ವಿ.ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿನಿಮಾ ರವಿ ಬೋಪಣ್ಣ. ಈಶ್ವರಿ ಸಂಸ್ಥೆಯ 50ನೇ ಚಿತ್ರವಿದು. 2016ರಲ್ಲ ಅಪೂರ್ವ ಚಿತ್ರ ನಿರ್ದೇಶಿಸಿದ್ದ ರವಿ ಸುದೀರ್ಘ ಗ್ಯಾಪ್ ನಂತರ ಈ ಚಿತ್ರ ನಿರ್ದೇಶಿಸಿದ್ದಾರೆ. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಗಾಳಿಪಟ 2, ಅಬ್ಬರ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ಪೈಪೋಟಿ ನೀಡಲಿವೆ.
ರವಿ ಬೋಪಣ್ಣ ಚಿತ್ರಕ್ಕೆ ಕರ್ಮ ಈಸ್ ಕ್ರೇಝಿ ಅನ್ನೋ ಟ್ಯಾಗ್ಲೈನ್ ಇದೆ. ಇದು ವೊರಿಜಿನಲ್ ಚಿತ್ರವೇನಲ್ಲ. ಮಲಯಾಳಂನ ಜೋಸೆಫ್ ಚಿತ್ರದ ರೀಮೇಕ್. ಅಂಗಾಂಗ ಕಸಿ ದಂಧೆಯ ಕರಾಳ ಮುಖವನ್ನು ತೆರೆದಿಟ್ಟಿದ ಚಿತ್ರ ಜೋಸೆಫ್. ಫ್ಯಾಮಿಲಿ ಲವ್ ಸ್ಟೋರಿಯ ಜೊತೆ ಜೊತೆಗೇ ಅಂಗಾಂಗ ಕಸಿ ದಂಧೆಯನ್ನು ತೋರಿಸಿದ್ದರು. ಹಾಗೆ ನೋಡಿದರೆ, ಅಂಗಾಂಗ ಕಸಿಯಂತಾ ಸಬ್ಜೆಕ್ಟ್ನ್ನು ಇಂಡಿಯನ್ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ತೋರಿಸಿದ್ದವರು ಸ್ವತಃ ರವಿಚಂದ್ರನ್. ಶಾಂತಿ ಕ್ರಾಂತಿಯಲ್ಲಿ.
ಜೋಸೆಫ್ ಚಿತ್ರದ ಕಥೆಯ ಒನ್ ಲೈನ್ ಮಾತ್ರ ಚಿತ್ರದಲಿರುತ್ತೆ. ಉಳಿದಂತೆ ಇದು ಕಂಪ್ಲೀಟ್ ರವಿಚಂದ್ರನ್ ಸಿನಿಮಾ ಎಂದಿದ್ದಾರೆ ರವಿಚಂದ್ರನ್. ಪ್ರೇಮಲೋಕ ಚಿತ್ರದ ಮೆಚ್ಯೂರ್ ವರ್ಷನ್ ಎನ್ನುತ್ತಿದ್ದಾರೆ. ಸುದೀಪ್ ಲಾಯರ್ ಪಾತ್ರ ಮಾಡಿದ್ದಾರೆ. ರಮ್ಯಾ ಕೃಷ್ಣ, ರಚಿತಾ ರಾಮ್, ಕಾವ್ಯಾ ಶೆಟ್ಟಿ, ಸಂಚಿತಾ ಪಡುಕೋಣೆ, ಮೋಹನ್ ಶಂಕರ್, ಜೈ ಜಗದೀಶ್ ಮುಖ್ಯ ಪಾತ್ರಗಳಲ್ಲಿದ್ದಾರೆ.