` producer jayanna, - chitraloka.com | Kannada Movie News, Reviews | Image

producer jayanna,

  • Rana Vikrama Audio On Ugadi - Exclusive

    rana vikrama image

    Puneeth Rajkumar’s most expected movie Rana Vikrama audio will be released on Ugadi Festival day. D Beats has got the rights of the songs. Recently movie shooting was completed in Italy. The film is directed by Pavan Wadeyar who made hit films like Govindaya Namaha and Googly. Film is produced by Jayanna and Bhogendra who recently had a success of Super hit with Mr and Mrs Ramachari.

    Is Puneeth plays a dual role in the film is the big question!

  • Shivanna's New Film S/o Bangarada Manushya - Exclusive

    bangarada manushya image

    The new film of Shivanna, Bangara, S/o Bangarada Manushya starts next week. The muharat of the film will be held on next Friday 15th January 2016. The date was finalised on Saturday after Shivanna had a meeting with producers Jayanna and Bhogendra.

    The film is directed by Yogi G Raj under Jayanna Combines banner. Since it is auspicious Sankranti, the muharata will be held that day. However shooting will commence once Shivanna completes shooting for Srikanta which is expected in 3-4 weeks.

    Meanwhile Shivanna's Killing Veerappan is doing great business at box office. Shivalinga and Santa Kabir will release in the next couple of months.

     

  • ನಿರ್ಮಾಪಕ ಜಯಣ್ಣಗೆ ದುಡ್ಡು ವಾಪಸ್ ಕೊಟ್ಟ ಯಶ್

    ನಿರ್ಮಾಪಕ ಜಯಣ್ಣಗೆ ದುಡ್ಡು ವಾಪಸ್ ಕೊಟ್ಟ ಯಶ್

    ನಿರ್ಮಾಪಕ ಜಯಣ್ಣ ಮತ್ತು ಯಶ್ ಅವರದ್ದು ಬೇರೆಯದೇ ರೀತಿಯ ಸಂಬಂಧ. ಯಶ್ ಸ್ಟಾರ್ ಆಗುವ ಹಾದಿಯಲ್ಲಿ ಯಶ್ ಅವರಿಗೆ ಅತೀ ಹೆಚ್ಚು ಸಿನಿಮಾ ಮಾಡಿದವರು ಜಯಣ್ಣ. ಜಾನು, ಡ್ರಾಮಾ, ಗೂಗ್ಲಿ, ಗಜಕೇಸರಿ, ಮಿ & ಮಿಸಸ್ ರಾಮಾಚಾರಿ.. ಹೀಗೆ ಯಶ್ ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಒಟ್ಟು 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈಗ ಕಿರಾತಕ 2 ಚಿತ್ರಕ್ಕೆ ಜಯಣ್ಣ ಖರ್ಚು ಮಾಡಿದ್ದ ಅಷ್ಟೂ ಹಣವನ್ನು ಹಿಂದಿರುಗಿಸಿದ್ದಾರೆ.

    ಕೆಜಿಎಫ್ ಮುಗಿದ ನಂತರ ಯಶ್ ಕಿರಾತಕ 2ಗೆ ಬಣ್ಣ ಹಚ್ಚಿದ್ದರು. ಗಡ್ಡ, ಕೂದಲಿಗೆ ಕತ್ತರಿಯೂ ಬಿದ್ದಿತ್ತು. 20 ದಿನಗಳ ಶೂಟಿಂಗ್ ಕೂಡಾ ಆಗಿತ್ತು. ಆದರೆ, ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವುದರೊಂದಿಗೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕಿರಾತಕ 2 ನೆನೆಗುದಿಗೆ ಬಿತ್ತು.

    ಕೆಲವು ಕಡೆ ಯಶ್ ಜಯಣ್ಣ ಅವರಿಗೆ 13 ಕೋಟಿ ವಾಪಸ್ ಕೊಟ್ಟಿದ್ದಾರೆ ಎಂದೆಲ್ಲ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಜಯಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.

    ಯಶ್ ಆ 20 ದಿನಗಳ ಒಟ್ಟು ಖರ್ಚನ್ನೂ ವಾಪಸ್ ಕೊಟ್ಟಿದ್ದಾರೆ. ಸ್ವಲ್ಪ ಹಣವನ್ನ ಸೇರಿಸಿಯೂ ಕೊಟ್ಟಿದ್ದಾರೆ. 13 ಕೋಟಿ ಅನ್ನೋದೆಲ್ಲ ಸುಳ್ಳು. ನಾನು ಬೇಡ ಎಂದರೂ ಯಶ್ ವಾಪಸ್ ಕೊಟ್ಟಿದ್ದಾರೆ. ಹಾಗಂತ ನಮ್ಮಿಬ್ಬರ ಬಾಂಧವ್ಯ ಹಾಳಾಗಿಲ್ಲ. ಮಂಡ್ಯ ನೇಟಿವಿಟಿ ಇರೋ ಕಿರಾತಕ 2 ಪ್ಯಾನ್ ಇಂಡಿಯಾಗೆ ಸೆಟ್ ಆಗಲ್ಲ ಎನ್ನುವುದಷ್ಟೇ ಕಾರಣ ಎಂದಿದ್ದಾರೆ ಜಯಣ್ಣ.

    ಸದ್ಯಕ್ಕೆ ಜಯಣ್ಣ ಭಜರಂಗಿ 2 ರಿಲೀಸ್ ಮಾಡೋಕೆ ರೆಡಿಯಾಗಿ ನಿಂತಿದ್ದಾರೆ. ಅತ್ತ ಯಶ್ ಕೆಜಿಎಫ್ 2 ನಂತರ ಮುಂದೇನು ಅನ್ನೋ ಗುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.

  • ರುಸ್ತುಂ ನೋಡಿದ್ರು ಪ್ರೊಡ್ಯೂಸರ್ ಜಯಣ್ಣ

    rustum producer happy after watching the movie

    ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಸಿನಿಮಾ ರಿಲೀಸ್ ಆಗಿದೆ. ಶಿವಣ್ಣನ ಜೊತೆ ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ನಟಿಸಿರುವ ಚಿತ್ರ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಸಾಮಾನ್ಯವಾಗಿ ತಮ್ಮ ನಿರ್ಮಾಣದ ಯಾವುದೇ ಸಿನಿಮಾಗಳನ್ನು ನೋಡದ ಜಯಣ್ಣ, ಈ ಚಿತ್ರವನ್ನು ಮಾತ್ರ ರಿಲೀಸ್‍ಗೂ ಮೊದಲೇ ನೋಡಿದ್ದಾರೆ. ಅಷ್ಟೇ ಅಲ್ಲ, ಕುಟುಂಬದವರೊಂದಿಗೆ ಇನ್ನೊಮ್ಮೆ ನೋಡುವ ಆಸೆ ತೋಡಿಕೊಂಡಿದ್ದಾರೆ. 

    ಕಾರಣ ಇಷ್ಟೆ, ರುಸ್ತುಂ ಕಲೆಕ್ಷನ್ ಭರ್ಜರಿಯಾಗಿದೆ. ಫೋನ್ ಮಾಡಿದವರು ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕುಟುಂಬದಲ್ಲಿ ನಡೆಯುವ ಸಮಸ್ಯೆಗಳನ್ನು ಚೆನ್ನಾಗಿ ತೋರಿಸಿದ್ದೀರಿ ಎಂದಿದ್ದಾರಂತೆ. 

    ಇದೆಲ್ಲದರ ನಡುವೆ ಸಿನಿಮಾವನ್ನು ಇಡೀ ಇಂಡಿಯಾದಲ್ಲಿ ಡಬ್ ಮಾಡಿ ರಿಲೀಸ್ ಮಾಡೋಕೆ ಜಯಣ್ಣ ರೆಡಿಯಾಗುತ್ತಿದ್ದಾರೆ. ಡಬ್ಬಿಂಗ್ ರೈಟ್ಸ್‍ಗೆ ಒಳ್ಳೆಯ ಡಿಮ್ಯಾಂಡ್ ಕೂಡಾ ಇದೆ. ಏಕೆಂದರೆ, ವಿವೇಕ್ ಒಬೇರಾಯ್‍ಗೆ ಹಿಂದಿಯಲ್ಲಿ, ಶ್ರದ್ಧಾ ಶ್ರೀನಾಥ್‍ಗೆ ತಮಿಳಿನಲ್ಲಿ ಬೇಡಿಕೆ ಇದೆ. ಜೊತೆಗೆ ಚಿತ್ರದಲ್ಲಿ ಬಿಹಾರದ ಕಥೆ ಇದೆ. ಈ ಎಲ್ಲದರ ಜೊತೆಗೆ ಚಿತ್ರದ ನಿರ್ದೇಶಕ ರವಿವರ್ಮ, ಬಾಲಿವುಡ್‍ನಲ್ಲಿ ಚಿರಪರಿಚಿತವಾದ ಹೆಸರು. ಇವೆಲ್ಲವೂ ಚಿತ್ರಕ್ಕೆ ಪ್ಲಸ್ ಆದರೆ, ರುಸ್ತುಂ, ಹಿಂದಿ, ತಮಿಳು, ತೆಲುಗಿನಲ್ಲೂ ಭರ್ಜರಿ ಸದ್ದು ಮಾಡಲಿದೆ.