ಚಿತ್ರವೊಂದರ ಆಡಿಯೋ ಬಿಡುಗಡೆ ಎಂದರೆ, ಅಲ್ಲಿ ಹೀರೋ, ಹೀರೋಯಿನ್, ಸಂಗೀತ ನಿರ್ದೇಶಕರು, ಗಾಯಕರು, ಒಂದಿಷ್ಟು ಹಾಡು, ನೃತ್ಯ ಇರುತ್ತೆ. ನಿರ್ದೇಶಕರು ಆ ದಿನ ತೆರೆಮರೆಯಲ್ಲೇ ಇರಲು ಬಯಸುತ್ತಾರೆ. ಆದರೆ, ಆರ್. ಚಂದ್ರು ಯಾವತ್ತಿಗೂ ಡಿಫರೆಂಟು. ಅವರು ತಮ್ಮ ಕನಕ ಚಿತ್ರದ ಆಡಿಯೋ ಲಾಂಚ್ ವೇಳೆ ಮಾಡಿದ್ದು ಹಾಗೆಯೇ ಇತ್ತು. ಫುಲ್ ಡಿಫರೆಂಟು. ಅವರು `ಕನಕ' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ತಮ್ಮ ಸಮಕಾಲೀನ ನಿರ್ದೇಶಕರನ್ನೇ ವೇದಿಕೆಗೆ ಕರೆದು, ಗೌರವಿಸಿದರು.
ನಿರ್ದೇಶಕ ಯೋಗರಾಜ್ ಭಟ್, ಸೂರಿ, ಶಶಾಂಕ್ ಹಾಗೂ ಆರ್. ಚಂದ್ರು ಗೌರವಕ್ಕೆ ಪಾತ್ರರಾದರು. ಅವರನ್ನು ವೇದಿಕೆಗೆ ಗೌರವಿಸಿದರು. ನಟ ದುನಿಯಾ ವಿಜಯ್ ತಮ್ಮ ತಮ್ಮ ಪತ್ನಿ, ಮಕ್ಕಳ ಸಮೇತ ವೇದಿಕೆಯಲ್ಲಿದ್ದರು.
ಸನ್ಮಾನ ಸ್ವೀಕರಿಸಿದ ಯೋಗರಾಜ್ ಭಟ್, ಕೆಲವರು ನನ್ನನ್ನು ಈಗಾಗಲೇ ಗುರುಗಳ ಪಟ್ಟಕ್ಕೆ ಏರಿಸಿಬಿಟ್ಟಿದ್ದಾರೆ. ಆದರೆ, ನಾನಿನ್ನೂ ಕಲಿಯುವ ಹಂತದಲ್ಲಿರುವ ಲಾಸ್ಟ್ ಬೆಂಚ್ ಪೋಲಿ ವಿದ್ಯಾರ್ಥಿ ಎಂದು ಹೇಳಿಕೊಂಡರು.
ನಿರ್ದೇಶಕ ಸೂರಿ ದುನಿಯಾ ಚಿತ್ರ ಸೃಷ್ಟಿಯಾದ ದಿನಗಳನ್ನು ನೆನಪಿಸಿಕೊಂಡರೆ, ಶಶಾಂಕ್, ಮೊಗ್ಗಿನ ಮನಸ್ಸು ದಿನಗಳಿಗೆ ಜಾರಿದರು. ಕನಕ ಚಿತ್ರದ ಆಡಿಯೋ ಲಾಂಚ್ ವಿಭಿನ್ನ ಎನಿಸಿದ್ದು ಇದೇ ಕಾರಣಕ್ಕೆ.