಾರಾ ನಿರೂಪ್ ಭಂಡಾರಿ?

    ಸಿ.ಎಂ ಸಿದ್ಧರಾಮಯ್ಯ ಬಯೋಪಿಕ್ಗೆ ಕಿಕ್ಸ್ಟಾರ್ಟ್ ಸಿಕ್ಕಿದ್ದು, ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ಗೆ ‘ಲೀಡರ್ ರಾಮಯ್ಯ’ ಎಂದು ಟೈಟಲ್ ಇಡಲಾಗಿದೆ. ಸಿದ್ಧರಾಮಯ್ಯ ರೋಲ್ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಯಂಗ್ ಅಂದ್ರೆ ಯುವಕ ಸಿದ್ದು ಪಾತ್ರಧಾರಿಯಾಗಿ ಯಾರಿರ್ತಾರೆ ಎಂಬ ಪ್ರಶ್ನೆಗೆ ನಿರೂಪ್ ಭಂಡಾರಿ ಹೆಸರು ಕೇಳಿ ಬಂದಿದೆ.

    ಯೌವನದ ಪಾತ್ರದಲ್ಲಿ ನಿರೂಪ್, ಸಿದ್ದರಾಮಯ್ಯ ಲಾಯರ್ ಆಗಿದ್ದ ದಿನಗಳ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದರೆ, ಎರಡನೇ ಭಾಗದಲ್ಲಿ ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ.

    ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ, ನಿರೂಪ್ ಭಂಡಾರಿ ಅವರನ್ನು ಯುವ ಸಿದ್ದು ಪಾತ್ರಕ್ಕೆ ಕಾಂಟ್ಯಾಕ್ಟ್ ಮಾಡಲಾಗಿದೆಯಂತೆ. ಇನ್ನೂ ಇಬ್ಬರು ನಟರ ಹೆಸರು ಚಾಲ್ತಿಯಲ್ಲಿದ್ದು, ಚಿತ್ರತಂಡ ಅವರ ಹೆಸರನ್ನು ಖಚಿತ ಪಡಿಸಿಲ್ಲ. ಕ್ಷೇತ್ರಪತಿ ನವೀನ್ ಶಂಕರ್ ಹೆಸರೂ ಕೇಳಿ ಬರ್ತಿದೆ. ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ಚಿತ್ರತಂಡ ತಮಿಳು ನಟ ವಿಜಯ್ ಸೇತುಪತಿ ಕಾಲ್ ಶೀಟ್ಗಾಗಿ ಕಾಯುತ್ತಿದೆ ಎನ್ನಲಾಗಿದೆ.

    ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೈ ಬಜೆಟ್ನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

  • ಲೀಡರ್ ರಾಮಯ್ಯ ಚಿತ್ರಕ್ಕೆ ಭರ್ಜರಿ ಸಿದ್ಧತೆ

    ಲೀಡರ್ ರಾಮಯ್ಯ ಚಿತ್ರಕ್ಕೆ ಭರ್ಜರಿ ಸಿದ್ಧತೆ

    ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ ಲೀಡರ್ ರಾಮಯ್ಯಗೆ ಕಳೆದ 7-8 ತಿಂಗಳಿನಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸತ್ಯ ರತ್ನಂ  ಡೈರೆಕ್ಟರ್ ಆಗಿದ್ದು, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಸಿನಿಮಾ ಮಾಡುವ ಸಿದ್ಧತೆ ನಡೆಯುತ್ತಿದೆ. ಎರಡು ಭಾಗಗಳಲ್ಲಿ ಸಿನಿಮಾ ಬರಲಿದ್ದು, ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಪ್ಟ್ ಕೇಳಿ ಓಕೆ ಎಂದಿರುವ ವಿಜಯ್ ಸೇತುಪತಿ, ಸದ್ಯ ಸಖತ್ ಬ್ಯುಸಿ ಇದ್ದಾರೆ. ಹಾಗಾಗಿ, ಅವರ ಡೇಟ್ಸ್ ಇನ್ನೂ ಫೈನಲ್ ಆಗಿಲ್ಲ ಎನ್ನಲಾಗಿದೆ. ಹಾಗಾಗಿ, ಅವರ ಡೇಟ್ಸ್ಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಮಾಡಲು ನಿರ್ಮಾಪಕರು ರೆಡಿ ಇದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ.

    ಪಾರ್ಟ್ 1ರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯ ಮತ್ತು ಯೌವ್ವನದ ದಿನಗಳವರೆಗೆ ತೋರಿಸಲಾಗುತ್ತದೆ. ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ಲಾಯರ್ ಆಗಿ ಕೆಲಸ ಮಾಡುತ್ತಿದ್ದ ವಿವರಗಳೆಲ್ಲ ಮೊದಲ ಭಾಗದಲ್ಲಿ ಬರಲಿವೆ. ಆ ಪಾತ್ರವನ್ನು ಯಾರು ಮಾಡಬಹುದು ಎಂಬುದು ಫೈನಲ್ ಆಗಿಲ್ಲ.

    ಹಿರಿಯ ರಾಮಯ್ಯ ಪಾತ್ರಕ್ಕೆ ಅಂದರೆ ಲಾಯರ್ ಸೇರಿದಂತೆ ನಂತರದ ಕಥೆಗೆ ವಿಜಯ್ ಸೇತುಪತಿ ಎಂಟ್ರಿಯಾಗಲಿದೆ. ಹಯತ್ ಪೀರ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣ ಮಾಡಲಿರುವ ಲೀಡರ್ ರಾಮಯ್ಯ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.

  • ಲೀಡರ್ ರಾಮಯ್ಯ ಸಿನಿಮಾದಲ್ಲಿ ಏನೇನೆಲ್ಲ ಇರುತ್ತೆ..?

    ಲೀಡರ್ ರಾಮಯ್ಯ ಸಿನಿಮಾದಲ್ಲಿ ಏನೇನೆಲ್ಲ ಇರುತ್ತೆ..?

    ಸಿದ್ದರಾಮಯ್ಯ, ರಾಜ್ಯದ ಕಲರ್`ಫುಲ್ ವ್ಯಕ್ತಿತ್ವದ ನಾಯಕ. ಸಿದ್ದು ಮಾತುಗಾರಿಕೆ, ಬಾಡಿ ಲಾಂಗ್ವೇಜ್ ವಿಶೇಷವಾಗಿರುತ್ತೆ. ಇದರ ಜೊತೆಗೆ ಎರಡು ಪಕ್ಷಗಳಲ್ಲಿ ದೊಡ್ಡ ಸ್ಥಾನಕ್ಕೆ ಏರಿದ ನಾಯಕನಾಗಿ, ಜನತಾ ಪರಿವಾರದಿಂದ ಶಾಸಕ, ಸಚಿವ, ಉಪಮುಖ್ಯಮಂತ್ರಿ, ಜೆಡಿಎಸ್‍ನಲ್ಲಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕ, ಸಿಎಂ ಆಗಿರುವ ಸಿದ್ದರಾಮಯ್ಯ ಅವರ ಜರ್ನಿ ರೋಚಕ. ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಮೇಲೆ ಬರಲಿದೆ ಎಂಬ ವಿಚಾರ ಈಚೆಗಷ್ಟೇ ಭಾರಿ ಸುದ್ದಿ ಮಾಡಿತ್ತು. ಇದೀಗ ಸಿದ್ದರಾಮಯ್ಯ ಬಯೋಪಿಕ್ ಬಗ್ಗೆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಸಿದ್ದರಾಮಯ್ಯ ಅವರ ಬಯೋಪಿಕ್ಗೆ 'ಲೀಡರ್ ರಾಮಯ್ಯ' ಟೈಟಲ್ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗಲಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

    ಶ್ರೀರಾಮ ನವಮಿ ಪ್ರಯುಕ್ತ ಸಿದ್ದರಾಮಯ್ಯ ಬಯೋಪಿಕ್ನ ಫಸ್ಟ್ ಲುಕ್ ಮತ್ತು ಟೈಟಲ್ ಘೋಷಣೆ ಮಾಡಲಾಗಿದೆ. ಸತ್ಯ ರತ್ನಂ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈಗ ಭಾಗ ಒಂದು ಎಂದು ಸಿನಿಮಾ ಆರಂಭಿಸಿದ್ದೇವೆ. ಅದರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು ಕಾಲೇಜು, ಲಾಯರ್ ಆಗಿದ್ದ ದಿನಗಳು, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ರಾಜಕೀಯಕ್ಕೆ ಅವರು ಬಂದಿದ್ದು ಹೇಗೆ ಎಂಬುದರ ಕುರಿತಾಗಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಸತ್ಯರತ್ನಂ.

    ಅಂದಹಾಗೆ ಪಾರ್ಟ್ 01ನಲ್ಲಿ ವಿಜಯ್ ಸೇತುಪತಿ ಇರಲ್ಲ. ಭಾಗ-01ರಲ್ಲಿ ಯಂಗ್ ಆಗಿರುವ ನಟ ಬೇಕು. ಹೀಗಾಗಿ ಕನ್ನಡದ ಒಬ್ಬ ಯುವನಟ ಆ ಪಾತ್ರ ಮಾಡುತ್ತಾರೆ. ಎರಡನೇ ಭಾಗಕ್ಕೆ ಸೇತುಪತಿ ಬರಲಿದ್ದಾರೆ ಎಂದು ಹೇಳಿದ್ದಾರೆ ಡೈರೆಕ್ಟರ್ ಸತ್ಯರತ್ನಂ.

    ಅಂದಹಾಗೆ ಸಿದ್ದರಾಮಯ್ಯ ಅವರಿನ್ನೂ ಚಿತ್ರದ ಫಸ್ಟ್ ಲುಕ್, ಟೈಟಲ್ ಕಾರ್ಡ್ ನೋಡಿಲ್ಲವಂತೆ. ಆಕ್ಷನ್, ಲವ್, ತಂದೆ-ಮಗನ ಸೆಂಟಿಮೆಂಟ್ ಕೂಡಾ ಚಿತ್ರದಲ್ಲಿದೆಯಂತೆ.. ಸಿನಿಮಾ ರಿಲೀಸ್ ಆಗುವುದು ಅಕ್ಟೋಬರ್ 3ರಂದು ಸಿದ್ದರಾಮಯ್ಯ ಹುಟ್ಟುಹಬ್ಬದ ದಿನ.