` duniya vijay, - chitraloka.com | Kannada Movie News, Reviews | Image

duniya vijay,

  • ಇದೆಲ್ಲ ಬೇಕಿತ್ತಾ ವಿಜಿ..?

    duniya vijay controversy

    ದುನಿಯಾ ವಿಜಯ್. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಗೆಳೆಯರೊಂದಿಗೆ. ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡನ ಮೇಲೆ ಹಲ್ಲೆ ಮಾಡಿರೋ ಕೇಸ್‍ನಲ್ಲಿ ಜಾಮೀನು ಕೂಡಾ ಸಿಗದೆ ಜೈಲು ಪಾಲಾಗಿದ್ದಾರೆ ದುನಿಯಾ ವಿಜಿ. ಮಿಸ್ಟರ್ ಬೆಂಗಳೂರು ಕಾಂಪಿಟೇಷನ್ ಮುಗಿದ ಮೇಲೆ ನಡೆದಿರೋ ಘಟನೆ ಇದು. ದುನಿಯಾ ವಿಜಿ ಮಗನನ್ನು ಕಿಟ್ಟಿ ಕಡೆಯ ಹುಡುಗರು ಏನೋ ಅಂದರಂತೆ. ಅದಕ್ಕೆ ವಿಜಿ ಮಾರುತಿ ಗೌಡನನ್ನು ಕಾರ್‍ನಲ್ಲಿ ಕಿಡ್ನಾಪ್ ಮಾಡಿ, ಸುಮಾರು ಎರಡು ಗಂಟೆ `ಪ್ರೀತಿಯಿಂದ ಬುದ್ದಿ ಹೇಳಿ' ಕಳಿಸಿಕೊಟ್ಟಿದ್ದಾರಂತೆ. ಅದು ಸ್ಟೇಷನ್ ಮೆಟ್ಟಿಲೇರಿ ಕೇಸ್ ಆಗಿ ಈಗ ಜೈಲು ಸೇರಿದ್ದಾರೆ ದುನಿಯಾ ವಿಜಿ.

    ದುನಿಯಾ ವಿಜಿ ಏಕಾಏಕಿ ಸ್ಟಾರ್ ಆದವರಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ವಿಜಿಯ ಹಣೆಬರಹ ಬದಲಿಸಿದ್ದು ದುನಿಯಾ. ಒಂದೇ ಚಿತ್ರದಿಂದ ಸ್ಟಾರ್ ಆದ ದುನಿಯಾ ವಿಜಿಗೆ ಆ ಸ್ಟಾರ್‍ಡಂನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಸಾಕ್ಷಿ 

    ಪದೇ ಪದೇ ಮಾಡಿಕೊಂಡ ಗಲಾಟೆಗಳು. ಸ್ಟಾರ್ ಆದ ಮೇಲೆ ಸಾರ್ವಜನಿಕ ಜೀವನದಲ್ಲಿ   ಇರಬೇಕಾದ ರೀತಿಯೇ ಬೇರೆ. ಆದರೆ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದ್ದವರು ವಿಜಿ.

    ದುನಿಯಾ ವಿಜಿಯ ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ವಿವಾದಗಳೇ ಅತೀ ಹೆಚ್ಚು ಸದ್ದು ಮಾಡಿದವು. ಮೊದಲ ಪತ್ನಿ ನಾಗರತ್ನ ಜೊತೆ ಗಲಾಟೆ, ಜೀವ ಬೆದರಿಕೆ, ವೃದ್ಧರೊಬ್ಬರಿಗೆ ಹೊಡೆದ ಘಟನೆ, ಮಾಸ್ತಿಗುಡಿ ದುರಂತದ ವೇಳೆ ನಿರ್ಮಾಪಕರನ್ನು ಬಂಧಿಸಲು ಹೋದ ಪೊಲೀಸರಿಗೆ ಯಾಮಾರಿಸಿದ ಘಟನೆ, ದಾವಣಗೆರೆ ಶಾಸಕರೊಬ್ಬರ ಮಗಳ ಮದುವೆ ಮಾಡಿಸಿದ ಪ್ರಕರಣ, ಕೀರ್ತಿಗೌಡ ಜೊತೆ 2ನೇ ಮದುವೆ.. ಹೀಗೆ ಸಾಲು ಸಾಲು ಪ್ರಕರಣಗಳಿವೆ. ಇಂತಹ ಗಲಾಟೆಗಳು, ದುನಿಯಾ ವಿಜಿಯ ಒಳ್ಳೆಯ ಕೆಲಸಗಳನ್ನೆಲ್ಲ ಸೈಡಿಗೆ ತಳ್ಳಿಬಿಟ್ಟವು. ದಂಡ ಕಟ್ಟಲೂ ಹಣವಿಲ್ಲದೆ ಜೈಲು ಸೇರಿದ್ದ ಎಷ್ಟೋ ಜನ ನಿರಪರಾಧಿ ಖೈದಿಗಳಿಗೆ ಜೀವನ ಕೊಟ್ಟಿರುವ ವಿಚಾರವಾಗಲೀ, ಗೆಳೆಯರಿಗೆ ಬದುಕು ಒದಗಿಸಿಕೊಟ್ಟ ವಿಚಾರವಾಗಲೀ.. ಯಾರಿಗೂ ಗೊತ್ತಾಗಲೇ ಇಲ್ಲ. 

    ಈಗ ಮತ್ತೊಮ್ಮೆ.. ನೆಗೆಟಿವ್ ಸುದ್ದಿಯಿಂದಲೇ ಸುದ್ದಿಯಾಗಿದ್ದಾರೆ ವಿಜಿ. ಮಗನನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡೋಕೆ ಕುಸ್ತಿ ಸಿನಿಮಾಗೆ ತಯಾರಾಗುತ್ತಿರುವ ವಿಜಿ, ಇನ್ನು ಮುಂದಾದರೂ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಅನ್ನೋದನ್ನ ಕಲಿತುಕೊಳ್ತಾರಾ..? ಅದು ಎಲ್ಲರನ್ನೂ ಕಾಡುವ ಪ್ರಶ್ನೆಯೂ ಹೌದು. ನಿರೀಕ್ಷೆಯೂ ಹೌದು. 

    Related Articles :-

    Duniya Vijay In Trouble

  • ಎಣ್ಣೆ ಹಾಡು ಕನಕಂದು.. ವಿಡಿಯೋ ಅಭಿಮಾನಿಗಳದ್ದು..!

    kanaka movie song

    ದುನಿಯಾ ವಿಜಯ್ ಅಭಿನಯದ, ಆರ್.ಚಂದ್ರು ನಿರ್ದೇಶನದ ಕನಕ ಚಿತ್ರ 2018ರಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಕಾಂಬಿನೇಷನ್ ಕಾರಣಕ್ಕೇ ಕುತೂಹಲ ಕೆರಳಿಸಿರುವ ಸಿನಿಮಾಗೆ ಹರಿಪ್ರಿಯಾ, ಮಾನ್ವಿತಾ ಹರೀಶ್ ನಾಯಕಿಯರು. ಚಿತ್ರದ ಟ್ರೇಲರ್ ಹವಾ ಎಬ್ಬಿಸಿದ ನಂತರ ಈಗ ಟ್ರೆಂಡ್ ಕನಕ ಚಿತ್ರದ ಎಣ್ಣೆ ಹಾಡು ಟ್ರೆಂಡ್ ಆಗಿದೆ. 

    ಎಣ್ಣೆ ನಮ್ದು, ಊಟ ನಿಮ್ದು.. ಅನ್ನೋ ಹಾಡು ವೈರಲ್ ಆಗಿಬಿಟ್ಟಿದೆ. ವೈರಲ್ ಆಗೋಕೆ ಕಾರಣ ಅದು ಕುಡುಕರ ಹಾಡು ಎಂಬುದಷ್ಟೇ ಅಲ್ಲ ಚಿತ್ರದ ಹಾಡಿಗೆ ಅಭಿಮಾನಿಗಳು ತಮ್ಮ ತಮ್ಮ ಶೈಲಿಯಲ್ಲೇ ವಿಡಿಯೋ ಹಾಕಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ.

    ಸಿನಿಮಾ ರಿಲೀಸ್ ಆದ 2 ವಾರಗಳ ನಂತರ ಹಾಡು ಸೇರಿಸುವ ಐಡಿಯಾ ಆರ್.ಚಂದ್ರು ಅವರಿಗಿತ್ತು. ಹಾಡು ಹಿಟ್ ಆದ ಹಿನ್ನೆಲೆಯಲ್ಲಿ ಚಂದ್ರು ಪ್ಲಾನ್ ಬದಲಾಗಿದೆ. ಸಿನಿಮಾ ರಿಲೀಸ್ ಆಗುವ ಸಮಯದಲ್ಲೇ ಹಾಡನ್ನೂ ಸೇರಿಸಿ ರಿಲೀಸ್ ಮಾಡಲಾಗುತ್ತಿದೆ.

  • ಏಪ್ರಿಲ್ 10ಕ್ಕೆ ಹೊಸಪೇಟೆಯಲ್ಲಿ ಅದ್ಧೂರಿ ಸಲಗ

    ಏಪ್ರಿಲ್ 10ಕ್ಕೆ ಹೊಸಪೇಟೆಯಲ್ಲಿ ಅದ್ಧೂರಿ ಸಲಗ

    ಕೆ.ಪಿ.ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರದ ಪ್ರಮೋಷನ್‍ಗೆ ಹೊಸಪೇಟೆಯಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಏಪ್ರಿಲ್ 10ರ ಪ್ರೀ-ಇವೆಂಟ್ ಶೋಗೆ ಶ್ರೀಕಾಂತ್ ಮತ್ತು ವಿಜಯ್ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಶೋದ ಇನ್ನೊಂದು ಅಟ್ರ್ಯಾಕ್ಷನ್ ಸಿದ್ದಿ ಜನಾಂಗದವರ ಹಾಡು.

    ಸಲಗ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಿದ್ದಿ ಜನಾಂಗದವರು ಹಾಡಿದ್ದಾರೆ. ಅದನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್‍ಗೆ ಬಳಸಿಕೊಳ್ಳೋ ಐಡಿಯಾ ಇತ್ತು. ಆದರೆ, ಹಾಡು ಎಷ್ಟು ಅದ್ಭುತವಾಗಿ ಬಂತೆಂದರೆ, ಈಗ ಅದನ್ನೇ ನಮ್ಮ ಪ್ರಮೋಷನ್‍ಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ದುನಿಯಾ ವಿಜಿ.

    ಈಗಾಗಲೇ ಕ್ರಿಕೆಟ್ ಕಪ್ ಆಯೋಜಿಸುವ ಮೂಲಕ ಒಂದು ಹಂತದ ಪ್ರಚಾರ ಶುರು ಮಾಡಿದೆ ಸಲಗ ಟೀಂ. ಚಿತ್ರದುರ್ಗ, ಮಾಲೂರು, ಶಿವಮೊಗ್ಗಗಳಲ್ಲಿ ಟೂರ್ನಿ ಮುಗಿದಿದೆ. ಇನ್ನು ಹುಬ್ಬಳ್ಳಿ, ಮೈಸೂರು ಟೂರ್ನಿ ಬಾಕಿಯಿದೆ. ಅದು ಮುಗಿಯುವ ಹೊತ್ತಿಗೆ ಹೊಸಪೇಟೆ ಬಾಬಾಬಾಬಾ ಸಲಗ ಎಂದು ಕರೆಯುತ್ತಿರುತ್ತದೆ.

  • ಒಟ್ಟಿಗೇ ನಟಿಸೋಕೆ ಗಣೇಶ್-ವಿಜಿ ರೆಡಿ

    duniya viji ganesh in preetham gubbi's next

    ಮುಂಗಾರು ಮಳೆ ಮತ್ತು ದುನಿಯಾ. ದಶಕದ ಹಿಂದೆ ಏಕಕಾಲದಲ್ಲಿ ಬಿಡುಗಡೆಯಾಗಿದ್ದ ಎರಡೂ ಚಿತ್ರಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿಬಿಟ್ಟವು. ಹಲವು ಸ್ಟಾರ್‍ಗಳನ್ನು ಉಡುಗೊರೆಯಾಗಿ ಕೊಟ್ಟವು. ಮಳೆ ಗಣೇಶ್‍ಗೆ ವರವಾದರೆ, ವಿಜಿಗೆ ದುನಿಯಾ, ಅದೃಷ್ಟದ ಬಾಗಿಲು ತೆರೆದಿತ್ತು.

    ಈಗ.. ಆ ಎರಡೂ ಚಿತ್ರಗಳ ಸ್ಟಾರ್‍ಗಳು ಒಟ್ಟಿಗೇ ನಟಿಸೋಕೆ ಮನಸ್ಸು ಮಾಡಿದ್ದಾರೆ. ವಿಜಿ ನನಗೆ ಒಂದು ರೀತಿ ಗಾಡ್‍ಫಾದರ್ ಇದ್ದಂತೆ ಎಂದು ಹೇಳಿಕೊಳ್ಳುವ ಗಣೇಶ್, ತಮ್ಮದೇ ಬ್ಯಾನರ್‍ನಲ್ಲಿ ಚಿತ್ರ ನಿರ್ಮಿಸುವ ಉತ್ಸಾಹ ತೋರಿಸಿದ್ದಾರೆ.

    ಈ ಮಲ್ಟಿ ಸ್ಟಾರ್ ಚಿತ್ರಕ್ಕೆ ನಿರ್ದೇಶಕರಾಗಿರುವುದು ಪ್ರೀತಮ್ ಗುಬ್ಬಿ. ಇಬ್ಬರಿಗೂ ಗೆಳೆಯ. ಮುಂಗಾರು ಮಳೆ ತಂಡದಲ್ಲಿದ್ದವರು. ಈಗಾಗಲೇ ಗಣೇಶ್‍ಗೆ ಒಂದು, ದುನಿಯಾ ವಿಜಯ್‍ಗೆ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಈಗ ದುನಿಯಾ ವಿಜಯ್ ಜೊತೆ ಎರಡನೇ ಚಿತ್ರ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರ ನಿರ್ದೇಶಿಸುತ್ತಿರುವ ಪ್ರೀತಮ್, ಅದು ಮುಗಿದ ನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ.

    ಗಣೇಶ್ ಮತ್ತು ವಿಜಯ್ ಒಪ್ಪಿದ್ದಾರೆ ಎನ್ನುವುದನ್ನು ಹೊರತುಪಡಿಸಿ, ಚಿತ್ರದ ಕಥೆ, ಕಲಾವಿದರು, ತಂತ್ರಜ್ಞರು ಯಾರೊಬ್ಬರ ಆಯ್ಕೆಯೂ ಇನ್ನೂ ಆಗಿಲ್ಲ. ವಿಜಿ ಹಾಗೂ ಗಣೇಶ್ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದನ್ನು ಕಲ್ಪನೆ ಮಾಡಿಕೊಂಡೇ ಥ್ರಿಲ್ ಆಗಿದ್ದಾರೆ.

  • ಕಡಲೆಕಾಯಿ ಪರಿಷೆ ಮುಗಿದಿಲ್ಲ..

    salaga kadalekai parashe in basavangudi

    ಬಸವನಗುಡಿಯ ಸುಪ್ರಸಿದ್ಧ ಕಡಲೆಕಾಯಿ ಪರಿಷೆ ಮುಗಿದು ವಾರವಾಯಿತು. ಆದರೆ... ಸಲಗ ಚಿತ್ರತಂಡ ಇನ್ನೂ ಪರಿಷೆ ಮುಗಿಸಿಲ್ಲ.ಕಡಲೆಕಾಯಿ ಪರಿಷೆಯಲ್ಲಿ ಸಲಗದ ಕ್ಲೆöÊಮಾಕ್ಸ್ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅದಕ್ಕಾಗಿ ಪರಿಷೆಯ ವೇಳೆ ರಾತ್ರಿಯಲ್ಲಿ ಅಲ್ಲಲ್ಲಿ ಕ್ಯಾಮೆರಾ ಫಿಕ್ಸ್ ಮಾಡಲಾಗಿತ್ತು. ಎಲ್ಲ ಕಲಾವಿದರನ್ನೂ ಒಗ್ಗೂಡಿಸಿತ್ತು. ಎತ್ತರದಲ್ಲಿ 6 ಕ್ಯಾಮೆರಾಗಳನ್ನಿಟ್ಟು, ಜನರಿಗೆ ಗೊತ್ತಾಗದಂತೆ ಕ್ಲೆöÊಮಾಕ್ಸ್ ಶೂಟಿಂಗ್ ನಡೆದಿತ್ತು. ಅಂದುಕೊAಡAತೆಯೇ ಎಲ್ಲವೂ ಆಯಿತಾದರೂ, ಮಧ್ಯೆ ಕೈ ಕೊಟ್ಟಿದ್ದು ಮಳೆ ಮತ್ತು ಹವಾಮಾನ. ಇದರಿಂದಾಗಿ ಕೆಲವು ಪೋರ್ಷನ್ಸ್ ಹಾಗೆಯೇ ಉಳಿದಿವೆ.

    ಹೀಗಾಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಸವನಗುಡಿಯಲ್ಲಿಯೇ ವಿಶೇಷ ಸೆಟ್ ಹಾಕಿಸಲಿದ್ದಾರೆ. ಮತ್ತೊಮ್ಮೆ ಕಡಲೆಕಾಯಿ ಪರಿಷೆ ಮಾಡಲಿದ್ದಾರೆ. ಆ ಸೆಟ್‌ನಲ್ಲಿ ಶೂಟಿಂಗ್ ಮಾಡಲಿದ್ದಾರೆ.

    ಸಲಗ, ದುನಿಯಾ ವಿಜಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಅವರೇ ನಾಯಕರಾಗಿರುವ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ.

  • ಕನಕ ಟೈಟಲ್ ಸ್ಪೆಷಾಲಿಟಿ ಗೊತ್ತಾ..?

    kanaka movie specialties

    ಕನಕ. ಆರ್. ಚಂದ್ರು ನಿರ್ದೇಶನದ, ದುನಿಯಾ ವಿಜಯ್ ನಾಯಕತ್ವದ ಚಿತ್ರ. ಇದು ಅಪ್ಪಟ ಡಾ. ರಾಜ್ ಅಭಿಮಾನಿಯ ಕಥೆ. ಅದು ಟ್ರೇಲರ್‍ನಲ್ಲಿ ಈಗಾಗಲೇ ಸಾಕ್ಷಿ ಸಮೇತ ಸಿಕ್ಕುಬಿಟ್ಟಿದೆ. ಆದರೆ, ಚಿತ್ರಕ್ಕೆ ಕನಕ ಎಂದು ಟೈಟಲ್ ಇಟ್ಟಿದ್ದೇಕೆ..? ಅಲ್ಲಿದೆ ಒಂದು ಸ್ವಾರಸ್ಯ.

    ಕನಕ ಎಂದರೆ ಬಂಗಾರ. ಬಂಗಾರ ಎಂದರೆ ಬಂಗಾರದ ಜೊತೆಯಲ್ಲೇ ಬಂಗಾರದ ಮನುಷ್ಯ ಕೂಡಾ ನೆನಪಾಗ್ತಾರೆ. ಇನ್ನು ಕನಕ ಎಂದರೆ ಕನಕದಾಸರು. ಇಬ್ಬರು ಮಹಾನ್ ಚೇತನಗಳ ಹೆಸರೂ ಒಟ್ಟಿಗೇ ಇದ್ದ ಕಾರಣಕ್ಕೆ ಕನಕ ಎಂಬ ಟೈಟಲ್ ಇಟ್ಟೆವು ಅನ್ನೋದು ಆರ್.ಚಂದ್ರು ವಿವರಣೆ.

    ಆ ಮಾತು ಬಿಡಿ,ಕನಕದಾಸ ಎಂದರೂ ಕನ್ನಡಿಗರ ಕಣ್ಮುಂದೆ ಬರುವ ಮೊದಲ ಚಿತ್ರ ಭಕ್ತ ಕನಕದಾಸ ರಾಜ್‍ಕುಮಾರ್ ಅವರದ್ದೇ. ಹರಿಪ್ರಿಯಾ, ಮಾನ್ವಿತಾ ಹರೀಶ್ ನಾಯಕಿಯರಾಗಿರುವ ಚಿತ್ರದಲ್ಲಿ ಅಣ್ಣಾವ್ರ ಸಿನಿಮಾದ ಕಥೆಗಳ ಸಾರವಿದೆಯಂತೆ. 

    ರಿಪಬ್ಲಿಕ್ ಡೇ ದಿನ ತೆರೆಗೆ ಬರುತ್ತಿರುವ ಕನಕನನ್ನು ಆ ದಿನವೇ ನೋಡೋಣ.

  • ಕನಕನ ಪೋರಿಗೆ ಚಾನ್ಸ್ ಮೇಲೆ ಚಾನ್ಸ್

    joshika of kanaka fame

    ಜ್ಯೋಷಿಕಾ. ಈಗಿನ್ನೂ 9ನೇ ಕ್ಲಾಸ್ ಓದುತ್ತಿರುವ ಹುಡುಗಿ. ಕನಕ ಚಿತ್ರದಲ್ಲಿ ಮಾನ್ವಿತಾ ಹರೀಶ್ ತಂಗಿಯ ಪಾತ್ರದಲ್ಲಿ ನಟಿಸಿರುವ ಹುಡುಗಿ. ಚಿತ್ರದಲ್ಲಿನ ಜ್ಯೋಷಿಕಾ ಅವರ ನಟನೆ ಸ್ವತಃ ದುನಿಯಾ ವಿಜಯ್‍ಗೆ ಇಷ್ಟವಾಗಿಬಿಟ್ಟಿದೆ. ಹೀಗಾಗಿದ್ದೇ ತಡ, ಜ್ಯೋಷಿಕಾಗೆ ಈಗ ಆಫರ್‍ಗಳ ಸುರಿಮಳೆ.

    ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಜೊತೆಯಲ್ಲೇ ದುನಿಯಾ ವಿಜಿ ಅಭಿನಯದ ಜಾನಿ ಜಾನಿ ಯೆಸ್ ಪಪ್ಪಾ ಹಾಗೂ ಕುಸ್ತಿ ಚಿತ್ರಗಳಲ್ಲೂ ನಟಿಸಲು ಸಿದ್ಧರಾಗಿದ್ದಾರೆ ಜ್ಯೋಷಿಕಾ.

    ಕನಕ ಚಿತ್ರದ ಶೂಟಿಂಗ್ ವೇಳೆ, ದುನಿಯಾ ವಿಜಯ್ ಅವರಿಂದ ಬಹಳಷ್ಟು ಕಲಿತೆ ಎನ್ನುವ ಜ್ಯೋಷಿಕಾ, ಜಿಮ್, ನೃತ್ಯ ತರಬೇತಿ ವಿಚಾರಗಳಲ್ಲಿ ದುನಿಯಾ ವಿಜಿ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರಂತೆ. ಇನ್ನೂ ದೊಡ್ಡದಾಗಿ ಬೆಳೆಯುವ ಆಸೆ ಇದೆ. ಆದರೆ, ಡಿಗ್ರಿ ಮುಗಿಸಲೇಬೇಕು ಎಂದಿದ್ದಾರೆ ಜ್ಯೋಷಿಕಾ.

  • ಕಮಿಷನರ್ ಅಚ್ಯುತ ಕುಮಾರ್

    achyuth kumar plays commisnoe i salaga

    ಬೆಂಗಳುರು ಕಮಿಷನರ್ ಚೇಂಜ್ ಆಗಿದ್ದಾರೆ. ಕೇವಲ 47 ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಟ್ರಾನ್ಸ್‍ಫರ್ ಆಗಿ ಅವರ ಜಾಗಕ್ಕೆ ಭಾಸ್ಕರ್ ರಾವ್ ಬಂದಿದ್ದಾರೆ. ಇದು ವೊರಿಜಿನಲ್ ಕಮಿಷನರ್ ಕಥೆ. ಆದರೆ, ನಾವು ಹೇಳ್ತಿರೋದು ಸಿನಿಮಾ ಕಮಿಷನರ್ ಕಥೆ. ಅದೂ ಸಲಗ ಚಿತ್ರದ್ದು.

    ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಚಿತ್ರದಲ್ಲಿ ಅಚ್ಯುತ್ ಕುಮಾರ್ ಪೊಲೀಸ್ ಕಮಿಷನರ್. ಮೊನ್ನೆ ಮೊನ್ನೆಯಷ್ಟೇ ಬೆಲ್‍ಬಾಟಂನಲ್ಲಿ ಕಾನ್‍ಸ್ಟೇಬಲ್ ಆಗಿದ್ದ ಅಚ್ಯುತ್ ಕುಮಾರ್‍ಗೆ ಸಲಗ ಚಿತ್ರದಲ್ಲಿ ಏಕಾಏಕಿ ಪ್ರಮೋಷನ್ ಕೊಟ್ಟಿದ್ದಾರೆ ದುನಿಯಾ ವಿಜಯ್. ಡಾಲಿ ಧನಂಜಯ್ ಖಡಕ್ ಆಫೀಸರ್ ಆಗಿದ್ದಾರೆ.

    ನನ್ನ ಚಿತ್ರದ ಪಾತ್ರಕ್ಕೆ ಖಡಕ್ ಎನ್ನಿಸುವಂತ ನಟ ಬೇಕಿತ್ತು. ಅಚ್ಯುತ್ ಕುಮಾರ್ ಅವರು ಈ ಪಾತ್ರ ಮಾಡ್ತಿರೋದ್ರಿಂದ ಈ ಪಾತ್ರದ ತೂಕ ಹೆಚ್ಚುತ್ತೆ ಅನ್ನೋ ವಿಶ್ವಾಸ ದುನಿಯಾ ವಿಜಯ್ ಅವರದ್ದು.

    ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಸಂಜನಾ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

  • ಕಾಗಿನೆಲೆ ಕನಕದಾಸರಿಗೂ, ಆರ್.ಚಂದ್ರು ಕನಕನಿಗೂ ಎತ್ತಣಿಂದೆತ್ತಣ ಸಂಬಂಧ..?

    kanaka dasa, kanaka movie link

    ಒಮ್ಮೊಮ್ಮೆ ಹೀಗೆಲ್ಲ ಆಗಿಬಿಡುತ್ತೆ. ಅದರಲ್ಲೂ ಸಿನಿಮಾಗಳಲ್ಲಿ. ಈಗ ನೋಡಿ..ದುನಿಯಾ ವಿಜಯ್ ಅಭಿನಯದ ಕನಕ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗಿದೆ. ಹಾಗೆ ಕನಕ ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕನಕ ಜಯಂತಿ ಬಂದುಬಿಟ್ಟಿದೆ. 

    ಕನಕ ಎಂಬ ಹೆಸರು ಬಿಟ್ಟರೆ, ಕಾಗಿನೆಲೆ ಕನಕದಾಸರಿಗೂ, ಆರ್.ಚಂದ್ರು ಸೃಷ್ಟಿಯ ಕನಕನಿಗೂ ಯಾವ ಸಂಬಂಧವೂ ಇಲ್ಲ. ಕನಕದಾಸರು ಕಾಗಿನೆಲೆ ಕೇಶವನ ಭಕ್ತರಾಗಿದ್ದರೆ, ಚಂದ್ರು ಅವರ ಕನಕ ಡಾ.ರಾಜ್ ಭಕ್ತ.

    ಕನಕದಾಸರೆಂದರೆ, ಕನ್ನಡಿಗರ ಕಣ್ಣ ಮುಂದೆ ಬಂದು ನಿಲ್ಲೋದು ಡಾ.ರಾಜ್ ಚಿತ್ರ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕನಕದಾಸರ ಪಾತ್ರದಲ್ಲಿ ಡಾ.ರಾಜ್ ಪರಕಾಯ ಪ್ರವೇಶ ಮಾಡಿ ನಟಿಸಿದ್ದರು. ಈಗ ಬರುತ್ತಿರುವ ಕನಕ ಚಿತ್ರದಲ್ಲಿ ಕನಕ ಪಾತ್ರಧಾರಿ ದುನಿಯಾ ವಿಜಿ, ಡಾ.ರಾಜ್ ಭಕ್ತ.

    ಇಷ್ಟೆಲ್ಲ ಸಂಭ್ರಮದ ಮಧ್ಯೆ ಕನಕ ಜಯಂತಿ. ನಾಡಿನ ಸಮಸ್ತ ಜನತೆಗೆ ಕನಕ ಜಯಂತಿಯ ಶುಭಾಶಯಗಳು.

  • ಕಿಚ್ಚನ ಹಾದಿಯಲ್ಲಿ ದುನಿಯಾ ವಿಜಯ್

    duniya vijay turns director with salaga

    ದುನಿಯಾ ಚಿತ್ರದ ಮೂಲಕ ಹೀರೋ ಆದ, ಸ್ಟಾರ್ ಆದ ನಟ ದುನಿಯಾ ವಿಜಯ್, ಅದಕ್ಕೂ ಮುನ್ನ ಸಣ್ಣ ಸಣ್ಣ ರೋಲ್‍ಗಳಲ್ಲಿ ನಟಿಸಿದ್ದವರು. ಪೋಷಕ, ಖಳ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದವರು. ಸ್ಟಾರ್ ಆದ ಮೇಲೆ ನಿರ್ಮಾಪಕರೂ ಆಗಿದ್ದ ವಿಜಿ, ಈಗ ನಿರ್ದೇಶಕರಾಗುತ್ತಿದ್ದಾರೆ. ಅಲ್ಲಿಗೆ ಹೀರೋ ಆದ ಮೇಲೆ ನಿರ್ದೇಶಕರಾದ ಸುದೀಪ್, ವಿಜಯ್ ರಾಘವೇಂದ್ರ, ಗಣೇಶ್ ಸಾಲಿಗೆ ಸೇರುತ್ತಿದ್ದಾರೆ ದುನಿಯಾ ವಿಜಯ್.

    ಇತ್ತೀಚೆಗೆ ವಿಜಿ ಸಲಗ ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತಲ್ಲ. ಆ ಚಿತ್ರಕ್ಕೆ ವಿಜಿ ಅವರದ್ದೇ ಕಥೆಯಿತ್ತು. ಈಗ ಅವರಿಗೇ ನಿರ್ದೇಶಕರ ಪಟ್ಟ ಕೊಟ್ಟಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಟಗರು ಚಿತ್ರದ ಬಹುತೇಕ ತಂತ್ರಜ್ಞರು, ಕಲಾವಿದರನ್ನು ಸಲಗ ಚಿತ್ರದಲ್ಲಿ ನೋಡಬಹುದು. 

    ಮೊದಲ ನಿರ್ದೇಶನದ ಚಿತ್ರವಾದ್ದರಿಂದ ವಿಜಿ, ಶಿವಣ್ಣನ ಮನೆಗೆ ತೆರಳಿ, ಡಾ.ರಾಜ್ ಭಾವಚಿತ್ರದ ಸಮ್ಮುಖದಲ್ಲಿ ಶಿವಣ್ಣನ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೂನ್ 6ರಂದು ಚಿತ್ರದ ಮುಹೂರ್ತ ಇಟ್ಟುಕೊಳ್ಳಲಾಗಿದೆ.

  • ಕುಸ್ತಿ ಕೈಬಿಟ್ಟ ದುನಿಯಾ ವಿಜಿ

    duniya vijay drops kusthi movie

    ದುನಿಯಾ ವಿಜಯ್ ಅಭಿನಯದ ಕುಸ್ತಿ ಸಿನಿಮಾಗೆ ಬ್ರೇಕ್ ಬಿದ್ದಿದೆ. ತಮ್ಮ ಪುತ್ರ ಸಾಮ್ರಾಟ್‍ನನ್ನು ತೆರೆಗೆ ಪರಿಚಯಿಸಲು ದೊಡ್ಡ ಮಟ್ಟದಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿಜಿ, ಈಗ ಪ್ರಾಜೆಕ್ಟ್‍ನ್ನೇ ಕೈಬಿಟ್ಟಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ, ಈಗ ಬೇರೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  • ಕುಸ್ತಿ ಕೈಬಿಟ್ಟಿಲ್ಲ.. - ನಿರ್ದೇಶಕ ಚೂರಿಕಟ್ಟೆ ರಾಘು

    duniya vijay's kusthi postponed

    ದುನಿಯಾ ವಿಜಯ್ ಅವರ ಮನೆಯಲ್ಲಿನ ಕೌಟುಂಬಿಕ ಕಲಹಗಳು, ಹೆಚ್ಚಾದ ಬಜೆಟ್‍ಗಳಿಂದಾಗಿ ದುನಿಯಾ ವಿಜಯ್ ಕುಸ್ತಿ ಚಿತ್ರವನ್ನು ಕೈಬಿಡಲಾಗಿದೆ ಎಂಬ ಸುದ್ದಿಗೆ ನಿರ್ದೇಶಕ ಚೂರಿಕಟ್ಟೆ ರಾಘು ಸ್ಪಷ್ಟನೆ ನೀಡಿದ್ದಾರೆ.

    ಕುಸ್ತಿ ಸಿನಿಮಾ ಕೈಬಿಟ್ಟಿಲ್ಲ. ಆದರೆ, ಚಿತ್ರ ಮುಂದಕ್ಕೆ ಹೋಗಿರುವುದು ನಿಜ. ಅದಕ್ಕೆ ಕಾರಣ ಬಜೆಟ್ ಅಲ್ಲ..ತಯಾರಿ. ದುನಿಯಾ ವಿಜಯ್ ಅವರ ಕುಟುಂಬದಲ್ಲಿನ ಕಲಹಗಳಿಂದಾಗಿ ದುನಿಯಾ ವಿಜಿ ಕುಸ್ತಿಯ ತರಬೇತಿಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈ ಗ್ಯಾಪ್‍ನಿಂದಾಗಿ ಇಷ್ಟು ದಿನದ ಅವರ ತಯಾರಿ ಕೈಕೊಟ್ಟಿತು. ಹೀಗಾಗಿ ಅವರು ಮತ್ತೊಮ್ಮೆ ತಮ್ಮ ತಯಾರಿಯನ್ನು ಓಂನಿಂದ ಶುರುಮಾಡಬೇಕು. ಅದಕ್ಕೆ ಕನಿಷ್ಟ 6 ತಿಂಗಳು ಬೇಕು. ನಂತರ ಕುಸ್ತಿ ಶುರುವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಚೂರಿಕಟ್ಟೆ ಚಿತ್ರದಿಂದ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಗಳಿಸಿರುವ ಶಿವಮೊಗ್ಗ ರಾಘವೇಂದ್ರ, ಕುಸ್ತಿಗೂ ಮುನ್ನ ಇನ್ನೊಂದು ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ. ಈ ಕುರಿತು ಚಿತ್ರಲೋಕಕ್ಕೆ ಹೇಳಿಕೆ ನೀಡಿರುವ ರಾಘು, ಕುಸ್ತಿ ತಯಾರಿಯ ಮಧ್ಯೆಯೇ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ದುನಿಯಾ ವಿಜಯ್ ಅವರೇ ಆ ಚಿತ್ರವನ್ನೂ ನಿರ್ಮಿಸಲಿದ್ದಾರೆ ಎಂದು ಹೇಳಿದ್ದಾರೆ.

    ದುನಿಯಾ ವಿಜಯ್ ಕುಸ್ತಿ ಸಿನಿಮಾ ಮಾಡುವುದು ನಿಜ. ಆದರೆ, ಅದು ಶುರುವಾಗುವುದು 6 ತಿಂಗಳ ನಂತರ. ಏಕೆಂದರೆ, ದುನಿಯಾ ವಿಜಯ್ ಈಗ ತಮ್ಮ ಕುಸ್ತಿಯನ್ನು ಮತ್ತೆ ಆರಂಭದಿಂದ ಶುರು ಮಾಡಬೇಕು. ದೇಹವನ್ನು ಮತ್ತೆ ಕುಸ್ತಿ ಪೈಲ್ವಾನ್‍ಗೆ ತಕ್ಕಂತೆ ಹುರಿಗೊಳಿಸಬೇಕು. ಅದಕ್ಕೆ 6 ತಿಂಗಳು ಸಮಯ ಬೇಕೇಬೇಕು.

  • ಕೊನೆಗೂ ವಿಧಿಯೆದರು ಸೋತ ದುನಿಯಾ ವಿಜಯ್ : ತಾಯಿ ನಿಧನ

    ಕೊನೆಗೂ ವಿಧಿಯೆದರು ಸೋತ ದುನಿಯಾ ವಿಜಯ್ : ತಾಯಿ ನಿಧನ

    ಕೋವಿಡ್ ಕಷ್ಟ ಕಾಲದಲ್ಲಿ ಹೋರಾಡಿ ತಾಯಿಯನ್ನು ಉಳಿಸಿಕೊಂಡಿದ್ದ ದುನಿಯಾ ವಿಜಯ್, ವಿಧಿಯೆದುರು ಸೋತಿದ್ದಾರೆ. ಮನಸ್ಸು ಮಾಡಿದರೆ ಕೊರೊನಾ ಗೆಲ್ಲಬಹುದು ಎಂದು ತಮ್ಮದೇ ಉದಾಹರಣೆ ಕೊಟ್ಟು, ಮಾದರಿಯಾಗಿದ್ದರು ದುನಿಯಾ ವಿಜಯ್. ಕೊರೊನಾದಿಂದ ಚೇತರಿಸಿಕೊಂಡ ಕೆಲ ತಿಂಗಳ ಬಳಿಕ ವಿಜಯ್ ಅವರ ತಾಯಿ ನಾರಾಯಣಮ್ಮ ಮೃತಪಟ್ಟಿದ್ದಾರೆ.

    ಮೇ ತಿಂಗಳಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದ 76 ವರ್ಷದ ನಾರಾಯಣಮ್ಮ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದೇ ಸಾವಿಗೆ ಕಾರಣ. ಬ್ರೈನ್ ಸ್ಟ್ರೋಕ್‍ನಿಂದಾಗಿ ಅವರ ದೇಹದಲ್ಲಿನ ರಕ್ತ ಚಲನೆಯೇ ಸ್ಥಗಿತಗೊಂಡು ಮೃತಪಟ್ಟಿದ್ದಾರೆ. ಅಮ್ಮ ಮತ್ತೆ ಹುಟ್ಟಿ ಬಾ ಎಂದು ಪೋಸ್ಟ್ ಮಾಡಿರುವ ವಿಜಯ್ ಅವರಿಗೆ ಅವರ ಅಭಿಮಾನಿಗಳೇ ಸಾಂತ್ವನ ಹೇಳಿದ್ದಾರೆ. ಚಿತ್ರರಂಗದ ಹಲವರು ದುನಿಯಾ ವಿಜಯ್ ಅವರಿಗೆ ಸಮಾಧಾನ ಮಾಡಿದ್ದಾರೆ.

  • ಜನವರಿ 12ಕ್ಕೆ ಕನಕ ರಿಲೀಸ್..?

    will kanaka release on jan 12th

    ಕನಕ. ಆರ್.ಚಂದ್ರು-ದುನಿಯಾ ವಿಜಿ ಕಾಂಬಿನೇಷನ್‍ನ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ ನಟಿಸಿರುವ ಚಿತ್ರದ ಟ್ರೇಲರ್,ಹಾಡು ಭರ್ಜರಿ ಸದ್ದು ಮಾಡುತ್ತಿವೆ. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರು. 

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಕನಕ ಚಿತ್ರ ಥಿಯೇಟರಿನಲ್ಲಿರುತ್ತಿತ್ತು. ಆದರೆ ಅಂಜನೀಪುತ್ರ ರಿಲೀಸ್‍ಗೆ ರೆಡಿಯಾದ ಕಾರಣ, ಸ್ಟಾರ್‍ವಾರ್‍ನಿಂದ ಹಿಂದೆ ಸರಿದರು ಆರ್.ಚಂದ್ರು. ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಸ್ವಲ್ಪ ನಿಧಾನವಾಗಿಯೇ ಮುಗಿಸಿದರು. 

    ಈಗ ಚಿತ್ರ ಸೆನ್ಸಾರ್ ಬೋರ್ಡ್‍ನಲ್ಲಿದೆ. ಬಹುಶಃ ಈ ವಾರ್ ಸೆನ್ಸಾರ್ ಮುಗಿಸಿ ಬರಬಹುದು. ಅದಾದ ನಂತರ ಚಿತ್ರದ ಪ್ರೊಮೋಷನ್ಸ್ ಶುರುವಾಗಲಿದೆ. ಜನವರಿ 12ಕ್ಕೆ ಚಿತ್ರವನ್ನು ತೆರೆಗೆ ತರಲು ಆರ್.ಚಂದ್ರು ಸಕಲ ತಯಾರಿಯನ್ನೂ ನಡೆಸಿದ್ದಾರಂತೆ. ಡಾ.ರಾಜ್ ಅಭಿಮಾನಿ ಕನಕನ ಕರಾಮತ್ತು ನೋಡಲು ತಯಾರಾಗಿ.

     

  • ಜಾನಿ ಜಾನಿ ಜೊತೆ ಗಡ್ಡಪ್ಪ

    gadappa joins johnny's team

    ಜಾನಿ ಜಾನಿ ಯೆಸ್ ಪಪ್ಪಾ... ಚಿತ್ರ ತಂಡಕ್ಕೆ ಈಗ ಇನ್ನೊಂದು ಸೇರ್ಪಡೆಯಾಗಿದೆ. ಅದು ತಿಥಿ ಖ್ಯಾತಿಯ ಗಡ್ಡಪ್ಪ. ಗಡ್ಡಪ್ಪನವರಿಗೆ ಸಿನಿಮಾಗಳಲ್ಲಿ ನಟನೆ ಈಗ ಹೊಸದೇನೂ ಅಲ್ಲ. ಆದರೆ, ಸ್ಟಾರ್ ನಟರೊಬ್ಬರ ಜೊತೆ ನಟಿಸುತ್ತಿರುವುದು ಮಾತ್ರ ಇದೇ ಮೊದಲು. ಹೀಗಾಗಿಯೇ ಜಾನಿ ಜಾನಿ ಯೆಸ್ ಪಪ್ಪಾ, ಗಡ್ಡಪ್ಪಗೂ ಹೊಸ ಅನುಭವವಾಗಲಿದೆ.

    ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ಫಾರಿನ್ನಿಂದ ಬರುವ ಎನ್‍ಆರ್‍ಐ. ಸೇಮ್ ಜಾನಿ ಮೇರಾ ನಾಮ್ ಚಿತ್ರದಲ್ಲಿನ ರಮ್ಯಾರಂತೆಯೇ. ವಿಜಿ ಜೊತೆ ಈ ಚಿತ್ರದಲ್ಲೂ ರಂಗಾಯಣ ರಘು ಇರುತ್ತಾರೆ. ಇದೊಂದು ಔಟ್ & ಔಟ್ ಎಂಟರ್‍ಟೇನರ್ ಎಂದಿದ್ದಾರೆ ನಿರ್ದೇಶಕ ಪ್ರೀತಮ್ ಗುಬ್ಬಿ.

    Related Articles :-

    Rachita Ram Is The Heroine For Johnny Johnny Yes Papa

    Shraddha Srinath For Johnny Johnny Yes Papa

    Rachita Ram For Johnny Johnny Yes Papa

    Duniya Vijay And Preetham Gubbi Back With Johnny Johnny Yes Papa

  • ಜಾನಿ ಜಾನಿ ಯೆಸ್ ಪಪ್ಪಾ.. ರಿಲೀಸ್‍ಗೆ ರೆಡಿಯಪ್ಪಾ

    johnny johnny yes papa ready to release

    ಜಾನಿ ಜಾನಿ ಯೆಸ್ ಪಪ್ಪಾ. ಪ್ರೀತಂ ಗುಬ್ಬಿ ಸಿನಿಮಾ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ನಟಿ ರಮ್ಯಾರನ್ನು ಪದ್ಮಾವತಿಯಾಗಿಸಿದ್ದ ಪ್ರೀತಮ್, ರಚಿತಾ ರಾಮ್ ಅವರನ್ನು ಹೊಸ ಪದ್ಮಾವತಿಯಾಗಿಸಿರುವ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.

    ಜಾನಿ ಮೇರಾ ನಾಮ್ ನಂತರ ಚಿಜಿ & ಪ್ರೀತಂ ಒಟ್ಟಿಗೇ ಸೇರಿರುವ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕ್ ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ರಂಗಾಯಣ ರಘು, ಸಾಧುಕೋಕಿಲ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರದಲ್ಲಿದ್ದಾರೆ. 

    ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ.

  • ಜಾನಿ ವಿಜಯ್.. ಪಾಪಾ ಯಾರು..?

    johnny to come with papa

    ಜಾನಿ ಜಾನಿ ಯೆಸ್ ಪಾಪಾ ಸಿನಿಮಾ ರಿಲೀಸಾಗುತ್ತಿದೆ. ಇದು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್‍ನ ಸೀಕ್ವೆಲ್ ಎಂದರೂ ತಪ್ಪೇನಿಲ್ಲ. ವಿಜಯ್-ರಮ್ಯಾ-ರಂಗಾಯಣ ರಘು-ಪ್ರೀತಂ ಗುಬ್ಬಿ ಕಾಂಬಿನೇಷನ್‍ನ ಆ ಸಿನಿಮಾ ಸೂಪರ್ ಹಿಟ್. ಈಗ ಅದೇ ಜೋಡಿ.. ರಿಪೀಟ್ ಆಗಿದೆ. ಪದ್ಮಾವತಿ ಜಾಗಕ್ಕೆ ಹೊಸ ಪದ್ಮಾವತಿಯಾಗಿ ಬಂದಿರೋದು ರಚಿತಾ ರಾಮ್.

    ಎಲ್ಲ ಓಕೆ.. ಜಾನಿ ಅಂದ್ರೆ ದುನಿಯಾ ವಿಜಯ್. ಪಾಪಾ ಅಂದ್ರೆ ಯಾರು..? ಅದು ಬೇರ್ಯಾರೂ ಅಲ್ಲ. ರಂಗಾಯಣ ರಘು. ಜಾನಿ ಮೇರಾ ನಾಮ್‍ನಲ್ಲಿ ಸ್ತ್ರೀ ವೇಷ ತೊಟ್ಟು, ದತ್ತಣ್ಣನನ್ನು ಮೋಡಿ ಮಾಡಿದ್ದ ರಘು, ಇಲ್ಲಿ ಪಾಪಾ ಆಗಿದ್ದಾರೆ. ಏನೇನೆಲ್ಲ ತರಲೆ ಮಾಡ್ತಾರೆ ಅನ್ನೋದನ್ನ ನೋಡೋಕೆ, ನೀವು ಥಿಯೇಟರ್‍ಗೇ ಹೋಗಬೇಕು.

    ಡಾ.ಹಾಲಪ್ಪ ಅವತಾರದಲ್ಲಿ ಸಾಧು ಮತ್ತೊಮ್ಮೆ ಪ್ರತ್ಯಕ್ಷರಾಗಿದ್ದರೆ, ಹೊಸ ಪದ್ಮಾವತಿಗೂ ಅಪ್ಪನಾಗಿರೋದು ಅಚ್ಯುತ್ ಕುಮಾರ್. ಅಲ್ಲಿ ಶರಣ್, ರಮ್ಯಾಗೆ ಕಾಳು ಹಾಕುವ ಫಾರಿನ್ ಹುಡುಗನಾಗಿದ್ದರು. ಇಲ್ಲಿ ವಿದೇಶಿ ನಟ ಜಾಕ್ ಎಂಬುವವರೇ ಇದ್ದಾರೆ. ಇವರೆಲ್ಲರ ಜೊತೆ ಗಡ್ಡಪ್ಪ ಇದ್ದಾರೆ. ತಿಥಿ ಸ್ಟೈಲ್‍ನಲ್ಲೇ ಇರೋ ಗಡ್ಡಪ್ಪನವರದ್ದು ಸಿನಿಮಾದಲ್ಲಿ ಮುಖ್ಯ ಪಾತ್ರವಂತೆ.

  • ಜಿಮ್'ನವರಿಗಾಗಿ ದುನಿಯಾ ವಿಜಿ ಮಾಡಿದ ಮನವಿ ಇದು

    Duniya Vijay Requests Goverment To Permit Gym Opening

    ದುನಿಯಾ ವಿಜಯ್ ಪ್ರತಿದಿನ ಜಿಮ್ ಮಾಡುವುದು ಗುಟ್ಟೇನಲ್ಲ. ವರ್ಕೌಟ್ ಪ್ರೇಮಿಯಾಗಿರುವ ದುನಿಯಾ ವಿಜಿ, ಜಿಮ್‍ಗಳನ್ನು ಪುನಾರಂಭಿಸಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಮದ್ಯ ಮಾರಾಟಕ್ಕೇ ಅನುಮತಿ ನೀಡಿದ್ದೀರಿ. ಜಿಮ್‍ಗಳಿಗೂ ಅವಕಾಶ ಕೊಡಿ. ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸರ್ ಮೈಂಟೇನ್ ಮಾಡ್ತೇವೆ.. ನೀವು ಹೇಳಿದ್ದಕ್ಕಿಂತಲೂ ಹೆಚ್ಚು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತೇವೆ. ದಯವಿಟ್ಟು ಜಿಮ್‍ಗಳನ್ನು ಓಪನ್ ಮಾಡಿಸಿ ಎನ್ನುವುದು ವಿಜಿ ಮನವಿ.

    ಅದಕ್ಕೆ ಕಾರಣವೂ ಇದೆ. ಎಷ್ಟೋ ಜನ ಜಿಮ್ ನಡೆಸುವವರು ಸಾಲ ಸೋಲ ಮಾಡಿ ಜಿಮ್ ಮಾಡಿರುತ್ತಾರೆ. ಅವರ ಕಥೆ ಏನಾಗಬೇಕು ಎನ್ನುವುದು ದುನಿಯಾ ವಿಜಿ ಪ್ರಶ್ನೆ. ದುನಿಯಾ ವಿಜಿ ಮನವಿಯನ್ನು ಸರ್ಕಾರ ಪುರಸ್ಕರಿಸುತ್ತಾ..? ಕಾದು ನೋಡಬೇಕು. ಅಷ್ಟೆ.

     

  • ಟಿಣಿಂಗ ಮಿಣಿಂಗ ಟಿಷ್ಯಾ ಎಫೆಕ್ಟ್ : ದಾಖಲೆ ಬರೆದ ಭೀಮ

    ಟಿಣಿಂಗ ಮಿಣಿಂಗ ಟಿಷ್ಯಾ ಎಫೆಕ್ಟ್ : ದಾಖಲೆ ಬರೆದ ಭೀಮ

    ಸಲಗ ಚಿತ್ರದ ನಂತರ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಭೀಮ. ಈ ಚಿತ್ರಕ್ಕೆ ಮುಹೂರ್ತವಾಗುತ್ತಿರೋದು ಏಪ್ರಿಲ್ 18ಕ್ಕೆ. ಚಿತ್ರ ಘೋಷಣೆಯಾಗಿದೆಯೇ ಹೊರತು, ಅಧಿಕೃತವಾಗಿ ಚಿತ್ರೀಕರಣವೇ ಶುರುವಾಗಿಲ್ಲ. ಹೊರಬಂದಿರೋದು ಒಂದೇ ಒಂದು ಪೋಸ್ಟರ್. ಆದರೆ ಚಿತ್ರ ಶುರುವಾಗುವ ಮೊದಲೇ ಒಂದೂವರೆ ಕೋಟಿ ಬಿಸಿನೆಸ್ ಮಾಡಿದೆ.

    ಸಲಗ ಚಿತ್ರದಲ್ಲಿ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಟಿಣಿಂಗ ಮಿಣಿಂಗ ಟಿಷ್ಯ ಹಾಡಂತೂ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಸಲಗದ ಚರಣ್ ರಾಜ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಹೀಗಾಗಿ ಆನಂದ್ ಆಡಿಯೋದವರು ಭೀಮ ಚಿತ್ರದ ಆಡಿಯೋ ಹಕ್ಕುಗಳಿಗೆ ಒಂದೂವರೆ ಕೋಟಿ ಕೊಟ್ಟಿದ್ದಾರೆ.

    ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ನಿರ್ಮಾಣದ ಸಿನಿಮಾ ಭೀಮ, ಮುಹೂರ್ತ ಆಗುವುದಕ್ಕೂ ಮೊದಲೇ ಬಿಸಿನೆಸ್ ಮಾಡಿದೆ. ಕಂಟೆಂಟ್ ಏನು ಅನ್ನೋದನ್ನೂ ನೋಡದೆ ಕೇವಲ ವಿಶ್ವಾಸದ ಮೇಲೆ ಆನಂದ್ ಆಡಿಯೋ ಅಡ್ವಾನ್ಸ್ ಚೆಕ್ ಕೊಟ್ಟಿದೆ.

  • ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

    ಡಾಲಿ ಧನಂಜಯ್`ರ ಈ ವರ್ಷದ 3ನೇ ಸಿನಿಮಾ ಏ.15ಕ್ಕೆ

    ಹೌದು, ಇದು ಡಾಲಿ ಧನಂಜಯ್ ಅವರಿಗೆ ಈ ವರ್ಷದ 3ನೇ ಸಿನಿಮಾ. ಇದೇ ಏಪ್ರಿಲ್ 15ಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಡಾಲಿ, ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ರಿಲೀಸ್ ಆದರೆ, ಡಾಲಿಗೆ ಈ ವರ್ಷದ 3ನೇ ಸಿನಿಮಾ ಆಗಲಿದೆ.. ಸಲಗ.

    ಈ ವರ್ಷ ಅವರು ನಟಿಸಿದ್ದ ಪೊಗರು ಚಿತ್ರ ಮೊದಲು ತೆರೆ ಕಂಡಿತ್ತು. ಆದರೆ, ಚಿತ್ರದಲ್ಲಿ ಡಾಲಿ ಪಾತ್ರಕ್ಕೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿತ್ತೋ.. ಏನೋ.. ಅಭಿಮಾನಿಗಳಿಗೂ ಇಷ್ಟವಾಗಲಿಲ್ಲ.

    ಇನ್ನು ವರ್ಷದ 2ನೇ ಸಿನಿಮಾ ಯುವರತ್ನ. ಪುನೀತ್ ಹೀರೋ ಆಗಿರೋ ಸಿನಿಮಾ ಪ್ರಚಾರ ಬಿರುಸಾಗಿದೆ. ಪುನೀತ್, ತಾವೇ ಹೀರೋ ಆಗಿದ್ದರೂ ಪ್ರಚಾರದ ಪ್ರತಿ ಹಂತದಲ್ಲೂ ಡಾಲಿ ಧನಂಜಯ್ ಅವರನ್ನು ಜೊತೆಗಿಟ್ಟುಕೊಂಡೇ ಹೋಗುತ್ತಿದ್ದಾರೆ. ಅದು ಏಪ್ರಿಲ್ 1ಕ್ಕೆ ರಿಲೀಸ್ ಆದರೆ, ಏಪ್ರಿಲ್ 15ಕ್ಕೆ 3ನೇ ಸಿನಿಮಾ ಸಲಗ.