` kavaludari, - chitraloka.com | Kannada Movie News, Reviews | Image

kavaludari,

  • 'Kavalu Daari' Audio Release On March 5th

    kavalu daari audio release on march 5th

    Rishi starrer 'Kavalu Daari' is complete and the film is likely to be released in the end of March. Meanwhile, the audio release is scheduled on the 05th of March. The songs of the film is being released through PRK Audio.

    'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. Hemanth  himself has written the story and screenplay for the film. Ananth Nag, Avinash, Achyuth Kumar, Suman Ranganath plays prominent roles in the film.

    The film is being produced by Ashwini Puneeth Rajakumar under the PRK Productions banner. Charan Raj is the music director, while Advaitha Gurumurthy is the cameraman.

  • Kavalu Daari' finally on 12th April

    kavaludaari finally on 12th april

    The release date of PRK Productions first production 'Kavalu Daari' has finally been fixed and the film is all set to release on the 12th of April.

    Actor Puneeth Rajakumar launched PRK Productions almost two years back and 'Kavalu Daari' was launched as the first film of PRK Productions. The film got delayed due to various reasons and even before the release of 'Kavalu Daari', Puneeth has started three more films called' Mayabazaar 2016', 'Production No 3' and 'Law'. Now 'Kavalu Daari' will be releasing first and the other three films which are in various stages of production will follow soon.

    'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. Rishi, Ananth Nag, Avinash, Achyuth Kumar, Suman Ranganath plays prominent roles in the film. The film is being produced by Ashwini Puneeth Rajakumar under the PRK Productions banner.

  • ಅನಂತ್ ನಾಗ್ ಸಂದರ್ಶನ ಮಾಡಿದ ಅಪ್ಪು 

    puneeth rajkumar interviws ananth nag

    ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಬಿಡುಗಡೆಗೆ ಮುನ್ನ ಪ್ರಮೋಷನ್‍ಗೆ ಮುಂದಾಗಿದೆ ಚಿತ್ರತಂಡ. ಅದರ ನೇತೃತ್ವ ವಹಿಸಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಬ್ಬರಾದ ನಟ ಅನಂತ್‍ನಾಗ್ ಅವರನ್ನು ಖುದ್ದು ಪುನೀತ್ ಅವರೇ ಸಂದರ್ಶನ ಮಾಡಿದ್ದಾರೆ.

    ಚಿಕ್ಕ ಹುಡುಗನಾಗಿದ್ದಾಗ ನನಗೆ ನಿಮಗಿಂತ ಶಂಕರ್ ನಾಗ್ ಅವರೇ ಇಷ್ಟ ಎಂದು ನೇರವಾಗಿ ಅನಂತ್ ಅವರಲ್ಲೇ ಹೇಳಿದ್ದ ಅಪ್ಪು, ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಗಿ ಸಂದರ್ಶನ ಮಾಡಿರುವುದೇ ವಿಶೇಷ.

    ಪುನೀತ್‍ನನ್ನು ನಾನು ಚಿಕ್ಕಂದಿನಿಂದ ನೋಡಿದ್ದೇನೆ. ನಾನು ವಜ್ರೇಶ್ವರಿ ಕಂಬೈನ್ಸ್‍ನಲ್ಲೂ ನಟಿಸಿದ್ದೇನೆ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿಯೂ ನಟಿಸಿದ್ದೇನೆ. ಚಿಕ್ಕ ಹುಡುಗನಾಗಿದ್ದ ಪುನೀತ್, ಈಗ ದೊಡ್ಡ ಸ್ಟಾರ್ ಆಗಿ, ನಿರ್ಮಾಪಕನಾಗಿ ಸಿನಿಮಾ ಮಾಡಿದ್ದಾರೆ. ಅದೆಲ್ಲವನ್ನೂ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದೇನೆ ಎಂದಿದ್ದಾರೆ ಅನಂತ್ ನಾಗ್.

  • ಕವಲುದಾರಿ ಮಾರ್ಚ್‍ನಲ್ಲಿ ರಿಲೀಸ್

    kavaludari will release in march

    ಪುನೀತ್ ರಾಜ್‍ಕುಮಾರ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ ಕವಲುದಾರಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಹೆಚ್ಚೂ ಕಡಿಮೆ ಒಂದು ವರ್ಷದ ಹಿಂದೆ ಶುರುವಾಗಿದ್ದ ಸಿನಿಮಾ, ಬಹುತೇಕ ಪೋಸ್ಟ್ ಪ್ರೊಡಕ್ಷನ್ ಮುಗಿಸಿದೆ. ಚಿತ್ರದ ನಿರ್ದೇಶಕ ಹೇಮಂತ್ ರಾವ್, ಬಾಲಿವುಡ್‍ನ ಅಂಧಾದುನ್ ಚಿತ್ರದಲ್ಲಿ ಬ್ಯುಸಿಯಾದ ಕಾರಣ ವಿಳಂಬವಾಗಿದ್ದ ಕವಲುದಾರಿಗೆ ಮಾರ್ಚ್ ತಿಂಗಳಲ್ಲಿ ಮೋಕ್ಷ.

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ, ಅಂಧಾದುನ್ ಎಂಬ ಹಿಟ್ ಸಿನಿಮಾದಲ್ಲೂ ಕೆಲಸ ಮಾಡಿದ ನಿರ್ದೇಶಕ ಹೇಮಂತ್ ರಾವ್ ಕಾನ್ಫಿಡೆನ್ಸ್ ಈಗ ಡಬಲ್ ಆಗಿದೆ. ಇದೂ ಕೂಡಾ ಕ್ರೈಂ ಥ್ರಿಲ್ಲರ್. ಪುಟ್ಟ ಹುಡುಗಿಯ ಕೊಲೆ, ಆ ಕೊಲೆಯ ಬೆನ್ನು ಹತ್ತುವ ಟ್ರಾಫಿಕ್ ಪೊಲೀಸ್.. ಆಗ ಎದುರಾಗುವ ಮಾನಸಿಕ ಸವಾಲುಗಳು ಚಿತ್ರದ ಕಥೆ. 

    ರಿಷಿ, ರೋಶಿನಿ ಪ್ರಕಾಶ್, ಸುಮನ್ ರಂಗನಾಥ್ ಮೊದಲಾದವರು ನಟಿಸಿರುವ ಸಿನಿಮಾದಲ್ಲಿ ಅನಂತ್ ನಾಗ್ ಅವರದ್ದು ಪ್ರಮುಖ ಪಾತ್ರ. 

  • ಕವಲುದಾರಿಯಲ್ಲಿ ಪುನೀತ್ ಏಕೆ ನಟಿಸಿಲ್ಲ..? - ನಿರ್ದೇಶಕರು ಹೇಳಿದ್ದು

    hemanth rao praises puneeth for kavaludaari

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇದೇ ಮೊದಲ ಬಾರಿಗೆ ತಮ್ಮದೇ ಸ್ವಂತ ಬ್ಯಾನರ್ ಮೂಲಕ ಕವಲುದಾರಿ ಸಿನಿಮಾ ನಿರ್ಮಿಸಿದ್ದಾರೆ. ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುವುದು ಪುನೀತ್ ಗುಣ. ಹೊಸಬರ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸುವುದು, ಅವರ ಚಿತ್ರಗಳಲ್ಲಿ ಹಾಡುವುದು, ಹಿನ್ನೆಲೆ ಧ್ವನಿ ನೀಡುವುದು, ವಿಡಿಯೋ ಮೂಲಕ ಸಿನಿಮಾ ಪ್ರಚಾರ ಮಾಡುವುದು.. ಹೀಗೆ ಹಲವು ರೀತಿಯಲ್ಲಿ ಸಪೋರ್ಟ್ ಮಾಡ್ತಾರೆ. ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ನಂತರ, ಇದೀಗ ಪಡ್ಡೆಹುಲಿ ಚಿತ್ರದಲ್ಲಿ ಅತಿಥಿ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರಕವಲುದಾರಿಯಲ್ಲಿ ಅವರಿಲ್ಲ. ಏಕೆ..?

    ಪುನೀತ್ ನನಗೆ ಪೃಥ್ವಿ ಚಿತ್ರದ ಕಾಲದಿಂದಲೂ ಗೊತ್ತು. ನಾನಾಗ ಅಸಿಸ್ಟೆಂಡ್ ಡೈರೆಕ್ಟರ್. ಪುನೀತ್ ಅವರಿಗೆ ಈ ಕಥೆ ಹೇಳಿದಾಗ, ಅವರು ತಾವೇ ಚಿತ್ರ ನಿರ್ಮಿಸುವ ಉತ್ಸಾಹ ತೋರಿಸಿದರು. ಪುನೀತ್ ಅವರಿಗೆ ಒಂದು ಪಾತ್ರ ಸೃಷ್ಟಿಸುವುದು ಕಷ್ಟವೇನೂ ಆಗಿರಲಿಲ್ಲ. ಆದರೆ, ನನಗೆ ನನ್ನ ಕಥೆಯ ಮೇಲೆ ನಂಬಿಕೆಯಿತ್ತು. ಆ ನಂಬಿಕೆ ಅವರಿಗೂ ಇತ್ತು. ಹೀಗಾಗಿಯೇ, ನಿರ್ಮಾಪಕರಾದರೂ.. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರಲಿಲ್ಲ ಎಂದಿದ್ದಾರೆ ನಿರ್ದೇಶಕ ಹೇಮಂತ್ ರಾವ್.

    ನಿರ್ಮಾಪಕರಾದರೂ, ಪುನೀತ್ ಅವರನ್ನು ಹೇಮಂತ್ ನೋಡಿದ್ದು ಅಪರೂಪವಂತೆ. ನಿರ್ದೇಶಕರಿಗೆ ಒಬ್ಬ ನಿರ್ಮಾಪಕರಾಗಿ ಏನೇನೆಲ್ಲ ಅಗತ್ಯತೆಗಳನ್ನು ಒದಗಿಸಬೇಕೋ.. ಅದರಲ್ಲಿ ಕೊಂಚ ವ್ಯತ್ಯಾಸವೂ ಆಗಲಿಲ್ಲ. ಅವರೊಬ್ಬ ಪ್ರೊಫೆಷನಲ್ ಕಲಾವಿದ ಅಷ್ಟೇ ಅಲ್ಲ, ಪ್ರೊಫೆಷನಲ್ ನಿರ್ಮಾಪಕ ಎಂದಿದ್ದಾರೆ ಹೇಮಂತ್ ರಾವ್.

    ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಕಥಾ ಹಂದರ ಇರುವ ಕವಲುದಾರಿಯಲ್ಲಿ ಅನಂತ್‍ನಾಗ್, ರಿಷಿ, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್, ಅವಿನಾಶ್, ಸುಮನ್ ರಂಗನಾಥ್ ನಟಿಸಿದ್ದಾರೆ. 

  • ಡೈರೆಕ್ಟರ್ ಹೇಮಂತ್‍ಗೆ ಅನಂತ್‍ನಾಗ್ ಪ್ರಶಸ್ತಿ

    director hemanth rao gets appreciation from ananth nag

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಅನಂತ್‍ನಾಗ್ ಪ್ರಶಸ್ತಿ ಸಿಕ್ಕಿದೆ. ಯಾರು..? ಯಾವಾಗ..? ಎಂದು ಕೇಳಬೇಡಿ. ಕೊಟ್ಟಿರುವುದು ಸ್ವತಃ ಅನಂತ್‍ನಾಗ್. ನಿರ್ದೇಶಕ ಹೇಮಂತ್ ಅವರನ್ನು ಮನಸಾರೆ ಮೆಚ್ಚಿಕೊಂಡಿರುವ ಅನಂತ್, ಹೇಮಂತ್‍ಗೆ ಮೆಚ್ಚುಗೆಯ ಅಭಿಮಾನದ ಪ್ರಶಸ್ತಿ ನೀಡಿದ್ದಾರೆ.

    ಒಬ್ಬ ಹುಡುಗ ಬಂದಿದ್ದ. ನೋಡೋಕೆ ಚೆನ್ನಾಗಿದ್ದ. ಎಂಜಿನಿಯರ್ ಅಂತೆ, ಮುಖದಲ್ಲಿ ಸಿನ್ಸಿಯಾರಿಟಿ ಇದೆ. ಅಲ್ಲೊಂದು ಸ್ಕ್ರಿಪ್ಟ್ ಕೊಟ್ಟು ಹೋಗಿದ್ದಾರೆ.. ನೋಡಿ.. ಎಂದು ಅನಂತ್‍ಗೆ ಮೊದಲು ಹೇಳಿದ್ದವರು ಗಾಯತ್ರಿ. ಅದು ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸ್ಕ್ರಿಪ್ಟ್. ಪತ್ನಿಯ ಮಾತು ಕೇಳಿದ ಒಂದೆರಡು ದಿನಗಳ ನಂತರ ಸ್ಕ್ರಿಪ್ಟ್ ಕೈಗೆತ್ತಿಕೊಂಡ ಅನಂತ್‍ನಾಗ್‍ಗೆ ಸ್ಕ್ರಿಪ್ಟ್ ಪ್ರತಿ ಹಂತದಲ್ಲೂ ಇಷ್ಟವಾಗುತ್ತಾ ಹೋಯ್ತು. ತಕ್ಷಣ ಹೇಮಂತ್‍ಗೆ ಕರೆ ಮಾಡಿ ತಮ್ಮನ್ನು ಭೇಟಿ ಮಾಡಲು ಹೇಳಿದರು. ಆಗ ಹೇಮಂತ್ ಬ್ರಿಟಿಷ್ ಮತ್ತು ಅಮೆರಿಕನ್ ಶೈಲಿಯ ಸಿನಿಮಾಗಳ ಬಗ್ಗೆ ಮಾತನಾಡಿದಾಗ ನನ್ನ ನಂಬಿಕೆ ಗಟ್ಟಿಯಾಯ್ತು. ಹೀಗೆ ಹೇಳುತ್ತಾ ಹೋಗುವ ಅನಂತ್, ಗೋಬಸಾಮೈ ಚಿತ್ರವನ್ನು ರಿಲೀಸ್‍ಗೂ ಮೊದಲೇ ನೋಡಿದ್ದರಂತೆ. ತಮ್ಮ ಚಿತ್ರಗಳನ್ನಷ್ಟೇ ಅಲ್ಲ,  ಸಾಧಾರಣವಾಗಿ ಸಿನಿಮಾಗಳನ್ನೇ ಕಡಿಮೆ ನೋಡುವ ಅನಂತ್‍ನಾಗ್‍ಗೆ ಚಿತ್ರವೂ ಇಷ್ಟವಾಯ್ತು. ಹೀಗಾಗಿಯೇ ಕವಲುದಾರಿ ಚಿತ್ರವನ್ನು ಒಪ್ಪಿಕೊಂಡೆ. ಹೇಮಂತ್ ಒಬ್ಬ ಭರವಸೆಯ ನಿರ್ದೇಶಕ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅನಂತ್.

    ಕವಲುದಾರಿ ಚಿತ್ರದ ಸ್ಕ್ರಿಪ್ಟ್‍ನ್ನು ನೀಡದೆ, ನೆರೇಷನ್ ನೀಡಿದ್ದರಂತೆ ಹೇಮಂತ್. ಆ ನರೇಷನ್ ಬಹಳ ಇಷ್ಟವಾಯ್ತು. ಹೀಗಾಗಿ ಒಪ್ಪಿಕೊಂಡೆ, ಚಿತ್ರದಲ್ಲಿ ಮತ್ತೊಮ್ಮೆ ಹೇಮಂತ್ ಆ ಭರವಸೆ ಉಳಿಸಿಕೊಂಡಿದ್ದಾರೆ ಎಂದಿದ್ದಾರೆ ಅನಂತ್‍ನಾಗ್.

    ಕವಲುದಾರಿ ಚಿತ್ರದಲ್ಲಿ ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ರೋಷನಿ ಪ್ರಕಾಶ್, ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. 

  • ಪುನೀತ್ ಕವಲುದಾರಿಯಲ್ಲಿ ಎಲೆಕ್ಷನ್ ಸದ್ದು

    kavaludaari trailer spikes interest

    ಕವಲುದಾರಿಯಲ್ಲಿ ಇರೋ ಕಥೆ ಏನು..? ಅದು ಮರ್ಡರ್ ಮಿಸ್ಟರಿಯಾ..? ರಾಜಕೀಯ ಮೋಸ ದ್ವೇಷದ ಕಥೆಯಾ..? ಮೋಹ ಮೋಸದ ಕಥೆಯಾ..? ಎರಡು ನಿಮಿಷದ ಟ್ರೇಲರ್, ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿಬಿಡುತ್ತೆ. ಪುನೀತ್ ರಾಜ್‍ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಕವಲುದಾರಿ. ಹೇಮಂತ್ ರಾವ್ ಟ್ರೇಲರ್‍ನಲ್ಲಿ ಫಸ್ಟ್ ಕ್ಲಾಸ್ ಸ್ಕೋರ್ ಮಾಡಿದ್ದಾರೆ.

    ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷಿನಿ ಪ್ರಕಾಶ್.. ಹೀಗೆ ಚಿತ್ರತಂಡದ ಕಲಾವಿದರು ಕೇವಲ ಪಾತ್ರವಾಗಿದ್ದಾರೆ. ಅನಂತ್ ನಾಗ್ ಮತ್ತು ರಿಷಿ, ರಹಸ್ಯ ಬೇಧಿಸುವವರಂತೆ ಕಾಣುತ್ತಾರೆ. ಸುಮನ್ ರಂಗನಾಥ್ ರಹಸ್ಯವನ್ನೆಲ್ಲ ಮುಚ್ಚಿಟ್ಟುಕೊಂಡಿರುವಂತೆ ಕಾಣುತ್ತಾರೆ. ಚರಣ್‍ರಾಜ್ ಸಂಗೀತವೂ ಟ್ರೇಲರ್‍ನ ತಾಕತ್ತು ಹೆಚ್ಚಿಸಿದೆ.