` abhishek, - chitraloka.com | Kannada Movie News, Reviews | Image

abhishek,

  • Abhishek's Debut Film Likely To Be Titled As 'Amar'

    abhishek's debut maybe titled amar

    Actor-politician Ambarish's son Abhishek's debut film is likely to be titled as 'Amar'.

    Producer Sandesh Nagaraj is looking for a good title for Abhishek's film and is looking for titles of Ambarish's films. Incidentally, Ambarish's original name is Amarnath and film was released with the same name in the 80s. Apart from that Ambarish's character's name in many films was Amar. So, due to popularity and sentimental reasons, the film is likely to be titled as 'Amar'

    Director Chethan Kumar of 'Bahaddur' and 'Bharjari' film has been chosen to direct Ambarish's son Abhishek's debut film. The film will be launched by February end or early March. More details about the film are yet awaited.

  • First Look Of 'Amar' Out

    first look of amar out

    Ambarish's son Abhishek's debut film 'Amar' is all set to start soon. Meanwhile, the first look of the film has been out and the first look and posters will be officially released on Ambarish's birthday on May 29th..

    The film will be launched on Monday the 28th of May. Many celebrities of Kannada film industry are expected to be a part of the launch.

    'Amar' is being directed by Nagashekhar and he himself has scripted the film. Nagashekhar's regular cameraman, Satya Hegade is in charge of cinematography, while Arjun Janya is the music composer. The heroine of the film is yet to be finalised and apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

  • First look of 'Amar' to release on Ambarish's birthday

    ambareesh's son's movie amar

    Ambarish's son Abhishek's debut film 'Amar' is all set to start soon. Meanwhile, the first look and a teaser of the film is all set to be released on Ambarish's birthday on May 29th.

    The photo shoot of the film has already been done by ace photographer Bhuvan Gowda and the the photos are yet to be released. Sources say, Ambarish has given strict orders that the photos of Abhishek must not be released and he himself will release it soon.

    'Amar' is being directed by Nagashekhar and he himself has scripted the film. Nagashekhar's regular cameraman, Satya Hegade is in charge of cinematography, while Arjun Janya is the music composer. The heroine of the film is yet to be finalised and apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

  • Pavan Doubtful Of Directing Abhishek's Debut Film

    pavan wodeyar doubtful directing abishek's debut

    Director Pavan Wodeyar has said that it is yet doubtful whether he will be directing actor Ambarish's son Abhishek's debut film. Pavan has said that it is true that he has narrated the story, but it is still in the preliminary stage.

    Earlier, there was a news that Sandesh Nagaraj would be producing Abhishek's debut film, while Pavan Wodeyar would be directing it. There were even news that the film will have three directors working on the story and six directors composing songs for the film. However, Pavan says that he doesn't know anything about it,

    'It is true that I have narrated the story. But I am doubtful, whether I will be directing the film or not. The story has a huge canvas and it takes a lot of time for preparations. There are a lot of confusions about the film and it is still doubtful whether I will be directing the film or not' says Pavan Wodeyar.

    Related Articles :-

    ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಟರ್

    Six Music Directors For Abhishek's Debut Film

    ಅಂಬರೀಷ್ ಮಗನೂ ಜಲೀಲ..!

  • Six Music Directors For Abhishek's Debut Film

    abhishek's debut

    Multiple music directors composing music for one film is not a new trend and earlier also, there have been many such experiments. Last year's 'Chauka' also had five music directors working for the film.

    Ambarish's son Abhishek's debut film will also have six music directors composing one song each. Well known music directors including V Harikrishna, Arjun and others will be composing one song each for the film.

    Abhishek's debut film is yet to be titled. The film will is being produced by Sandesh Nagaraj and directd by Pavan Wodeyar. Pavan himself has written the story of the film. Two more directors will be helping him in screenplay and dialogues. The new film is expected to be launched in the month of March.

    Related Articles :-

    ಮಗನ ಸಿನಿಮಾಗಾಗಿ ಸ್ವತಃ ಅಂಬರೀಷ್ ಬದಲಾದ್ರು..!

    ಅಂಬರೀಷ್ ಮಗನೂ ಜಲೀಲ..!

  • Sumalatha Ambareesh Accompanies Abhishek For 'Amar' In Malaysia

    sumakatha ambareesh accompanies abhishek in malaysia for amar

    Rebel Star Ambareesh lived his life like a king, and we all know how much he loved to travel around the world. On several occasion, his better half Sumalatha Ambareesh has travelled along with him to places with fond memories of them and shopping goodies for their loved ones back home. This time she has accompanied her junior rebel star Abhishek Ambareesh to one trip for a special purpose.

    Chitraloka has learnt that Sumalatha Ambareesh has accompanied her son to Malaysia, where he is shooting for his debut venture - Amar. The final schedule of the movie is presently underway in Malaysia, and the mother is making sure that she is their for her son on an all important schedule before the movie is finally wrapped up.

    Directed by Nagshekar, and produced by Sandesh Nagaraj under his banner, the teaser of the film is set to be released on the eve of Valentine's day, which is on February 14.

  • Tanya Hope Is The Heroine Of 'Amar'

    tanya hope is heroine for amar movie

    Ambarish's son Abhishek's debut film 'Amar' is all set to be launched on Monday the 28th of May. Meanwhile, actress Tanya Hope has been roped in as the heroine of the film.

    Tanya Hope is a model turned actress from Bangalore. Tanya has acted in Telugu and Tamil films and has made her debut in Kannada through Darshan's 'Yajamana'. 'Amar' is her second Kannada film.

    'Amar' is being directed by Nagashekhar and he himself has scripted the film. Nagashekhar's regular cameraman, Satya Hegade is in charge of cinematography, while Arjun Janya is the music composer. Apart from Abhishek, Suhasini, Rangayana Raghu, Sadhu Kokila, Chikkanna and others will be playing prominent roles in the film.

     

  • ಅಂಬರೀಷ್ ಅದ್ಭುತ ಚಿತ್ರಕ್ಕೆ ಕಾಯುತ್ತಿರುವ ಮಗ

    abhishek is waiting for his father's est movie

    ಅಂಬರೀಷ್ ಅದ್ಭುತ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅಂಬರೀಷ್ ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳೋದಿಲ್ಲ ಅನ್ನೋದು ಅವರ ಮೇಲಿರೋ ಆರೋಪ. ನಿಜಾನಾ ಅಂತಾ ಕೇಳಿದ್ರೆ, ಅದು ಆರೋಪ ಅಲ್ಲ ಕಣ್ರೋ... ಅದು ಸತ್ಯ. ನಾನ್ ಇರೋದೇ ಹಿಂಗೆ ಅಂತಾರೆ ಅಂಬರೀಷ್. ಈಗ ಅವರ ಮಗ ಅಭಿಷೇಕ್ ಸಿನಿಮಾ ಪ್ರವೇಶ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ತಮ್ಮ ತಂದೆ ಹಾಗೂ ತಾಯಿಯ ಇಷ್ಟದ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ಅಂಬರೀಷ್ ಅಭಿನಯದ ಅಂತ, ಚಕ್ರವ್ಯೂಹ, ಅಣ್ಣಾವ್ರು ಸಿನಿಮಾ ಇಷ್ಟವಂತೆ. ತಾಯಿಯ ಚಿತ್ರಗಳಲ್ಲಿ ಅವರಿಗೆ ಇಷ್ಟವಾಗಿರೋದು ಎಕ್ಸ್‍ಕ್ಯೂಸ್ ಮಿ ಚಿತ್ರ. ಆ ಚಿತ್ರದ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ.. ಹಾಡು ಇಂದಿಗೂ ಅಭಿಷೇಕ್‍ಗೆ ಫೇವರಿಟ್. ಅಪ್ಪ-ಅಮ್ಮ ಒಟ್ಟಿಗೇ ನಟಿಸಿರುವ ಆಹುತಿ ಸಿನಿಮಾ, ಅವರಿಬ್ಬರೂ ಜೊತೆಯಲ್ಲಿದ್ಧಾರೆ ಅನ್ನೋ ಕಾರಣಕ್ಕೇ ಇಷ್ಟ. ನ್ಯೂಡೆಲ್ಲಿ ಚಿತ್ರದ ಅಭಿನಯ ಅಚ್ಚುಮೆಚ್ಚು.

    ಹೀಗೆಲ್ಲ ಹೇಳೋ ಅಭಿಷೇಕ್‍ಗೆ ಅಂಬರೀಷ್ ಅಭಿನಯದ ಬೆಸ್ಟ್ ಸಿನಿಮಾ ಯಾವುದು ಅಂದ್ರೆ, ಇನ್ನೂ ಬಂದಿಲ್ಲ ಅಂತಾರೆ. ಅಭಿಷೇಕ್ ತಮ್ಮ ತಂದೆಯ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ಕಾಯುತ್ತಿದ್ಧಾರೆ. ಆ ಚಿತ್ರ ಅಂಬರೀಷ್ ಅಭಿನಯದ ಬೆಸ್ಟ್ ಸಿನಿಮಾ ಆಗಲಿದೆ ಅನ್ನೋದು ಅಭಿಷೇಕ್ ನಿರೀಕ್ಷೆ.

    ಅಪ್ಪನ ಬೆಸ್ಟ್ ಸಿನಿಮಾ ನಿರೀಕ್ಷೆಯಲ್ಲಿರುವ ಅಭಿಷೇಕ್, ತಮ್ಮ ಮೊದಲ ಸಿನಿಮಾ ಅಮರ್ ಬಗ್ಗೆ ಥ್ರಿಲ್ಲಾಗಿರುವುದಂತೂ ನಿಜ. ಮೇ 28ಕ್ಕೆ ಚಿತ್ರದ ಮುಹೂರ್ತ. 

  • ಅಂಬರೀಷ್ ಪುತ್ರನಿಗಾಗಿ ಭಾರತೀಯ ಚಿತ್ರರಂಗದ ಮಿಲನ

    abhishek ambareesh's movie muhurtha

    ರೆಬಲ್‍ಸ್ಟಾರ್ ಅಂಬರೀಷ್, ತಮ್ಮ ಹೃದಯವಂತಿಕೆಯಿಂದ ಕನ್ನಡಿಗರನ್ನಷ್ಟೇ ಅಲ್ಲ, ಸಮಸ್ತ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗೆಳೆಯರನ್ನು ಸಂಪಾದಿಸಿರುವುದು ಅಂಬರೀಷ್ ಸಾಧನೆ. ನನ್ನ ಜೀವಮಾನದ ಅತಿ ದೊಡ್ಡ ದುಡಿಮೆ ನನ್ನ ಗೆಳೆಯರು ಎಂದು ಅಂಬರೀಷ್ ಹೇಳಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಮಗ ಅಭಿಷೇಕ್ ಅಭಿನಯದ ಅಮರ್ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವನ್ನು ಒಟ್ಟಿಗೇ ತರುವ ಆಲೋಚನೆ ನಿರ್ದೇಶಕ ನಾಗಶೇಖರ್ ತಲೆ ಹೊಕ್ಕಿದೆ. ಅಫ್‍ಕೋರ್ಸ್ ಅಂಬರೀಷ್ ಮನಸ್ಸು ಮಾಡಿದರೆ ಅದು ಅಸಾಧ್ಯವೇನೂ ಅಲ್ಲ. ಅದು ನಿರ್ದೇಶಕ ನಾಗಶೇಖರ್ ನಂಬಿಕೆ.

    ಅದು ಸಾಧ್ಯವಾದರೆ, ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶತ್ರುಘ್ನ ಸಿನ್ಹಾ... ಮೊದಲಾದವರೆಲ್ಲ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಈಗ ಮುಹೂರ್ತವಾಗಿರುವ ಚಿತ್ರಕ್ಕೆ ಮತ್ತೊಂದು ಮಹಾಮುಹೂರ್ತ ಮಾಡಿದರೆ ಹೇಗೆ ಅನ್ನೋದು ನಿರ್ದೇಶಕ ನಾಗಶೇಖರ್ ಐಡಿಯಾ. ಓಂಶಾಂತಿಓಂ ಚಿತ್ರದಲ್ಲಿದ್ದ ದೀವಾನಗಿ... ಹಾಡಿನ ಮಾದರಿಯಲ್ಲಿಯೇ ಎಲ್ಲ ದಿಗ್ಗಜರನ್ನೂ ಒಟ್ಟಿಗೇ ಸೇರಿಸುವ ಕನಸು ಕಾಣುತ್ತಿದ್ದಾರೆ ನಾಗಶೇಖರ್. 

    ಅಂದಹಾಗೆ ಚಿತ್ರದ ಕಥೆ ಬೈಕ್‍ರೇಸ್ ಹಿನ್ನೆಲೆ ಹೊಂದಿದೆ. ಅಮರ್ ಅರ್ಥಾತ್ ಅಭಿಷೇಕ್ ಚಿತ್ರದಲ್ಲಿ ಬೈಕ್ ರೈಡರ್. ನಾಯಕಿ ತಾನ್ಯಾ ಕೂಡಾ ಬೈಕ್ ರೈಡರ್ ಅಂತೆ. 80 ದಿನಗಳ ಚಿತ್ರೀಕರಣಕ್ಕೆ ಪ್ಲಾನ್ ಆಗಿದೆ. ನಾಯಕನಿಗೆ ವಿಲನ್ ಶೇಡ್ ಕೂಡಾ ಇದೆ. ಸ್ಕಾಟ್ಲೆಂಡ್‍ನಲ್ಲೂ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ಇಡೀ ಚಿತ್ರರಂಗ ಕಾಯುತ್ತಿರುವ ಸಿನಿಮಾ ಅಮರ್ ಆಗಲಿದೆ.

  • ಅಂಬರೀಷ್ ಪುತ್ರನಿಗೆ ಅಭಿಮಾನದ ಉಡುಗೊರೆ

    ambareesh son abishekk

    ಅಮರ್, ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ಜೆಪಿ ನಗರದಲ್ಲಿರುವ ತಿರುಮಲಗಿರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ನೆರವೇರಿದೆ. ತಂದೆ, ತಾಯಿಯ ಆಶೀರ್ವಾದ ಪಡೆದ ಅಭಿಷೇಕ್ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ. ಹೌದು, ಅಭಿಷೇಕ್‍ಗೆ ಇದು ನಿಜಕ್ಕೂ ಸವಾಲೇ. ತಂದೆ ಅಂಬರೀಷ್ ದೊಡ್ಡ ಸ್ಟಾರ್ ಅಷ್ಟೇ ಅಲ್ಲ, ಅದ್ಭುತ ಕಲಾವಿದರೂ ಹೌದು. ತಾಯಿ ಸುಮಲತಾ ಕೂಡಾ ಅಭಿಜಾತ ಕಲಾವಿದೆ. ತಂದೆ, ತಾಯಿ ಇಬ್ಬರೂ ಜನಪ್ರಿಯ ಕಲಾವಿದರಾಗಿರುವಾಗ ಮಗನಿಗೆ ಅದು ಸವಾಲಾಗರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

    ಅಂಬರೀಷ್ ಪುತ್ರನ ಚಿತ್ರೋತ್ಸವವನ್ನ ಕನ್ನಡ ಚಿತ್ರರಂಗವೇ ಸಂಭ್ರಮಿಸಿದ್ದು ವಿಶೇಷ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್, ವಿಷ್ಣು ಮಂಚು.. ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್... ಹೇಳಬೇಕೆಂದರೆ, ಇಡೀ ಚಿತ್ರರಂಗ ಅಂಬರೀಷ್ ಪುತ್ರನಿಗೆ ಹಸಿರು ತೋರಣದ ಸ್ವಾಗತ ಕೋರಿದೆ. 

    ನಾಗಶೇಖರ್ ನಿರ್ದೇಶನದದ, ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ನಡೆಸಲಾಗಿದೆ. ನಾಯಕಿ ತಾನ್ಯಗೆ ಬೊಕೆ ಕೊಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಜೂನ್ 25ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

    ಅಂದಹಾಗೆ ಅಮರ್ ಅನ್ನೋ ಹೆಸರಿನ ಹಿಂದೊಂದು ಸೆಂಟಿಮೆಂಟ್ ಕಥೆಯೂ ಇದೆ. ಅ ಇಂದ ಶುರುವಾಗುವ ಅಂಬರೀಷ್‍ರ ಎಲ್ಲ ಚಿತ್ರಗಳೂ ಹಿಟ್ ಆಗಿವೆ. ಅಂತ ಚಿತ್ರದ ಮೂಲಕವೇ ಸ್ಟಾರ್ ಆದ ಅಂಬರೀಷ್‍ಗೆ ಅ ಚಿತ್ರದ ಮೇಲೆ ವಿಶೇಷ ಪ್ರೀತಿಯಿದ್ದರೆ ಆಶ್ಚರ್ಯವೇನೂ ಇಲ್ಲ.

  • ಅಂಬರೀಷ್ ಮಗನೂ ಜಲೀಲ..!

    abhishek ambareesh new film is jaleel

    ರೆಬಲ್‍ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿ, ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆತರುವ ಸುಳಿವನ್ನು ಇತ್ತೀಚೆಗಷ್ಟೇ ನೀಡಿದ್ದರು. ಆದರೆ, ಸಿನಿಮಾದ ಕಥೆ, ಬ್ಯಾನರ್ ವಿಷಯದಲ್ಲಿ ನಾನೇ ಫೈನಲ್ ಎಂದಿದ್ದರು ಅಂಬರೀಷ್. ಈಗ ಅದುಹೆಚ್ಚೂ ಕಡಿಮೆ ಫೈನಲ್ ಆಗಿದೆ.

    ಅಂಬರೀಷ್ ಮಗ ಅಭಿಷೇಕ್ ನಟಿಸಲಿರುವ ಮೊದಲ ಚಿತ್ರಕ್ಕೆ ಜಲೀಲ ಎಂದು ಹೆಸರಿಡಲಾಗಿದೆ.  ನಾಗರಹಾವು ಚಿತ್ರದ ಮೂಲಕ ಅಂಬರಿಷ್ ತೆರೆಗೆ ಬಂದಿದ್ದೇ ಜಲೀಲನಾಗಿ. ಅಂಬಿಯನ್ನು ಇಂದಿಗೂ ಜಲೀಲ ಎಂದು ಅಭಿಮಾನಿಸುವವರ ಸಂಖ್ಯೆಗೇನೂ ಕೊರತೆಯಿಲ್ಲ. ಈಗ ಅದೇ ಪಾತ್ರದ ಹೆಸರಲ್ಲಿ ಅಭಿಷೇಕ್ ಚಿತ್ರ ಸೆಟ್ಟೇರುತ್ತಿದೆ.

    ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ನಿರ್ಮಾಣದ ಹೊಣೆ ಹೊತ್ತಿರುವುದು ಅಂಬರೀಷ್ ಆಪ್ತಮಿತ್ರ ಸಂದೇಶ್ ನಾಗರಾಜ್. ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಇಬ್ಬರಲ್ಲಿ ಒಬ್ಬರು ಚಿತ್ರ ನಿರ್ದೇಶಿಸಲಿದ್ದಾರೆ. 

  • ಅಭಿಮಾನಿಯ ಆಸೆ ಪೂರೈಸಿದ ಮಾಣಿಕ್ಯ

    sudeep fulfills his fan's dream

    ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಕಲಾವಿದ. ಸೋಷಿಯಲ್ ಮೀಡಿಯಾ ಮೂಲಕ ನೇರವಾಗಿ, ನಿರಂತರವಾಗಿ ಅಭಿಮಾನಿಗಳ ಜೊತೆಯಲ್ಲಿರುವ ಸುದೀಪ್, ತಮ್ಮ ಅಭಿಮಾನಿಗಳನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ. 

    ಅಭಿಷೇಕ್ ಎಂಬ ಈ ಪುಟ್ಟ ಬಾಲಕ ಮಾಂಸಖಂಡ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಸುದೀಪ್ ಅವರ ಅಭಿಮಾನಿ. ಈ ಅಭಿಮಾನಿಗೆ ಸುದೀಪ್ ಅವರನ್ನು ನೋಡಬೇಕು ಎನ್ನುವ ಹಂಬಲ. ವಿಷಯ ತಿಳಿದ ಸುದೀಪ್, ಅಭಿಷೇಕ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

    ಧೈರ್ಯವಾಗಿರಿ, ಸರಿ ಹೋಗುತ್ತೆ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ. ಪುಟ್ಟ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಸುದೀಪ್ ಅವರ ಈ ಹೃದಯವಂತಿಕೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

  • ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಟರ್

    pawan wodeyar to direct abhishek's debut

    ಅಭಿಷೇಕ್ ಅಂಬರೀಷ್ ಚಿತ್ರರಂಗಕ್ಕೆ ಬರುವುದು ಪಕ್ಕಾ ಎಂದು ನಿರ್ಧಾರವಾದ ದಿನದಿಂದಲೂ ಚಿತ್ರಕ್ಕೆ ಯಾರು ಡೈರೆಕ್ಟರ್..? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಆ ಕಾಡುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆ. ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಚಿತ್ರದ ಕಥೆಯನ್ನು ಓಕೆ ಮಾಡಿರುವುದು ಸ್ವತಃ ಅಂಬರೀಷ್.

    ಗೆಳೆಯನ ಮಗನ ಮೊದಲ ಚಿತ್ರವನ್ನು ನಿರ್ಮಿಸುವ ಜವಾಬ್ದಾರಿಯನ್ನು ಸಂದೇಶ್ ನಾಗರಾಜ್ ಹೊತ್ತುಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಚಿತ್ರಕ್ಕೆ ಜಲೀಲ ಅಥವಾ ಕನ್ವರ್‍ಲಾಲ್ ಎಂಬ ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಫೈನಲ್ ಮಾಡುವ ಆಲೋಚನೆ ಇದೆ.

    ಸಿನಿಮಾಗೆ ಪವನ್ ಒಡೆಯರ್ ಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಇನ್ನೊಬ್ಬರ ಜವಾಬ್ದಾರಿ. ಸಿನಿಮಾಗೆ 6 ಸಂಗೀತ ನಿರ್ದೇಶಕರು ಕೆಲಸ ಮಾಡಲಿದ್ದಾರಂತೆ. ಅಲ್ಲಿಗೆ ಮೂವರು ನಿರ್ದೇಶಕರು, 6 ಸಂಗೀತ ನಿರ್ದೇಶಕರ ಸಹಯೋಗದಲ್ಲಿ ಅಭಿಷೇಕ್ ಅಂಬರೀಷ್ ಮೊದಲ ಚಿತ್ರ ಲಾಂಚ್ ಆಗಲಿದೆ.

    ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ಅದ್ಧೂರಿಯಾಗಿ ಸೆಟ್ಟೇರುವ ನಿರೀಕ್ಷೆಗಳಿವೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಆಗಿಲ್ಲ.

  • ಅಭಿಷೇಕ್‍ಗೆ ಅಂಬಿ ಕೊಟ್ಟ ಕೊನೆಯ ಒಲವಿನ ಉಡುಗೊರೆ

    what was ambi's last gift to abhishek

    ಒಲವಿನ ಉಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು.. ಇದು ಒಲವಿನ ಉಡುಗೊರೆ ಚಿತ್ರದ ಸೂಪರ್ ಹಿಟ್ ಸಾಂಗ್. 1987ರಲ್ಲಿ ರಿಲೀಸ್ ಆಗಿದ್ದ ಒಲವಿನ ಉಡುಗೊರೆ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನೀಡಿದ್ದರು. ಆರ್.ಎನ್.ಜಯಗೋಪಾಲ್ ಸಾಹಿತ್ಯ ಬರೆದಿದ್ದರು. ಆ ಹಾಡು, ಅಂಬರೀಷ್, ಮಗ ಅಭಿಷೇಕ್‍ಗೆ ಕೊಟ್ಟಿರುವ ಕೊನೆಯ ಕಾಣಿಕೆ.

    ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರದಲ್ಲಿ ಈ ಹಾಡನ್ನು ಮೈನಾ ನಾಗಶೇಖರ್ ಮರುಬಳಕೆ ಮಾಡಿಕೊಂಡಿದ್ದಾರೆ. ತಾನ್ಯಾ ಹೋಪ್ ಹಾಗೂ ಅಭಿಷೇಕ್ ಮೇಲೆ ಈ ಹಾಡನ್ನು ಚಿತ್ರೀಕರಿಸಲಾಗಿದೆ.

  • ಅಮರ್ ಆಗುತ್ತಿದ್ದಾರೆ ಅಭಿಷೇಕ್ ಅಂಬರೀಷ್

    abhishek ambareesh's debut movie is amar

    ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಮೊದಲ ಚಿತ್ರದ ಹೆಸರು ಅಮರ್ ಅಂತೆ. ಚಿತ್ರದ ನಿರ್ದೇಶಕ ಸಂಜು ಮತ್ತು ಗೀತಾ, ಮೈನಾ ಖ್ಯಾತಿಯ ನಾಗಶೇಖರ್. ಚಿತ್ರದ ಕಥೆ ಅಭಿಷೇಕ್‍ಗೆ ಇಷ್ಟವಾಗಿದೆ. ಚಿತ್ರದಲ್ಲಿ ಲವ್, ರೊಮ್ಯಾನ್ಸ್, ಆ್ಯಕ್ಷನ್ ಎಲ್ಲವೂ ಇದೆ. ಅಪ್ಪನ ಅಭಿಮಾನಿಗಳು ಇಷ್ಟಪಡುವಂಥಾ ಕತೆಯಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ ಎಂದಿದ್ದಾರೆ ಅಭಿಷೇಕ್.

    ನಾಗಶೇಖರ್ ಕೂಡಾ ಸಿನಿಮಾ ವಿಚಾರ ಕರೆಕ್ಟ್ ಎಂದಿದ್ದಾರೆ. ಚಿತ್ರಕ್ಕೆ ಅಮರ್ ಎಂದು ಟೈಟಲ್ ಫೈನಲ್ ಮಾಡಲಾಗಿದೆಯಂತೆ. ಅಮರ್‍ನಾಥ್ ಅನ್ನೋದು ಅಂಬರೀಷ್ ಅವರ ಮೂಲ ಹೆಸರು. ಅಷ್ಟೇ ಅಲ್ಲ, ಅಂಬರೀಷ್‍ರ ಹಲವು ಯಶಸ್ವಿ ಚಿತ್ರಗಳಲ್ಲಿ ಅವರ ಪಾತ್ರದ ಹೆಸರು ಅಮರ್ ಆಗಿರುತ್ತಿತ್ತು. ಅಮರ್‍ನಾಥ್ ಅನ್ನೋ ಹೆಸರಿನ ಚಿತ್ರದಲ್ಲಿ ಅಂಬರೀಷ್ ನಟಿಸಿಯೂ ಇದ್ದರು. ಈಗ, ಅವರ ಪುತ್ರನ ಮೊದಲ ಚಿತ್ರಕ್ಕೆ ಅಮರ್ ಎಂದೇ ಹೆಸರಿಟ್ಟಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

     

  • ಜ್ಯೂ.ಅಂಬರೀಷ್ ಮೊದಲ ಸಿನಿಮಾ ಸೀಕ್ರೆಟ್ ಏನು..?

    ambareesh son abhishek

    ರೆಬಲ್‍ಸ್ಟಾರ್ ಅಂಬರೀಷ್ ತಮ್ಮ ಪುತ್ರನ ಅಭಿನಯದ ಮೊದಲ ಚಿತ್ರಕ್ಕೆ ಓಕೆ ಎಂದಿರುವುದು, ಆ ಚಿತ್ರಕ್ಕೆ ಅಮರ್ ಎಂದು ಟೈಟಲ್ ಫೈನಲ್ ಆಗಿರುವುದು ಗೊತ್ತಿದೆ ತಾನೇ. ಚಿತ್ರಕ್ಕೆ ನಿರ್ದೇಶಕರಾಗಿರುವುದು ನಾಗಶೇಖರ್. ಸಂಜು ಮತ್ತು ಗೀತಾ, ಮೈನಾ ಖ್ಯಾತಿಯ ನಾಗಶೇಖರ್, ಅಂಬರೀಷ್ ಪುತ್ರನ ಸಿನಿಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಫೋಟೋಶೂಟ್ ಮುಗಿಸಲಾಗಿದೆ. ಆದರೆ, ಅಂಬರೀಷ್ ಕಟ್ಟಾಜ್ಞೆಯಿರುವ ಯಾವುದೇ ಫೋಟೋ ಹೊರಬರುವ ಹಾಗಿಲ್ಲ.

    ಫೋಟೋಶೂಟ್ ನೋಡ್ತಾ ಇದ್ರೆ, ಪ್ರಭಾಸ್‍ರನ್ನೂ ಮೀರಿಸುತ್ತಾರೆ ಅನ್ನೋದು ಅಭಿಷೇಕ್ ಕುರಿತಂತೆ ನಾಗಶೇಖರ್ ಹೇಳೋ ಮಾತು. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಲವ್ & ಸೆಂಟಿಮೆಂಟ್ ಸಬ್ಜೆಕ್ಟ್ ಎಂದಿದ್ದಾರೆ ನಾಗಶೇಖರ್. ನಿರ್ಮಾಪಕ ಸಂದೇಶ್ ನಾಗರಾಜ್ ಎಲೆಕ್ಷನ್‍ನಲ್ಲಿ ಬ್ಯುಸಿಯಾಗಿರುವ ಕಾರಣ, ಒಂದಿಷ್ಟು ಕೊನೆಯ ಹಂತದ ಸಿದ್ಧತೆಗಳು ಬಾಕಿಯಿವೆ.

    ಅಂಬರೀಷ್ ಹುಟ್ಟುಹಬ್ಬದ ಚಿತ್ರದ ಫೋಟೋ ಟೀಸರ್ ಹೊರತರುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ನಾಗಶೇಖರ್. ಅಮರ್ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಅರ್ಜುನ್ ಜನ್ಯಾ, ಕ್ಯಾಮೆರಾ ಸತ್ಯ ಹೆಗಡೆ ಅವರದ್ದು. ಕಲಾ ನಿರ್ದೇಶನ ಮೋಹನ್ ಬಿ ಕೆರೆ ಅವರದ್ದು. ಸಂಕಲನದ ಜವಾಬ್ದಾರಿ ದೀಪು ಎಸ್ ಕುಮಾರ್ ಹೆಗಲೇರಿದೆ. 

    ಕನ್ನಡದ ಹುಡುಗಿಯೇ ನಾಯಕಿ ಎಂದಿರುವ ನಾಗಶೇಖರ್, ಸುಹಾಸಿನಿ, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ ಮೊದಲಾದವರು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

  • ಜ್ಯೂನಿಯರ್‍ಗೆ ಸೀನಿಯರ್ ಅಂಬಿ ಹೇಳಿದ ಬುದ್ದಿಮಾತು ಇದು..!

    dont be late advice abishek

    ಮೊನ್ನೆ ಮೊನ್ನೆಯಷ್ಟೇ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರದ ಮುಹೂರ್ತವಾಗಿದೆ. ಇಡೀ ಚಿತ್ರರಂಗ ಅಂಬರೀಷ್‍ರನ್ನೂ ಮೀರಿಸುವ ಸಾಧನೆ ಮಾಡು ಎಂದು ಹಾರೈಸುತ್ತಿದ್ದರೆ, ಅಂಬರೀಷ್ ಮಾತ್ರ ಎಂದಿನಂತೆ ಡಿಫರೆಂಟಾಗಿಯೇ ಬುದ್ದಿವಾದ ಹೇಳಿದ್ದಾರೆ.

    ನಾನು ಮಾಡಿದಂತೆ ನೀನು ಮಾಡಬೇಡ. ಸೆಟ್‍ಗೆ ಟೈಂಗೆ ಸರಿಯಾಗಿ ಹೋಗಬೇಕು. ಅದು ಅಂಬರೀಷ್ ತಮ್ಮ ಮಗನಿಗೆ ಹೇಳಿರೋ ಬುದ್ದಿವಾದ ನಂಬರ್ 1. ಅಂಬರೀಷ್ ಸೆಟ್‍ಗೆ ಲೇಟ್ ಆಗಿ ಹೋಗೋದ್ರಲ್ಲಿ ಫೇಮಸ್.

    ಎರಡನೇ ಬುದ್ದಿವಾದ ಏನು ಗೊತ್ತಾ..? ಸೆಟ್‍ನಲ್ಲಿದ್ದಾಗ ನೀನು ಆ್ಯಕ್ಟರ್ ಅಷ್ಟೆ. ಅಂಬರೀಷ್ ಮಗ ಅಲ್ಲ. ಡೈರೆಕ್ಟರ್ ಹೇಳಿದಂತೆ ಕೇಳಬೇಕು. ಹೊರಗೆ ನಿನಗೆ ಆ ನಿರ್ದೇಶಕ ಸ್ನೇಹಿತನೇ ಆಗಿರಬಹುದು. ಆದರೆ, ಸೆಟ್‍ನಲ್ಲಿ ಡೈರೆಕ್ಟರ್ ಡೈರೆಕ್ಟರೇ. ನಟ ನಟಾನೇ. ಅದನ್ನು ಶಿಸ್ತಿನಿಂದ ಪಾಲಿಸಬೇಕು ಎಂದು ಹೇಳಿದ್ದಾರೆ ಅಂಬರೀಷ್.

    ವಿಶೇಷ ಅಂದ್ರೆ, ಅಂಬರೀಷ್ ಇವರೆಡನ್ನೂ ಶಿಸ್ತಿನಿಂದ ಪಾಲಿಸಿದವರಲ್ಲ. ಬಹುಶಃ ಪುಟ್ಟಣ್ಣರಂತಾ ನಿರ್ದೇಶಕರನ್ನು ಬಿಟ್ಟರೆ, ಅಂಬರೀಷ್‍ರನ್ನು ಪ್ರಶ್ನಿಸುವ ಅಥವಾ ಬಯ್ಯುವ ಧೈರ್ಯ ಮಾಡಿದ ನಿರ್ದೇಶಕರೂ ಇಲ್ಲ ಎನ್ನಬೇಕು. ಆದರೆ, ಯಾವುದೋ ಒಂದು ಸೀನ್ ಚೆನ್ನಾಗಿ ಬಂದಿಲ್ಲ ಎಂದು ನಿರ್ದೇಶಕ ಹೇಳಿದರೆ, ಬಾಯ್ತುಂಬಾ ಬೈದರೂ ಅಷ್ಟೇ ಪ್ರೀತಿಯಿಂದ ಮತ್ತೊಮ್ಮೆ ನಟಿಸುತ್ತಿದ್ದ ಅಂಬಿ, ನಿರ್ದೇಶಕರಿಗೆ ಇಷ್ಟವಾಗಿದ್ದ ನಟ. ನಿರ್ದೇಶಕರ ಸ್ವಾತಂತ್ರ್ಯದಲ್ಲಿ ಯಾವತ್ತೂ ಮೂಗು ತೂರಿಸದ ಅಂಬರೀಷ್, ತಮ್ಮ ಮಗನಿಗೂ ಅದನ್ನೇ ಹೇಳಿಕೊಟ್ಟಿದ್ದಾರೆ. ಅಭಿಷೇಕ್ ಪಾಲಿಸಬೇಕು.. ಅಷ್ಟೆ.

     

  • ತಿಥಿ ಖ್ಯಾತಿಯ ಅಭಿಷೇಕ್‍ಗೆ ಮದುವೆ ಸಂಭ್ರಮ

    thithi fame abhishek

    ತಿಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತನಾಗಿದ್ದ ಯುವನಟ ಅಭಿಷೇಕ್ ಈಗ ಮದುವೆಯಾಗುತ್ತಿದ್ದಾರೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ದಿನ, ಅಭಿಷೇಕ್ ಹಸೆಮಣೆ ಏರುತ್ತಿದ್ದಾರೆ. ಅಕ್ಕನ ಮಗಳು ಹೊಂಬಾಳೆಯನ್ನೇ ಮದುವೆಯಾಗುತ್ತಿರುವ ಅಭಿಷೇಕ್, ಮೂಲತಃ ಮಂಡ್ಯ ಜಿಲ್ಲೆಯ ಹುಲಿಕೆರೆ ಕೊಪ್ಪಲಿನವರು. 

    ನವೆಂಬರ್ 14 ಶಾಸ್ತ್ರ, ನವೆಂಬರ್ 15 ಮುಹೂರ್ತ. ತಿಥಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅಭಿಷೇಕ್, ತದನಂತರ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿಯೂ ನಟಿಸಿದ್ದರು. 

  • ಪ್ರೇಮಿ, ರೆಬಲ್, ಟ್ರಬಲ್.. ಎಲ್ಲ ಅವರೇ ಅಂತೆ..!

    what is the story line of amar

    ಜ್ಯೂ.ಅಂಬರೀಷ್, ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಕಥೆ ಏನು..? ಅಭಿಷೇಕ್ ಪಾತ್ರ ಎಂಥದ್ದು..? ಅಂಥಾದ್ದೊಂದು ಕುತೂಹಲ ಸಹಜಾಗಿಯೇ ಅಭಿಮಾನಿಗಳಲ್ಲಿದೆ. 

    ಇದೊಂದು ಯೂತ್‍ಫುಲ್ ಲವ್‍ಸ್ಟೋರಿ. ಬ್ಯೂಟಿಫುಲ್ ಲವ್‍ಸ್ಟೋರಿ. ಈ ಚಿತ್ರದಲ್ಲಿ ಪ್ರೇಮಿಯೂ ಅವರೇ, ರೆಬಲ್ಲು, ಟ್ರಬಲ್ಲು ಎಲ್ಲ ಅವರೇ.. ನಾಗಶೇಖರ್ ನಿರ್ದೇಶನದ ಚಿತ್ರವಾದ್ದರಿಂದ ನಿರೀಕ್ಷೆಗಳೂ ಇವೆ. 

    ದರ್ಶನ್ ಜೊತೆ ಯಜಮಾನ, ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿರುವ ತಾನ್ಯಾ ಹೋಪ್ ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ನಾಯಕಿ. 

    ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೂಲಕ, ಕನ್ನಡಕ್ಕೆ ಮತ್ತೊಬ್ಬ ಆರಡಿ ಎತ್ತರದ ಹೀರೋ ಸಿಗುತ್ತಿದ್ದಾರೆ. 

  • ಮಗನ ಚಿತ್ರವನ್ನು ಅರ್ಧ ನೋಡಿದ್ದರು ಅಂಬಿ

    ambareesh had watched his son's first half of his debut movie

    ಅಮರ್, ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರ. ಚಿತ್ರದ ಬಗ್ಗೆ ಗೆಳೆಯ ಸಂದೇಶ್ ನಾಗರಾಜ್‍ಗೆ ದುಂಬಾಲು ಬಿದ್ದಿದ್ದ ಅಂಬಿ, ಅರ್ಧ ಚಿತ್ರವನ್ನು ನೋಡಿಯೂ ಇದ್ದರಂತೆ. ಸಾಯುವ ಕೆಲವೇ ದಿನಗಳ ಹಿಂದೆ ಸಂದೇಶ್‍ರನ್ನು ಕರೆಸಿಕೊಂಡಿದ್ದ ಅಂಬಿ, ನಾನು ಸಿನಿಮಾ ನೋಡಲೇಬೇಕು ಎಂದು ಹಠ ಮಾಡಿದ್ದರು. ಗೆಳೆಯನ ಡಿಮ್ಯಾಂಡ್‍ಗೆ ಒಪ್ಪಿ, ಶೂಟಿಂಗ್ ಆಗಿದ್ದಷ್ಟೇ ಸಿನಿಮಾವನ್ನು ಡಬ್ಬಿಂಗ್ ಕೂಡಾ ಮಾಡಿಸಿ ಅಂಬಿಗೆ ತೋರಿಸಿದ್ದರು.

    `ನನ್ನ ಗೆಳೆಯ ಮಗನ ಅರ್ಧ ಸಿನಿಮಾ ನೋಡಿದ. ಮಗನನ್ನು ಹೀರೋ ಆಗಿ ತೆರೆ ಮೇಲೆ ನೋಡಬೇಕು ಅನ್ನೋ ಅವನ ಆಸೆಯನ್ನು ಹಾಗೆ ಈಡೇರಿಸಿದೆ ಅನ್ನೋ ತೃಪ್ತಿಯೂ ಇದೆ. ಪೂರ್ತಿ ನೋಡೋಕೆ ಆಗಲಿಲ್ಲ ಅನ್ನೋ ದುಃಖವೂ ಇದೆ' ಎಂದು ಹೇಳಿಕೊಂಡಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್.

    ಅಂಬರೀಷ್, ಸಂದೇಶ್‍ರನ್ನು ಕರೆಯುತ್ತಿದ್ದುದೇ ಧಣಿ, ಸಾವ್ಕಾರ ಅಂತ. ಮೈಸೂರಿನಲ್ಲಿರೋ ಹೋಟೆಲ್‍ನಲ್ಲಿ ಅಂಬಿಗಾಗಿ ಒಂದು ರೂಂ ಯಾವಾಗಲೂ ಖಾಯಂ ಇರುತ್ತಿತ್ತು. ಗೆಳೆಯ ಯಾವಾಗಲೇ ಬಂದರೂ ರಾಜಾತಿಥ್ಯವನ್ನೇ ನೀಡಬೇಕು ಎಂದು ಅಪ್ಪಣೆ ಮಾಡಿದ್ದರು ಸಂದೇಶ್ ನಾಗರಾಜ್. ಸಂದೇಶ್‍ರನ್ನು ಸಿನಿಮಾ ನಿರ್ಮಾಪಕನನ್ನಾಗಿಸಿದ್ದು ಅಂಬಿ. ಅಂಬಿ ಮಗನನ್ನು ಹೀರೋ ಆಗಿಸುವ ಕನಸು ಹೊತ್ತವರು ಸಂದೇಶ್. 

    ಅಂದಹಾಗೆ.. ಸಂದೇಶ್ ನಾಗರಾಜ್ ಜೆಡಿಎಸ್ ಆದ್ರೆ, ಅಂಬಿ ಕಾಂಗ್ರೆಸ್ಸು. ಆದರೆ.. ಅವರಿಬ್ಬರ ಸ್ನೇಹಕ್ಕೆ 55 ವರ್ಷಗಳ ಇತಿಹಾಸವಿದೆ.