` alia bhat, - chitraloka.com | Kannada Movie News, Reviews | Image

alia bhat,

  • ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್

    ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್

    ಅಜಯ್ ದೇವಗನ್ ಬಾಲಿವುಡ್ ಸೂಪರ್ ಸ್ಟಾರ್. ಅಜಯ್ ದೇವಗನ್ ಚಿತ್ರಗಳಿಗೆ ಇಡೀ ದೇಶದಲ್ಲಿ ಅದ್ಭುತ ಓಪನಿಂಗ್ ಸಿಗುತ್ತೆ. ಅತ್ತ ಅಲಿಯಾ ಭಟ್ ಕೂಡಾ ಬಾಲಿವುಡ್‍ನ ಲೇಡಿ ಸ್ಟಾರ್. ಚೆಂದದ ನಟಿ ಎನ್ನುವುದನ್ನೂ ಸಾಬೀತು ಪಡಿಸಿರುವ ಆಲಿಯಾಗೆ ಕೈತುಂಬಾ ಅವಕಾಶಗಳಿವೆ. ಆದರೆ.. ಇವರಿಬ್ಬರೂ ರಾಜಮೌಳಿಗಾಗಿ ಆರ್‍ಆರ್‍ಆರ್ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ.

    ಆರ್‍ಆರ್‍ಆರ್ ಚಿತ್ರಕ್ಕೆ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಹೀರೋಗಳು. ಆ ಚಿತ್ರದಲ್ಲಿ ನಟಿಸಿರೋ ಅಜಯ್ ದೇವಗನ್ ಅವರಿಗೆ ಇರೋದು 8 ನಿಮಿಷದ ರೋಲ್. ಅಲಿಯಾ ಭಟ್ ಅವರಿಗೆ ಇರೋದು 15 ನಿಮಿಷದ ರೋಲ್. ಚಿತ್ರದಲ್ಲಿ ಅಷ್ಟು ಕಡಿಮೆ ಅವಧಿ ಕಾಣಿಸಿಕೊಳ್ಳೋ ಪಾತ್ರವಾದರೂ ಚಿತ್ರದಲ್ಲಿ ಆ ಪಾತ್ರಗಳಿಗೆ ದೊಡ್ಡ ಸ್ಕೋಪ್ ಇದೆಯಂತೆ. ಕೇವಲ ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ಆ ಪುತ್ರಗಳಿಗೆ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಇಬ್ಬರೂ ಓಕೆ ಎಂದರಂತೆ.

  • ಆಲಿಯಾ ಭಟ್ ಹೇಳಿದ ಫಸ್ಟ್ ನೈಟ್ ಸ್ಟೋರಿ

    ಆಲಿಯಾ ಭಟ್ ಹೇಳಿದ ಫಸ್ಟ್ ನೈಟ್ ಸ್ಟೋರಿ

    ರಣ್`ಬೀರ್ ಕಪೂರ್ ಮತ್ತು ಆಲಿಯಾ ಭಟ್ ಈಗ ಹಿಂದಿ ಚಿತ್ರರಂಗದ ಸೆಲಬ್ರಿಟಿ ಕಪಲ್. ಇವರಲ್ಲಿ ಆಲಿಯಾ ಅವರಂತೂ ಬೋಲ್ಡ್ & ಬ್ಯೂಟಿಫುಲ್. ಮುಚ್ಚುಮರೆಯಿಲ್ಲದೆ ಬಿಂದಾಸ್ ಆಗಿ ಮಾತನಾಡುವ ಆಲಿಯಾ ಮತ್ತೊಮ್ಮೆ ಅಂತಹುದೇ ಮಾತುಗಳ ಮೂಲಕ ಹುಬ್ಬೇರಿಸಿದ್ದಾರೆ. ಈ ಬಾರಿ ಆಲಿಯಾ ಭಟ್ ಮಾತನಾಡಿರೋದು ಫಸ್ಟ್ ನೈಟ್ ಬಗ್ಗೆ. ಆಲಿಯಾ ಈ ಮಾತು ಹೇಳಿರೋದು ಕರಣ್ ಜೋಹರ್ ಶೋನಲ್ಲಿ ಅನ್ನೋದು ವಿಶೇಷ.

    ರಣ್‍ಬೀರ್ ಅವರೊಂದಿಗೆ ಮದುವೆಯಾದ ದಿನವೇ ಅವರಿಬ್ಬರಿಗೆ ಶೋಬನವೂ ಇತ್ತು. ಕರಣ್ ಕೇಳಿದ್ದು ಇಷ್ಟೆ. ಮದುವೆಯ ನಂತರ ಮದುವೆಯ ಬಗ್ಗೆ ಇದ್ದ ಯಾವ ನಂಬಿಕೆ ಸುಳ್ಳಾಯಿತು? ಅದಕ್ಕೆ ಹೇಳಿದ್ದು ಪ್ರಸ್ತದ ದಿನ ಕಥೆ. ಫಸ್ಟ್ ನೈಟ್ ದಿನ ಏನೂ ಇರೋದಿಲ್ಲ. ಆ ರಾತ್ರಿ ಏನೂ ವಿಶೇಷವಾದದ್ದು ನಡೆಯೋದಿಲ್ಲ. ಮದುವೆಯಲ್ಲಿಯೇ ಸುಸ್ತಾಗಿರುತ್ತೇವೆ. ಇನ್ನೇನು ಮಾಡೋಕೆ ಸಾಧ್ಯ. ಸುಮ್ಮನೆ ಮಲಗುತ್ತೇವೆ ಅಷ್ಟೆ..

    ಶೋನಲ್ಲಿದ್ದ ರಣ್`ಬೀರ್ ಮತ್ತು ಕರಣ್ ಜೋಹರ್ ಇಬ್ಬರೂ ನಕ್ಕಿದ್ದಾರೆ. ಉಳಿದವರ ಕಥೆ ಏನು?ನ

  • ಈ ನಟಿಯ ಗರ್ಭಿಣಿ ಫೋಟೋಗೆ ಒಂದು ಕೋಟಿ..!

    ಈ ನಟಿಯ ಗರ್ಭಿಣಿ ಫೋಟೋಗೆ ಒಂದು ಕೋಟಿ..!

    ಫೋಟೋ ತೆಗೆಸಿಕೊಳ್ಳೋಕೆ ನಾವು ದುಡ್ಡು ಕೊಡ್ಬೇಕು. ಆದರೆ.. ಆ ಫೋಟೋಗೆ ಒಂದು ಕೋಟಿ ಸಿಕ್ಕರೆ.. ಹೋಗ್ ಹೋಗ್ರಿ.. ಏನ್ ತಮಾಷಿ ಮಾಡ್ತೀರಿ ಅನ್ಬೇಡಿ.. ಇದು ಸತ್ಯ.

    ಬಾಲಿವುಡ್ ನಟಿ ಆಲಿಯಾ ಭಟ್ ಫೋಟೋಗೆ ಒಂದು ಕೋಟಿಯ ಡಿಮ್ಯಾಂಡ್ ಬಂದಿದೆ. . ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಆಲಿಯಾ, ಇನ್ಸ್ಸ್ಟಾಗ್ರಾಮ್ನಲ್ಲಿ 68.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಾಲಿವುಡ್ನ ಈ ಕ್ಯೂಟ್ ಈಗ ಗರ್ಭಿಣಿ.ಆ ಫೋಟೋಗೆ ಆಲಿಯಾ 1 ಕೋಟಿ ಚಾರ್ಜ್ ಮಾಡ್ತಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

    ಸಿನಿಮಾವೊಂದಕ್ಕೆ 15ರಿಂದ 18 ಕೋಟಿ ಪಡೆಯೋ ಆಲಿಯಾ ಬಳಿ 500 ಕೋಟಿಗೂ ಹೆಚ್ಚು ಆಸ್ತಿ ಇದೆ. ಆದರೇ.. ಫೋಟೋ ಕೊಟ್ರೆ ದುಡ್ಡು ಬರುತ್ತೆ ಅಂದ್ರೆ ಅವರಾದ್ರೂ ಯಾಕೆ ಬಿಡ್ತಾರೆ ಅಲ್ವಾ..? ಅಂದಹಾಗೆ ಆಲಿಯಾ ಇದೂವರೆಗೆ ಹೆಚ್ಚೂ ಕಮ್ಮಿ ಎರಡು ಸಾವಿರ ಪೋಸ್ಟ್ ಹಾಕಿದ್ದಾರೆ. ಹಾಗಂತ.. ಅವರು ಹಾಕಿದ ಎಲ್ಲ ಪೋಸ್ಟುಗಳಿಗೂ ಕೋಟಿ ಕೋಟಿ ಬರಲ್ಲ. ಗರ್ಭಿಣಿ ಫೋಟೋಗೆ ಮಾತ್ರ.. ಅಷ್ಟು ದುಡ್ಡು ಕೊಡ್ತಾರಂತೆ..

    ಅಪ್ಪ ಆಗೋದು ರಣ್ಬೀರ್ ಕಪೂರ್. ಅಮ್ಮ ಆಗೋದು ಆಲಿಯಾ ಭಟ್. ದುಡ್ಡು ಕೊಡೋದು ಸೋಷಿಯಲ್ ಮೀಡಿಯಾ ಕಂಪೆನಿ. ಯಾಕೆ ಅಂದ್ರೆ.. ಅದನ್ನು ನೋಡಿ.. ಖುಷಿಯಾಗಿ ಲೈಕ್ಸ್ ಒತ್ತೋದು ಫ್ಯಾನ್ಸ್. ಆ ಲೈಕ್ಸು.. ಕಮೆಂಟ್ಸು.. ಆಲಿಯಾಗೆ ತಂದುಕೊಡೋದು ಒಂದು ಕೋಟಿ..

    ಏನು ಮಾಯವೋ.. ಏನು ಮರ್ಮವೋ.. ಹಣವಂತರಿಗೇ ಹಣ ಸೇರುವುದೂ..ದೂ..ದೂ..

  • ಬ್ರಹ್ಮಾಸ್ತ್ರ ರಿಲೀಸ್ ಹೊತ್ತಲ್ಲೇ ಹೊರಬಿತ್ತು ಗೋ ಮಾಂಸದ ಹೇಳಿಕೆ

    ಬ್ರಹ್ಮಾಸ್ತ್ರ ರಿಲೀಸ್ ಹೊತ್ತಲ್ಲೇ ಹೊರಬಿತ್ತು ಗೋ ಮಾಂಸದ ಹೇಳಿಕೆ

    ಒಂದು ಸಿನಿಮಾಗೆ ಏನೇನೆಲ್ಲ ವಿವಾದಗಳಾಗಬಹುದು. ಯಾವತ್ತೋ ಹೇಳಿದ ಹೇಳಿಕೆಗಳೆಲ್ಲ ಯಾವ್ಯಾವ ರೀತಿ..ಇನ್ಯಾವುದೋ ಸಮಯಕ್ಕೆ ತಿರುಗು ಬಾಣವೂ ಆಗಬಹುದು. ಇದಕ್ಕೆಲ್ಲ ಇತ್ತೀಚೆಗೆ ಬಾಕ್ಸಾಫೀಸಿನಲ್ಲಿ ಪೆಟ್ಟು ತಿಂದ ಅಮೀರ್ ಖಾನ್, ಅಕ್ಷಯ್ ಕುಮಾರ್, ತಾಪ್ಸಿ ಪನ್ನು, ದೀಪಿಕಾ ಪಡುಕೋಣೆ, ವಿಜಯ್ ದೇವರಕೊಂಡ.. ಹಾಗೂ ಸ್ವತಃ ರಣಬೀರ್ ಕಪೂರ್ ಮೊದಲಾದವರಿಗೆ ಚೆನ್ನಾಗಿ ಗೊತ್ತಿರುತ್ತೆ. ಈಗ ಮತ್ತೊಮ್ಮೆ ಅದರ ಬಿಸಿ ತಟ್ಟುತ್ತಿರುವುದು ರಣಬೀರ್ ಕಪೂರ್ ಅವರಿಗೆ.

    ಮುಂದಿನ ವಾರ ಬ್ರಹ್ಮಾಸ್ತ್ರ ರಿಲೀಸ್ ಆಗುತ್ತಿದೆ. ರಣಬೀರ್ ಕಪೂರ್ ಎದುರು ಅಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ ಸೇರಿದಂತೆ ಬೃಹತ್ ತಾರಾಗಣವೇ ಇದೆ. ಆದರೆ ಟ್ರೇಲರಿನಲ್ಲಿ ಹೀರೋ ಶೂ ಹಾಕಿಕೊಂಡೇ ದೇವಸ್ಥಾನದ ಗಂಟೆ ಹೊಡೆಯುವ ಸೀನ್ ಇದೆ. ಅದು ವಿವಾದವಾಯ್ತು. ಜಗತ್ತಿನಲ್ಲಿ ಅದ್ಯಾವ ದೇವಸ್ಥಾನದಲ್ಲಿ ಶೂ ಹಾಕಿಕೊಂಡು ದೇವಸ್ಥಾನಕ್ಕೆ ಹೋಗ್ತಾರೆ? ಕಾಮನ್ ಸೆನ್ಸ್ ಬೇಡ್ವಾ ಎಂದು ಚಿತ್ರತಂಡಕ್ಕೆ ಪ್ರಶ್ನೆಗಳ ಸುರಿಮಳೆಗೈದರೆ.. ಅದು ಕಿವಿಗೇ ಬಿದ್ದಿಲ್ಲ ಎನ್ನುವಂತಿದೆ ಸಿನಿಮಾ ಟೀಂ. ಇದರ ಮಧ್ಯೆ ಈಗ ಇನ್ನೊಂದು ವಿಡಿಯೋ ಬಂದಿದೆ.

    ನಮ್ಮ ಮನೆಯಲ್ಲಿ ಎಲ್ಲ ಮಾಂಸವನ್ನೂ ತಿನ್ನುತ್ತೇವೆ. ನಾವು ಮಾಂಸಾಹಾರಿಗಳು. ಅದರಲ್ಲೂ ದನದ ಮಾಂಸ ನನಗೆ ತುಂಬಾ ಇಷ್ಟ ಎನ್ನುವ ರಣಬೀರ್ ಕಪೂರ್ ಅವರ ವಿಡಿಯೋ ಈಗ ವೈರಲ್ ಆಗಿದೆ. ನಾನು ಸಿಕ್ಕಾಪಟ್ಟೆ ಗೋಮಾಂಸ ತಿನ್ನುತ್ತೇನೆ. ಅದು ನನಗಿಷ್ಟ ಎಂದಿರೋ ರಣಬೀರ್ ಕಪೂರ್ ಅವರ ವಿಡಿಯೋ ಈಗ ಇನ್ನಷ್ಟು ಹಿಂದೂಗಳನ್ನು ಕೆರಳಿಸಿದೆ. ಬಾಯ್ಕಾಟ್ ಬ್ರಹ್ಮಾಸ್ತ್ರ ಕ್ಯಾಂಪೇನ್ ಜೋರಾಗಿದೆ.

  • ಶೂ ಹಾಕ್ಕೊಂಡೇ ಘಂಟಾನಾದ : ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ

    ಶೂ ಹಾಕ್ಕೊಂಡೇ ಘಂಟಾನಾದ : ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ

    ರಣಬೀರ್ ಕಪೂರ್, ಅಲಿಯಾ ಭಟ್ ಪ್ರಧಾನ ಪಾತ್ರದಲ್ಲಿರೋ ಬ್ರಹ್ಮಾಸ್ತ್ರ ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ. ಇವರಷ್ಟೇ ಅಲ್ಲ, ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಕೂಡಾ ಚಿತ್ರದಲ್ಲಿದ್ದಾರೆ. ಬಾಹುಬಲಿ, ಕೆಜಿಎಫ್, ಪುಷ್ಪ ಮಾದರಿಯಲ್ಲಿ   ಈ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಮೊದಲ ಭಾಗ ರಿಲೀ ಆಗುವುದು ಸೆಪ್ಟೆಂಬರ್ 9ಕ್ಕೆ. ಆದರೆ ಚಿತ್ರದ ಮೇಲೀಗ ಹಿಂದೂಗಳ ಕೆಂಗಣ್ಣು ಬಿದ್ದಿದೆ.

    ಚಿತ್ರದ ಟ್ರೇಲರಿನಲ್ಲಿ ನಾಯಕನ ಪಾತ್ರ ಶೂ ಹಾಕಿಕೊಂಡೇ ದೇವಸ್ಥಾನ ಪ್ರವೇಶಿಸುವ ಹಾಗೂ ಶೂ ಹಾಕಿಕೊಂಡೇ ದೇವಸ್ಥಾನದ ಘಂಟೆ ಬಾರಿಸುವ ದೃಶ್ಯವಿದೆ. ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ನೃತ್ಯದಲ್ಲೂ ಹೀರೋ ಶೂ ಹಾಕಿರುತ್ತಾನೆ. ಇದನ್ನು ಉದ್ದೇಶಪೂರ್ವಕಾಗಿಯೇ ಮಾಡಲಾಗಿದೆ ಎನ್ನುವುದು ಆರೋಪ. ಇದರ ಜೊತೆಗೆ ಚಿತ್ರದಲ್ಲಿ ನಾಯಕಿಯಾಗಿರೋ ಆಲಿಯಾ ಭಟ್ ಅವರ ಹಿಂದಿನ ಹೇಳಿಕೆಗಳು ಕೂಡಾ ಈ ಬಾಯ್ಕಾಟ್ ಅಭಿಯಾನಕ್ಕೆ ಕಾರಣವಾಗಿದೆ.

    ಹಾಗೆ ನೋಡಿದರೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಶಿವ, ಆಂಜನೇಯ, ಬ್ರಹ್ಮಾಸ್ತ್ರ, ವೇದ ಮಂತ್ರಗಳ ಹಿನ್ನೆಲೆಯ ಕಥೆ ಇದ್ದಂತಿದೆ. ಆದರೆ ಅಂಥಾದ್ದೊಂದು ಸಬ್ಜೆಕ್ಟ್ ತೆಗೆದುಕೊಂಡು ಸಿನಿಮಾ ಮಾಡಿದವರಿಗೆ ಯಾವ ದೇವಸ್ಥಾನದಲ್ಲೂ ಚಪ್ಪಲಿ ಅಥವಾ ಶೂ ಹಾಕಿಕೊಂಡು ಭಕ್ತರು ಬರಲ್ಲ ಎನ್ನುವ ಕಾಮನ್ ಸೆನ್ಸ್ ಇರಲಿಲ್ಲವಾ? ಎನ್ನುವುದು ಬಾಯ್ಕಾಟ್ ಬೆಂಬಲಿಗರ ಪ್ರಶ್ನೆ.

    ಒಟ್ಟಿನಲ್ಲಿ ಬಾಲಿವುಡ್‍ಗೆ ಗ್ರಹಚಾರ ಕೆಟ್ಟಿದೆ. ಒಂದಲ್ಲ ಒಂದು ಕಾರಣಕ್ಕೆ ಹಿಂದಿ ಚಿತ್ರಗಳು ಮಕಾಡೆ ಬೀಳುತ್ತಿವೆ. ಆದರೆ ಈ ಬಾಯ್ಕಾಟ್‍ಗಿಂತ ಹೆಚ್ಚಾಗಿ ಹಿಂದಿಯವರ ಕಥೆ ಹಾಗೂ ನಿರೂಪಣೆಯಲ್ಲಿ ಯಾವುದೇ ಹೊಸತನವಿಲ್ಲ ಎಂಬುದಂತೂ ಸತ್ಯ.