` yuvaratna, - chitraloka.com | Kannada Movie News, Reviews | Image

yuvaratna,

  • Yuvaratna' Teaser On October 7th

    yuvaratna teaser on october 7th

    Director Santhosh Anandaram had earlier announced that the first team of Puneeth starrer 'Yuvaratna' will be released during the Dasara season. But the well known director had not announced on which day the teaser will be announced. Now the release date has been fixed and the 'Yuvaratna' will be released on the 07th of October at 5.30 PM.

    Yes, the teaser of 'Yuvaratna' is all set to be released on the 07th of October at 5.30 PM in the Hombale Films channel of the You Tube. The teaser will also be released at the Santhosh Theater in Bangalore officially.

    'Yuvaratna' is scripted and directed by Santhosh Anandaram and produced by Vijay Kiragandoor under Hombale Films. Sayesh Sehgal is the heroine. Prakash Rai,  Dhananjay, John Kokken, Diganth, Sonu and others play prominent roles in the film. S S Thaman is the music composer.

  • Yuvaratna' Teaser Released

    yuvaratna teaser released

    The first teaser of Puneeth Rajkumar starrer 'Yuvaratna' was released on Monday evening in the Hombale Films channel of You Tube. The teaser depicts Puneeth playing the game of Rugby and winning it.

    Director Santhosh Anandaram had earlier announced that the first teaser of 'Yuvaratna' will be released on the 07th of October at 5.30 PM. Accordingly, the teaser was released and is getting good response, especially about Puneeth's dialogues and the making.

    'Yuvaratna' is scripted and directed by Santhosh Anandaram and produced by Vijay Kiragandoor under Hombale Films. Sayesh Sehgal is the heroine. Prakash Rai,  Dhananjay, John Kokken, Diganth, Sonu and others play prominent roles in the film. S S Thaman is the music composer.

  • ಅ.7.. ಸಂಜೆ 5.30.. ಯುವರತ್ನ ಹಬ್ಬ ಆರಂಭ

    yuvaratna teaser date fixed

    ಯುವರತ್ನ ಟೀಸರ್ ಯಾವಾಗ..? ಟ್ರೇಲರ್ ಯಾವಾಗ..? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನು ಕಾಡಿದ್ದ ಪುನೀತ್ ಅಭಿಮಾನಿಗಳು, ಕೊನೆಗೆ ತಾವೇ ಬಿಡುಗಡೆ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದರು. ಅಭಿಮಾನಿಗಳ ಈ ಪ್ರೀತಿಯ ಕಾಟಕ್ಕೆ ಮಣಿದ ಸಂತೋಷ್ ಆನಂದ್ ರಾಮ್, ಚಿತ್ರದ ಪ್ರೊಡಕ್ಷನ್ ಹಂತದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಯುವರತ್ನ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ.

    ಅಕ್ಟೋಬರ್ 7ರ ಹಬ್ಬದಂದು ಸಂಜೆ 5.30ಕ್ಕೆ ಹೊಂಬಾಳೆ ಫಿಲಂಸ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಯುವರತ್ನ ಟೀಸರ್ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ಟೀಸರ್‍ನ ಡಬ್ಬಿಂಗ್ ಮುಗಿಸಿದ್ದೇನೆ ಎಂದು ವಿಷಯ ತಿಳಿಸಿದ್ದರು ಪುನೀತ್.

    ಸ್ಸೋ.. ಗೆಟ್ ರೆಡಿ ಟು ಯುವರತ್ನ ಟೀಸರ್.

  • ಅಪ್ಪು + ಪೃಥ್ವಿ = ಯುವರತ್ನ..?

    ಅಪ್ಪು + ಪೃಥ್ವಿ = ಯುವರತ್ನ..?

    ಯುವರತ್ನ ಚಿತ್ರದ ಟ್ರೇಲರ್ ನೋಡಿದವರಿಗೆ ಕಾಡುತ್ತಿರೋ ಪ್ರಶ್ನೆ ಇದು. ಅಪ್ಪು, ಪುನೀತ್ ಹೀರೋ ಆಗಿ ನಟಿಸಿದ ಫಸ್ಟ್ ಮೂವಿ. ಡೋಂಟ್ ಕೇರ್.. ಗೋಲಿಮಾರ್ ಶೈಲಿಯ ಕ್ಯಾರೆಕ್ಟರ್ ಅದು. ಅಂತಹ ಪಾತ್ರವನ್ನು ಮತ್ತೊಮ್ಮೆ ಇನ್ನೊಬ್ಬರು ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ಅಷ್ಟೊಂದು ಫೋರ್ಸ್ ಇದ್ದ ಪಾತ್ರ ಅಪ್ಪು. ಯುವರತ್ನದಲ್ಲಿ ಅಂತಹದೊಂದು ಶೇಡ್ ಕಾಣಿಸ್ತಿರೋದು ಸತ್ಯ.

    ಇನ್ನೊಂದು ಪೃಥ್ವಿ. ಪುನೀತ್ಗೆ ಬೇರೆಯದೇ ಇಮೇಜ್ ಕೊಟ್ಟ ಜಿಲ್ಲಾಧಿಕಾರಿಯ ಪಾತ್ರ. ಆ ಚಿತ್ರವನ್ನು ನೋಡಿ ಪ್ರಕಾಶ್ ರೈ ಸ್ವತಃ ಪುನೀತ್ ಅವರಿಗೆ ಪೋನ್ ಮಾಡಿ ಸೂಪರ್ ಎಂದಿದ್ದರಂತೆ. ಈಗ ಯುವರತ್ನ ನೋಡಿದವರಿಗೆ ಕಾಡುತ್ತಿರೋದು ಇದೇ ಪ್ರಶ್ನೆ. ಪುನೀತ್ ಅವರಿಗೆ ಚಿತ್ರದಲ್ಲಿ ಅಪ್ಪು ಮತ್ತು ಪೃಥ್ವಿ ಎರಡೂ ಪಾತ್ರಗಳ ಶೇಡ್ ಇದೆಯಾ..?

    ಈ ಪ್ರಶ್ನೆಗೆ ಪುನೀತ್ ಅವರ ಉತ್ತರ ಹೌದು. ಹಾಗಾದರೆ ಕಥೆ ಏನು ಎಂದರೆ.. ನೋ.. ಅದನ್ನೆಲ್ಲ ಕೇಳೋದಿದ್ರೆ ಸಂತೋಷ್ ಆನಂದ ರಾಮ್ ಅವರನ್ನೇ ಕೇಳಿ ಅಂತಾರೆ ಅಪ್ಪು. ಸದ್ಯಕ್ಕಂತೂ ಪುನೀತ್ ಅವರಿಗೆ ಯುವರತ್ನ ಚಿತ್ರದ ಕಥೆ ಮತ್ತು ಸಿನಿಮಾ ಇಷ್ಟವಾಗಿದೆ. ಒಂದೊಳ್ಳೆ ಮನರಂಜನೆ ಮತ್ತು ಸಂದೇಶ ಎರಡೂ ಇರೋ ಸಿನಿಮಾ. ನೋಡಿ ಎನ್ನುತ್ತಿರೋ ಅಪ್ಪುಗೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  • ಅಪ್ಪು ಫಿಟ್`ನೆಸ್‍ಗೆ ಕ್ಯಾಪ್ಟನ್ ಕೂಲ್ ಕೂಡಾ ಫಿದಾ

    ಅಪ್ಪು ಫಿಟ್`ನೆಸ್‍ಗೆ ಕ್ಯಾಪ್ಟನ್ ಕೂಲ್ ಕೂಡಾ ಫಿದಾ

    ಯುವರತ್ನ ಚಿತ್ರದ ಮೂಲಕ ಮತ್ತೊಂದು ಸೆನ್ಸೇಷನ್ ಸೃಷ್ಟಿಸೋಕೆ ಬರುತ್ತಿರೋ ಪುನೀತ್ ರಾಜ್‍ಕುಮಾರ್, ಫಿಟ್ & ಫೈನ್ ಅನ್ನೋದನ್ನ ಹೇಳೋ ಅಗತ್ಯವೇ ಇಲ್ಲ. ಎಷ್ಟೋ ಜನರಿಗೆ ಫಿಟ್ ಆಗೋಕೆ ಅಪ್ಪು ಸ್ಫೂರ್ತಿ. ಅವರ ಕೆಲವು ವಿಡಿಯೋಗಳು ಮೈ ಝುಮ್ಮೆನಿಸುವುದೂ ಸತ್ಯ. ಹಾಗೆ ವ್ಹಾವ್ ಎಂದವರಲ್ಲಿ ಭಾರತ ಟೀಂ ಕ್ಯಾಪ್ಟನ್ ಆಗಿದ್ದ, ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕೂಲ್ ಧೋನಿ ಕೂಡಾ ಇದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲದೇ ಇದ್ದ ಸತ್ಯ.

    ಲಾಕ್ ಡೌನ್ ವೇಳೆ ಪುನೀತ್ ತಾವು ವ್ಯಾಯಾಮ ಮಾಡುವ ವಿಡಿಯೋಗಳನ್ನು ಬಿಟ್ಟು ಫಿಟ್‍ನೆಸ್ ಸಂದೇಶ ಕೊಡುತ್ತಿದ್ದರು. ಆ ವಿಡಿಯೋ ನೋಡಿ ವ್ಹಾವ್ ಎಂದಿದ್ದರಂತೆ ಧೋನಿ. ಧೋನಿ ಮತ್ತು ಪುನೀತ್ ಇಬ್ಬರಿಗೂ ಒಬ್ಬರು ಕಾಮನ್ ಫ್ರೆಂಡ್ ಇದ್ದಾರೆ. ಅವರು ಧೋನಿಗೆ ಪುನೀತ್ ಅವರ ನಂಬರ್ ಕೊಟ್ಟು ಮಾತನಾಡಿಸಿದ್ದಾರೆ. ಇದೆಲ್ಲವನ್ನೂ ಯುವರತ್ನ ನಿರ್ದೇಶಕ ಸಂತೋಷ್ ಆನಂದರಾಮ್ ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

  • ಅಪ್ಪು ಮತ್ತೆ ಬಾಕ್ಸರ್ In ಯುವರತ್ನ..!!

    puneth to once again play boxer in yuvaratna

    ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿದ್ಯಾರ್ಥಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಸಿನಿಮಾದ ಟೀಸರ್ ನೋಡಿದವರಿಗೆ ಅಪ್ಪು ಬ್ಯಾಸ್ಕೆಟ್ ಬಾಲ್ ಆಟಗಾರ ಎನ್ನುವುದೂ ಗೊತ್ತಾಗುತ್ತೆ. ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸದೊಂದು ಫೋಟೋ ಹೊರಬಿಟ್ಟಿದ್ದಾರೆ. ಆ ಫೋಟೋ ಪ್ರಕಾರ ಪುನೀತ್ ಬಾಕ್ಸರ್.

    ಫೋಟೋದಲ್ಲಿ ಪುನೀತ್ ಅಷ್ಟೇ ಅಲ್ಲ, ಡಾಲಿ ಧನಂಜಯ್ ಕೂಡಾ ಇದ್ದಾರೆ. ಅಂದ್ರೆ ಡಾಲಿ ಮತ್ತು ಅಪ್ಪು ಜೊತೆ ಬಾಕ್ಸಿಂಗ್ ರಿಂಗ್‌ನಲ್ಲಿ ಗುದ್ದಾಟ ಫಿಕ್ಸ್ ಅನ್ನೋದು ಕನ್ಫರ್ಮ್. ಅಂದಹಾಗೆ ಇದು Climax ದೃಶ್ಯದ ಸೀನ್ ಅಂತೆ.

    ಈ ಹಿಂದೆ ಮೌರ್ಯ ಹಾಗೂ ಅಣ್ಣಾಬಾಂಡ್ ಚಿತ್ರಗಳಲ್ಲಿ ಪುನೀತ್ ಬಾಕ್ಸರ್ ಆಗಿಯೇ ನಟಿಸಿದ್ದರು. ಈಗ ಮತ್ತೊಮ್ಮೆ ಬಾಕ್ಸರ್ ಅವತಾರವೆತ್ತಿದ್ದಾರೆ.

  • ಅಪ್ಪುಗಿಂತ ಯಂಗ್ ಈ ಯುವ ಪವರ್ ಸ್ಟಾರ್

    puneeth rajkumar yuvarathna image

    ಅಭಿಮಾನಿ ದೇವರುಗಳ ಒತ್ತಡ, ಪ್ರೀತಿಗೆ ತಕ್ಕಂತೆಯೇ ಹೊರಬಿದ್ದಿದೆ ಯುವರತ್ನ ಟೀಸರ್. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರದ ಟೀಸರ್ ನೋಡಿ ಫ್ಯಾನ್ಸ್ ಫಿದಾ ಆಗೋಕೆ ಕಾರಣ, ಪವರ್ ಸ್ಟಾರ್ ಪುನೀತ್ ಅವರ ಲುಕ್ಕು.

    ಇಡೀ ಟೀಸರ್‍ನಲ್ಲಿ ಕಾಣಿಸಿಕೊಂಡಿರೋದು ರಗ್ಬಿ ಆಟಗಾರ ಪುನೀತ್. ಆರ್‍ಕೆ ಅನ್ನೋ ಟೀ ಶರ್ಟ್ ಇದೆ. ಆರ್‍ಕೆ ಅಂದ್ರೆ ರಾಜ್‍ಕುಮಾರ್ ಅನ್ನೋದು ಅಭಿಮಾನಿಗಳ ಲೆಕ್ಕ. ಈ ದುನಿಯಾದಲ್ಲಿ ಮೂರು ತರಹದ ಗಂಡಸರು ಇರ್ತಾರೆ. ಒಂದು ರೂಲ್ಸ್ ಫಾಲೋ ಮಾಡೋರು.. ಇನ್ನೊಂದು ರೂಲ್ಸ್ ಬ್ರೇಕ್ ಮಾಡೋರು.. ಮೂರನೆಯವರು ನನ್ ತರಹಾ.. ರೂಲ್ಸ್ ಮಾಡೋರು.. ಇದು ಪುನೀತ್ ಡೈಲಾಗ್.

    ಅಭಿಮಾನಿಗಳಿಗೆ ಡೈಲಾಗ್, ಮೇಕಿಂಗ್‍ನಷ್ಟೇ ಥ್ರಿಲ್ ಕೊಟ್ಟಿರೋದು ಪುನೀತ್ ಲುಕ್. ಪುನೀತ್ ಅದೆಷ್ಟು ಯಂಗ್ ಆಗಿ ಕಾಣ್ತಿದ್ದಾರೆ ಅಂದ್ರೆ ಪುನೀತ್ ಅವರು ಹೀರೋ ಆಗಿ ನಟಿಸಿದ ಮೊದಲ ಚಿತ್ರ ಅಪ್ಪುಗಿಂತಲೂ ಯಂಗ್ ಆಗಿದ್ದಾರೆ. ಕ್ರೆಡಿಟ್ಟು ಸಂತೋಷ್ ಆನಂದ್‍ರಾಮ್ ಅವರದ್ದು. ವಿಜಯ್ ಕಿರಗಂದೂರು ಬ್ಯಾನರಿನಲ್ಲಿ ಬರುತ್ತಿರೋ ಯುವರತ್ನ ಮತ್ತೊಂದು ರಾಜಕುಮಾರ ಆಗಲಿ ಎನ್ನುವುದು ಹಾರೈಕೆ.

     

  • ಅಪ್ಪುಗೆ ರಾಮ್-ಲಕ್ಷ್ಮಣ್ ಪವರ್

    yuvaratna gets ram lakshman's boost

    ತೆಲುಗು, ತಮಿಳು ಚಿತ್ರರಂಗದ ಸ್ಟಾರ್ ಸ್ಟಂಟ್ ಮಾಸ್ಟರ್‍ಗಳು ಪವರ್ ಸ್ಟಾರ್ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ಅವರ ಯುವರತ್ನ ಚಿತ್ರಕ್ಕೆ ರಾಮ್-ಲಕ್ಷ್ಮಣ್ ಸ್ಟಂಟ್ ಮಾಸ್ಟರ್ಸ್ ಆಗಿ ಬರುತ್ತಿದ್ದಾರೆ. 

    ಯುವರತ್ನ ಚಿತ್ರದಲ್ಲಿನ ಸಾಹಸ ದೃಶ್ಯಗಳನ್ನು ಕಳೆಗಟ್ಟಿಸೋದು ಅವರೇ. ಇದಕ್ಕೂ ಮೊದಲು ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗಿದ್ದ ಜೋಡಿ, ಈಗ ಸ್ಟಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದೆ. 

    ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಶೂಟಿಂಗ್ ಹಂತದಲ್ಲೇ ಭರ್ಜರಿ ಹವಾ ಸೃಷ್ಟಿಸಿರುವ ಸಿನಿಮಾ. 

  • ಅಭಿಮಾನಿ ದೇವರ ಆಕ್ರೋಶಕ್ಕೆ ಶರಣಾದ ಯುವರತ್ನ ನಿರ್ದೇಶಕ

    director santhosh anandram requets to appu's angry fan

    ಪವರ್ ಸ್ಟಾರ್ ಪುನೀತ್, ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಯುವರತ್ ಸಿನಿಮಾ ಶೂಟಿಂಗ್ ಶುರುವಾಗಿ ತಿಂಗಳುಗಳೇ ಆಗಿವೆ. ಆಗೊಂದು ಈಗೊಂದು ಫೋಟೋ ಬಿಟ್ಟರೆ, ಉಳಿದ ವಿಷಯಗಳೆಲ್ಲ ಗುಟ್ಟು ಗುಟ್ಟು. ತಾರಾಬಳಗವೇನೋ ಭಯಂಕರ ದೊಡ್ಡದು. ಆದರೆ, ಇದುವರೆಗೆ ಒಂದು ಟೀಸರ್ ಕೂಡಾ ಹೊರಬಂದಿಲ್ಲ.

    ಇದರಿಂದ ರೊಚ್ಚಿಗೆದ್ದ ಅಭಿಮಾನಿಯೊಬ್ಬ ರಜನಿಕಾಂತ್‍ರ ವಿಡಿಯೋ ಹಾಕಿದ್ದಾನೆ. ಪೇಟಾ ಚಿತ್ರದಲ್ಲಿ ರಜನಿ ಹೇಳೋ ಡೈಲಾಗ್ ಕೊಲೆ ಮಾಡುವ ಮೂಡ್‍ನಲ್ಲಿದ್ದೇನೆ. ಹೆಂಡ್ತಿ, ಮಕ್ಕಳು, ಬಂಧುಬಳಗ ಅಂತೆಲ್ಲ ಯೋಚನೆ ಮಾಡುವವರು ಓಡಿ ಹೋಗ್ಬಿಡಿ. ಒಬ್ಬರನ್ನೂ ಉಳಿಸೋದಿಲ್ಲ ಎನ್ನುವ ಡೈಲಾಗ್ ಅದು.

    ನಾವು ಅಪ್ಪು ಫ್ಯಾನ್ಸ್ ಸದ್ಯಕ್ಕೆ ಇದೇ ಮೂಡ್‍ನಲ್ಲಿದ್ದೇವೆ ಎಂದಿದ್ದಾನೆ ಆ ಮನೋಜ್ ಎಂಬ ಅಪ್ಪು ಅಭಿಮಾನಿ. ನಿರ್ದೇಶಕ ಸಂತೋಷ್ ಆನಂದರಾಮ್ ಅಭಿಮಾನಿಗೆ ಸಮಾಧಾನ ಹೇಳಿದ್ದು ಡೋಂಟ್‍ವರಿ ಬ್ರದರ್, ಇನ್ನೊಂದೆರಡು ಮೂರು ದಿನಗಳಲ್ಲಿ ಟೀಸರ್ ಡೇಟ್ ಹೇಳ್ತೇನೆ ಎಂದಿದ್ದಾರೆ.

  • ಇಲ್ಲಿಗಿಂತ ಮೊದಲೇ ಅಲ್ಲಿ ಬರ್ತಾನೆ ಯುವರತ್ನ

    ಇಲ್ಲಿಗಿಂತ ಮೊದಲೇ ಅಲ್ಲಿ ಬರ್ತಾನೆ ಯುವರತ್ನ

    ಯುವರತ್ನ ಚಿತ್ರ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಇಂಡಿಯಾದಲ್ಲಿ ರಿಲೀಸ್ ಆಗುವುದು ಏಪ್ರಿಲ್ 1ಕ್ಕೇ ಇರಬಹುದು. ವಿದೇಶದಲ್ಲಿ ಮಾತ್ರ ಒಂದು ದಿನ ಮೊದಲೇ ರಿಲೀಸ್ ಆಗಲಿದೆ ಯುವರತ್ನ. ಮಾರ್ಚ್ 31ರಂದೇ ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ಅರಿಝೋನಾ, ಕೊಲರಾಡೋ, ಫ್ಲೋರಿಡಾ, ಜಾರ್ಜಿಯಾ, ಇಲಿನೊಯಿಸ್, ಮೇರಿಲ್ಯಾಂಡ್, ಮಸಾಚುಸೆಟ್ಸ್, ಮಿಚಿಗನ್, ಮಿನಿಸೋಟಾ, ನಾರ್ತ್ ಕ್ಯಾರಿಲೊನಾ, ಓಹಿಯೋ, ಓರೆಗಾಂವ್, ಫಿಲಿಡಲ್ಫಿಯಾ, ಉತಾ, ವರ್ಜಿನಿಯಾ, ವಾಷಿಂಗ್ಟನ್.. ಮೊದಲಾದೆಡೆ ರಿಲೀಸ್ ಆಗುತ್ತಿದೆ. ಫಾರಿನ್‍ನಲ್ಲೂ ವೀಕೆಂಡ್ ರಿಲೀಸ್ ದೊಡ್ಡ ಮಟ್ಟದಲ್ಲೇ ರಿಲೀಸ್ ಮಾಡುತ್ತಿದೆ. ಇನ್ನೂ ಕೆಲವೆಡೆ ಗುರುವಾರ ರಿಲೀಸ್ ಆಗಲಿದೆ.

    ಅಡ್ವಾನ್ಸ್ ಬುಕಿಂಗ್ ಅಲ್ಲಿ ಕೂಡಾ ಭರ್ಜರಿಯಾಗಿ ನಡೆಯುತ್ತಿದೆ. ಸಂತೋಷ್ ಆನಂದ್‍ರಾಮ್-ಪುನೀತ್ ರಾಜ್‍ಕುಮಾರ್-ವಿಜಯ್ ಕಿರಗಂದೂರು ಕಾಂಬಿನೇಷನ್ ಸಿನಿಮಾ ಟ್ರೆಂಡಿಂಗ್‍ನಲ್ಲಿದೆ.ನಲ್ಲೇ ಭರವಸೆ ಹುಟ್ಟಿಸುವಂತಿದೆ. ಅಂದಹಾಗೆ ಇದು 1990ರಲ್ಲಿ ಮೊಬೈಲ್ ಇಲ್ಲದ ಕಾಲದ, ಇಂಟರ್‍ನೆಟ್, ಸೋಷಿಯಲ್ ಮೀಡಿಯಾ ಯಾವುದೂ ಇಲ್ಲದ ಕಾಲದಲ್ಲಿ ನಡೆಯುವ ಲವ್ ಸ್ಟೋರಿ.

  • ಇಷ್ಟೊಂದ್ ಚಿಕ್ಕೋರಾದ್ರಾ ಅಪ್ಪು..?

    apu growing younger day by day

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿಕ್ಕೋರಾಗಿಬಿಟ್ಟಿದ್ದಾರೆ. ಎಷ್ಟು ಚಿಕ್ಕೋರಂದ್ರೆ, ಅಪ್ಪು, ಅಭಿ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ನಟಿಸಿದ್ದರಲ್ಲ, ಅದಕ್ಕಿಂತ ಚಿಕ್ಕೋವ್ರು. ಯುವರತ್ನ ಚಿತ್ರದಲ್ಲಿ ಪುನೀತ್, ಕಾಲೇಜ್ ಸ್ಟೂಡೆಂಟ್ ಆಗಿ ನಟಿಸುತ್ತಿರೋದು ಗೊತ್ತಿದೆ ತಾನೇ.

    ಅ ಚಿತ್ರದಲ್ಲಿನ ಪುನೀತ್ ಲುಕ್‍ವೊಂದನ್ನ ನಿರ್ದೇಶಕ ಸಂತೋಷ್ ಆನಂದ್‍ರಾಮ್ ರಿಲೀಸ್ ಮಾಡಿದ್ದಾರೆ. ವೈಟ್ & ವೈಟ್‍ನಲ್ಲಿ ಎಂದಿನ ಮುಗ್ದ ನಗೆ ಹೊರಸೂಸುತ್ತಿರುವ ಪುನೀತ್, ಸಿಕ್ಕಾಪಟ್ಟೆ ಯಂಗ್ ಅನ್ನಿಸ್ತಿದ್ದಾರೆ.

    ಸಯೇಷಾ ಸೈಗಲ್ ನಾಯಕಿಯಾಗಿರೋ ಚಿತ್ರದಲ್ಲಿ ಡಾಲಿ ಧನಂಜಯ್, ರಾಧಿಕಾ ಶರತ್‍ಕುಮಾರ್, ವಸಿಷ್ಠ ಸಿಂಹ ಮೊದಲಾದ ಕಲಾವಿದರು ನಟಿಸಿದ್ದು, ಒನ್ಸ್ ಎಗೇಯ್ನ್ ರಾಜಕುಮಾರ ಕಾಂಬಿನೇಷನ್ ಇರುವ ಚಿತ್ರವಿದು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಸಂತೋಷ್ ಆನಂದ್‍ರಾಮ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

  • ಏಪ್ರಿಲ್ 1ಕ್ಕೆ ಯುವರತ್ನ

    ಏಪ್ರಿಲ್ 1ಕ್ಕೆ ಯುವರತ್ನ

    ಸ್ಟಾರ್ ಚಿತ್ರಗಳು ರಿಲೀಸ್ ಆದರೆ ಥಿಯೇಟರಿಗೆ ಮತ್ತೆ ಜನ ಬರುತ್ತಾರೆ ಎಂಬ ನಿರೀಕ್ಷೆ ಥಿಯೇಟರು ಮಾಲೀಕರದ್ದು. ಇತ್ತೀಚೆಗೆ ರಿಲೀಸ್ ಆಗಿ ಜನಮನ ಸೆಳೆದ ಕೆಲ ಚಿತ್ರಗಳಿಗೆ ಭರಪೂರ ಮೆಚ್ಚುಗೆ ಸಿಕ್ಕಿತೇ ಹೊರತು, ದುಡ್ಡಲ್ಲ. ಹೀಗಾಗಿ ದೊಡ್ಡವರ ಚಿತ್ರಗಳಿಗೆ ಕಾಯುತ್ತಿದ್ದವರಿಗೆ ಈಗ ಮೊದಲ ಗುಡ್ ನ್ಯೂಸ್ ಸಿಕ್ಕಿದೆ. ಏಪ್ರಿಲ್ 1ಕ್ಕೆ ಯುವರತ್ನ ರಿಲೀಸ್.

    ಯುವರತ್ನ, ಪುನೀತ್, ಸಂತೋಷ್ ಆನಂದ್ ರಾಮ್, ಹೊಂಬಾಳೆ, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ. ರಾಜಕುಮಾರ ನಂತರ ಅವರೆಲ್ಲರೂ ಒಟ್ಟಿಗೇ ನಟಿಸಿರುವ ಚಿತ್ರ. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿಯೂ ಏಕಕಾಲಕ್ಕೆ ಯುವರತ್ನ ರಿಲೀಸ್ ಆಗಲಿದೆ.

    ಪುನೀತ್‍ಗೆ ಸಯ್ಯೇಷಾ ನಾಯಕಿ. ಧನಂಜಯ್, ದಿಗಂತ್, ಪ್ರಕಾಶ್ ರೈ, ರಾಧಿಕಾ, ಕಾವ್ಯಾ ಶೆಟ್ಟಿ, ಸೋನು ಗೌಡ ಕೂಡಾ ನಟಿಸಿರುವ ಚಿತ್ರವಿದು.

  • ಓವರ್.. ಓವರ್.. ಯುವರತ್ನ ಶೂಟಿಂಗ್ ಓವರ್..

    'Yuvaratna' Shooting Complete

    ಸುಮಾರು ಒಂದು ವರ್ಷದಿಂದ ಅಭಿಮಾನಿಗಳು ಕಾಯುತ್ತಲೇ ಇರುವ ಚಿತ್ರ ಯುವರತ್ನ. ಅಫ್‍ಕೋರ್ಸ್, ಕೊರೊನಾ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಯುವರತ್ನ, ಅಭಿಮಾನಿಗಳ ಹೃದಯ ಸಿಂಹಾಸನವನ್ನೇರಿಬಿಡುತ್ತಿದ್ದ. ಏನ್ ಮಾಡೋದು.. ಆದರೆ.. ಈಗ ಒಂದು ಗುಡ್ ನ್ಯೂಸ್. ಯುವರತ್ನ ಶೂಟಿಂಗ್ ಮುಗಿದಿದೆ.

    ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್‍ನಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿದೆ ಯುವರತ್ನ ಟೀಂ. ಹೊಂಬಾಳೆ ಕುಟುಂಬದ ಚಿತ್ರಕ್ಕೆ ಸಂತೋಷ್ ಆನಂದರಾಮ್ ನಿರ್ದೇಶಕ. ರಾಜಕುಮಾರ ಟೀಂ ರಿಪೀಟ್ ಆಗಿರೋದ್ರಿಂದ ನಿರೀಕ್ಷೆಯೂ ಹೆಚ್ಚಿದೆ. ಅಂದಹಾಗೆ ನಾಡಹಬ್ಬಕ್ಕೆ ಯುವರತ್ನ, ಚಿತ್ರದ ಹಾಡೊಂದನ್ನು ಉಡುಗೊರೆಯಾಗಿ ನೀಡಲಿದೆ.. ಕನ್ನಡ ಡಿಂಡಿಮ ಬಾರಿಸಲಿದೆ..

  • ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಈಕೆಯನ್ನು ಸದ್ಯಕ್ಕೆ ಯುವರಾಣಿ ಎನ್ನೋಣ. ಏಕೆಂದರೆ ಇವರು ಯುವರತ್ನ ಚಿತ್ರದ ನಾಯಕಿ. ಸಯೇಶಾ.. ಇವರೀಗ ಕನ್ನಡದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ.

    ಕರ್ನಾಟಕದ ಹುಡುಗಿಯರಿಗೆ ಒಂದು ಚಾಲೆಂಜ್. ನೀವು ನಿಮ್ಮ ಪವರ್ ತೋರಿಸಿ. ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡಿಗೆ ಕುಣಿದು ಡ್ಯಾನ್ಸ್ ಪವರ್ ತೋರಿಸಿ.

     #PowerOfYouthDanceChallenge 

    #Yuvarathnaa   

     ಹ್ಯಾಷ್ ಟ್ಯಾಗ್‍ನಲ್ಲಿ ಅಪ್‍ಲೋಡ್ ಮಾಡಿ ಎಂದಿದ್ದಾರೆ ಸಯೇಶಾ.

    ಬೆಸ್ಟ್ ಪರ್ಫಾಮೆನ್ಸ್‍ಗೆ ಯುವರತ್ನ ಚಿತ್ರದಿಂದ ಸರ್‍ಪ್ರೈಸ್ ಗಿಫ್ಟ್ ಇದೆಯಂತೆ. ನಿರ್ದೇಶಕ ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್ ಅವರಿಂದಲೇ ಈ ಉಡುಗೊರೆ ಸಿಗಲಿದೆಯಂತೆ. ಯುವರತ್ನ ಕ್ರೇಜ್ ಶುರುವಾಗುತ್ತಿದೆ.

  • ಕರ್ನಾಟಕ ರತ್ನನ ಪುತ್ರ ಈಗ ಯುವರತ್ನ..!

    son of karnataka ratna turns yuvaratna

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಜಕುಮಾರ, ರಾಮಾಚಾರಿ ಖ್ಯಾತಿಯ ಸಂತೋಷ್ ಆನಂದ್‍ರಾಮ್, ಕನ್ನಡ ಚಿತ್ರರಂಗದ ಪ್ರತಿಷ್ಠಿತ ಪ್ರೊಡಕ್ಷನ್ ಸಂಸ್ಥೆಯಾಗಿರುವ ಹೊಂಬಾಳೆ ಪ್ರೊಡಕ್ಷನ್ಸ್‍ನ ನಿರ್ಮಾಪಕ ವಿಜಯ್ ಕಿರಗಂದೂರು.. ಈ ತ್ರಿವೇಣಿ ಸಂಗಮದ ಹೊಸ ಸಿನಿಮಾದ ಟೈಟಲ್ ಯುವರತ್ನ.

    ಈ ಸಿನಿಮಾದ ಟೈಟಲ್ ಜ್ವಾಲಾಮುಖಿ, ದೇವತಾ ಮನುಷ್ಯ, ಪರಶುರಾಮ್, ಕ್ರಾಂತಿವೀರ ಎಂಬೆಲ್ಲ ಸುದ್ದಿಗಳು ಗಾಂಧಿನಗರದ ತುಂಬೆಲ್ಲ ಹರಿದಾಡಿದ್ದವು. ಆ ಎಲ್ಲವನ್ನೂ ಮೀರಿ ಹೊಸದೇ ಟೈಟಲ್ ಇಟ್ಟಿದ್ದಾರೆ ಸಂತೋಷ್ ಆನಂದ್‍ರಾಮ್. ಡಾ.ರಾಜ್‍ಕುಮಾರ್ ಕರ್ನಾಟಕ ರತ್ನ ಪುರಸ್ಕಾರ ಸ್ವೀಕರಿಸಿದ್ದ ಹೆಮ್ಮೆಯ ಕಲಾವಿದ. ಅವರ ಪುತ್ರ ಪುನೀತ್, ಈಗ ಯುವರತ್ನರಾಗುತ್ತಿದ್ದಾರೆ.

    ಅಪ್ಪು ಅಭಿಮಾನಿಗಳಾದ ವಿನುತಾ ಮತ್ತು ಮಹೇಶ್ ಎಂಬ ಇಬ್ಬರು ವಿಕಲಚೇತನ ಮಕ್ಕಳಿಂದ ಸಿನಿಮಾದ ಟೈಟಲ್ ಲಾಂಚ್ ಆಯ್ತು. ಕಾವೇರಿ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರಾರು ಅಭಿಮಾನಿಗಳು ಆಗಮಿಸಿ ಪುನೀತ್ ಹೊಸ ಚಿತ್ರಕ್ಕೆ ಶುಭ ಹಾರೈಸಿದರು. ಕನ್ನಡ ರಾಜ್ಯೋತ್ಸವ ಮತ್ತು ಯುವರತ್ನ ಟೈಟಲ್ ಲಾಂಚ್, ಎರಡನ್ನೂ ಒಟ್ಟಿಗೇ ಸಂಭ್ರಮದಿಂದ ಆಚರಿಸಲಾಯ್ತು.

  • ಕೆಲವರಿಗೆ ಇಂಟ್ರೊಡಕ್ಷನ್ ಬೇಡ.. ಇನ್ಫರ್ಮೇಷನ್ ಸಾಕು

    yuvaratna special poster

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಖಡಕ್ ಡೈಲಾಗುಗಳಿಗೆ ಹೆಸರುವಾಸಿ. ಹೀರೋ ಇಮೇಜ್‍ನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಡೈಲಾಗ್‍ಗಳನ್ನು ಕಟ್ಟುವ ಸಂತೋಷ್ ಆನಂದ್ ರಾಮ್, ಯುವರತ್ನದಲ್ಲಿ ಸಣ್ಣದೊಂದು ಝಲಕ್ ಕೊಟ್ಟಿದ್ದಾರೆ.

    ಚಿತ್ರದ ಒಂದು ಸ್ಪೆಷಲ್ ಸ್ಟಿಲ್ ರಿಲೀಸ್ ಮಾಡಿರೋ ಸಂತೋಷ್ ಆನಂದ್ ರಾಮ್, ಅದರ ಬಗ್ಗೆ ಕೊಟ್ಟಿರೋ ಇಂಟ್ರೊಡಕ್ಷನ್.. ಅಲ್ಲಲ್ಲ.. ಇನ್ಫರ್ಮೇಷನ್ ಇದು.

    ಕೆಲವರಿಗೆ ಇಂಟ್ರೊಡಕ್ಷನ್ ಬೇಡ.. ಅವರ ಬಗ್ಗೆ ಇನ್ಫರ್ಮೇಷನ್ ಸಾಕು. ಅದೇನೋ ಕರೆಕ್ಟ್ ಬಿಡಿ. ಪುನೀತ್ ಬಗ್ಗೆ ಇನ್‍ಫರ್ಮೇಷನ್ ಕೊಟ್ರೆ ಸಾಕು. ಇಂಟ್ರೊಡಕ್ಷನ್‍ನ್ನ ಫ್ಯಾನ್ಸ್‍ಗಳೇ ಮಾಡ್ತಾರೆ.

    ಸಂತೋಷ್ ಆನಂದ ರಾಮ್, ಪವರ್ ಸ್ಟಾರ್ ಪುನೀತ್ ಮತ್ತು ವಿಜಯ್ ಕಿರಗಂದೂರು ಅವರು 2ನೇ ಬಾರಿಗೆ ಜೊತೆಯಾಗಿರುವ ಚಿತ್ರ ಯುವರತ್ನ. ಸಿನಿಮಾಗಳ ಕೆಲಸ ವೇಗ ಪಡೆದುಕೊಂಡ ಮೇಲೆ ಯುವರತ್ನ ಚಿತ್ರಕ್ಕೂ ಒಂದು ಸ್ಪೀಡ್ ಸಿಗಲಿದೆ.

  • ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಶಿಕ್ಷಣ ಅನ್ನೋದು ವ್ಯಾಪಾರ ಅಲ್ಲ.. ಅದೊಂದು ಸೇವೆ.. ಒಳ್ಳೆಯ ಕಾಲೇಜು ಅನ್ನಿಸ್ಕೊಳ್ಳೋದು ಅದರ ಫೀಸು, ಡೊನೇಷನ್ನಿಂದ ಅಲ್ಲ.. ಆ ಸಂಸ್ಥೆಯ ಸ್ಟೂಡೆಂಟ್ಸ್ಗಳಿಂದ..

    ಇಂಥಾದ್ದೊಂದು ಚೆಂದದ ಡೈಲಾಗ್ನೊಂದಿಗೇ ಶುರುವಾಗುವ ಟ್ರೇಲರ್ ಯುವರತ್ನ. ಟ್ರೇಲರ್ನಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರೋ ಸಂಭಾಷಣೆಗಳೇ ಚಿತ್ರದಲ್ಲಿ ಒಂದು ಗಟ್ಟಿ ಕಥೆ ಮತ್ತು ಮನಮುಟ್ಟುವ ಸಂದೇಶ ಇದೆ ಅನ್ನೋದನ್ನ ಸಾರಿಬಿಡುತ್ವೆ.

    ವಿದ್ಯೆಯನ್ನು ವ್ಯಾಪಾರ ಮಾಡೋಕೆ ಹೊರಟರೆ, ಪ್ರತಿ ಅಕ್ಷರಕ್ಕೂ ಅದು ಬೆಲೆ ಕಟ್ಟುತ್ತೆ. ವಿದ್ಯೆ ಕಲಿತನಿಗಲ್ಲ..  2 ನಿಮಿಷ 17 ಸೆಕೆಂಡ್ನ ಟ್ರೇಲರ್ನಲ್ಲಿ ಇಂತಹ ಡೈಲಾಗುಗಳ ಜೊತೆ ಅಭಿಮಾನಿಗಳನ್ನು ಖುಷಿ ಪಡಿಸೋ ಸಂಭಾಷಣೆಗಳೂ ಇವೆ.

    ಓಂ ಫಿಲಂ ನೋಡಿದ್ದೀಯಾ ಅನ್ನೋ ವಿಲನ್ ಡೈಲಾಗ್ಗೆ ಅಪ್ಪು ಕೊಡೋ ಉತ್ತರ.. ನಾವೇ ಪ್ರೊಡ್ಯೂಸ್ ಮಾಡಿದ್ದು. ಶಿಳ್ಳೆ ಹಾಕೋಕೆ ಆ ಡೈಲಾಗ್ ಸಾಕು.

    ಅಂದವಾದ ಹೀರೋಯಿನ್, ಟ್ರೇಲರಿನದ್ದಕ್ಕೂ ಕಾಣಿಸಿಕೊಳ್ಳೋ ಪ್ರಕಾಶ್ ರೈ, ಮೈ ನವಿರೇಳಿಸುವ ಸ್ಟಂಟ್ಸ್.. ಜೊತೆಗೆ ಯುವರತ್ನ ಚಿತ್ರದಲ್ಲಿ ಈಗ ಪೆಡಂಭೂತವಾಗಿ ಕಾಡುತ್ತಿರೋ ಡ್ರಗ್ಸ್ ಕಥೆಯೂ ಇರುವ ಸುಳಿವಿದೆ.

    ಚಿತ್ರದ ಕಥೆ ಏನಿರಬಹುದು ಅನ್ನೋದರ ಸುಳಿವನ್ನು ಅಲ್ಲಿ ಕೊಟ್ಟಿದ್ದಾರೆ ಸಂತೋಷ್ ಆನಂದರಾಮ್. 30ಕ್ಕೂ ಹೆಚ್ಚು ಕಲಾವಿದರ ದಂಡನ್ನೇ ಇಟ್ಟುಕೊಂಡು ಒಂದೊಳ್ಳೆ ಮೆಸೇಜ್ ಇರುವ ಸಿನಿಮಾ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ವಿಜಯ್ ಕಿರಗಂದೂರು.

    ಇಡೀ ಚಿತ್ರತಂಡ ಚಿತ್ರದಲ್ಲಿರೋ ಕಥೆ ಮತ್ತು ಚಿತ್ರ ಅಂತಿಮವಾಗಿ ಕೊಡಲಿರೋ ಸಂದೇಶದ ಬಗ್ಗೆಯೇ ಪ್ರೀತಿಯಿಂದ ಮಾತನಾಡುತ್ತಿದೆ. ಹಾಗಂತ.. ಅಭಿಮಾನಿಗಳಿಗೆ ಇಷ್ಟವಾಗದಂತೇನೂ ಇಲ್ಲ. ಈಗಾಗಲೇ ಟ್ರೇಲರ್ ನೋಡಿದವರ ಸಂಖ್ಯೆ ಮಿಲಿಯನ್ ಮಿಲಿಯನ್ ಮಿಲಿಯನ್ ದಾಟಿದೆ. ಏಪ್ರಿಲ್ 1ಕ್ಕೆ ಯುವರತ್ನ ಪ್ರೇಕ್ಷಕರಿಗೆ ಭರ್ಜರಿ ಔತಣ ಫಿಕ್ಸ್.

  • ಗೆಟ್ ರೆಡಿ ಅಪ್ಪು ಫ್ಯಾನ್ಸ್ ತಮನ್ ಚಂಡಮಾರುತಕ್ಕೆ ಸಿದ್ಧರಾಗಿ...

    yuvaratna will start taman storm s

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್. ಅಪ್ಪು, ಸಂತೋಷ್ ಆನಂದ ರಾಮ್ ಮತ್ತು ವಿಜಯ್ ಕಿರಗಂದೂರು ಕಾಂಬಿನೇಷನ್`ನ ಯುವರತ್ನ ಸಿನಿಮಾ ಮತ್ತೆ ಟೇಕಾಫ್ ಆಗುತ್ತಿದೆ. ಯಾವಾಗ.. ಅನ್ನೋದು ಪಕ್ಕಾ ಗೊತ್ತಿಲ್ಲದೇ ಇದ್ರೂ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಈ ವಿಷಯ ಖಚಿತಪಡಿಸಿದ್ದಾರೆ.

    ಅಂದಹಾಗೆ ಈ ಬಾರಿ ಬೀಸಲಿರೋದು ತಮನ್ ಚಂಡಮಾರುತ. ಅರ್ಥಾತ್ ಹಾಡುಗಳ ಅಬ್ಬರ. ಇದರರ್ಥ ಶೀಘ್ರದಲ್ಲೇ ಹಾಡುಗಳ ರಿಲೀಸ್ ಹಬ್ಬ ಶುರುವಾಗಲಿದೆ. ರಾಜಕುಮಾರ ಚಿತ್ರದ ಹಾಡುಗಳು ಒಂದಕ್ಕಿಂದ ಒಂದು ಬೊಂಬಾಟ್ ಆಗಿದ್ದವು. ಈಗ ರಾಜಕುಮಾರ ಲೆವೆಲ್ಲನ್ನೂ ದಾಟಿರುವ ಹಾಡುಗಳು ಬರಲಿವೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ..

  • ಚಿಕ್ಕಪ್ಪ-ದೊಡ್ಡಪ್ಪ ಇಬ್ಬರನ್ನೂ ಮೀರಿಸುವ ಯುವರಾಜನ ಡ್ಯಾನ್ಸ್

    yuva rajkumar to love perform at natasarvabhouma's audio launch

    ಸ್ಯಾಂಡಲ್‍ವುಡ್‍ನ ನಂ.1 ಡ್ಯಾನ್ಸರ್ ಯಾರು ಎಂದರೆ ಅನುಮಾನವೇ ಇಲ್ಲದಂತೆ ಕಣ್ಣ ಮುಂದೆ ಬರೋದು ಪುನೀತ್ ರಾಜ್‍ಕುಮಾರ್. ಅವರ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ವಿಶೇಷ ಸ್ಟೆಪ್ ಇದ್ದೇ ಇರುತ್ತೆ. ಈಗ ಅವರನ್ನೂ ಮೀರಿಸುವ ಸುಳಿವು ಕೊಡುತ್ತಾ ಬಂದಿದೆ ಯುವ ಕುಡಿ. ಇನ್ನು ಶಿವಣ್ಣನ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. 

    ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ಡ್ಯಾನ್ಸ್, ಚಿಕ್ಕಪ್ಪ, ದೊಡ್ಡಪ್ಪ ಇಬ್ಬರನ್ನೂ ಮೀರಿಸುವಂತಿದೆ. ನಟಸಾರ್ವಭೌಮ ಚಿತ್ರದ ಪುನೀತ್ ಡ್ಯಾನ್ಸ್‍ಗೆ ಯುವರಾಜ್ ಕುಮಾರ್ ಸ್ಟೆಪ್ ಹಾಕಿದ್ದು, ಹುಬ್ಬೇರಿಸುವಂತಿದೆ. ಜನವರಿ 5ರಂದು ಹುಬ್ಬಳ್ಳಿಯಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು, ಆ ದಿನ ಯುವರಾಜ್ ಕುಮಾರ್ ಸ್ಟೇಜ್ ಮೇಲೆ ಶೋ ಕೊಡಲಿದ್ದಾರಂತೆ. 

    ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಯುವರಾಜ್ ಕುಮಾರ್, ಸಮಾಜಸೇವೆ ಕಾರ್ಯಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳದ ಯುವರಾಜ್, ಚಿಕ್ಕಪ್ಪನ ಬಹು ನಿರೀಕ್ಷೆಯ ಚಿತ್ರದ ಆಡಿಯೋ ರಿಲೀಸ್‍ನಲ್ಲಿ ಮಿಂಚಲಿದ್ದಾರೆ.

  • ಡಬ್ಬಿಂಗ್ ಮುಗಿಸಿದ ಅಪ್ಪು.. ಯುವರತ್ನ ಟೀಸರ್ ಯಾವಾಗ..?

    appu fans eagerly waiting for teaser

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಮೊದಲ ಟೀಸರ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನ. ಟೀಸರ್ ಹೊರಬೀಳುವುದು ಪಕ್ಕಾ. ಏಕೆಂದರೆ ಪುನೀತ್ ಟೀಸರ್‍ನ ಡಬ್ಬಿಂಗ್ ಮುಗಿಸಿದ್ದಾರೆ.

    ಸಂತೋಷ್ ಆನಂದ್ ರಾಮ್, ಹೊಂಬಾಳೆ ಬ್ಯಾನರ್ ಜೊತೆ ರಾಜಕುಮಾರದ ನಂತರ ಜೊತೆಯಾಗಿದ್ದಾರೆ ಪುನೀತ್. ನಿರೀಕ್ಷೆ ಮೌಂಟ್ ಎವರೆಸ್ಟ್ ತಲುಪೋಕೆ ಇಷ್ಟೇ ಸಾಕು. ಅಂಥದ್ದರಲ್ಲಿ ಚಿತ್ರದಲ್ಲಿ ಪ್ರಕಾಶ್ ರೈ, ಸುಧಾರಾಣಿ, ಸೋನುಗೌಡ, ಗುರುದತ್, ಅಚ್ಯುತ್ ಕುಮಾರ್, ರಾಧಿಕಾ ಶರತ್ ಕುಮಾರ್, ರವಿಶಂಕರ್ ಗೌಡ, ವಸಿಷ್ಠ ಸಿಂಹ, ರಂಗಾಯಣ ರಘು, ಕುರಿ ಪ್ರತಾಪ್, ಆರು ಗೌಡ, ತ್ರಿವೇಣಿ, ಸಾಯಿಕುಮಾರ್.. ಹೀಗೆ ಪ್ರತಿಭಾನ್ವಿತರ ದಂಡೇ ಇದೆ. ಸಯೇಷಾ ಸೈಗಲ್ ನಾಯಕಿ. ವೇಯ್ಟ್ ಮಾಡಿ. ಹಬ್ಬಕ್ಕೆ ರೆಡಿಯಾಗಿ.