ಶಿವಾಜಿ ಸುರತ್ಕಲ್ ಚಿತ್ರತಂಡ ಇಂದು ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಅವರಿಗೊಂದು ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ದ್ರಾವಿಡ್ ರವರು ಅದಕ್ಕೆ ಒಪ್ಪಿಕೊಂಡು ಚಿತ್ರದ ಮೊದಲ ಪ್ರೆಕ್ಷಕರಾದದ್ದಕ್ಕೆ, ಚಿತ್ರತಂಡದ ಎಲ್ಲರಿಗೂ ಸಂತೋಷವಾಯಿತು.
ಪ್ರದರ್ಶನದ ನಂತರ ಚಿತ್ರದ ನಾಯಕರಾದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಅವರೊಂದಿಗೆ ಮಾತನಾಡಿದ ದ್ರಾವಿಡ್, ಮೆಚ್ಚುಗೆಯನ್ನು ಹಂಚಿಕೊಂಡರು. ರಮೇಶ್ ಅರವಿಂದ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಚಿತ್ರ ಅದ್ಭುತವಾಗಿದೆ ಎಂದರು. ಚಿತ್ರದ climax ತನ್ನನ್ನು ಬೆರಗುಗೊಳಿಸಿತು ಎಂದರು.
ವೀಕ್ಷಕರೆಲ್ಲರನ್ನೂ ಅದು ಆಶ್ಚರ್ಯ ಪಡಿಸುವುದು ಖಚಿತ ಎಂದು ಅಭಿಪ್ರಾಯ ಪಟ್ಟರು. ನಿರ್ದೇಶಕ ಆಕಾಶ್ ಅವರನ್ನು ಅಭಿನಂದಿಸುತ್ತಾ, ಚಿತ್ರವು ಖಂಡಿತ ಯಶಸ್ವಿಯಾಗುವುದು ಎಂದು ಹಾರೈಸಿದರು.