` badava rascal, - chitraloka.com | Kannada Movie News, Reviews | Image

badava rascal,

  • ಬಡವ ರ್ಯಾಸ್ಕಲ್ ಡಾಲಿ ಧನಂಜಯ್

    dhananjay's next is badava rascal

    ಬಡವ ರ್ಯಾಸ್ಕಲ್ ಅನ್ನೋದು ಅಣ್ಣಾವ್ರ ಸ್ಪೆಷಲ್ ಬೈಗುಳ. ಬಹುಶಃ ರಾಜ್ ಚಿತ್ರಗಳಲ್ಲಿ ಅತಿ ಹೆಚ್ಚು ಬೈಗುಳ ಇದೇ ಇರಬೇಕು. ಈಗ ಅದು ಹೊಸ ಚಿತ್ರದ ಟೈಟಲ್ ಆಗಿದೆ. ಬಡವ ರ್ಯಾಸ್ಕಲ್ ಆಗಿರೋದು ಡಾಲಿ ಧನಂಜಯ್.

    ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶಂಕರ್, ಈ ಚಿತ್ರದ ಮೂಲಕ ನಿರ್ದೇಶರಾಗುತ್ತಿದ್ದಾರೆ. ಧನಂಜಯ್‍ಗೆ ಅಮೃತಾ ಅಯ್ಯಂಗಾರ್ ಅನ್ನೋ ಹುಡುಗಿ ನಾಯಕಿ. ಅಂದಹಾಗೆ ಇದು ಕಾಮಿಡಿ ಜಾನರ್ ಇರುವ ಚಿತ್ರವಂತೆ. ಇದೇ ಆಗಸ್ಟ್ 23ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

  • ಬಡವ ರ್ಯಾಸ್ಕಲ್ ಸೆ.24ಕ್ಕೆ ಬರ್ತಾನೆ

    ಬಡವ ರ್ಯಾಸ್ಕಲ್ ಸೆ.24ಕ್ಕೆ ಬರ್ತಾನೆ

    ಭಜರಂಗಿ 2 ಮತ್ತು ಸಲಗ ನಂತರ ಇನ್ನೊಂದು ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಬಡವ ರ್ಯಾಸ್ಕಲ್ ಸಿನಿಮಾ ಸೆ.24ಕ್ಕೆ ರಿಲೀಸ್ ಆಗಲಿದೆ. ಶೂಟಿಂಗ್, ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದ ಬಡವ ರ್ಯಾಸ್ಕಲ್ ಸಿನಿಮಾ, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಬಿಡುಗಡೆಗೆ ಸಿದ್ಧತೆ ನಡೆಸಿದೆ.

    ಧನಂಜಯ್ ಹೀರೋ ಆಗಿದ್ದು, ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಡಾಲಿಗೆ ಜೊತೆಯಾಗಿದ್ದಾರೆ. ಇದೊಂದು ಮಿಡ್ಲ್ ಕ್ಲಾಸ್ ಗ್ಯಾಂಗ್ ಸ್ಟರ್ ಹುಡುಗರ ಕಥೆ ಎಂದಿರುವ ಧನಂಜಯ್, ರಾ ಕಥೆ ಹೊಂದಿದೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಂಕರ್ ಗುರು.

    ಅಂದಹಾಗೆ ಇದು ಡಾಲಿ ಧನಂಜಯ್ ಅವರ ಮೊದಲ ನಿರ್ಮಾಣ ಸಾಹಸ. ಚಿತ್ರವನ್ನು ಡಾಲಿ ಪಿಕ್ಚರ್ಸ್‍ನಲ್ಲಿ ನಿರ್ಮಾಣ ಮಾಡಿದ್ದು, ಸಾವಿತ್ರಮ್ಮ ಅಡವಿಸ್ವಾಮಿ ನಿರ್ಮಾಪಕರು. ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.

  • ರೀಲಲ್ಲೂ.. ರಿಯಲ್‍ಲ್ಲೂ ಅವರೇ ಬಡವ ರಾಸ್ಕಲ್ ಫ್ರೆಂಡ್ಸ್

    badava rascal image

    ಬಡವ ರಾಸ್ಕಲ್ ಟ್ರೇಲರ್ ನೋಡಿದವರಿಗೆ ಒಂದು ವಿಷಯವಂತೂ ಪಕ್ಕಾ ಗೊತ್ತಾಗುತ್ತೆ. ಇದು ಮಿಡ್ಲ್‍ಕ್ಲಾಸ್ ಹುಡುಗರ ಲವ್ & ಫ್ರೆಂಡ್‍ಶಿಪ್ & ಫ್ಯಾಮಿಲಿ ಪಡಿಪಾಟಲಿನ ಕಥೆ ಅನ್ನೋದು. ಆದರೆ, ಈ ಸಿನಿಮಾದಲ್ಲಿ ಧನಂಜಯ್ ಜೊತೆ ಗೆಳೆಯರಾಗಿ ನಟಿಸಿರೋ ಆ ಇಬ್ಬರೂ ರಿಯಲ್ ಲೈಫ್‍ನಲ್ಲೂ ಫ್ರೆಂಡ್ಸ್ ಅನ್ನೋದು ಇನ್ನೊಂದು ಅಚ್ಚರಿ.

    ಬಡವ ರಾಸ್ಕಲ್ ಫ್ರೆಂಡ್ `ನಾಗ'ನಾಗಿ ನಟಿಸಿರೋ ನಾಗಭೂಷಣ್ ಧನಂಜಯ್ ಅವರಿಗೆ ರಂಗಭೂಮಿ ದಿನಗಳಿಂದಲೂ ಸ್ನೇಹಿತ. ಹೀಗಾಗಿ ನಟನೆಯೂ ಸಲೀಸು. ನನಗೆ ಧನಂಜಯ್ ಹೀರೋ, ಇದು ಸಿನಿಮಾ ಎಂಬ ಫೀಲಿಂಗ್ ಇರಲೇ ಇಲ್ಲ. ಅದೊಂಥರಾ ಫ್ರೆಂಡ್ಸ್ ಟ್ರಿಪ್ ಇದ್ದಂತಿತ್ತು ಎನ್ನುತ್ತಾರೆ ನಾಗಭೂಷಣ್.

    ಗಣಪ ಅನ್ನೋ ಕ್ಯಾರೆಕ್ಟರ್ ಮಾಡಿರೋ ಪೂರ್ಣಚಂದ್ರ ಮೈಸೂರು ಕೂಡಾ ಧನಂಜಯ್ ಅವರಿಗೆ ರಂಗಭೂಮಿ ಮಿತ್ರ. ಸಾಲ ಕೊಡೋದು ಗಣಪನ ವೃತ್ತಿ. ಅಂತಹ ಗಣಪ ಕಷ್ಟದಲ್ಲಿದ್ದಾಗ ಬಡವ ರಾಸ್ಕಲ್ ಕಾಪಾಡ್ತಾನೆ. ಅದಕ್ಕಾಗಿ ಋಣಿಯಾಗಿರೋ ಗಣಪನ ಪಾತ್ರ, ಧನಂಜಯ್ ಪಾತ್ರಕ್ಕಾಗಿ ಏನು ಬೇಕಾದರೂ ಮಾಡುವ ಲೆವೆಲ್ಲಿಗೆ ಹೋಗುತ್ತೆ. ತುಂಬಾ ವರ್ಷಗಳ ಗೆಳೆತನದಿಂದಾಗಿ ಧನಂಜಯ್ ಜೊತೆ ನಟಿಸುತ್ತಿದ್ದೇವೆ ಅನ್ನಿಸಲಿಲ್ಲ ಅನ್ನೋದು ಪೂರ್ಣಚಂದ್ರ ಅವರ ಮಾತು.

    ನಿರ್ದೇಶಕ ಶಂಕರ್ ಗುರು ಕೂಡಾ ಗೆಳೆಯರ ಬಳಗದವರೇ. ಅಮೃತಾ ಅಯ್ಯಂಗಾರ್ ಕೂಡಾ ಧನಂಜಯ್ ಜೊತೆ ಸ್ನೇಹ ಕಾಯ್ದಿಟ್ಟುಕೊಂಡಿದ್ದಾರೆ.

    ಧನಂಜಯ್ ಎಷ್ಟು ಒಳ್ಳೆಯ ಸ್ನೇಹಿತ ಅನ್ನೋದಕ್ಕೆ ಸಾಕ್ಷಿಯಾಗಿ ಬಡವ ರಾಸ್ಕಲ್ ಪ್ರೀರಿಲೀಸ್ ಈವೆಂಟ್ ಶೋ ಇತ್ತು. ಈಗ ಸಿನಿಮಾ ಕೂಡಾ. ಫೆಬ್ರವರಿ 24ಕ್ಕೆ ಗೆಟ್ ರೆಡಿ. 

  • ವ್ಹಾರೆವ್ಹಾ.. ಗೆದ್ದೇ ಬಿಟ್ಟ ಬಡವ..

    ವ್ಹಾರೆವ್ಹಾ.. ಗೆದ್ದೇ ಬಿಟ್ಟ ಬಡವ..

    ಬಡವ ರಾಸ್ಕಲ್ ಜನಮನ ಗೆದ್ದಿದೆ. ಡಾಲಿ ಧನಂಜಯ್ ನಿರ್ಮಾಪಕರಾಗಿ ಮತ್ತು ಹೀರೋ ಆಗಿ ಎರಡೂ ವಿಭಾಗಗಳಲ್ಲಿ ಗೆದ್ದಿದ್ದಾರೆ. ಜೊತೆಯಲ್ಲೇ ಗೆಲುವಿನ ಯಾತ್ರೆಯನ್ನೂ ಶುರು ಮಾಡಿದ್ದಾರೆ. ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಸನ್ನಿವೇಶಗಳು ಹೃದಯ ಮುಟ್ಟುವಂತೆ ಚಿತ್ರಿಸುವುದರಲ್ಲಿ ನಿರ್ದೇಶಕ ಶಂಕರ್ ಗುರು ಗೆದ್ದಿದ್ದಾರೆ. ಧನಂಜಯ್, ಅಮೃತಾ ಅಯ್ಯಂಗಾರ್, ಶಂಕರ್ ಗುರು, ವಾಸುಕಿ ವೈಭವ್ ಸೇರಿದಂತೆ ಇಡೀ ಬಡವ ರಾಸ್ಕಲ್ ಟೀಂ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆ ಸಂಭ್ರಮ ಪಡುತ್ತಿದೆ.

    ಈ ಗೆಲುವು ನಮ್ಮ ನಿರ್ದೇಶಕರದ್ದು. ಅವರು ಒಳ್ಳೆಯ ಕಥೆ ಮಾಡಿಟ್ಟುಕೊಂಡು, ಸನ್ನಿವೇಶಗಳನ್ನು ಬರೆದು ಒಳ್ಳೆ ಚಿತ್ರ ಕೊಟ್ಟಿದ್ದಾರೆ. ಇದು ನಿರ್ದೇಶಕರ ಸಿನಿಮಾ ಎಂದಿದ್ದಾರೆ ಧನಂಜಯ್. ಇತ್ತೀಚೆಗೆ ಗೆಲುವಿನ ಕ್ರೆಡಿಟ್‍ನ್ನು ನಿರ್ದೇಶಕರೂ ಪಡೆಯುತ್ತಿರುವ ಅಪರೂಪದ ಪ್ರಸಂಗವಿದು.

  • ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

    ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

    ಶಿವರಾಜ್‍ಕುಮಾರ್, ಹಂಸಲೇಖ, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ರಚಿತಾ ರಾಮ್, ನಿಧಿ ಸುಬ್ಬಯ್ಯ..

    ಇವರೆಲ್ಲ ಬಡವ ರಾಸ್ಕಲ್ ಚಿತ್ರತಂಡದಲ್ಲಿಲ್ಲ. ಆದರೆ ಡಾಲಿಯ ಅಭಿಮಾನದ ಬಳಗದಲ್ಲಿರುವವರು. ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಾಪಕರೂ ಆಗಿರುವ ಚಿತ್ರ ಬಡವ ರಾಸ್ಕಲ್ ಚಿತ್ರಕ್ಕೆ ಶುಭ ಕೋರಲೆಂದು ಬಂದಿದ್ದವರು... ಡಾಲಿ ಧನಂಜಯ್ ಚಿತ್ರರಂಗದಲ್ಲಿ ಗಳಿಸಿರೋ ಆಸ್ತಿ ಬಡವ ರಾಸ್ಕಲ್ ಈವೆಂಟ್‍ನಲ್ಲಿ ಕಾಣುತ್ತಿತ್ತು.

    ಟಗರು ಮಾಡಿದಾಗ ಸಿನಿಮಾ ನೋಡಿದವರೆಲ್ಲ ನಿಮಗಿಂತ ಡಾಲಿ ಪಾತ್ರ ಚೆನ್ನಾಗಿದೆ ಎಂದಾಗ ಖುಷಿಯಾಯ್ತು. ಒಬ್ಬನೇ ಮೆರೆಯೋ ಆಸೆ ನನಗಿಲ್ಲ. 35 ವರ್ಷ ಆಗಿ ಹೋಗಿದೆ. ಈಗ ಧನಂಜಯ್ ನಿರ್ಮಾಪಕರಾಗಿದ್ದಾರೆ. ಒಳ್ಳೆಯದಾಗಲಿ. ನಾನು 24ನೇ ತಾರೀಕು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಆ ದಿನವೇ ಸಿನಿಮಾ ನೋಡಿ ಹೇಗಿದೆ ಅನ್ನೋದನ್ನ ಹೇಳ್ತೀನಿ ಎಂದು ವೇದಿಕೆಯಲ್ಲೇ ಭರವಸೆ ಕೊಟ್ಟರು ಶಿವ ರಾಜ್ ಕುಮಾರ್.

    ನಾನು ನನ್ನ ಚಿತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ.. ಎಂದು ಹಾಕಿಕೊಂಡಿದ್ದೇನೆ ಎಂದರೆ ಅವರು ನನಗೆ  ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಅಪ್ಪು ಸರ್ ಕೂಡಾ ನನಗೆ ಗೈಡ್ ಮಾಡಿದ್ದರು. ಪ್ರೊಡಕ್ಷನ್ ವೇಳೆ ಹಣ ಖರ್ಚು ಮಾಡುವಾಗ ಎಚ್ಚರಿಕೆಯಿರಲಿ, ಬಿಸಿನೆಸ್ ಮೇಲೆ ನಿಗಾ ಇರಲಿ ಎಂದಿದ್ದರು. ಮುಹೂರ್ತಕ್ಕೆ ಬರೋಕೆ ಆಗಲಿಲ್ಲ ಎಂದು ಕರೆಸಿಕೊಂಡು ಅವರೇ ಪೋಸ್ಟರ್ ರಿಲೀಸ್ ಮಾಡಿ ಬೆನ್ನು ತಟ್ಟಿದ್ದರು ಎಂದು ನೆನಪಿಸಿಕೊಂಡರು ಡಾಲಿ ಧನಂಜಯ್.

    ಬಡವ ರಾಸ್ಕಲ್ ಇದೇ ವಾರ ರಿಲೀಸ್ ಆಗುತ್ತಿದ್ದು, ಶಂಕರ್ ಗುರು ಡೈರೆಕ್ಷನ್ ಇದೆ. ಅಮೃತಾ ಅಯ್ಯಮಗಾರ್, ತಾರಾ, ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು.. ಮೊದಲಾದವರು ನಟಿಸಿರೋ ಸಿನಿಮಾ. ಹಾಡುಗಳು ಕ್ಲಿಕ್ ಆಗಿವೆ. ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಜಸ್ಟ್ ಎಂಜಾಯ್..

  • ಹಾಡೂ ಬೆಂಕಿ.. ಡಾಲಿ ಡ್ಯಾನ್ಸೂ ಬೆಂಕಿ.. ನಿನ್ ಮಕ್ಕೆ ಬೆಂಕಿ ಹಾಕ..

    ಹಾಡೂ ಬೆಂಕಿ.. ಡಾಲಿ ಡ್ಯಾನ್ಸೂ ಬೆಂಕಿ.. ನಿನ್ ಮಕ್ಕೆ ಬೆಂಕಿ ಹಾಕ..

    ಅರೆರೆರೇ.. ಡಾಲಿ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾರಾ.. ಬೆರಗು ಹುಟ್ಟಿಸುವಂತೆ ಸ್ಟೆಪ್ ಹಾಕಿದ್ದಾರೆ ಡಾಲಿ ಧನಂಜಯ್. ಬಡವ ರಾಸ್ಕಲ್ ಚಿತ್ರದ ನಿನ್ ಮಕ್ಕೆ ಬೆಂಕಿ ಹಾಕ.. ಹಾಡಿನಲ್ಲಿ ಡಾಲಿ ಸ್ಟೆಪ್ಪುಗಳು ವ್ಹಾವ್ ಎನ್ನುವಂತಿವೆ.

    ವಾಸುಕಿ ವೈಭವ್ ಅವರ ಟಪ್ಪಾಂಗುಚ್ಚಿ ಮ್ಯೂಸಿಕ್ಕು, ನಿರ್ದೇಶಕ ಶಂಕರ್ ಗುರು ಅವರದ್ದೇ ಸಾಹಿತ್ಯಕ್ಕೆ ಅಷ್ಟೇ ಎನರ್ಜಿ ಸಿಕ್ಕೋದು ಡಾಲಿ ಡ್ಯಾನ್ಸಿನಲ್ಲಿ. ಗೆಳತಿ ಕೈಕೊಟ್ಟ ನೋವಿನಲ್ಲಿ ಹೊಟ್ಟೆ ತುಂಬಾ ಹಾಕ್ಕೊಂಡು ಗೋಳು ಹೇಳಿಕೊಳ್ಳೋ ಹಾಡಿದು ಅನ್ನೋ ಸುಳಿವು ಸಾಹಿತ್ಯದಲ್ಲಿ ಸಿಕ್ಕುತ್ತೆ.

    ನಾಳೆ ರಿಲೀಸ್ ಆಗುತ್ತಿರೋ ಬಡವ ರಾಸ್ಕಲ್ ಹಲವಾರು ಕಾರಣಗಳಿಂದಾಗಿ ಗಮನ ಸೆಳೆಯುತ್ತಿದೆ. ಇದು ಡಾಲಿ ಬ್ಯಾನರ್ ಮೊದಲ ಸಿನಿಮಾ. ಒಂದಾನೊಂದು ಕಾಲದಲ್ಲಿ ಕೊರಿಯರ್ ಬಾಯ್ ಆಗಿದ್ದ ಡೈರೆಕ್ಟರ್ ಶಂಕರ್ ಗುರು ಅವರಿಗೂ ಇದು ಫಸ್ಟ್ ಸಿನಿಮಾ.