` duniya vijay, - chitraloka.com | Kannada Movie News, Reviews | Image

duniya vijay,

  • ಹುಟ್ಟುಹಬ್ಬದ ಸ್ಪೆಷಲ್ - 80 ಅಡಿ ಕಟೌಟು, ಬಿರಿಯಾನಿ, ಸ್ವೀಟು

    duniya vijay in kanaka

    ದುನಿಯಾ ವಿಜಯ್ ಅಭಿನಯದ ಕನಕ ಚಿತ್ರ ಇದೇ 26ರಂದು ತೆರೆಗೆ ಬರುತ್ತಿದೆ. ಇದರ ನಡುವೆಯೇ, ಚಿತ್ರದ ಬಿಡುಗಡೆಗೆ ಕೇವಲ ಒಂದು ವಾರ ಮುಂಚೆ ದುನಿಯಾ ವಿಜಿ ಹುಟ್ಟುಹಬ್ಬ ಇರುವುದು ವಿಶೇಷ. ಹೀಗಾಗಿಯೇ ಆರ್. ಚಂದ್ರು, ದುನಿಯಾ ವಿಜಿ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಲು ನಿರ್ಧರಿಸಿದ್ದಾರೆ.

    ಅಂದು ದುನಿಯಾ ವಿಜಯ್ ಮನೆ ಎದುರು ಅವರ 80 ಅಡಿ ಎತ್ತರದ ಕಟೌಟ್ ನಿಲ್ಲಿಸುತ್ತಿದ್ದಾರೆ. ಬಹುಶಃ ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಯಾವ ನಟನಿಗೂ 80 ಅಡಿ ಎತ್ತರದ ಕಟೌಟ್ ಸಿಕ್ಕಿಲ್ಲವೇನೋ. ಅಷ್ಟೇ ಅಲ್ಲ, ಆ ದಿನ ಅಭಿಮಾನಿಗಳಿಗೆ ಬಿರಿಯಾನಿ ಮತ್ತು ಸಿಹಿ ಹಂಚಲು ನಿರ್ಧರಿಸಿದ್ದಾರೆ.

    ಹರಿಪ್ರಿಯಾ, ಮಾನ್ವಿತಾ ಹರೀಶ್ ನಾಯಕಿಯರಾಗಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಡಾ.ರಾಜ್ ಅಭಿಮಾನಿಯ ಆದರ್ಶಗಳ ಕಥೆ ಹೊಂದಿರುವ ಸಿನಿಮಾದ ಟ್ರೇಲರ್, ಹಾಡುಗಳು ಈಗಾಗಲೇ ಹಿಟ್ ಆಗಿದ್ದು ಭಾರಿ ನಿರೀಕ್ಷೆ ಮೂಡಿಸಿವೆ.

  • ಹೇ ಸಲಗ.. ಏನಿದು.. ಟಿನಿಂಗ ಮಿಣಿಂಗ ಟಿಶಾ ಟಿಶಾ

    ಹೇ ಸಲಗ.. ಏನಿದು.. ಟಿನಿಂಗ ಮಿಣಿಂಗ ಟಿಶಾ ಟಿಶಾ

    ದುನಿಯಾ ವಿಜಯ್ ನಿರ್ದೇಶಕರಾಗಿರುವ ಚಿತ್ರ ಸಲಗ. ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್. 2ನೇ ಲಾಕ್ ಡೌನ್ ಮುಗಿದ ಮೆಲೆ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ. ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಪ್ರಮೋಷನ್ ಜೋರು ಮಾಡಿದೆ ಚಿತ್ರತಂಡ.

    ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಟೀಂ  ಹೊಸ ಹಾಡೊಂದನ್ನು ಬಿಟ್ಟಿದೆ. ಹುಡುಗರು ಪರಸ್ಪರ ಮಾತನಾಡುವ ಡೈಲಾಗುಗಳೇ ಇಲ್ಲಿ ಸಾಹಿತ್ಯವಾಗಿರೋದು ವಿಶೇಷ. ಟಿನಿಂಗ ಮಿಣಿಂಗ ಟಿಶಾ ಟಿಶಾ

    .. ಅದರಲ್ಲೂ ಸಿದ್ದಿ ಜನಾಂಗದವರ ಜನಪದ ಮಾತುಗಳನ್ನೇ ಹಾಡಾಗಿಸಿದ್ದಾರೆ. ಗಿರಿಜಾ ಸಿದ್ದಿ, ಗೀತಾ ಸಿದ್ದಿ, ಚನ್ನಕೇಶವ ಬಳಗ ಹಾಡಿರುವ ಹಾಡು ಸರಳವಾಗಿ ಸುಲಭವಾಗಿ ಅರ್ಥವಾಗಲ್ಲ.

    ಚರಣ್ ರಾಜ್ ಮ್ಯೂಸಿಕ್ ನೀಡಿದ್ದು, ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ.

  • ಹೊಸ ಪ್ರತಿಭೆಗಳ ಡಾರ್ಲಿಂಗ್ ದುನಿಯಾ ವಿಜಯ್

    ಹೊಸ ಪ್ರತಿಭೆಗಳ ಡಾರ್ಲಿಂಗ್ ದುನಿಯಾ ವಿಜಯ್

    ಸ್ಟಾರ್‌ ಆದ ನಂತರ ಹಲವರು ಹೊಸಬರನ್ನು ದೂರವೇ ಇಟ್ಟುಬಿಡುತ್ತಾರೆ. ಆದರೆ ದುನಿಯಾ ವಿಜಯ್ ಈ ವಿಷಯದಲ್ಲಿ ವಿಶೇಷ. ತಮ್ಮ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡೋದ್ರಲ್ಲಿ ಅವರು ಸದಾ ಮುಂದು. 15 ವರ್ಷಗಳ ಹಿಂದೆ ನಾಯಕರಾದ  ವಿಜಯ್, ನಂತರ ನಿರ್ಮಾಪಕರಾಗಿ, ನಿರ್ದೇಶಕರೂ ಆಗಿ ಗೆದ್ದಿದ್ದಾರೆ. ಈಗ ತಮ್ಮ ನಿರ್ದೇಶನದ 2ನೇ ಸಿನಿಮಾದಲ್ಲೂ ಹೊಸಬರಿಗೆ ಚಾನ್ಸ್ ಕೊಡೋ ಸಂಪ್ರದಾಯ ಮುಂದುವರೆಸಿದ್ದಾರೆ.

    ಮೊದಲ ಸಿನಿಮಾ ‘ಸಲಗ’ದಲ್ಲಿ ಅವರು ಹಲವು ಹೊಸ ಪ್ರತಿಭೆಗಳನ್ನು ಗುರುತಿಸಿದ್ದ ವಿಜಯ್ ಈಗ ಭೀಮ ಚಿತ್ರದಲ್ಲೂ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಈಗಾಗಲೇ ಭೀಮ ಚಿತ್ರದ ವಿಲನ್ ಆಗಿ ಮಂಜು ಎಂಬ ಬಾಡಿ ಬಿಲ್ಡರ್ನ್ನ ಆಯ್ಕೆ ಮಾಡಿರೋ ವಿಜಯ್, ತಮ್ಮ ಸಿನಿಮಾದ ಇನ್ನೊಂದು ಖಡಕ್ ಪಾತ್ರ ಗಿರಿಜಾಗೂ ಆಯ್ಕೆ ಮಾಡಿಕೊಂಡಿರೋದು ಹೊಸ ಪ್ರತಿಭೆಯನ್ನೇ. ಗಿರಿಜಾ ಪಾತ್ರ ಮಾಡುತ್ತಿರೋ ಯುವತಿಯ ಹೆಸರು ಪ್ರಿಯಾ ಶಠಮರ್ಷಣ. ರಂಗಭೂಮಿ ಕಲಾವಿದೆ. ನಟನದಲ್ಲಿ ಹಲವು ನಾಟಕ ಮಾಡಿರುವ ಪ್ರಿಯಾ, ಚಾಮ ಚೆಲುವೆ ನಾಟಕದಲ್ಲಿ ಗಮನ ಸೆಳೆದಿದ್ದರು.

    ಅದೊಂದು ಪ್ರಾಮಾಣಿಕ ಮತ್ತು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಖಡಕ್ ಆಫೀಸರ್ ಪಾತ್ರಕ್ಕೆ ಮಹಿಳೆ ಇದ್ದರೆ ಚೆನ್ನಾಗಿರುತ್ತೆ ಎಂದುಕೊಂಡು ಈ ಪಾತ್ರ ರೂಪಿಸಿದೆ. ಇದುವರೆಗೆ ಅವರು ನಟಿಸಿರುವ ದೃಶ್ಯಗಳಲ್ಲಿ ನನ್ನ ಆಯ್ಕೆ ಸರಿಯಾಗಿದೆ ಎಂದು ಸಾಬೀತು ಮಾಡಿದ್ದಾರೆ ಎಂದು ಶಹಬ್ಬಾಸ್ ಎಂದಿದ್ದಾರೆ ದುನಿಯಾ ವಿಜಯ್.

    ಅಷ್ಟೇ ಅಲ್ಲ, ಈ ಚಿತ್ರದ ಸಾಹಸ ನಿರ್ದೇಶಕ ಶಿವು ಕೂಡಾ ಹೊಸಬರೇ. ಮಾಸ್ ಮಾದ ಬಳಿ ಕೆಲಸ ಮಾಡುತ್ತಿದ್ದ ಶಿವು, ಇದುವರೆಗೆ ಸುಮಾರು 800 ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದವರು. ವಿಜಯ್ ಸರ್ ನನಗೆ ಸ್ವತಂತ್ರವಾಗಿ ಸಾಹಸ ದೃಶ್ಯ ಕಂಪೋಸ್ ಮಾಡೋ ಅವಕಾಶ ಕೊಟ್ಟಿದ್ದಾರೆ. ನನ್ನಂತಹ ಹೊಸಬರಿಗೆ ಅವಕಾಶ ಕೊಡುತ್ತಿದ್ದಾರೆ. ಖಂಡಿತಾ ಅವರ ಆಯ್ಕೆಗೆ ನ್ಯಾಯ ಸಲ್ಲಿಸುತ್ತೇನೆ ಎಂದಿದ್ದಾರೆ ಶಿವು.

    ಇದು ಕೃಷ್ಣ ಸಾರ್ಥಕ್ ನಿರ್ಮಾಣದ ಸಿನಿಮಾ. ಸದ್ಯಕ್ಕೆ ಕೃಷ್ಣ ಸಾರ್ಥಕ್ ಬೈರಾಗಿ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಭೀಮ ಚಿತ್ರದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ.

  • ಹೊಸ ವರ್ಷಕ್ಕೆ ಎಣ್ಣೆ ಹೊಡೆಸ್ತಾನೆ ಕನಕ..!

    enne song by kanaka team

    ಕನಕ ಚಿತ್ರ ಮುಂದಿನ ಜನವರಿಯಲ್ಲಿ ರಿಲೀಸ್ ಆಗೋದು ಹೆಚ್ಚೂ ಕಡಿಮೆ ನಿಶ್ಚಿತವಾಗಿದೆ. ಅಂಜನೀಪುತ್ರ, ಮಫ್ತಿ ಚಿತ್ರಗಳಿಂದಾಗಿ ತಮ್ಮ ಚಿತ್ರದ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದ ಆರ್. ಚಂದ್ರ, ಜನವರಿಯಲ್ಲಿ ಕನಕನನ್ನು ನುಗ್ಗಿಸೋಕೆ ರೆಡಿಯಾಗಿದ್ದಾರೆ. ಆದರೆ, ಅದಕ್ಕೂ ಮುಂಚೆ ಎಣ್ಣೆ ಹೊಡೆಸಲಿದ್ದಾರೆ.

    `ಎಣ್ಣೆ ನಮ್ದು.. ಊಟ ನಿಮ್ದು..' ಅನ್ನೋ ಎಣ್ಣೆ ಸಾಂಗ್, ಹೊಸ ವರ್ಷದ ದಿನವೇ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಇತ್ತೀಚೆಗೆ ಎಣ್ಣೆ ಸಾಂಗ್ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಂದ್ರು ಈ ಪ್ರಮೋಷನಲ್ ಸಾಂಗ್ ಸೃಷ್ಟಿಸಿದ್ದಾರೆ. ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಈ ಹಾಡು ರಿಲೀಸ್ ಆಗಲಿದೆ.

    ಅಲ್ಲಿ, ಹೊಸ ವರ್ಷದ ಕುಣಿತಕ್ಕೆ ಹೊಸ ಕಿಕ್ಕು. ಅದು ಕನಕನ ಕಿಕ್ಕು ಸಿಗಲಿರೋದು ಗ್ಯಾರಂಟಿ ಅಂದಂಗಾಯ್ತು.

  • ಹೊಸಪೇಟೆಯಲ್ಲಿ ಏ.10ಕ್ಕೆ ಸಲಗ ಸಂಭ್ರಮ..

    ಹೊಸಪೇಟೆಯಲ್ಲಿ ಏ.10ಕ್ಕೆ ಸಲಗ ಸಂಭ್ರಮ..

    ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ. ಈಗಾಗಲೇ ಚಿತ್ರದ  ಟೀಸರ್, ಸಾಂಗ್ಸ್ ಸೌಂಡ್ ಮಾಡುತ್ತಿವೆ. ಸಲಗದ ಕ್ರೇಜ್ ಜೋರಾಗಿದೆ. ಹಾಗಂತ ಇದು ಒಂಟಿ ಸಲಗ ಅಲ್ಲ. ಸಲಗ ಬೆನ್ನ ಹಿಂದಿರೋದು ಕೆ.ಪಿ.ಶ್ರೀಕಾಂತ್.

    ಈ ಮಧ್ಯೆ ಸಲಗದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವೇದಿಕೆ ಹೊಸಪೇಟೆಯಲ್ಲಿ ಸಿದ್ಧವಾಗಿದೆ.  ಹೊಸಪೇಟೆಯಲ್ಲಿ ಏಪ್ರಿಲ್ 10ರಂದು ಪ್ರೀರಿಲೀಸ್ ಇವೆಂಟ್ ಮಾಡೋ ಯೋಜನೆ ಹಾಕಿಕೊಳ್ಳಲಾಗಿದೆ..

    ಕೆಪಿ ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

    ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಂಜನಾ ಆನಂದ್ ಜೋಡಿಯಾಗಿದ್ದರೆ, ಡಾಲಿ ಧನಂಜಯ್ ಪೊಲೀಸ್ ಆಫೀಸರ್.