` charan raj, - chitraloka.com | Kannada Movie News, Reviews | Image

charan raj,

  • ಚರಣ್‍ರಾಜ್ ಪುತ್ರ ಚಿತ್ರರಂಗಕ್ಕೆ..!

    charan raj to launch his son

    ಮುಗಿಲ ಮಲ್ಲಿಗೆಯೋ.. ಎನ್ನುತ್ತಾ ಚಿತ್ರರಂಗಕ್ಕೆ ಬಂದ ಚರಣ್‍ರಾಜ್, ಒಂದು ಕಾಲಕ್ಕೆ ಕನ್ನಡ ಚಿತ್ರರಂಗಕ್ಕೆ ಮುಗಿಲ ಮಲ್ಲಿಗೆಯೇ ಆಗಿದ್ದ ಕಲಾವಿದ. ತಮಿಳು, ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಕ್ಕೆ ದೊಡ್ಡ ಸ್ಟಾರ್ ನಟ. ನಾಯಕರಾಗಿ, ಖಳನಾಯಕರಾಗಿ, ಪೋಷಕ ನಟರಾಗಿ ಮಿಂಚಿರುವ ಚರಣ್‍ರಾಜ್, ರಥಾವರ ಚಿತ್ರದ ನಂತರ ಬೇರೆ ಸಿನಿಮಾದಲ್ಲಿ ನಟಿಸಿರಲಿಲ್ಲ.

    ಈಗ ಮಗನನ್ನು ಕರೆದುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ ಚರಣ್‍ರಾಜ್. ಈ ಬಾರಿ ನಟರಾಗಿ ಅಲ್ಲ, ನಿರ್ದೇಶಕರಾಗಿ. ಅವರ ನಿರ್ದೇಶನದ ಮೊದಲ ಚಿತ್ರದಲ್ಲಿ ಅವರ ಮಗ ತೇಜ್‍ಗೂ ಒಂದು ಪಾತ್ರವಿದೆ. ಪುಟ್ಟದೊಂದು ಪಾತ್ರ ಹಾಗೂ ಹಾಡಿನಲ್ಲಿ ತೇಜ್ ಕಾಣಿಸಿಕೊಳ್ಳಲಿದ್ದಾರೆ.

    ಕ್ರೈಂ, ಥ್ರಿಲ್ಲರ್ ಕಥೆಯೊಂದನ್ನು ಸಿದ್ಧ ಮಾಡಿಕೊಂಡು ಬರುತ್ತಿರುವ ಚರಣ್‍ರಾಜ್, ಏಪ್ರಿಲ್ 27ರಂದು ತಮ್ಮ ಚಿತ್ರ ಆರಂಭಿಸಲಿದ್ದಾರೆ.ಏಕೆಂದರೆ, ಅಂದು ಅವರ ಹುಟ್ಟುಹಬ್ಬ.

     

  • ಭರತ ಬಾಹುಬಲಿಯಲ್ಲಿ ಚರಣ್ ರಾಜ್ ಪುತ್ರ

    charan raj's son in bharatha baahubali movie

    ಚರಣ್ ರಾಜ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬೇರೆ ಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚರಣ್ ಪುತ್ರ ತೇಜ್, ಭರತ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಹೀರೋ ಆಗಿ ಅಲ್ಲ, ಪ್ರಮುಖ ಪಾತ್ರದಲ್ಲಿ. ಅದೇ ಬಾಹುಬಲಿ ಪಾತ್ರ.

    ನಮ್ಮ ಚಿತ್ರದ ಬಾಹುಬಲಿ ಪಾತ್ರಕ್ಕೆ ಕಟ್ಟುಮಸ್ತಾದ ಯುವಕನ ಹುಡುಕಾಟದಲ್ಲಿದ್ದೆ. ತೇಜ್ ಅವರನ್ನು ಕಂಡು ಖುಷಿಯಾಯಿತು. ನೇರವಾಗಿ ಚರಣ್ ರಾಜ್ ಅವರನ್ನೇ ಸಂಪರ್ಕಿಸಿದೆ. ಚರಣ್ ರಾಜ್ ಖುಷಿಯಿಂದ ಒಪ್ಪಿಕೊಂಡರು ಎಂದಿದ್ದಾರೆ ಮಂಜು ಮಾಂಡವ್ಯ.

    ಮಂಜು ಮಾಂಡವ್ಯ ಅವರೇ ಚಿತ್ರದ ಹೀರೋ ಮತ್ತು ಡೈರೆಕ್ಟರ್. ಜನವರಿ 17ರಂದು ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಚಿಕ್ಕಣ್ಣ ಕೂಡಾ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

    ತಮ್ಮ ತಂದೆಗೆ ನೀಡಿದ ಪ್ರೋತ್ಸಾಹವನ್ನೇ ನನಗೂ ನೀಡಿ ಎಂದು ಮನವಿ ಮಾಡಿದ್ದಾರೆ ತೇಜ್. ಐಶ್ವರ್ಯಾ ಫಿಲಂಸ್ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣವಾಗಿದೆ.

     

  • ರಾಜ್ ಸಮಾಧಿಯೆದರು ಪುನೀತ್, ಚರಣ್ ರಾಜ್ ಭೇಟಿಯಾದಾಗ...

    surprise meet of two rajsmaraka

    ಚರಣ್ ರಾಜ್, ಕನ್ನಡದವರೇ. ಸ್ಟಾರ್ ಆಗಿ ಬೆಳೆದಿದ್ದು ತಮಿಳು ಚಿತ್ರರಂಗದಲ್ಲಿ. ಇವರು ಇತ್ತೀಚೆಗೆ ಡಾ.ರಾಜ್ ಸಮಾಧಿಗೆ ಭೇಟಿ ಕೊಟ್ಟಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ವೇಳೆ ಚರಣ್‍ರಾಜ್ ಬೆಂಗಳೂರಿನಲ್ಲಿ ಇರಲಿಲ್ಲ. ಅದಾದ ಮೇಲೆ ಬರಲೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚರಣ್‍ರಾಜ್, ಇತ್ತೀಚೆಗೆ ಡಾ.ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. 

    ಇನ್ನು ಕಾಕತಾಳೀಯವೋ ಎಂಬಂತೆ ಪುನೀತ್ ರಾಜ್‍ಕುಮಾರ್ ಕೂಡಾ ಅಲ್ಲಿಗೆ ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ದಿಢೀರನೆ ಸಮಾಧಿಗೆ ಭೇಟಿ ಕೊಡುವುದು ಹೊಸದೇನೂ ಅಲ್ಲ. ಅಲ್ಲಿಯೇ ಚರಣ್‍ರಾಜ್ ಅವರನ್ನು ಭೇಟಿ ಮಾಡಿದ ಪುನೀತ್, ನಿಮ್ಮ ಜೊತೆ ಸಿನಿಮಾ ಮಾಡಲು ಕಾಲ ಕೂಡಿ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ದೊಡ್ಡಮನೆ ಸಿನಿಮಾ ಮಾಡೋದಕ್ಕಿಂತ ಭಾಗ್ಯ ಇನ್ನೇನಿದೆ. ಶಿವಣ್ಣನ ಜೊತೆ ಈಗಾಗಲೇ ಸಿನಿಮಾ ಮಾಡಿದ್ದೇನೆ. ನೀವು ಯಾವಾಗ ಕರೆದರೂ ನಾನು ರೆಡಿ ಎಂದರಂತೆ ಚರಣ್‍ರಾಜ್. ಬೇಗನೆ ಒಟ್ಟಿಗೇ ಸಿನಿಮಾ ಮಾಡೋ ಕಾಲ ಹತ್ತಿರದಲ್ಲಿದೆ ಎಂದರಂತೆ ಪುನೀತ್. ಅಭಿಮಾನಿಗಳು ಕಾಯುತ್ತಿದ್ದಾರೆ. 

     

  • ಸುಮಲತಾ ಪರ ಪ್ರಚಾರಕ್ಕೆ ಚರಣ್ ರಾಜ್ ರೆಡಿ

    charan raj to campaign for sumalatha

    ಮಂಡ್ಯದಲ್ಲಿ ಸ್ಪರ್ಧಿಸಲು ರೆಡಿಯಾಗಿರುವ, ಈಗಾಗಲೇ ಮಂಡ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ನಾನು ಹೋಗುತ್ತೇನೆ ಎಂದು ಘೋಷಿಸಿದ್ದಾರೆ ನಟ ಚರಣ್ ರಾಜ್. ಅಂಬರೀಷ್ ನನಗೆ ಅಣ್ಣನಿದ್ದ ಹಾಗೆ. ಅವರ ಮನೆಯಲ್ಲಿ ಅನ್ನ ತಿಂದಿದ್ದೇನೆ. ಅಂಬರೀಷ್‍ಗಾಗಿ ನಾನು ಸುಮಲತಾ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಚರಣ್ ರಾಜ್.

    ಸುಮಲತಾ ಜೊತೆ ಕನ್ನಡದಲ್ಲಿ ನಟಿಸಿದ ಹೀರೋಗಳಲ್ಲಿ ಚರಣ್‍ರಾಜ್ ಕೂಡಾ ಒಬ್ಬರು. ಚರಣ್ ರಾಜ್-ಸುಮಲತಾ ಜೋಡಿಯ ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ.. ಹಾಡು ಕನ್ನಡ ಚಿತ್ರರಸಿಕರ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು.