` dinaker thougadeepa, - chitraloka.com | Kannada Movie News, Reviews | Image

dinaker thougadeepa,

  • ಅಪ್ಪು ನಟಿಸಬೇಕಿದ್ದ ಚಿತ್ರಕ್ಕೆ ಕಿಸ್ ಹೀರೋ?

    ಅಪ್ಪು ನಟಿಸಬೇಕಿದ್ದ ಚಿತ್ರಕ್ಕೆ ಕಿಸ್ ಹೀರೋ?

    ದಿನಕರ್ ತೂಗುದೀಪ ಅವರ ಬಹುವರ್ಷಗಳ ಕನಸು ನನಸಾಗುವ ಹಾದಿಯಲ್ಲಿತ್ತು. ದಿನಕರ್ ಸಿದ್ಧಪಡಿಸಿದ್ದ ಸ್ಕ್ರಿಪ್ಟ್‍ಗೆ ಪುನೀತ್ ಓಕೆ ಎಂದಿದ್ದರು. ಜೇಮ್ಸ್ ಮುಗಿದ ನಂತರ ದ್ವಿತ್ವ ಜೊತೆ ಜೊತೆಯಲ್ಲೇ ಶುರುವಾಗಬೇಕಿದ್ದ ಸಿನಿಮಾ ಅದು. ಜಯಣ್ಣ ಭೋಗೇಂದ್ರ ನಿರ್ಮಾಪಕರಾಗಿ ಸಿದ್ಧರಿದ್ದರು. ದುರದೃಷ್ಟವಶಾತ್ ಅಪ್ಪು ಅಗಲಿದರು. ಈಗ ಆ ಚಿತ್ರಕ್ಕೆ ಕಿಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿರಾಟ್ ಬಂದಿದ್ದಾರೆ.

    ಕಿಸ್ ಚಿತ್ರದಲ್ಲಿ ಒಳ್ಳೆಯ ಕಲಾವಿದನಾಗುವ ಎಲ್ಲ ಭರವಸೆ ಮೂಡಿಸಿದ್ದ ವಿರಾಟ್, ಈಗ ಅರ್ಜುನ್ ಅವರ ಜೊತೆಯಲ್ಲೇ ಅದ್ಧೂರಿ ಲವರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

    ಕಥೆ ಕೇಳಿದ ಮೇಲೆ, ಈ ಕಥೆಗೆ ವಿರಾಟ್ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂದರು ಜಯಣ್ಣ. ನನಗೂ ಓಕೆ ಎನ್ನಿಸಿತು. ಇದೊಂದು ಕಮರ್ಷಿಯಲ್ ಎಲಿಮೆಂಟ್ ಇರುವ ಥ್ರಿಲ್ಲರ್ ಸ್ಟೋರಿ ಅನ್ನೋದು ದಿನಕರ್ ಮಾತು.

    ಆದರೆ ಅದು ಅಪ್ಪುಗಾಗಿಯೇ ಸಿದ್ಧ ಮಾಡಿದ್ದ ಕಥೆನಾ? ಅಥವಾ ಬೇರೆ ಕಥೆನಾ..? ಅದು ಸದ್ಯಕ್ಕೆ ಗೊತ್ತಾಗಿಲ್ಲ.

  • ಅಪ್ಪುಗೆ ಬರೆದ ಕಥೆಯನ್ನು ಸಿನಿಮಾ ಮಾಡ್ತಿಲ್ಲ : ದಿನಕರ್ ತೂಗುದೀಪ

    ಅಪ್ಪುಗೆ ಬರೆದ ಕಥೆಯನ್ನು ಸಿನಿಮಾ ಮಾಡ್ತಿಲ್ಲ : ದಿನಕರ್ ತೂಗುದೀಪ

    ದೇವರ ಕೃಪೆಯಿದ್ದರೆ ಇಷ್ಟು ಹೊತ್ತಿಗೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ನಟಿಸಬೇಕಿದ್ದ ಸಿನಿಮಾ ಶುರುವಾಗಿರುತ್ತಿತ್ತು. ಆದರೀಗ ದಿನಕರ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದಲ್ಲಿ ವಿರಾಟ್ ಹೀರೋ. ಕಿಸ್ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿರಾಟ್ ಅವರಿಗೆ ದಿನಕರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಚಿತ್ರದ ನಿರ್ಮಾಪಕರು. ಪುನೀತ್-ದಿನಕರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದವರೂ ಜಯಣ್ಣ-ಭೋಗೇಂದ್ರ ಜೋಡಿಯೇ.

    ಹೀಗಾಗಿ.. ಆ ತಕ್ಷಣ ಎಲ್ಲರಿಗೂ ಕಾಡಿದ್ದ ಪ್ರಶ್ನೆ ಒಂದೇ. ಪುನೀತ್ ಅವರಿಗೆ ಬರೆದಿದ್ದ ಕಥೆಯನ್ನೇ ವಿರಾಟ್ ಅವರಿಗೆ ಸಿನಿಮಾ ಮಾಡ್ತಿದ್ದಾರಾ ದಿನಕರ್ ತೂಗುದೀಪ ಅನ್ನೋದು. ಅದಕ್ಕೆ ದಿನಕರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಅಪ್ಪು ಸರ್‍ಗಾಗಿ ಕಥೆ ಬರೆದಿದ್ದೆ. ಆದರೆ ಈಗ ವಿರಾಟ್ ಅವರಿಗೆ ಮಾಡ್ತಿರೋದು ಆ ಕಥೆಯಲ್ಲ. ವಿರಾಟ್ ಅವರಿಗೆ ಸಂಭಾಷಣೆಕಾರ ರಘು ನಿಡುವಳ್ಳಿ ಅವರು ಬರೆದಿದ್ದ ಕಥೆಯನ್ನು ಆಯ್ಕೆ ಮಾಡಿಕೊಂಡು ಡೆವಲಪ್ ಮಾಡಿದ್ದೇವೆ. ಅಪ್ಪು ಸರ್‍ಗೆ ಬರೆದಿದ್ದ ಕಥೆಗೂ, ಈ ಕಥೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ ದಿನಕರ್.

    ಇನ್ನೊಂದು ವಾರದಲ್ಲಿ ಚಿತ್ರದ ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಮುಗಿಯಲಿದೆ. ಅಷ್ಟು ಹೊತ್ತಿಗೆ ವಿರಾಟ್ ನಟಿಸುತ್ತಿರೋ ಅದ್ಧೂರಿ ಲವರ್ ಕೂಡಾ ಮುಗಿಯಲಿದೆ. ನಂತರ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

  • ದಿನಕರ್-ಜಯಣ್ಣ ರಾಯಲ್ ಸಿನಿಮಾ : ವಿರಾಟ್ ಹೀರೋ

    ದಿನಕರ್-ಜಯಣ್ಣ ರಾಯಲ್ ಸಿನಿಮಾ : ವಿರಾಟ್ ಹೀರೋ

    ಎಲ್ಲವೂ ಸರಿಯಾಗಿ ಆಗಿದ್ದರೆ ಇಷ್ಟೊತ್ತಿಗೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ಅಭಿನಯದ ಚಿತ್ರ ತೆರೆಗೆ ಬಂದು ಅದ್ಧೂರಿ ಸಂಭ್ರಮದಲ್ಲಿರಬೇಕಿತ್ತು. ಆಗಲಿಲ್ಲ. ಅದಾದ ಮೇಲೆ ಜಯಣ್ಣ-ಭೋಗೇಂದ್ರ ಸ್ವಲ್ಪ ದಿನ ಮೌನಕ್ಕೆ ಶರಣಾಗಿದ್ದರು. ಪ್ರಾಜೆಕ್ಟ್ ಕೈಬಿಟ್ಟಿರಲಿಲ್ಲ. ಕಥೆ ಬೇರೆಯದನ್ನು ಆಯ್ಕೆ ಮಾಡಿ ದಿನಕರ್ ತೂಗುದೀಪ ನಿರ್ದೇಶನದಲ್ಲೇ ಹೊಸ ಚಿತ್ರ ಘೋಷಿಸಿದ್ದರು. ವಿರಾಟ್ ಹೀರೋ ಆಗಿ ಆಯ್ಕೆಯಾಗಿದ್ದರು. ಈಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಚಿತ್ರಕ್ಕೆ ರಾಯಲ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಅಶ್ವಿನಿ ಪುನೀತ್ ರಾಜಕುಮಾರ್.

    ಜಯಣ್ಣ-ಭೋಗೇಂದ್ರ ಬ್ಯಾನರ್‍ನ ಚಿತ್ರದ ಟೈಟಲ್ ಲಾಂಚ್‍ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಹೊಂಬಾಳೆಯ ವಿಜಯ್ ಕಿರಗಂದೂರು. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ಕಿಸ್ ಖ್ಯಾತಿಯ ವಿರಾಟ್‍ಗೆ ದೊಡ್ಡ ಅವಕಾಶವಂತೂ ಇದೆ. ಹೀರೋಯಿನ್ ಆಗಿ ಸಂಜನಾ ಆನಂದ್ ಆಯ್ಕೆಯಾಗಿದ್ದು ಶೀಘ್ರದಲ್ಲೇ ಚಿತ್ರೀಕರಣವೂ ಶುರುವಾಗಲಿದೆ. ಅಂದಹಾಗೆ ಇದು ಜಯಣ್ಣ-ಭೋಗೇಂದ್ರ ನಿರ್ಮಾಣದ 23ನೇ ಸಿನಿಮಾ.