` toby - chitraloka.com | Kannada Movie News, Reviews | Image

toby

  • ಅಪ್ಪು ಇಷ್ಟಪಟ್ಟಿದ್ದರು.. ತಮನ್ನಾ ಡಿಸ್ಟರ್ಬ್ ಆಗಿದ್ದರು.. : ಟೋಬಿ ಕಥೆ ಹೇಳಿದ ಕಥೆಗಾರ..

    ಅಪ್ಪು ಇಷ್ಟಪಟ್ಟಿದ್ದರು.. ತಮನ್ನಾ ಡಿಸ್ಟರ್ಬ್ ಆಗಿದ್ದರು.. : ಟೋಬಿ ಕಥೆ ಹೇಳಿದ ಕಥೆಗಾರ..

    ರಾಜ್ ಬಿ.ಶೆಟ್ಟಿ ಟೋಬಿಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಬೊಂಬಾಟ್ ಆಗಿ ಹಿಟ್ ಆದ ಬೆನ್ನಲ್ಲೇ ಟೋಬಿಯ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಟೋಬಿ ಚಿತ್ರಕ್ಕೆ ಕಥೆ ಬರೆದಿರೋದು ಟಿಕೆ ದಯಾನಂದ್. ಬೆಲ್ ಬಾಟಂ ಖ್ಯಾತಿಯ ಟಿಕೆ ದಯಾನಂದ್. ಟೋಬಿ ಕಥೆಯನ್ನು ಮೊದಲು ಅಪ್ಪುಗೆ ಹೇಳಿದ್ದರಂತೆ. ಅಶ್ವಿನಿಯವರೂ ಇದ್ದರಂತೆ. ಗ್ರಾಮಾಯಣ ಡೈರೆಕ್ಟರ್ ದೇವನೂರು ಚಂದ್ರು ಅವರ ಜೊತೆ ಅಪ್ಪು ಅವರ ಆಫೀಸಿಗೆ ಹೋಗಿದ್ದೆ.

    ಸುಮಾರು ಎರಡೂವರೆ ಗಂಟೆ ಇಡೀ ಕಥೆಯನ್ನು ಕೇಳಿದ ಅಪ್ಪು ಸರ್, ಎಮೋಷನಲಿ ಕಥೆ ಚೆನ್ನಾಗಿದೆ. ಭಾವನೆಗಳಂತೂ ಕಿತ್ತು ತಿನ್ನುವಂತಿವೆ. ಆದರೆ  ನಾನೀಗ ಫ್ಯಾಮಿಲಿ & ಯೂತ್ಗೆ ಹೆಚ್ಚು ಕನೆಕ್ಟ್ ಆಗಿರುವಂತಹ ನಟ. ನನ್ನ ವೃತ್ತಿ ಬದುಕಿನ ಈ ಘಟ್ಟದಲ್ಲಿ ಇಂಥದ್ದೊಂದು ಪಾತ್ರ ಮಾಡಿದರೆ, ಪ್ರೇಕ್ಷಕರು ರಿಸೀವ್ ಮಾಡ್ತಾರಾ ಅನ್ನೋ ಡೌಟು ಇದೆ ನಂಗೆ. ಸದ್ಯಕ್ಕೆ ಇಂತಹ ಪ್ರಯೋಗ ಮಾಡೋದಕ್ಕೆ ಆಗಲ್ಲ ಎಂದಿದ್ದರು. ನಂತರ ಈ ಕಥೆಯನ್ನು ರಿಷಬ್ ಶೆಟ್ಟಿಯವರಿಗೂ ಹೇಳಿದ್ದರು. ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ಆಗಲಿಲ್ಲ, ಕೊನೆಗೆ ಅದು ರಾಜ್ ಬಿ.ಶೆಟ್ಟಿ ಅವರಿಗೆ ದಕ್ಕಿತು ಎಂದಿದ್ದಾರೆ. ಅಷ್ಟೇ ಅಲ್ಲ, ತಮನ್ನಾ ಭಾಟಿಯಾ ಅವರಿಗೂ ಈ ಕಥೆ ಇಷ್ಟವಾಗಿತ್ತಂತೆ.

    ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸಂಸ್ಥೆ ನಡೆಸುವ ಕಥಾ ಸ್ಪರ್ಧೆಯಲ್ಲಿ ನಾನು ಬರೆದಿದ್ದ ಈ 'ಟೋಬಿ' ಕಥೆಯನ್ನೂ ಕಳಿಸಿದ್ದೆ. ಅಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳು ಬಂದಿದ್ದವು. ಆಯುಷ್ಮಾನ್ ಖುರಾನಾ, ಕುಬ್ರಾ ಸೇಠ್, ರಾಜ್ಕುಮಾರ್ ರಾವ್ ಮತ್ತು ತಮನ್ನಾ ಭಾಟಿಯಾ ಈ ಕಥಾ ಸ್ಪರ್ಧೆಯ ಜಡ್ಜ್ ಆಗಿದ್ದರು. ನನಗೆ ಅವಾರ್ಡ್ ಬರಲ್ಲ ಎಂದುಕೊಂಡೇ ನಾನು ಅಂದಕೊಂಡಿದ್ದೆ. ಲಕ್ಷಾಂತರ ಕಥೆಗಳ ಮಧ್ಯೆ 'ಟೋಬಿ' ಕಥೆ ಆಯ್ಕೆಯಾಗಿ, ಅದಕ್ಕೆ ಪ್ರಶಸ್ತಿ ಬಂತು. ಆಗ ತಮನ್ನಾ ಅವರು, 'ನೀನು ಈ ಕಥೆಯನ್ನು ಯಾಕೆ ಬರೆದೆಯೋ, ಏನಕ್ಕೆ ಬರೆದೆಯೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನನ್ನು ತುಂಬ ಡಿಸ್ಟರ್ಬ್ ಮಾಡ್ತು ಎಂದಿದ್ದರು. ಆ ಟೋಬಿ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾನೆ' ಅಂತ ಟಿಕೆ ದಯಾನಂದ ಅವರು ತಿಳಿಸಿದ್ದಾರೆ.

    ಅಪ್ಪು, ತಮನ್ನಾ ಭಾಟಿಯಾ, ರಿಷಬ್ ಶೆಟ್ಟಿ.. ಇವರಿಗೆಲ್ಲ ಇಷ್ಟವಾಗಿದ್ದ ಟೋಬಿ, ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆ. ಬಾಸಿಲ್ ನಿರ್ದೇಶನದ ಚಿತ್ರಕ್ಕೆ ರಾಜ್ ಬಿ.ಶೆಟ್ಟಿಯವರೇ ಹೀರೋ ಕಂ ಪ್ರೊಡ್ಯೂಸರ್. ಚೈತ್ರಾ ಆಚಾರ್, ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಟೋಬಿ : ಅದ್ಧೂರಿಯಾಗಿ ಬರುತ್ತಿದ್ದಾರೆ ರಾಜ್ ಬಿ.ಶೆಟ್ಟಿ

    ಟೋಬಿ : ಅದ್ಧೂರಿಯಾಗಿ ಬರುತ್ತಿದ್ದಾರೆ ರಾಜ್ ಬಿ.ಶೆಟ್ಟಿ

    ರಾಜ್ ಬಿ.ಶೆಟ್ಟಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಕಾನ್ಫಿಡೆನ್ಸ್ ಕೊಟ್ಟಿದ್ದು ಗರುಡ ಗಮನ ವೃಷಭ ವಾಹನ. ಗಗವೃವಾ ಚಿತ್ರದ ಗೆಲುವಿನ ಬೆನ್ನಲ್ಲೇ ಬರುತ್ತಿದೆ ಟೋಬಿ. ಆಗಸ್ಟ್ 25ಕ್ಕೆ ಟೋಬಿ ಬರಲಿದ್ದಾನೆ.

    ಟೋಬಿ ಚಿತ್ರಕ್ಕೆ 'ಮಾರಿ ಮಾರಿ.. ಮಾರಿಗೆ ದಾರಿ' ಎಂಬ ಅಡಿಬರಹವಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಟೋಬಿ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ರಿಲೀಸ್ ಡೇಟ್ ಘೋಷಣೆ ಜೊತೆಗೆ ಒಂದು ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ ಚಿತ್ರತಂಡ.

    ರಾಜ್ ಚಿತ್ರಗಳ ಬಜೆಟ್ ಚಿಕ್ಕದಾಗಿರುತ್ತೆ ಎನ್ನುವವರಿಗೆ ಈ ಬಾರಿ ದೊಡ್ಡ ಬಜೆಟ್ಟಿನಲ್ಲೇ ಸಿನಿಮಾ ಮಾಡಿ ಉತ್ತರ ಕೊಟ್ಟಿದ್ದಾರೆ. ಒಂದು ಮೊಟ್ಟೆಯ ಕಥೆ, ಗಗವೃವಾ ಚಿತ್ರಗಳಿಗಿಂತಲೂ ಈ ಚಿತ್ರಕ್ಕೆ ಹಾಕಿರುವ ಬಜೆಟ್ ಸುಮಾರು 5 ಪಟ್ಟು ಹೆಚ್ಚು. ಹಾಗಂತ ಬಿಲ್ಡಪ್ ಇರಲ್ಲ. ಎಂದಿನಂತೆ ಈ ಚಿತ್ರಕ್ಕೂ ಕಥೆಯೇ ಹೀರೋ.

    ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ನಿರ್ಮಾಪಕರು. ಶಾಮಿಲ್ ಬಂಗೇರ ಕಾರ್ಯಕಾರಿ ನಿರ್ಮಾಪಕರು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಟೋಬಿ ವಿತರಣೆ ಮಾಡುತ್ತಿದೆ. ಬೆಲ್ ಬಾಟಂ ಕಥೆಗಾರ ಟಿಕೆ ದಯಾನಂದ್ ಟೋಬಿ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಮೂಲಕಥೆ ಅವರದ್ದೇ. ಸ್ಕ್ರಿಪ್ಟ್ ಅನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಬಾಸಿಲ್ ಟೋಬಿ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರೇ ಇಲ್ಲಿಯೂ ಮುಂದುವರಿದಿದ್ದಾರೆ.

    ರಾಜ್ ಬಿ ಶೆಟ್ಟಿ ಜೊತೆಗೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲ ಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ, ಅಶ್ವಿನ್ ಹಾಸನ್ ಮುಂತಾದವರು ಟೋಬಿ ತಾರಾಗಣದಲ್ಲಿದ್ದಾರೆ.

  • ಟೋಬಿ : ಪೆದ್ದನೋ..ಪ್ರೇಮಿಯೋ..ಸೈತಾನನೋ..ಶಾಂತ ರೂಪಿಯೋ..

    ಟೋಬಿ : ಪೆದ್ದನೋ..ಪ್ರೇಮಿಯೋ..ಸೈತಾನನೋ..ಶಾಂತ ರೂಪಿಯೋ..

    ಟೋಬಿ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಟೋಬಿಯೂ ಒಂದು. ಗರುಡ ಗಮನ ವೃಷಭ ವಾಹನದ ನಂತರ ರಾಜ್ ಬಿ.ಶೆಟ್ಟಿಯವರು ನಟಿಸಿರುವ ಚಿತ್ರವಿದು. ಡೈರೆಕ್ಟರ್ ಅವರಲ್ಲ. ಕಥೆ ಅವರದ್ದೇ. ಪ್ರೊಡ್ಯೂಸರ್ ಕೂಡಾ ಅವರೇ. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟೋಬಿಯ ಪಾತ್ರ, ಕಥೆ ಎಂಥದ್ದಿರಬಹುದು.

    ಚಿತ್ರದ ಟ್ರೇಲರ್ ನೋಡಿದವರಿಗೆ ಟೋಬಿ  ಪೆದ್ದನೋ..ಪ್ರೇಮಿಯೋ..ಸೈತಾನನೋ..ಶಾಂತ ರೂಪಿಯೋ.. ಎಂಬ ಅನುಮಾನ ಕಾಡಿದರೆ ಆಶ್ಚರ್ಯವಿಲ್ಲ. ಟ್ರೇಲರ್ ನೋಡಿದವರಿಗೆ ಚಿತ್ರದಲ್ಲಿ ಫ್ಯಾಮಿಲಿ ಕಥೆಯೂ ಇದೆ ನೋಡಿ ಎಂದಿದ್ದರು ರಾಜ್ ಬಿ ಶೆಟ್ಟಿ. ಅದರಂತೆಯೇ ಒಂದು ಚೆಂದದ ಕುಟುಂಬವೂ ಇದೆ. ಟ್ರೇಲರ್ ನೋಡಿದಾಗ ಟೋಬಿ ಬಾಡಿಗೆ ಕೊಲೆಗಾರನಾ ಎಂಬ ಅನುಮಾನ ಮೂಡುತ್ತದೆ. ಸಂಯುಕ್ತಾ ಹೊರನಾಡು ಜೊತೆ ಮದುವೆ, ಕುಟುಂಬವೂ ಇದೆ.ಟ್ರೇಲರಿನಲ್ಲಿ ಬರುವ ಕೆಲವೇ ಡೈಲಾಗುಗಳು ವ್ಹಾವ್ ಎನ್ನುವಂತಿವೆ.

    ತಪ್ಪಿಸಿಕೊಂಡ ಹರಕೆಯ ಕುರಿ ಹಿಂದೆ ಬಂದರೆ ಅದು ಕುರಿಯಾಗಿರಲ್ಲ..ಮಾರಿಯಾಗಿರುತ್ತೆ

    ತಣ್ಣಗಾದ್ರೆ ಸೌದೆಗೇನ್ ಬೆಲೆ..ಬೆಂಕಿ ಬಿದ್ರೇನೆ..

    ಟೋಬಿ ಕಣ್ಮುಚ್ಚಿದ್ರೇನೇ ಒಳ್ಳೇದು..ಆದರೆ ಕಣ್ ಬಿಟ್ಟಾಗಿದೆ..

    ಈ ಡೈಲಾಗುಗಳ ಮಧ್ಯೆ ಚೈತ್ರಾ ಆಚಾರ್ ಆರ್ಭಟ, ಗೋಪಾಲ ಕೃಷ್ಣ ದೇಶಪಾಂಡೆಯ ಸೈಲೆಂಟ್ ಡೈಲಾಗ್ಸ್ ಗಮನ ಸೆಳೆಯುತ್ತವೆ. ಕೊನೆಗೆ ಬರುವುದೇ ಮೂಗುತಿಯ ರೌದ್ರಾವತಾರ. ಏನಿದರ ವಿಶೇಷತೆ.. ಏನಿದರ ಗುಟ್ಟು.. ಅದನ್ನು ರಾಜ್ ಬಿ ಶೆಟ್ಟಿ, ಟ್ರೇಲರಿನಲ್ಲಿ ಸ್ವಲ್ಪವೂ ಬಿಟ್ಟುಕೊಡೋದಿಲ್ಲ.

    ಡೈರೆಕ್ಟರ್ ಬಾಸಿಲ್ ಅವರ ಮೇಕಿಂಗ್ ಕೂಡಾ ಗಮನ ಸೆಳೆಯುತ್ತದೆ. ಚೆಂದದ ಕಥೆಯಂತೂ ಇದೆ. ಆ ಕಥೆಯ ಹೂರಣ..ಸ್ವಾರಸ್ಯ ಆಗಸ್ಟ್ 25ಕ್ಕೆ ಗೊತ್ತಾಗಲಿದೆ.

  • ಟೋಬಿ ಕ್ರೇಜ್: ಅಡ್ವಾನ್ಸ್ ಬುಕ್ಕಿಂಕ್ ಬೊಂಬಾಟ್

    ಟೋಬಿ ಕ್ರೇಜ್: ಅಡ್ವಾನ್ಸ್ ಬುಕ್ಕಿಂಕ್ ಬೊಂಬಾಟ್

    ರಾಜ್ ಬಿ.ಶೆಟ್ಟಿ ಚಿತ್ರಗಳೆಂದರೆ ಪ್ರೇಕ್ಷಕರಿಗೆ ಮನರಂಜನೆ ಮಸ್ತಾಗಿರುತ್ತೆ.. ಕಥೆ ಸಖತ್ತಾಗಿರುತ್ತೆ ಅನ್ನೋ ಕಾನ್ಫಿಡೆನ್ಸ್. ಆ ನಿರೀಕ್ಷೆಯಂತೆಯೇ ಟೋಬಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ಎಲ್ಲ ಸೂಚನೆಗಳೂ ಸಿಗುತ್ತಿವೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನ ರಾಜ್ ಬಿ.ಶೆಟ್ಟಿಯವರ ಮನೆ ತುಂಬಲಿದ್ದಾಳೆ ಧನಲಕ್ಷ್ಮಿ.

    ಬಾಸಿಲ್ ನಿರ್ದೇಶನದ ಈ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಲು ಈ ಹಿಂದಿನ ಪೋಸ್ಟರ್ ಕೂಡ ಕಾರಣ ಆಗಿತ್ತು. ಇದಾದ್ಮೇಲೆ ಚಿತ್ರದ  ಟ್ರೇಲರ್ ಇನ್ನಷ್ಟು ಭರವಸೆ ಹೆಚ್ಚು ಮಾಡಿದೆ. ಕಂಟೆಂಟ್ ಬೇಸ್ ಕಮರ್ಷಿಯಲ್ ಸಿನಿಮಾ ಆಗಿರೋ ಟೋಬಿ ಚಿತ್ರದಲ್ಲಿ ಒಂದು ಅಸಲಿ ಕಥೆ ಇದೆ. ಅದನ್ನ ರಿಯಲಿಸ್ಟಿಕ್ ಆಗಿಯೇ ಇಲ್ಲಿ ನೋಡಬಹುದಾಗಿದೆ.

    ಟೋಬಿಗೆ ಒಬ್ಬರಲ್ಲ ಇಬ್ಬರು ಈ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಸಂಯುಕ್ತಾ ಹೊರನಾಡು ಒಂದು ಹಂತದಲ್ಲಿ ಬಂದು ಹೋಗ್ತಾರೆ. ಚೈತ್ರಾ ಆಚಾರ್ ಇನ್ನೂ ಒಂದು ಹಾದಿಯಲ್ಲಿ ಸಿಗುತ್ತಾರೆ ಅನಿಸುತ್ತದೆ. ಎರಡೂ ಪಾತ್ರಗಳ ಮಧ್ಯೆ ಟೋಬಿ ಕಥೆ ಸಾಗುತ್ತದೆ.

    ಟೋಬಿ ನಿಜಕ್ಕೂ ಮುಗ್ಧನೋ.. ಪ್ರೇಮಿಯೋ.. ಕ್ರೂರಿಯೋ.. ಎಂದು ಗೊಂದಲವಾಗುವಂತೆ ಕಥೆ ಇದೆ. ಕ್ಲೈಮಾಕ್ಸ್‍ನಲ್ಲಿ ಬರುವ ಮೂಗುತಿ ಸುಂದರ ಟೋಬಿಯಂತೂ.. ವ್ಹಾವ್ ಎನ್ನಿಸುತ್ತದೆ. ಇನ್ನೇನು ಸ್ವಲ್ಪವೇ ದಿನ. ಅದಕ್ಕೂ ಮುನ್ನ ಪೇಯ್ಡ್ ಪ್ರೀಮಿಯರ್ ಶೋ ಇದೆ. ಅದಕ್ಕೂ ಬುಕ್ಕಿಂಗ್ ಶುರುವಾಗಿದೆ

  • ಟೋಬಿ ಟ್ರೇಲರ್ ನೋಡಿದವರು ಸಿನಿಮಾವನ್ನು ಖಂಡಿತಾ ನೋಡ್ತಾರೆ : ರಾಜ್ ಬಿ.ಶೆಟ್ಟಿ

    ಟೋಬಿ ಟ್ರೇಲರ್ ನೋಡಿದವರು ಸಿನಿಮಾವನ್ನು ಖಂಡಿತಾ ನೋಡ್ತಾರೆ : ರಾಜ್ ಬಿ.ಶೆಟ್ಟಿ

    ಟೋಬಿಯ ಟ್ರೇಲರ್ ರಿಲೀಸ್‍ಗೆ ಇನ್ನೆರಡೇ ದಿನ. ಆಗಸ್ಟ್ 4ಕ್ಕೆ ಟೋಬಿ ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾದ ಪೋಸ್ಟರ್, ಮೂಗುತಿ ತೋರಿಸಿಯೇ ಸಂಚಲನ ಸೃಷ್ಟಿಸಿರುವ ರಾಜ್ ಬಿ.ಶೆಟ್ಟಿ, ಚಿತ್ರಕ್ಕೆ ಪ್ರೇಕ್ಷಕರನ್ನು ವಿಭಿನ್ನ ರೀತಿಯಲ್ಲಿ ಸೆಳೆಯುತ್ತಿದ್ದಾರೆ.ಸಿನಿಮಾ ಟ್ರೇಲರ್ ಹೇಗಿರಲಿದೆ ಎಂಬ ಪ್ರಶ್ನೆಗೆ ರಾಜ್ ಬಿ.ಶೆಟ್ಟಿ ಹೇಳುವುದೇ ಬೇರೆ..

    ಆಗಸ್ಟ್ 4ರಂದು ಬಿಡುಗಡೆಯಾಗಲಿರುವ ಇದರ ಟ್ರೇಲರ್ನಲ್ಲಿ ಈ ಸಿನಿಮಾದ ನಾಯಕಿಯರು ಪರಿಚಯವಾಗುತ್ತಾರೆ. ನನ್ನ ಹಿಂದಿನ ಸಿನಿಮಾದಲ್ಲಿ ನಾಯಕಿ ಇರಲಿಲ್ಲ. ಸಾಮಾನ್ಯವಾಗಿ ಕೆಲವರು ಟ್ರೇಲರ್ನಲ್ಲಿ ಕಥೆಯ ಎಳೆ ಕೊಟ್ಟಿರುತ್ತಾರೆ. ನಾವು ಹಾಗೆ ಮಾಡುವುದಿಲ್ಲ. ಟ್ರೇಲರ್ ನೋಡಿದವರು ಈ ಚಿತ್ರ ನೋಡಲೇಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡೇ ಟ್ರೇಲರ್ ರೆಡಿ ಮಾಡಿಸಿದ್ದೇವೆ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.

    ಸಿನಿಮಾದ ಪೋಸ್ಟರ್ ನೋಡಿದವರೆಲ್ಲ ಇದನ್ನು ಡಾರ್ಕ್ ಸಿನಿಮಾ ಎಂದುಕೊಂಡಿದ್ದಾರೆ. ಆದರೆ ಹಾಗಿಲ್ಲ. ಇದೊಂದು ಫ್ಯಾಮಿಲಿ ಎಂಟರ್ಟೇನರ್ ಎಂಬುದು ತಿಳಿಯುತ್ತದೆ. ಮಾಸ್ ಆಡಿಯನ್ಸ್ಗೂ ಇದು ಇಷ್ಟವಾಗುತ್ತದೆ. ಟೋಬಿ’ ಮಾಸ್ ಅನ್ನು ರಿ ಡಿಫೈನ್ ಮಾಡುವಂತಹ ಸಿನಿಮಾ. ಸಾಮಾನ್ಯವಾಗಿ ಕಾಣುವಂತಹ ವ್ಯಕ್ತಿಯಲ್ಲಿ ಎಂತಹ ಮಾಸ್ ಅಂಶಗಳು ಇರುತ್ತವೆ, ಆತನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಆತ ಮಾಸ್ ಆಗಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಬಹಳ ಚೆಂದವಾಗಿ ಇದರಲ್ಲಿ ಸೆರೆ ಹಿಡಿದಿದ್ದೇವೆ. ಈ ಸಿನಿಮಾ ನೋಡಿದ ಮೇಲೆ ಜನರಿಗೂ ಹಾಗೇ ಅನಿಸಿದರೆ ನಾವು ಗೆದ್ದಂತೆ. ಜನರ ಆಲೋಚನೆಗೂ ಕೊಂಚ ಕೆಲಸ ಕೊಡುತ್ತೇವೆ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.

    ಟೋಬಿ’ ಚಿತ್ರದಲ್ಲಿ ರಾಜ್ ಜತೆಗೆ ಚೈತ್ರಾ ಜೆ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಬಾಸಿಲ್ ನಿರ್ದೇಶನ ಮಾಡಿದ್ದು, ರಾಜ್ ಬಿ ಶೆಟ್ಟಿ ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ.

  • ಟೋಬಿ.. ಬಾಕ್ಸಾಫೀಸ್ ಲಕ್ಷ್ಮಿ ಹಬ್ಬ..

    ಟೋಬಿ.. ಬಾಕ್ಸಾಫೀಸ್ ಲಕ್ಷ್ಮಿ ಹಬ್ಬ..

    ರಾಜ್ ಬಿ.ಶೆಟ್ಟಿ ಮತ್ತೊಮ್ಮೆ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಪ್ರತಿಬಾರಿಯೂ ಹೊಸ ರೀತಿಯ ಕಥೆ ಆಯ್ಕೆ ಮಾಡಿಕೊಳ್ಳೋ ಭರವಸೆ ಹುಟ್ಟಿಸಿರೋ ರಾಜ್ ಬಿ.ಶೆಟ್ಟಿ, ಟೋಬಿಯಲ್ಲೂ ಅದನ್ನು ಮುಂದುವರೆಸಿದ್ದಾರೆ. ಮೌನವಾಗಿ. ಹೌದು, ಇಡೀ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿಗೆ ಒಂದೇ ಒಂದು ಡೈಲಾಗ್ ಇಲ್ಲ. ಮೌನದಲ್ಲೇ ಕೊಲ್ಲುತ್ತಾರೆ. ಸ್ವಲ್ಪ ಮಟ್ಟಿಗೆ ಗರುಡ ಗಮನ ವೃಷಭ ವಾಹನ ಫ್ಲೇವರ್ ಇದೆ ಎನ್ನಿಸಿದ್ದರೂ, ಅದನ್ನು ಸಿನಿಮಾ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಮೀರುತ್ತಾನೆ ಟೋಬಿ.

    ಅನಾಥ ಹುಡುಗ.. ಪ್ರತಿದಿನ ಪೊಲೀಸರ ಏಟು ತಿನ್ನುವ ಮಾತು ಬಾರದ ಮೂಕ. ಕೋಪ ಎಂದರೆ ಹಿಂದೆ ಮುಂದೆ ನೋಡದೆ ಹೊಡೆಯುವ, ಪ್ರೀತಿಯಿಂದ ಹೇಳಿದರೆ ಹೇಳಿದ್ದನ್ನೆಲ್ಲ ಮಾಡುವ ಟೋಬಿ,  ಪ್ರೀತಿ, ದ್ವೇಷ, ಮಮತೆ, ಸಿಟ್ಟು, ಅಸಹಾಯಕತೆ ಭಾವನೆಗಳನ್ನು ಒಂದು ಅಕ್ಷರವನ್ನೂ ಮಾತನಾಡದೇ   ಅಭಿವ್ಯಕ್ತಿಸುವ ಮೂಲಕ ರಾಜ್ ಬಿ. ಶೆಟ್ಟಿ   ಗಮನ ಸೆಳೆಯುತ್ತಾರೆ. ಚೈತ್ರಾ ಆಚಾರ್, ರಾಜ್ ಬಿ.ಶೆಟ್ಟಿ ಜೊತೆ ಜೆನಿ ಪಾತ್ರದಲ್ಲಿ ಪೈಪೋಟಿ ಕೊಡುತ್ತಾರೆ. ಸಂಯುಕ್ತಾ ಹೊರನಾಡು, ಗೋಪಾಲ ದೇಶಪಾಂಡೆ ಪಾತ್ರದ ತೂಕಕ್ಕೆ ತಕ್ಕಂತೆ ನಟಿಸಿದ್ದಾರೆ. ಡೈರೆಕ್ಟರ್ ಬಾಸಿಲ್ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ.

    ಇದೆಲ್ಲದರ ಎಫೆಕ್ಟ್ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆದ ಟೋಬಿ, ನಿರ್ಮಾಪಕರ ಮನೆಗೆ ಲಕ್ಷ್ಮಿಯನ್ನು ಹರಿಸಲಿದ್ದಾಳೆ ಎನ್ನುವುದು. ರಿಲೀಸ್ ಆದ ಎಲ್ಲ ಕಡೆಯೂ ಹೌಸ್ ಫುಲ್ ಕಾಣುತ್ತಿರುವ ಟೋಬಿ, ಎ ಸೆಂಟರ್`ಗಳಲ್ಲಿ ಹೆಚ್ಚಾಗಿ ಜನ ನೋಡುತ್ತಿರುವುದು ವಿಶೇಷ. ಈ ಬಾರಿ ರಾಜ್ ಬಿ.ಶೆಟ್ಟಿ ಚಿತ್ರದ ಪ್ರಚಾರದ ವಿಷಯದಲ್ಲಿ ಉತ್ತರ ಕರ್ನಾಟಕದ ಕಡೆ ಹೆಚ್ಚು ಗಮನ ಹರಿಸಿದ್ದರು. ಹೀಗಾಗಿ ಬಾಕ್ಸಾಫೀಸಿನಲ್ಲಿ ಕೇವಲ ಬೆಂಗಳೂರು, ಮಂಗಳೂರು ಅಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ಟೋಬಿಗಾಗಿ ಅನುರಾಗ್ ಕಶ್ಯಪ್ ವೇಯ್ಟಿಂಗ್

    ಟೋಬಿಗಾಗಿ ಅನುರಾಗ್ ಕಶ್ಯಪ್ ವೇಯ್ಟಿಂಗ್

    ಅನುರಾಗ್ ಕಶ್ಯಪ್, ಬಾಲಿವುಡ್‍ನ ಖ್ಯಾತ ನಿರ್ದೇಶಕ. ಇತ್ತೀಚೆಗೆ ನಟನೆಯಲ್ಲೂ ಮ್ಯಾಜಿಕ್ ಮಾಡುತ್ತಿರುವ ಅನುರಾಗ್ ಕಶ್ಯಪ್, ಟೋಬಿಯನ್ನು ನೋಡುವುದಕ್ಕೆ ಕಾಯುತ್ತಿದ್ದಾರಂತೆ. ನನಗೆ ಕನ್ನಡದ ‘ಟೋಬಿ’ ಸಿನಿಮಾ ನೋಡಬೇಕೆಂಬ ಬಯಕೆ ಇದೆ. ಆದರೆ ಹತ್ತಿರದಲ್ಲೆಲ್ಲೂ ಆ ಸಿನಿಮಾ ಬಿಡುಗಡೆ ಆಗಿಲ್ಲ. ನಾನು ರಾಜ್ ಬಿ ಶೆಟ್ಟಿಗೆ ಮೆಸೇಜ್ ಮಾಡಿದ್ದೇನೆ, ಹೇಗಾದರೂ ಸಿನಿಮಾ ತೋರಿಸು ಎಂದು ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ. ನನಗೆ ರಾಜ್ ಬಿ ಶೆಟ್ಟಿ ಬಹಳ ಇಷ್ಟ, ಕನ್ನಡದಲ್ಲಿ ನಾನು ಬಹಳ ನಿರೀಕ್ಷೆ ಇಟ್ಟಿರುವ ನಿರ್ದೇಶಕ ಅವರು” ಎಂದಿದ್ದಾರೆ.

    ಅನುರಾಗ್ ಕಶ್ಯಪ್, ರಾಜ್ ಬಿ ಶೆಟ್ಟಿಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ವಿಶೇಷ ವಿಡಿಯೋ ಮಾಡಿ ಸಿನಿಮಾವನ್ನು ಬಹುವಾಗಿ ಹೊಗಳಿದ್ದರು. ಇದೀಗ ಟೋಬಿಯನ್ನ ನೋಡೋಕೆ ಕಾಯುತ್ತಿದ್ದಾರೆ.

    ಟೋಬಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ ಬಿ ಶೆಟ್ಟಿ ನಟಿಸಿದ್ದಾರಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡಿದ್ದಾರೆ. ಬಾಸಿಲ್ ನಿರ್ದೇಶನದ ಟೋಬಿಯಲ್ಲಿ ಸಂಯುಕ್ತಾ ಹೊರನಾಡು ಹಾಗೂ ಚೈತ್ರಾ ಆಚಾರ್ ನಾಯಕಿಯರು. ರಾಜ್ ಬಿ ಶೆಟ್ಟಿಗೆ ಚೈತ್ರಾ ಆಚಾರ್ ಮಗಳಾಗಿ ನಟಿಸಿರುವುದು ವಿಶೇಷ. ವಿಕ್ಷಿಪ್ತ ವ್ಯಕ್ತಿತ್ವದ ಮೂಗ ಹಾಗೂ ಅವನ ಸಾಕು ಮಗಳ ನಡುವಿನ ಭಾವುಕ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮೊದಲ ಬಾರಿಗೆ ಮಾಸ್ ಎಲಿಮೆಂಟ್ಗಳನ್ನು ರಾಜ್ ಬಿ ಶೆಟ್ಟಿ ಪ್ರಯತ್ನಿಸಿದ್ದಾರೆ. ಸಿನಿಮಾದಲ್ಲಿ ಅವರ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.  

  • ಟೋಬಿಯ ಟ್ರೇಲರ್ ಸಂಭ್ರಮಕ್ಕೆ ಆರ್.ಆರ್.ಆರ್.

    ಟೋಬಿಯ ಟ್ರೇಲರ್ ಸಂಭ್ರಮಕ್ಕೆ ಆರ್.ಆರ್.ಆರ್.

    ಟೋಬಿ. ಇವತ್ತು ಸಂಜೆ 4 ಗಂಟೆ 5 ನಿಮಿಷಕ್ಕೆ ಸರಿಯಾಗಿ ಟ್ರೇಲರ್ ಮೂಲಕ ದರ್ಶನ ಕೊಡಲಿದ್ದಾನೆ. ಟೋಬಿ, ಮೂಗುತಿ ತೊಟ್ಟ ವೇಷದಿಂದಲೇ ಸೆನ್ಸೇಷನ್ ಸೃಷ್ಟಿಸಿತ್ತು. ಇದೊಂದು ಡಾರ್ಕ್ ಸಿನಿಮಾ. ಆದರೆ ಫ್ಯಾಮಿಲಿ ಸಿನಿಮಾ ಎಂದಿರೋ ರಾಜ್ ಬಿ.ಶೆಟ್ಟಿ, ಇದೂವರೆಗೂ ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ರಾಜ್ ಬಿ.ಶೆಟ್ಟಿಯವರ ಚಿತ್ರಕ್ಕೆ ಕಥೆಯೂ ಅವರದ್ದೇ. ನಿರ್ಮಾಣವೂ ಅವರದ್ದೇ. ಡೈರೆಕ್ಟರ್ ಮಾತ್ರ ಬಾಸಿಲ್.

    ಟೋಬಿಯ ಟ್ರೇಲರ್ ಬಿಡುಗಡೆ ಮಾಡಲಿರುವುದು ಆರ್.ಆರ್.ಆರ್. ಸ್ಟಾರ್ಸ್. ರಾಜ್ ಬಿ.ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ಮೂವರೂ ಶೆಟ್ಟರು ಒಬ್ಬರಿಗೆ ಒಬ್ಬರು ಹೆಗಲು ಕೊಡುತ್ತಾ.. ಹೋಗುತ್ತಿದ್ದಾರೆ. ಅದೇ ಇಲ್ಲಿಯೂ ಮುಂದುವರೆದಿದೆ. ಟೋಬಿಯಲ್ಲಿ ರಾಜ್ ಬಿ.ಶೆಟ್ಟಿ ಎದುರು ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ನಟಿಸಿದ್ದಾರೆ. ಟೋಬಿ, ಆಗಸ್ಟ್ 25ರಂದು ರಿಲೀಸ್ ಆಗಲಿದೆ.

  • ಟೋಬಿಯ ಮೂಗುಬೊಟ್ಟಿನ ಕಥೆಯೇ ಭಯಾನಕ..!

    ಟೋಬಿಯ ಮೂಗುಬೊಟ್ಟಿನ ಕಥೆಯೇ ಭಯಾನಕ..!

    ಟೋಬಿ. ರಾಜ್ ಬಿ.ಶೆಟ್ಟಿಯವರ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಸಂಚಲನ ಸೃಷ್ಟಿಸಿದೆ. ಗರುಡ ಗಮನ ವೃಷಭ ವಾಹನ ನಂತರ ತೆರೆಗೆ ಬರುತ್ತಿರುವ ರಾಜ್ ಬಿ.ಶೆಟ್ಟರ ಸಿನಿಮಾ ಇದು. ನಿರೀಕ್ಷೆ..ಕುತೂಹಲ.. ಎಲ್ಲವೂ ಡಬಲ್ ಆಗಿದೆ. ಚಿತ್ರದಲ್ಲಿ ಗಮನ ಸೆಳೆದಿರುವುದು ಮೂಗು ಬೊಟ್ಟು ಹಾಕಿಕೊಂಡಿರುವ ಪೋಸ್ಟರ್. ಅದು.. ಮೂಗುಬೊಟ್ಟೂ ಅಲ್ಲ. ಮೂಗಿಗೆ ಹಾಕಿಕೊಂಡಿರುವ ಬಳೆಯೇ ಹೌದು. ಅದನ್ನು ಪ್ರೆಸ್ ಮೂಗುಬೊಟ್ಟಿನಂತೆ ಅಚಿಟಿಸಿಕೊಂಡಿದ್ದಾರಾ ಅಥವಾ ಚುಚ್ಚಿಸಿಕೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್ ಬಿ.ಶೆಟ್ರು ಮೂಗಿಗೆ ಬಳೆ ಚುಚ್ಚಿಸಿಕೊಂಡಿದ್ದಾರಂತೆ.

    ರಾಜ್ ಬಿ ಶೆಟ್ಟಿ, ಟೋಬಿಗಾಗಿ ನಿಜವಾಗಿಯೇ ಮೂಗು ಚುಚ್ಚಿಸಿಕೊಂಡಿದ್ದ ವಿಡಿಯೋ ರಿಲೀಸ್ ಆಗಿದೆ.  ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ನಿಜವಾದ ಮೂಗುತಿ ಧರಿಸಿದ್ದಾರೆ. ಧರಿಸುವುದು ಬಳೆ. ಹೀಗಾಗಿಯೇ ಸಾಮಾನ್ಯ ಮೂಗುತಿ ಧರಿಸಲು ಮೂಗಿಗೆ ಮಾಡುವುದಕ್ಕಿಂತ ದೊಡ್ಡದಾಗಿಯೇ ಮೂಗು ಚುಚ್ಚಿದ್ದಾರೆ. ಹೀಗಾಗಿ ಮೂಗುತಿ ಧರಿಸುವ ತೂತು ದೊಡ್ಡದಾಗಿಯೇ ಇದೆ.

    ರಾಜ್ ಬಿ ಶೆಟ್ಟಿಗೆ ಮೂಗು ಚುಚ್ಚಿದ, ಆ ನಂತರ ಅವರು ಅನುಭವಿಸಿದ ಕಷ್ಟಗಳು, ಚುಚ್ಚು ಮದ್ದು ತೆಗೆದುಕೊಂಡಿದ್ದು, ನೋವು ಅನುಭವಿಸಿದ್ದರ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಹುಚ್ಚು ಕಲೆಗೆ ಒಳ್ಳೆಯದು. ಟೋಬಿಯ ಹುಚ್ಚಿನ ಅಭಿವ್ಯಕ್ತಿಸುವಾಗ ಪ್ರಾಮಾಣಿಕ ಪ್ರಯತ್ನದ ಅಗತ್ಯವಿತ್ತು. ಇಲ್ಲಿದೆ ಆ ಪ್ರಯತ್ನದ ಒಂದು ತುಣುಕು ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ರಾಜ್ ಬಿ ಶೆಟ್ಟಿ ಹಂಚಿಕೊಂಡಿದ್ದಾರೆ.

    ಟಿಕೆ ದಯಾನಂದ್ ಅವರ ಕಥೆಗೆ ರಾಜ್ ಬಿ.ಶೆಟ್ಟಿ ಚಿತ್ರಕಥೆ ಬರೆದಿದ್ದಾರೆ. ನಿರ್ಮಾಪಕರೂ ಆಗಿದ್ದಾರೆ. ಅವರೇ ಹೀರೋ. ನಿರ್ದೇಶನ ಬಾಸಿಲ್ ಅವರದ್ದು. ಚೈತ್ರಾ ಆಚಾರ್ ಮತ್ತು ಸಂಯುಕ್ತಾ ಹೆಗಡೆ ನಾಯಕಿಯರು. ಆಗಸ್ಟ್ 21ಕ್ಕೆ ಟೋಬಿ ಥಿಯೇಟರಿಗೆ ಬರಲಿದ್ದಾನೆ.

  • ಪುನೀತ್ ಪುತ್ಥಳಿ ಎದುರು ಟೋಬಿ ಪ್ರಚಾರ

    ಪುನೀತ್ ಪುತ್ಥಳಿ ಎದುರು ಟೋಬಿ ಪ್ರಚಾರ

    ನಟ ರಾಜ್ ಬಿ.ಶೆಟ್ಟಿ ಪುನೀತ್ ಅವರನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಒಂದು ಮೊಟ್ಟೆಯ ಕಥೆ ಚಿತ್ರ ಮಾಡಿದಾಗ ಅಪ್ಪು ಸರ್ ಅವರಿಗೆ ನನ್ನ ಪರಿಚಯವೂ ಇರಲಿಲ್ಲ. ಅದರೆ ಸಿನಿಮಾ ನೋಡಿ ಇಷ್ಟವಾಗಿ ಚಿತ್ರವನ್ನು ಪ್ರಚಾರ ಮಾಡಿಕೊಟ್ಟಿದ್ದರು ಎಂದು ರಾಜ್ ಬಿ.ಶೆಟ್ಟಿ ಸದಾ ನೆನೆಯುತ್ತಲೇ ಇರುತ್ತಾರೆ. ಇದೀಗ ಟೋಬಿ ಚಿತ್ರದ ಪ್ರಚಾರ ಕೈಗೆತ್ತಿಕೊಂಡಿರುವ ರಾಜ್ ಬಿ ಶೆಟ್ಟಿ ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಎದುರು ಸಿನಿಮಾ ಪ್ರಚಾರ ಮಾಡಿದ್ದಾರೆ.

    . ಹೊಸಪೇಟೆಯಲ್ಲಿ ಬೈಕ್ ರ್ಯಾಲಿ ಟೋಬಿ ತಂಡವು ಭರ್ಜರಿಯಾಗಿ ಪ್ರಮೋಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಟ ರಾಜ್ ಬಿ. ಶೆಟ್ಟಿಗೆ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಹೊಸಪೇಟೆಯ ಕಾಲೇಜು ರಸ್ತೆಯಿಂದ ಡಾ. ಪುನೀತ್ ರಾಜ್ಕುಮಾರ್ ವೃತ್ತದವರೆಗೆ ಬೈಕ್ ರ್ಯಾಲಿ ಮಾಡಲಾಯಿತು. ನಂತರ ಡಾ. ಪುನೀತ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಮಾಡಲಾಯಿತು. ಈ ವೇಳೆ ರಾಜ್ ಬಿ. ಶೆಟ್ಟಿ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಮಾಲೆಯನ್ನು ಮಾಲಾರ್ಪಣೆ ಮಾಡಿ , ಹೊಸಪೇಟೆ ಜನಕ್ಕೆ ನಾನು ಅಭಾರಿಯಾಗಿದ್ದೇನೆ. ಡಾ. ಪುನೀತ್ ರಾಜ್ಕುಮಾರ್ ಅವರ ಅಚ್ಚು ಮೆಚ್ಚಿನ ಊರಿದು. ಯಾರು ಕೈ ಬಿಟ್ರೂ ಹೊಸಪೇಟೆ ಜನ  ಕೈ ಬಿಡೋಲ್ಲಾ ಅಂದಿದ್ರು ಪುನೀತ್. ಹೊಸಪೇಟೆ ಜನರಿಗೆ ನಾವು ಅಭಾರಿಯಾಗಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯ ಕೈ ಹಿಡಿದ್ರೆ, ಇನ್ನೂ ಅವರದ್ದೇ ಕೈ ಹಿಡಿದ ನೆನೆಪು ಬರ್ತದೆ. ಅವರು ನನ್ನ ಕೈ ಹಿಡಿದಿದ್ದು ನೆನಪಾಗುತ್ತದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ನಮಗೆ ನೆನಪು ಇನ್ನೂ ಹಾಗೆ ಇದೆ ಎಂದು ಹೇಳಿದರು.

    ಪುನೀತ್ ಅವರ ಸಾವಿರಾರು ಅಭಿಮಾನಿಗಳಲ್ಲಿ ನಾನೂ ಒಬ್ಬ ಎಂದು ರಾಜ್ ಬಿ.ಶೆಟ್ಟಿ ಶ್ರಾವಣ ಮಾಸದಲ್ಲಿ ಮಾರಿ ಹಬ್ಬ ಮಾಡೋಕೆ ಬರುತ್ತಿದ್ದಾರೆ. ಇದೇ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಟೋಬಿ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ.

  • ಮಲಯಾಳಂಗೆ ಟೋಬಿ

    ಮಲಯಾಳಂಗೆ ಟೋಬಿ

    ರಾಜ್ ಬಿ.ಶೆಟ್ಟಿ ಅಭಿನಯದ ಟೋಬಿ ಚಿತ್ರ ಇಲ್ಲಿ ಗೆದ್ದಾಯ್ತು. ಇದೀಗ ಕೇರಳಕ್ಕೆ ಹೊರಟಿದೆ. ಆಗಸ್ಟ್ 25ರಂದು ರಿಲೀಸ್ ಆದ ಟೋಬಿ, ಈಗಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಟೋಬಿಯಾಗಿ ರಾಜ್ ಬಿ.ಶೆಟ್ಟಿ, ಚೈತ್ರಾ ಅಚಾರ್, ಸಂಯುಕ್ತ ಹೊರನಾಡು ನಟನೆಗೆ ಪ್ರೇಕ್ಷಕರು ಥ್ರಿಲ್ಲಾಗಿ ಹೋಗಿದ್ದಾರೆ. ಈ ನಡುವೆಯೇ ಟೋಬಿಯನ್ನು ಮಲಯಾಳಂನಲ್ಲಿ ರಿಲೀಸ್ ಮಾಡುವುದಕ್ಕೆ ಟೋಬಿ ಟೀಂ ಸಜ್ಜಾಗಿದೆ. ಸಿನಿಮಾದ ಮಲಯಾಳಂ ಪೋಸ್ಟರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನದ ಮಾಹಿತಿಯೂ ಪೋಸ್ಟರ್ನಲ್ಲಿದೆ.

    ಮಲಯಾಳಂನಲ್ಲಿ ‘ಟೋಬಿ’ ಸಿನಿಮಾ ಇದೇ ತಿಂಗಳು 22ಕ್ಕೆ ಬಿಡುಗಡೆ ಆಗಲಿದೆ. ರಾಜ್ ಬಿ ಶೆಟ್ಟಿ ಈಗಾಗಲೇ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಅಲ್ಲದೆ ಅವರ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಈಗ ‘ಟೋಬಿ’ ಸಿನಿಮಾವನ್ನು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಬಾಸಿಲ್ ನಿರ್ದೇಶನದ ಟೋಬಿಗೆ ಕಥೆ ಟಿಕೆ ದಯಾನಂದ್ ಅವರದ್ದಾದರೆ, ಚಿತ್ರಕಥೆ ರಾಜ್ ಬಿ.ಶೆಟ್ಟಿಯವರದ್ದು. ನಿರ್ಮಾಪಕರೂ ಅವರೇ.

  • ಮೂಗುತಿ ಅಲ್ಲ..ಬಳೆಯನ್ನೇ ತೊಟ್ಟು ಬಂದ ಟೋಬಿ

    ಮೂಗುತಿ ಅಲ್ಲ..ಬಳೆಯನ್ನೇ ತೊಟ್ಟು ಬಂದ ಟೋಬಿ

    ಹೆಚ್ಚೂ ಕಡಿಮೆ ಬಳೆಯೇ. ಆದರೆ ಧರಿಸಿರುವುದು ಮಾತ್ರ ಮೂಗಿನಲ್ಲಿ. ಮೂಗುತಿಯಂತೆ. ಬಳೆಯನ್ನೇ ಮೂಗುತಿಯಂತೆ ಧರಿಸಿರುವ ರಾಜ್ ಬಿ.ಶೆಟ್ಟಿ, ಮುಖದ ಮೇಲೆಲ್ಲ ರಕ್ತಸಿಕ್ತ ಗಾಯಗಳ ಗುರುತುಗಳ ಜೊತೆ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಇದು ಟೋಬಿಯ ಫಸ್ಟ್ ಪೋಸ್ಟರ್. ಇತ್ತೀಚೆಗೆ ಒಂದು ಪೋಸ್ಟರ್ ಈ ಪರಿ ಅಚ್ಚರಿ ಹುಟ್ಟಿಸಿದ್ದು ಅಪರೂಪ.

    ನಾನು ಮೊದಲಿಂದಲೂ ಉಪೇಂದ್ರರನ್ನು ನೋಡುತ್ತಲೇ ಬಂದವನು. ಅವರ ಎ, ಉಪೇಂದ್ರ ಚಿತ್ರಗಳ ಪೋಸ್ಟರ್`ಗಳು ವಿಭಿನ್ನವಾಗಿದ್ದವು. ಅದೇ ರೀತಿಯಲ್ಲಿ ವಿಭಿನ್ನವಾಗಿ ಪೋಸ್ಟರ್ ಬರಬೇಕು ಎಂದು ಪೋಸ್ಟರ್ ಸಿದ್ಧ ಪಡಿಸಿದೆವು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಹಾಗಂತ ಇಡೀ ಚಿತ್ರದುದ್ದಕ್ಕೂ ಈ ಉಂಗುರ ಧರಿಸಿರುವುದಿಲ್ಲ. ಚಿತ್ರದ ಬಹುಮುಖ್ಯ ಸೀನ್`ಗಳಲ್ಲಿ ಈ ರೀತಿಯ ಗೆಟಪ್ ಬರುತ್ತೆ ಅನ್ನೋ ರಾಜ್ ಬಿ.ಶೆಟ್ಟಿ, ಉಳಿದಂತೆ ಕಥೆಯ ಗುಟ್ಟು ಬಿಟ್ಟು ಕೊಡುವುದಿಲ್ಲ.

    ಟೋಬಿಗೆ ರಾಜ್ ಬಿ.ಶೆಟ್ಟಿ ಹೀರೋ ಮತ್ತು ಪ್ರೊಡ್ಯೂಸರ್. ಆದರೆ ಡೈರೆಕ್ಟರ್ ಬಾಸಿಲ್. ಕಥೆ ಟಿ.ಕೆ.ದಯಾನಂದ್ ಅವರದ್ದು. ರಾಜ್ ಬಿ.ಶೆಟ್ಟಿ ಎದುರು ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ನಾಯಕಿಯರಾಗಿದ್ದಾರೆ. ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗುತ್ತಿದೆ.

  • ಯಾರಿವನು ಟೋಬಿ.. ಏನಿವನ ಸ್ಪೆಷಲ್..

    ಯಾರಿವನು ಟೋಬಿ.. ಏನಿವನ ಸ್ಪೆಷಲ್..

    ಟೋಬಿ. ಆತ ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳದ ವ್ಯಕ್ತಿ. ಒಳ್ಳೆಯವನು ಮತ್ತು ಕೆಟ್ಟವನೂ ಕೂಡ. ಆ ಕೆಟ್ಟತನ ಒಳ್ಳೆತನ ಸರಳವಾಗಿ ಬಂದಾಗ ಮುಗ್ಧವಾಗಿ ಕಾಣಿಸುತ್ತೆ. ಅದರಲ್ಲೊಂದು ಕ್ಯೂಟ್ನೆಸ್ ಇರುತ್ತೆ. ನಮ್ಮೆಲ್ಲರಲ್ಲೂ ಒಬ್ಬ ಟೋಬಿ ಇರ್ತಾನೆ. ಕೆಲವೊಮ್ಮೆ ಕಳ್ಕೊಂಡಿರ್ತೀವಿ. ಕೆಲವು ಕಡೆ ಉಳಿಸಿಕೊಂಡಿರ್ತೀವಿ. ಇನ್ನೊಂದಿಷ್ಟು ಜನರಲ್ಲಿ ಆತ ಮಲಕ್ಕೊಂಡಿರ್ತಾನೆ. ಮಗು ಇರುವೆಯನ್ನು ಚುಚ್ಚಿ ಸಾಯಿಸುತ್ತೆ. ಅದು ಕ್ರೌರ್ಯ. ಆದರೆ ಮಗುವಿಗೆ ಅದು ಕ್ರೌರ್ಯ ಅಂತ ಗೊತ್ತಿಲ್ಲ. ಇರುವೆ ಕಾಣಿಸದಿದ್ದರೆ ಮಗು ಕ್ಯೂಟ್. ಅದು ಟೋಬಿ. ಅವನಲ್ಲಿರುವ ಮಗು ನನಗೆ ಇಷ್ಟ. ಹೀಗೆ ತಮ್ಮ ಟೋಬಿಯನ್ನು ಟೋಬಿಯ ವ್ಯಕ್ತಿತ್ವವನ್ನು ರಿವೀಲ್ ಮಾಡಿದ್ದಾರೆ ರಾಜ್ ಬಿ.ಶೆಟ್ಟಿ.

    ನಾನು ಎಷ್ಟೇ ಕ್ರೂರಿಗಳಾದರೂ ನಮಗೆ ನಾವು ತುಳಿತಕ್ಕೊಳಗಾದವರು ಅಂತ ಅನಿಸುತ್ತಾ ಇರುತ್ತೆ. ಆದರೆ ನಾವೇ ತುಳೀತಾ ಇರ್ತೀವಿ. ಅದು ಹೇಗೆ ಅನ್ನೋದು ಸಿನಿಮಾದಲ್ಲಿ ಗೊತ್ತಾಗುತ್ತೆ ಎಂದೆಲ್ಲ ಹೇಳುವ ರಾಜ್ ಬಿ.ಶೆಟ್ಟಿ, ನಾವು ಏನು ಮಾಡೋದಿಲ್ವೋ.. ಅದನ್ನು ಟೋಬಿ ಮಾಡ್ತಾನೆ. ಹಾಗೆ ಮಾಡ್ಬೇಕಿತ್ತು ಅಂತಾ ಅಂದ್ಕೋತೀವಿ, ಆದರೆ ಮಾಡೋದಿಲ್ವಲ್ಲ.. ಅದನ್ನು ಮಾಡ್ತಾನೆ. ಅವನು ಹೀರೋಯಿನ್ ಜೊತೆ ಡ್ಯಾನ್ಸ್ ಮಾಡಲ್ಲ. ಅವನನ್ನು ಮನೆಯೊಳಗೆ ಸೇರಿಸಿಕೊಳ್ಳದೇ ಇದ್ದರೂ, ಹೃದಯದೊಳಕ್ಕೆ ಸೇರಿಸಿಕೊಳ್ಳ ಬಹುದಾದ ವ್ಯಕ್ತಿ ಮತ್ತು ವ್ಯಕ್ತಿತ್ವ ಟೋಬಿಯದ್ದು.

    ಕುತೂಹಲ ಹೆಚ್ಚಾಯ್ತಾ.. ಬಾಸಿಲ್ ನಿರ್ದೇಶನದ ಟೋಬಿ ಈಗಾಗಲೇ ಥಿಯೇಟರುಗಳಲ್ಲಿದೆ. ರಾಜ್ ಬಿ.ಶೆಟ್ಟಿ ಹೀರೋ ಕಂ ಪ್ರೊಡ್ಯೂಸರ್. ಕಥೆ ಬೆಲ್`ಬಾಟಂ ಖ್ಯಾತಿಯ ಟಿ.ಕೆ.ದಯಾನಂದ್ ಅವರದ್ದು. ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್ ಹೀರೋಯಿನ್. ಉಳಿದಂತೆ..

  • ರಾಜ್ ಬಿ.ಶೆಟ್ಟಿಯ ಟೋಬಿ ಚಿತ್ರದ ಬಜೆಟ್ ಎಷ್ಟು..?

    ರಾಜ್ ಬಿ.ಶೆಟ್ಟಿಯ ಟೋಬಿ ಚಿತ್ರದ ಬಜೆಟ್ ಎಷ್ಟು..?

    ರಾಜ್ ಬಿ.ಶೆಟ್ಟಿ ಕಡಿಮೆ ಬಜೆಟ್ಟಿನ, ವಿಭಿನ್ನ ಕಥೆಯ ಚಿತ್ರಗಳಿಗೆ ಫೇಮಸ್. ಅವರ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಚಿತ್ರಗಳ ಮೂಲಕ ಅದನ್ನು ಸಾಬೀತೂ ಮಾಡಿದ್ದಾರೆ. ಆದರೆ ಈ ಬಾರಿ ಅವರ ಹೊಸ ಚಿತ್ರದ ಬಜೆಟ್ ಜಾಸ್ತಿಯಾಗಿದೆಯಂತೆ. ಇತ್ತೀಚೆಗೆ ತಾನೇ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನೂ ಕೂಡಾ ಕಡಿಮೆ ಬಜೆಟ್ಟಿನಲ್ಲಿಯೇ ಪೂರೈಸಿದ್ದ ರಾಜ್ ಬಿ.ಶೆಟ್ಟಿ, ಇದೀಗ ತಾವೇ ಹೀರೋ ಆಗಿರುವ, ನಿರ್ಮಾಪಕರಾಗಿರುವ ಟೋಬಿ ಚಿತ್ರಕ್ಕೆ ಬಜೆಟ್ ಹೆಚ್ಚು ಮಾಡಿಕೊಂಡಿದ್ದಾರಂತೆ.

    ಒಂದೆಡೆ ಮಲಯಾಳಂನಲ್ಲಿ ರುಧಿರ ಚಿತ್ರದಲ್ಲಿ ನಟಿಸುತ್ತಿರುವ ರಾಜ್ ಬಿ.ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಟೋಬಿ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ರಾಜ್, ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ಟೀಮಿನಲ್ಲಿದ್ದ ಬಾಸಿಲ್ ಅವರಿಗೆ ವಹಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿಗೆ ಇಬ್ಬರು ನಾಯಕಿಯರಿದ್ದಾರೆ ಎನ್ನುವ ಮಾಹಿತಿ ಇದೆ. ಸಂಯುಕ್ತ ಹೊರನಾಡು ಹಾಗೂ ಚೈತ್ರ ಬಿ.ಆಚಾರ್ ರಾಜ್ ಎದುರು ನಾಯಕಿಯರಾಗಿ ನಟಿಸುತ್ತಿದ್ದಾರಂತೆ. ಸಂಯುಕ್ತ ಹೊರನಾಡು ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ವಿಭಿನ್ನ ಪಾತ್ರಗಳಿಗೆ ಸೂಟ್ ಆಗುವ, ಚಾಲೆಂಜಿಂಗ್ ಪಾತ್ರಗಳನ್ನೇ ಅರಸುವ ಹುಡುಗಿ. ಇತ್ತೀಚಿನ ಲವ್ ಬಡ್ರ್ಸ್ ಚಿತ್ರದಲ್ಲಿ ನಾಯಕ-ನಾಯಕಿಯರನ್ನೂ ಮೀರಿಸುವಂತೆ ನಟಿಸಿದ್ದವರು. ಇನ್ನು ಚೈತ್ರ ಬಿ.ಆಚಾರ್ ಇತ್ತೀಚೆಗೆ ಗಿಲ್ಕಿ ಚಿತ್ರದ ಮೂಲಕ ಗಮನ ಸೆಳೆದಿದ್ದವರು. ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆಯೆಲ್ಲೋ.. ಚಿತ್ರದಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

  • ಸಾವಿತ್ರಿ..ಜೆನ್ನಿಯ ನಡುವೆ ಟೋಬಿಯ ಕಥೆ ಏನು?

    toby actor raj ba shetty image

    ಆಕೆ ಸಾವಿತ್ರಿ.. ಅವಳು ಜೆನ್ನಿ.. ಅವರಿಬ್ಬರ ನಡುವೆ ಟೋಬಿ.. ಸಾವಿತ್ರಿ ಪಾತ್ರದಲ್ಲಿ ನಟಿಸಿರೋದು ಸಂಯುಕ್ತ ಹೊರನಾಡು. ಈ ಪಾತ್ರದಲ್ಲಿ ಸಂಯುಕ್ತಾ ತಾವು ಹೇಗಿದ್ದಾರೋ.. ಹಾಗೆಯೇ ನಟಿಸಿದ್ದಾರೆ. ಅದೊಂದು ಸೇಡು ತೀರಿಸಿಕೊಳ್ಳೋ ಕಥೆ. ಅಲ್ಲಿ ಸಾವಿತ್ರಿಯದ್ದೇನು ಕೆಲಸ.. ಟ್ರೇಲರ್ ನೋಡಿದವರಿಗೆ ಅಲ್ಲೊಂದು ಲವ್ ಸ್ಟೋರಿ ಇರಬಹುದೆನ್ನುವ ಸೂಚನೆ ಸಿಕ್ಕಿದೆ.

    ಇನ್ನು ಜೆನ್ನಿಯಾಗಿ ನಟಿಸಿರೋದು ಚೈತ್ರಾ ಆಚಾರ್. ಅಪ್ಪಟ ಉತ್ತರ ಕನ್ನಡದ ಟಿಪಿಕಲ್ ಒರಟು ಹುಡುಗಿ. ಜಗಳಗಂಟಿ. ಜಗಳದಲ್ಲೇ ಪ್ರೀತಿಯನ್ನು ತೋರಿಸುವ ಪಾತ್ರವದು.

    ಇವರಿಬ್ಬರ ಮಧ್ಯೆ ಟೋಬಿ ಮೌನಿಯಾಗಿ..ರಾಕ್ಷಸನಾಗಿ..ಮುಗ್ಧನಾಗಿ.. ಅವತಾರ ಎತ್ತುತ್ತಾನೆ. ವಿಭಿನ್ನ ಶೇಡ್‍ಗಳು ಗಮನ ಸೆಳೆಯುತ್ತಿವೆ. ಚಿತ್ರದ ರಿಲೀಸ್ ಹತ್ತಿರವಾದಂತೆ ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚುತ್ತಿದೆ.

    ರಾಜ್ ಬಿ.ಶೆಟ್ಟಿಯವರೇ ಕಥೆ ಬರೆದು, ನಿರ್ಮಾಣ ಮಾಡಿರುವ ಚಿತ್ರಕ್ಕೆ ಅವರದ್ದೇ ತಂಡದ ಬಾಸಿಲ್ ಡೈರೆಕ್ಟರ್.

  • ಹಿಟ್ ಕೊಟ್ರು.. ಗ್ರೇಟ್ ಆದ್ರು ರಾಜ್ ಬಿ.ಶೆಟ್ಟಿ

    ಹಿಟ್ ಕೊಟ್ರು.. ಗ್ರೇಟ್ ಆದ್ರು ರಾಜ್ ಬಿ.ಶೆಟ್ಟಿ

    ಟೋಬಿ ಸಿನಿಮಾ ರಿಲೀಸ್ ಆಗಿ ಸಖತ್ ಕಲೆಕ್ಷನ್ ಮಾಡುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುವುದು ನಿಜವಾದರೂ, ಮೆಚ್ಚಿದವರ ಸಂಖ್ಯೆಯೇ ಹೆಚ್ಚು. ನೆಗೆಟಿವ್ ಪ್ರಚಾರಕ್ಕೆ ಕಾರಣವಾಗಿದ್ದು ಅದೊಂದು ವೈರಲ್ ವಿಡಿಯೋ. ಆದರೆ ಅದನ್ನು ಹೊರತುಪಡಿಸಿದರೆ ಟೋಬಿಯ ಕಲೆಕ್ಷನ್ ಬೊಂಬಾಟ್ ಆಗಿದೆ.

    ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆಯೇ ಸೇಫ್ ಆಗಿದ್ದ ರಾಜ್ ಬಿ.ಶೆಟ್ಟಿ ಈಗ ಭರ್ಜರಿ ಲಾಭದಲ್ಲಿದ್ದಾರೆ. ಚಿತ್ರವನ್ನು ಚೆನ್ನಾಗಿಲ್ಲ ಎಂದು ಯುವತಿಯೊಬ್ಬಳು ಹೇಳಿದ್ದಕ್ಕೆ ಬಾಯಿಗೆ ಬಂದಂತೆ ಬೈದಿದ್ದ ಯುವಕನಿಗೆ ನೆಟ್ಟಿಗರು ಕ್ಲಾಸ್ ತಗೊಂಡಿದ್ದರು. ಆ ಘಟನೆಗೆ ಖುದ್ದು ರಾಜ್ ಬಿ.ಶೆಟ್ಟಿ ಹಾಗೂ ಕಥೆಗಾರ ಟಿಕೆ ದಯಾನಂದ್ ಕ್ಷಮೆ ಕೇಳುವ ಮೂಲಕ ಗ್ರೇಟ್ ಆಗಿದ್ದಾರೆ.

    ರಾಜ್ ಬಿ.ಶೆಟ್ಟಿಯವರ ವರ್ತನೆಗೆ ಶಹಬ್ಬಾಸ್ ಹೇಳುತ್ತಿರುವ ನೆಟ್ಟಿಗರೇ ಚಿತ್ರಮಂದಿರಕ್ಕೆ ಬಂದ ಜನ ಖುಷಿಯಾಗಿರುವುದನ್ನೂ ಹೇಳುತ್ತಿರುವುದು ವಿಶೇಷ. ಚಿತ್ರ ನೋಡಿದವರೆಲ್ಲರಿಗೂ ಸಿನಿಮಾ ಇಷ್ಟವಾಗಲೇಬೇಕೆಂದೇನಿಲ್ಲ. ಆದರೆ ಅವರ ಅಭಿಪ್ರಾಯ ಹೇಳುವುದಕ್ಕೆ ಅವರು ಸ್ವತಂತ್ರರೂ ಎನ್ನುವುದೂ ನಿಜ.

    ಇಂಡಸ್ಟ್ರಿ ಹಿಟ್, ಕ್ಲಾಸಿಕ್ ಚಿತ್ರಗಳ ಬಗ್ಗೆಯೂ ನೆಗೆಟಿವ್ ಕಮೆಂಟ್ ಕೇಳಿ ಬಂದಿವೆ. ಆದರೆ ಟೀಕೆಯನ್ನು ಟೀಕೆಯಾಗಿ ಸ್ವೀಕರಿಸುವುದರಲ್ಲೇ ಗ್ರೇಟ್`ನೆಸ್ ಕೂಡಾ ಇದೆ. ಟೋಬಿ ತಂಡ ಮಾಡಿದ್ದೂ ಅದನ್ನೇ. ರಾಜ್ ಬಿ.ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತ ಹೊರನಾಡು ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಮಾತನಾಡದೆಯೇ ಮೋಡಿ ಮಾಡಿದ್ದಾರೆ ರಾಜ್ ಬಿ.ಶೆಟ್ಟಿ.

  • ಹೇಗೆ ನಡೀತಿದೆ ಟೋಬಿ ಪ್ರಚಾರ : ಇಂದು ಪ್ರೀಮಿಯರ್ ಶೋ

    ಹೇಗೆ ನಡೀತಿದೆ ಟೋಬಿ ಪ್ರಚಾರ : ಇಂದು ಪ್ರೀಮಿಯರ್ ಶೋ

    ಟೋಬಿ ಚಿತ್ರದ ಪ್ರಚಾರವೂ ಜೋರು. ಸಂಚಲನವೂ ಜೋರು. ನಾಳೆ ಬಿಡುಗಡೆಯಾಗುತ್ತಿರುವ ಟೋಬಿಗೆ ಜನ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಪ್ರೀಮಿಯರ್ ಶೋ ಇದೆ. ರಾಜ್ ಬಿ ಶೆಟ್ಟಿ ಮತ್ತು ತಂಡ ಒಂದು ತಿಂಗಳ ಕಾಲ ಕರ್ನಾಟಕದಾದ್ಯಂತ ಸುತ್ತಾಡಿ ಟೋಬಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದೆ. ಆದ್ದರಿಂದ ಎಲ್ಲಾ ಕಡೆ ಸಿನಿಮಾ ಪ್ರೇಕ್ಷಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಸಿನಿಮಾ ನೋಡುವ ಅವಕಾಶವನ್ನು ಒದಗಿಸಲು ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ.

    ರಾಜ್ ಬಿ.ಶೆಟ್ಟಿಯವರದ್ದೇ ಕಥೆ ಇದ್ದು, ಅವರದ್ದೇ ತಂಡದಲ್ಲಿದ್ದ ಬಾಸಿಲ್ ನಿರ್ದೇಶಕರಾಗಿದ್ದಾರೆ. ಸಂಯುಕ್ತ ಹೊರನಾಡು, ಚೈತ್ರಾ ಕೊಟೂರು ನಾಯಕಿಯರು. ಇನ್ನು ರಾಜ್ ಬಿ.ಶೆಟ್ಟಿ ತಂಡದ ಖಾಯಂ ಸದಸ್ಯರಾಗಿರುವ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಹಾಗೂ ಸಿನಿಮಾಟೊಗ್ರಫರ್ ಹಾಗೂ ಎಡಿಟರ್ ಪ್ರವೀಣ್ ಶಿಯಾನ್. ಮಿದುನ್ ಹಾಗೂ ಪ್ರವೀಣ್  ಇಲ್ಲೂ ಇದ್ದಾರೆ.

    ಚಿತ್ರತಂಡ ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರವಾಸವನ್ನು ಮುಗಿಸಿಕೊಂಡು ಬಂದಿದೆ. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಮೊದಲಾದ ಕಡೆಯಲ್ಲೆಲ್ಲ ಪ್ರವಾಸ ಮುಗಿಸಿಕೊಂಡು ಬಂದಿದೆ. ಆ ಮೂಲಕ ಉತ್ತರ ಕರ್ನಾಟಕಕ್ಕೂ ಲಗ್ಗೆಯಿಡುವ ಪ್ಲಾನ್ ಮಾಡಿದ್ದಾರೆ ರಾಜ್ ಬಿ.ಶೆಟ್ಟಿ. ರಾಜ್ ಬಿ ಶೆಟ್ಟಿ ಮತ್ತು ತಂಡ ಒಂದು ತಿಂಗಳ ಕಾಲ ಕರ್ನಾಟಕದಾದ್ಯಂತ ಸುತ್ತಾಡಿ ಟೋಬಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದೆ

    ಆಗಸ್ಟ್ 25ಕ್ಕೆ 175ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ಗಳು ಮತ್ತು 60ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  • ಹೊಸ ಪ್ರೇಕ್ಷಕರ ಹುಡುಕಾಟ : ಟೋಬಿಯ ವಿಭಿನ್ನ ಪ್ರಮೋಷನ್

    ಹೊಸ ಪ್ರೇಕ್ಷಕರ ಹುಡುಕಾಟ : ಟೋಬಿಯ ವಿಭಿನ್ನ ಪ್ರಮೋಷನ್

    ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ.. ಚಿತ್ರಗಳ ಮೂಲಕ ಕನ್ನಡಕ್ಕೆ ಬೇರೆಯದೇ ಟಚ್ ಕೊಟ್ಟ ರಾಜ್ ಬಿ.ಶೆಟ್ಟಿ, ಈಗ ಟೋಬಿಯಾಗಿದ್ದಾರೆ. ಚಿತ್ರದ ಪ್ರಮೋಷನ್ ಭರ್ಜರಿಯಾಗಿದೆ. ವಿಶೇಷವೆಂದರೆ, ಸದ್ಯಕ್ಕೆ ಟೋಬಿಯ ಪ್ರಚಾರ ಸಾಫ್ಟ್`ವೇರ್ ವಲಯದಲ್ಲಾಗುತ್ತಿರುವುದು. ಸಾಫ್ಟ್`ವೇರ್ ಉದ್ಯೋಗಿಗಳೇನೂ ಬೇರೆ ಭಾಷೆಯವರಲ್ಲ, ಕನ್ನಡದವರೇ. ಅಂತಹವರನ್ನು ಕನ್ನಡ ಸಿನಿಮಾಗಳಿಗೆ ಥಿಯೇಟರಿಗೆ ಕರೆದು ತರುವ ಪ್ರಯತ್ನಗಳು ಇತ್ತೀಚೆಗೆ ಜೋರಾಗಿಯೇ ನಡೆಯುತ್ತಿವೆ. ಟೋಬಿ ಟೀಂ, ಇನ್ಫೋಸಿಸ್ ಕಚೇರಿಯಲ್ಲಿ ಮತ್ತೊಮ್ಮೆ ಫಸ್ಟ್ ಲುಕ್ ಪ್ರದರ್ಶನ ಮಾಡಿ ಪ್ರಚಾರ ಮಾಡಿದ್ದಾರೆ.

    ಸಾಫ್ಟ್ವೇರ್ ಇಂಜಿನಿಯರ್ಗಳು ಕೂಡ ಟೋಬಿಯನ್ನು ನೋಡಿ ಶಿಳ್ಳೆ ಹಾಕಿದ್ದಾರೆ. ರಾಜ್ ಬಿ ಶೆಟ್ಟಿ ಅವರೊಂದಿಗೆ ವೇದಿಕೆ ಮೇಲೆ ಹುಲಿ ಹೆಜ್ಜೆ ಹಾಕಿದ್ದಾರೆ. ಕೆಲಸದ ಒತ್ತಡದಲ್ಲಿದ್ದ ಇಂಜಿನಿಯರ್ಗಳಿಗೆ ಶೆಟ್ಟರು ಎಂಟ್ರಿ ರಿಲೀಫ್ ಸಿಕ್ಕಂತಾಗಿದೆ. ಚಿತ್ರದ ಹೀರೋ ಹೆಸರೇ ಟೋಬಿ. ಟೋಬಿ ಅಂದ್ರೆ ಏನರ್ಥ.. ಇಷ್ಟಕ್ಕೂ ಆ ಕ್ಯಾರೆಕ್ಟರ್ ಹಾಗೆ ಇರೋದೇಕೆ ಎಂಬೆಲ್ಲ ಪ್ರಶ್ನೆಗಳಿಗೆ ರಾಜ್ ಬಿ.ಶೆಟ್ಟಿ ಥಿಯೇಟರಿನಲ್ಲಿ ಉತ್ತರ ಕೊಡುವ ಭರವಸೆ ಕೊಟ್ಟಿದ್ದಾರೆ.

    ಇನ್ಫೋಸಿಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ ಬಿ.ಶೆಟ್ಟಿ ಜೊತೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ಕೂಡಾ ಇದ್ದರು. ಬಾಸಿಲ್ ನಿರ್ದೇಶನದ ಟೋಬಿ, ಆಗಸ್ಟ್ 25ರಂದು ರಿಲೀಸ್ ಆಗುತ್ತಿದೆ.