` movie theaters, - chitraloka.com | Kannada Movie News, Reviews | Image

movie theaters,

  • 100 percent Occupancy In Theaters: KFCC To Meet Yediyurappa Soon

    100 percent Occupancy In Theaters: KFCC To Meet Yediyurappa Soon

    The Karnataka Film Chamber of Commerce present Jairaj and the Executive Committee members will be soon meeting Chief Minister B S Yediyurappa to request for giving permission to allow 100 percent occupancy in theaters.

    On Monday, the Tamil Nadu Government granted permission to increase the seating capacity in single screens and multiplexes from the existing 50 percent to 100 percent with immediate effect. The Government in its notification has said that as the Covid 19 cases are declining day by day, the seating capacity of the theaters is being increased from 50 to 100 percent. 

    With the Tamil Nadu Government permission for 100 percent occupancy in theaters, many other film industries are requesting their respective Governments to do the same. The Karnataka Film Chamber of Commerce is also planning to meet the Chief Minister and request him to grant permission at the earliest.

  • 100% ಥಿಯೇಟರ್ : ಇಲ್ಲಿಯೂ ಶುರುವಾಗಿದೆ ಮೋದಿ ವಾರ್

    100% ಥಿಯೇಟರ್ : ಇಲ್ಲಿಯೂ ಶುರುವಾಗಿದೆ ಮೋದಿ ವಾರ್

    ಥಿಯೇಟರುಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬೇಕು ಎನ್ನುವುದು ನಿರ್ಮಾಪಕರು ಮತ್ತು ಪ್ರದರ್ಶಕರ ಬೇಡಿಕೆ. ಕೋವಿಡ್ 19ನಿಂದಾಗಿ ಅತೀ ಹೆಚ್ಚು ಹೊಡೆತ ತಿಂದಿರುವ.. ಈಗಲೂ ಕೋವಿಡ್ ಹೊಡೆತದ ಅತಿ ದೊಡ್ಡ ನಷ್ಟ ಅನುಭವಿಸುತ್ತಿರುವ ಚಿತ್ರರಂಗಕ್ಕೆ ಇನ್ನೂ 100% ಥಿಯೇಟರ್ ಬಾಗಿಲು ಓಪನ್ ಆಗಿಲ್ಲ. ಇದರ ಮಧ್ಯೆ ಮೋದಿ ವಾರ್ ಶುರುವಾಗಿದೆ

    ಹೌದು, ತಮಿಳುನಾಡು ಸರ್ಕಾರ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ತಮಿಳುನಾಡಿನಲ್ಲಿರುವುದು ಮೋದಿ ಮತ್ತು ಬಿಜೆಪಿ ಜೊತೆ ಒಂದು ಹಂತದವರೆಗೆ ಸೌಹಾರ್ದ ಸಂಬಂಧ ಹೊಂದಿರುವ ಅಣ್ಣಾಡಿಎಂಕೆ ಗವರ್ನಮೆಂಟು. ಹೀಗಾಗಿಯೇ ಏನೋ.. ಥಿಯೇಟರ್ 100% ಓಪನ್ ಆದೇಶ ವಾಪಸ್ ಪಡೆದ ಸರ್ಕಾರ, ಮತ್ತೆ 50% ಆದೇಶವನ್ನೇ ಜಾರಿ ಮಾಡಿತ್ತು.

    ಆದರೆ.. ಅಲ್ಲಿ.. ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವುದೇ ಬೇರೆ. ಮೋದಿ ಆದೇಶ ಎಂಬ ಕಾರಣಕ್ಕಾಗಿಯೇ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ, 100% ಪ್ರೇಕ್ಷಕರಿಗೆ ಅವಕಾಶ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಸೂಚಿಸಿದರೂ ನಾನು ಅದನ್ನು ಫಾಲೋ ಮಾಡಲ್ಲ ಎಂದಿದ್ದಾರೆ.

    ನಮ್ಮಲ್ಲೂ ಮಮತಾ ಬ್ಯಾನರ್ಜಿಯಂತಹವರೇ ಸಿಎಂ ಆಗಲಿ ಎಂದು ಥಿಯೇಟರ್ ಮಾಲೀಕರು ಹಾಗೂ ನಿರ್ಮಾಪಕರು ಬಯಸುತ್ತಿದ್ದಾರೆ ಎನ್ನುವುದು ಕಾಮಿಡಿ ಅಲ್ಲ.

  • 100% ಪ್ರೇಕ್ಷಕರಿಗೆ ಅವಕಾಶ : ಸಿಎಂ ಹೇಳಿದ್ದೇನು?

    100% ಪ್ರೇಕ್ಷಕರಿಗೆ ಅವಕಾಶ : ಶಿವಣ್ಣ ಮನವಿಗೆ ಸಿಎಂ ಹೇಳಿದ್ದೇನು?

    ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶವಿದೆ. ಆದರೆ, 50% ಪ್ರೇಕ್ಷಕರಿಗಷ್ಟೇ ಅವಕಾಶ ಇರುವ ಕಾರಣ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಈ ವಾರ ರಿಲೀಸ್ ಆದ ಕಲಿವೀರ ಚಿತ್ರಕ್ಕೆ ಪರವಾಗಿಲ್ಲ ಎನ್ನುವ ರೆಸ್ಪಾನ್ಸ್ ಇದ್ದರೂ, ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಕಡೆ ತಲೆ ಹಾಕುತ್ತಿಲ್ಲ. ಅದು ಆಗಬೇಕೆಂದರೆ ದೊಡ್ಡ ಚಿತ್ರಗಳು ರಿಲೀಸ್ ಆಗಬೇಕು.

    50% ಭರ್ತಿಗಷ್ಟೇ ಅವಕಾಶ ಇರೋದ್ರಿಂದ ಹೊಸ ಸಿನಿಮಾ ರಿಲೀಸ್ ಆಗುತ್ತಿಲ್ಲ. ದಯವಿಟ್ಟು 100% ಅವಕಾಶ ಕೊಡಿ ಎಂದು ಶಿವಣ್ಣ ನೇತೃತ್ವದ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚೇಂಜಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್‍ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ, ಕೆ.ಮಂಜು, ಶಾಸಕಿ ತಾರಾ ಅನುರಾಧಾ ಬೊಮ್ಮಾಯಿ ಅವರ ಬಳಿಗೆ ತೆರಳಿದ ನಿಯೋಗದಲ್ಲಿದ್ದರು.

    ತಜ್ಞರ ಸಮಿತಿ ವರದಿ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ.  ತಜ್ಞರ ಸಮಿತಿ ಶಿಫಾರಸಿನ ಆಧಾರದಲ್ಲೇ ಕ್ರಮ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಈ ಮಾತು ಕೇಳಿದರೆ, ಬಹುತೇಕ 2021ರಲ್ಲಿ ಸಿನಿಮಾ ಮಂದಿರಗಳಿಗೆ 100% ಅವಕಾಶ ಸಿಗುವ ಸಾಧ್ಯತೆ ಇಲ್ಲ.

  • 100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

    100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

    ಯಾವಾಗ 100% ಪ್ರೇಕ್ಷಕರ ಭರ್ತಿಗೆ ಅವಕಾಶ ಸಿಗುವುದೋ ಕಾಯುತ್ತಿರುವ ಚಿತ್ರರಂಗ ಮತ್ತು ಚಿತ್ರಮಂದಿರ ಮಾಲೀಕರ ಮನವಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಎಲ್ಲವನ್ನೂ ಓಪನ್ ಮಾಡಿರುವ ಸರ್ಕಾರ, ಚಿತ್ರಮಂದಿರಗಳನ್ನು ಮಾತ್ರ 50:50ಯಲ್ಲೇ ಇಟ್ಟಿದೆ. ಹಲವು ಬಾರಿ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸೋಮವಾರ ಮತ್ತೊಮ್ಮೆ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100% ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

    ಫಿಲಮ್ ಚೇಂಬರ್ ಅಧ್ಯಕ್ಷ ಜೈರಾಜ್, ನಿರ್ಮಾಪಕ ಸಾ.ರಾ.ಗೋವಿಂದು, ಕಾರ್ಯದರ್ಶಿ ಎನ್.ಎಂ.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿಯ ನಿಯೋಗ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿತು. ಬಿಡುಗಡೆಗೆ ಕಾದಿರುವ ಚಿತ್ರಗಳು, ಸಿನಿಮಾ ರಿಲೀಸ್ ಲೇಟ್ ಆದರೆ, ಸಂಪೂರ್ಣ ಅವಕಾಶ ಸಿಗದೇ ಇದ್ದರೆ ಎದುರಾಗುವ ಸಮಸ್ಯೆಗಳು, ಆಗುವ ನಷ್ಟ, ಕೊವಿಡ್ ಮಾರ್ಗಸೂಚಿ ಪಾಲನೆಯ ಭರವಸೆ.. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

    ನಿಯೋಗದಲ್ಲಿ ಹೋಗಿ ಬಂದವರ ಪ್ರಕಾರ ಚಿತ್ರಮಂದಿರಗಳಿಗೆ 100% ಅವಕಾಶ ಈ ವಾರ ಅರ್ಥಾತ್ ಈ ಶುಕ್ರವಾರದಿಂದ ಸಿಗಬಹುದು. ಅಕಸ್ಮಾತ್.. ಈ ವಾರ ಸಿಗದೇ ಹೋದರೆ ಫೆಬ್ರವರಿ 2ನೇ ವಾರದಿಂದ 1995 ಪ್ರೇಕ್ಷಕರ ಭರ್ತಿಘೆ ಅವಕಾಶ ಸಿಗುವುದು ಶತಃಸಿದ್ಧ. ಚಿತ್ರಗಳ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು.

  • 50% Occupancy In Theaters From Today

    50% Occupancy In Theaters From Today

    Due to a rapid increase in the Corona cases, the State Government has issued an order to only 50 percent seating capacity in theaters across 8 districts till the 20th of April.

    The second wave of Corona in Karnataka is rising day by day and there is a steep increase in the number of Covid-19 positive cases. Bangalore on Friday recorded more than three thousand cases and to curb it, the State Government has issued some major guidelines to be followed in the coming days.

    The State Government has restricted the use of Gym and Swimming pools and has issued an order that only 50 percent of the seating capacity must be allowed in all the theaters in the eight districts. This guideline is till the 20th of April and the Government has decided to review it based on the current situation.

  • 50% ನಿರ್ಬಂಧ : ಸರ್ಕಾರದ ತುಘಲಕ್ ದರ್ಬಾರ್

    50% ನಿರ್ಬಂಧ : ಸರ್ಕಾರದ ತುಘಲಕ್ ದರ್ಬಾರ್

    ಇದನ್ನು ತುಘಲಕ್ ದರ್ಬಾರ್ ಎನ್ನದೇ ವಿಧಿಯಿಲ್ಲ. ಕೊರೊನಾ ಏರಿಕೆ ಕಾಣುತ್ತಿರುವುದು ಈಗಲ್ಲ. ಆದರೆ, ರಾಜ್ಯ ಸರ್ಕಾರ ಏಪ್ರಿಲ್ 1ರ ರಾತ್ರಿಯವರೆಗೂ ಹೇಳಿದ್ದೇ ಬೇರೆ. ಏಪ್ರಿಲ್ 2ರ ಬೆಳಗ್ಗೆಯೂ ಹೇಳಿದ್ದು ಬೇರೆ. ಸಂಜೆಯ ಹೊತ್ತಿಗೆ ಮಾಡಿದ್ದೇ ಬೇರೆ. ಇದ್ದಕ್ಕಿದ್ದಂತೆ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಘೋಷಿಸಿಬಿಟ್ಟಿತು ಸರ್ಕಾರ. ಇದನ್ನು ಮೊದಲೇ ಹೇಳಿದ್ದರೆ ಯುವರತ್ನ ಚಿತ್ರ ರಿಲೀಸ್‍ನ್ನೇ ಮುಂದಕ್ಕೆ ಹಾಕಬಹುದಿತ್ತು. ಚಿತ್ರದ ನಿರ್ಮಾಪಕರು, ವಿತರಕರು, ಥಿಯೇಟರಿನವರು.. ಹೀಗೆ ಎಲ್ಲರೂ ಬಚಾವ್ ಆಗುತ್ತಿದ್ದರು. ಆದರೆ ಕಟ್ಟಕಡೆಯ ಕ್ಷಣದವರೆಗೂ ನೋ ಪ್ರಾಬ್ಲಂ.. ಬನ್ನಿ ಬನ್ನಿ.. ಎಂದು ಹೇಳಿ ಸಡನ್ ರೂಲ್ಸ್ ಚೇಂಜ್ ಮಾಡಿದ ಸರ್ಕಾರದ ಕ್ರಮ ಬಲಿಪೀಠಕ್ಕೆ ಹಾರ, ತುರಾಯಿ ಕರೆದುಕೊಂಡು ಬಂದು ಬಲಿ ಕೊಡುವವರಂತೆಯೇ ಇದೆ. ತುಘಲಕ್ ದರ್ಬಾರ್ ಅನ್ನೋಕೆ ಇದೊಂದೇ ಕಾರಣ ಅಲ್ಲ.

    ತುಘಲಕ್ ದರ್ಬಾರ್ : 01

    ಥಿಯೇಟರಿನಲ್ಲಿ ಸರ್ಕಾರ 50% ನಿರ್ಬಂಧ ಹೇರಿದೆ. ಅರ್ಥಾತ್, ಥಿಯೇಟರಿಗೆ ಬಂದವರು ಪ್ರತಿ ಸೀಟಿನ ಮಧ್ಯೆ ಗ್ಯಾಪ್ ಇಟ್ಟುಕೊಂಡು ಸಿನಿಮಾ ನೋಡಬೇಕು. ಅಂದರೆ, ಸಿನಿಮಾ ನೋಡೋಕೆ ಬರುವವರು ಒಟ್ಟಿಗೇ ಆಟೋ, ಬೈಕ್ ಅಥವಾ ಕಾರ್‍ನಲ್ಲಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಬರಬಹುದು. ಥಿಯೇಟರಿನಲ್ಲಿ ಅಕ್ಕಪಕ್ಕ ಕೂತರೆ ಮಾತ್ರ ಕೊರೊನಾ ಬಂದುಬಿಡುತ್ತಾ..?

    ತುಘಲಕ್ ದರ್ಬಾರ್ : 02

    ಇನ್ನು ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಂತಹ ಯಾವುದೇ ನಿರ್ಬಂಧ ಇಲ್ಲ. ಎಲೆಕ್ಷನ್ ನಡೆಯುವ ಜಾಗದಲ್ಲಿ ಕೊರೊನಾ ಇರೋದೇ ಇಲ್ವಾ..? ರಾಜಕೀಯ ಪಕ್ಷಗಳಿಗೆ ಲಾಭ ಆಗುತ್ತೆ ಅನ್ನೋವಾಗ ಕೊರೊನಾ ಅಡ್ಡಿ ಆಗುವುದಿಲ್ಲವಾ..?

    ತುಘಲಕ್ ದರ್ಬಾರ್ : 03

    ಹೀಗೆ 50% ನಿರ್ಬಂಧ ಹೇರಿರುವ ಸರ್ಕಾರ, ಇದುವರೆಗೆ ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ವಿಭಾಗಕ್ಕಾದರೂ ಕನಿಷ್ಠ ಮಟ್ಟದ ನೆರವನ್ನಾದರೂ ನೀಡಿದೆಯಾ..? ಬದಲಿಗೆ ಇನ್ನಷ್ಟು ಮತ್ತಷ್ಟು ಹೊರೆಗಳನ್ನೇ ಹೇರಿದೆ. ಇದೆಲ್ಲದರ ಮಧ್ಯೆ ಕೊರೊನಾ ಜಾಗೃತಿ ನಿಯಮಗಳನ್ನು ಈಗಲೂ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಥಿಯೇಟರಿನಲ್ಲಿ. ಇದೊಂದು ರೀತಿ ಕಷ್ಟಪಟ್ಟು ದುಡಿದು ಊಟಕ್ಕೆ ಕುಳಿತವರ ಅನ್ನದ ತಟ್ಟೆಯನ್ನೇ ಕಿತ್ತುಕೊಂಡಂತಲ್ಲವೇ..? ಈಗಾಗಲೇ ಬಿಕರಿಯಾಗಿರುವ ಟಿಕೆಟ್‍ಗಳನ್ನು ಏನು ಮಾಡಬೇಕು..?

    ತುಘಲಕ್ ದರ್ಬಾರ್ : 04

    ಬೆಳಗ್ಗೆ ಒಂದು ಮಾತು.. ಮಧ್ಯಾಹ್ನ ಇನ್ನೊಂದು ಹೇಳಿಕೆ.. ಸಂಜೆ ಅವುಗಳಿಗೆ ಸಂಬಂಧವೇ ಇಲ್ಲದಂತೆ ಹೊಸ ರೂಲ್ಸು.. ಇದು ಸರ್ಕಾರ ನಡೆಸುವವರು ಇರೋ ರೀತಿನಾ..? ಕಾಮನ್‍ಸೆನ್ಸ್ ಕೊರತೆ ಕಾಡುತ್ತಿದೆ ಎನಿಸುವುದಿಲ್ಲವಾ..?

    ತುಘಲಕ್ ದರ್ಬಾರ್ : 05

    ರಾಜಕೀಯ ರ್ಯಾಲಿಗಳಲ್ಲಿ ಈಗಲೂ ಜನ ಸಾವಿರಾರು ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಅಲ್ಲಿ ಇದೇ ಸಚಿವರು, ಶಾಸಕರು ಹೋಗ್ತಾರೆ. ನಯಾಪೈಸೆಯ ಕೊರೊನಾ ರೂಲ್ಸ್‍ನ್ನೂ ಅಲ್ಲಿ ಫಾಲೋ ಮಾಡಲ್ಲ. ಅಲ್ಲಿಗೆ ಬಾರದ ಕೊರೊನಾ, ಥಿಯೇಟರಿಗೆ ಮಾತ್ರ ಬರುತ್ತೆ ಎಂದರೆ ಇದರ ಹಿಂದಿರೋದು ತುಘಲಕ್ ವಂಶಸ್ಥರು ಎನ್ನಿಸುವುದಿಲ್ಲವೇ..?

    ತುಘಲಕ್ ದರ್ಬಾರ್ : 06

    ಜನ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕೊರೊನಾ ಓಡಿಸಬೇಕು ಎನ್ನುತ್ತಿದೆ ಸರ್ಕಾರ. ಆದರೆ ಸಿನಿಮಾಗಳನ್ನು ಬಿಟ್ಟು ನೋಡುವುದಾದರೆ ಜಿಮ್, ಸ್ವಿಮ್ಮಿಂಗ್‍ಪೂಲ್‍ಗಳನ್ನೂ ಬಾಗಿಲು ಮುಚ್ಚಿಸಿದೆ. ಜಿಮ್‍ನಲ್ಲಿ ಸಾಮಾಜಿಕ ಅಂತರ ಮತ್ತು ಕೊರೊನಾ ನಿಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬೇರೆಲ್ಲೂ ಹರಡದ ಕೊರೊನಾ, ಜಿಮ್‍ಗಳಲ್ಲಿ ಹರಡುತ್ತೆ ಎಂದು ಹೇಳಿದ ತಜ್ಞರು ಯಾರು..?

    ತುಘಲಕ್ ದರ್ಬಾರ್ : 07

    ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮಾತ್ರ ಈ ರೂಲ್ಸ್ ಜಾರಿಯಾಗಿದೆ. ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಲ್ಲ. ಇನ್ನು ಬೆಳಗಾವಿ, ಈಗ ಕೊರೊನಾದ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆ. ತುಘಲಕ್ ದರ್ಬಾರ್ ಅನ್ನೋದು ಇದಕ್ಕೇ ಅಲ್ಲವಾ..?

    ತುಘಲಕ್ ದರ್ಬಾರ್ : 08

    ಸರ್ಕಾರ 50% ಪ್ರೇಕ್ಷಕರಿಗೆ ಏನು ಸಮಸ್ಯೆ ಎನ್ನುವವರಿಗೆ ಒಂದು ಕ್ಲಾರಿಫಿಕೇಷನ್. ಥಿಯೇಟರ್ ಹೌಸ್‍ಫುಲ್ ಆಗಲೀ.. 50% ಆಗಲೀ.. ಹತ್ತು ಜನರಷ್ಟೇ ಬರಲಿ.. ಥಿಯೇಟರ್ ನಿರ್ವಹಣಾ ವೆಚ್ಚ ನಯಾಪೈಸೆಯೂ ಕಡಿಮೆಯಾಗುವುದಿಲ್ಲ. ಆದರೆ ಕಟ್ಟಬೇಕಾದ ಟ್ಯಾಕ್ಸು, ಕರೆಂಟ್ ಬಿಲ್ ಸೇರಿದಂತೆ ಮತ್ತಿತರ ಖರ್ಚುಗಳಲ್ಲಿ ಸರ್ಕಾರ ಒಂದು ಪೈಸೆಯನ್ನೂ ಬಿಡುವುದಿಲ್ಲ.

    ತುಘಲಕ್ ದರ್ಬಾರ್ : 09

    ಸರ್ಕಾರ ಥಿಯೇಟರುಗಳನ್ನು ತೆರೆಯುವ ಮೊದಲೇ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಿತ್ತು. ಆದರೆ, ಆ ಮಾಲ್‍ಗಳಲ್ಲಿ ಬಿಸಿನೆಸ್ ಶುರುವಾಗಿದ್ದು ಥಿಯೇಟರ್ಸ್ ಓಪನ್ ಆದ ನಂತರವೇ. ಅದರ ಅರ್ಥ ಇಷ್ಟೆ, ಥಿಯೇಟರುಗಳಿಗೆ ಬ್ರೇಕ್ ಹಾಕೋಕೆ ಹೋದರೆ.. ಬಿಸಿನೆಸ್ ಚೈನ್‍ನಲ್ಲಿರೋ ಇತರೆ ಬಿಸಿನೆಸ್‍ಗಳೂ ಹೊಡೆತ ತಿನ್ನುತ್ತವೆ. ಏಕೆಂದರೆ ಪ್ರತಿಯೊಂದು ವ್ಯವಹಾರವೂ ಇನ್ನೊಂದು ಉದ್ಯಮ, ವ್ಯವಹಾರದೊಂದಿಗೆ ಜೊತೆಗೂಡಿಯೇ ಸಾಗಬೇಕು. ಇದು ಕಾಮನ್ ಎಕನಾಮಿಕ್ಸು. ಸರ್ಕಾರ ನಡೆಸುವವರಿಗೆ ಇದು ಅರ್ಥವಾಗುತ್ತಿಲ್ಲ ಎನ್ನುವುದೇ ದುರ್ದೈವ.

    ಪ್ರಾಬ್ಲಂ ಏನು ಎಂದರೆ ನಮ್ಮ ಚಿತ್ರರಂಗದವರೂ ಅಷ್ಟೆ. ಗೊಳೋ ಎನ್ನುತ್ತಿದ್ದಾರೆಯೇ ಹೊರತು, ತಿರುಗಿಸಿ ಕೇಳುವ ಧೈರ್ಯವನ್ನು ತೋರುತ್ತಿಲ್ಲ. ಗಂಟಲು ಏರಿಸಿದರೆ ಪ್ರಾಬ್ಲಂ ಆಗಬಹುದು ಎಂಬ ಆತಂಕ ಇದ್ದಹಾಗಿದೆ. ಅದರೆ ಪ್ರೀತಿಯ ಮನವಿಗೆ ಸಿಕ್ಕಿರುವ ಪುರಸ್ಕಾರವಾದರೂ ಅದೇ ಅಲ್ಲವೇ..? ಒಂದಂತೂ ಸತ್ಯ. ಚೇತರಿಸಿಕೊಳ್ಳುತ್ತಿದ್ದ ಉದ್ಯಮಕ್ಕೆ ಅರ್ಧ ಬೀಗ ಜಡಿದ ಸರ್ಕಾರ, ಈಗಾಗಲೇ ನರಳುತ್ತಿದ್ದ ಒಂದು ದೊಡ್ಡ ಉದ್ಯಮ ಸಮೂಹವನ್ನು ಇನ್ನಷ್ಟು ಮತ್ತಷ್ಟು ಪೆಟ್ಟು ಕೊಟ್ಟು ತೆಪ್ಪಗಿರಿಸುವ ಹಠ ತೊಟ್ಟಿದೆ. ಎದ್ದು ಕಾಣುತ್ತಿರುವುದು ಕಾಮನ್‍ಸೆನ್ಸ್ ಕೊರತೆ.

    ಕೆ.ಎಂ.ವೀರೇಶ್

    ಸಂಪಾದಕರು

    ಚಿತ್ರಲೋಕ

  • 7 ತಿಂಗಳ ನಂತರ ಟಾಕೀಸ್ ರೀ-ಓಪನ್

    Theaters To Re Open After 7 Months

    7 ತಿಂಗಳ ನಂತರ ಸಿನಿಮಾ ಮಂದಿರಗಳು ಬಾಗಿಲು ತೆರೆಯುತ್ತಿವೆ. ಮಾರ್ಚ್ 2ನೇ ವಾರ ಬಾಗಿಲು ಮುಚ್ಚಿದ್ದ ಚಿತ್ರಮಂದಿಗಳು 5ನೇ ಅನ್ ಲಾಕ್‍ನಲ್ಲಿ ಓಪನ್ ಆಗುತ್ತಿವೆ. ಯುಎಫ್‍ಓ & ಕ್ಯೂಬ್ ಸಂಸ್ಥೆಗಳು ಸಿನಿಮಾ ಪ್ರಸಾರ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದ್ದು, ಡಿಸೆಂಬರ್‍ವರೆಗೆ ಹೊಸ ಚಿತ್ರಗಳಿಗೆ ಈ ವಿನಾಯಿತಿ ಸೌಲಭ್ಯ ಸಿಗಲಿದೆ. ಇನ್ನಷ್ಟು ಕಡಿಮೆ ಮಾಡಿ ಎನ್ನುವುದು ನಿರ್ಮಾಪಕರ ವಲಯದ ಬೇಡಿಕೆ.

    ಸದ್ಯಕ್ಕೆ ಹೊಸ ಸಿನಿಮಾಗಳು ಥಿಯೇಟರಿಗೆ ಬರುತ್ತಿಲ್ಲ. ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ, ಲವ್ ಮಾಕ್‍ಟೇಲ್, ದಿಯಾ, ಕಾಣದಂತೆ ಮಾಯವಾದನು, ಶಿವಾಜಿ ಸುರತ್ಕಲ್, 5 ಅಡಿ 7 ಅಂಗುಲ.. ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಲ್ಟಿಪ್ಲೆಕ್ಸ್‍ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದರೆ, ಸಿಂಗಲ್ ಸ್ಕ್ರೀನ್ ಥಿಯೇಟರುಗಳು ಸಂಪೂರ್ಣವಾಗಿ ಬಾಗಿಲು ತೆರೆಯುತ್ತಿಲ್ಲ.

    ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮನೆಯಲ್ಲಿದ್ದ ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳ ಟಿಕೆಟ್ ದರವನ್ನೂ ಇಳಿಸಲಾಗಿದೆ. ಸಿಂಗಲ್ ಸ್ಕ್ರೀನ್ ಟಾಕೀಸುಗಳಲ್ಲಿ ಟಿಕೆಟ್ ದರ 40 ರೂ. ಹಾಗೂ 50 ರೂ. ಇದ್ದರೆ, ಮಲ್ಟಿಪ್ಲೆಕ್ಸುಗಳಲ್ಲಿ 99 ರೂ.ಗಳಿಂದ 149 ರೂ.ಗಳವೆರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ.

  • BREAKING NEWS ಚಿತ್ರರಂಗಕ್ಕೆ ಸಡನ್ ಶಾಕ್ : ಯುವರತ್ನಕ್ಕೆ ಹೊಡೆತ

    BREAKING NEWS ಚಿತ್ರರಂಗಕ್ಕೆ ಸಡನ್ ಶಾಕ್ : ಯುವರತ್ನಕ್ಕೆ ಹೊಡೆತ

    ಲಾಕ್ ಡೌನ್ ಮಾಡಲ್ಲ, ಸೆಮಿ ಲಾಕ್ ಡೌನ್ ಕೂಡಾ ಮಾಡಲ್ಲ. ಹೊಸ ನಿರ್ಬಂಧ ಹೇರೋದಿಲ್ಲ ಎನ್ನುತ್ತಿದ್ದ ರಾಜ್ಯ ಸರ್ಕಾರ ಚಿತ್ರರಂಗದ ಮೇಲೆ ಬರೆಯನ್ನೇ ಎಳೆದಿದೆ. ಏಪ್ರಿಲ್ 20ರವರೆಗೆ ಥಿಯೇಟರುಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ.

    ಏಪ್ರಿಲ್ 1ರಂದು ರಿಲೀಸ್ ಆಗಿದ್ದ ಯುವರತ್ನ ಚಿತ್ರಕ್ಕೆ ಇದು ದೊಡ್ಡ ಹೊಡೆತ. ರಿಲೀಸ್ ಆದ ಮರುದಿನವೇ ಬಂದಿರೋ ಹೊಸ ರೂಲ್ಸ್ ಪ್ರಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಿದೆ ರಾಜ್ಯ ಸರ್ಕಾರ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ರೂಲ್ಸ್ ಮಾಡಿರುವ ಸರ್ಕಾರ, ಚಿತ್ರರಂಗಕ್ಕೆ ಬರೆಯನ್ನೇ ಎಳೆದುಬಿಟ್ಟಿದೆ.

  • Exhibitors Most Hit Due To Corono Lockdown - Exclusive

    veeresh theater image

    With nationwide lockdown until April 14 to fight against the spread of Coronavirus, all film related activities across the country have come to a complete halt. While all sections of the industry is badly hit including the film workers, it is the exhibitors who are facing the maximum heat with huge losses incurred by them.

    According to the Karnataka Film Exhibitors Association president KV Chandrashekar there are nearly 600 single screen theatres in Karnataka in which around 13,000 employees work on daily basis in shifts with an monthly expenditure costing upto Rs. 15.50 crores per month.

    India Under Total Lockdown for 21 Days!

    Speaking to Chitraloka, Veeresh theatre owner Mr. K V Chandrashekar said, "For example, in our Veeresh theater, 20 people each work in two shifts which makes it to 40 in a day. In other theaters like Kapali, there were about 75 employees at one time. Altogether there are nearly 600 theaters in the State."

    He goes on to add that whether the theater is operational or not, one has to shell out Rs. 15.50 crores per month for the employees alone as salaries and to their other facilities. 

    "In single theaters, the minimum salary of an employee is Rs 10,000, which cannot be paid in cash and it also includes payment such as PF and ESI, all of which amounts to Rs. 12,000 to Rs. 13,000/- per month. By taking into account the above, the exhibitors in the State have to pay at least Rs. 15.50 crs per month," he adds.

    That's not all, exhibitors also have to pay for electricity, water, maintenance and other miscellaneous charges. "The minimum electricity bill would be Rs. 10,000, and water charges will also be Rs 10,000 per month if theatres are facilitated with sanitary connection." We have not taken the count of Parking, Canteen persons to the account.

    On an average, the overall expenditure for exhibitors in the State would come around Rs 27.50 crores per month. This figure excludes multiplexes. Anybody can imagine how much theater persons have to suffer in the country when there are 11,500 single screen theater in India. here are he signs off.

    Also Read

    Sa Ra Govindu Hands Over Nikhil Kumarswamy's Cheque to Okkuta

    Ex-CM HDK To The Rescue Of Kannada Film Workers - Breaking News

    Sumalatha Ambareesh Donates 2L To PM Relief Fund

    ಹಸಿದವರಿಗೆ ಅನ್ನ ನೀಡಿದ ದರ್ಶನ್ ಫ್ಯಾನ್ಸ್

    Psychiatrist Dr Swaminath G Writes On Psychological impact and tips to cope with social distancing, quarantine and isolation - Part 3

    Psychological impact and tips to cope with social distancing, quarantine and isolation - Part 2

    Psychiatrist Dr Swaminath G Writes On Psychological impact and tips to cope with social distancing, quarantine and isolation - Part 1

    India Under Total Lockdown for 21 Days!

  • Four Films Next Friday - None Will Get Main Centres

    kannada movie images

    Four Kannada films Parapancha, Last Bus, Tarlenanmaklu and Tili Neeru are releasing next Friday. And there is already a shortage of theatres as films released during the last few weeks like Rathavara, Masterpiece, Killing Veerappan and Kathe Chitrakathe Nirdeshana are doing well. 

    Will a lot more films in the pipeline new releases are struggling for theatres. The existing 4 films will continue in all the main centres and therefore the new 4 films next week will not get main theatres either in Bengaluru or other district centres distributors say. All these films will have to make do with only multiplex screens.

     

  • Nartaki-Sapna Theatres to close From April 01st

    nartaki, sapna theater image

    Majestic area's prestigious theaters Nartaki and Sapna will be closing down its operations from the 01st of April. 31st of March will be the last working day for both theaters and the owners have decided to settle the workers legally.

    Nartaki theater started in the 70s and for the next four decades was a hub of Kannada films. The theater housed many successful films and many films from not only Kannada, but also Hindi ran to successful shows in the theater in the 70s and 80s. Now the 45 years lease is coming to an end and the owners have decided to stop screening in Nartaki as well as Sapna theater which is in the same complex.

    'Raate' will be the last film which is being screened in the Nartaki theater and 31st March will be the last working day for both the theaters. Both the theaters are expected to shut down from the 01st of April.

  • Tamil Nadu Government Allows 100 % Occupancy In Theaters

    Tamil Nadu Government Allows 100 % Occupancy In Theaters

    The Tamil Nadu Government on Monday granted permission to increase the seating capacity in single screens and multiplexes from the existing 50 percent to 100 percent with immediate effect.

    The Central Government had granted permission to screen films in theaters from the 15th of October with 50 percent capacity following Covid-19 protocols. Though film screening across India started, many producers feared to release their films as the audience was very less. Recently, actor Vijay had requested Tamil Nadu Chief Minister Yedappadi Palaniswamy to allow 100 percent occupancy in theaters.

    The team of Vijay starrer 'Master' had also announced the release of the film during the Pongal season. Ahead of the release, the TN Government has granted permission  to increase the seating capacity to 100 percent. The permission was granted through a notification.

  • Theaters To Open With Conditions From June?

    theaters to open with conditions from june ?

    Even before the Central Government declared nationwide lockdown due to Coronavirus pandemic, the State Government had announced closure of malls and theatres a week before, which stands closed till date even in the third phase of the lockdown.

    While there are no specific signs on whether the government may allow the opening of theatres and multiplexes in the malls, Chitraloka has learnt from reliable sources that the State Government will give its green signal towards opening of theatres from the month of July. However, it is still not clear on the fate of multiplexes in malls.

    Speaking to Chitraloka, several exhibitors said that even if the State Government allows us to operate from today, it would still take several days before opening of the single screen theatres since several arrangements have to be made in accordance with the rules and regulations pertaining to safe distancing and health norms to be followed.

  • ಅಕ್ಟೋಬರ್ 1ರಿಂದ ಥಿಯೇಟರ್ 100% ಓಪನ್. ಆದರೆ..

    ಅಕ್ಟೋಬರ್ 1ರಿಂದ ಥಿಯೇಟರ್ 100% ಓಪನ್. ಆದರೆ..

    ಚಿತ್ರರಂಗದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಚಿತ್ರಮಂದಿರಗಳಲ್ಲ 100% ಪ್ರೇಕ್ಷಕರ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಅಲ್ಲಿಗೆ ಅಕ್ಟೋಬರ್ 1ರಿಂದ ಸ್ಟಾರ್ ಚಿತ್ರಗಳು ರಿಲೀಸ್ ಆಗಬಹುದು.ಆದರೆ.. ಎಲ್ಲವೂ ಸಲೀಸಾಗಿಲ್ಲ. ಏಕೆಂದರೆ ಹಲವಾರು ಷರತ್ತುಗಳಿವೆ. 

    100% ಅವಕಾಶ ಕೊಟ್ಟರೂ ನೈಟ್ ಕರ್ಫ್ಯೂ ಮುಂದುವರೆಸಿದೆ. ಆದರೆನೈಟ್ ಕರ್ಫ್ಯೂ ರಾತ್ರಿ 9 ಗಂಟೆಯ ಬದಲು ರಾತ್ರಿ 10 ಗಂಟೆಯಿಂದ ಇರಲಿದೆ. ವೀಕೆಂಡ್ ಕರ್ಫ್ಯೂ ಇರಲ್ಲಎನ್ನುವುದು ಚಿತ್ರರಂಗದ ಪಾಲಿಗೆ ಗುಡ್ ನ್ಯೂಸ್. 

    ಹಾಗಂತ ಆತಂಕಗಳೂ ತಪ್ಪಿಲ್ಲ. ಸದ್ಯಕ್ಕೆ ರಾಜ್ಯದೆಲ್ಲೆಡೆ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯೇ ಇದೆ. ಆದರೆ, ಅಕಸ್ಮಾತ್ ಪಾಸಿಟಿವ್ ರೇಟ್ ಶೇ.1ಕ್ಕಿಂತ ಹೆಚ್ಚಾದರೆ ತಕ್ಷಣ ಚಿತ್ರಮಂದಿರಗಳಿಗೆ ಶೇ.50ರಷ್ಟು ನಿರ್ಬಂಧ ಅನ್ವಯವಾಗಲಿದೆ. ಅಷ್ಟೇ ಅಲ್ಲ, ಪಾಸಿಟಿವಿಟಿ ದರವೇನಾದರೂ ಶೇ.2ರ ಹಂತ ತಲುಪಿದರೆ ಚತ್ರಮಂದಿರಗಳು ಕಂಪ್ಲೀಟ್ ಬಂದ್ ಆಗಲಿವೆ. 

    ಇನ್ನು ಥಿಯೇಟರಿಗೆ ಬರುವವರು ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಇದನ್ನು ಚಿತ್ರಮಂದಿರಗಳ ಮಾಲೀಕರು ಮತ್ತು ಸಿಸ್ಟಂ ಹೇಗೆ ನಿಭಾಯಿಸಲಿದೆ ಅನ್ನೋ ಕುತೂಹಲವಿದೆ. 

    ಸೆಕೆಂಡ್ ಶೋ, ಮಲ್ಟಿಪ್ಲೆಕ್ಸ್ಗಳಿಗೆ ಪ್ರಾಬ್ಲಂ : ಒಂದು ಕಡೆ ಅವಕಾಶ ಕೊಟ್ಟು, ಇನ್ನೊಂದು ಕಡೆ ಬ್ರೇಕ್ ಹಾಕಿತಾ ಸರ್ಕಾರ? ಎನ್ನುವ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಸದ್ಯಕ್ಕೇನೋ ರಾಜ್ಯದಲ್ಲಿ ಸೆಕೆಂಡ್ ಶೋ ಶುರುವಾಗುವುದು ರಾತ್ರಿ 7ರಿಂದ 7.30ರ ಮಧ್ಯೆ. ಕೆಲವೆಡೆ 8 ಗಂಟೆಗೆ ಶೋ ಶುರುವಾಗುತ್ತವೆ. ಈಗ ರಾತ್ರಿ 10ರಿಂದಲೇ ನೈಟ್ ಕರ್ಫ್ಯೂ ಎಂದರೆ ಶೋಗಳು 7 ಗಂಟೆಗೇ ಶುರುವಾಗಬೇಕು. ಕನಿಷ್ಠ 9.30ರೊಳಗೆ ಮುಗಿಯಬೇಕು. 

    ಇದರಿಂದ ಹೊಡೆತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಕಡಿಮೆ. ಆದರೆ, ಮಲ್ಟಿಪ್ಲೆಕ್ಸುಗಳಲ್ಲಿ ರಾತ್ರಿ 8, 8.30, 9, 10 ಗಂಟೆ, 11 ಗಂಟೆಗೂ ಶೋಗಳಿದ್ದವು. ಅವುಗಳಿಗೆಲ್ಲ ಈಗ ಕಂಪ್ಲೀಟ್ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಚಿತ್ರೋದ್ಯಮ ಸಿನಿಮಾ ಶೋಗಳನ್ನು 10ಗಂಟೆಯೊಳಗೆ ಮುಗಿಸುವ ಅನಿವಾರ್ಯತೆಯಲ್ಲಿ ಸಿಲುಕಿದೆ. 

    ಇದೆಲ್ಲದರ ಮಧ್ಯೆಯೂ ಇದು ಚಿತ್ರರಂಗ ಒಂದಿಷ್ಟು ರಿಲ್ಯಾಕ್ಸ್ ಆಗುವಂತೆ ಮಾಡಿರುವುದು ಸುಳ್ಳಲ್ಲ. ರಿಲೀಸ್ ಆಗೋಕೆ ರೆಡಿ ಇರುವ ಸಲಗ, ಭಜರಂಗಿ 2, ಕೋಟಿಗೊಬ್ಬ 3ಯಂತ ಸ್ಟಾರ್ ಸಿನಿಮಾಗಳು ಅಕ್ಟೋಬರ್ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

  • ಆ 4 ಜಿಲ್ಲೆ ಬಿಟ್ಟು ಎಲ್ಲ ಕಡೆ ಹೌಸ್`ಫುಲ್ : ಷರತ್ತುಗಳೇನು?

    ಆ 4 ಜಿಲ್ಲೆ ಬಿಟ್ಟು ಎಲ್ಲ ಕಡೆ ಹೌಸ್`ಫುಲ್ : ಷರತ್ತುಗಳೇನು?

    ಕೋವಿಡ್ 19 ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಚಿತ್ರೋದ್ಯಮಕ್ಕೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿರುವುದು ಸತ್ಯ. ಆದರೆ ಷರತ್ತುಗಳಿವೆ. ಸದ್ಯದ ಪಾಸಿಟಿವಿಟಿ ರೇಟ್ ಪ್ರಕಾರ ರಾಜ್ಯದ 4 ಜಿಲ್ಲೆಗಳಲ್ಲಿ ಶೇ.100ರಷ್ಟು ಹೌಸ್`ಫುಲ್ ಸಾಧ್ಯವಿಲ್ಲ.

    ಉಡುಪಿ :ಶೇ.1.36

    ಚಿಕ್ಕಮಗಳೂರು : ಶೇ.1.27

    ದಕ್ಷಿಣ ಕನ್ನಡ (ಮಂಗಳೂರು) : ಶೇ.1.19

    ಕೊಡಗು : ಶೇ.1.14

    ಈ 4 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿದೆ. ಇಲ್ಲಿ ಶೇ.50ರಷ್ಟು ಸೀಟುಗಳ ಭರ್ತಿಗಷ್ಟೇ ಅವಕಾಶ ಇದೆ. ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಥಿಯೇಟರ್ಸ್ ಶೇ.100ರಷ್ಟು ಭರ್ತಿಯಾಗಬಹುದು. ಸೋಂಕು ಹೆಚ್ಚಿದರೆ ಶೇ.2ರ ಗಡಿ ದಾಟಿದರೆ ಥಿಯೇಟರ್ ಬಂದ್ ಆಗುವ ಆತಂಕವೂ ಇದೆ.

    ಹೀಗಿದ್ದರೂ ಟಾಕೀಸುಗಳಿಗೆ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಬರುವಂತಿಲ್ಲ. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸಿಂಗ್, ಶೌಚಾಲಯ ಕ್ಲೀನಿಂಗ್ ಎಲ್ಲವನ್ನೂ ಥಿಯೇಟರುಗಳವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಕ್ಟೋಬರ್ 1ರಿಂದ ಚಿತ್ರಮಂದಿರ ಫುಲ್ ಓಪನ್ ಆದರೆ, ಯಾವ್ಯಾವ ಚಿತ್ರಗಳು ರಿಲೀಸ್ ಆಗಲಿವೆ ಎನ್ನುವುದನ್ನ ಕಾದು ನೋಡಬೇಕು.

  • ಇಂದಿನಿಂದ ಥಿಯೇಟರ್ 100% ಓಪನ್

    ಇಂದಿನಿಂದ ಥಿಯೇಟರ್ 100% ಓಪನ್

    ಚಿತ್ರಮಂದಿರಗಳಿಗೆ ವಕ್ಕರಿಸಿದ್ದ ಕೊರೊನಾ ಕೊನೆಗೂ ತೊಲಗುತ್ತಿದೆ. ಇಂದಿನಿಂದ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಪ್ರದರ್ಶನ ಮಾಡಲು ಅವಕಾಶ ನೀಡಿದೆ ಕೇಂದ್ರ ಸರ್ಕಾರ. ಹಾಗಂತ ಎಲ್ಲ ಕಡೆ ಇದು ಅಪ್ಲೈ ಆಗಲ್ಲ.

    ಕಂಟೈನ್ಮೆಂಟ್ ಝೋನ್‍ನಲ್ಲಿರೋ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಥಿಯೇಟರುಗಳು ಓಪನ್ ಆಗಲ್ಲ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳೇ ಈ ಬಗ್ಗೆ ನಿಗಾ ವಹಿಸುತ್ತವೆ.

    ಥಿಯೇಟರುಗಳಿಗೆ ಎಂಟ್ರಿ ಕೊಡುವ ಪ್ರೇಕ್ಷಕರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಬರುವವರಿಗೆ ಹೋಗುವವರಿಗೆ ಪ್ರತ್ಯೇಕ ಪ್ರವೇಶ ದ್ವಾರ ಇರಬೇಕು. ಸ್ಯಾನಿಟೈಸರ್ ಇಟ್ಟಿರಲೇಬೇಕು. ಮಾಸ್ಕ್ ಇಲ್ಲದವರನ್ನು ಒಳಗೆ ಬಿಡುವಂತಿಲ್ಲ. ಚಿತ್ರಮಂದಿರ ಸಿಬ್ಬಂದಿ ಚಪ್ಪಲಿ ಬದಲಿಗೆ ಶೂ ಹಾಕಿರಬೇಕು. ಮಾಸ್ಕ್ ಮತ್ತು ಗ್ಲೌಸ್ ಬಳಸಲೇಬೇಕು. ಕೊರೊನಾ ಜಾಗೃತಿ ಸಂದೇಶ, ಭಿತ್ತಿಪತ್ರಗಳು ಇರಬೇಕು.

    ಇವೆಲ್ಲವನ್ನೂ ಮಾಡುತ್ತೇವೆ ಎಂದು ಚಿತ್ರಮಂದಿರ ಮಾಲೀಕರು ಮೊದಲೇ ಹೇಳಿದ್ದರೂ, ಈಗ ಅನುಮತಿ ಸಿಕ್ಕಿದೆ. ಇನ್ನು ಮುಂದಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರಾ..? ನೋಡೋಣ.

  • ಇಂದಿನಿಂದ ನೈಟ್ ಕಫ್ರ್ಯೂ ಏರಿಯಾ ಸೆಕೆಂಡ್ ಶೋ ಬಂದ್

    ಇಂದಿನಿಂದ ನೈಟ್ ಕಫ್ರ್ಯೂ ಏರಿಯಾ ಸೆಕೆಂಡ್ ಶೋ ಬಂದ್

    ನೈಟ್ ಕಫ್ರ್ಯೂ ಬೇಕಿತ್ತೋ.. ಬೇಕಿರಲಿಲ್ಲವೋ.. ವಿವಾದ, ಚರ್ಚೆಗಳ ನಡುವೆಯೇ ಎದುರಾಗಿದೆ. ಫೇಸ್ ಮಾಡಬೇಕು, ಅಷ್ಟೆ. ಬೇರೆ ದಾರಿಯಿಲ್ಲ. ಇದು ದೊಡ್ಡ ಹೊಡೆತ ನೀಡಿರುವುದು ಚಿತ್ರರಂಗಕ್ಕೆ. ಅದರಲ್ಲಿ ಅನುಮಾನವೇ ಇಲ್ಲ. ಇದು ಆ ಹೊಡೆತದ ಇನ್ನೊಂದು ಅಪ್‍ಡೇಟ್, ಅಷ್ಟೆ.

    ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ 8 ನಗರಗಳಲ್ಲಿ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ನೈಟ್ ಕಫ್ರ್ಯೂ ಇರೋ ನಗರಗಳಲ್ಲಿ ಇಂದಿನಿಂದ ನೈಟ್ ಶೋ ಸಿನಿಮಾ ಇರೋದಿಲ್ಲ. ಅರ್ಥಾತ್ ಸೆಕೆಂಡ್ ಶೋ ಇರೋದಿಲ್ಲ. ಏಕೆಂದರೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳು 9.30ರ ಒಳಗೆ ಜಾಗ ಖಾಲಿ ಮಾಡಿ ಬೀಗ ಹಾಕಬೇಕು. 50% ವೀಕ್ಷಕರೂ ಇರೋ ಹಾಗಿಲ್ಲ.  ಹೀಗಾಗಿ 9.30ರ ನಂತರ ಯಾವ ಸಿನಿಮಾ ಶೋ ತೋರಿಸೋಕೆ ಸಾಧ್ಯ.. ಅಲ್ವೇ..

    ಹ್ಞಾಂ.. ನೀವಿರೋ ನಗರದಲ್ಲಿ ನೈಟ್ ಕಫ್ರ್ಯೂ ಇದ್ಯಾ..?

  • ಎಲ್ಲ ಓಕೆ.. ಎರಡು ಇಂಟರ್‍ವೆಲ್ ಯಾಕೆ..? : 5 ಷರತ್ತುಗಳ ಹಿಂದಿನ ಲಾಜಿಕ್ ಏನು..?

    ಎಲ್ಲ ಓಕೆ.. ಎರಡು ಇಂಟರ್‍ವೆಲ್ ಯಾಕೆ..? : 5 ಷರತ್ತುಗಳ ಹಿಂದಿನ ಲಾಜಿಕ್ ಏನು..?

    ರಾಜ್ಯ ಸರ್ಕಾರ ಥಿಯೇಟರ್‍ಗಳನ್ನು ಓಪನ್ ಮಾಡೋಕೆ ಅವಕಾಶವನ್ನೇನೋ ಕೊಟ್ಟಿದೆ. ಅದೂ ಕೂಡಾ ಚಿತ್ರರಂಗ ಒಗ್ಗಟ್ಟಾಗಿ ನಿಂತು ಧ್ವನಿಯೆತ್ತಿದ ಬಳಿಕ. ಆದರೆ.. ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶಿ ಸೂಚಿಗಳನ್ನು ರಚಿಸುತ್ತಿರುವವರಿಗೆ ಸಿನಿಮಾ ಆಗಲಿ, ಥಿಯೇಟರ್ ವ್ಯವಸ್ಥೆ ಆಗಲೀ ಅಥವಾ ಇವು ಹೇಗೆ ರನ್ ಆಗುತ್ತವೆ ಎಂಬ ಮಾಹಿತಿಯಾಗಲೀ ಇದ್ದಂತೆ ಕಾಣುತ್ತಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ 5 ಷರತ್ತುಗಳನ್ನು ವಿಧಿಸಿದೆ ರಾಜ್ಯ ಸರ್ಕಾರ.

    ಷರತ್ತು ನಂ.1 : ಪ್ರೇಕ್ಷಕರು ಸದಾ ಮಾಸ್ಕ್ ಧರಿಸಿರಬೇಕು

    ಸಿನಿಮಾ ಮಂದಿರದ ಒಳಗೆ ಹೋಗುವಾಗ ಮಾಸ್ಕ್ ಧರಿಸಿರುತ್ತಾರೆ. ಅದನ್ನು ಥಿಯೇಟರಿನವರೂ ಕಡ್ಡಾಯವಾಗಿ ಪಾಲಿಸುತ್ತಾರೆ. ಅನುಮಾನವೇನೂ ಬೇಡ. ಆದರೆ, ಲೈಟ್ ಆಫ್ ಆಗಿ ಸಿನಿಮಾ ಶುರುವಾದ ಮೇಲೆ ಪ್ರೇಕ್ಷಕರು ಮಾಸ್ಕ್ ತೆಗೆದರೆ ಥಿಯೇಟರಿನವರು ಹೊಣೆಗಾರರಾಗುತ್ತಾರಾ..?

    ಷರತ್ತು ನಂ.2 : ಪ್ರೇಕ್ಷಕರ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು

    ಏಕೆ ಸಂಗ್ರಹಿಸಬೇಕು..? ಪ್ರೇಕ್ಷಕರು, ನಮ್ಮ ಪರ್ಸನಲ್ ನಂಬರ್ ನಿಮಗ್ಯಾಕೆ ಎಂದರೆ ಗದ್ದಲಗಳಾಗುವುದಿಲ್ಲವೇ..? ಇಷ್ಟಕ್ಕೂ ಈ ನಂಬರ್ ಮತ್ತು ಹೆಸರನ್ನು ತೆಗೆದುಕೊಂಡು ಸರ್ಕಾರ ಏನು ಮಾಡುತ್ತೆ. ಗೊತ್ತಿಲ್ಲ. ಕೋವಿಡ್ ಸೋಂಕಿತರ ಮಾಹಿತಿ ಸಂಗ್ರಹಕ್ಕೆ ಅನುಕೂಲ ಎನ್ನುತ್ತಿದೆ ಸರ್ಕಾರ. ಹೇಗೆ..? ಅಕಸ್ಮಾತ್ ರಾಂಗ್ ನಂಬರ್ ಕೊಟ್ಟರೆ.. ಥಿಯೇಟರ್ ಮಾಲೀಕರು ಎಲ್ಲಿಗೆ ಹೋಗಬೇಕು..?

    ಷರತ್ತು ನಂ.3 : ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ಎಸಿ ಬಳಸಬೇಕು

    ಇದು ಟೆಂಪರೇಚರ್ ಲೆಕ್ಕಾಚಾರ. ಇದು ಯಾವ ರೀತಿ ಕೊರೊನಾ ಕಂಟ್ರೋಲ್ ಮಾಡುತ್ತೋ ಗೊತ್ತಿಲ್ಲ. ಆದರೆ, ಪಾಲಿಸಲು ಅಡ್ಡಿಯೇನೂ ಇಲ್ಲ.

    ಷರತ್ತು ನಂ.4 : ಸಿನಿಮಾದ ಮಧ್ಯೆ 2 ಮಧ್ಯಂತರ ವಿರಾಮ ಇರಬೇಕು

    ನಮ್ಮಲ್ಲಿ ಸಿನಿಮಾಗಳ ಅವಧಿ 1 ಗಂಟೆ 40 ನಿಮಿಷದಿಂದ 2 ಗಂಟೆ 20 ನಿಮಿಷ ಇರುತ್ತವೆ. ಇದನ್ನೂ ಮೀರಿದ ಅವಧಿಯ ಸಿನಿಮಾಗಳ ಸಂಖ್ಯೆ ಕಡಿಮೆ. ಎರಡು ಇಂಟರ್‍ವೆಲ್ ಯಾಕೆ..? ಇದರಿಂದ ಯಾವ ರೀತಿ ಪ್ರಯೋಜನ ಎಂಬ ಬಗ್ಗೆ ಉತ್ತರಗಳಿಲ್ಲ.

    ರಾಜ್ಯ ಸರ್ಕಾರದ ನಿಯಮಗಳು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವಂತೆ ಮಾಡುವುದಕ್ಕಿಂತ ಹೆಚ್ಚಾಗಿ, ಬರದಂತೆ ತಡೆಯುವ ಪ್ರಯತ್ನಗಳಿದ್ದಂತೆ ಇವೆ. ಆದರೆ.. ಬೇರೆ ಮಾರ್ಗವಿಲ್ಲ. ಹೀಗಾಗಿ ಚಿತ್ರಮಂದಿರದವರು ಈ ಸೂತ್ರಗಳನ್ನು ಪಾಲಿಸಲೇಬೇಕು. ಇದನ್ನೂ ಮೀರಿದ ಹೊಸ ಹೊಸ ರೂಲ್ಸ್‍ಗಳನ್ನು ಅಧಿಕಾರಿಗಳು ಹುಡುಕುತ್ತಾರೆ. ಥಿಯೇಟರ್ ಮಾಲೀಕರ ಬೆನ್ನು ಹತ್ತುತ್ತಾರೆ. ನೋ ಡೌಟ್.

  • ಎಲ್ಲ ಓಕೆ.. ಎಲ್ಲರಿಗೂ ಓಕೆ.. ಸಿನಿಮಾಗೆ ಮಾತ್ರ ನಿರ್ಬಂಧ ಯಾಕೆ..?

    ಎಲ್ಲ ಓಕೆ.. ಎಲ್ಲರಿಗೂ ಓಕೆ.. ಸಿನಿಮಾಗೆ ಮಾತ್ರ ನಿರ್ಬಂಧ ಯಾಕೆ..?

    13/09/2021ರ ದಿನ ಇಡೀ ರಾಜ್ಯದಲ್ಲಿ ದಾಖಲಾದ ಕೊರೊನಾ ಕೇಸುಗಳ ಸಂಖ್ಯೆ ಒಟ್ಟಾರೆ 673. ಬೆಂಗಳೂರು(214) ಮತ್ತು ದ.ಕನ್ನಡ(115) ಮಾತ್ರವೇ ಮೂರಂಕಿ ಕೇಸ್ ದಾಟಿರುವ ಜಿಲ್ಲೆಗಳು. ಇದು 2ನೇ ಅಲೆಯಲ್ಲೇ ಅತ್ಯಂತ ಕಡಿಮೆ ಕೇಸ್ ಎನ್ನುವುದೂ ಒಂದು ದಾಖಲೆ. ಆದರೆ.. ಈಗಲೂ ಸಿನಿಮಾಗಳಿಗೆ, ಚಿತ್ರಮಂದಿರಗಳಿಗೆ ನಿರ್ಬಂಧ ಮುಂದುವರಿಯುತ್ತಿದೆ.

    ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಮಗಳ ಮದುವೆ ನಡೆಯಿತು. ಖುದ್ದು ಮುಖ್ಯಮಂತ್ರಿಗಳೇ ಭಾಗವಹಿಸಿದ್ದರು. ಸಾವಿರಾರು ಜನ ಸೇರಿದ್ದ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಯಾರೂ ಕೂಡಾ ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್.. ಇತ್ಯಾದಿಗಳನ್ನು ಫಾಲೋ ಮಾಡಿರಲಿಲ್ಲ. ಆದರೂ.. ಸಾವಿರಾರು ಜನ ಸೇರುವ ಮದುವೆಗಳಿಗೆ ನಿರ್ಬಂಧವಿಲ್ಲ. ಎಲ್ಲ ನಿಯಮಗಳನ್ನು ಈಗಲೂ.. ಈ ಕ್ಷಣಕ್ಕೂ ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಿರುವ ಚಿತ್ರಮಂದಿರಗಳಿಗೆ ಶೇ.50ರ ನಿರ್ಬಂಧ ಮತ್ತು ನೈಟ್ ಕಫ್ರ್ಯೂ ಬಿಸಿ. ರಾತ್ರಿ 8.30ಕ್ಕೆ ಚಿತ್ರಮಂದಿರಗಳು ಬಾಗಿಲು ಮುಚ್ಚಬೇಕು.

    ಹೊರಗೆ ಬಂದರೆ ಎಲ್ಲ ಬಾರು, ಪಬ್, ರೆಸ್ಟೋರೆಂಟ್ ಓಪನ್ನಾಗಿಯೇ ಇರುತ್ತವೆ. ರಾಜಕಾರಣಿಗಳ ಸಭೆ, ಸಮಾರಂಭ, ಎಲೆಕ್ಷನ್ ಪ್ರಚಾರ, ಕೇಂದ್ರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಅದ್ಧೂರಿ ಮೆರವಣಿಗೆ, ನಾಯಕರನ್ನು ಹೊತ್ತು ಕುಣಿಯುವ ನಾಯಕರು.. ಈ ಯಾವ ಕಾರ್ಯಕ್ರಮದಲ್ಲೂ ಕೊರೊನಾ ನಿಯಮ ಪಾಲನೆಯಾಗಲ್ಲ. ಅಲ್ಲಿ ಫುಲ್ ಪರ್ಮಿಷನ್. ಆದರೆ.. ಚಿತ್ರಮಂದಿರಗಳಿಗೆ ಮಾತ್ರ ತಜ್ಞರು ಹೇಳಿದಂತೆ ಕೇಳುತ್ತಾರಂತೆ.

    ಇತ್ತೀಚೆಗೆ ಸುವರ್ಣ ನ್ಯೂಸ್‍ನ ಕಾರ್ಯಕ್ರಮದಲ್ಲಿ ಹಿರಿಯ ನಟ ಶಿವಣ್ಣ, ಸಿಎಂ ಎದುರು ಚಿತ್ರಮಂದಿರಗಳ ಪರವಾಗಿ ದನಿಯೆತ್ತಿದಾಗ, ತಜ್ಞರ ಬಳಿ ಚರ್ಚಿಸಿ ಪರಿಶೀಲಿಸುತ್ತೇವೆ ಎಂದೇನೋ ಸಿಎಂ ಹೇಳಿದರು. ಈಗಲೂ.. ಈ ಕ್ಷಣಕ್ಕೂ ಅರ್ಥವಾಗದ ಸಂಗತಿಯೆಂದರೆ, ಮೇಲೆ ಹೇಳಿದ ಕೊರೊನಾ ರೂಲ್ಸ್‍ಗಳನ್ನು ನಯಾಪೈಸೆಯಷ್ಟೂ ಫಾಲೋ ಮಾಡದವರಿಗೆ ಸಡಿಲ ಬಿಡುವಂತೆ ತಜ್ಞರು ಹೇಳಿದ್ದಾರಾ..?

    ಮುಖ್ಯಮಂತ್ರಿಗಳು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕಾದ್ದು ಇಷ್ಟೆ, ಚಿತ್ರಮಂದಿರಗಳ ಬಾಗಿಲು ತೆರೆಯಲು ಪೂರ್ಣ ಪ್ರಮಾಣದ ಅನುಮತಿ ಕೇಳುತ್ತಿರುವುದು ರಾಜಕಾರಣಿಗಳಂತೆ ಮೋಜು ಮಾಡೋಕೂ ಅಲ್ಲ. ಸಂಪತ್ತಿನ ಪ್ರದರ್ಶನಕ್ಕೂ ಅಲ್ಲ. ಚಿತ್ರಮಂದಿರಗಳನ್ನು ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಒಂದೂವರೆ ವರ್ಷದಿಂದ ನರಳುತ್ತಿರುವ ಚಿತ್ರರಂಗಕ್ಕೆ ದುಡಿಮೆ ಮಾಡೋಕೂ ಅವಕಾಶ ಕೊಡದೆ ಕಟ್ಟಿಹಾಕಿರುವ ಸರ್ಕಾರ, ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ?

  • ಎಲ್ಲ ಓಪನ್. ಸಿನಿಮಾಗೆ ಮಾತ್ರ 50:50 ಕಂಡೀಷನ್

    ಎಲ್ಲ ಓಪನ್. ಸಿನಿಮಾಗೆ ಮಾತ್ರ 50:50 ಕಂಡೀಷನ್

    ಸೋಮವಾರದಿಂದ ಕರ್ನಾಟಕ ಬಹುತೇಕ ಅನ್ಲಾಕ್ ಆಗುತ್ತಿದೆ. ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಪಬ್, ಬಾರ್ & ರೆಸ್ಟೋರೆಂಟ್, ಹೊಟೇಲ್ಗಳಲ್ಲಿ 100 % ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಥಿಯೇಟರುಗಳ ಮೇಲಿದ್ದ 50:50 ಕಂಡೀಷನ್ ಮುಂದುವರೆಯುತ್ತಿದೆ. 

    ರಿಲೀಸ್ಗೆ ರೆಡಿಯಾಗಿದ್ದ ಬಿಗ್ ಬಜೆಟ್ ಚಿತ್ರಗಳಿಗೆ ಇದು ಶಾಕ್ ನೀಡಿರುವುದಂತೂ ಸತ್ಯ. ಫಿಲಂ ಚೇಂಬರ್ ಮತ್ತು ಕರ್ನಾಟಕ ಪ್ರದರ್ಶಕರ ಮಂಡಳಿ 100 % ಪ್ರೇಕ್ಷಕರಿಗೆ ಮನವಿ ಮಾಡಿದ್ದವು. ಆದರೆ, ಸರ್ಕಾರ ಈ ಮನವಿಯನ್ನು ಪುರಸ್ಕರಿಸಿಲ್ಲ. 

    ಜಿಮ್, ಒಳಾಂಗಣ ಕ್ರೀಡಾಂಗನ ಹಾಗೂ ಈಜುಕೊಳಗಳಲ್ಲಿಯೂ 50% ರೂಲ್ಸ್ ಮುಂದುವರೆದಿದೆ. ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ದೇಗುಲಗಳಲ್ಲಿಯೂ ಸಂಪೂರ್ಣ ಸೇವೆಗೆ ಅವಕಾಶ ನೀಡಲಾಗಿದೆ. ಆದರೆ ಒಮ್ಮೆಗೆ 50 ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರ ಥಿಯೇಟರುಗಳ ಮೇಲಿನ ನಿರ್ಬಂಧ ಮುಂದುವರೆಸಿರೋ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ನಿಯೋಗ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಲು ತೆರಳಿದೆ.