` duniya vijay, - chitraloka.com | Kannada Movie News, Reviews | Image

duniya vijay,

  • ಭೀಮನ ನಾಟಿ ಕೋಳಿ ಕಥೆ

    ಭೀಮನ ನಾಟಿ ಕೋಳಿ ಕಥೆ

    ನಾಟಿ ಕೋಳಿ ಹಿಡಿದು ನಿಂತಿರೋ ಈಕೆಯ ಹೆಸರು ಅಶ್ವಿನಿ. ಭೀಮ ಚಿತ್ರಕ್ಕೆ ಹೀರೋಯಿನ್. ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರ ಭೀಮ. ಮೊದಲ ಚಿತ್ರದಲ್ಲೂ ಹಲವು ಹೊಸಬರಿಗೆ ಅವಕಾಶ ಕೊಟ್ಟಿದ್ದ ವಿಜಯ್, ಈ ಚಿತ್ರದ ಮೂಲಕ ಹೊಸ ನಾಯಕಿಯನ್ನೇ ಪರಿಚಯ ಮಾಡಿದ್ದಾರೆ. ಅದೂ ಪ್ರೇಮಿಗಳ ದಿನಾಚರಣೆಯಂದು. ನಾಯಕಿಯ ಪರಿಚಯ ಮಾಡುವುದಕ್ಕೆ ಆಯ್ಕೆ ಮಾಡಿರುವ ದಿನದಲ್ಲೇ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಅಶ್ವಿನಿ ಜೋಡಿ ಎಂಬುದು ಗೊತ್ತಾಗುತ್ತೆ.

    ಅಶ್ವಿನಿ ಬೆಳ್ಳಿತೆರೆ, ಸಿನಿಮಾ ಹೊಸದು. ಆದರೆ ನಟನೆ ಹೊಸದಲ್ಲ. ಈಗಾಗಲೇ ರಂಗಭೂಮಿಯಲ್ಲಿ 15ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಕಲಾವಿದೆ. ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ ಆದರೂ, ಅಪ್ಪ-ಅಮ್ಮನ ಮೂಲಕ ಹಳ್ಳಿಯ ಸೊಗಡು ಚೆನ್ನಾಗಿಯೇ ಗೊತ್ತು. ದುನಿಯಾ ವಿಜಯ್ ಸೆಲೆಕ್ಷನ್ ಮತ್ತು ಫೋಟೋ ಸೆಷನ್ ಹೇಗಿರುತ್ತೆ ಅನ್ನೋದಕ್ಕೆ ಸಿಂಪಲ್ ಎಕ್ಸಾಂಪಲ್ ಹೇಳಬೇಕೆಂದರೆ ಅಶ್ವಿನಿಯ ಫೋಟೋ ರಿಲೀಸ್ ಆಗಿದ್ದೇ ತಡ, ನಾಟಿ ಕೋಳಿ, ನಾಟಿ ಹೀರೋಯಿನ್, ನಾಟಿ ಕ್ರಷ್ ಎಂದೆಲ್ಲ ಕರೆಯೋಕೆ ಶುರು ಮಾಡಿಬಿಟ್ಟರು. ಒಂದು ಫೋಟೋ ಯಾವ ಲೆವೆಲ್ಲಿನ ಕಿಚ್ಚು ಹಚ್ಚಬಹುದೋ ಅಷ್ಟನ್ನೂ ಭೀಮ ಚಿತ್ರದ ಒಂದು ಫೋಟೋ ಹಚ್ಚಾಗಿತ್ತು.

    ನನ್ನನ್ನು ಒಂದು ಬುಕ್ ಶೋನಲ್ಲಿ ನೋಡಿದರು. ಭೀಮ ಚಿತ್ರದಲ್ಲಿ ಒಂದು ಪಾತ್ರ ಇದೆ, ಮಾಡ್ತೀರಾ ಎಂದು ಕೇಳಿದರು. ನಾನು ಯೆಸ್ ಎಂದಿದ್ದರೆ. ಅದಾದ ನಂತರ ನಾನು ಮರೆತೂಬಿಟ್ಟಿದ್ದೆ. ಅವರು ಮರೆತಿರಲಿಲ್ಲ. 6 ತಿಂಗಳ ಹಿಂದೆ ಕರೆ ಬಂತು. ಆಗಲೇ ನನಗೆ ಗೊತ್ತಾಗಿದ್ದು, ನನ್ನದು ಹೀರೋಯಿನ್ ಪಾತ್ರ ಅಂತ ಎಂದು ಹೇಳುತ್ತಾರೆ ಅಶ್ವಿನಿ.

    ಹೊಸ ಮುಖ ಹುಡುಕುತ್ತಾ ಹೊರಟಾಗ ಸಿಕ್ಕ ಪ್ರತಿಭೆ ಅಶ್ವಿನಿ. ರಂಗಭೂಮಿಯಲ್ಲಿನ ಅವರ ನಟನೆ ನೋಡಿ ಆಯ್ಕೆ ಮಾಡಿದೆ ಎನ್ನುತ್ತಾರೆ ಡೈರೆಕ್ಟರ್ ವಿಜಯ್ ಕುಮಾರ್. ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣದ ಚಿತ್ರ ಭೀಮ.

  • ಮಂಗಳೂರು ಮೀನು ಮಾರುಕಟ್ಟೆಯಲ್ಲಿ ಸಲಗ

    salaga team shooting in mangalore

    ದುನಿಯಾ ವಿಜಯ್ ನಿರ್ದೇಶನದ ಚೊಚ್ಚ ಸಿನಿಮಾ ಸಲಗ ಚಿತ್ರತಂಡ ಕರಾವಳಿಯ ಮೀನು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಭೂಗತ ಲೋಕದಲ್ಲಿ ಮಂಗಳೂರಿಗೆ ಬೇರೆಯದೇ ಚರಿತ್ರೆ ಇದೆ. ಹೀಗಾಗಿ ವಿಜಿ, ತಮ್ಮ ನಿರ್ದೇಶನದ ಸಲಗ ಚಿತ್ರದಲ್ಲಿ ಮಂಗಳೂರಿನಲ್ಲಿ ಕೂಡಾ ಚಿತ್ರೀಕರಣ ಇಟ್ಟುಕೊಂಡಿದ್ದಾರೆ. ಮಂಗಳೂರಿನ ಮೀನು ಮಾರುಕಟ್ಟೆ ಸೇರಿದಂತೆ ಕರಾವಳಿಯಲ್ಲಿ ಶಾಟ್ಸ್ ತೆಗೆದಿದ್ದಾರೆ.

    ಸಲಗದಲ್ಲಿ ನೀವು ಬೇರೆಯದೇ ಆದ ಭೂಗತ ಜಗತ್ತಿನ ಕಥೆ ನೋಡಲಿದ್ದೀರಿ. ಮಂಗಳೂರಿನ ಲೋಕಲ್ ಕಲಾವಿದರನ್ನೇ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೇವೆ. ಸಾವಿರಾರು ಮಂದಿ ಇರೋ ಮೀನು ಮಾರುಕಟ್ಟೆಯಲ್ಲಿ ಚಿತ್ರೀಕರಣ ಸಲೀಸಾಗಿ ನಡೆಯಿತು. ಕಾರಣ, ಜನರ ಸಪೋರ್ಟು ಎನ್ನುತ್ತಾರೆ ವಿಜಿ.

    ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಿ ಹೀರೋ ಕಮ್ ಡೈರೆಕ್ಟರ್. ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಸಂಜನಾ ಆನಂದ್ ನಾಯಕಿ.

  • ಮತ್ತೆ ಕಡಲೆಕಾಯಿ ಪರಿಷೆ - ಬಸವನದ್ದಲ್ಲ.. ಸಲಗನದ್ದು..!

    kadalekai parashe for salaga climax

    ಕಡಲೆಕಾಯಿ ಪರಿಷೆ ಮತ್ತೆ ಶುರುವಾಗಿದೆ. ಅರೆ.. ಆಗಲೇ ಮುಗಿದು ಹೋಯ್ತಲ್ಲ  ಎಂಬ ಪ್ರಶ್ನೆಯನ್ನು ಸೈಡಿಗೆ ಬಿಸಾಕಿ. ಈಗ ನಡೆಯುತ್ತಿರೋ ಕಡಲೆಕಾಯಿ ಪರಿಷೆ ನಡೆಸುತ್ತಿರುವುದು ಬಸವನಗುಡಿಯ ಬಸವ ಅಲ್ಲ, ಕೆ.ಪಿ.ಶ್ರೀಕಾಂತ್ ಅವರ ಸಲಗ. ಹೌದು, ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ಜೊತೆಗೆ ನಾಯಕರಾಗಿಯೂ ನಟಿಸುತ್ತಿರುವ ಸಲಗ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಕಡಲೆಕಾಯಿ ಪರಿಷೆಯಲ್ಲಿ ನೆರವೇರಿದೆ.

    ಕಡಲೆಕಾಯಿ ಪರಿಷೆಯಲ್ಲಿ ರಿಯಲೆಸ್ಟಿಕ್ ಆಗಿಯೇ ಫೈಟಿಂಗ್ ಚಿತ್ರೀಕರಿಸಿದ್ದೆವು. ಆದರೂ ಕೆಲವೊಂದು ಸೀನ್ ಬಾಕಿ ಉಳಿದುಬಿಟ್ಟಿದ್ದವು. ಹೀಗಾಗಿ ಕೃತಕವಾಗಿ ಕಡಲೆಕಾಯಿ ಪರಿಷೆ ಸೃಷ್ಟಿಸಿದೆವು. ಪರಿಷೆಗೆ ದೀಪಾಲಂಕಾರ ಮಾಡಿದ್ದವರೇ, ಈ ಸೆಟ್‍ಗೂ ಅಲಂಕಾರ ಮಾಡಿದ್ದಾರೆ. 60ಕ್ಕೂ ಹೆಚ್ಚು ಅಂಗಡಿಗಳನ್ನು ಮತ್ತೆ ಹಾಕಲಾಗಿದೆ ಎಂದು ವಿವರಣೆ ಕೊಟ್ಟಿದ್ದಾರೆ ಶ್ರೀಕಾಂತ್.

    ಟಗರು ನಂತರ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ.k

  • ಮತ್ತೆ ವಿಲನ್ ಆಗುತ್ತಿದ್ದಾರೆ ವಿಜಯ್ : ತೆಲುಗಿನ ಬಾಲಕೃಷ್ಟ ಎದುರು ಸಲಗ

    ಮತ್ತೆ ವಿಲನ್ ಆಗುತ್ತಿದ್ದಾರೆ ವಿಜಯ್ : ತೆಲುಗಿನ ಬಾಲಕೃಷ್ಟ ಎದುರು ಸಲಗ

    ದುನಿಯಾ ವಿಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪುಟ್ಟ ಪುಟ್ಟ ಪಾತ್ರಗಳ ಮೂಲಕ. ಖಳನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ಅವರ ಹಣೆಬರಹ ಬದಲಿಸಿದ್ದು ದುನಿಯಾ. ನಂತರ ಸ್ಟಾರ್ ಆದ ವಿಜಯ್ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕರಾಗಿಯೂ ಗೆದ್ದ ದುನಿಯಾ ವಿಜಯ್ ಈಗ ಮತ್ತೆ ವಿಲನ್ ಆಗುತ್ತಿರುವುದು ಅಧಿಕೃತವಾಗಿದೆ.

    ತೆಲುಗಿನ ಬಾಲಕೃಷ್ಣ ಎದುರು ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಚಾಲ್ತಿಯಲ್ಲಿತ್ತಾದರೂ ಅಧಿಕೃತವಾಗಿರಲಿಲ್ಲ. ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಶೃತಿ ಹಾಸನ್ ಹೀರೋಯಿನ್.

    ನನಗೆ ಚಿತ್ರರಂಗಕ್ಕೆ ಬರುವ ಕನಸು ಕೂಡಾ ಇಲ್ಲದ ದಿನಗಳಿಂದಲೂ ಬಾಲಯ್ಯ ಚಿತ್ರಗಳನ್ನು ನೋಡುತ್ತಿದ್ದೆ. ಈಗ ಅವರೊಂದಿಗೇ ನಟಿಸುವ ಅದೃಷ್ಟ. ನನಗೆ ತೆಲುಗು ಚೆನ್ನಾಗಿಯೇ ಬರುತ್ತೆ. ಹೀಗಾಗಿ ಕಷ್ಟವಾಗಲಿಕ್ಕಿಲ್ಲ. ಜನವರಿ 15ರಿಂದ ಹೈದರಾಬಾದ್‍ನಲ್ಲಿ 3 ತಿಂಗಳು ಶೂಟಿಂಗ್ ಇದೆ ಎಂದಿದ್ದಾರೆ ವಿಜಯ್.

  • ಮತ್ತೆ ಹುರಿಗಟ್ಟುತ್ತಿದೆ ದುನಿಯಾ ವಿಜಿ ಬಾಡಿ

    duniya viji body building

    ದುನಿಯಾ ವಿಜಯ್ ಅಭಿನಯಕ್ಕಷ್ಟೇ ಅಲ್ಲ, ಬಾಡಿ ಬಿಲ್ಡಿಂಗ್​ನಲ್ಲೂ ಎತ್ತಿದ ಕೈ. ಈಗ ದುನಿಯಾ ವಿಜಯ್, ತಮ್ಮ ಹೊಸ ಚಿತ್ರಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಹೊಸ ಚಿತ್ರಕ್ಕಾಗಿ ಫಿಟ್ ಆಗುತ್ತಿರುವ ವಿಜಯ್, ಇದಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡಿದ್ಧಾರೆ. ಕಟ್ಟುಮಸ್ತಾದ ದೇಹದಿಂದ ಕರಿಚಿರತೆ ಮಿರಿಮಿರಿ ಮಿಂಚುತ್ತಿದೆ.

    ದುನಿಯಾ ವಿಜಯ್ ತಮ್ಮ ವರ್ಕೌಟ್​ಗೆ ಮಂಜುನಾಥ್ ಎಂಬ ಬಾಡಿಬಿಲ್ಡರ್ ಸಹಾಯ ಪಡೆಯುತ್ತಿದ್ದಾರೆ. ಮಂಜುನಾಥ್. ಇಂಟರ್ ನ್ಯಾಷ್ನಲ್ ಬಾಡಿ ಬಿಲ್ಡರ್ ಕೂಡಾ ಹೌದು. ಅವರ ಟ್ರೈನಿಂಗ್​ನಲ್ಲೇ ದುನಿಯಾ ವಿಜಿ, ದೇಹವನ್ನು ಹುರಿಗೊಳಿಸುತ್ತಿದ್ದಾರೆ. ದುನಿಯಾ ವಿಜಿ ಇಷ್ಟು ಫಿಟ್ & ಫೈನ್ ಆಗ್ತಿರೋದು ತಮ್ಮ ಹೊಸ ಚಿತ್ರ ಜಾನಿ ಜಾನಿ ಎಸ್ ಪಪಾ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಹುರಿಗಟ್ಟಿದ ದೇಹವನ್ನು ನೋಡಬಹುದು.

    Related Articles :-

    Duniya Vijay And Preetham Gubbi Back With Johnny Johnny Yes Papa

    Shraddha Srinath For Johnny Johnny Yes Papa

    Rachita Ram For Johnny Johnny Yes Papa

  • ಮಧ್ಯರಾತ್ರಿ ರಿಲೀಸ್ ಆಗಲಿದೆ ಸಲಗ ಟೀಸರ್

    salaga second teaser on jan 19th mid night

    ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಸಲಗ. ಟಗರು ನಂತರ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ ಚಿತ್ರ ಸಲಗ. ಟಗರು ಚಿತ್ರದ ತಂತ್ರಜ್ಞರೇ ಬಹುತೇಕ ಕೂಡಿಕೊಂಡು ರೂಪಿಸಿರುವ ಚಿತ್ರ ಸಲಗ. ದುನಿಯಾ ವಿಜಯ್, ಧನಂಜಯ್ ಒಟ್ಟಿಗೇ ನಟಿಸಿರುವ ಚಿತ್ರ ಸಲಗ. ಈಗ ಆ ಚಿತ್ರದ ಟೀಸರ್ ರಿಲೀಸ್ ಸಮಯ. ಅದು ನಡೆಯುವುದು ಜನವರಿ 19ರ ಮಧ್ಯರಾತ್ರಿ.

    ಹೌದು, ಜನವರಿ 20 ದುನಿಯಾ ವಿಜಯ್ ಬರ್ತ್ ಡೇ. ಹೀಗಾಗಿ ಜನವರಿ 19ರ ಮಧ್ಯರಾತ್ರಿ ತಮ್ಮ ಮನೆಯೆದುರೇ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ದುನಿಯಾ ವಿಜಿ. ಆ ಸಂಭ್ರಮಕ್ಕೆ ವಿಜಿಗೆ ಜೊತೆಯಾಗಲಿರುವುದು ರಿಯಲ್ ಸ್ಟಾರ್ ಉಪೇಂದ್ರ.

    ಮಧ್ಯರಾತ್ರಿ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವುದಾಗಿ ಉಪೇಂದ್ರ ಒಪ್ಪಿಕೊಂಡಿದ್ದೇ ನಮ್ಮ ಸಂಭ್ರಮ ಹೆಚ್ಚಿಸಿದೆ ಎನ್ನುತ್ತಾರೆ ವಿಜಿ. 

  • ಮರಿ ಪೈಲ್ವಾನ್ ಆಗಿ ಬರ್ತಾನೆ ಜ್ಯೂ.ದುನಿಯಾ ವಿಜಿ

    duniya vijay to intrduce his son

    ದುನಿಯಾ ವಿಜಿ. ರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡಿದ ಕನಕ ಚಿತ್ರದ ಟ್ರೇಲರ್ ಮೆಚ್ಚುಗೆ ಪಡೆಯುತ್ತಿರುವಾಗಲೇ ಇನ್ನೊಂದು ಸಡಗರದ ಸುದ್ದಿ ಕೊಟ್ಟಿದ್ದಾರೆ. ಅವರ ಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾನೆ. ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ಅವರ ಮಗ ಸಾಮ್ರಾಟ್ ಮರಿ ಕುಸ್ತಿಪಟುವಾಗಿ ನಟಿಸಲಿದ್ದಾನೆ.ದುನಿಯಾ ವಿಜಿ ಸೀನಿಯರ್ ಕುಸ್ತಿ ಪಟುವಾದರೆ, ಸಾಮ್ರಾಟ್, ಬಾಲಕನಾಗಿದ್ದಾಗಿನ ದುನಿಯಾ ವಿಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಮಗನನ್ನು ಸುಮ್ಮನೆ ಚಿತ್ರರಂಗಕ್ಕೆ ತರುತ್ತಿಲ್ಲ. ಚಿತ್ರಕ್ಕಾಗಿ ತರಬೇತಿ ನೀಡುತ್ತಿದ್ದಾರೆ. ಕುಸ್ತಿ ಕಲಿಸುತ್ತಿದ್ದಾರೆ. ಏಕೆಂದರೆ, ಚಿತ್ರದಲ್ಲಿ ಬಾಲಕ ಕುಸ್ತಿ ಪಟುವಿನ ಪಾತ್ರವೂ ಸಾಹಸ ಮಾಡುತ್ತೆ. ಹೀಗಾಗಿ ಇಷ್ಟೆಲ್ಲ ತಯಾರಿ ಎನ್ನುತ್ತಾರೆ ವಿಜಿ.

    ಕುಸ್ತಿಯ ಕುರಿತು ಚಿತ್ರ ಮಾಡಬೇಕು ಅನ್ನೋದು ದುನಿಯಾ ವಿಜಿ ಕನಸಾಗಿತ್ತು. ಹೀಗಾಗಿ ಸ್ವತಃ ತಾವೇ ಕುಸ್ತಿ ಅನ್ನೋ ಟೈಟಲ್‍ನ್ನು ಚೇಂಬರ್‍ನಲ್ಲಿ ರಿಜಿಸ್ಟರ್ ಮಾಡಿಸಿದ್ದರು. ಕನಕ ಚಿತ್ರ ಮುಗಿದಿದ್ದು, ಜಾನಿ ಜಾನಿ ಯೆಸ್ ಪಪ್ಪಾ ಕೂಡಾ ಮುಗಿದ ನಂತರ ಕುಸ್ತಿಗೆ ಕೈ ಹಾಕುವ ಸಾಹಸ ಮಾಡಲಿದ್ದಾರೆ ವಿಜಿ.

    Related Articles :-

    Vijay To Introduce His Son Through 'Kusthi'

  • ಮಳೆ.. ಚಳಿಯಲ್ಲಿ.. ಸಲಗ ವಿಜಯ್, ಸಂಜನಾ ರೊಮ್ಯಾನ್ಸ್

    romantic song shot in rain for salaga

    ಸುರಿಯುತ್ತಲೇ ಇರುವ ಮಳೆ.. ಮೈ ಮರಗಟ್ಟಿಸುವ ಚಳಿ.. ಇವೆಲ್ಲದರ ಮಧ್ಯೆಯೇ ದುನಿಯಾ ವಿಜಯ್ ಮತ್ತು ಸಂಜನಾ ಆನಂದ್ ಪ್ರೀತಿ, ಪ್ರಣಯದಲ್ಲಿ ತೊಡಗಿದ್ದಾರೆ. ಸಕಲೇಶಪುರ, ಮುಳ್ಳಯ್ಯನಗಿರಿಯಲ್ಲಿ ವಿಜಿ ಮತ್ತು ಸಂಜನಾ ಮಳೆಯೇ.. ಮಳೆಯೇ.. ಅಂಬೆಗಾಲಿಡುತ್ತಾ ಸುರಿಯೇ ಎಂದು ಹಾಡಿ ಕುಣಿಯುತ್ತಿದ್ದಾರೆ.

    ಕೋವಿಡ್ ರಿಲ್ಯಾಕ್ಸ್ ಕೊಟ್ಟ ಬೆನ್ನಲ್ಲೇ ಸಲಗ ಚಿತ್ರೀಕರಣ ಶುರುವಾಗಿದ್ದು, ವಿಜಯ್ ಮತ್ತು ಸಂಜನಾ ಆನಂದ್ ಅವರ ಪ್ರಣಯಗೀತೆ ಇದು. ಕೆಪಿ ಶ್ರೀಕಾಂತ್ ನಿರ್ಮಾಣದ ಸಿನಿಮಾ ಸಲಗ. ಚಿತ್ರದಲ್ಲಿ ಡಾಲಿ ಧನಂಜಯ್ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

  • ಮಾಲೂರಿನಲ್ಲಿ ಸಲಗ ಕಪ್

    ಮಾಲೂರಿನಲ್ಲಿ ಸಲಗ ಕಪ್

    ಸಲಗ ಚಿತ್ರತಂಡ ಸಿನಿಮಾ ರಿಲೀಸ್ ಆಗೋಕೂ ಮುನ್ನ ಕ್ರಿಕೆಟ್ ಟೂರ್ನಿ ನಡೆಸೋದಾಗಿ ಹೇಳಿತ್ತು. ಅದು ಕೋಲಾರದ ಮಾಲೂರಿನಿಂದ ಶುರುವಾಗಿಬಿಟ್ಟಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳಿಂದ ಗಮನ ಸೆಳೆಯುತ್ತಿದೆ.

    ದುನಿಯಾ ವಿಜಿ ಈ ಚಿತ್ರಕ್ಕೆ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಅಭಿಮಾನಿಗಳ ಜೊತೆ ಸಲಗ ಟೀಂ ಕೂಡಾ ಒಂದು ಟೀಂ ಇರುತ್ತೆ. ಅವರೆಲ್ಲರ ಜೊತೆ ಕ್ರಿಕೆಟ್ ಆಡುತ್ತೆ. ಗೆದ್ದವರಿಗೆ ಬಹುಮಾನವೂ ಇರುತ್ತೆ. ಮಾಲೂರಿನಲ್ಲಂತೂ ಅಭಿಮಾನಿಗಳು ಚಿತ್ರತಂಡವನ್ನು ಮುತ್ತಿಕೊಂಡರು. ಡಾ.ರಾಜ್, ವಿಷ್ಣು ಪ್ರತಿಮೆಗಳಿಗೆ ಹಾರ ಹಾಕಿ ಕ್ರಿಕೆಟ್ ಯಾತ್ರೆ ಶುರು ಮಾಡಿದ್ದಾರೆ ದುನಿಯಾ ವಿಜಿ ಮತ್ತು ಶ್ರೀಕಾಂತ್.

    ವಿಜಿ ಜೊತೆ ಡಾಲಿ ಧನಂಜಯ್, ಸಂಜನಾ ಆನಂದ್ ಕೂಡಾ ನಟಿಸಿರುವ ಚಿತ್ರವನ್ನು ನಿರ್ಮಿಸಿರೋದು ಕೆ.ಪಿ.ಶ್ರೀಕಾಂತ್.  ಗೀತಾ ಶಿವರಾಜ್ ಕುಮಾರ್ ಅವರು ಅರ್ಪಿಸಿರುವ ಚಿತ್ರವಿದು.

  • ಯುವರತ್ನ’ನಿಗೆ All The Best ಎಂದ ಸಲಗ

    ಯುವರತ್ನ’ನಿಗೆ All The Best ಎಂದ ಸಲಗ

    ಇದೇ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿರುವ ಯುವರತ್ನ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ನಟ ದುನಿಯಾ ವಿಜಯ್. ಯುವರತ್ನ ನಂತರ ಕ್ಯೂನಲ್ಲಿರೋ ಸಿನಿಮಾ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿ, ನಟಿಸಿರುವ ಸಲಗ. ಯುವರತ್ನ ಚಿತ್ರದ ಬಗ್ಗೆ ಖುಷಿ ಪಡೋಕೆ ದುನಿಯಾ ವಿಜಯ್ ಅವರಿಗೆ ಹಲವು ಕಾರಣಗಳಿವೆ.

    ಪುನೀತ್ ಸಿನಿಮಾ ಎಂದರೆ ಫ್ಯಾಮಿಲಿ ಓರಿಯಂಟೆಡ್ ಇರುತ್ತವೆ. ಇದು ಜನರನ್ನು ಖಂಡಿತಾ ಥಿಯೇಟರಿಗೆ ಜನರನ್ನು ಕರೆದುಕೊಂಡು ಬರಲಿದೆ. ಇನ್ನು ಗೆಳೆಯ ಸಂತೋಷ್ ಆನಂದರಾಮ್ ಈ ಹಿಂದೆ ರಾಜಕುಮಾರದಂತಾ ಸಕ್ಸಸ್ ಕೊಟ್ಟವರು. ಜೊತೆಗೆ ನನ್ನ ಪ್ರೀತಿಯ ಡಾಲಿ ಇಲ್ಲೂ ಅದ್ಭುತ ನಟನೆ ಮುಂದುವರೆಸಿದ್ದಾನೆ. ಆಲ್ ದಿ ಬೆಸ್ಟ್ ಯುವರತ್ನ ಟೀಂ ಎಂದಿದ್ದಾರೆ ದುನಿಯಾ ವಿಜಯ್.

    ಯುವರತ್ನ ಚಿತ್ರ ಥಿಯೇಟರಿಗೆ ಬರುವ ಹೊತ್ತಿಗೆ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದ ಪ್ರಚಾರದ ವೇಗವನ್ನು ಹೆಚ್ಚಿಸಲಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಂತರ ಚಿತ್ರರಂಗದ ದೊಡ್ಡ ದೊಡ್ಡ ನಟರ ಚಿತ್ರಗಳು ಕನಿಷ್ಠ 2 ವಾರದ ಗ್ಯಾಪ್ ನೋಡಿಕೊಂಡು ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದು, ಮುಂದಿನ ಸರದಿ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ್ದಾಗಿದೆ.

  • ರಿಯಲ್ ದುನಿಯಾದಲ್ಲಿ ಅಮ್ಮನ ಪ್ರತಿಮೆಯನ್ನೇ ಪ್ರತಿಷ್ಠಾಪಿಸಿದ ವಿಜಯ್

    ರಿಯಲ್ ದುನಿಯಾದಲ್ಲಿ ಅಮ್ಮನ ಪ್ರತಿಮೆಯನ್ನೇ ಪ್ರತಿಷ್ಠಾಪಿಸಿದ ವಿಜಯ್

    ದುನಿಯಾ ವಿಜಯ್`ಗೆ ಸ್ಟಾರ್ ಪಟ್ಟ ಕೊಟ್ಟ ದುನಿಯಾ ಚಿತ್ರದಲ್ಲಿ ಪ್ರೇಕ್ಷಕರನ್ನು ಕಾಡುವ ದೃಶ್ಯಗಳಲ್ಲಿ ಅದೂ ಒಂದು. ಚಿತ್ರದಲ್ಲಿ ತಾಯಿಗೆ ಸಮಾಧಿ ಕಟ್ಟಿಸುವ ಆಸೆ ಹೊತ್ತ ಹುಡುಗನ ಪಾತ್ರವದು. ಅದು ಸಿನಿಮಾದಲ್ಲಿ ಈಡೇರದೇ ಹೋದರೂ.. ನಿಜ ಜೀವನದಲ್ಲಿ ತಾಯಿಗೆ ಸಮಾಧಿ ಕಟ್ಟಿಸಿ, ಪ್ರತಿಮೆಯನ್ನೂ ಮಾಡಿಸಿ ತಾಯಿಯನ್ನು ಕಳೆದುಕೊಂಡ ದುಃಖ ಮರೆಯುವ ಯತ್ನದಲ್ಲಿದ್ದಾರೆ ವಿಜಯ್.

    ತಾಯಿಯನ್ನು ಉಳಿಸಿಕೊಳ್ಳಲು ವಿಧಿಗೇ ಸವಾಲು ಹಾಕಿ ನಿಂತಿದ್ದ ವಿಜಯ್, ಜುಲೈ 8ರಂದು ವಿಧಿಯೆದರು ಸೋತಿದ್ದರು. ತಾಯಿ ನಾರಾಯಣಮ್ಮ ಅಗಲಿದ್ದರು. ಆ ದುಃಖವನ್ನು ಮರೆಯುವ ಹಾದಿಯಲ್ಲಿ ತಾಯಿಗೆ ಸಮಾಧಿ ಕಟ್ಟಿಸಿ, ವಿಗ್ರಹವನ್ನೂ ಮಾಡಿಸಿ ಪ್ರತಿಷ್ಠಾಪಿಸಿದ್ದಾರೆ ವಿಜಯ್.  

  • ವರಮಹಾಲಕ್ಷ್ಮಿ ಹಬ್ಬಕ್ಕೆ ಸಲಗ ರಿಲೀಸ್ ಇಲ್ಲ

    ವರಮಹಾಲಕ್ಷ್ಮಿ ಹಬ್ಬಕ್ಕೆ ಸಲಗ ರಿಲೀಸ್ ಇಲ್ಲ

    ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಎನ್ನಲಾಗಿದ್ದ ಸಲಗ ಚಿತ್ರ, ಮತ್ತೆ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಕಾರಣ ಇಷ್ಟೆ, ಚಿತ್ರಮಂದಿರಗಳಿಗೆ ಶೇ.100ರಷ್ಟು ಅವಕಾಶ ನೀಡದೇ ಇರುವುದು. ಶೇ.50ರ ಅನುಮತಿಯೇನೋ ಇದೆ, ಆದರೆ, ಅದನ್ನೂ ಯಾವ ಕ್ಷಣದಲ್ಲಿ ಸರ್ಕಾರ ವಾಪಸ್ ಎನ್ನುತ್ತದೋ ಗೊತ್ತಿಲ್ಲ. ಯುವರತ್ನ ಚಿತ್ರಕ್ಕಾದ ಗತಿ, ನಿರ್ಮಾಪಕರ ಕಣ್ಮುಂದೆಯೇ ಇದೆ.

    ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುತ್ತಿಲ್ಲ. ಶೇ.50ರಷ್ಟು ಅವಕಾಶವಿದ್ದರೂ, ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಕೊಡುವವರೆಗೆ ಕಾದು ನೋಡುತ್ತೇವೆ. ಶೇ.100ರಷ್ಟು ಅನುಮತಿಗೆ ಸೆಪ್ಟೆಂಬರ್ 2ರವರೆಗೂ ಕಾಯುವಂತೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಟಾಸ್ಕ್‍ಪೋರ್ಸ್ ಸಲಹೆಗಳ ಪ್ರಕಾರವೇ ನಡೆದುಕೊಳ್ಳುವ ಬಗ್ಗೆ ಕೂಡಾ ಸಿಎಂ ತಿಳಿಸಿದ್ದಾರೆ. ಹೀಗಾಗಿ, ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕ ನಂತರವೇ ಸಿನಿಮಾ ಬಿಡುಗಡೆ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

    ಅಲ್ಲಿಗೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಒಂದಿಷ್ಟು ಕಲರವ, ಸಡಗರ ಶುರುವಾಗಬಹುದು ಎಂಬ ನಿರೀಕ್ಷೆಗೆ ಕಲ್ಲು ಬಿದ್ದಿದೆ.

  • ವರಮಹಾಲಕ್ಷ್ಮಿಗೆ ಸಲಗ

    ವರಮಹಾಲಕ್ಷ್ಮಿಗೆ ಸಲಗ

    2ನೇ ಲಾಕ್ ಡೌನ್ ಮುಗಿದ ನಂತರ ಮೊದಲು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಭಜರಂಗಿ 2. ಆದರೆ, ಅದಕ್ಕೂ ಮೊದಲೇ ತೆರೆಗೆ ಬರೋಕೆ ರೆಡಿಯಾಗಿದೆ ಸಲಗ. ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಆ ದಿನವೇ ಸಲಗ ರಿಲೀಸ್ ಆಗಲಿದೆ.

    ಸಲಗ, ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಸಿನಿಮಾ. ಅವರೇ ಹೀರೋ. ಹೀರೋಯಿನ್ ಆಗಿ ಸಂಜನಾ ಆನಂದ್ ಇದ್ದರೆ, ಮತ್ತೊಂದು ಪ್ರಧಾನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಚರಣ್ ರಾಜ್ ಕೂಡಾ ನಟಿಸಿದ್ದಾರೆ. ಹಬ್ಬಕ್ಕೆ ಒಂದೆರಡು ದಿನ ಮೊದಲೇ ಚಿತ್ರ ರಿಲೀಸ್ ಆದರೂ ಆಶ್ಚರ್ಯವಿಲ್ಲ. ಚಿತ್ರತಂಡ ರಿಲೀಸ್ ಡೇಟ್‍ನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

  • ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

    ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

    ಲಾಕ್ ಡೌನ್ ಫ್ರೀಯಾಗಿ, ಎಲ್ಲವೂ ಓಪನ್ ಆದ ನಂತರ ರಿಲೀಸ್ ಆಗುತ್ತಿರುವ ದೊಡ್ಡ ಚಿತ್ರ ಸಲಗ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್ ಎಂದು ಹೇಳಿಕೊಂಡಿರುವ ಹೊತ್ತಲ್ಲೇ, ಇತ್ತ ಲೂಸ್ ಮಾದ ಖ್ಯಾತಿಯ  ಯೋಗಿಯ ಚಿತ್ರವೂ ಅದೇ ಹಬ್ಬಕ್ಕೆ ರಿಲೀಸ್ ಎನ್ನಲಾಗುತ್ತಿದೆ. ಯೋಗಿ ಅಭಿನಯದ ಲಂಕೆ ಚಿತ್ರವೂ ಹಬ್ಬದ ದಿನವೇ ರಿಲೀಸ್ ಎನ್ನುತ್ತಿದೆ.

    ವಿಜಯ್ ಮತ್ತು ಯೋಗಿ ಇಬ್ಬರೂ ಮಾವ ಮತ್ತು ಅಳಿಯ. ದುನಿಯಾ ಚಿತ್ರಕ್ಕೆ ನಿರ್ಮಾಪಕರಾಗಿದ್ದುದು ಯೋಗಿ ಫ್ಯಾಮಿಲಿ. ವಿಜಯ್ ಆ ಚಿತ್ರದಿಂದ ದುನಿಯಾ ವಿಜಯ್ ಆದರೆ, ಅದೇ ಚಿತ್ರದಲ್ಲಿನ ಲೂಸ್ ಮಾದ ಪಾತ್ರದ ಹೆಸರು, ಯೋಗಿಯ ಹಿಂದೆ ಅಂಟಿಕೊಳ್ತು. ಈಗ ಅವರಿಬ್ಬರೂ ನಟಿಸಿರುವ ಚಿತ್ರಗಳು ಒಂದೇ ದಿನ ರಿಲೀಸ್ ಆಗುವ ಚಾನ್ಸ್ ಹೆಚ್ಚಾಗಿದೆ.

  • ವಿಜಯ್ ಕುಸ್ತಿಗೆ ಚೂರಿಕಟ್ಟೆ ರಘು 

    duniya vijay changed his director

    ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾರೆ. ಅನಿಲ್ ಜಾಗಕ್ಕೆ ಈಗ ರಘು ಬಂದಿದ್ದಾರೆ. ಯಾರು ಈ ರಘು ಎಂಬ ಪ್ರಶ್ನೆಗೆ ಉತ್ತರ, ಚೂರಿಕಟ್ಟೆ. ಚೌಕಾಬಾರ ಎಂಬ ಕಿರುಚಿತ್ರ ಹಾಗೂ ಚೂರಿಕಟ್ಟೆ ಎಂಬ ಚಿತ್ರದ ಮೂಲಕ ಗಮನ ಸೆಳೆದಿದ್ದ ರಘು ಶಿವಮೊಗ್ಗ, ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದ ನಿರ್ದೇಶಕ.

    ಈ ಚಿತ್ರದ ಮೂಲಕ ದುನಿಯಾ ವಿಜಿ ಅವರ ಪುತ್ರ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ ರಘು ಅವರಿಗೆ ಈ ಚಾನ್ಸ್ ಕೊಡಿಸಿದ್ದೇ ಚೂರಿಕಟ್ಟೆ ಸಿನಿಮಾ. ಬಾಕ್ಸಾಫೀಸ್‍ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡದೇ ಇದ್ದರೂ, ಚೂರಿಕಟ್ಟೆ ಸಿನಿಮಾ ವಿಮರ್ಶಕರ ಮನ ಗೆದ್ದಿತ್ತು. ಒಂದು ವರ್ಗದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು. 

    ದುನಿಯಾ ವಿಜಯ್ ಚೂರಿಕಟ್ಟೆ ಸಿನಿಮಾ ನೋಡಿ, ಸ್ಕ್ರಿಪ್ಟ್ ಇಷ್ಟವಾಗಿ ಸ್ವತಃ ಕರೆದು ತಮ್ಮದೇ ಚಿತ್ರದ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ಕುಸ್ತಿ ಚಿತ್ರಕ್ಕಾಗಿ ದುನಿಯಾ ವಿಜಯ್ ಹಾಗೂ ಸಾಮ್ರಾಟ್ ಇಬ್ಬರೂ ಬೆವರು ಹರಿಸುತ್ತಿದ್ದು, ಕುಸ್ತಿಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

  • ವಿಜಯ್ ಕುಸ್ತಿಗೆ ದಂಗಲ್, ಸುಲ್ತಾನ್ ಸ್ಫೂರ್ತಿ

    duniya vikay's kusthi is an ispiration from dangal and sultan

    ಕುಸ್ತಿ, ದುನಿಯಾ ವಿಜಯ್ ನಿರ್ಮಿಸಿ ನಟಿಸುತ್ತಿರುವ ಸಿನಿಮಾ. ದೇಸೀ ಕುಸ್ತಿಯನ್ನೇ ಮೂಲಕಥೆಯಲ್ಲಿ ಹೊಂದಿರುವ ಚಿತ್ರದ ಟೀಸರ್ ಬಿಡಗಡೆಯಾಗಿದೆ. ಕ್ರೀಡೆಯನ್ನು ಕ್ರೀಡೆಯಾಗಿ, ಸ್ಪರ್ಧೆಯಾಗಿ ನೋಡಬೇಕೇ ಹೊರತು, ಪ್ರತಿಷ್ಟೆಯಾಗಿಸಿಕೊಳ್ಳಬಾರದು ಅನ್ನೋದು ಚಿತ್ರದ ಸಂದೇಶ ಮತ್ತು ಕತೆಯ ಸಾರ. ದುನಿಯಾ ವಿಜಯ್ ಮಗ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಚಿತ್ರ ಕುಸ್ತಿ.

    ಈ ಚಿತ್ರಕ್ಕೆ ಸ್ಫೂರ್ತಿ ದಂಗಲ್ ಹಾಗೂ ಸುಲ್ತಾನ್ ಚಿತ್ರಗಳು ಎಂದರೆ ಅಚ್ಚರಿಯಾಗಬಹುದು. ಸಲ್ಮಾನ್ ಅಭಿನಯದ ಸುಲ್ತಾನ್, ಕುಸ್ತಿಪಟುವೊಬ್ಬನ ಕ್ರೀಡೆ ಹಾಗೂ ಪ್ರೀತಿಯ ಬದುಕಿನ ಏರಿಳಿತದ ಕಥೆ ಹೊಂದಿತ್ತು. ಅಮೀರ್ ಖಾನ್ ನಾಯಕತ್ವದ ದಂಗಲ್, ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ರೂಪಿಸುವ ಕಥೆ ಹೊಂದಿತ್ತು. ಈ ಚಿತ್ರಗಳ ಯಶಸ್ಸು ನೋಡಿ, ಕನ್ನಡದಲ್ಲೇಕೆ ಕುಸ್ತಿಯ ಕಥೆ ಮಾಡಬಾರದು ಎಂದುಕೊಂಡರಂತೆ ವಿಜಯ್. ಕುಸ್ತಿಗೆ ಕರ್ನಾಟಕದಲ್ಲಿ ತನ್ನದೇ ಆದ ಗರಡಿ ಮನೆಯ ಇತಿಹಾಸವೇ ಇದೆ. ಆಗ ರೂಪುಗೊಂಡಿದ್ದೇ ಕುಸ್ತಿ ಸಿನಿಮಾ.

    ಶಿವಮೊಗ್ಗ ರಘು ನಿರ್ದೇಶನದ ಚಿತ್ರಕ್ಕೆ ಕನಕ ಖ್ಯಾತಿಯ ನವೀನ್ ಸಜ್ಜು ಸಂಗೀತವಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

  • ವಿಜಯ್ ಬಹಿಷ್ಕಾರ ಅಸಾಧ್ಯ - ಫಿಲಂ ಚೇಂಬರ್

    kfcc will not ban duniya vijay

    ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದುನಿಯಾ ವಿಜಯ್‍ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪಾನಿಪುರಿ ಕಿಟ್ಟಿ ಕೂಡಾ ಮನವಿ ಮಾಡಿದ್ದಾರೆ. ಆದರೆ, ಅದು ಅಸಾಧ್ಯ ಎಂದು ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ.

    ಇದೊಂದು ವೈಯಕ್ತಿಕ ವಿಚಾರದ ಗಲಾಟೆ. ಮೇಲಾಗಿ ಇದು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಚಿನ್ನೇಗೌಡ.

    ಜೈಲಿನಿಂದ ಬಂದ ಮೇಲೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯನ್ನು ಕೂರಿಸಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

  • ವಿಜಯ್‍ಗೆ ಚಾನ್ಸ್ ಕೊಡಿಸಿ ಕೆಲಸ ಕಳೆದುಕೊಂಡಿದ್ದ ಚಂದ್ರು

    duniya vijay r chanru's friendship story

    ಆರ್. ಚಂದ್ರು ಮತ್ತು ದುನಿಯಾ ವಿಜಯ್. ಇಬ್ಬರಿಗೂ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಒಬ್ಬರು ಸ್ಟಾರ್ ಡೈರೆಕ್ಟರ್. ಮತ್ತೊಬ್ಬರು ಸ್ಟಾರ್ ನಟ. ಒಂದಾನೊಂದು ಕಾಲದಲ್ಲಿ ಹೀಗಿರಲಿಲ್ಲ. ಇಬ್ಬರೂ ಅವಕಾಶಕ್ಕಾಗಿ ಎದುರು ನೋಡುತ್ತಾ ಸಿಕ್ಕ ಸಿಕ್ಕ ಸಣ್ಣ ಅವಕಾಶಗಳನ್ನೂ ಬಿಡದೆ ದುಡಿಯುತ್ತಿದ್ದರು. ಈಗ ನಾವು ಹೇಳ್ತಿರೋದು ಆಗಿನ ಕಾಲದ ಕಥೆ.

    ಆಗ ಆರ್.ಚಂದ್ರು ಅಸಿಸ್ಟೆಂಟ್ ಡೈರೆಕ್ಟರ್. ಧಾರಾವಾಹಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು, ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿಬಿಟ್ಟರು. ಅದೇನೂ ದೊಡ್ಡ ಪಾತ್ರವಾಗಿರಲಿಲ್ಲ. ಆದರೆ, ನಿರ್ದೇಶಕರಿಗೆ ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿದ್ದು ಇಷ್ಟವಾಗಲಿಲ್ಲ. ಅವರ ಮನಸ್ಸಿನಲ್ಲಿ ಇನ್ಯಾರೋ ಇದ್ದರು. ಹೀಗಾಗಿ ಸಿಟ್ಟಿಗೆದ್ದ ನಿರ್ದೇಶಕರು ಅಂದ್ರು ಚಂದ್ರು ಅವರನ್ನೇ ಅಸಿಸ್ಟೆಂಟ್ ಡೈರೆಕ್ಟರ್ ಸ್ಥಾನದಿಂದ ಕಿತ್ತು ಹಾಕಿದ್ದರು.

    ಆಗ ಆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕೆ.ಪಿ. ನಂಜುಂಡಿ, ಚಂದ್ರು ಅವರು ಟೀಂನಲ್ಲಿರಲೇಬೇಕು ಎಂದು ಹಠ ಮಾಡಿದ ಕಾರಣ, ಚಂದ್ರು ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದರು. ಈಗ ಕಾಲ ಬದಲಾಗಿದೆ. ಆರ್.ಚಂದ್ರು ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಕಂ ಪ್ರೊಡ್ಯೂಸರ್ ಆಗಿದ್ದಾರೆ. ದುನಿಯಾ ವಿಜಯ್ ಸ್ಟಾರ್ ಆಗಿದ್ದಾರೆ. ಇಬ್ಬರೂ ಸೇರಿ ಕನಕ ಅನ್ನೋ ಚಿತ್ರ ಮಾಡಿ ರಿಲೀಸ್‍ಗೆ ರೆಡಿಯಾಗಿದ್ದಾರೆ. ಅಂದು ತಮ್ಮ ಕೆಲಸ ಉಳಿಸಿದ್ದ ನಂಜುಂಡಿಯವರಿಗೆ ತಮ್ಮ ಚಿತ್ರದಲ್ಲೊಂದು ಪಾತ್ರ ನೀಡಿ ಆರ್.ಚಂದ್ರು ಖುಷಿಯಾಗಿದ್ದಾರೆ. ಎಲ್ಲ ಕಾಲದ ಮಹಿಮೆ.

  • ಶಿವರಾತ್ರಿ ಸಲಗ ಕಪ್

    salaga celebrates shivarathri with cricket

    ಮಹಾಶಿವರಾತ್ರಿ ದಿನದಂದು ನಡೆದ ಕ್ರಿಕೆಟ್ ಟೂರ್ನಿ ಇದು. ಸ್ಸಾರಿ..ಸ್ಸಾರಿ.. ಶಿವರಾತ್ರಿಯ ರಾತ್ರಿಯಂದು ನಡೆದ ಕ್ರಿಕೆಟ್. ಶುಕ್ರವಾರ ರಾತ್ರಿ 7ಕ್ಕೆ ಶುರುವಾದ ಆಟ ಮುಗಿದಾಗ ಬೆಳಗ್ಗೆ 5 ಗಂಟೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ಮ್ಯಾಚಿನಲ್ಲಿ ಸಲಗ ತಂಡ ಯುನೈಟೆಡ್ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಆಟವಾಡಿತು.

    ಸಲಗ ಟೀಂನಲ್ಲಿ ದುನಿಯಾ ವಿಜಿ, ಡಾಲಿ ಧನಂಜಯ್, ಮಾಸ್ತಿ, ಅಭಿ ಮೊದಲಾದವರಿದ್ದರು. ಯುಸಿಸಿ ತಂಡ ಪಂದ್ಯ ಗೆದ್ದಿತು. ವಿಜೇತರಿಗೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್ 1 ಲಕ್ಷ ರೂ. ಬಹುಮಾನ ಕೊಟ್ಟರು.

    ಚಿಕ್ಕವರಿದ್ದಾಗ ಶಿವರಾತ್ರಿಯಲ್ಲಿ ಹೀಗೇ ಕ್ರಿಕೆಟ್ ಆಡುತ್ತಿದ್ದೆವು ಎಂದು ಧನಂಜಯ್ ನೆನಪಿಸಿಕೊಂಡರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಲಗ ಕ್ರಿಕೆಟ್ ಕಪ್ ಆಯೋಜಿಸುವ ಕನಸು ಬಿಚ್ಚಿಟ್ಟರು ನಟ ನಿರ್ದೇಶಕ ದುನಿಯಾ ವಿಜಯ್.

  • ಶಿವರಾತ್ರಿಗೆ ದುನಿಯಾ ವಿಜಯ್ 28ನೇ ಅವತಾರ

    ಶಿವರಾತ್ರಿಗೆ ದುನಿಯಾ ವಿಜಯ್ 28ನೇ ಅವತಾರ

    ವಿಕೆ 28. ಹೀಗೊಂದು ಪೋಸ್ಟರ್ ರಿಲೀಸ್ ಆಗಿದೆ. ಅಲ್ಲಿರೋದು ರಕ್ತಸಿಕ್ತ ಕೈಗಳೊಂದಿಗೆ ಆರ್‍ಎಕ್ಸ್ 100 ಬೈಕು ಓಡಿಸುತ್ತಿರೋ ಪೋಸ್ಟರು. ಅಷ್ಟೆ.. ಅದು ವಿಜಯ್ ಅವರ 28ನೇ ಸಿನಿಮಾದ ಪೋಸ್ಟರ್.

    ಟೈಟಲ್ ಏನು? ಕಥೆ ಏನು? ಕಲಾವಿದರು ಯಾರು? ಹೀಗೆ ಯಾವೊಂದು ಪ್ರಶ್ನೆಗೂ ಅಲ್ಲಿ ಉತ್ತರ ಸಿಕ್ಕಿಲ್ಲ. ಕನ್‍ಫರ್ಮ್ ಆಗಿರೋದು ಇಷ್ಟೆ, ಸಲಗದ ಸಕ್ಸಸ್ ನಂತರ ಈ ಚಿತ್ರಕ್ಕೂ ದುನಿಯಾ ವಿಜಯ್ ಅವರೇ ಡೈರೆಕ್ಟರ್. ನಿರ್ಮಾಪಕರಾಗಿರೋದು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ.

    ಶಿವಣ್ಣ ಅವರ ಬೈರಾಗಿ ಚಿತ್ರವನ್ನು ನಿರ್ಮಿಸುತ್ತಿರುವವರೇ ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಉಳಿದಂತೆ ಚಿತ್ರದ ಒಂದಿಷ್ಟು ವಿವರಗಳು ಶಿವರಾತ್ರಿ ಹಬ್ಬದ ದಿನ ಹೊರಬೀಳಲಿವೆ.