` duniya vijay, - chitraloka.com | Kannada Movie News, Reviews | Image

duniya vijay,

  • ಡಿ.1ಕ್ಕೆ ಬರ್ತಾನೆ ಕನಕ. ಶಿವಣ್ಣ ಬಂದರೆ..?

    kanaka movie image

    `ಕನಕ'. ಆರ್. ಚಂದ್ರು ನಿರ್ಮಾಣ ಮತ್ತು ನಿರ್ದೇಶನದ, ದುನಿಯಾ ವಿಜಿ ಅಭಿನಯದ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ರಾಜ್ಯೋತ್ಸವಕ್ಕೆ ಅದ್ಧೂರಿ ಟ್ರೇಲರ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದರು ಆರ್.ಚಂದ್ರು. ಡಾ. ರಾಜ್ ಅಭಿಮಾನಿ ಹಾಗೂ ಆಟೋ ಚಾಲಕನ ಪಾತ್ರದಲ್ಲಿರುವ ವಿಜಯ್ ಡೈಲಾಗ್ ಭಾರಿ ಸದ್ದು ಮಾಡಿತ್ತು. ಸಿನಿಮಾ ನೋಡಿದರೆ, ಚಪ್ಪಾಳೆ, ಶಿಳ್ಳೆ ಹೊಡೆಯುವಂತಹ ಸೀನ್‍ಗಳು ಹಲವಾರಿವೆ ಎನ್ನುವುದು ಚಂದ್ರು ಭರವಸೆ.

    ಅಂದಹಾಗೆ ತಮ್ಮ ಚಿತ್ರವನ್ನು ಡಿ.1ಕ್ಕೆ ತೆರೆಗೆ ತರುವುದಾಗಿ ಘೋಷಿಸಿದ್ದಾರೆ ಚಂದ್ರು. ಅದೇ ದಿನ ಮಫ್ತಿ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಅದು ಇನ್ನೂ ಪಕ್ಕಾ ಆಗಿಲ್ಲ. ಮಫ್ತಿ ಕೂಡಾ ಅದೇ ದಿನ ಬಂದರೆ ಏನ್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಚಂದ್ರು ಅಭಿಮಾನದ ಉತ್ತರ ಕೊಟ್ಟಿದ್ದಾರೆ.

    ನಾನು ಶಿವಣ್ಣನ ಅಭಿಮಾನಿ. ಮಫ್ತಿ ಚಿತ್ರ ಡಿ.1ರಂದೇ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆಗಿಲ್ಲ. ಅಕಸ್ಮಾತ್, ಮಫ್ತಿ ಅದೇ ದಿನಕ್ಕೆ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆದರೆ, ನಾನೇ ಒಂದು ವಾರ ಮುಂದಕ್ಕೆ  ಹೋಗುತ್ತೇನೆ ಎಂದಿದ್ದಾರೆ ಚಂದ್ರು. ಅದಕ್ಕೆ ಕಾರಣ, ಚಂದ್ರು ಕೂಡಾ ಶಿವಣ್ಣನ ಅಭಿಮಾನಿ.

  • ದುನಿಯಾ ವಿಜಯ್ 45ನೇ ಹುಟ್ಟುಹಬ್ಬ

    duniya vijay celebrates his 45th birthdya

    ದುನಿಯಾ ವಿಜಯ್ 45ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಅದ್ಧೂರಿಯಾಗಿ  ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿಯಲ್ಲಿ ಸ್ಮಶಾನದಲ್ಲಿಯೇ ಹುಟ್ಟುಹಬ್ಬ ಆಚರಿಸಿದ ದುನಿಯಾ ವಿಜಯ್, ನಂತರ ಅಭಿಮಾನಿಗಳೊಂದಿಗೆ ಸೇರಿಕೊಂಡು ಸೆಲಬ್ರೇಟ್ ಮಾಡಿದ್ದಾರೆ.

    ದುನಿಯಾ ವಿಜಯ್ ನೋಡೋಕೆ ಯಾದಗಿರಿಯಿಂದ ಇಬ್ಬರು ಅಭಿಮಾನಿಗಳು ಪಾದಯಾತ್ರೆಯಲ್ಲಿ ಬಂದಿದ್ದುದು ವಿಶೇಷ. ತಮ್ಮ ಹುಟ್ಟುಹಬ್ಬವನ್ನು ಅವರಿಗೇ ಅರ್ಪಿಸಿದ್ದಾರೆ ವಿಜಯ್. ವಿಜಯ್ ಹುಟ್ಟುಹಬ್ಬಕ್ಕಾಗಿ 100 ಕೆಜಿ ತೂಕದ ಕೇಕ್‍ನ್ನು ಕ್ರೇನ್‍ನಲ್ಲಿ ತರಲಾಗಿತ್ತು.

    ಅಭಿಮಾನಿಗಳೊಂದಿಗೆ ಸಂಭ್ರಮ ಮುಗಿಸಿದ ನಂತರ ಅನಾಥಾಶ್ರಮಕ್ಕೆ ತೆರಳಿದ ವಿಜಯ್, ಅನಾಥ ಮಕ್ಕಳೊಂದಿಗೆ ಬೆರೆತರು. ಮುಸ್ಲಿಮ್ ಅಭಿಮಾನಿಗಳು ವಿಜಯ್‍ಗೆ ಬೆಳ್ಳಿ ಗದೆ, ಟಿಪ್ಪು ಪೇಟಾ ತೊಡಿಸಿ ಸಂಭ್ರಮಿಸಿದರು.

  • ದುನಿಯಾ ವಿಜಯ್ ಗಲಾಟೆ ಸಂಸಾರ 

    duniya vijay's family fight heats up

    ದುನಿಯಾ ವಿಜಯ್‍ರ ಸಂಸಾರದ ಜಗಳ ಈಗ ದಿನನಿತ್ಯ ಎನ್ನುವಂತಾಗಿ ಹೋಗಿದೆ. ಈಗ ದುನಿಯಾ ವಿಜಯ್‍ರ ಮೊದಲ ಪತ್ನಿ ನಾಗರತ್ನ, ಮಗಳು ಮೋನಿಕಾ... ವಿಜಿಯವರ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿರುವ ವಿಡಿಯೋ ರಿಲೀಸ್ ಆಗಿದೆ. ಕೀರ್ತಿ ಮನೆಗೆ ಹೋಗಿದ್ದ ನಾಗರತ್ನ, ಕೀರ್ತಿ ಮತ್ತು ಅವರ ತಂದೆಯನ್ನು ಚಪ್ಪಲಿಯಲ್ಲಿ ಹೊಡೆದಿದ್ದಾರೆ. ವಿಡಿಯೋಗಳಲ್ಲಿ ಹೈಡ್ರಾಮಾ ದಾಖಲಾಗಿದ್ದು, ಪೊಲೀಸರಿಗೆ ನೀಡಲಾಗಿದೆ.

    ಪೊಲೀಸರು ವಿಚಾರಣೆ ಆರಂಭಿಸಿದ್ದು, ನಾಗರತ್ನ, ಮೋನಿಕಾ ಬಂಧನವಾಗುವ ಸಾಧ್ಯತೆಯೂ ಇದೆ. ಆರಂಭದಲ್ಲಿ ಪತ್ನಿ, ಮಕ್ಕಳ ವಿರುದ್ಧ ಕೆಂಡಕಾರಿದ್ದ ದುನಿಯಾ ವಿಜಿ,  ಅವರ ಪಾಲಿಗೆ ನಾನು ಸತ್ತಂತೆ ಎಂದಿದ್ದರು. ನಂತರ, ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ಬೇಡ. ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಕೀರ್ತಿ ಕೂಡಾ ಅದೇ ಮಾತು ಹೇಳಿದ್ದರು.

    ಆದರೆ, ಕೇಸ್ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ. ಒಮ್ಮೆ ದಾಖಲಾದ ಮೇಲೆ ಮುಗಿಯಿತು ಎಂದು ಹೇಳಿದ್ದಾರೆ ಪೊಲೀಸ್ ಅಧಿಕಾರಿಗಳು. ಪ್ರತಿದಿನವೂ ದುನಿಯಾ ವಿಜಯ್ ಮನೆಯೆದುರು ನಡೆಯುತ್ತಿರುವ ಗಲಾಟೆ, ಪೊಲಿಸರನ್ನೇ ಹೈರಾಣಾಗಿಸಿದೆ.

  • ದುನಿಯಾ ವಿಜಯ್ ಜೊತೆ ಆದಿತಿ ಕುಸ್ತಿ

    aditi prabhudeva in duniya vijay's kusthi

    ಧೈರ್ಯಂ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡ ಆದಿತಿ ಪ್ರಭುದೇವ, ದುನಿಯಾ ವಿಜಯ್‍ಗೆ ನಾಯಕಿಯಾಗುತ್ತಿದ್ದಾರೆ. ದುನಿಯಾ ವಿಜಯ್ ನಿರ್ಮಾಣದ ಕುಸ್ತಿ ಸಿನಿಮಾಗೆ ಆದಿತಿ ನಾಯಕಿ. ರಾಘು ಶಿವಮೊಗ್ಗ ನಿರ್ದೇಶನದ ಚಿತ್ರದಲ್ಲಿ ಆದಿತಿ ಪ್ರಭುದೇವಗೆ ಬೋಲ್ಡ್ ಪಾತ್ರವಿದೆಯಂತೆ.

    ಬಜಾರ್ ಚಿತ್ರದ ರಿಲೀಸ್‍ಗೆ ಕಾಯ್ತಿರೋ ಆದಿತಿ, ಆಪರೇಷನ್ ನಕ್ಷತ್ರ ಚಿತ್ರಕ್ಕೂ ನಾಯಕಿ. ದಾವಣಗೆರೆ ಹುಡುಗಿಯಾದ ಆದಿತಿಗೆ, ಕುಸ್ತಿ ಅಂದ್ರೆ ತುಂಬಾ ಇಷ್ಟವಂತೆ. ದಾವಣಗೆರೆಯಲ್ಲಿ ನಡೆಯೋ ಜಾತ್ರೆಗಳಲ್ಲಿ ಕುಸ್ತಿಗಳು ಕಾಮನ್. ನನಗೂ ಕುಸ್ತಿ ಬಗ್ಗೆ ಕ್ರೇಜ್ ಇದೆ. ಈಗ ಕುಸ್ತಿಯ ಕಥೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿರುವುದು ಥ್ರಿಲ್ ಕೊಡುತ್ತಿದೆ ಎಂದಿದ್ದಾರೆ ಆದಿತಿ.

    ದುನಿಯಾ ವಿಜಯ್ ಜೊತೆಗೆ ಅವರ ಪುತ್ರ ಸಾಮ್ರಾಟ್ ಕೂಡಾ ನಟಿಸುತ್ತಿದ್ದು, ಕಲ್ಯಾಣಿ ವಿಜಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ದುನಿಯಾ ವಿಜಯ್ ಜೊತೆ ಹಂಪಿ ಸಿನಿಮಾ

    ದುನಿಯಾ ವಿಜಯ್ ಜೊತೆ ಹಂಪಿ ಸಿನಿಮಾ

    ದುನಿಯಾ ವಿಜಯ್ ಸದ್ಯಕ್ಕೆ ಭೀಮಾ ಚಿತ್ರದ ನಟನೆ, ನಿರ್ದೇಶನದಲ್ಲಿ ಬ್ಯುಸಿಯಾಗಿ ಹೋಗಿದ್ದಾರೆ. ಜಗದೀಶ್ ಗೌಡ ಮತ್ತು ಕೃಷ್ಣ ಕಾರ್ತಿಕ್ ನಿರ್ಮಾಣದ ಭೀಮ ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಜೊತೆಯಲ್ಲೇ ಬಾಲಕೃಷ್ಣ ನಟಿಸಿರುವ ತೆಲುಗು ಚಿತ್ರ ವೀರಸಿಂಹರೆಡ್ಡಿಯಲ್ಲಿ ವಿಲನ್ ರೋಲ್. ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ವೀರಸಿಂಹರೆಡ್ಡಿ ರಿಲೀಸ್ ಆಗುವುದಕ್ಕೆ ಸಿದ್ಧವಾಗುತ್ತಿದೆ. ಇದರ ಮಧ್ಯೆ ಹಂಪಿಯ ಜೊತೆ ಮಾತುಕತೆ ನಡೆಯುತ್ತಿದೆ.

    ಜಡೇಶ್ ಕುಮಾರ್ ಹಂಪಿ. ಜೆಂಟಲ್‍ಮನ್ ಮತ್ತು ಗುರು ಶಿಷ್ಯರು ಚಿತ್ರಗಳ ಮೂಲಕ ಪ್ರತಿಭಾವಂತ ನಿರ್ದೇಶಕ ಎಂದು ಗುರುತಿಸಿಕೊಂಡಿರೋ ಡೈರೆಕ್ಟರ್. ಗುರು ಶಿಷ್ಯರು ಮೂಲಕ ಕಮರ್ಷಿಯಲ್ ಆಗಿಯೂ ಸಕ್ಸಸ್ ಕಂಡ ಹಂಪಿ, ಈಗ ದುನಿಯಾ ವಿಜಯ್ ಅವರಿಗೆ ಕಥೆ ಹೇಳಿದ್ದಾರೆ. ಕಥೆಗೆ ಓಕೆ ಎಂದಿರೋ ವಿಜಯ್ ಈಗಾಗಲೇ ಎರಡು ರೌಂಡ್ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ತೆಲುಗಿನ ವೀರಸಿಂಹರೆಡ್ಡಿ ಚಿತ್ರದ ಕೆಲಸ ಮತ್ತು ಪ್ರಚಾರಕ್ಕೆ ಹೋಗಿರುವ ವಿಜಯ್, ಹಿಂದಿರುಗಿದ ನಂತರ ಹಂಪಿ ಜೊತಿಗಿನ ಮಾತುಕತೆಯೂ ಮುಂದುವರೆಯಲಿದೆ.

  • ದುನಿಯಾ ವಿಜಯ್ ತೆಲುಗಿನಲ್ಲಿ ವಿಲನ್ ಆಗ್ತಾರಾ..?

    ದುನಿಯಾ ವಿಜಯ್ ತೆಲುಗಿನಲ್ಲಿ ವಿಲನ್ ಆಗ್ತಾರಾ..?

    ದುನಿಯಾ ವಿಜಯ್. ಈಗ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಈಗಷ್ಟೇ ಸಲಗ ಚಿತ್ರವನ್ನು ನಿರ್ದೇಶನ ಮಾಡಿ, ಡೈರೆಕ್ಟರ್ ಆಗಿಯೂ ಗೆದ್ದು ತೋರಿಸಿದ್ದಾರೆ. ಆದರೆ ಅವರೀಗ ತೆಲುಗು ಚಿತ್ರರಂಗಕ್ಕೆ ವಿಲನ್ ಆಗಿ ಹೋಗುತ್ತಿದ್ದಾರೆ ಅನ್ನೋ ಸುದ್ದಿ ಇದೆ.

    ತೆಲುಗಿನಲ್ಲಿ ಬಾಲಕೃಷ್ಣ ಹೀರೋ ಆಗಿ ನಟಿಸುತ್ತಿರೋ ಹೊಸ ಚಿತ್ರಕ್ಕೆ ವಿಜಯ್ ವಿಲನ್ ಆಗುತ್ತಿದ್ದಾರಂತೆ. ಕನ್ನಡದ ಹೀರೋಗಳು ತೆಲುಗು, ತಮಿಳಿನಲ್ಲಿ ವಿಲನ್ ಆಗುವುದು ಹೊಸದೇನಲ್ಲ. ಈ ಹಿಂದೆ ಪ್ರಭಾಕರ್, ದೇವರಾಜ್, ಚರಣ್‍ರಾಜ್ ಮೊದಲಾದವರು ತೆಲುಗಿನಲ್ಲಿ ವಿಲನ್ ಆಗಿಯೇ ಫೇಮಸ್ ಆಗಿದ್ದರು. ಇತ್ತೀಚೆಗೆ ಉಪೇಂದ್ರ, ಡಾಲಿ ಧನಂಜಯ್, ವಸಿಷ್ಠ ಸಿಂಹ ಕೂಡಾ ಬೇರೆ ಭಾಷೆಗಳಲ್ಲಿ ವಿಲನ್ ಆಗಿ ಗೆದ್ದಿದ್ದಾರೆ. ಈಗ ವಿಜಯ್ ಸರದಿ.

    ದಶಕದ ಹಿಂದೆ ವಿಜಯ್ ಅವರೊಬ್ಬ ಸ್ಟಂಟ್ ಮ್ಯಾನ್. ಸಣ್ಣ ಪುಟ್ಟ ಪಾತ್ರಗಳಲ್ಲಿಯೇ ತೃಪ್ತಿ ಪಟ್ಟುಕೊಳ್ಳುತ್ತಿದ್ದ, ದೊಡ್ಡ ನಟನಾಗುವ ಕನಸು ಕಾಣುತ್ತಿದ್ದ ಯುವಕ. ದುನಿಯಾ ಅನ್ನೋ ಸಿನಿಮಾ ಅವರ ಚರಿಷ್ಮಾವನ್ನೇ ಬದಲಿಸಿತು. ಹೀರೋ ಆದರು. ನಿರ್ಮಾಪಕರಾಗಿ ಗೆದ್ದರು. ಈಗ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಮತ್ತೆ ತೆಲುಗಿನಲ್ಲಿ ವಿಲನ್ ಆಗ್ತಾರಾ..? ಅವರೇ ಕನ್‍ಫರ್ಮ್ ಮಾಡಬೇಕು. 

  • ದುನಿಯಾ ವಿಜಿ ಈಗ ಸಲಗ

    duniya vijay's new movie is salaga

    ನಿರ್ಮಾಪಕರು ಅವರೇ.. ದುನಿಯಾ ವಿಜಯ್. ನಿರ್ದೇಶಕರು ಅವರೇ.. ರಾಘು ಶಿವಮೊಗ್ಗ. ಸಿನಿಮಾ.. ಕುಸ್ತಿ ಅಲ್ಲ.. ಸಲಗ. ದುನಿಯಾ ವಿಜಯ್ ಈಗ ಸಲಗನಾಗುತ್ತಿದ್ದಾರೆ.

    ಚೂರಿಕಟ್ಟೆ ಚಿತ್ರದ ಮೂಲಕ ಗಮನ ಸೆಳೆದ ರಾಘು ಶಿವಮೊಗ್ಗ ಅವರೇ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 

    ಕನ್ನಡದಲ್ಲಿ ಸಲಗ ಎಂದರೆ ತಕ್ಷಣ ನೆನಪಾಗುವುದು ಅಂಬರೀಷ್ ಅಭಿನಯದ ಒಂಟಿ ಸಲಗ ಸಿನಿಮಾ. ಈಗ ದುನಿಯಾ ವಿಜಯ್ ಸಲಗ ಹೆಸರಲ್ಲಿ ಬರುತ್ತಿದ್ದಾರೆ.

     

  • ದುನಿಯಾ ವಿಜಿ ಜಾನಿಗೆ ಅಪ್ಪು ಹಾಡು..

    puneeth sings for johnny johnny yes papa movie

    ಅಂಜೋದಿಲ್ಲ.. ಗಿಂಜೋದಿಲ್ಲ.. ಮುಖಾಮುಖಿ ಮುಕಾಬಲ್ಲ.. ಅಡ್ರೆಸ್ ಇಲ್ಲ.. ಫೇಸ್‍ಬುಕ್ ಇಲ್ಲ.. ನನ್ನಷ್ಟು ಫೇಮಸ್ ಯಾರೂ ಇಲ್ಲ.. ಈ ಹಾಡು ಹಾಡಿರೋದು ಪವರ್‍ಸ್ಟಾರ್. ಸಿನಿಮಾ.. ಜಾನಿ ಜಾನಿ ಯೆಸ್ ಪಪ್ಪಾ. 

    ಪುನೀತ್ ರಾಜ್‍ಕುಮಾರ್, ಗಾಯಕರೂ ಹೌದು. ಹಲವು ಚಿತ್ರಗಳಿಗೆ ಹಾಡು ಹಾಡಿರುವ ಪುನೀತ್ ರಾಜ್‍ಕುಮಾರ್, ಈಗ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಚಿತ್ರಕ್ಕೆ ಹಾಡು ಹಾಡಿದ್ದಾರೆ.

    ಪುನೀತ್ ಹಾಡಿರೋದು ಚಿತ್ರದ ಟೈಟಲ್ ಸಾಂಗ್. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡಿಗೆ ದುನಿಯಾ ವಿಜಿ ಹೆಜ್ಜೆ ಹಾಕಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ಹೊಸ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಗ್ಲಾಮರ್ ಲುಕ್‍ನಲ್ಲಿ ಕಂಗೊಳಿಸಿದ್ದಾರೆ.

  • ದುನಿಯಾ ವಿಜಿ ಪುತ್ರನ ಸಖತ್ ಎಂಟ್ರಿ

    samrat vijay's first look in kusthi

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ಅವರಿಗೆ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್. ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಿನಿಮಾ ಎಂಟ್ರಿಯ ಲುಕ್ ಹೊರಬಿದ್ದಿದೆ. ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ವಿಜಿ ಪುತ್ರ ಸಾಮ್ರಾಟ್ ಕೂಡಾ ನಟಸುತ್ತಿದ್ದಾನೆ.

    ದುನಿಯಾ ವಿಜಯ್ ಪೈಲ್ವಾನ್ ಪಾತ್ರದಲ್ಲಿದ್ದರೆ, ಚಿಕ್ಕ ಹುಡುಗನಾಗಿದ್ದಾಗಿನ ಅಪ್ಪನ ಪಾತ್ರವನ್ನು ಮಗ ಸಾಮ್ರಾಟ್ ವಿಜಯ್ ಮಾಡಲಿದ್ದಾರೆ. ಮೈತುಂಬಾ ಅಖಾಡದ ಮಣ್ಣು ಮೆತ್ತಿಕೊಂಡಿರುವ, ಕುಸ್ತಿಪಟುವಿನ ಗೆಟಪ್‍ನಲ್ಲಿರುವ ಸಾಮ್ರಾಟ್, ಅಪ್ಪನನ್ನೂ ಮೀರಿಸುವಂತೆ ಮೈಕಟ್ಟು ತೋರಿಸುತ್ತಿದ್ದಾನೆ. ಇನ್ನೂ ಚಿಕ್ಕ ಹುಡುಗ. ಮುಂದಿನ ದಿನಗಳಲ್ಲಿ ದೊಡ್ಡ ಯಶಸ್ಸು ಸಾಧಿಸುವ ಸೂಚನೆಯಂತೂ ಇದೆ.

    Related Articles :-

    ಮರಿ ಪೈಲ್ವಾನ್ ಆಗಿ ಬರ್ತಾನೆ ಜ್ಯೂ.ದುನಿಯಾ ವಿಜಿ

  • ದುನಿಯಾ ವಿಜಿ ಸಲಗಕ್ಕೆ ಟಗರು ಪವರ್

    shivanna supports duniya viji's salaga

    ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಹೆಚ್ಚೂ ಕಡಿಮೆ ಟಗರು ಟೀಂ ಕೆಲಸ ಮಾಡುತ್ತಿದೆ. ಡಾಲಿ ಧನಂಜಯ್, ಸಂಜನಾ ಆನಂದ್ ನಟಿಸಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ಈಗ ಈ ಚಿತ್ರಕ್ಕೆ ಟಗರು ಪವರ್ ಸಿಕ್ಕಿದೆ.

    ಜನವರಿ 5ರಂದು ಸಲಗ ಆಡಿಯೋ ರಿಲೀಸ್ ಇದ್ದು, ಆಡಿಯೋ ಬಿಡುಗಡೆ ಮಾಡುವುದು ಶಿವರಾಜ್ ಕುಮಾರ್. ಅವರೇ ಮುಖ್ಯ ಅತಿಥಿ. ವಿಜಿ ಚಿತ್ರ ರಿಲೀಸ್ ಆಗದೇ 2 ವರ್ಷಗಳಾಗಿವೆ. ಹೀಗಾಗಿ ಸಲಗದ ಮೇಲೆ ಭಾರಿ ನಿರೀಕ್ಷೆಯಿದೆ.

  • ದುನಿಯಾ ವಿಜಿಗೆ ಕಿಚ್ಚನ ಹಾರೈಕೆ

    sudeep congragulates duniya vijay

    ನಟ ದುನಿಯಾ ವಿಜಯ್, ನಿರ್ದೇಶಕರಾಗಲು ಹೊರಟಿರುವುದನ್ನು ನಟ ಸುದೀಪ್ ಸ್ವಾಗತಿಸಿದ್ದಾರೆ. ಸುದೀಪ್ ಅಭಿನಯದ ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ದುನಿಯಾ ವಿಜಿ, ವಿಲನ್ ಆಗಿ ನಟಿಸಿದ್ದವರು. ಅದಾದ ಮೇಲೆ ವಿಜಿ, ಹೀರೋ ಆಗಿ, ಸ್ಟಾರ್ ಆದರು. ಈಗ ಡೈರೆಕ್ಟರ್ ಆಗುತ್ತಿದ್ದಾರೆ.

    ವಿಜಿ ನಿರ್ದೇಶಕರಾಗುತ್ತಿರುವುದನ್ನು ಚಿತ್ರಲೋಕ ವೆಬ್‍ಸೈಟ್‍ನಲ್ಲಿ ನೋಡಿ ತಿಳಿದ ಸುದೀಪ್, ಅದನ್ನೇ ರೀ ಟ್ವೀಟ್ ಮಾಡಿದ್ದಾರೆ. ಶುಭ ಹಾರೈಸುವುದರ ಜೊತೆಗೆ, ನಮ್ಮನ್ನು ನಾವೇ ಹುಡುಕಿಕೊಳ್ಳುವ ಈ ಸಾಹಸ ನಿಜಕ್ಕೂ ಬೇರೆಯದೇ ಅನುಭವ. ನಿರ್ದೇಶಕರಾಗಲು ಹೊರಟಿರುವ ದುನಿಯಾ ವಿಜಯ್‍ಗೆ ಶುಭವಾಗಲಿ. ನಿಮ್ಮ ಪ್ರತಿ ಹೆಜ್ಜೆಯನ್ನೂ ಆನಂದಿಸಿ ಎಂದು ಶುಭ ಕೋರಿದ್ದಾರೆ ಸುದೀಪ್.

  • ದುನಿಯಾ ವಿಜಿಯ ಸಲಗದಲ್ಲಿ ಹೊಸಬರ ಕಾರುಬಾರು

    duniya vijay gives chance to new comers

    ಸಲಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್ ಹೊಸ ಪ್ರತಿಭೆಯೇನೂ ಅಲ್ಲ. ಆದರೆ, ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಕಲಾವಿದೆ. ಹಾಗೆ ನೋಡಿದ್ರೆ ನಿರ್ದೇಶಕರಾಗಿ ಸ್ವತಃ ದುನಿಯಾ ವಿಜಯ್ ಹೊಸಬರೇ. ಸ್ಟಂಟ್ ಕಲಾವಿದನಾಗಿ ಚಿತ್ರರಂಗಕ್ಕೆ ಬಂದು, ಸಣ್ಣ ಪುಟ್ಟ ಸೈಡ್ ರೋಲುಗಳಲ್ಲಿ ನಟಿಸುತ್ತಾ  ಹೀರೋ ಆಗಿ ಬೆಳೆದಿರುವ ವಿಜಿಗೆ ತಮ್ಮ ಆರಂಭದ ದಿನಗಳ ಪಡಿಪಾಟಲುಗಳ ಕಾರಣವೋ ಏನೋ.. ಹೊಸಬರ ಮೇಲೆ ಪ್ರೀತಿ ಜಾಸ್ತಿ. ಅದು ಸಲಗ ಚಿತ್ರದಲ್ಲಿ ಎದ್ದು ಕಾಣುತ್ತಿದೆ.

    ಈ ಚಿತ್ರದಲ್ಲಿ ಸಿದ್ದಿ ಜನಾಂಗದ ಗೀತಾ ಸಿದ್ದಿ, ಮಾಲಾ ಸಿದ್ದಿ ಎಂಬ ರಂಗಕಲಾವಿದರು ಧ್ವನಿ ಕೊಟ್ಟಿದ್ದಾರಂತೆ. ಕೆಂಡ, ಭಲೇ ಭಾಸ್ಕರ್, ಚೊತ್ತೆ, ಚಿನ್ನು ಎಂಬ ಪಾತ್ರಗಳಲ್ಲಿ ನಟಿಸಿರುವುದೆಲ್ಲ ಹೊಸ ಕಲಾವಿದರು. ಪುನೀತ್, ಇಂದ್ರಕುಮಾರ್, ಚನ್ನಕೇಶವ, ಉಷಾ ರವಿಶಂಕರ್, ಶ್ರೀಧರ್, ವಿಲಾಸ್ ನಾಯಕ್, ಲೋಕಲ್ ಆರ್ಕೆಸ್ಟ್ರಾದಲ್ಲಿ ಹಾಡುವ ಒಬ್ಬ ಸಿಂಗರ್ ಸೇರಿದಂತೆ ಬಹುತೇಕರು ಹೊಸಬರಿದ್ದಾರೆ.

    ಹೊಸಬರಿಗೆ ಹಸಿವು ಜಾಸ್ತಿ. ಅಭಿನಯದಲ್ಲಿ ಫ್ರೆಶ್‍ನೆಸ್ ಇರುತ್ತೆ. ಜೊತೆಗೆ ಸೀನಿಯರ್ ಕಲಾವಿದರನ್ನು ಹಾಕಿಕೊಂಡರೆ ಅವರನ್ನು ನೋಡಿಯೇ ಇಡೀ ಪಾತ್ರ ಹೀಗೆಯೇ ಇರುತ್ತೆ ಎಂದು ನಿರ್ಧರಿಸುವಷ್ಟು ಪ್ರೇಕ್ಷಕರು ಅಪ್‍ಡೇಟ್ ಇದ್ದಾರೆ. ಜೊತೆಗೆ ನಾನೂ ಹೊಸಬನಾಗಿಯೇ ಚಿತ್ರರಂಗಕ್ಕೆ ಬಂದವನು. ಈಗ ಹೊಸದಾಗಿ ಡೈರೆಕ್ಟರ್ ಆಗುತ್ತಿದ್ದೇನೆ. ಒಂದಷ್ಟು ಹೊಸಬರಿಗೆ ಚಾನ್ಸ್ ಕೊಡೋಣ ಎಂದುಕೊಂಡೆ, ಕೊಟ್ಟೆ. ಇದು ಹೀರೋ ಕಂ ಡೈರೆಕ್ಟರ್ ದುನಿಯಾ ವಿಜಯ್ ಮಾತು. ಕೆ.ಪಿ.ಶ್ರೀಕಾಂತ್ ಟಗರು ನಂತರ ನಿರ್ಮಿಸುತ್ತಿರುವ ಚಿತ್ರವಿದು. ಕೊರೋನಾ ಕಾಟ ಇಲ್ಲದಿದ್ದರೆ ಇಷ್ಟೊತ್ತಿಗೆ ಥಿಯೇಟರುಗಳಲ್ಲಿರುತ್ತಿತ್ತು. ಈಗ ಮುಂದಕ್ಕೆ ಹೋಗಿದೆ.

  • ನಟ ದುನಿಯಾ ವಿಜಯ್ ಬಂಧನ, ಬಿಡುಗಡೆ

    duniya vijay arrested

    ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರ ಬಂಧನಕ್ಕೆ ಬಂದಿದ್ದ ಪೊಲೀಸರಿಗೆ ನಟ ದುನಿಯಾ ವಿಜಯ್ ಅಡ್ಡಿ ಪಡಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅರೆಸ್ಟ್ ವಾರೆಂಟ್ ಹಿಡಿದು ಹೋದ ಪೊಲೀಸರಿಗೆ ದುನಿಯಾ ವಿಜಯ್ ಸಿಕ್ಕಿದ್ದು ತಮಿಳುನಾಡಿನ ರೆಸಾರ್ಟ್‍ವೊಂದರಲ್ಲಿ. 

    ಇತ್ತು ಎಫ್‍ಐಆರ್ ದಾಖಲಾಗುತ್ತಿದ್ದಂತೆ, ನಟ ದುನಿಯಾ ವಿಜಯ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಅತ್ತ ಬಂಧನವಾದ ಕೆಲವೇ ಗಂಟೆಗಳಲ್ಲಿ ಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿತು.

    ಬಿಡುಗಡೆಯಾಗಿರುವ ದುನಿಯಾ ವಿಜಯ್, ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಪೊಲೀಸರು ಪೊಲೀಸರ ಕರ್ತವ್ಯ ಮಾಡಿದ್ದಾರೆ. ತಿಳಿಯದೇ ಅಚಾತುರ್ಯ ನಡೆದು ಹೋಗಿದೆ. ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು ಎಂದಿದ್ದಾರೆ

  • ನವೆಂಬರ್ 1ಕ್ಕೆ ಕನಕ ವಿಶೇಷ ಟ್ರೇಲರ್

    kanaka special trailer for rajyotsava

    ಕನಕ. ದುನಿಯಾ ವಿಜಿ ಹಾಗೂ ಹರಿಪ್ರಿಯಾ ನಟಿಸಿರುವ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ, ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟಿಸಿದೆ. ಭಾರಿ ನಿರೀಕ್ಷೆ ಮೂಡಿಸಿದೆ. ಏಕೆಂದರೆ, ಚಿತ್ರದ ನಿರ್ದೇಶಕ ಆರ್.ಚಂದ್ರು.

    ತಾಜ್‍ಮಹಲ್, ಚಾರ್‍ಮಿನಾರ್, ಮೈಲಾರಿ, ಬ್ರಹ್ಮ, ಮಳೆ.. ಹೀಗೆ ವಿಭಿನ್ನ ಚಿತ್ರಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಆರ್. ಚಂದ್ರು. ಹೀಗಾಗಿಯೇ ಚಂದ್ರು ಮತ್ತು ದುನಿಯಾ ವಿಜಿ ಜುಗಲ್‍ಬಂದಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

    ಚಿತ್ರದ ನಾಯಕ ನಟ ರಾಜ್ ಅಭಿಮಾನಿ. ಹೀಗಾಗಿ ಈ ಬಾರಿಯ ರಾಜ್ಯೋತ್ಸವಕ್ಕೆ ವಿಶೇಷವಾಗಿ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದು ಈ ಬಾರಿಯ ಕನ್ನಡ ಹಬ್ಬಕ್ಕೆ ಕನಕ ಚಿತ್ರತಂಡ ನೀಡುತ್ತಿರುವ ಕಾಣಿಕೆ.

  • ನಿವೇದಿತಾ ಕಂಡಂತೆ.. ಮಂಕಿ ಟೈಗರ್ ಸೂರಿ

    popcorn monkey tiger

    ಅವರು ಮಾಡಿದ ಮೊದಲ ಸಿನಿಮಾ ದುನಿಯಾ. ಅದು ಅವರ ಹೆಸರಿಗೇ ಅಂಟಿಕೊಂಡಿತು. ದುನಿಯಾ ಸೂರಿ ಆಗಿಬಿಟ್ಟರು ಸೂರಿ. ಅದಾದ ಮೇಲೆ ಹಲವು ಹಿಟ್ ಕೊಟ್ಟರೂ, ಅವರಿಗೆ ಹೊಸದೊಂದು ಚಾರ್ಮ್ ಕೊಟ್ಟಿದ್ದು ಟಗರು. ಅದಾದ ಮೇಲೆ ಟಗರು ಸೂರಿ ಆಗಿಬಿಟ್ಟರು. ಈಗ ಮಂಕಿ ಟೈಗರ್ ಜೊತೆ ಬಂದಿದ್ದಾರೆ. ಸೂರಿ ಕನ್ನಡದ ಬೇರೆ ನಿರ್ದೇಶಕರ ಹಾಗಲ್ಲ. ಅವರ ಕೆಲಸವೇ ಡಿಫರೆಂಟ್. ಅದನ್ನು ನಿವೇದಿತಾ ಅವರ ಬಾಯಲ್ಲಿ ಕೇಳಬೇಕು.

    ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದಲ್ಲಿ ನಟಿಸಿರುವುದಕ್ಕೆ ಹೆಮ್ಮೆಯಿದೆ. ಮೊದಲು ಸೂರಿ ಅವರ ನಿರ್ದೇಶನದ ಶೈಲಿ ಅರ್ಥವಾಗಲು ಅವರಿಗೆ ಸಾಕಷ್ಟು ಸಮಯ ಹಿಡಿಯಿತು. ಅರ್ಥವಾದ ಮೇಲೆ ಗೌರವ ಹೆಚ್ಚಿತು ಎನ್ನುತ್ತಾರೆ ನಿವೇದಿತಾ. ಅವರು ಇಲ್ಲಿ ದೇವಿಕಾ ಎಂಬ ಹೆಸರಿನ ಪಾತ್ರ ಮಾಡಿದ್ದಾರೆ.

    ಮಂಕಿ ಸೀನನ ಬದುಕಿನ ಕಥೆ ಇದು. ಕೆಲವು ಘಟನೆಗಳಿಂದ ದೇವಿಕಾಳ ಬದುಕಿನಲ್ಲಿ ಹೇಗೆಲ್ಲಾ ಪರಿವರ್ತನೆಯಾಗುತ್ತದೆ; ಯಾವ ಹಾದಿಯಲ್ಲಿ ಹೋಗುತ್ತಾಳೆ ಎನ್ನುವುದೇ ಕಥೆ ಎನ್ನುವ ನಿವೇದಿತಾ ಮತ್ತೆ ಮಾತು ಶುರುವಿಟ್ಟುಕೊಳ್ಳೋದು ಸೂರಿ ಬಗ್ಗೆ.

    ಅವರ ಕೆಲಸದ ಶೈಲಿಯೇ ಭಿನ್ನ. ಈ ಕಥೆಯ ಬಗ್ಗೆ ಒಂದು ಸಾವಿರ ಪುಟಗಳನ್ನು ಬರೆದಿರಬಹುದು. ನಾನು ಅವರ ಕಚೇರಿಗೆ ಹೋದಾಗಲೆಲ್ಲಾ ಟೇಬಲ್‌ ಮೇಲೆ ಏನಾದರೂ ಬರೆಯುತ್ತಲೇ ಇರ್ತಾ ಇದ್ರು. ಯಾವುದಕ್ಕೂ ಅಂಟಿಕೊಳ್ಳುತ್ತಿರಲಿಲ್ಲ; ಎಲ್ಲವೂ ಸಿದ್ಧವಾಗಿ ಸೆಟ್ಟಿಗೆ ಬಂದರೂ, ಹೊಸದೇನಾದರೂ ಹೊಳೆದರೆ.. ಇಷ್ಟವಾದರೆ.. ಅದನ್ನು ಇಂಪ್ಲಿಮೆಂಟ್ ಮಾಡೋದು ಸೂರಿ ಸ್ಟೈಲ್. ಅವರೊಬ್ಬ ಚಿತ್ರ ಕಲಾವಿದ. ಅವರ ಮನಸ್ಸಿನಲ್ಲಿ ಒಂದು ಚಿತ್ರವಿರುತ್ತದೆ. ಅದನ್ನು ಕ್ಯಾನ್ವಾಸ್‌ ಮೇಲೆ ತರಲು ಯತ್ನಿಸುತ್ತಾರೆ. ಬರೆಯುತ್ತಾ ಹೋದಂತೆ ಹೊಸ ಬಣ್ಣ, ಛಾಯೆಗಳು ಮೂಡುತ್ತವೆ. ಹೊಸ ಆಲೋಚನೆ ಮೂಡಿದರೆ ಅದಕ್ಕೆ ಪುಷ್ಟಿ ನೀಡುತ್ತಾರೆ. ಹಾಗೆ ರೂಪುಗೊಂಡಿರುವುದೇ ಪಾಪ್‌ಕಾರ್ನ್‌ ಮಂಕಿಟೈಗರ್ ಎನ್ನವುದು ನಿವೇದಿತಾ ಕಂಡ ಸಿನಿಮಾ ಕಥೆ.

    ಎಂದಿನಂತೆ ಈ ಬಾರಿಯೂ ಸೂರಿ ಚೌಕಟ್ಟು ಬ್ರೇಕ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ತಂಡದ ಎಲ್ಲರನ್ನೂ ಒಟ್ಟುಗೂಡಿಸಿ ಸಿನಿಮಾ ಮಾಡಿದ್ದಾರೆ ಎನ್ನುವ ನಿವೇದಿತಾ, ಧನಂಜಯ್ ಬಗ್ಗೆ ಹೇಳೋದೇ ಬೇರೆ. ನನಗೆ ಒಂದು ದುಃಖದ ಸೀನ್ ಇದ್ದರೆ, ಇಡೀ ದಿನ ದುಃಖದ ಮೂಡಲ್ಲಿಯೇ ಇರ್ತೇನೆ. ಆದರೆ ಧನಂಜಯ್ ಹಾಗಲ್ಲ, ಸೀನ್ಗೆ ತಕ್ಕಂತೆ ಮೂಡ್ ಬದಲಿಸಿಕೊಳ್ತಾರೆ ಎನ್ನುವ ನಿವೇದಿತಾಗೆ ಸಿನಿಮಾ ಮೇಲೆ ತುಂಬಾ ನಿರೀಕ್ಷೆಯಿದೆ.

  • ನೋ ಲಾಜಿಕ್.. ಓನ್ಲಿ ನಗು ಟಾನಿಕ್.. ಜಾನಿ ಮ್ಯಾಜಿಕ್

    johnny johnny is a complete riot

    ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಸ್ಪೆಷಲ್ ಏನು..? ಕಾಮಿಡಿ. ಕಾಮಿಡಿ ಬಿಟ್ಟರೆ ಬೇರೆ ಏನಿದೆ..? ಕಾಮಿಡಿಯೇ ಎಲ್ಲ... ಇದರಲ್ಲಿ ನಗುವನ್ನು ಬಿಟ್ಟು ಬೇರೇನೂ ಹುಡುಕಬೇಡಿ. ಲಾಜಿಕ್‍ನ್ನು ಕೂಡಾ ಹುಡುಕಬೇಡಿ. ಇದು ದುನಿಯಾ ವಿಜಯ್ ಹೇಳೋ ಮಾತು.

    ಜಾನಿ ಮೇರಾ ನಾಮ್ ಬಂದ 7 ವರ್ಷಗಳ ನಂತರ ಜಾನಿ ಜಾನಿ ಯೆಸ್ ಪಪ್ಪಾ ಬರುತ್ತಿದೆ. ಈ 7 ವರ್ಷಗಳಲ್ಲಿ ಜಾನಿ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅವನದ್ದೇ ಒಂದು ವೆಬ್‍ಸೈಟ್ ಇದೆ. ಫುಲ್ ಇಂಗ್ಲಿಷ್ ಹೊಡಿತಾನೆ. ಸಖತ್ ಸ್ಟೈಲಿಶ್ ಆಗಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ರಮ್ಯಾಗೆ ಕಾಳು ಹಾಕಿದ್ದ ಜಾನಿ, ಇಲ್ಲಿ ರಚಿತಾಗೆ ಗಾಳ ಹಾಕ್ತಾನೆ. 

    ಆದರೆ, ಕಾಮಿಡಿಯ ಆಚೆ ಯಾವುದೂ ಹೋಗಲ್ಲ. ಥಿಯೇಟರ್ ಒಳಗೆ ಎಂಟ್ರಿ ಕೊಡುವ ಪ್ರೇಕ್ಷಕ ನಗೋಕೆ ಶುರು ಮಾಡಿದ್ರೆ, ಸಿನಿಮಾ ಮುಗಿಯುವವರೆಗೂ ನಗ್ತಾನೇ ಇರ್ತಾನೆ. ಸ್ಕ್ರಿಪ್ಟ್ ಹಾಗಿದೆ. ಅದರ ಕ್ರೆಡಿಟ್ಟು ಪ್ರೀತಮ್ ಗುಬ್ಬಿದು ಅಂತಾರೆ ವಿಜಯ್.

  • ಪದ್ಮಾವತಿ..ಹೊಸ ಪದ್ಮಾವತಿ.. ಯೆಸ್ ಪಪ್ಪಾ..

    hosa padmavathi craze

    ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಹೊಸ ಹಾಡು. ಹೊಸ ಪದ್ಮಾವತಿಯಾಗಿ ಬಂದಿರೋ ರಚಿತಾ ರಾಮ್, ದುನಿಯಾ ವಿಜಯ್ ಜೋಡಿಯ ಹಾಡಿನ ಟೀಸರ್ ದೊಡ್ಡ ಹವಾ ಎಬ್ಬಿಸಿದೆ. ಊರಿಗೊಬ್ಳೇ ಪದ್ಮಾವತಿ ಹಾಡಿನಿಂದ ರಮ್ಯಾಗೆ ಪದ್ಮಾವತಿ ಇಮೇಜ್ ಕೊಟ್ಟಿದ್ದ ಪ್ರೀತಂ ಗುಬ್ಬಿ ನಿರ್ದೇಶನದ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.

    ಚಿತ್ರದ ಹಾಡಿನಲ್ಲಿ ರಚಿತಾ ರಾಮ್, ಇದುವರೆಗೆ ಕಾಣಿಸದೇ ಇರುವಷ್ಟು ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಹಾಡು ಎಂದಿನಂತೆ ಟಪ್ಪಾಂಗುಚ್ಚಿ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡಿಗೆ, ಸಾಹಿತ್ಯ ಕಿರಿಕ್ ಪಾರ್ಟಿ ಖ್ಯಾತಿಯ ಧನಂಜಯ್ ರಂಜನ್ ಅವರದ್ದು.

    Related Articles :-

    'Hosa Padmavathi' First Look Released

    ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

  • ಪೈಲ್ವಾನ್ ಆಗೋಕೆ ಮಗನೊಂದಿಗೆ ವಿಜಿ ಪ್ರಾಕ್ಟೀಸ್

    duniya viji kusthi practice with his son

    ದುನಿಯಾ ವಿಜಿ ಅವರ ಮುಂದಿನ ಸಿನಿಮಾ ಕುಸ್ತಿಯ ಕುರಿತಾದದ್ದು. ಆ ಚಿತ್ರದಲ್ಲಿ ದುನಿಯಾ ವಿಜಿ ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ, ಬಾಲಕನ ಪಾತ್ರದಲ್ಲಿ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಯಾರಿ ಆರಂಭವಾಗಿದ್ದು, ದುನಿಯಾ ವಿಜಯ್ ಈಗ ಕುಸ್ತಿಯ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ ಹಾಗೂ ಬೀರೇಶ್ ಎಂಬ ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದುನಿಯಾ ವಿಜಯ್‍ಗೆ ತರಬೇತಿ ಕೊಡುತ್ತಿದ್ದಾರೆ.

    ಬಾಲ್ಯದಿಂದಲೂ ಗರಡಿ ಮನೆಯಲ್ಲಿಯೇ ಬೆಳೆದ ನನಗೆ ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಇದು ಕನ್ನಡದ ಮಣ್ಣಿನ ಸೊಗಡಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವಿಜಿಯವರದ್ದು. ದುನಿಯಾ ವಿಜಿ ಜೊತೆ ಅವರ ಮಗ ಸಾಮ್ರಾಟ್ ಕೂಡಾ ಪ್ರಾಕ್ಟೀಸ್ ಮಾಡುತ್ತಿರುವುದು ವಿಶೇಷ. ಅಂದಹಾಗೆ ಚಿತ್ರದ ಕಥೆಗಾರ ಸ್ವತಃ ದುನಿಯಾ ವಿಜಯ್.

  • ಭಟ್ರು, ಗಣೇಶ್, ದುನಿಯಾ ವಿಜಿ ಅಪೂರ್ವ ಸಂಗಮ ಯಾವಾಗ..?

    yogaraj bhatt, golden star ganesh & duniya viji combination movie

    ಕನ್ನಡದಲ್ಲಿ ಮಲ್ಟಿಸ್ಟಾರ್​ಗಳ ಚಿತ್ರಗಳ ಪರ್ವ ಮತ್ತೊಮ್ಮೆ ಶುರುವಾಗಿದೆ. ಶಿವಣ್ಣ-ಸುದೀಪ್ ಅಭಿನಯದ ವಿಲನ್ ಚಿತ್ರ ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ ಇನ್ನೊಂದು ಮಲ್ಟಿಸ್ಟಾರ್ ಚಿತ್ರದ ಕನಸು ಚಿಗುರೊಡೆದಿದೆ. ಹೀಗೆ ಒಂದಾಗುವ ಸುಳಿವು ನೀಡಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಿ.

    ಇಬ್ಬರೂ ಚಿತ್ರರಂಗದಲ್ಲಿ ದಾಖಲೆ ಬರೆದವರೇ. ಮುಂಗಾರು ಮಳೆ ಹಿಟ್ ಆದ ಹೊತ್ತಿನಲ್ಲೇ ದುನಿಯಾ ವಿಜಿ ಟ್ರೆಂಡ್ ಸೆಟ್ ಮಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ಇಬ್ಬರು ಭಟ್ಟರ ಕ್ಯಾಂಪಿನ ಹುಡುಗರು. 

    ಈಗ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮುಗುಳುನಗೆ ಚಿತ್ರ ಸಿದ್ಧವಾಗುತ್ತಿರುವಾಗಲೇ, ಹೊಸ ಸುದ್ದಿಯೊಂದು ಭಟ್ಟರ ಕ್ಯಾಂಪಿನಿಂದ ಬಂದಿದೆ. 20 ವರ್ಷಗಳಿಂದ ಗೆಳೆಯರಾಗಿರುವ ಗಣೇಶ್ ಮತ್ತು ದುನಿಯಾ ವಿಜಿ ಒಟ್ಟಿಗೇ ಸಿನಿಮಾ ಮಾಡ್ತಾರಂತೆ. ಐಡಿಯಾ ಬಂದ ತಕ್ಷಣ, ಆ ಚಿತ್ರಕ್ಕೆ ಭಟ್ಟರೇ ನಿರ್ದೇಶನ ಮಾಡಿದರೆ ಚೆಂದ ಅನ್ನೋದೂ ಹೊಳೆದಿದೆ. 

    ಕಥೆ ಏನು..? ಯಾವಾಗ..? ಊಹೂಂ..ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ಇದು ಐಡಿಯಾ ಅಷ್ಟೆ. ಎಲ್ಲ ಗೊತ್ತಾಗೋಕೆ ಆ ಅಪೂರ್ವ ಸಂಗಮ ಆಗುವವರೆಗೆ ಕಾಯಬೇಕಷ್ಟೆ.

  • ಭೀಮ ಮುಹೂರ್ತ : ಹೊಸಬರಿಗೆ ದುನಿಯಾ ವಿಜಯ್ ಭೀಮ ಬಲ..!

    ಭೀಮ ಮುಹೂರ್ತ : ಹೊಸಬರಿಗೆ ದುನಿಯಾ ವಿಜಯ್ ಭೀಮ ಬಲ..!

    ದುನಿಯಾ ವಿಜಯ್ ಸಲಗದ ಯಶಸ್ಸಿನ ನಂತರ ಮತ್ತೊಂದು ಯಶಸ್ಸಿಗೆ ಮುನ್ನುಡಿ ಬರೆದಿದ್ದಾರೆ. ಈ ಬಾರಿ ಸಲಗ ಭೀಮನಾಗಿದ್ದಾನೆ. ಇತ್ತೀಚೆಗಷ್ಟೇ ಭೀಮ ಕೆಣಕದೇ ಇದ್ರೆ ಕ್ಷೇಮ ಅನ್ನೋ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಮುಹೂರ್ತ ಮಾಡಿದೆ.  ಬಂಡಿ ಮಾಂಕಾಳಮ್ಮನ ಸನ್ನಿಧಿಯಲ್ಲಿ ಭೀಮ ಸೆಟ್ಟೇರಿದೆ.

    ಈ ಬಾರಿಯೂ ವಿಜಯ್ ಕೇವಲ ಹೀರೋ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಇದೊಂದು ನೈಜ ಘಟನೆ ಆಧರಿತ ಚಿತ್ರವಂತೆ. ಭೀಮ ಚಿತ್ರಕ್ಕೆ ಶುಭ ಕೋರಿದ್ದು ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವಣ್ಣ.

    ಅಂದಹಾಗೆ ದುನಿಯಾ ವಿಜಯ್ ಹೊಸಬರಿಗೆ ಅವಕಾಶ ಕೊಡೋದ್ರಲ್ಲಿ ಎತ್ತಿದ ಕೈ ಈ ಚಿತ್ರಲ್ಲೂ ಹೊಸ ಹೊಸ ಪ್ರತಿಭೆಗಳಿಗೆ ಚಾನ್ಸ್ ಕೊಟ್ಟಿದ್ದಾರೆ. ಮಂಜುನಾಥ್ ಅನ್ನೋ ಹೊಸ ಹುಡುಗ ಚಿತ್ರದಲ್ಲಿ ಬ್ಲಾಕ್ ಡ್ರಾಗನ್ ಪಾತ್ರ ಮಾಡುತ್ತಿದ್ದಾರೆ. ಜಯಮ್ಮನ ಮಗ ಚಿತ್ರದಲ್ಲಿ ಅಬ್ಬರಿಸಿದ್ದ ಕಲ್ಯಾಣಿ ರಾಜು ಭೀಮನಲ್ಲೂ ನಟಿಸುತ್ತಿದ್ದಾರೆ.

    ಇನ್ನೂ ಒಂದು ವಿಶೇಷವಿದೆ. ಭೀಮ ಟೈಟಲ್ ಮಾಲಾಶ್ರೀ ಅವರ ಬಳಿ ಇತ್ತಂತೆ. ಆ ಟೈಟಲ್ನ್ನು ಮಾಲಾಶ್ರೀ ವಿಜಯ್ ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಶಿವರಾಜ್ ಕುಮಾರ್ ಅವರ ಬೈರಾಗಿ ಚಿತ್ರವನ್ನು ನಿರ್ಮಿಸುತ್ತಿರೋ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ..  ಭೀಮ ಚಿತ್ರದ ನಿರ್ಮಾಪಕರು.