` duniya vijay, - chitraloka.com | Kannada Movie News, Reviews | Image

duniya vijay,

  • ಶುರುವಾಗಲಿದೆ ಸಲಗನ ಟೂರ್

    ಶುರುವಾಗಲಿದೆ ಸಲಗನ ಟೂರ್

    ಬಿಡುಗಡೆ ದಿನ ಅದ್ಧೂರಿಯಾಗಿ ತೆರೆ ಕಂಡು, ನಂತರ ಒಂದಿಷ್ಟು ಅಡೆತಡೆಗಳನ್ನೂ ಎದುರಿಸಿ ಸೂಪರ್ ಹಿಟ್ ಎನಿಸಿಕೊಂಡ ಚಿತ್ರ ಸಲಗ. ದುನಿಯಾ ವಿಜಯ್ ನಿರ್ದೇಶನದ ಫಸ್ಟ್ ಸಿನಿಮಾ ಎಂಬ ಭಾರಿ ನಿರೀಕ್ಷೆಯ ಭಾರ ಹೊತ್ತಿದ್ದ ಸಲಗ, ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದಿದೆ.

    ಹಿಟ್ ಎನ್ನುವುದನ್ನು ನೋಡಿ ತುಂಬಾ ದಿನಗಳಾಗಿತ್ತು. ನನ್ನ ಒಂದೊಂದು ಚಿತ್ರ ಸೋತಾಗಲೂ ಬೇಸರವಾಗುತ್ತಿತ್ತು. ಹೀರೋ ನಿರ್ದೇಶಕರನ್ನು ಬಯ್ಯೋದು ಸಾಮಾನ್ಯವಾಗಿತ್ತು. ಹೀಗಾಗಿ ನಾನೇ ಡೈರೆಕ್ಷನ್ ಮಾಡುವ ಹೊಣೆ ಹೊತ್ತುಕೊಂಡೆ. ಕೆ.ಪಿ.ಶ್ರೀಕಾಂತ್ ನನ್ನನ್ನು ನಂಬಿ, ಜವಾಬ್ದಾರಿ ನೀಡಿದರು. ಈಗ ಗೆದ್ದಿದ್ದೇವೆ ಎನ್ನುವುದು ದುನಿಯಾ ವಿಜಯ್ ಮಾತು.

    ಕೊರೊನಾ ಕಾಲದ ಮಧ್ಯೆ ಈ ಚಿತ್ರ ಗೆದ್ದಿರುವುದು ದುನಿಯಾ ವಿಜಯ್ ಅವರಿಗೆ ಪವಾಡದಂತೆ ಕಾಣಿಸಿದೆ. ಲಾಕ್ ಡೌನ್, ಅಮ್ಮನ ಸಾವು, ಬಿಡುಗಡೆ ಟೆನ್ಷನ್ ಎಲ್ಲದರ ಮಧ್ಯೆ ದುನಿಯಾ ವಿಜಯ್ ಅವರಿಗೆ ತುಸು ನೆಮ್ಮದಿ ನೀಡಿರುವುದು ಸಲಗದ ಸಕ್ಸಸ್.

    ನಮ್ಮ ಚಿತ್ರದ ಯಶಸ್ಸಿಗೆ ಕಾರಣ ಪ್ರೇಕ್ಷಕರು ಮತ್ತು ಅಭಿಮಾನಿಗಳು. ಹೀಗಾಗಿ ಅವರೆಲ್ಲರಿಗೂ ಧನ್ಯವಾದ ಹೇಳುವ ಪ್ರವಾಸ ಕೈಗೊಳ್ಳಲಿದ್ದೇವೆ. ಥಿಯೇಟರುಗಳಿಗೆ ಭೇಟಿ ನೀಡಲಿದ್ದೇವೆ. ನಮ್ಮೊಂದಿಗೆ ಇಡೀ ಸಲಗ ತಂಡ ಇರಲಿದೆ ಎಂದಿದ್ದಾರೆ ವಿಜಯ್.

  • ಶ್ರೀರಾಮನ ಅವತಾರದಲ್ಲಿ ದುನಿಯಾ ವಿಜಯ್

    duniya vijay as sree rama

    ಮರ್ಯಾದಾ ಪುರುಷೋತ್ತಮ ಶ್ರೀರಾಮನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ ದುನಿಯಾ ವಿಜಯ್. ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಒಂದು ದೃಶ್ಯ. ಶ್ರೀರಾಮನವಮಿಗೆ ವಿಶೇಷವಾಗಿ ಈ ಟೀಸರ್ ಕೊಟ್ಟಿರುವ ಚಿತ್ರತಂಡ, ಶ್ರೀರಾಮನವಮಿಯನ್ನು ಈ ಮೂಲಕ ಸಂಭ್ರಮಿಸಿದೆ. 

    ಇಲ್ಲಿ ದುನಿಯಾ ವಿಜಿ ಶ್ರೀರಾಮನಾದರೆ, ರಂಗಾಯಣ ರಘು ಆಂಜನೇಯ. ಶ್ರೀರಾಮನನ್ನು ವೀರ, ಧೀರ, ಸಿಕ್ಸ್‍ಪ್ಯಾಕ್ ರಾಮ ಎಂದು ಸಂಬೋಧಿಸುವ ರಂಗಾಯಣ ರಘು, ಥೇಟು ಆಂಜನೇಯನೇ.

    ದನಕಾಯೋನು ಚಿತ್ರದಲ್ಲಿ ಭಟ್ಟರು, ವಿಜಿಗೆ ಕೃಷ್ಣನ ವೇಷ ತೊಡಿಸಿದ್ದರು. ಈ ಚಿತ್ರದಲ್ಲಿ ಪ್ರೀತಂ ಗುಬ್ಬಿ, ವಿಜಯ್‍ಗೆ ರಾಮನ ವೇಷ ಹಾಕಿಸಿದ್ದಾರೆ. ಇದೇ ಮಾರ್ಚ್ 30ಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾ ಇಂತಹವುಗಳಿಂದಾಗಿಯೇ ಕುತೂಹಲ ಮೂಡಿಸುತ್ತಿದೆ.

  • ಸಂತೋಷ್ ಕೈಬಿಟ್ಟ ಸಲಗ ತ್ರಿವೇಣಿಗೆ ಶಿಫ್ಟ್

    ಸಂತೋಷ್ ಕೈಬಿಟ್ಟ ಸಲಗ ತ್ರಿವೇಣಿಗೆ ಶಿಫ್ಟ್

    ದಸರಾಗೆ ರಿಲೀಸ್ ಆಗುತ್ತಿರೋ ಸಿನಿಮಾ ಸಲಗ. ಭರ್ಜರಿ ಸದ್ದನ್ನೇ ಮಾಡುತ್ತಿದೆ. ಆದರೆ ಮೆಜೆಸ್ಟಿಕ್ ಥಿಯೇಟರುಗಳದ್ದೇ ಪ್ರಾಬ್ಲಮ್. ಕಳೆದ ವಾರ ರಿಲೀಸ್ ಆಗಿದ್ದ ನಿನ್ನ ಸನಿಹಕೆ ಚಿತ್ರ ಮೊದಲ ದಿನದ ಮೊದಲ ಶೋನಲ್ಲೇ ಎಡವಟ್ಟಾಗಿತ್ತು. ಶೋ ರದ್ದಾಗಿತ್ತು. ಆ ತಾಂತ್ರಿಕ ಸಮಸ್ಯೆಗಳನ್ನು ಇನ್ನೂ ಪರಿಹರಿಸಿಕೊಂಡಿಲ್ಲ ಸಂತೋಷ್. ಹೀಗಾಗಿ ಸಲಗ ಚಿತ್ರತಂಡ ಸಂತೋಷ್ ಚಿತ್ರಮಂದಿರವನ್ನು ಕೈಬಿಟ್ಟು, ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.

    ಸಲಗ ಅಷ್ಟೇ ಅಲ್ಲ, ಅದೇ ಕಾಂಪ್ಲೆಕ್ಸಿನಲ್ಲಿರೋ ನರ್ತಕಿಯಲ್ಲಿ ಕೋಟಿಗೊಬ್ಬ 3 ರಿಲೀಸ್ ಆಗಬೇಕಿತ್ತು. ಆ ಚಿತ್ರವನ್ನು ಭೂಮಿಕಾ ಚಿತ್ರಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.

    ಮೆಜೆಸ್ಟಿಕ್‍ನಲ್ಲಿರೋ ಸಂತೋಷ್, ನರ್ತಕಿ ಹಾಗೂ ಸಪ್ನಾ ಚಿತ್ರಮಂದಿರಗಳಿಗೆ ಮಾಲೀಕರು ಒಬ್ಬರೇ. ಆದರೆ ಈ ಥಿಯೇಟರುಗಳಲ್ಲಿ ಸಂತೋಷ ನರ್ತನ ಮಾಡೋದಕ್ಕಿಂತ ಸಮಸ್ಯೆಗಳೇ ಹೆಚ್ಚು. ಈ ಬಗ್ಗೆ ಚಿತ್ರ ನಿರ್ಮಾಪಕರು ಹಲವು ಬಾರಿ ಮಾಲೀಕರ ಗಮನಕ್ಕೆ ತಂದಿದ್ದರೂ, ಅವರು ಬದಲಾಗಿಲ್ಲ ಅನ್ನೋ ಆರೋಪಗಳಿವೆ.

  • ಸಮಕಾಲೀನ ನಿರ್ದೇಶಕರಿಗೆ `ಕನಕ'ರತ್ನ ಪುರಸ್ಕಾರ

    kanaka audio launch image

    ಚಿತ್ರವೊಂದರ ಆಡಿಯೋ ಬಿಡುಗಡೆ ಎಂದರೆ, ಅಲ್ಲಿ ಹೀರೋ, ಹೀರೋಯಿನ್, ಸಂಗೀತ ನಿರ್ದೇಶಕರು, ಗಾಯಕರು, ಒಂದಿಷ್ಟು ಹಾಡು, ನೃತ್ಯ ಇರುತ್ತೆ. ನಿರ್ದೇಶಕರು ಆ ದಿನ ತೆರೆಮರೆಯಲ್ಲೇ ಇರಲು ಬಯಸುತ್ತಾರೆ. ಆದರೆ, ಆರ್. ಚಂದ್ರು ಯಾವತ್ತಿಗೂ ಡಿಫರೆಂಟು. ಅವರು ತಮ್ಮ ಕನಕ ಚಿತ್ರದ ಆಡಿಯೋ ಲಾಂಚ್ ವೇಳೆ ಮಾಡಿದ್ದು ಹಾಗೆಯೇ ಇತ್ತು. ಫುಲ್ ಡಿಫರೆಂಟು. ಅವರು `ಕನಕ' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ತಮ್ಮ ಸಮಕಾಲೀನ ನಿರ್ದೇಶಕರನ್ನೇ ವೇದಿಕೆಗೆ ಕರೆದು, ಗೌರವಿಸಿದರು.

    ನಿರ್ದೇಶಕ ಯೋಗರಾಜ್ ಭಟ್, ಸೂರಿ, ಶಶಾಂಕ್ ಹಾಗೂ ಆರ್. ಚಂದ್ರು ಗೌರವಕ್ಕೆ ಪಾತ್ರರಾದರು. ಅವರನ್ನು ವೇದಿಕೆಗೆ ಗೌರವಿಸಿದರು. ನಟ ದುನಿಯಾ ವಿಜಯ್ ತಮ್ಮ ತಮ್ಮ ಪತ್ನಿ, ಮಕ್ಕಳ ಸಮೇತ ವೇದಿಕೆಯಲ್ಲಿದ್ದರು.

    ಸನ್ಮಾನ ಸ್ವೀಕರಿಸಿದ ಯೋಗರಾಜ್ ಭಟ್, ಕೆಲವರು ನನ್ನನ್ನು ಈಗಾಗಲೇ ಗುರುಗಳ ಪಟ್ಟಕ್ಕೆ ಏರಿಸಿಬಿಟ್ಟಿದ್ದಾರೆ. ಆದರೆ, ನಾನಿನ್ನೂ ಕಲಿಯುವ ಹಂತದಲ್ಲಿರುವ ಲಾಸ್ಟ್ ಬೆಂಚ್ ಪೋಲಿ ವಿದ್ಯಾರ್ಥಿ ಎಂದು ಹೇಳಿಕೊಂಡರು.

    ನಿರ್ದೇಶಕ ಸೂರಿ ದುನಿಯಾ ಚಿತ್ರ ಸೃಷ್ಟಿಯಾದ ದಿನಗಳನ್ನು ನೆನಪಿಸಿಕೊಂಡರೆ, ಶಶಾಂಕ್, ಮೊಗ್ಗಿನ ಮನಸ್ಸು ದಿನಗಳಿಗೆ ಜಾರಿದರು. ಕನಕ ಚಿತ್ರದ ಆಡಿಯೋ ಲಾಂಚ್ ವಿಭಿನ್ನ ಎನಿಸಿದ್ದು ಇದೇ ಕಾರಣಕ್ಕೆ.

  • ಸಲಗ ಈಗ ಭೀಮ : ಕೆಣಕದೇ ಇದ್ದರೆ ಕ್ಷೇಮ..

    ಸಲಗ ಈಗ ಭೀಮ : ಕೆಣಕದೇ ಇದ್ದರೆ ಕ್ಷೇಮ..

    ದುನಿಯಾ ವಿಜಯ್ ಹೊಸ ಸಿನಿಮಾದ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ. ಶಿವರಾತ್ರಿಯಂದೇ ತಮ್ಮ ಹೊಸ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ. ಹೊಸ ಚಿತ್ರದ ಟೈಟಲ್ಲೇ ಇದು. ಭೀಮ.. ಕೆಣಕದೇ ಇದ್ದರೆ ಕ್ಷೇಮ ಅನ್ನೋದು ಟ್ಯಾಗ್‍ಲೈನ್.

    ಇದೂ ಕತ್ತಲ ಜಗತ್ತಿನ ಕಥೆಯೇ. ಆದರೆ ನಾವು ಹೇಳೋದು ಕತ್ತಲ ಜಗತ್ತಿನ ಬ್ರೈಟ್ ಸ್ಟೋರಿ. ಭೀಮ, ಪಂಚಪಾಂಡವರಲ್ಲೇ ಮಹಾನ್ ಶಕ್ತಿಶಾಲಿ. ಸಾವಿರ ಆನೆಗಳ ಬಲದವನು. ಶಾಂತವಾಗಿದ್ದಾಗ ಅವನಷ್ಟು ಒಳ್ಳೆಯವನು ಇನ್ನೊಬ್ಬ ಇಲ್ಲ. ಕೆಣಕಿದರೆ.. ಅದೇ ನಮ್ಮ ಚಿತ್ರದ ಕಥೆ ಎನ್ನುತ್ತಾರೆ ಸಲಗ ವಿಜಯ್.

    ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಅವರದ್ದೇ. ಸಂಭಾಷಣೆ ಮಾಸ್ತಿಯವರದ್ದು. ಸದ್ಯಕ್ಕೆ ತೆಲುಗಿನಲ್ಲಿ ನಟಿಸುತ್ತಿರೋ ವಿಜಯ್, ಆ ಚಿತ್ರದ ಶೂಟಿಂಗ್ ನಡುವೆಯೇ ಭೀಮ ಚಿತ್ರದ ಕಥೆಗೆ ಫೈನಲ್ ಟಚ್ ಕೊಡುತ್ತಿದ್ದಾರೆ. ನಂತರ ಕನ್ನಡಕ್ಕೆ ಬಂದರೆ ಶ್ರೇಯಸ್ ಮಂಜು ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರ ಮಾಡಬೇಕಿದೆ. ಅವೆರಡೂ ಮುಗಿದ ಮೇಲೆ ಸಲಗ ಸೆಟ್ಟೇರಲಿದೆ.

    ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಪಕರಾಗಿರೋ ಚಿತ್ರಕ್ಕೆ ತಾಂತ್ರಿಕ ವರ್ಗ ಒಂದು ಹಂತಕ್ಕೆ ಫೈನಲ್ ಆಗಿದೆ. ಕ್ಯಾಮೆರಾಗೆ ಶಿವಸೇನಾ, ಸಂಗೀತಕ್ಕೆ ಚರಣ್ ರಾಜ್ ಇದ್ದಾರೆ. ಉಳಿದಂತೆ ತಾರಾಗಣ ಸೇರಿದಂತೆ ಹಲವು ಕೆಲಸಗಳಿನ್ನೂ ಬಾಕಿಯಿವೆ.

  • ಸಲಗ ಕ್ರಿಕೆಟ್ ಟೂರ್ನಿ

    ಸಲಗ ಕ್ರಿಕೆಟ್ ಟೂರ್ನಿ

    ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಡೈರೆಕ್ಷನ್ ಮಾಡಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಫೈನಲ್ ಹಂತದಲ್ಲಿದೆ. ಬಿಡುಗಡೆಗೆ ಮುನ್ನ ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ನಡೆಸಲು ಚಿಂತಿಸಿರೋ ದುನಿಯಾ ವಿಜಿ, ಸಲಗ ಕ್ರಿಕೆಟ್ ಟೂರ್ನಿ ನಡೆಸೋ ಪ್ಲಾನ್ ಮಾಡಿದ್ದಾರೆ.

    ಚಿತ್ರದ ಕಲಾವಿದರೆಲ್ಲ ಒಂದು ಟೀಂ, ತಂತ್ರಜ್ಞರೆಲ್ಲ ಒಂದು ಟೀಂ. ಜೊತೆಗೆ ಅಭಿಮಾನಿ ಸಂಘಟನೆಗಳ ಸದಸ್ಯರು. ಇವರೆಲ್ಲರನ್ನೂ ಸೇರಿಸಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮಾಡೋ ಪ್ರಯತ್ನದಲ್ಲಿದ್ದೇನೆ. ನನ್ನ ಅಭಿಮಾನಿ ಸಂಘಗಳ ಸದಸ್ಯರ ಜೊತೆ ಈ ಕುರಿತು ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ ದುನಿಯಾ ವಿಜಿ.

    ಹೊಸಪೇಟೆ, ಮೈಸೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಸೋದು ಸಲಗ ಟೀಂ ಪ್ಲಾನ್. ಅಂದಹಾಗೆ ಕೆ.ಪಿ.ಶ್ರೀಕಾಂತ್ ಕೂಡಾ ಒಳ್ಳೆಯ ಕ್ರಿಕೆಟ್ ಆಟಗಾರ. ಸಲಗ ಸಿನಿಮಾ ಏಪ್ರಿಲ್ನಲ್ಲಿ ಬರೋಕೆ ರೆಡಿಯಾಗಿದೆ.

  • ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪವರ್

    ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪವರ್

    ಸಲಗ. ಚಿತ್ರದ ಬಳಗವೇ ದೊಡ್ಡದು. ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾದರೆ, ದುನಿಯಾ ವಿಜಯ್, ಡಾಲಿ ಧನಂಜಯ್, ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್, ಚರಣ್ ರಾಜ್ ಮ್ಯೂಸಿಕ್ಕು.. ಹೀಗೆ ದೊಡ್ಡ ದೊಡ್ಡವರ ಶಕ್ತಿಯೇ ಸೇರಿದೆ. ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವೂ ಸಿಕ್ಕಿದೆ. ಶಿವಣ್ಣ ಫ್ಯಾಮಿಲಿಯ ಸದಸ್ಯರಂತೆಯೇ ಇರುವ ಕೆ.ಪಿ.ಶ್ರೀಕಾಂತ್ ಅವರ ಸಲಗ ಚಿತ್ರವನ್ನು ಅರ್ಪಿಸುತ್ತಿರುವುದು ಗೀತಾ ಶಿವರಾಜ್‍ಕುಮಾರ್. ಇದೆಲ್ಲದರ ಜೊತೆಗೆ ಪವರ್ ಸ್ಟಾರ್ ಪುನೀತ್ ಪವರ್ ಕೂಡಾ ಸಲಗ ಚಿತ್ರಕ್ಕೆ ಸಿಕ್ಕಿದೆ.

    ರಿಲೀಸ್ ಮಾಡೋಕೂ ಮೊದಲು ಸಲಗ ಟೀಂ ಅಕ್ಟೋಬರ್ 10ರಂದು ಸಲಗ ಚಿತ್ರದ ಪ್ರೀ-ಈವೆಂಟ್ ಶೋ ಇಟ್ಟುಕೊಂಡಿದೆ. ಆ ದಿನ ಸಲಗ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಅದನ್ನು ರಿಲೀಸ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಸಲಗನ ಆರ್ಭಟ ಜೋರಾಗುತ್ತಿದೆ. 

  • ಸಲಗ ಟೈಟಲ್ ಟ್ರ್ಯಾಕ್ ಸ್ಮಶಾನದಲ್ಲಿ..

    salaga title track shooting in burial ground

    ದುನಿಯಾ ವಿಜನ್ ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಚಿತ್ರೀಕರಣ ಫೈನಲ್ ಹಂತದಲ್ಲಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಸ್ಮಶಾನದ ಸೆಟ್ಟಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಜಿಂಕೆ ಪಾರ್ಕ್ ಬಳಿಯ ಸ್ಮಶಾನದಲ್ಲೂ ಚಿತ್ರೀಕರಣ ಮಾಡಲಾಗಿದ್ದು, ಮಿಕ್ಕಂತೆ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಹಾಕಿರುವ ಸ್ಮಶಾನದ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅದೊಂದು ಮುಗಿದರೆ ಚಿತ್ರೀಕರಣ ಮುಗಿದಂತೆ ಎಂದಿದ್ದಾರೆ ದುನಿಯಾ ವಿಜಯ್.

    ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಶಿವಕುಮಾರ್  ಹಾಕಿ ಕೊಟ್ಟಿರುವ ಸೆಟ್ ಬಗ್ಗೆ ಸಖತ್ ಖುಷಿಯಾಗಿದ್ದಾರೆ. ಹಾಡಿನ ಕಾನ್ಸೆಪ್ಟ್‍ಗೆ ಈ ಸೆಟ್ ಅದ್ಧೂರಿಯಾಗಿ ಸೆಟ್ ಆಗುತ್ತಿದೆ ಎಂದಿರುವ ಅವರು ಶಿವಕುಮಾರ್ ಕೆಲಸವನ್ನು ಹಾಡಿ ಹೊಗಳಿದ್ದಾರೆ.

    ದುನಿಯಾ ವಿಜಯ್ ಹೀರೋ ಆಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜನಾ ಆನಂದ್ ನಾಯಕಿ.

  • ಸಲಗ ನಡೆದದ್ದೇ ದಾರಿ

    salaga teaser laucnhed

    ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗದ ಟೀಸರ್ ರಿಲೀಸ್ ಆಗಿದೆ. ದುನಿಯಾ ವಿಜಿ ಹುಟ್ಟುಹಬ್ಬಕ್ಕೆ ಚಿತ್ರತಂಡ ನೀಡಿರುವ ಕಾಣಿಕೆ ಇದು. ಟೀಸರ್‍ನಲ್ಲಿ ಅಬ್ಬಿರಿಸಿರುವುದು ರೌಡಿಸಂ. ರೌಡಿಸಂ ಚಿತ್ರಕ್ಕೆ ಓಂಕಾರ ಬರೆದ ಉಪೇಂದ್ರ ಅವರೇ ಟೀಸರ್ ರಿಲೀಸ್ ಮಾಡಿದ್ದು ಸ್ಪೆಷಲ್ಲು.

    ಡಾಲಿ ಧನಂಜಯ್ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿದ್ದರೆ, ರೌಡಿ ಸಲಗನಾಗಿ ವಿಜಿ, ತಣ್ಣಗೆ ಅಬ್ಬರಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿರೋ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ದೇಶಕ. ಬಹುತೇಕ ಟಗರು ಚಿತ್ರತಂಡ ಸಲಗ ಚಿತ್ರಕ್ಕೆ ಕೆಲಸ ಮಾಡಿದೆ. ಅಂದಹಾಗೆ ಸಲಗ ಚಿತ್ರಕ್ಕೆ ಟ್ಯಾಗ್‍ಲೈನ್ ನಡೆದದ್ದೇ ದಾರಿ.

  • ಸಲಗ ರಿಲೀಸ್ : ಕೊರೊನಾ ಅಡ್ಡಗಾಲು

    ಸಲಗ ರಿಲೀಸ್ : ಕೊರೊನಾ ಅಡ್ಡಗಾಲು

    ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಲಗ ರಿಲೀಸ್ ಆಗಬೇಕಿತ್ತು. ಆದರೀಗ ಮತ್ತೆ ಸಲಗನಿಗೆ ಕೊರೊನಾ ಅಡ್ಡಗಾಲು ಹಾಕಿದೆ. ಕಳೆದ ವೀಕೆಂಡ್‍ನಿಂದ ರಾಜ್ಯದ 8 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮತ್ತು ನೈಟ್  ಕಫ್ರ್ಯೂ ಜಾರಿಗೆ ಬಂದಿರೋದೇ ಇದಕ್ಕೆ ಕಾರಣ.

    ಆಗಸ್ಟ್ 1ರಿಂದ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡೆವು. ಆದರೀಗ ಪರಿಸ್ಥಿತಿ ಬದಲಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ , ವಾರದ ಅಂತ್ಯದಲ್ಲಿ ಶೇ.50 ಇರಲಿ, ಚಿತ್ರಮಂದಿರಗಳನ್ನೇ ತೆರೆಯುವ ಹಾಗಿಲ್ಲ. ಜೊತೆಗೆ ನೈಟ್ ಕಫ್ರ್ಯೂ. ಸೆಕೆಂಡ್ ಶೋಗೆ ಮತ್ತೆ ಪ್ರಾಬ್ಲಂ. ಈ ಪರಿಸ್ಥಿತಿಯಲ್ಲಿ ಬಿಡುಗಡೆ ಬಗ್ಗೆ ಯೋಚಿಸುವಂತಾಗಿದೆ. ಸರ್ಕಾರದ ಜೊತೆ ಮಾತನಾಡಿ ಬಿಡುಗಡೆ ಮಾಡಬೇಕೋ.. ಬೇಡವೋ.. ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

  • ಸಲಗ ರೀ-ರೆಕಾರ್ಡಿಂಗ್ ಮತ್ತೆ ಶುರು

    salaga starts re recording once again

    ದುನಿಯಾ ವಿಜಯ್, ಕೆ.ಪಿ.ಶ್ರೀಕಾಂತ್ ಕಾಂಬಿನೇಷನ್‍ನ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ, ಚಿತ್ರೀಕರಣವನ್ನೆಲ್ಲ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿತ್ತು. ಅದಕ್ಕೆ ಬ್ರೇಕ್ ಹಾಕಿದ್ದ ಕೊರೊನಾ ಲಾಕ್ ಡೌನ್, ಸಡಿಲಿಕೆಯಾಗಿದ್ದೇ ತಡ, ಕೆಲಸ ಶುರು ಮಾಡಿದ್ದಾರೆ ವಿಜಿ.

    ಭೂಗತ ಲೋಕದ ಕಥಾ ಹಂದರವಿರುವ ಚಿತ್ರದಲ್ಲಿ ಕೆಲವೊಂದು ಕಡೆ ಲೋಪದೋಷಗಳಿವೆ ಎನ್ನಿಸಿ ನಿರ್ದೇಶಕ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್‍ರಾಜ್ ಮತ್ತೊಮ್ಮೆ ರೀ-ರೆಕಾರ್ಡಿಂಗ್ ಮಾಡುತ್ತಿದ್ದಾರೆ.

    ದುನಿಯಾ ವಿಜಯ್ ಎದುರು ಡಾಲಿ ಧನಂಜಯ್ ಪ್ರತಿ ನಾಯಕರಾಗಿದ್ದರೆ, ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

  • ಸಲಗ ವಿಜಿಗೆ ಮಹಾಕಾಳಮ್ಮ ದೇವಿಯ ಕೃಪೆ

    salaga making video released

    ದುನಿಯಾ ವಿಜಿ ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಮೇಕಿಂಗ್ ದೃಶ್ಯ ಹೊರಬಿದ್ದಿವೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಿ ಎದುರು ಸಂಜನಾ ಆನಂದ್ ನಾಯಕಿ. ಚಿತ್ರದಲ್ಲಿ ದುನಿಯಾ ವಿಜಿ ಸಾಮ್ರಾಟ್ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರದಲ್ಲಿ ದುನಿಯಾ ವಿಜಿ ಮಹಾಕಾಳಮ್ಮ ದೇವಿಯ ಮೊರೆ ಹೋಗಿದ್ದಾರೆ. ಜಯಮ್ಮನ ಮಗ ಚಿತ್ರದಂತೆಯೇ ಈ ಚಿತ್ರದಲ್ಲೂ ತಾವು ಕಾಳಿಯ ಭಕ್ತ ಎಂದು ಋಜುವಾತು ಮಾಡಿದ್ದಾರೆ ದುನಿಯಾ ವಿಜಿ. ಚಿತ್ರದ ಮೊದಲ ಶಾಟ್ನ್ನು ದುನಿಯಾ ವಿಜಿ ದೇವಿಯ ಮೇಲೆಯೇ ಚಿತ್ರೀಕರಿಸಿದ್ದರು. ಅಷ್ಟೇ ಅಲ್ಲ, ಯಲ್ಲಮ್ಮನ ಗುಡ್ಡದಲ್ಲೂ ಚಿತ್ರದ ಚಿತ್ರೀಕರಣವಾಗಿದೆ. ಚಿತ್ರವನ್ನು ದುನಿಯಾ ರಿಲೀಸ್ ಆದ ಡೇಟ್ನಲ್ಲೇ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.

  • ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ ರಿಲೀಸ್ ಆಗಿದ್ದು ಆಯುಧಪೂಜೆಗೆ. ಕೋಟಿಗೊಬ್ಬ 3 ರಿಲೀಸ್ ಆಗಿದ್ದು ವಿಜಯದಶಮಿಗೆ. ಆಯುಧಪೂಜೆಯಂದೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3, ಗೊಂದಲ, ವಿವಾದಗಳಿಂದ ಒಂದು ದಿನ ತಡವಾಗಿ ಥಿಯೇಟರಿಗೆ ಬಂತು. ಸೂರಪ್ಪ ಬಾಬು ಪ್ಲಾನಿಂಗ್ ಕೊರತೆ ಇತ್ತ ಕಾಣಿಸುತ್ತಿದ್ದರೆ, ಅತ್ತ ಪಕ್ಕಾ ಪ್ಲಾನ್‍ನೊಂದಿಗೆ ರಿಲೀಸ್ ಮಾಡಿದ್ದ ಕೆ.ಪಿ.ಶ್ರೀಕಾಂತ್ ತಮ್ಮ ಚಿತ್ರವನ್ನು ಅಚ್ಚುಕಟ್ಟಾಗಿ ಪ್ರೇಕ್ಷರಕ ಮುಂದಿಟ್ಟಿದ್ದರು. ಒಂದು ದಿನದ ಗ್ಯಾಪ್‍ನಲ್ಲಿ ರಿಲೀಸ್ ಆದ ಎರಡೂ ಸ್ಟಾರ್ ನಟರ ಚಿತ್ರಗಳಲ್ಲಿ ಗೆದ್ದೋರು ಯಾರು?

    ಆಯುಧಪೂಜೆಯ ದಿನ ರಿಲೀಸ್ ಆದ ಸಲಗ ಮೊದಲ ದಿನ ಗಳಿಸಿದ್ದು 8 ಕೋಟಿಗೂ ಹೆಚ್ಚು. ದುನಿಯಾ ವಿಜಯ್ ಚಿತ್ರಗಳಲ್ಲಿ ಇದು ಮೊದಲ ದಿನದ ದಾಖಲೆ. ಅದಾದ ನಂತರವೂ ಸಲಗ ವೀಕೆಂಡ್ ಮತ್ತು ಹಬ್ಬದ ರಜಾ ದಿನಗಳ ಸದುಪಯೋಗ ಪಡಿಸಿಕೊಂಡಿತು. ಸೋಮವಾರದ ನಂತರವೂ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದೆ. ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡುವುದಿಲ್ಲ ಎನ್ನುವ ಮೂಲಕ ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ ಸಲಗ ಟೀಂ.

    ಸುದೀಪ್ ಅವರ ಕೋಟಿಗೊಬ್ಬ 3, ಮೊದಲ ದಿನ ಗಳಿಸಿದ್ದು 12 ಕೋಟಿಗೂ ಹೆಚ್ಚು. ಒಂದು ದಿನದ ನಷ್ಟ ಮಾಡಿಕೊಂಡರೂ ನಂತರವೂ ಮುನ್ನುಗ್ಗಿತು. ಕೋಟಿಗೊಬ್ಬ 3 ಕಲೆಕ್ಷನ್ ಕೂಡಾ ಸ್ಥಿರತೆ ಕಾಯ್ದುಕೊಂಡಿದೆ.

    ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಂದರೆ ನಷ್ಟವಾಗಬಹುದು ಎಂದು ಆತಂಕಗೊಂಡಿದ್ದ ಚಿತ್ರರಂಗಕ್ಕೆ ಇದು ರಿಲ್ಯಾಕ್ಸಿಂಗ್ ನ್ಯೂಸ್. ಎರಡೂ ಗೆದ್ದಿವೆ. ಶೀಘ್ರದಲ್ಲೇ ಎರಡೂ ಚಿತ್ರಗಳ ನಿರ್ಮಾಪಕರು ಸಕ್ಸಸ್ ಮೀಟ್ ಕರೆದು ವಿವರ ಹಂಚಿಕೊಳ್ಳಲಿದ್ದಾರೆ.

  • ಸಲಗ'ನನ್ನು `ಪ್ರಾರಂಭ'ದಲ್ಲೇ ಕಟ್ಟಿ ಹಾಕಿದ ಚೈನೀಸ್ ವೈರಸ್

    corona virus halts salaga release

    ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರಕ್ಕೆ ಕೊರೋನಾ ಬ್ರೇಕ್ ಹಾಕಿದೆ. ಚೈನೀಸ್ ವೈರಸ್ ಅಟ್ಟಹಾಸಕ್ಕೆ ಎಲ್ಲವೂ ರೆಡಿಯಿದ್ದು ಮುಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ನಾವು ರಿಲೀಸ್ ಡೇಟ್ ಹೇಳಿರಲಿಲ್ಲ. ಆದರೆ, ರಿಲೀಸ್ ಮಾಡೋಕೆ ರೆಡಿ ಇದ್ದೆವು. ಮಾರ್ಚ್ ಕೊನೆ ವಾರ ಅಥವಾ ಏಪ್ರಿಲ್ ಮೊದಲ ವಾರ ಬರೋಣ ಎನ್ನುವ ಪ್ಲಾನ್‍ನಲ್ಲಿದ್ದೆವು. ಈಗ ಎಲ್ಲವೂ ಚೇಂಜ್ ಆಗಿದೆ. ಸದ್ಯಕ್ಕಂತೂ ರಿಲೀಸ್ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

    ಮನುರಂಜನ್ ರವಿಚಂದ್ರನ್ ಆಭಿನಯದ ಪ್ರಾರಂಭ ಚಿತ್ರದ ರಿಲೀಸ್‍ಗೂ ಬ್ರೇಕ್ ಬಿದ್ದಿದೆ. ಮಾರ್ಚ್ 27ಕ್ಕೆ ಪ್ರಾರಂಭ ರಿಲೀಸ್ ಆಗಬೇಕಿತ್ತು. ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ರಿಲೀಸ್ ಡೇಟ್ ಕೂಡಾ ಹೆಚ್ಚೂ ಕಮ್ಮಿ ಆಗಿದೆ.

  • ಸಲಗನಿಗೆ ಟಗರು ಶುಭ ಹಾರೈಕೆ

    ಸಲಗನಿಗೆ ಟಗರು ಶುಭ ಹಾರೈಕೆ

    ಸಲಗ. ಇದೇ ದಸರಾಗೆ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಚಿತ್ರ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಮೂಲಕ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರೂ ಆಗಿರುವ ಚಿತ್ರ. ಈ ಚಿತ್ರಕ್ಕೀಗ ಟಗರಿನ ಬಲ ಸಿಕ್ಕಿದೆ. ರಾಜ್ಯ ರಾಜಕೀಯದಲ್ಲಿ ಟಗರು ಎಂದೇ ಫೇಮಸ್ ಆಗಿರೋ ಕಾಂಗ್ರೆಸ್ ಲೀಡರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

    ದುನಿಯಾ ವಿಜಯ್ ಅವರೊಂದಿಗೆ ತಮ್ಮನ್ನು ಭೇಟಿ ಮಾಡಿದ ಚಿತ್ರತಂಡಕ್ಕೆ ಶುಭ ಕೋರಿರುವ ಸಿದ್ದರಾಮಯ್ಯ, ದುನಿಯಾ ವಿಜಯ್ ಅವರನ್ನು ಪ್ರತಿಭಾವಂತ ಕಲಾವಿದ ಎಂದು ಹೊಗಳಿದ್ದಾರೆ. ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ಸಕ್ಸಸ್ ಆಗಲಿ ಎಂದಿದ್ದಾರೆ. ಅಂದಹಾಗೆ ಸಲಗ ಚಿತ್ರದ ಮುಹೂರ್ತಕ್ಕೂ ಸಿದ್ದರಾಮಯ್ಯ ಬಂದು ಶುಭ ಕೋರಿದ್ದರು.

    ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಸಲಗ. ಸಂಜನಾ ಆನಂದ್ ನಾಯಕಿ. ಚಿತ್ರ ಸೆನ್ಸಾರ್ ಮುಗಿಸಿದ್ದು, ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.

  • ಸಲಗನಿಗೆ ಮಲೇಷ್ಯಾ ಹಿಪ್ ಹಾಪ್ ಸಿಂಗರ್ ಜೋಷ್

    salaga gets malaysian hip hop singer

    ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಿನಿಮಾದ ಹಾಡು ಸೂರಿ ಅಣ್ಣಾ ಈಗಾಗಲೇ ಬೊಂಬಾಟ್ ಹಿಟ್ ಆಗಿ ಪಾರ್ಟಿ ಸಾಂಗ್ ಆಗಿದೆ. ಈಗ ಸಲಗದ ಟೈಟಲ್ ಟ್ರ್ಯಾಕ್‍ಗೆ ಮಲೇಷ್ಯಾದ ಹಿಪ್ ಹಾಪ್ ಸಿಂಗರ್ ಬಂದಿದ್ದಾರೆ.

    ಯೋಗಿ ಬಿ. ಎಂಬ ಈ ರ್ಯಾಪ್ ಸಿಂಗರ್, ಮೂಲತಃ ತಮಿಳಿನವರೇ. ಆದರೆ ಹಿಪ್ ಹಾಪ್ ಸಿಂಗರ್ ಆಗಿ ಹೆಸರು ಮಾಡಿರೋದು ಮಲೇಷ್ಯಾದಲ್ಲಿ. ಅಫ್‍ಕೋರ್ಸ್, ಇತ್ತೀಚೆಗೆ ರಜನಿಯ ದರ್ಬಾರ್, ಕಾಲ, ಧನುಷ್‍ರ ಪಟಾಸ್ ಸಿನಿಮಾಗಳಲ್ಲೂ ಹಾಡಿದ್ದಾರೆ.

    ಈ ಹಾಡಿಗಾಗಿ ಆ ಗಾಯಕ ನಮ್ಮೊಂದಿಗೆ 3 ದಿನ ಇದ್ದು ಪ್ರಾಕ್ಟೀಸ್ ಮಾಡಿ ಹಾಡಿದ್ದಾರೆ. ಅವರ ಜೊತೆ ಸಂಚಿತ್ ಹೆಗ್ಡೆ ಅವರ ವಾಯ್ಸ್ ಕೂಡಾ ಇರಲಿದೆ. ಇದು ಟಗರು ಬಂತು ಟಗರು ಶೈಲಿಯಲ್ಲೇ ಹಿಟ್ ಆಗಲಿದೆ ಅನ್ನೋ ಕಾನ್ಫಿಡೆನ್ಸು, ಸಂಗೀತ ನಿರ್ದೇಶಕ ಚರಣ್ ರಾಜ್ ಅವರದ್ದು.

    ಈ ಹಾಡಿಗೆ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಹ್ಯಾಂಡ್ಸಪ್ ಹಾಡು ಬರೆದಿದ್ದ ನಾಗಾರ್ಜುನ ಶರ್ಮಾ ಅವರೇ ಸಾಹಿತ್ಯ ಒದಗಿಸಿದ್ದಾರೆ. ಹಾಡಿಗಾಗಿ ಸ್ಮಶಾನದಲ್ಲಿಯೂ ಚಿತ್ರೀಕರಣವಾಗಿದೆ. ಇಷ್ಟೆಲ್ಲ ಸ್ಪೆಷಾಲಿಟಿ ಇರುವ ಹಾಡು ಹೇಗಿರಲಿದೆ.. ಕುತೂಹಲ ತಣಿಯಲು ತುಂಬಾ ದಿನ ಕಾಯಬೇಕಿಲ್ಲ.

  • ಸಲಗನಿಗೆ ಲಕ್ಕಿ ಸಿದ್ದು ಆಶೀರ್ವಾದ

    siddaramaiah wishes salaga team

    ದುನಿಯಾ ವಿಜಯ್ ಅಭಿನಯದ, ಅವರೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಲಗ ಚಿತ್ರ, ಆಷಾಡಕ್ಕೆ ಮೊದಲೇ ಸೆಟ್ಟೇರಿದೆ. ವಿಶೇಷವೆಂದರೆ ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಸಿಕ್ಕಿರುವುದು.

    ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಮೈಲಾರಿ ಹಾಗೂ ಟಗರು ಚಿತ್ರಗಳಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದವರು ಸಿದ್ದರಾಮಯ್ಯ. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಈಗ ಸಲಗ ಸಿನಿಮಾಗೆ ಸಿದ್ದು ಶುಭಕೋರಿದ್ದಾರೆ, ಶ್ರೀಕಾಂತ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದ್ದಾರೆ.

    ಸಲಗದ ಕಥೆ ನನಗೆ ಗೊತ್ತಿಲ್ಲ. ವಿಜಯ್ ಹೇಳಿಲ್ಲ. ಅದರೆ, ಗುಂಪು ಸಲಗಗಳಿಗಿಂತ ಒಂಟಿಸಲಗಗಳು ಹೆಚ್ಚು ಅಪಾಯಕಾರಿ ಎಂದ ಸಿದ್ದರಾಮಯ್ಯ, ತಾವು ದುನಿಯಾ ವಿಜಯ್ ಅಭಿನಯದ ಎರಡು ಚಿತ್ರಗಳನ್ನು ನೋಡಿದ್ದೇನೆ ಎಂದು ನೆನಪಿಸಿಕೊಂಡರು.

    ಮುಹೂರ್ತ ಸಮಾರಂಭಕ್ಕೆ ಕಿಚ್ಚ ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಸಂಸದ ಡಿ.ಕೆ.ಸುರೇಶ್ ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.

  • ಸಿದ್ಧಿ ಜನಾಂಗಕ್ಕೆ ಸಲಗ ಕೊಟ್ಟ ಗೋಲ್ಡನ್ ಚಾನ್ಸ್

    ಸಿದ್ಧಿ ಜನಾಂಗಕ್ಕೆ ಸಲಗ ಕೊಟ್ಟ ಗೋಲ್ಡನ್ ಚಾನ್ಸ್

    ದುನಿಯಾ ವಿಜಿ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ, ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ, ಹಲವು ವಿಶಿಷ್ಟ ಹೆಜ್ಜೆಗಳನ್ನಿಡುತ್ತಿದೆ. ಮಲೇಷ್ಯಾ ರ್ಯಾಪರ್ ಯೋಗಿಯಿಂದ ಒಂದು ಹಾಡು ಹಾಡಿಸಿದ್ದ ವಿಜಿ, ಈಗ ಇನ್ನೊಂದು ಹಾಡನ್ನು ಗಿರಿಜಾ ಪರಶುರಾಮ್ ಸಿದ್ದಿ ಮತ್ತು ಗೀತಾ ಸಿದ್ದಿಯವರಿಂದ ಹಾಡಿಸಿದ್ದಾರೆ.

    ಸಿದ್ದಿ ಜನಾಂಗ, ಕರ್ನಾಟಕದ ಬುಡಕಟ್ಟು ಜನಾಂಗದಲ್ಲಿ ಒಂದು. ಆದರೆ ಮುಖ್ಯ ವಾಹಿನಿಯಲ್ಲಿ ಇವರಿಗೆ ಅವಕಾಶಗಳು ಇಲ್ಲವೇ ಇಲ್ಲ ಎನ್ನಬೇಕು. ಅಂತಹ ಸಮುದಾಯದ ಪ್ರತಿಭೆಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ ವಿಜಿ.

    ಚರಣ್‍ರಾಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡು, ಚಿತ್ರದ ಸನ್ನಿವೇಶಕ್ಕೆ ಪೂರಕವಾಗಿದೆ. ಅವರ ಧ್ವನಿ ಈ ಹಾಡಿಗೆ ಅದ್ಭುತವಾಗಿ ಹೊಂದಿಕೊಂಡಿದೆ ಎಂದಿದ್ದಾರೆ ಚರಣ್‍ರಾಜ್. ಏಪ್ರಿಲ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ.

  • ಸೂರಿ ಅಣ್ಣಾ.. ಏನಣ್ಣಾ.. ಏನಣ್ಣ.. ಹಾಡು ಹಿಟ್ಟಾಯ್ತಲ್ಲಣ್ಣ..

    soori anna song is super hit

    ಅದು ಸೂರಿ ಅಣ್ಣಾ ಸಾಂಗು. ಕುಡುಕರ ಗೀತೆ. ಈ ಗೀತೆಗೆ ಸಾಹಿತ್ಯ ದುನಿಯಾ ವಿಜಯ್ ಮತ್ತು ಕಿರಣ್. ಌಂಥೋನಿ ದಾಸನ್ ಹಾಡಿರುವ ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿದೆ. ಪಕ್ಕಾ ಲೋಕಲ್ ಬೆಂಗಳೂರು ಲಾಂಗ್ವೇಜು. ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ಆದರೂ, ಹಾಡನ್ನು ಕಂಪೋಸ್ ಮಾಡಿರುವವರ ಟೈಟಲ್ ಕಾರ್ಡಿನಲ್ಲಿ ನವೀನ್ ಸಜ್ಜು ಹೆಸರೂ ಇದೆ.

    ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಸಲಗ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿರುವ ಚಿತ್ರವಿದು. 10 ಜನ ನಿರ್ದೇಶಕರು, 10 ಜನ ನಿರ್ಮಾಪಕರು ಒಟ್ಟಿಗೇ ಹಾಜರಿದ್ದು ಸಲಗ ಆಡಿಯೋ ರಿಲೀಸ್ಗೆ ಶುಭ ಕೋರಿದರು. ಪ್ರಮುಖ ಆಕರ್ಷಣೆಯಾಗಿದ್ದವರು ಶಿವರಾಜ್ ಕುಮಾರ್ ಮತ್ತು ನಿವೃತ್ತ ಡಿಜಿಪಿ ಓಂಪ್ರಕಾಶ್.

    ಟಗರು ಚಿತ್ರವೂ ಒಂದೇ.. ಸಲಗ ಚಿತ್ರವೂ ಒಂದೇ. ಈ ಚಿತ್ರಕ್ಕೆ ಪ್ರೇಕ್ಷಕರ ಆಶೀರ್ವಾದವಿರಲಿ ಎಂದು ಹಾರೈಸಿದ ಶಿವಣ್ಣ, ಚರಣ್ ಸಂಗೀತಕ್ಕೆ ನಾನು ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು.

  • ಸೂರಿ ಕೈ ತಪ್ಪಿತೇ ಕಾಗೆ ಬಂಗಾರ..?

    khaage bangara confusion

    ದುನಿಯಾ ಸೂರಿಯವರ ಡ್ರೀಮ್ ಪ್ರಾಜೆಕ್ಟ್ ಕಾಗೆ ಬಂಗಾರ. ಕೆಂಡ ಸಂಪಿಗೆ ಚಿತ್ರ ಇದ್ಯಲ್ಲ, ಅದರ ಪ್ರೀವರ್ಷನ್ ಅಂದರೆ ಹಿಂದಿನ ಭಾಗ ಕಾಗೆ ಬಂಗಾರ. ಇತ್ತೀಚೆಗೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲೂ ಕಾಗೆ ಬಂಗಾರ ಟೇಕಾಫ್ ಆಗುವ ಸುಳಿವು ಕೊಟ್ಟಿದ್ದರು ದುನಿಯಾ ಸೂರಿ. ಆದರೆ, ಈಗ ಆ ಕಾಗೆ ಬಂಗಾರ ಸೂರಿಯವರ ಕೈ ತಪ್ಪಿತೇ ಎನ್ನುವ ಡೌಟ್ ಶುರುವಾಗಿದೆ.

    ಕಾರಣ ಇಷ್ಟೆ, ದಿನೇಶ್ ಗೌಡ ಎನ್ನುವವರು ಕಾಗೆ ಬಂಗಾರ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಪೋಸ್ಟರ್ ಡಿಸೈನ್ ಮಾಡಿಸಿ ಸೋಷಿಯಲ್ ಮೀಡಿಯಾಗೂ ಕೊಟ್ಟಿದ್ದಾರೆ. ಹಾಗಾದರೆ.. ಸೂರಿಯವರ ಕಾಗೆ ಬಂಗಾರದ ಕಥೆ ಏನಾಯ್ತು..? ಸಸ್ಪೆನ್ಸ್ ಹಾಗೆಯೇ ಇದೆ.