` kd, - chitraloka.com | Kannada Movie News, Reviews | Image

kd,

  • ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಕ್ರೇಜ್ ಹೆಚ್ಚಿಸಿದ ಪ್ರೇಮ್

    ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಕ್ರೇಜ್ ಹೆಚ್ಚಿಸಿದ ಪ್ರೇಮ್

    ಡೈರೆಕ್ಟರ್ ಪ್ರೇಮ್. ಏನೇ ಮಾಡಿದರೂ ಕ್ರೇಜ್ ಸೃಷ್ಟಿಸೋದ್ರಲ್ಲಿ ಸದಾ ಮುಂದು. ಮೊತ್ತ ಮೊದಲ ಸಿನಿಮಾ ಕರಿಯ ಚಿತ್ರದಿಂದ ಹಿಡಿದು ಇತ್ತೀಚಿನ ಏಕ್ ಲವ್ ಯಾ ವರೆಗೆ ಸಾಬೀತು ಮಾಡಿದ್ದಾರೆ. ಗೆದ್ದೂ ಇದ್ದಾರೆ. ಈಗ ಕೆಡಿ ಮಾಡುತ್ತಿರೋ ಪ್ರೇಮ್, ಕ್ರೇಜ್ ಸೃಷ್ಟಿಸೋಕೆ ಕ್ರೇಜ್ ಸ್ಟಾರ್‍ನ್ನೇ ಕರೆದು ತಂದಿದ್ದಾರೆ. ರವಿಚಂದ್ರನ್ ಚಿತ್ರಗಳನ್ನೇ ನೋಡಿಕೊಂಡು ಅವರಂತೆಯೇ ಡೈರೆಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಪ್ರೇಮ್ ಅವರಿಗೆ ಇದು ದೊಡ್ಡ ಸಾಧನೆಯಂತೂ ಹೌದು.

    ಕೆಡಿ ಚಿತ್ರದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ಫಸ್ಟ್ ಲುಕ್ ಹೊರಬಿದ್ದಿದೆ. ಪೋಸ್ಟರ್ ಡಿಫರೆಂಟ್ ಆಗಿದೆ. ಇನ್ನು ಪಾತ್ರಕ್ಕೆ ಇಟ್ಟಿರುವ ಹೆಸರು ಅಣ್ಣಯ್ಯಪ್ಪ, ಅಣ್ಣಯ್ಯ ಚಿತ್ರವನ್ನು ನೆನಪಿಸಿದರೆ ಅಚ್ಚರಿಯೇನಿಲ್ಲ. ಆ ನೆನಪಾಗಲಿ ಎಂದೇ ಪಾತ್ರಕ್ಕೆ ಆ ಹೆಸರು ಇಟ್ಟಿದ್ದರೂ ಇರಬಹುದು.

    ಕೆಡಿ ಚಿತ್ರದಲ್ಲಿ 70ರ ದಶಕದ ನಟೋರಿಯಸ್ ರೌಡಿಯೊಬ್ಬನ ಕಥೆಯಿದೆ. ಇತ್ತೀಚೆಗೆ ರಿಲೀಸ್ ಮಾಡಿದ್ದ ಟೈಟಲ್ ಟೀಸರ್‍ನಲ್ಲಿ ವ್ಯಕ್ತಿಯೊಬ್ಬನನ್ನು ಮೂಟೆ ಕಟ್ಟಿಕೊಂಡು ಬರುತ್ತಿದ್ದ ಧ್ರುವ ಸರ್ಜಾರನ್ನು ತೋರಿಸಲಾಗಿತ್ತು. ಚಿತ್ರದಲ್ಲಿ ಈಗಾಗಲೇ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ.

    ಈ ಸಿನಿಮಾಗೆ 75ರಲ್ಲಿ ನಡೆದಿದ್ದ ಕೆಲವು ನೈಜ ಘಟನೆಗಳೇ ಸ್ಫೂರ್ತಿ. ಅದಕ್ಕೆ ಕಮರ್ಷಿಯಲ್ ಟಚ ಕೊಟ್ಟಿದ್ದೇವೆ. ಆಗಿನ ಕಾಲದ ಮಾತಿನ ಸ್ಟೈಲ್ ಕೂಡಾ ಹಾಗೇ ಇರುತ್ತದೆ. ಸೆನ್ಸಾರ್ ಇರಲ್ಲ. ಆ ಕಾಲದ ಕೆಲವು ನೈಜ ಹೆಸರುಗಳೂ ಹಾಗೆಯೇ ಇರುತ್ತವೆ. ಇದು ಬೆಂಗಳೂರಿನಲ್ಲಿಯೇ ನಡೆದಿದ್ದ ಕಥೆ. ಕಥೆ ರೋಚಕವಾಗಿರೋ ಕಾರಣದಿಂದಲೇ ಯುದ್ಧದ ಮುನ್ನುಡಿ ಎಂದು ಟ್ಯಾಗ್‍ಲೈನ್ ಇಟ್ಟೆವು ಎಂದಿದ್ದರು ಪ್ರೇಮ್. ಈಗ ಯುದ್ಧದ ಸೈನ್ಯಕ್ಕೆ ಧ್ರುವ, ಸಂಜಯ್ ದತ್ ಜೊತೆ ರವಿಚಂದ್ರನ್ ಕೂಡಾ ಸೇರಿದ್ದಾರೆ.

  • ಕೆಡಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ರಮೇಶ್ ಅರವಿಂದ್

    ಕೆಡಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ರಮೇಶ್ ಅರವಿಂದ್

    ಕೆಡಿ ದ ಡೆವಿಲ್. ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಮೊದಲ ಬಾರಿಗೆ ಜೊತೆಯಾಗಿರುವ ಸಿನಿಮಾ. ಈ ಸಿನಿಮಾದಲ್ಲಿ ಪ್ರೇಮ್ ಅವರು ಸ್ಟಾರ್`ಗಳ ಸೈನ್ಯವನ್ನೇ ತಂದು ಗುಡ್ಡೆ ಹಾಕ್ಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ಇರುವ ಈ ಚಿತ್ರದಲ್ಲೀಗ ರಮೇಶ್ ಅರವಿಂದ್ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅಣ್ಣನಾಗಿ ನಟಿಸುತ್ತಿದ್ದಾರೆ.

    ಈ ವಿಷಯವನ್ನು ಜೋಗಿ ಪ್ರೇಮ್ ಸ್ವತಃ ಬಹಿರಂಗಗೊಳಿಸಿದ್ದು, ಸದ್ಯದಲ್ಲೇ ರಮೇಶ್ ತಮ್ಮ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. 'ಕೆಡಿ' ಚಿತ್ರವು ಸ್ಯಾಂಡಲ್ವುಡ್ ಅಭಿಮಾನಿಗಳಲ್ಲಿ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ ಎನ್ನಬಹುದು. 'ಕೆಡಿ-ದಿ ಡೆವಿಲ್' ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ಮರಳುಗಾಡಿನಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆಯಲ್ಲಿ ನಟಿ ಮರಳಿನ ಜತೆ ಆಟವಾಡುತ್ತ ಎಂಜಾಯ್ ಮಾಡುತ್ತಿದ್ದಾರಂತೆ.  ಮಾರ್ಟಿನ್ ಚಿತ್ರೀಕರಣವೂ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಮಾರ್ಟಿನ್ ಬಿಡುಗಡೆ ನಂತರವೇ ಕೆಡಿ ಬಿಡುಗಡೆ ಎನ್ನಲಾಗಿದೆ.

  • ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಕೆಡಿ ಧ್ರುವ ಸರ್ಜಾಗೆ 6ರ ನಂಬರ್ ಲಕ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 6ನೇ ಸಿನಿಮಾ ಶುರುವಾಗಿದೆ. ಕೆಡಿ. ಒಂದು ಸಿನಿಮಾ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಸೆಟ್ಟೇರಿರುವುದು ಧ್ರುವ ಸರ್ಜಾ ರೆಕಾರ್ಡ್. ಅತ್ತ ಮಾರ್ಟಿನ್ ತಯಾರಾಗುತ್ತಿರುವಾಗಲೇ ಇತ್ತ ಕೆಡಿ ಸೆಟ್ಟೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರೋ ಸಿನಿಮಾ ಕೆಡಿ. ಸಂಜಯ್ ದತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಟೈಟಲ್ ಲಾಂಚ್ ಟೀಸರ್ ರಿಲೀಸ್ ಆಗಿದೆ. ರಾಮಾಯಣ ಹೆಣ್ಣಿಗಾಗಿ.. ಮಹಾಭಾರತ ಮಣ್ಣಿಗಾಗಿ..

    ಈಗ ರಕ್ತಕ್ಕಾಗಿ ಯುದ್ಧ ನಡೆಯುತ್ತೆ ಎನ್ನುವ ಖಡಕ್ ಡೈಲಾಗ್.. ಜೈಲಿಂದ ರಿಲೀಸ್ ಆಗಿ ಬರುವ ಧ್ರುವ ಸರ್ಜಾ.. ಧ್ರುವನನ್ನು ಎತ್ತೋಕೆ ಸಾವಿರ ಜನ.. ಸ್ವಾಗತ ಮಾಡೋಕೆ ಲಕ್ಷ ಜನ.. ಬೆಂಕಿ ಶೂಗಳಲ್ಲಿ ಹೆಜ್ಜೆ ಹೆಜ್ಜೆಯಿಟ್ಟು ಹೋಗುವ ಧ್ರುವ ರೌಡಿಯೊಬ್ಬನನ್ನು ಮೂಟೆಯಲ್ಲಿ ಹಾಕಿಕೊಂಡು ಹೊರಡುವ ದೃಶ್ಯದ ಟೀಸರ್.. ಎಂದಿನಂತೆ ಪ್ರೇಮ್ ಸಖತ್ತಾಗಿಯೇ ಮಾಡಿದ್ದಾರೆ. ಧುವ ಸರ್ಜಾ ಖಡಕ್ ವಾಯ್ಸ್ ಇದೆ.

    ಈ ಸಿನಿಮಾಗಾಗಿ ಪ್ರೇಮ್ ಹಳೇ ಬೆಂಗಳೂರನ್ನು ಮರುಸೃಷ್ಟಿ ಮಾಡಲಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಒಂದನ್ನು ನಿರ್ಮಾಣ ಮಾಡಲಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿರುವ ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಕಥೆ ಬರೆಯಲಾಗಿದ್ದು, ಪ್ರೇಮ್ ಅವರ ಕರಿಯರ್ನಲ್ಲಿ ಬಹಳ ದೊಡ್ಡ ಸಿನಿಮಾ ಇದು ಎನ್ನಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಮ್ ಈಗಾಗಲೇ ಮೋಹನ್ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ ಸೇರಿದಂತೆ ಹಲವು ಕಲಾವಿದರನ್ನು ಭೇಟಿ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ 6 ನನ್ನ ಲಕ್ಕಿ ನಂಬರ್. ಇದು ನನ್ನ 6ನೇ ಸಿನಿಮಾ. ನನ್ನ ಜನ್ಮದಿನವೂ ಆರು. ಅಲ್ಲದೆ ಇನ್ನು ನನ್ನ ಮಗಳು ಹುಟ್ಟಿದ ನಂತರ ಸೆಟ್ಟೇರುತ್ತಿರುವ ಸಿನಿಮಾ. ಕೆವಿಎನ್ ಮತ್ತು ಪ್ರೇಮ್ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ನನ್ನ ಕೆರಿಯರ್‍ನಲ್ಲೇ ಇದು ಅದ್ಧೂರಿ ಚಿತ್ರವಾಗಲಿದೆ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗಾಗಿ ನಾನು ಎಷ್ಟು ಸಮಯ ಬೇಕಾದ್ರೂ ಕೊಡುತ್ತೇನೆ ಎಂದವರು ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ.

    ಸಂಜಯ್ ದತ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೌಥ್ ಸಿನಿಮಾದಲ್ಲಿ ಎನರ್ಜಿ ಇರುತ್ತೆ. ಪ್ರೇಮ್ ಅವರ ತಲೆಯಲ್ಲಿ ಏನಿದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಹೊಸದೇನನ್ನೋ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಇದೆ. ಪ್ರೇಮ್ ಹೇಳಿದಂತೆ ನಟಿಸುತ್ತೇನೆ ಎಂದರು ಸಂಜಯ್ ದತ್. ಧ್ರುವ ಸರ್ಜಾ ಸಂಜಯ್ ದತ್ ಕಾಲುಮುಟ್ಟಿ ಆಶೀರ್ವಾದ ಪಡೆದರು.

    ಅಂದಹಾಗೆ ಎಲ್ಲ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದ್ದು ಒಂದೊಂದು ಭಾಷೆಯ ಟೀಸರ್‍ಗೂ ಒಬ್ಬೊಬ್ಬ ಸ್ಟಾರ್ ವಾಯ್ಸ್ ಕೊಟ್ಟಿದ್ಧಾರೆ. ತಮಿಳಿಗೆ ವಿಜಯ್ ಸೇತುಪತಿ, ಮಲಯಾಳಂಗೆ ಮೋಹನ್ ಲಾಲ್, ಹಿಂದಿಗೆ ಸಂಜಯ್ ದತ್ ವಾಯ್ಸ್ ಕೊಟ್ಟಿದ್ದಾರೆ.

  • ಕೆಡಿ ಶೂಟಿಂಗ್`ನಲ್ಲಿ ಗಾಯ : ಸಂಜಯ್ ದತ್ ಮುಂಬೈಗೆ ವಾಪಸ್

    ಕೆಡಿ ಶೂಟಿಂಗ್`ನಲ್ಲಿ ಗಾಯ : ಸಂಜಯ್ ದತ್ ಮುಂಬೈಗೆ ವಾಪಸ್

    ಕೆಡಿ ಚಿತ್ರದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದೆ. ಬಾಂಬ್ ಬ್ಲಾಸ್ಟ್ ದೃಶ್ಯದ ಚಿತ್ರೀಕರಣ ವೇಳೆ ನಟ ಸಂಜಯ್ ದತ್ ಅವರು ಗಾಯಗೊಂಡಿದ್ದಾರೆ. ದತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡ ಸಂಜಯ್ ದತ್ ಮುಂಬೈಗೆ ವಾಪಸ್ ಆಗಿದ್ದಾರೆ. ದತ್ ಅವರ ಮುಖ, ಮೊಣಕೈಗೆ ಗಾಯಗಳಾಗಿವೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಗಾಯ ಸೀರಿಯಸ್ ಆಗಿಲ್ಲ. ಆದರೆ ತಾತ್ಕಾಲಿಕವಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.

    ಮಾಗಡಿ ರೋಡ್‍ನಲ್ಲಿ ಹಾಕಿರುವ ಸೆಟ್‍ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ದೃಶ್ಯ ಚಿತ್ರೀಕರಣ ವೇಳೆ ಈ ಅಪಘಾತ ಸಂಭವಿಸಿದೆ. 1970ರ ಕಾಲಘಟ್ಟದ ಕಥೆಯಲ್ಲಿ ಸಂಜಯ್ ದತ್ ಪ್ರಮುಖ ವಿಲನ್ ರೋಲ್ ಮಾಡುತ್ತಿದ್ದಾರೆ.

    ಘಟನೆಯ ಬಗ್ಗೆ ಸಂಜಯ್ ದತ್ ನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿ ಹರದಾಡುತ್ತಿದೆ. ಆ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ, ನನಗೆ ಏನೂ ಆಗಿಲ್ಲ ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆಡಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ, ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಚಿತ್ರತಂಡವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    . ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಂಜಯ್ ದತ್ ಶೀಘ್ರವೇ ಮುಂಬೈಗೆ ಸ್ಥಳಾಂತರಿಸಲಾಗಿದ್ದು, ಸಂಜಯ್ ದತ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವಘಡದ ಬಳಿಕ ಶೂಟಿಂಗ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದಿದ್ದಾರೆ ಕೆಡಿ ಸಿನಿಮಾದ ಸಹ ನಿರ್ಮಾಪಕ ಸುಪ್ರೀತ್.

    ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನವರ ಕೆಡಿ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

  • ಚಾಮುಂಡಿ ಬೆಟ್ಟದಲ್ಲಿ ಕೆಡಿ

    ಚಾಮುಂಡಿ ಬೆಟ್ಟದಲ್ಲಿ ಕೆಡಿ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಹೊಸ ಚಿತ್ರ ಕೆಡಿ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಜೋಗಿ ಪ್ರೇಮ್ ನಿರ್ದೇಶನವಾದ ಕಾರಣ ನಿರೀಕ್ಷೆಗಳೋ ಬೆಟ್ಟದಷ್ಟಿವೆ. ರವಿಚಂದ್ರನ್, ಶಿಲ್ಪಾ ಶೆಟ್ಟಿ ಕೂಡಾ ನಟಿಸುತ್ತಿರುವ ಚಿತ್ರದಲ್ಲಿ  ಸಂಜಯ್ ದತ್ ಅವರು  ನಟಿಸುತ್ತಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ಚಿತ್ರೀಕರಣ ನಡುವೆ ಬಿಡುವು ಮಾಡಿಕೊಂಡ ಚಿತ್ರತಂಡದವರು  ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ. ಮಾತೆಯ ದರ್ಶನ ಮಾಡಿ ತುಂಬಾ ಖುಷಿ ಆಯಿತು ಎಂದು ಸಂಜಯ್ ದತ್ ಹೇಳಿದ್ದಾರೆ.

    ಅಲ್ಲದೆ ನಿರ್ದೇಶಕ ಪ್ರೇಮ್ ಅವರನ್ನು ಹಾಡಿ ಹೊಗಳಿದ್ದಾರೆ. ‘ಪ್ರೇಮ್ ಜೊತೆ ಕೆಡಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡುವುದು ನನಗೆ ಇಷ್ಟ. ಪ್ರೇಮ್ ಅವರು ಬೆಸ್ಟ್ ಡೈರೆಕ್ಟರ್ ಎಂದಿರುವ ಸಂಜಯ್ ದತ್, ಒಟ್ಟಾರೆ ಸೌತ್ ಚಿತ್ರಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

  • ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ಹೀರೋಯಿನ್..!

    ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ಹೀರೋಯಿನ್..!

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಿನ ಕೆಡಿ ಚಿತ್ರ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಚಿತ್ರತಂಡಕ್ಕೆ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್, ಬಾಲಿವುಡ್ ಸ್ಟಾರ್ ಸಂಜಯ್ ದತ್, ಶಿಲ್ಪಾಶೆಟ್ಟಿ ಸೇರಿಕೊಂಡಿದ್ದಾರೆ. ಇದೀಗ ಹೀರೋಯಿನ್ ಆಯ್ಕೆಯೂ ಫೈನಲ್ ಆಗಿದ್ದು, ರೀಷ್ಮಾ ನಾಣಯ್ಯ ನಾಯಕಿ ಎಂಬ ಸುದ್ದಿ ಜೋರಾಗಿದೆ.

    ಕನ್ನಡದ ನಟಿನೇ ಧ್ರುವಗೆ ನಾಯಕಿಯಾಗಬೇಕು ಎಂದು ಚಿತ್ರತಂಡ ಮೊದಲೇ ಯೋಚಿಸಿತ್ತು. ಅದರಂತೆಯೇ ಕನ್ನಡದ ನಟಿ ರೀಷ್ಮಾನೇ ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಆಯ್ಕೆ ಮಾಡಲಾಗಿದೆ. ʻಕೆಡಿʼ ಸಿನಿಮಾದಲ್ಲಿ ರೆಟ್ರೋ ಕಥೆಯಿದ್ದು, ರೆಟ್ರೋ ಲುಕ್ನಲ್ಲಿ ರೀಷ್ಮಾ ನಾಣಯ್ಯ ಮಿಂಚಲಿದ್ದಾರೆ. ಈ ಮೊದಲು ಶ್ರೀಲೀಲಾ ನಾಯಕಿ ಎಂದು ಸುದ್ದಿಯಾಗಿತ್ತು. ಆದರೆ ಈಗ ಕೊಡಗಿನ ಕುವರಿ ರೀಷ್ಮಾ ನಾಯಕಿ ಎಂದು ಹೇಳಲಾಗುತ್ತಿದೆ.

    ರೀಷ್ಮಾ ನಾಣಯ್ಯ ಅವರು ಪ್ರೇಮ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ ಸುಂದರಿ. ಉಪೇಂದ್ರ ಜೊತೆ ಯುಐ ಹಾಗೂ ಗಣೇಶ್ ಜೊತೆ ಬಾನ ದಾರಿಯಲಿ ಚಿತ್ರದಲ್ಲಿ ನಟಿಸುತ್ತಿರುವ ರೀಷ್ಮಾ ನಾಣಯ್ಯ, ಈಗ ಭರ್ಜರಿ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ.

  • ಧ್ರುವ-ಪ್ರೇಮ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ

    ಧ್ರುವ-ಪ್ರೇಮ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ

    ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ಟೈಟಲ್ ಲಾಂಚ್ ಟೀಸರ್ ಸಖತ್ತಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಬ್ಯಾನರ್‍ನಲ್ಲಿ ಬರುತ್ತಿರುವ ಕೆಡಿಯಲ್ಲಿ ಸಂಜಯ್ ದತ್ ಕೂಡಾ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಟೀಸರ್ ಮಾತ್ರ ಬೊಂಬಾಟ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಡಿ ದ ಡೆವಿಲ್ ಅನ್ನೋದು ಚಿತ್ರದ ಟೈಟಲ್.

    60ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ ರೌಡಿ ಕಾಳಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ದಾಖಲೆಯೆಂದರೆ ಚಿತ್ರದ ರೈಟ್ಸ್ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಸೇಲ್ ಆಗಿರುವುದು.

    ಹಿಂದಿಯಲ್ಲಿ ಅನಿಲ್ ತಡಾನಿ, ತೆಲುಗಿನಲ್ಲಿ ಸಾಯಿ ಕೊರಪ್ಪಾಟೆ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಅನಿಲ್ ತಡಾನಿ ಕೆಜಿಎಫ್, ಕಾಂತಾರ ಚಿತ್ರಗಳ ವಿತರಣೆ ಮಾಡಿದ್ದವರು. ತೆಲುಗಿನಲ್ಲಿ ಈಗ, ಬಾಹುಬಲಿ ಚಿತ್ರಗಳ ಖ್ಯಾತಿಯ ವಾರಾಹಿ ಸಂಸ್ಥೆಯ ಮೂಲಕ ಕೆಡಿ ಡಿಸ್ಟ್ರಿಬ್ಯೂಷನ್ ವಿತರಣೆ ಯಾಗಿದೆ. ತಮಿಳು ವಿತರಣೆ ಹಕ್ಕು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಪಡೆದುಕೊಂಡಿದ್ದರೆ ಮಲಯಾಳಂನಲ್ಲಿ ಮೋಹನ್ ಲಾಲ್ ಅವರ ಆಶೀರ್ವಾದ್ ಸಂಸ್ಥೆ ವಿತರಣೆ ಮಾಡುತ್ತಿದೆ.

    ಚಿತ್ರದಲ್ಲಿ ಧ್ರುವ ಸರ್ಜಾ ನಿರ್ವಹಿಸುತ್ತಿರುವ ಪಾತ್ರದ ಹೆಸರು ಕಾಳಿ ಅಲಿಯಾಸ್ ಕಾಳಿದಾಸ. ಕಥಾನಾಯಕನ ಹೆಸರನ್ನೇ ತುಂಡರಿಸಿ ಕಥಾಹಂದರಕ್ಕೆ ಹೊಂದುವಂತೆ 'ಕೆ ಡಿ' ಎಂದು ಪ್ರೇಮ್ ಹೆಸರಿಟ್ಟಿದ್ದಾರೆ. ತಮಿಳು ಟೀಸರ್‌ಗೆ ವಿಜಯ್ ಸೇತುಪತಿ ಧ್ವನಿ ನೀಡಿದ್ದಾರೆ, ಮಲಯಾಳಂ ಟೀಸರ್‌ಗೆ ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಯಶ್ ಅವರ ಕೆಜಿಎಫ್ ಚಾಪ್ಟರ್-2 ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸಂಜಯ್ ದತ್ ಮತ್ತೊಮ್ಮೆ ದಕ್ಷಿಣಕ್ಕೆ ಮರಳಲಿದ್ದು, ಕೆಡಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

  • ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ

    ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ

    ಧ್ರುವ ಸರ್ಜಾ ಅವರ ಜೊತೆ ಕೆಡಿ ಚಿತ್ರ ರೆಡಿ ಮಾಡುತ್ತಿರುವ ಜೋಗಿ ಪ್ರೇಮ್, ಏಕ್ ಲವ್ ಯಾದ ಮುದ್ದು ಮುದ್ದು ಅನಿತಾರನ್ನು ಮಚ್ ಲಕ್ಷ್ಮಿಯನ್ನಾಗಿ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಅವರ ಪಾತ್ರದ ಹೆಸರೇ ಮಚ್ ಲಕ್ಷ್ಮಿ. ರೀಷ್ಮಾನಾಣಯ್ಯ ಹುಟ್ಟುಹಬ್ಬಕ್ಕೆ ಮಚ್ ಲಕ್ಷ್ಮಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

    ಇದೊಂದು ಪಾತ್ರ ಮತ್ತು ಅವರ ಲುಕ್ಕಿಗಾಗಿ ಸತತ 4 ತಿಂಗಳು ವರ್ಕೌಟ್ ಮಾಡಿದ್ದೇವೆ.ಬೇರೆ ಬೇರೆ ಡಿಸೈನ್ ಡ್ರೆಸ್, ಮ್ಯಾನರಿಸಂ ರೂಪಿಸಲು ಶ್ರಮ ಪಟ್ಟಿದ್ದೇವೆ. ಈ ಚಿತ್ರದಲ್ಲಿನ ಮ್ಯಾನರಿಸಂ ಮಾಡುವುದಕ್ಕೆ 70ರ ದಶಕದ ನಾಯಕಿಯರ ಮ್ಯಾನರಿಸಂ ಫಾಲೋ ಮಾಡೋಕೆ ಹೇಳಿದ್ದೆ. ಹಲವು ಮ್ಯಾನರಿಸಂಗಳನ್ನು ರೀಷ್ಮಾ ನಾಣಯ್ಯ ವರ್ಕೌಟ್ ಮಾಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ಬೆರಗು ಹುಟ್ಟಿಸುತ್ತಾರೆ ಎನ್ನುತ್ತಾರೆ ಪ್ರೇಮ್.

    ಪೋಸ್ಟರ್ ಕೂಡಾ ಹಾಗೆಯೇ ಇದೆ. ಮೊಳಕಾಲಿನವರೆಗೆ ಎತ್ತಿ ಕಟ್ಟಿರುವ ಸೀರೆ, ಒಂದು ಕೈತುಂಬಾ ಕರಿಬಳೆ, ಉದ್ದ ಜಡೆ, ಬಿಸಿ ಬಿಸಿ ಮುದ್ದೆ ಇಟ್ಟಿರುವ ತಟ್ಟೆ, ಮೂಳೆ ಕಡಿಯುತ್ತಿರುವ ಮಚ್ ಲಕ್ಷ್ಮಿ ಲುಕ್ ಅಂತೂ ರಗಡ್ ಆಗಿದೆ. ಧ್ರುವ ಸರ್ಜಾ ಎದುರು ಚಿತ್ರದಲ್ಲಿ ವಿ.ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನಲ್ಲಿ ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗುತ್ತಿದೆ.

  • ಶಿಲ್ಪಾಶೆಟ್ಟಿ ಹಿಂಗ್ಯಾಕ್ ಮಾಡ್ಕೊಂಡ್ರು ಎಡವಟ್ಟು..?

    ಶಿಲ್ಪಾಶೆಟ್ಟಿ ಹಿಂಗ್ಯಾಕ್ ಮಾಡ್ಕೊಂಡ್ರು ಎಡವಟ್ಟು..?

    ಶಿಲ್ಪಾಶೆಟ್ಟಿ ಮಂಗಳೂರಿನವರು. ಹೀಗಾಗಿ ಕನ್ನಡದವರು ಎಂದು ನಾವೆಲ್ಲ ಗೌರವಿಸ್ತೇವೆ. ಪ್ರೀತಿಸ್ತೇವೆ. ನಿಜ. ಆದರೆ ಆ ಶಿಲ್ಪಾಶೆಟ್ಟಿಗೆ ಕನ್ನಡವೇ ಗೊತ್ತಿಲ್ಲವಾ..? ಹೀಗೊಂದು ಅನುಮಾನ ಮೂಡಿದೆ. ಅದಕ್ಕೆ ಕಾರಣ ಸ್ವತಃ ಶಿಲ್ಪಾಶೆಟ್ಟಿಯೇ.

    ಯುಗಾದಿ ಹಬ್ಬದಂದು `ಕೆಡಿ’ ಚಿತ್ರದ ಶಿಲ್ಪಾ ಶೆಟ್ಟಿ ಪಾತ್ರದ ಸತ್ಯವತಿ ಲುಕ್ನ ರಿವೀಲ್ ಮಾಡಿದ್ದರು. ತೊಂಬತ್ತರ ದಶಕದ ಸೀರೆ, ಹೇರ್ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಈ ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ. ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ `ಯುಗಾದಿ ಶುಭಾಕಾಂಕ್ಷಲು’ ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ.

    ಮಾಡ್ತಿರೋದು ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್  ಆಗುತ್ತದೆಯಾದರೂ ಮೊದಲು ಕನ್ನಡ ಇರಬೇಕು ತಾನೇ. ಇಲ್ಲ. ಸತ್ಯವತಿ ಅನ್ನೋ ಪಾತ್ರದಲ್ಲಿ ನಟಿಸುತ್ತಿರೋ ಶಿಲ್ಪಾಶೆಟ್ಟಿ, ಸತ್ಯವಾಗಿಯೂ ತಮಗೆ ಕನ್ನಡ ಗೊತ್ತಿಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    ಧ್ರುವ ಸರ್ಜಾ ಹೀರೋ ಆಗಿರುವ ಚಿತ್ರದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸುತ್ತಿದ್ದರೆ, ಶಿಲ್ಪಾಶೆಟ್ಟಿ ಸತ್ಯವತಿಯಾಗಿದ್ದಾರೆ. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದ ಶಿಲ್ಪಾಶೆಟ್ಟಿ ಆನಂತರ ಕನ್ನಡದಲ್ಲಿ ನಟಿಸಿಲ್ಲ. ಆದರೆ ಶಿಲ್ಪಾಶೆಟ್ಟಿಗೆ ಕನ್ನಡದಲ್ಲಿ ಸಖತ್ ಬ್ರೇಕ್ ಕೊಟ್ಟಿದ್ದ ಸಿನಿಮಾ ಪ್ರೀತ್ಸೋದ್ ತಪ್ಪಾ ಹಾಗೂ ಒಂದಾಗೋಣ ಬಾ. ಎರಡೂ ಚಿತ್ರಗಳಿಗೆ ರವಿಚಂದ್ರನ್ ಹೀರೋ ಮತ್ತು ಡೈರೆಕ್ಟರ್. ಈಗ ಮತ್ತೊಮ್ಮೆ ರವಿ-ಶಿಲ್ಪಾ ಒಂದಾಗುತ್ತಿದ್ದಾರೆ. ಜೋಗಿ ಪ್ರೇಮ್ ಎಂದಿನಂತೆ ಶಿಲ್ಪಾ ಶೆಟ್ಟಿಗೆ ರೆಟ್ರೊ ಲುಕ್ ಕೊಟ್ಟಿದ್ದಾರೆ. ಸಖತ್ತಾಗಿಯೇ ಇದೆ. ಆದರೆ.. ಕನ್ನಡ.. ಎಲ್ಲಿ..? ಕನ್ನಡತಿಯೇ ಕನ್ನಡ ಮರೆತರೆ ಹೇಗೆ..? ತೆಲುಗಿನಲ್ಲಿ ಶುಭಾಕಾಂಕ್ಷುಲು ಅನ್ನೋಕೆ ಬರೋ ಶಿಲ್ಪಾಗೆ, ಶುಭಾಶಯಗಳು ಅನ್ನೋ ಕನ್ನಡ ಪದ ಗೊತ್ತಿಲ್ಲವಾ?