` sriimurali, - chitraloka.com | Kannada Movie News, Reviews | Image

sriimurali,

  • ಬಘೀರನಿಗೆ ಇನ್ನೊಬ್ಬ ಸೂಪರ್ ಕಾಪ್ ಸಾಥ್

    ಬಘೀರನಿಗೆ ಇನ್ನೊಬ್ಬ ಸೂಪರ್ ಕಾಪ್ ಸಾಥ್

    ಬಘೀರ. ಶ್ರೀಮುರಳಿ ಅಭಿನಯದ ಸಿನಿಮಾ. ಶೂಟಿಂಗ್ ಕೊನೆಯ ಹಂತದಲ್ಲಿರುವಾಗ ಅಚಾತುರ್ಯ ನಡೆದು ಸದ್ಯಕ್ಕೆ ಕಾಲಿನ ಆಪರೇಷನ್ ಅಗಿರುವ ಶ್ರೀಮುರಳಿ ರೆಸ್ಟ್`ನಲ್ಲಿದ್ದಾರೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಬ್ಬ ಸೂಪರ್ ಕಾಪ್ ಎಂಟ್ರಿಯಾಗಿದೆ. ಫಹಾದ್ ಫಾಸಿಲ್. ಮಲಯಾಳಂನ ಈ ನಟ ಇತ್ತೀಚೆಗೆ ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರದಲ್ಲೂ ಸೂಪರ್ ಕಾಪ್ ಪಾತ್ರ ಮಾಡಿದ್ದರು. ಬಘೀರದಲ್ಲಿ ಶ್ರೀಮುರಳಿ ಅವರದ್ದೂ ಪೊಲೀಸ್ ಪಾತ್ರವೇ. ಫಹಾದ್ ಫಾಸಿಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಮಾಹಿತಿ ಇದೆ.

    ನಟ ಫಹಾದ್ ಫಾಸಿಲ್ ಈಗಾಗಲೇ ಕನ್ನಡದ ನಿರ್ದೇಶಕ ಪವನ್ಕುಮಾರ್ರ ‘ಧೂಮಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇದರ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ‘ಬಘೀರ’ ಸಿನಿಮಾ ಮೂಲಕ ಅವರು ಮತ್ತೊಬ್ಬ ಕನ್ನಡ ನಿರ್ದೇಶಕರ ಸಿನಿಮಾದಲ್ಲಿ ಕೆಲಸ ಮಾಡುವಂತಾಗಿದೆ. ‘ಧೂಮಂ’ ಮತ್ತು ‘ಬಘೀರ’ ಸಿನಿಮಾಗಳೆರಡೂ ಒಂದೇ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. ಇದು ಸಹ ಅವರು ‘ಬಘೀರ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ಬಘೀರ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಆದರೆ ಅದು ವಿಲನ್ ಪಾತ್ರ ಅಲ್ಲ. ಪ್ರಮುಖ ಪಾತ್ರ ಎನ್ನುತ್ತಿದೆ ಚಿತ್ರತಂಡ. ಆ ಪ್ರಕಾರವೇ ಫಹಾದ್ ಅವರು ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದ್ದು, ಡಾ.ಸೂರಿ ನಿರ್ದೇಶನವಿದೆ.

  • ಬಘೀರನಿಗೆ ಕೂಡಿ ಬಂತು ಕಾಲ

    ಬಘೀರನಿಗೆ ಕೂಡಿ ಬಂತು ಕಾಲ

    ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ ನಂತರ ನಟಿಸುತ್ತಿರೋ ಹೊಸ ಸಿನಿಮಾ ಬಘೀರ. ಈ ಚಿತ್ರಕ್ಕೆ ಕಥೆ ಬರೆದಿರುವುದು ಪ್ರಶಾಂತ್ ನೀಲ್. ಡೈರೆಕ್ಷನ್ ಮಾಡುತ್ತಿರೋದು ಡಾ.ಸೂರಿ. ಲಕ್ಕಿ, ಕ್ವಾಟ್ಲೆ ಸತೀಶ ಚಿತ್ರಗಳನ್ನು ನಿರ್ದೇಶಿಸಿದ್ದ ಸೂರಿ, ಈಗ ಬಘೀರನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದ್ದು  ಮೇ 20ರಂದು ಸಿನಿಮಾಗೆ ಮುಹೂರ್ತ ನಡೆಯುತ್ತಿದೆ.

    ಜಂಗಲ್ ಬುಕ್ ಕಾರ್ಟೂನ್ ನೋಡಿರುವವರಿಗೆ ಬಘೀರ ಅನ್ನೋ ಹೆಸರು ಪರಿಚಿತವಾಗಿಯೇ ಇರುತ್ತೆ. ಕಷ್ಟಕ್ಕೆ ಸಿಲುಕುವ ಮೋಗ್ಲಿಯನ್ನು ಕಾಪಾಡುವವನು ಬಘೀರ. ವೆನ್ ಸೊಸೈಟಿ ಬಿಕಮ್ಸ್ ಎ ಜಂಗಲ್.. ಅಂಡ್ ಓನ್ಲಿ ಒನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಮಾಜವೇ ಒಂದು ಅರಣ್ಯವಾದಾಗ ಪರಭಕ್ಷಕನೇ ನ್ಯಾಯಕ್ಕಾಗಿ ಹೋರಾಡುತ್ತಾನೆ ಅನ್ನೋ ಅರ್ಥವದು. ಚಿತ್ರದಲ್ಲಿ ಶ್ರೀಮುರಳಿಯವರದ್ದು ಪೊಲೀಸ್ ಆಫೀಸರ್ ಪಾತ್ರ. ಚಿತ್ರವನ್ನು ಹೊಂಬಾಳೆಯವರು ಪ್ರೊಡ್ಯೂಸ್ ಮಾಡ್ತಿರೋದ್ರಿಂದ ಅದ್ಧೂರಿತನಕ್ಕೆ ನೋ ಪ್ರಾಬ್ಲಂ.

  • ಬಘೀರನಿಗೆ ಶುಭಾರಂಭ

    ಬಘೀರನಿಗೆ ಶುಭಾರಂಭ

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಬಘೀರ ಶುರುವಾಗಿದೆ. ಮದಗಜ ನಂತರ ಶುರುವಾಗುತ್ತಿರೋ ಸಿನಿಮಾ ಇದು. ಇಂಡಿಯಾದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಶುರುವಾಗುತ್ತಿರೋ ಸಿನಿಮಾ ಬಘೀರ.

    ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಮುಹೂರ್ತ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರ ತಮ್ಮ ಮಂಜುನಾಥ್ ಕ್ಲಾಪ್ ಮಾಡಿದರೆ, ನಿರ್ದೇಶಕ ಸೂರಿಯವರ ತಾಯಿ ಸರೋಜ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

    ಪ್ರಶಾಂತ್ ನೀಲ್ ಅವರ ಕಥೆ ಬಘೀರ ಚಿತ್ರಕ್ಕಿದೆ. ಉಗ್ರಂ ನಂತರ ಪ್ರಶಾಂತ್ ನೀಲ್ ಅವರ ಕಥೆಯಲ್ಲಿ ಶ್ರೀಮುರಳಿ ನಟಿಸುತ್ತಿರೋ ಚಿತ್ರವಿದು. ಮೇ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಅಜನೀಶ್ ಲೋಕನಾಥ್ ಸಂಗೀತವಿದೆ.

  • ಭಾವ ಶ್ರೀಮುರಳಿ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ

    prashanth neel to produce sriimurali

    ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಭಾವ ಶ್ರೀಮುರಳಿಗೆ ಪ್ರಶಾಂತ್ ನೀಲ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಶ್ರೀಮುರಳಿಯ ಹೊಸ ಚಿತ್ರಕ್ಕೆ ಅವರೇ ಕಥೆ ಬರೆದಿರುವುದಷ್ಟೇ ಅಲ್ಲ, ಸ್ವತಃ ನಿರ್ಮಾಪಕರೂ ಆಗುತ್ತಿದ್ದಾರೆ. ಮದಗಜ ನಂತರ ಆ ಚಿತ್ರ ಸೆಟ್ಟೇರಲಿದೆ.

    ಲಕ್ಕಿ ಡೈರೆಕ್ಟರ್ ಸೂರಿ ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಶಾಂತ್ ನೀಲ್ ಅವರ ಸ್ವರ್ಣಲತಾ ಪ್ರೊಡಕ್ಷನ್ಸ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಮಾ ಉಗ್ರಂ. ಅದು ಶ್ರೀಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ. ಅದಾದ ನಂತರ ನಿರ್ದೇಶಿಸಿದ ಕೆಜಿಎಫ್, ದೇಶಾದ್ಯಂತ ಸದ್ದು ಮಾಡಿದೆ.

  • ಮದಗಜ : 25 ಕೋಟಿ ಬಂಡವಾಳ.. 50 ಕೋಟಿ ಬಿಸಿನೆಸ್

    ಮದಗಜ : 25 ಕೋಟಿ ಬಂಡವಾಳ.. 50 ಕೋಟಿ ಬಿಸಿನೆಸ್

    ಮದಗಜ. ಶ್ರೀಮುರಳಿ, ಅಶಿಕಾ ರಂಗನಾಥ್, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಕಾಂಬಿನೇಷನ್‍ನಲ್ಲಿ ಬಂದ ಸಿನಿಮಾ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಎಂದಿನಂತೆ ಭರ್ಜರಿ ಬಂಡವಾಳ ಹೂಡಿದ್ದರು. ಸಿನಿಮಾ ರಿಲೀಸ್ ಆಗಿ ಚಿತ್ರತಂಡ ವಿಜಯಯಾತ್ರೆ ಆಚರಿಸಿದೆ. ಶ್ರೀಮುರಳಿ ನೇತೃತ್ವದಲ್ಲಿ ಚಿತ್ರತಂಡ ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಬೇಲೂರು, ಹಾಸನ, ಕುಣಿಗಲ್ ಹಾಗೂ ತುಮಕೂರಿನಲ್ಲಿ ಮದಗಜ ಶೋ ನಡೆಯುತ್ತಿದ್ದ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ವಿಜಯಯಾತ್ರೆಯಲ್ಲಿ ಶ್ರೀಮುರಳಿ ಜೊತೆ ಮಹೇಶ್ ಕುಮಾರ್, ಗರುಡ ರಾಮ್ ಕೂಡಾ ಜೊತೆಯಲ್ಲಿದ್ದರು.

    ಚಿತ್ರಕ್ಕೆ ಸುಮಾರು 25 ಕೋಟಿ ಬಂಡವಾಳ ಹಾಕಲಾಗಿತ್ತು. ಚಿತ್ರವೀಗ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಚಿತ್ರಮಂದಿರಗಳಿಂದಲೇ ಚಿತ್ರಕ್ಕೆ ಹೂಡಿದ್ದ ಬಂಡವಾಳ ಆಲ್‍ಮೋಸ್ಟ್ ಬಂದಿದೆ. ಹಿಂದಿ ಡಬ್ಬಿಂಗ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಆಡಿಯೋ, ತೆಲುಗು, ತಮಿಳು ಕಲೆಕ್ಷನ್ ಎಲ್ಲ ಸೇರಿ ಚಿತ್ರ ಈಗಾಗಲೇ 50 ಕೋಟಿ ಬಿಸಿನೆಸ್ ಮಾಡಿದೆ ಅನ್ನೋ ಸುದ್ದಿ ಇದೆ. ಮದಗಜ ಮಸ್ತ್ ಆಗಿಯೇ ಗೆದ್ದಾಗಿದೆ.

  • ಮದಗಜ ಟೈಟಲ್ ಸಾಂಗ್ ಮಸ್ತ್ ಮಸ್ತ್

    ಮದಗಜ ಟೈಟಲ್ ಸಾಂಗ್ ಮಸ್ತ್ ಮಸ್ತ್

    ಡಿಸೆಂಬರ್ 3ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾ ಮದಗಜ. ಶ್ರೀಮುರಳಿ, ಆಶಿಕಾ ರಂಗನಾಥ್, ಅಯೋಗ್ಯ ಮಹೇಶ್ ಕಾಂಬಿನೇಷನ್ನಿನ ಸಿನಿಮಾದಲ್ಲಿ ಜಗಪತಿ ಬಾಬು ಅವರದ್ದು ಪ್ರಮುಖ ಪಾತ್ರ. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಸಿನಿಮಾ ಇದು. ಸ್ಸೋ.. ಬಜೆಟ್ಟೂ ದೊಡ್ಡದು. ಕ್ಯಾನ್‍ವಾಸೂ ದೊಡ್ಡದು. ಅದ್ಧೂರಿತನವನ್ನು ಅರೆದು ಕುಡಿದು ಸಿದ್ಧವಾಗಿರೋ ಚಿತ್ರ ಮದಗಜ. ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದೆ ಚಿತ್ರತಂಡ.

    ಕಿನ್ನಾಲ್ ರಾಜ್ ಬರೆದಿರೋ ಹಾಡಿಗೆ, ಭರ್ಜರಿ ಮ್ಯೂಸಿಕ್ ಕೊಟ್ಟಿರೋದು ರವಿ ಬಸ್ರೂರ್. ಸಂತೋಷ್ ವೆಂಕಿಯ ವಾಯ್ಸ್, ಶ್ರೀಮುರಳಿಯ ಕಂಚಿನ ಕಂಠಕ್ಕೆ ಹೇಳಿ ಮಾಡಿಸಿದಂತೆ ಸೂಟ್ ಆಗಿದೆ. ಹಾಡು ಕೊಡುವ ಫೀಲ್‍ನ್ನು ನೋಡಿಯೇ ಥ್ರಿಲ್ಲಾಗಬೇಕು. ತಮಿಳು, ತೆಲುಗಿನಲ್ಲೂ ಬರುತ್ತಿರೋ ಮದಗಜ ರಿಲೀಸ್ ಆಗೋಕೂ ಮೊದಲೇ ಹವಾ ಎಬ್ಬಿಸಿದೆ.

  • ಮದಗಜ ನಿರ್ಮಾಪಕ ಥ್ಯಾಂಕ್ಸ್ ಹೇಳಿದ್ದು ಅವರಿಗೆ

    ಮದಗಜ ನಿರ್ಮಾಪಕ ಥ್ಯಾಂಕ್ಸ್ ಹೇಳಿದ್ದು ಅವರಿಗೆ

    ಮದಗಜ. ಕೋವಿಡ್ 2ನೇ ಲಾಕ್ ಡೌನ್ ನಂತರ ರಿಲೀಸ್ ಆಗಿ ಗೆದ್ದ ಚಿತ್ರ. ಶ್ರೀಮುರಳಿ, ಅಶಿಕಾ ರಂಗನಾಥ್, ಜಗಪತಿ ಬಾಬು ಪ್ರಧಾನ ಪಾತ್ರದಲ್ಲಿದ್ದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದವರು ಮಹೇಶ್ ಕುಮಾರ್.

    ಸಿನಿಮಾ ರಿಲೀಸ್ ವೇಳೆ ಅತ್ತ ಒಕ್ಕಲಿಗರ ಸಂಘದ ಎಲೆಕ್ಷನ್ ಕೂಡಾ ಇದ್ದ ಕಾರಣ ಪ್ರಚಾರದ ಹೊಣೆಯನ್ನು ಚಿತ್ರತಂಡಕ್ಕೆ ಹೊರಿಸಿ ಅತ್ತ ಗಮನ ಹರಿಸಿದ್ದರು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ. ಅಲ್ಲಿ ಗೆದ್ದರು. ಚಿತ್ರದ ಸಕ್ಸಸ್ ಮೀಟ್ ನಂತರ ಚಿತ್ರತಂಡದೊಂದಿಗೆ ಖುಷಿ ಪಟ್ಟ ಉಮಾಪತಿ ಥ್ಯಾಂಕ್ಸ್ ಹೇಳಿದ್ದು ತಮ್ಮ ಕುಟುಂಬಕ್ಕೆ.

    ಕುಟುಂಬಕ್ಕಿಂತ ಯಾರೂ ದೊಡ್ಡವರಲ್ಲ. ನನ್ನ ಎಲ್ಲ ಒತ್ತಡಗಳನ್ನೂ ಎಷ್ಟೋ ಬಾರಿ ಕುಟುಂಬದ ಮೇಲೆ ಹೇರಿಬಿಡುತ್ತೇನೆ. ಆಗೆಲ್ಲ ಅವರು ನನ್ನ ಜೊತೆ ನಿಂತಿದ್ದಾರೆ. ಆ ಕುಟುಂಬವೇ ನನ್ನ ಶಕ್ತಿ. ಹಣವನ್ನು ಇವತ್ತಲ್ಲ ನಾಳೆ ಸಂಪಾದಿಸಬಹುದು. ಕುಟುಂಬವನ್ನು ಸಂಪಾದಿಸೋಕೆ ಆಗಲ್ಲ ಎಂದು ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ.

  • ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ?

    ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ?

    ಶ್ರೀಮುರಳಿ, ಅಯೋಗ್ಯ ಮಹೇಶ್, ಉಮಾಪತಿ ಶ್ರೀನಿವಾಸ ಗೌಡ ಕಾಂಬಿನೇಷನ್ ಸಿನಿಮಾ ಮದಗಜ. ಇದೇ ಡಿಸೆಂಬರ್ 4ಕ್ಕೆ ರಿಲೀಸ್ ಆಗುತ್ತಿರೋ ಮದಗಜ, ಈಗಾಗಲೇ ಸೆನ್ಸೇಷನ್ ಸೃಷ್ಟಿಸಿದೆ. ಚಿತ್ರದ ಟ್ರೇಲರ್, ಮೇಕಿಂಗ್ ವ್ಹಾರೆವ್ಹಾ ಎನ್ನಿಸುವಂತಿದೆ. ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲೂ ಬರುತ್ತಿದೆ ಮದಗಜ. ಈಗ ರಿಲೀಸ್ ಆಗುವುದಕ್ಕೂ ಮೊದಲೇ ಮದಗಜ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿವೆ ಎನ್ನುತ್ತಿವೆ ಮೂಲಗಳು.

    ಉಗ್ರಂ ನಂತರ ಶ್ರೀಮುರಳಿಯ ಹಿಂದಿ ಡಬ್ಬಿಂಗ್ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮದಗಜ ಚಿತ್ರವೂ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಒಂದು ಮೂಲದ ಪ್ರಕಾರ ಹಿಂದಿಯ ಡಬ್ಬಿಂಗ್ ಹಕ್ಕುಗಳು ಸುಮಾರು 8 ಕೋಟಿಗೆ ಸೇಲ್ ಆಗಿದೆ. ಡಿಸೆಂಬರ್ 4ರಂದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಮದಗಜ, ಸುಮಾರು 1500 ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗಲಿದೆ.

  • ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ..

    ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ..

    ಮದಗಜ ಚಿತ್ರದ ಮೊದಲೆರಡು ಟೀಸರ್ ನೋಡಿದ್ದವರಿಗೆ ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಎನಿಸಿದ್ದರೆ ತಪ್ಪಲ್ಲ. ಅಷ್ಟರಮಟ್ಟಿಗೆ ಪವರ್ ಫುಲ್ ಡೈಲಾಗ್ಸ್.. ಶ್ರೀಮುರಳಿಯ ಬೆಂಕಿ ಕಣ್ಣುಗಳಿದ್ದವು. ಆದರೆ.. ಯುಗಾದಿಗೆ ಬಿಟ್ಟಿರೋ ಇನ್ನೊಂದು ಟೀಸರ್‍ನಲ್ಲಿ ಬೇರೆಯದದ್ದೇ ಲೋಕ ತೋರಿಸಿದ್ದಾರೆ ಅಯೋಗ್ಯ ಮಹೇಶ್.

    ಯುಗಾದಿಯ ಮದಗಜ ಟೀಸರ್‍ನಲ್ಲಿ ಹೈಲೈಟ್ ಆಗಿರೋದು ಆಶಿಕಾ ರಂಗನಾಥ್. ಅಪ್ಪಟ ರೈತ ಮಗಳಾಗಿ ಕಾಣಿಸಿರೋ ಆಶಿಕಾ, ಶ್ರೀಮುರಳಿಯ ಜೊತೆ ಮುದ್ದಾಗಿ ಕಾಣಿಸಿಕೊಳ್ತಾರೆ. ಹಾಗಾದರೆ.. ಇಲ್ಲೊಂದು ಚೆಂದದ ಲವ್ ಸ್ಟೋರಿ ಇದೆಯಾ..?

    ಉಮಾಪತಿ ನಿರ್ಮಾಣದ ಚಿತ್ರ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದರ ಸುಳಿವಂತೂ ಇದುವರೆಗಿನ ಟೀಸರ್‍ಗಳು ಕೊಟ್ಟಿವೆ. 

  • ಮದಗಜನ ಗೆಳತಿಯ ಪ್ರೇಮಗೀತೆ..

    ಮದಗಜನ ಗೆಳತಿಯ ಪ್ರೇಮಗೀತೆ..

    ಗೆಳೆಯ ನನ್ನ ಗೆಳೆಯ.. ಎಂದು ಅಶಿಕಾ ರಂಗನಾಥ್ ಪ್ರೇಮದಲ್ಲಿ ಮುಳುಗಿದ್ದರೆ.. ಗೆಳೆಯನಾಗಿ ಕಂಗೊಳಿಸೋದು ಶ್ರೀಮುರಳಿ. ಇದು ಮದಗಜನ ಪ್ರೇಮಗೀತೆ. ಮದಗಜನ ಗೆಳತಿಯ ಪ್ರೇಮಗೀತೆ.

    ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರದ ಹಾಡು ರಿಲೀಸ್ ಆಗಿದೆ. ಚೇತನ್ ಕುಮಾರ್ ಬರೆದಿರುವ ಪ್ರೇಮಗೀತೆಗೆ ಗುಂಗು ಹಿಡಿಸೋ ಸಂಗೀತ ನೀಡಿರುವುದು ರವಿ ಬಸ್ರೂರು. ವೈಶ್ (ವೈಷ್ಣವಿ ಕಣ್ಣನ್) ಹಾಡಿರೋ ಹಾಡಿಗೆ ತಕ್ಕಂತೆ ಮುಖಭಾವಗಳಲ್ಲಿಯೇ ಮೋಡಿ ಮಾಡೋದು ಅಶಿಕಾ.ಹಾಡಿನ ಕೊರಿಯೋಗ್ರಫಿ ರೆಗ್ಯುಲರ್ ಸ್ಟೈಲಿಗಿಂತ ಡಿಫರೆಂಟ್ ಆಗಿದೆ ಅನ್ನೋದು ಗೊತ್ತಾಗುತ್ತಿದೆ.  

    ಉಮಾಪತಿ ಶ್ರೀನಿವಾಸ್ ನಿರ್ಮಾಣದ ಮದಗಜ,  ಡಿಸೆಂಬರ್‍ಗೆ ರಿಲೀಸ್ ಆಗೋದಾಗಿ ಡೇಟ್ ಅನೌನ್ಸ್ ಮಾಡಿದೆ. ಹೀಗಾಗಿ ಪ್ರಚಾರವೂ ಶುರುವಾಗಿದೆ. 

  • ಮದಗಜನ ಬೆಂಕಿಯುಂಡೆ..

    ಮದಗಜನ ಬೆಂಕಿಯುಂಡೆ..

    ಶ್ರೀಮುರಳಿಯ ದರ್ಶನಕ್ಕೆ ಸಮಯ ಸನ್ನಿಹಿತವಾಗುತ್ತಿದೆ. ಡಿಸೆಂಬರ್ನಲ್ಲಿ ತೆರೆಯ ಮೇಲೆ ಬರೋ ಮದಗಜ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರಕ್ತ ದೇಹದೊಳಗಿದ್ದರೆ ಸಂಬಂಧ.. ಅದೇ ರಕ್ತ ಹೊರಗೆ ಹರಿದರೆ ಕ್ರೌರ್ಯ ಅನ್ನೋ ಡೈಲಾಗು.. ಶ್ರೀಮುರಳಿಯ ಕಂಚಿನ ಕಂಠದಲ್ಲಿ ಕಿವಿಗೆ ಅಪ್ಪಳಿಸುತ್ತೆ.

    ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶಿಸಿರೋ ಚಿತ್ರದಲ್ಲಿ ಶ್ರೀಮುರಳಿ ಎದುರು ವಿಲನ್ ಆಗಿ ಅಬ್ಬರಿಸೋಕೆ ಸಿದ್ಧವಾಗಿರೋದು ಜಗಪತಿ ಬಾಬು. ಲುಕ್ಕು ಖಡಕ್ಕಾಗಿದೆ. ನಾಯಕಿಯಾಗಿ ಅಶಿಕಾ ರಂಗನಾಥ್ ನಟಿಸಿದ್ದಾರೆ. ಌಕ್ಷನ್ ಸೀಕ್ವೆನ್ಸ್ ಭರ್ಜರಿಯಾಗಿವೆ ಅನ್ನೋ ಸುಳಿವು ಟ್ರೇಲರ್ನಲ್ಲೆ ಸಿಕ್ಕಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಚಿತ್ರವಿದು. ಅದ್ಧೂರಿತನಕ್ಕೆ ಬರವಿಲ್ಲ. ರವಿ ಬಸ್ರೂರು ಬಿಜಿಎಂ ವ್ಹಾವ್ ಎನ್ನುವಂತಿದೆ.

  • ಮದಗಜನ ಮಾಸ್ ಮಹೋತ್ಸವ

    ಮದಗಜನ ಮಾಸ್ ಮಹೋತ್ಸವ

    ಮದಗಜ... ನಿರೀಕ್ಷೆಯಂತೆ ಅದ್ಧೂರಿ ಓಪನಿಂಗ್ ಪಡೆದುಕೊಂಡಿದೆ. 900+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆದ ಮದಗಜ ಚಿತ್ರವನ್ನು ಪ್ರೇಕ್ಷಕರು ತೆರೆದ ಹೃದಯದಿಂದ ಸ್ವಾಗತಿಸಿದ್ದಾರೆ. ಸಿನಿಮಾ ನೋಡಿ ಮಮಕಾರದಿಂದ ಅಪ್ಪಿಕೊಂಡಿದ್ದಾರೆ. ಶ್ರೀಮುರಳಿಯ ಬ್ಲಾಕ್ ಬಸ್ಟರ್ ಲಿಸ್ಟಿಗೆ ಹೊಸ ಸೇರ್ಪಡೆ ಮದಗಜ.

    ಅಯೋಗ್ಯ ಚಿತ್ರದಲ್ಲಿ ಹಳ್ಳಿ ಪಾಲಿಟಿಕ್ಸ್ & ಲವ್ ಸ್ಟೋರಿಯನ್ನು ಕಾಮಿಡಿಯಾಗಿ ಹೇಳಿ ಗೆದ್ದಿದ್ದ ಮಹೇಶ್ ಕುಮಾರ್, ಈ ಬಾರಿ ಆ್ಯಕ್ಷನ್ ಸೆಂಟಿಮೆಂಟ್ ಸ್ಟೋರಿಯನ್ನು ಅದ್ಧೂರಿಯಾಗಿ ತೋರಿಸಿ ಗೆದ್ದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಮತ್ತು ಕ್ಯಾಮೆರಾ ಕಣ್ಣು ನವೀನ್ ವ್ಹಾವ್ ಎನಿಸಿದ್ದಾರೆ. ಅಶಿಕಾ ರಂಗನಾಥ್ ಅವರ ಮಂಚ ಮುರಿಯುವಂತೆ ಸಂಸಾರ ಮಾಡ್ತೇನೆ ಅನ್ನೋ ಡೈಲಾಗುಗಳು ಶಿಳ್ಳೆ ಗಿಟ್ಟಿಸಿವೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಹ್ಯಾಪಿ ನ್ಯೂಸ್ ಸಿಕ್ಕಿದೆ.

  • ಮದಗಜನ ಶೂಟಿಂಗ್ ಮುಗೀತು

    ಮದಗಜನ ಶೂಟಿಂಗ್ ಮುಗೀತು

    ರೋರಿಂಗ್ ಸ್ಟಾರ್ ಶ್ರೀಮುರಳಿ, ಅಶಿಕಾ ರಂಗನಾಥ್ ನಟಿಸಿರುವ, ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ 2ನೇ ಚಿತ್ರ ಮದಗಜ ಚಿತ್ರ, ಚಿತ್ರೀಕರಣ ಪೂರೈಸಿದೆ. ಹೆಬ್ಬುಲಿ, ರಾಬರ್ಟ್ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಿತ್ರವಿದು. ಒಟ್ಟಾರೆ 74 ದಿನಗಳ ಚಿತ್ರೀಕರಣ ನಡೆಸಿ ಕುಂಭಳಕಾಯಿ ಒಡೆದಿದೆ ಚಿತ್ರತಂಡ.

    ಮದಗಜ ಚಿತ್ರದ ಟೀಸರ್, ಪೋಸ್ಟರ್‍ಗಳು ಬೇರೆಯದ್ದೇ ನಿರೀಕ್ಷೆ ಹುಟ್ಟಿಸಿವೆ. ಇದೊಂದು ಮಾಸ್ ಆ್ಯಕ್ಷನ್ ಸಿನಿಮಾ ಎನ್ನೋದ್ರಲ್ಲಿ ಡೌಟ್ ಇಲ್ಲ. ಹೀರೋ ಅಷ್ಟೇ ಅಲ್ಲ, ಹೀರೋಯಿನ್‍ನ್ನೂ ಕೂಡಾ ಡಿಫರೆಂಟ್ ಆಗಿ ಪ್ರೆಸೆಂಟ್ ಮಾಡಿರೋ ಮದಗಜ ಚಿತ್ರತಂಡ, ನಿರೀಕ್ಷೆಯನ್ನು ಹೆಚ್ಚಿಸಿದೆ.

    ಅಭಿಮಾನಿ ದೇವರುಗಳೇ.. ಮದಗಜ ಚಿತ್ರದ ಶೂಟಿಂಗ್ ಮುಗಿದಿದೆ. ಆದಷ್ಟು ಬೇಗ ಹಿರಿತೆರೆಯಲ್ಲಿ ಭೇಟಿ ಮಾಡುತ್ತೇನೆ ಎಂದಿದ್ದಾರೆ ಶ್ರೀಮುರಳಿ. ಭರಾಟೆ ನಂತರ ರಿಲೀಸ್ ಆಗಬೇಕಿರುವ ಚಿತ್ರವೇ ಮದಗಜ.

  • ಮದಗಜನಿಗೆ ಒಂದು ಕೋಟಿ ವೆಚ್ಚದ ಸೆಟ್

    madagaja team to set up 1 crore set

    ರೋರಿಂಗ್ ಸ್ಟಾರ್ ಶ್ರೀಮುರಳಿಯ ಮದಗಜ ಚಿತ್ರಕ್ಕೆ ಸುಮಾರು ಒಂದು ಕೋಟಿ ವೆಚ್ಚದ ಬೃಹತ್ ಸೆಟ್ ಹಾಕಿಸಲಾಗುತ್ತಿದೆ. ಹೆಚ್‍ಎಂಟಿಯಲ್ಲಿ ಸೆಟ್ ನಿರ್ಮಾಣವಾಗುತ್ತಿದ್ದು, ಸೆಪ್ಟೆಂಬರ್ ಫಸ್ಟ್ ವೀಕ್ ಶೂಟಿಂಗ್ ಶುರುವಾಗಲಿದೆ. ಫೈಟಿಂಗ್ ಸೀಕ್ವೆನ್ಸ್‍ಗಾಗಿ ಸೆಟ್ ಹಾಕಲಾಗುತ್ತಿದ್ದು, ರವಿವರ್ಮ ಖುದ್ದು ಹಾಜರಿದ್ದು, ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ.

    ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಮದಗಜ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಅಶಿಕಾ ರಂಗನಾಥ್ ನಾಯಕಿಯಾಗಿರುವ ಚಿತ್ರವಿದು. ಚಿತ್ರದ ರಷಸ್ ನೋಡಿರುವ ಶ್ರೀಮುರಳಿ, ಈ ಸಿನಿಮಾ ಬೇರೆಯದೇ ಲೆವೆಲ್‍ಗೆ ಹೋಗಲಿದೆ ಎಂದಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೈಬಿಚ್ಚಿ ಖರ್ಚು ಮಾಡುತ್ತಿದ್ದಾರೆ.

  • ಮದಗಜನಿಗೆ ಮಹಾರಾಣಿಯಾಗಲು ಅಶಿಕಾ ತೆಗೆದುಕೊಂಡ ರಿಸ್ಕ್..

    ashika takes a huge risk for the role of madagaa

    ಮದಗಜನ ಮಹಾರಾಣಿ ಯಾರು..? ಎಂಬ ಕುತೂಹಲವನ್ನಿಟ್ಟು ಒಂದಿಡೀ ದಿನ ಕಾಯಿಸಿದ್ದ ಮದಗಜ ಚಿತ್ರತಂಡ ಈಗ ಮದಗಜನ ಮಹಾರಾಣಿ ಯಾರು ಅನ್ನೋ ಗುಟ್ಟು ಬಿಟ್ಟುಕೊಟ್ಟಿದೆ. ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಮದಗಜನ ಹೀರೋಯಿನ್. ಚಿತ್ರದಲ್ಲಿ ಅವರದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರವಂತೆ.

    ವಿದ್ಯಾವಂತೆ. ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಇರುವ ಹುಡುಗಿ. ತುಂಬಾ ಬೋಲ್ಡ್, ರಫ್ & ಟಫ್ ಪಾತ್ರ. ರಾ ಲುಕ್ ಎಂದು ಪಾತ್ರದ ಬಗ್ಗೆ, ವಿಶೇಷತೆ ಬಗ್ಗೆ ಪ್ರೀತಿಯಿಂದ ಮಾತಾಡ್ತಾರೆ ಅಶಿಕಾ. ಪಾತ್ರಕ್ಕಾಗಿ ಸಿದ್ಧತೆ ಬೇಕಿದೆ. ನಿರ್ದೇಶಕರು ಕೆಲವು ಟಿಪ್ಸ್ ಕೊಟ್ಟಿದ್ದಾರೆ ಎನ್ನುವ ಅಶಿಕಾರನ್ನು ನಟ ಶ್ರೀಮುರಳಿ ಸ್ವಾಗತಿಸಿದ್ದಾರೆ.

    ಹಲವು ನಾಯಕಿಯರನ್ನು ನೋಡಿದೆವು. ಆದರೆ.. ಈ ಪಾತ್ರಕ್ಕೆ ಸೂಕ್ತ ಎನಿಸಿದ್ದು ಅಶಿಕಾ ರಂಗನಾಥ್ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಉಮಾಪತಿ ನಿರ್ಮಾಣದ ಚಿತ್ರಕ್ಕೆ ಫೆ.20ರಂದು ಮುಹೂರ್ತ ನಡೆಯಲಿದೆ.

    ಆದರೆ ವಿಷಯ ಇದ್ಯಾವುದೂ ಅಲ್ಲ. ಈ ಚಿತ್ರಕ್ಕಾಗಿ ಅಶಿಕಾ ಒಂದು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಅಶಿಕಾ ಇರೋದೇ ಬೆಳ್ಳಗೆ. ಆದರೆ ಈ ಪಾತ್ರಕ್ಕಾಗಿ ಅವರ ಮೈಬಣ್ಣ ಕಪ್ಪಾಗಬೇಕು. ಬಿಸಿಲಿನಲ್ಲಿ ನಿಂತು ಚರ್ಮವನ್ನು ಕಪ್ಪಾಗಿಸಿಕೊಳ್ಳಬೇಕು. ಅದಕ್ಕಾಗಿ ಫೆಬ್ರವರಿ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇನ್ನು ಸಿನಿಮಾ ಮುಗಿದ ನಂತರ ಸ್ಕಿನ್ ಟೋನ್ ಮತ್ತೆ ಮೊದಲಿನಂತಾಗುವವರೆಗೆ ಬೇರೆ ಸಿನಿಮಾ ಮಾಡೋಕೂ ಆಗಲ್ಲ. ಅಷ್ಟರಮಟ್ಟಿಗೆ ಸಿನಿಮಾಗೆ ದೊಡ್ಡ ರಿಸ್ಕ್‍ನ್ನೇ ತೆಗೆದುಕೊಂಡಿದ್ದಾರೆ ಅಶಿಕಾ ರಂಗನಾಥ್.

  • ಮನೆಗೆ ಮರಳಿದ ಶ್ರೀಮುರಳಿ

    ಮನೆಗೆ ಮರಳಿದ ಶ್ರೀಮುರಳಿ

    ನಟ ಶ್ರೀಮುರಳಿ ಮನೆಗೆ ವಾಪಸ್ ಆಗಿದ್ದಾರೆ. ಸುಮಾರು 2 ಗಂಟೆ ಆಪರೇಷನ್ ಬಳಿಕ ಶ್ರೀಮುರಳಿ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿದ್ದರು. ಆಪರೇಷನ್ ಯಶಸ್ವಿಯಾಗಿದ್ದು ಮುರಳಿ ಮನೆಗೆ ಬಂದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಶ್ರೀಮುರಳಿ ಜೊತೆ ಸೆಲ್ಫಿ ತೆಗೆದುಕೊಂಡು ಮನೆಗೆ ಕಳಿಸಿಕೊಟ್ಟಿದ್ದೇ ವಿಶೇಷ.

    ನಟ ಶ್ರೀಮುರಳಿ ಬಘೀರ ಚಿತ್ರದ ಚಿತ್ರೀಕರಣ ವೇಳೆ ಏಟು ಮಾಡಿಕೊಂಡಿದ್ದರು. ಡ್ಯೂಪ್ ಬಳಸದೆ ಮಾಡಿದ ಸ್ಟಂಟ್ ಎಡವಟ್ಟಾಗಿ ಗಂಭೀರವಾಗಿಯೇ ಪೆಟ್ಟು ಬಿದ್ದಿತ್ತು. ತಕ್ಷಣ ಶ್ರೀಮುರಳಿ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ರೀಮುರಳಿ ಅವರ ಮೊಣಕಾಲಿನಲ್ಲಿ ಫ್ರಾಕ್ಚರ್ ಆಗಿತ್ತು. ಈ ಹಿಂದೆ ಮದಗಜ ವೇಳೆಯಲ್ಲಿ ಕೂಡಾ ಗಾಯವಾಗಿದ್ದು ಅದೇ ಎಡಗಾಲಿಗೆ ಬಿದ್ದ ಪೆಟ್ಟು ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಹೀಗಾಗಿ ಆಪರೇಷನ್ ಅನಿವಾರ್ಯವಾಗಿತ್ತು.

    ವೈದ್ಯರು ಶ್ರೀಮುರಳಿಗೆ 6 ವಾರಗಳ ರೆಸ್ಟ್ ಹೇಳಿದ್ದಾರೆ. 6 ವಾರ ಅಂದ್ರೆ ಒಂದೂವರೆ ತಿಂಗಳು ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿಯೇ ಇರಬೇಕು. ನಂತರದ ಒಂದೂವರೆ ತಿಂಗಳಲ್ಲಿ ಮೊಣಕಾಲಿನ ಮೇಲೆ ಪ್ರೆಷರ್ ಹಾಕದೆ ಓಡಾಡಬಹುದು. ಅದಾದ ಮೇಲೆ ನಾರ್ಮಲ್ ಸ್ಟೇಜ್‍ಗೆ ಬಂದಿದ್ದಾರೆಯೇ ಇಲ್ಲವೇ ಎಂಬುದನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಿ ವೈದ್ಯರು ನಿರ್ಧರಿಸುತ್ತಾರೆ. ಅಂದ್ರೆ ಇನ್ನಾರು ತಿಂಗಳು ಶ್ರೀಮುರಳಿ ಫೈಟು, ಡಾನ್ಸು ಮಾಡುವಂತಿಲ್ಲ. ಅಲ್ಲಿಯವರೆಗೆ ಬಘೀರ ಚಿತ್ರದ ಚಿತ್ರೀಕರಣವೂ ನಡೆಯುವಂತಿಲ್ಲ. ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಕಡೆಯ ಹಂತದ ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಕೆಲವೇ ಕೆಲವು ದೃಶ್ಯಗಳು ಬಾಕಿಯಿದ್ದವು. ಆದರೆ ದುರದೃಷ್ಟವಶಾತ್ ಈ ಅಪಘಾತ ನಡೆದು ಬಘೀರ ಚಿತ್ರಕ್ಕೂ ಬ್ರೇಕ್ ಬಿದ್ದಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನವರ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದೆ.

  • ಯಾರವಳು.. ಮದಗಜನ ಮಹಾರಾಣಿ..?

    who is this mysterious madagaja heroine

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಮದಗಜ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರ, ಈಗ ಚಿತ್ರರಸಿಕರ ತಲೆಗೆ ಹೊಸದೊಂದು ಹುಳ ಬಿಟ್ಟಿದೆ. ಹೀರೋಯಿನ್ ಯಾರು..?

    ತಲೆ ತುಂಬಾ ಹೂ.. ಸಾಂಪ್ರದಾಯಿಕ ಸೀರೆಯಲ್ಲಿರುವ ಚೆಲುವೆಯ ಫೋಟೋ ಹಾಕಿ ಮುಖವನ್ನು ತೋರಿಸಿಲ್ಲ. ಮದಗಜ ಚಿತ್ರದ ನಾಯಕಿ ದೊಡ್ಡ ನಟಿ. ಯಾರಿವರು ಊಹಿಸಿ ಎಂದು ವಿಭಿನ್ನವಾದ ಚಾಲೆಂಜ್ ಹಾಕಿದೆ ಚಿತ್ರತಂಡ.

    ಯಾರಿರಬಹುದು..? ಅಭಿಮಾನಿಗಳ ಉತ್ತರವೂ ಮಜವಾಗಿದೆ. ಅಶಿಕಾ ರಂಗನಾಥ್, ಸಮಂತಾ, ಶಾನ್ವಿ ಶ್ರೀವಾತ್ಸವ್, ಕೀರ್ತಿ ಸುರೇಶ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿವೆ. ಅಭಿಮಾನಿಗಳಿಂದ ಹೆಚ್ಚು ವೋಟ್ ಬಿದ್ದಿರೋದು ಚುಟು ಚುಟು ಸ್ಟಾರ್ ಅಶಿಕಾ ರಂಗನಾಥ್ ಅವರಿಗೆ. ಆದರೆ.. ಅವರೇನಾ..? ಗೊತ್ತಿಲ್ಲ. ನಿರ್ಮಾಪಕರಾಗಲೀ..ನಿರ್ದೇಶಕರಾಗಲೀ.. ಶ್ರೀಮುರಳಿಯಾಗಲೀ.. ಗುಟ್ಟು ಬಿಟ್ಟು ಕೊಡ್ತಾ ಇಲ್ಲ. ಶಿವರಾತ್ರಿಯ ದಿನ ಓಂ ನಮಃ ಶಿವಾಯ ಎನ್ನುವಾಗ ಮುಹೂರ್ತ ನಡೆಯಲಿದ್ದು, ಆ ದಿನವಂತೂ ಪಕ್ಕಾ ಗೊತ್ತಾಗುತ್ತೆ.

  • ರೋರಿಂಗ್ ಬಘೀರ : ಉಗ್ರಂ ಜೋಡಿ ರಿಪೀಟ್

    Prashanth Neel Writes Story For Bhageera

    ಉಗ್ರಂ, ಮಫ್ತಿ ನಂತರ ಮತ್ತೊಮ್ಮೆ ಅದೇ ಶೇಡ್‍ನಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಈ ಬಾರಿ ಕನ್ನಡದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ. ಶ್ರೀಮುರಳಿಯ ಬಘೀರ ಚಿತ್ರಕ್ಕೆ ಡೈರೆಕ್ಟರ್ ಪ್ರಶಾಂತ್ ನೀಲ್ ಅಲ್ಲ. ಆದರೆ, ಕಥೆ, ಚಿತ್ರಕಥೆ ಅವರದ್ದೇ. ನಿರ್ದೇಶಕರಾಗಿರುವುದು ಯಶ್-ರಮ್ಯಾ ಜೋಡಿಯ ಲಕ್ಕಿ ಚಿತ್ರದ ಖ್ಯಾತಿಯ ಡಾ.ಸೂರಿ.

    ಯುವರತ್ನ, ಕೆಜಿಎಫ್ ಚಾಪ್ಟರ್ 2, ಸಲಾರ್‍ನಂತರ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಘೀರನಿಗೆ ಬಂಡವಾಳ ಹೂಡುತ್ತಿದೆ.

    ಇಡೀ ಸಮಾಜವೇ ಅರಣ್ಯವಾದಾಗ, ಒಬ್ಬನೇ ಒಬ್ಬ ರಕ್ಷಕ ನ್ಯಾಯಕ್ಕಾಗಿ ಘರ್ಜಿಸುತ್ತಾನೆ ಅನ್ನೋ ಟ್ಯಾಗ್‍ಲೈನ್ ಬೇರೆ ಇದೆ. ಡೌಟೇ ಇಲ್ಲದಂತೆ ಇದೊಂದು ಆಕ್ಷನ್ ಡ್ರಾಮಾ. 

  • ರೋರಿಂಗ್ ಸ್ಟಾರ್ ಬೆವರ್ ಕಿತ್ಕೊಂಡ್ ಬರೋ ಕೆಲಸ ಮಾಡ್ತಾವ್ರೆ..

    srrimurali cleaning at kitchen during lockdown

    ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಕ್ರೀನ್ ಮೇಲೆ ಏನೇ ಇದ್ರೂ, ಹೆಂಡತಿ ಎದುರು ಅಪ್ಪಟ ಗಂಡ. ಅದು ಲಾಕ್ ಡೌನ್ ಟೈಮಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅವರೀಗ ಮನೆಯಲ್ಲಿ ಪಾತ್ರೆಯನ್ನು ಥಳಥಳ ಹೊಳೆಯುವಂತೆ ಬೆಳಗಿ ಕೊಡುತ್ತಿದ್ದಾರೆ.

    ಊಟ ಬೇಕಂದ್ರೆ ಪಾತ್ರೆ ಬೆಳಗಿಕೊಡು ಅಂದಿದ್ದಾರಂತೆ ವಿದ್ಯಾ ಮೇಡಮ್ಮು. ಹೆಂಡತಿಯ ಆಜ್ಞೆ ಧಿಕ್ಕರಿಸಿ ಬದುಕಿದ ಪತಿರಾಯ ಜಗತ್ತಿನಲ್ಲಿ ಎಲ್ಲಿದ್ದಾನೆ ಹೇಳಿ.. ಶ್ರೀಮುರಳಿಯೂ ಅದಕ್ಕೆ ಹೊರತಲ್ಲ. ಹೀಗಾಗಿಯೇ ಬೆವರು ಕಿತ್ಕೊಂಡ್ ಬರೋ ತರ ಕೆಲಸ ಮಾಡ್ತಿದ್ದೀನಿ ಅಂತಾ ಶ್ರೀಮುರಳಿ ಪೋಸ್ಟ್ ಹಾಕಿದ್ದಾರೆ.

  • ಶಿವಣ್ಣನಿಗೆ ಶ್ರೀಮುರಳಿ ಕೈ ತುತ್ತು

    sriimurali feeds shivanna food by hand

    ಶಿವಣ್ಣ, ಸಿಂಪಲ್ ಮನುಷ್ಯ. ಸ್ಟಾರ್ ಎನ್ನುವ ಹಮ್ಮು ಬಿಮ್ಮು ಇಲ್ಲವೇ ಇಲ್ಲ. ಇನ್ನು ಶ್ರೀಮುರಳಿ, ರೋರಿಂಗ್ ಸ್ಟಾರ್. ಇವರಿಬ್ಬರೂ ಚಿತ್ರರಂಗದಲ್ಲಿ ಕಲಾವಿದರಷ್ಟೇ ಅಲ್ಲ, ಸಂಬಂಧಿಗಳೂ ಹೌದು. ಆ ಪ್ರೀತಿ, ಬಾಂಧವ್ಯವನ್ನು ಇಂದಿಗೂ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ.

    ಶಿವರಾಜ್‌ಕುಮಾರ್ ಅವರಿಗೆ ಶ್ರೀಮುರಳಿ ಕೈ ತುತ್ತು ತಿನ್ನಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇತ್ತೀಚೆಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ನಡೆದಿರುವ ಘಟನೆ ಇದು. ಶ್ರೀಮುರಳಿ ಊಟ ಮಾಡುವಾಗ ಶಿವಣ್ಣ ಬರುತ್ತಾರೆ. ಪಕ್ಕದಲ್ಲಿ ಕುಳಿತ ಮಾಮನಿಗೆ ಶ್ರೀಮುರಳಿ ಕೈ ತುತ್ತು ತಿನಿಸುತ್ತಾರೆ.

    ಶಿವಣ್ಣ ಮತ್ತು ಶ್ರೀಮುರಳಿ ಒಟ್ಟಿಗೇ ಮಫ್ತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರರಂಗವನ್ನೂ ಮೀರಿದ ಬಾಂಧವ್ಯವೊಂದು ಅವರಿಬ್ಬರ ಮಧ್ಯೆ ಇದೆ.