` raj b shetty, - chitraloka.com | Kannada Movie News, Reviews | Image

raj b shetty,

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಹೊಟ್ಟೆ ತುಂಬಾ ನಕ್ಕ ಪ್ರೇಕ್ಷಕ

    gubbi mele bramhastra image

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗಿದೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆ, ಸುಜಯ್ ಶಾಸ್ತ್ರಿ ನಿರ್ದೇಶನ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಹ್ಯಾಪಿ. ಚಿತ್ರ ಇಷ್ಟವಾಗಿರೋದಕ್ಕೆ ಕಾರಣಗಳಿವೆ.

    ಈ ಸಿನಿಮಾ ಹೀರೋಗೆ ಅವನು ಹೀರೋ ಅಲ್ಲ ಗೊತ್ತಿದೆ. ಆದರೆ ಅವನು ಸಿನಿಮೀಯ ಘಟನೆಗಳಲ್ಲಿ ಸಿಕ್ಕಿಕೊಳ್ತಾ ಹೋಗ್ತಾನೆ. ಒಂದೂವರೆ ಲಕ್ಷ ಸಂಬಳ ಪಡೆಯೋ ಸಾಫ್ಟ್‍ವೇರ್ ಉದ್ಯೋಗಿ, ಲವ್ ಮಾಡಿಯೇ ಮದುವೆಯಾಗಬೇಕು ಎನ್ನುವ ಹಠ, ಲಾಜಿಕ್ಕುಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾಡಿರುವ ಸಂಕಲನ, ಯಾವುದೇ ಸಂದೇಶ ನೀಡದೆ ಕೇವಲ ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ ಎನ್ನುವಂತೆ ಚಿತ್ರವನ್ನು ಕಟ್ಟಿಕೊಟ್ಟಿರುವ ಸುಜಯ್ ಶಾಸ್ತ್ರಿ, ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಜೋಡಿ ಗೆದ್ದಿದೆ.

     

  • ಗುಬ್ಬಿ ಮೇಲೆ ರಾಬಿನ್ ಹುಡ್ ಬ್ರಹ್ಮಾಸ್ತ್ರ

    there is robin hood in gubbi  mele brmahastramovie

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವೇ ಒಂದು ಕಾಮಿಡಿ ಕಥಾಹಂದರ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಹುಡುಗಿಗಾಗಿ ಹುಡುಕಾಡುವ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿದ್ದರೆ, ಕವಿತಾ ಗೌಡ ಪರ್ಪಲ್ ಪ್ರಿಯಾ ಆಗಿ ಕಂಗೊಳಿಸಿದ್ದಾರೆ. ಆದರೆ, ಇವರಿಗಿಂತ ಡಿಫರೆಂಟ್ ಪಾತ್ರದಲ್ಲಿರೋದು ಪ್ರಮೋದ್ ಶೆಟ್ಟಿ.

    ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೆಲ್‍ಬಾಟಂ ಚಿತ್ರಗಳಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಬಿನ್ ಹುಡ್ ಪಾತ್ರಧಾರಿ. ಆದರೆ, ನಿರ್ದೇಶಕ ಸುಜಯ್ ಶಾಸ್ತ್ರಿ ಈ ಪಾತ್ರವನ್ನು ಭಲೇ ಮಜವಾಗಿ ಕಟ್ಟಿಕೊಟ್ಟಿದ್ದಾರೆ.

    ರಾಬಿನ್ ಹುಡ್ ಎಂದರೆ, ಶ್ರೀಮಂತರನ್ನು ದೋಚಿ, ಬಡವರಿಗೆ ಹಂಚುವವನು. ಆದರೆ, ಈ ರಾಬಿನ್ ಹುಡ್, ದೋಚಿದ್ದೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಂಡು ಖುಷಿ ಪಡುವವನು. 

    ಹೇಗೆ.. ಯಾಕೆ.. ಅಂತೆಲ್ಲ ಪ್ರಶ್ನೆ ಮಾಡ್ತಾ ಕೂರಬೇಡಿ. ಆಗಸ್ಟ್ 15ಕ್ಕೆ ಥಿಯೇಟರ್‍ಗೆ ಹೋಗಿ.. ನಕ್ಕು ನಲಿಯಿರಿ.

  • ಚಾಮರಾಜನಗರ ಕೋರ್ಟ್ ಮೆಟ್ಟಿಲೇರಿದ ಗರುಡ ಗಮನ ವೃಷಭ ವಾಹನ ಚಿತ್ರದ ವಿವಾದ.,..

    ಚಾಮರಾಜನಗರ ಕೋರ್ಟ್ ಮೆಟ್ಟಿಲೇರಿದ ಗರುಡ ಗಮನ ವೃಷಭ ವಾಹನ ಚಿತ್ರದ ವಿವಾದ.,..

    ಕ್ರೌರ್ಯ ಮೆರೆಯುವ ದೃಶ್ಯ ಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ... ‘ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ.. ಚಿತ್ರತಂಡದ ವಿರುದ್ಧ ಮೊಕದ್ದಮೆ ಹೂಡಿದ ಹಾಕಿದ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ..

    ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ ಮಹಾಸಭಾ ರಾಜ್ಯಾಧ್ಯಕ್ಷ ವಿಜಯಕುಮಾರ್... ಮಹದೇಶ್ವರ ನ ಹಾಡು ತೆಗೆಯಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಅರ್ಜಿ...

    ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿರುವ ವಿಜಯ ಕುಮಾರ್... ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿ ಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ.... ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ..

    ಇಂದು   ವಿಚಾರಣೆಗೆ ನಡೆಸಲಿರುವ ನ್ಯಾಯಾಲಯ.. ಭಕ್ತಿಗೀತೆಯಾಗಿರುವ ಸೂಜುಗಾದ ಸೂಜುಮಲ್ಲಿಗೆ ಹಾಡನ್ನು ಕ್ರೌರ್ಯದ ದೃಶ್ಯಕ್ಕೆ ಬಳಕೆ ಮಾಡಿಕೊಂಡು ಜನಪದ ಸಂಸ್ಕೃತಿಗೆ ಧಕ್ಕೆ.... ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ...

    ಇದರ ಜೊತೆ ಮಾದಪ್ಪನ ಭಕ್ತರು  ಸಹ ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...

  • ಟೆರರ್ ಬ್ರಹ್ಮಾಸ್ತ್ರಕ್ಕೂ ಬೆದರಲಿಲ್ಲ ಗುಬ್ಬಿ ಪ್ರೇಕ್ಷಕ

    gubbi mele bramhastra attracts audience amidst terror alter in the city

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಥಿಯೇಟರುಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರ ರಿಲೀಸ್ ಆದ ಮರುದಿನವೇ ಚಿತ್ರತಂಡಕ್ಕೊಂದು ಶಾಕ್ ಕಾದಿತ್ತು. ಕರ್ನಾಟಕದಾದ್ಯಂತ ಭಯೋತ್ಪಾದಕ ದಾಳಿ ಭೀತಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಯ್ತು. ಮಾಲ್‍ಗಳಲ್ಲಿ, ತಿಯೇಟರುಗಳಲ್ಲಿ ಭದ್ರತೆ, ತಪಾಸಣೆ ಹೆಚ್ಚಾಯ್ತು. ಈಗ ಥಿಯೇಟರು, ಮಾಲ್‍ಗಳಲ್ಲಿ ಪ್ರತಿದಿನ ಎರಡು ಬಾರಿ ಸಂಪೂರ್ಣ ತಪಾಸಣೆ ನಡೆಯುತ್ತಿದೆ.

    ಆದರೆ, ಇದೆಲ್ಲದರ ನಡುವೆಯೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ತಪಾಸಣೆ ಎದುರಿಸಿಕೊಂಡೇ ಬಂದು ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಖುಷಿಗೊಂಡಿದ್ದಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್.

    ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರದಲ್ಲಿದ್ದಾರೆ.

  • ಟ್ರೇಲರ್‍ಗೇ ಬಂತು ಬಾಲಿವುಡ್ ಡಿಮ್ಯಾಂಡು

    gubbi mele bramhastra trailer gets demand in bollywood

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ರಿಲೀಸ್‍ಗೆ ರೆಡಿಯಾಗಿ ಟ್ರೇಲರ್ ಬಿಟ್ಟಿದ್ದೇ ತಡ, ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್‍ನಿಂದ. ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ. ಸಗಣಿ ಪಿಂಟೋ ಪಾತ್ರದಿಂದ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ, ಕಮೆಂಟೇಟರ್ ಕೂಡಾ ಹೌದು. ಫುಟ್‍ಬಾಲ್, ಕಬಡ್ಡಿ ಟೂರ್ನಮೆಂಟುಗಳಿಗೆ ಆಗಾಗ್ಗೆ ಮುಂಬೈಗೆ ಹೋಗುತ್ತಲೇ ಇರುತ್ತಾರೆ.

    ಹೀಗಾಗಿ ನನಗೆ ಅಲ್ಲಿನ ಕೆಲ ಬಾಲಿವುಡ್ ಮಂದಿ ಪರಿಚಯವಿದೆ. ಚಿತ್ರದ ಟ್ರೇಲರ್ ನೋಡಿ ಇಷ್ಟಪಟ್ಟಿರುವ ಕೆಲವರು ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಉತ್ಸುಕತೆ ತೋರುತ್ತಿದ್ದಾರೆ. ಮಾತುಕತೆಗಳು ಜಾರಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

    ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟಿಸಿರುವ ಚಿತ್ರದಲ್ಲಿ ಶುಭಾ ಪೂಂಜಾ, ಕಾರುಣ್ಯ ರಾಮ್, ಶೋಭರಾಜ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಅಯೋಗ್ಯ, ಚಮಕ್ ಖ್ಯಾತಿಯ ಟಿ.ಆರ್. ಚಂದ್ರಶೇಖರ್ ಚಿತ್ರದ ನಿರ್ಮಾಪಕ.

  • ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

    ನ.19ಕ್ಕೆ ಪ್ರೇಕ್ಷಕ ಗಮನ ಥಿಯೇಟರ್ ವಾಹನ

    ಗರುಡ ಗಮನ ವೃಷಭ ವಾಹನ. ತನ್ನ ಟೈಟಲ್ಲಿನಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರ. ಶೆಟ್ಟಿ + ಶೆಟ್ಟಿ ಕಾಂಬಿನೇಷನ್ ಸಿನಿಮಾ. ಯೆಸ್, ಇದು ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸಿರೋ ಸಿನಿಮಾ. ಚಿತ್ರದ ನಿರ್ದೇಶಕರೂ ಸ್ವತಃ ರಾಜ್ ಬಿ.ಶೆಟ್ಟಿ. ಪ್ರೇಕ್ಷಕರ ಬಾಯಲ್ಲಿ ಗರುಡ ಗಮನ ವೃಷಭ ವಾಹನ ಅನ್ನೋ ಟೈಟಲ್ ಈಗ ಸಿಂಪಲ್ಲಾಗಿ ಜಿಜಿವಿವಿ ಆಗಿ ಹೋಗಿದೆ. ಈ ಚಿತ್ರವೀಗ ನವೆಂಬರ್ 19ರಂದು ತೆರೆಗೆ ಬರುತ್ತಿದೆ.

    ಈಗಾಗಲೇ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರೆಗ್ಯುಲರ್ ಸ್ಟೈಲ್‍ಗಿಂತ, ಶೈಲಿಗಿಂತ ಬೇರೆಯದೇ ಆದ ಸಿನಿಮಾ ಈ ಜಿಜಿವಿವಿ ಅನ್ನೋ ಫೀಲಿಂಗ್ ಕೊಟ್ಟಿದೆ ಚಿತ್ರದ ಟ್ರೇಲರ್. ಗ್ಯಾಂಗ್‍ಸ್ಟರ್, ಫ್ರೆಂಡ್‍ಶಿಪ್ ಮತ್ತು ಗ್ಯಾಂಗ್‍ವಾರ್.. ಎಲ್ಲವನ್ನೂ ಕರಾವಳಿ ಬ್ಯಾಕ್‍ಗ್ರೌಂಡ್‍ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ.

    ರಿಷಬ್ ಮತ್ತು ರಾಜ್ ಇಬ್ಬರ ಕಾಂಬಿನೇಷನ್ನೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. 

  • ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

    ನಿರ್ದೇಶಕರೇ ಮೆಚ್ಚಿದ ನಿರ್ದೇಶಕರ ಸಿನಿಮಾ ಗಗವೃವಾ

    ಒಂದು ಚಿತ್ರವನ್ನು ಸಿದ್ಧ ಮಾಡಿ ತೆರೆಗೆ ತರುವ ಪ್ರತಿಯೊಬ್ಬರಿಗೂ ಒಂದು ಆಸೆ ಸಹಜವಾಗಿಯೇ ಇರುತ್ತದೆ. ತಮ್ಮ ಕ್ಷೇತ್ರದ ಸಾಧಕರೆಲ್ಲರೂ ಈ ಚಿತ್ರವನ್ನು ಮೆಚ್ಚಬೇಕು ಎನ್ನುವುದು. ಸದ್ಯಕ್ಕೆ ರಾಜ್ ಬಿ.ಶೆಟ್ಟಿ ಆ ಸಾಧನೆ ಮಾಡಿದ್ದಾರೆ. ಒಂದು ಕಡೆ ಗರುಡ ಗಮನ ವೃಷಭ ವಾಹನವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿದ್ದಾರೆ. ಬಾಕ್ಸಾಫೀಸ್ ದಾಖಲೆ ಬರೆಯುತ್ತಿದೆ. ಸಿನಿಮಾ ಚೆನ್ನಾಗಿದೆಯಾ..? ಕೆಟ್ಟದಾಗಿಯಾ..? ಓಕೆನಾ..? ಆವರೇಜ್ ಮೂವಿನಾ..? ಎಕ್ಸ್‍ಟ್ರಾರ್ಡನರಿ ಸಿನಿಮಾನಾ..? ಹೀಗೆ.. ಪರ ವಿರೋಧ ಎರಡೂ ಚರ್ಚೆಗಳು ಚಾಲ್ತಿಯಲ್ಲಿವೆ. ಇದೆಲ್ಲದರ ಮಧ್ಯೆ ರಾಜ್ ಬಿ.ಶೆಟ್ಟಿಗೆ ಚಿತ್ರರಂಗದ ನಿರ್ದೇಶಕರಿಂದ ಪ್ರಶಂಸೆಗಳು ಸಿಗುತ್ತಿವೆ.

    ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬ ಹೀರೋ ರಿಷಬ್ ಶೆಟ್ಟಿ, ಸ್ವತಃ ಹಿಟ್ ಡೈರೆಕ್ಟರ್ ಅನ್ನೋದನ್ನು ಮರೆಯುವಂತಿಲ್ಲ. ಚಿತ್ರವನ್ನು ವಿತರಣೆ ಮಾಡಿದವರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ಕೂಡಾ ಸ್ಟಾರ್ ನಿರ್ದೇಶಕರೇ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡಾ ಚಿತ್ರದ ಬಗ್ಗೆ ಚೆಂದದ ಮಾತನಾಡಿದ್ದಾರೆ.

    ಅವರಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪುಟ್ಟ ಪತ್ರವನ್ನೇ ಬರೆದು ರಾಜ್ ಬಿ.ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಶಶಾಂಕ್, ಅನೂಪ್ ಭಂಡಾರಿ, ಸತ್ಯ ಪ್ರಕಾಶ್, ಹೇಮಂತ್ ರಾವ್.. ಹೀಗೆ ಚಿತ್ರವನ್ನು ನೋಡಿದವರೆಲ್ಲ ಗರುಡ ಗಮನ ವೃಷಭ ವಾಹನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

  • ಪುನೀತ್ ಮಾಯಾ ಬಜಾರ್‌ನಲ್ಲಿ ಮೋದಿ ನೋಟ್ ಬ್ಯಾನ್ ಕಥೆ

    note ban story in maya bazar

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಬ್ಯಾನರ್‌ನಲ್ಲಿ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣಕ್ಕಿಳಿದಿದ್ದಾರೆ. ಮೊದಲ ಪ್ರಯತ್ನ ಕವಲುದಾರಿಯಲ್ಲಿ ಕಮರ್ಷಿಯಲ್ ಆಗಿಯೂ ಸಕ್ಸಸ್ ಕಂಡಿದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರದ ಟೀಸರ್ ಹೊರತಂದಿದ್ದಾರೆ. ದುಬೈನಲ್ಲಿ ಮಾಯಾ ಬಜಾರ್ ಟೀಸರ್ ರಿಲೀಸ್ ಆಗಿದೆ.

    ರಾಜ್ ಬಿ.ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಚೈತ್ರಾ ರಾವ್ ನಟಿಸಿರುವ ಚಿತ್ರದ ಟೀಸರ್‌ಲ್ಲಿರೋದು ಮೋದಿ ನೋಟ್ ಬ್ಯಾನ್ ಅವಧಿಯಲ್ಲಿ ಮಾಡಿದ್ದ ಸ್ಟೇಟ್‌ಮೆಂಟ್‌ನ ಬ್ಯಾಕ್‌ಗ್ರೌಂಡ್ ವಾಯ್ಸ್. ಹಾಗಾದರೆ.. ಚಿತ್ರದ ಕಥೆಯಲ್ಲಿರೋದು.. ದಟ್ ಈಸ್ ಸಸ್ಪೆನ್ಸ್.

    ರಾಧಾಕೃಷ್ಣ ಚಿತ್ರದ ನಿರ್ದೇಶಕ. ಮೂಲತಃ ಸಿವಿಲ್ ಎಂಜಿನಿಯರ್ ಆಗಿರುವ ರಾಧಾಕೃಷ್ಣಗೆ ಇದು ಮೊದಲ ಪ್ರಯತ್ನ. ರಾಜ್ ಬಿ.ಶೆಟ್ಟಿ ಮಹತ್ವಾಕಾಂಕ್ಷೆಯಿರುವ ಹುಡುಗನಾಗಿ ನಟಿಸಿದ್ದರೆ, ವಸಿಷ್ಠ ಕಾಮಿಡಿ ರೋಲ್ ಮಾಡಿದ್ದಾರಂತೆ. ಫಸ್ಟ್ ಟೈಂ. ಟೀಸರ್ ಗಮನ ಸೆಳೆದಿದೆ.

  • ಪ್ರೇಕ್ಷಕ ಗುಬ್ಬಿ ಮೇಲೆ ಕಾಮಿಡಿ ಬ್ರಹ್ಮಾಸ್ತ್ರ

    gubbi mele bramhastra trailer released

    ನೀನೇನ್ ಶಾರೂಕ್ ಖಾನ್ ಥರಾನಾ ಇದ್ಯಾ..? ಬ್ಯಾಂಕ್ ಜನಾರ್ದನ್ ಕೊನೆ ತಮ್ಮನ್ ಥರಾ ಇದ್ಯಾ.. ಅವ್ನು ಡಾನ್.. ಅಯ್ಯೋ ಬಿಡಿ ಸಾರ್.. ಅವ್ರವ್ರು ಹೊಟ್ಟೆಪಾಡಿಗೆ ಏನೇನೋ ಮಾಡ್ಕೋತಾರೆ.. ನಂಗೆ ನೋ ಪ್ರಾಬ್ಲಂ..

    ಸಾರ್.. ನಾನು ನಿಮ್ ಹೆಂಡ್ತೀನ್ ಕಿಡ್ನಾಪ್ ಮಾಡಿದ್ದೀನಿ.. (ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ) ತಪ್ಪಾಗೋಯ್ತು ಸಾರ್, ನಿಮ್ ತಂಗೀನ್ ಕಿಡ್ನಾಪ್ ಮಾಡಬೇಕಿತ್ತು.. (ಮತ್ತೆ ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ)

    ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಟ್ರೇಲರ್‍ನ ಸ್ಯಾಂಪಲ್ಲುಗಳಷ್ಟೆ. ಟ್ರೇಲರಿನಲ್ಲೇ ನಗೆಯ ಬುಗ್ಗೆ ಉಕ್ಕಿಸಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆಯ ಸಿನಿಮಾಗೆ ಪ್ರಸನ್ನ ಕಚಗುಳಿಯ ಸಂಭಾಷಣೆ ಕೊಟ್ಟಿದ್ದಾರೆ.

    ಅಯೋಗ್ಯ, ಚಮಕ್, ಬೀರ್‍ಬಲ್ ನಂತರ ಮತ್ತೊಮ್ಮೆ ಟಿ.ಆರ್.ಚಂದ್ರಶೇಖರ್ ಗೆಲುವಿನ ನಗು ಕಾಣುತ್ತಿದ್ದಾರೆ.

  • ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

    ಭೋಲೇನಾಥ್ ಶಿವನಾಗಿ ರಾಜ್ ಬಿ. ಶೆಟ್ಟಿ. ರಿಷಬ್ ಶೆಟ್ಟಿ ಪಾತ್ರವೇನು?

    ಮುಗ್ಧನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊಟ್ಟೆ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈಗ ಭೂಗತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಡೈರೆಕ್ಟರ್. ಅವರೇ ಪ್ರೊಡ್ಯೂಸರ್. ಕಥೆ ಹೊಸದಾಗಿದೆ ಎನ್ನುವ ಸಿಗ್ನಲ್ ಟ್ರೇಲರ್‍ನಲ್ಲಿ ಸಿಕ್ಕಿದೆ.

    ಶಿವನನ್ನು ಭೋಲೆನಾಥ್ ಎನ್ನುತ್ತಾರೆ. ಭೋಲೆ ಎಂದರೆ ಮುಗ್ಧ ಎಂದರ್ಥ. ಹೀಗಾಗಿಯೇ ಶಿವನಿಗೆ ಮುಗ್ಧತೆ ಮತ್ತು ಕೋಪ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿತ್ರದಲ್ಲಿ ನನ್ನ ಪಾತ್ರವೂ ಅಂತಹುದೇ. ಮುಗ್ಧ ಮತ್ತು ಸಿಟ್ಟು ಎರಡನ್ನೂ ತುಂಬಿಕೊಂಡಿರೋ ಮುಗ್ಧ ಮೃಗ. ತನ್ನ ತಂಟೆಗೆ ಬಂದವರ ಮೇಲೆ ಕ್ರೂರವಾಗಿ ದಾಳಿ ಮಾಡುವ ಮೃಗದಂತವನು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.

    ರಿಷಬ್ ಶೆಟ್ಟಿ ಚಿತ್ರದಲ್ಲಿ ಹರಿ ಅನ್ನೋ ಪಾತ್ರ ಮಾಡಿದ್ದಾರೆ. ನನ್ನ ಪಾತ್ರ ಮತ್ತು ಅವರ ಪಾತ್ರ ಫ್ರೆಂಡ್ಸ್. ರಿಯಲ್ಲಾಗಿ ನಾವಿಬ್ಬರೂ ಫ್ರೆಂಡ್ಸ್. ಅಷ್ಟೇ ಅಲ್ಲ, ಇತ್ತೀಚೆಗೆ ಕಾಮಿಡಿ ಶೇಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸುತ್ತಿದ್ದ ರಿಷಬ್ ಶೆಟ್ಟಿ ಇಲ್ಲಿ ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್‍ಗಳಿವೆ ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಸಿನಿಮಾ ರಿಲೀಸ್ ಆಗೋಕೆ ಸಮಯ ಫಿಕ್ಸ್ ಆಗಿದೆ. ವೇಯ್ಟ್ & ಸೀ.

  • ಮತ್ತೊಂದು ಸಿನಿಮಾ ರೆಡಿ ಮಾಡಿದ್ರು ರಾಜ್ ಶೆಟ್ರು..!

    ಮತ್ತೊಂದು ಸಿನಿಮಾ ರೆಡಿ ಮಾಡಿದ್ರು ರಾಜ್ ಶೆಟ್ರು..!

    ರಾಜ್ ಬಿ.ಶೆಟ್ಟಿ. ರಮ್ಯಾ ಅವರು ನಿರ್ಮಾಪಕಿಯಾಗಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಸಿದ್ಧವಾಗಿದ್ದಾರೆ. ಪಕ್ಕಾ ಸ್ಕ್ರಿಪ್ಟ್.. ಪಕ್ಕಾ ಪ್ಲಾನಿಂಗ್.. ಕಡಿಮೆ ಬಜೆಟ್.. ಇದು ರಾಜ್ ಬಿ.ಶೆಟ್ಟಿ ಸ್ಟೈಲ್. ಹೀಗಾಗಿಯೇ ರಾಜ್ ಬಿ.ಶೆಟ್ಟಿಯವರ ಚಿತ್ರಗಳು ಸರಸರನೆ ಮುಗಿಯುತ್ತವೆ. ಬರವಣಿಗೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ರಾಜ್ ಬಿ.ಶೆಟ್ಟಿ ಸುಮ್ಮನೆ ಕೂರುವವರಲ್ಲ.

    ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಹೀರೋ ಕಮ್ ಡೈರೆಕ್ಟರ್. ಇದರ ನಡುವೆ ಟೋಬಿ ಅನ್ನೋ ಸಿನಿಮಾ ಮಾಡಿ ಮುಗಿಸಿದ್ದಾರೆ.

    ಗರುಡ ಗಮನ ವೃಷಭ ವಾಹನ. 2022ರಲ್ಲಿ ಹೊಸ ಅಲೆಯೆಬ್ಬಿಸಿದ್ದ ಸಿನಿಮಾ. ರಾಜ್ ಬಿ.ಶೆಟ್ಟಿ ನಟಿಸಿ ನಿರ್ದೇಶಿಸಿದ್ದರೆ, ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಕ್ಷಿತ್ ಶೆಟ್ಟಿ ವಿತರಣೆ ಮಾಡಿದ್ದರು. ಒಂದು ರೀತಿಯಲ್ಲಿ ಅದು ಕನ್ನಡದ ಆರ್.ಆರ್.ಆರ್. ಅದೇ ಚಿತ್ರತಂಡದ ಜೊತೆ ಟೋಬಿ ಅನ್ನೋ ಸಿನಿಮಾ ಸಿದ್ಧ ಮಾಡಿದ್ದಾರೆ ರಾಜ್ ಬಿ.ಶೆಟ್ಟಿ.

    ರ್ದೇಶನವನ್ನು ರಾಜ್ ಬಿ ಶೆಟ್ಟಿ ತಂಡದ ಸಹ ನಿರ್ದೇಶಕರೊಬ್ಬರು ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿನ ನಾಯಕ ಪಾತ್ರಧಾರಿ ಟೋಬಿ. ಮುಗ್ಧ ಮತ್ತು ಎಡವಟ್ಟು ಮನುಷ್ಯ ಎನ್ನಿಸಿಕೊಂಡ ಪಾತ್ರದ ನಿರ್ವಹಣೆಯನ್ನು ರಾಜ್ ನಿರ್ವಹಿಸಿದ್ದಾರೆ. ಇದೊಂದು ಕಮರ್ಶಿಯಲ್ ಸಿನಿಮಾ ಆಗಿದ್ದು, ಸರಿಯಾದ ಸಮಯಕ್ಕೆ ಥಿಯೇಟರ್ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಸಂಸ್ಥೆ ಮತ್ತು ರವಿ ರೈ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

    ನಟ ರಾಜ್ ಸದ್ಯ ಮಲಯಾಳಂ ಚಿತ್ರ ‘ರುಧಿರಂ’ ಶೂಟಿಂಗ್ ಪಾಲ್ಗೊಂಡಿದ್ದಾರೆ. ಅದಲ್ಲದೇ ಇನ್ನೂ ಎರಡು ವರ್ಷ ರಾಜ್ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅವರು ಮಾಡಿಟ್ಟುಕೊಂಡಿರುವ ಕಥೆಗಳನ್ನ ಒಂದೊಂದಾಗಿಯೇ ಮುಗಿಸುತ್ತಾ ಬರುತ್ತಿದ್ದಾರೆ. ಹೊಸ ಬಗೆಯ ಕಥೆಯನ್ನ ತೆರೆಯ ಮೇಲೆ ಹೇಳಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ.

  • ಮೂರೇ ದಿನದಲ್ಲಿ 30 ಕೋಟಿ

    ಮೂರೇ ದಿನದಲ್ಲಿ 30 ಕೋಟಿ

    777 ಚಾರ್ಲಿ ರಿಲೀಸ್ ಆದ ನಂತರ ದಿನ ದಿನಕ್ಕೂ ಕಲೆಕ್ಷನ್ ಹೆಚ್ಚಿಸಿಕೊಳ್ತಿದೆ. ರಕ್ಷಿತ್ ಶೆಟ್ಟಿ ನಟಿಸಿ ನಿರ್ಮಿಸಿದ್ದ 777 ಚಾರ್ಲಿ ಚಿತ್ರ ನಾಯಿ ಪ್ರೇಮಿಗಳಿಗೆಲ್ಲ ಸಿಕ್ಕಾಪಟ್ಟೆ ಇಷ್ಟವಾಗಿದೆ. ಚಿತ್ರದ ಭಾವುಕ ಸನ್ನಿವೇಶಗಳಿಗೆ ಕಣ್ಣೀರಿಟ್ಟಿರುವ ಪ್ರೇಕ್ಷಕರು ಬಾಕ್ಸಾಫೀಸ್ ತುಂಬಿಸುತ್ತಿದ್ದಾರೆ. ಹೀಗಾಗಿ ಮೂರೇ ದಿನಕ್ಕೆ 30 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ 777 ಚಾರ್ಲಿ.

    30 ಕೋಟಿಗೂ ಹೆಚ್ಚು ಕಲೆಕ್ಷನ್ ಲೆಕ್ಕ ಕರ್ನಾಟಕದ್ದು ಮಾತ್ರ. ಉಳಿದಂತೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿರುವುದು ತೆಲುಗು ಮತ್ತು ಮಲಯಾಳಂನಲ್ಲಿ. ಎರಡೂ ಭಾಷೆಗಳಲ್ಲಿ ಕಲೆಕ್ಷನ್ ತಲಾ  1.20 ಕೋಟಿ ದಾಟಿದೆ. ತಮಿಳಿನಲ್ಲಿ 50 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಆಗಿದೆ. ಉತ್ತರ ಭಾರತ ಪೂರ್ತಿ ಅಂದರೆ ಹಿಂದಿಯಲ್ಲಿಯೂ ಒಂದೂವರೆ ಕೋಟಿ ಕಲೆಕ್ಷನ್ ದಾಟಿದೆ.

    ವಿಶೇಷಗಳೇನಿದೆ ಎನ್ನುವಂತಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಹೌದಾದರೂ ಚಿತ್ರವನ್ನು ಕನ್ನಡ ಹೊರತುಪಡಿಸಿ ಉಳಿದೆಡೆ ಲಿಮಿಟೆಡ್ ಶೋಗಳಲ್ಲೇ ರಿಲೀಸ್ ಮಾಡಲಾಗಿತ್ತು. ಸೀಮಿತ ಶೋಗಳಲ್ಲಿಯೇ 777 ಚಾರ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದು ವಿಶೇಷ. ಇನ್ನೊಂದು ಖುಷಿ ಸುದ್ದಿ ಇದೆ. ರಿಲೀಸ್ ಆದ ನಂತರ ಸ್ಕ್ರೀನ್‍ಗಳ ಸಂಖ್ಯೆ ಮತ್ತು ಡಿಮ್ಯಾಂಡ್ ಹೆಚ್ಚಾಗುತ್ತಿದೆ.

    ಮೊದಲ ಚಿತ್ರಕ್ಕೇ ಸಿಕ್ಕಿದ ಈ ಓಪನಿಂಗ್ ಮತ್ತು ಯಶಸ್ಸು ಸಹಜವಾಗಿಯೇ ಕಿರಣ್ ರಾಜ್ ಅವರಿಗೆ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಥ್ರಿಲ್ ಆಗಿದ್ದಾರೆ.

  • ಮೊಟ್ಟೆ + ಕಿರಿಕ್ ಸ್ಟಾರ್ = ಗರುಡ ಗಮನ ವೃಷಭ ವಾಹನ

    shetty and shetty joins hands for new venture

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಟಾರ್ ಆದವರು ನಟ ರಿಷಬ್ ಶೆಟ್ಟಿ. ಒಂದು ಮೊಟ್ಟೆಯ ಮೂಲಕ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈ ಎರಡೂ ಒಟ್ಟಿಗೇ ಸೇರಿದಾಗ ಸೃಷ್ಟಿಯಾಗಿದ್ದು ಗರುಡ ಗಮನ ವೃಷಭ ವಾಹನ. ಇದು ಹೊಸ ಸಿನಿಮಾ. ಒಂದು ಮೊಟ್ಟೆಯ ಕಥೆ ನಂತರ ರಾಜ್ ಬಿ.ಶೆಟ್ಟಿ ಮತ್ತೆ ನಿರ್ದೇಶಕರಾಗಿರುವ ಚಿತ್ರವಿದು.

    ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ನಟಿಸುತ್ತಿದ್ದಾರೆ. ಇಲ್ಲಿ ಎರಡು ಪಾತ್ರಗಳಿವೆ. ಒಂದು ಕ್ರೋಧದ ಪ್ರತಿರೂಪ. ಶಿವನಂತೆ. ಇನ್ನೊಂದು ನಿಯಂತ್ರಣದ ಪ್ರತಿರೂಪ. ವಿಷ್ಣು ಇದ್ದಂತೆ. ಈ ಇಬ್ಬರೂ ಒಂದಾದರೆ ಯಾವ ಹಂತಕ್ಕೆ ಬೆಳೆಯಬಹುದು ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರೆ ರಿಷಬ್ ಶೆಟ್ಟಿ.

    ಮೊದಲು ಹರಿಹರ ಎಂದೇ ಹೆಸರಿಡುವ ಆಲೋಚನೆ ಇತ್ತಂತೆ. ಆನಂತರ ಇವರು ಹರಿ ಹರ ಅಲ್ಲ, ಅವರ ಅಂಶಗಳಿರೋ ಪಾತ್ರಗಳು ಎನ್ನಿಸಿದ್ದರಿಂದ ಗರುಡಗಮನ ಹರಿ, ವೃಷಭವಾಹನ ಶಿವ ಎಂದು ಹೆಸರಿಟ್ಟರಂತೆ. ವಿಶೇಷವೆಂದರೆ ಚಿತ್ರದ ಶೂಟಿಂಗ್ ಮುಗಿದಿದೆ. ಜೂನ್‍ನಲ್ಲಿ ರಿಲೀಸ್.

  • ಮೊಟ್ಟೆ ಮೇಲೆ ಬ್ರಹ್ಮಾಸ್ತ್ರ

    raj b shetty next film is bramhastra

    ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಈಗ ಗುಬ್ಬಿಯಾಗುತ್ತಿದ್ದಾರೆ. ಅವರ ಮೇಲೆ ಬ್ರಹ್ಮಾಸ್ತ್ರ ಬಿಡೋಕೆ ಸಜ್ಜಾಗಿರುವುದು ಸುಜಯ್ ಶಾಸ್ತ್ರಿ. ಅವರಿಗೂ ಇದು ಮೊದಲ ನಿರ್ದೇಶನ. ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಗಮನ ಸೆಳೆದಿದದ ಕವಿತಾ ಗೌಡ, ನಾಯಕಿ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರ ತಂಡದ ಕಿರುಪರಿಚಯ.

    ಇದು ಕಾರ್ಪೊರೇಟ್ ಜಗತ್ತಿನ ಕಥೆಯಂತೆ. ಬೆಂಗಳೂರಿನಲ್ಲಿ ಗುಬ್ಬಿಯಂತೆ ಬದುಕುತ್ತಿರುವ ನಾಯಕನಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ಎದುರಾಗುವ ಸವಾಲುಗಳು, ಅಡೆತಡೆಗಳು, ಸಮಸ್ಯೆಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಚಿತ್ರದಲ್ಲಿದೆ. 

    ಅಂದಹಾಗೆ ಚಿತ್ರದ ನಿರ್ಮಾಪಕ ಚಂದ್ರಶೇಖರ್. ಚಮಕ್ ಚಂದ್ರಶೇಖರ್. ಹೀಗಾಗಿ ಚಿತ್ರ ಅದ್ದೂರಿಯಾಗಿಯೇ ತೆರೆಗೆ ಬರಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

  • ಮೊಟ್ಟೆ ರಾಜ್‍ಗೆ ಲಡ್ಡು ಬಾಯಿಗೇ ಬಿತ್ತಾ..?

    did raj b shetty in puneet banner?

    ರಾಜ್ ಬಿ ಶೆಟ್ಟಿ. ಇವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡೋಕೆ ಅಪ್ಪು ಉತ್ಸಾಹ ತೋರಿಸಿದ್ದಾರೆ. ಅವರ ಹೊಸ ಪಾರ್ವತಮ್ಮ ರಾಜ್‍ಕುಮಾರ್ (ಪಿಆರ್‍ಕೆ) ಬ್ಯಾನರ್ ಅಡಿಯಲ್ಲಿ 2ನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆ 2ನೇ ಚಿತ್ರದ ಹೀರೋ ಆಗಿ ರಾಜ್ ಬಿ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಇದೆ.

    ರಾಜ್ ಬಿ ಶೆಟ್ಟಿ ಅಂದ್ರೆ ಯಾರಂತ ಗೊತ್ತಲ್ಲ. ಒಂದು ಮೊಟ್ಟೆಯ ಕಥೆಯ ಹೀರೋ. ರಾಧಾಕೃಷ್ಣ ಎಂಬುವವರು ನಿರ್ದೇಶಿಸಲಿರುವ ಚಿತ್ರದ ಕಥೆ ಪುನೀತ್‍ಗೆ ಇಷ್ಟವಾಗಿದೆ. ಆ ಕಥೆಗೆ ರಾಜ್ ಬಿ ಶೆಟ್ಟಿ ಸೂಕ್ತ ಆಯ್ಕೆ ಎನ್ನಿಸಿದೆ. ಪ್ರಕ್ರಿಯೆ ಶುರುವಾಗಿದೆ.

    ಈಗಾಗಲೇ ಕವಲುದಾರಿ ಎಂಬ ಚಿತ್ರದಲ್ಲಿ ಯುವನಟ ರಿಷಿಗೆ ಅವಕಾಶ ನೀಡಿದ್ದ ಪುನೀತ್, 2ನೇ ಚಿತ್ರದಲ್ಲೂ ಹೊಸಬರಿಗೇ ಬಾಗಿಲು ತೆರೆದಿದ್ದಾರೆ. ಆದರೆ, 3ನೇ ಚಿತ್ರದಲ್ಲಿ ಸ್ವತಃ ಪುನೀತ್ ನಾಯಕರಾಗುವ ಸಾಧ್ಯತೆಗಳಿವೆ. ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಪುನೀತ್ ಓಕೆ ಎಂದಿದ್ದಾರೆ ಎನ್ನುವುದು ಸುದ್ದಿ. ಆಂಜನಿಪುತ್ರದ ನಂತರ ಆ ಚಿತ್ರ ಸೆಟ್ಟೇರಲಿದೆ.

  • ಮೊಟ್ಟೆ ಸ್ಟಾರ್ ಮತ್ತೆ ಡೈರೆಕ್ಷನ್ ಮಾಡ್ತಾರೆ..!

    motte star to direct again

    ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊಟ್ಟೆ ಸ್ಟಾರ್ ಎಂದೇ ಜನಪ್ರಿಯರಾದ ರಾಜ್ ಬಿ ಶೆಟ್ಟಿ, ಆನಂತರ ನಟನೆಯಲ್ಲೇ ಹೆಚ್ಚು ತೊಡಗಿಸಿಕೊಂಡವರು. ಮಾಯಾ ಬಜಾರ್, ಅಮ್ಮು, ಮಹಿರಾ, ಅಮ್ಮಚ್ಚಿಯೆಂಬ ನೆನಪು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಚಿತ್ರಗಳಲ್ಲಿ ನಟಿಸುತ್ತಾ ಆಕ್ಟಿಂಗ್‍ನಲ್ಲೇ ಬ್ಯುಸಿಯಾಗಿಬಿಟ್ಟರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

    ಒಂದು ಮೊಟ್ಟೆಯ ಕಥೆಯಲ್ಲಿ ನಟಿಸಿ, ನಿರ್ದೇಶಿಸಿ ಗೆದ್ದಿದ್ದ ರಾಜ್ ಬಿ ಶೆಟ್ಟಿ, ಈ ಬಾರಿ ಹರಹರ ಎಂಬ ಮಾಸ್ ಟೈಟಲ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಒಂದು ಪಾತ್ರದಲ್ಲಿಯೂ ನಟಿಸುತ್ತಿರುವ ರಾಜ್, ಇನ್ನೊಂದು ಪ್ರಮುಖ ಪಾತ್ರಕ್ಕೆ ಮತ್ತೊಬ್ಬ ಸ್ಟಾರ್ ನಟನ ಹುಡುಕಾಟದಲ್ಲಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆಯಂತೆ.

  • ರಮ್ಯಾ ಮತ್ತೆ ಕಟ್ಟಿದರು ಬಣ್ಣದ ಗೆಜ್ಜೆ

    ರಮ್ಯಾ ಮತ್ತೆ ಕಟ್ಟಿದರು ಬಣ್ಣದ ಗೆಜ್ಜೆ

    ಬಣ್ಣದ ಗೆಜ್ಜೆ. 1990ರಲ್ಲಿ ಬಂದಿದ್ದ ಸಿನಿಮಾ. ರವಿಚಂದ್ರನ್, ಅಮಲಾ ನಾಗಾರ್ಜುನ್, ಭಾರತಿ ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ದೇವರಾಜ್, ಸುರೇಶ್ ಹೆಬ್ಳೀಕರ್ ಮೊದಲಾದವರು ನಟಿಸಿದ್ದ ಸಿನಿಮಾ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಕ. ಆಗಿನ ಕಾಲಕ್ಕೆ ಅದು ಸೂಪರ್ ಡ್ಯೂಪರ್ ಹಿಟ್. ಹಂಸಲೇಖ ನಿರ್ದೇಶನದ ಹಾಡುಗಳೆಲ್ಲ ಸೂಪರ್ ಹಿಟ್. ಅದರಲ್ಲೂ ಸ್ವಾತಿ ಮುತ್ತಿನ ಮಳೆ ಹನಿಯೇ.. ಇವತ್ತಿಗೂ ಪ್ರೇಮಿಗಳ ಹಾರ್ಟ್ ಫೇವರಿಟ್. ಈಗ ಅದೇ ಸಾಲನ್ನು ಚಿತ್ರದ ಟೈಟಲ್ ಮಾಡಿ ಸಿನಿಮಾ ಮಾಡುತ್ತಿದ್ದಾರೆ ರಮ್ಯಾ. ಜೊತೆಯಾಗಿರೋದು ರಾಜ್ ಬಿ.ಶೆಟ್ಟಿ.

    ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಅಧಿಕೃತವಾಗಿ ವಾಪಸ್ ಬಂದಿದ್ದಾರೆ. ರಾಜ್ ಬಿ.ಶೆಟ್ಟಿ ಜೊತೆಗೆ ರಮ್ಯಾ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳು ಈಗ ವದಂತಿಗಳಲ್ಲ. ಗಾಳಿಸುದ್ದಿಗಳಲ್ಲ. ಈಗ ಅಧಿಕೃತ. ದಸರಾಗೆ ಒಂದು ಶುಭ ಸುದ್ದಿ ಕೊಡುತ್ತೇನೆ ಎಂದಿದ್ದರು ರಮ್ಯಾ. ಅದೀಗ ಸ್ವಾತಿ ಮುತ್ತಿನ ಮಳೆ ಹನಿಯಾಗಿದೆ.

    ರಮ್ಯ ಮತ್ತು ರಾಜ್ ಬಿ.ಶೆಟ್ಟಿ ಜೊತೆ ಎಂದಿನಂತೆ ಅವರ ಟೀಮಿನ ಸದಸ್ಯರಾದ ಮಿಥುನ್ ಮುಕುಂದನ್,  ಪ್ರವೀಣ್ ಇರುತ್ತಾರೆ. ನಿರ್ದೇಶನ ರಾಜ್ ಬಿ.ಶೆಟ್ಟರದ್ದು. ನಾಯಕರೂ ಅವರೇ. ನಿರ್ಮಾಣ ರಮ್ಯಾ ಅವರದ್ದೇ. ಜೊತೆಯಲ್ಲಿ ಕಾರ್ತಿಕ್ ಗೌಡ ಸಾಥ್ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

  • ರಾಜೇಶ್ ಬಿ.ಶೆಟ್ಟಿ ಜೊತೆ ರಮ್ಯಾ ಸಿನಿಮಾ : ಸುದ್ದಿ ನಿಜಾನಾ?

    ರಾಜೇಶ್ ಬಿ.ಶೆಟ್ಟಿ ಜೊತೆ ರಮ್ಯಾ ಸಿನಿಮಾ : ಸುದ್ದಿ ನಿಜಾನಾ?

    ರಮ್ಯ ಮತ್ತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಫ್ಯಾನ್ಸ್‍ಗೆ ಕೊಟ್ಟಿರೋ ಥ್ರಿಲ್ಲೇ ಬೇರೆ. ಹೀಗಾಗಿಯೇ.. ಗಾಂಧಿನಗರದಲ್ಲಿ ದಿನಕ್ಕೊಂದು ಸುದ್ದಿ ಹಬ್ಬುತ್ತಲೇ ಇದೆ. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಮೊದಲು ಬಂತು. ನಂತರ ಡಾಲಿ ಧನಂಜಯ್ ಸಿನಿಮಾನಂತೆ ಅನ್ನೋದು ಸುದ್ದಿಯಾಯ್ತು. ಅದಾದ ಮೇಲೆ ಹೊಂಬಾಳೆಯವರ ಜೊತೆ ರಮ್ಯಾ ಕಮ್ ಬ್ಯಾಕ್ ಪಕ್ಕಾ ಎಂದರು. ದ್ವಿತ್ವ ಚಿತ್ರಕ್ಕೆ ರಮ್ಯಾ ಯೆಸ್ ಎಂದಿದ್ದರೂ ಕೂಡಾ. ಈಗಲೂ ಕೂಡಾ ರಮ್ಯಾ, ಯುವ ರಾಜಕುಮಾರ್ ಪ್ರಥಮ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೊ ಸುದ್ದಿ ಇದೆ. ಇದೆಲ್ಲದರ ಮಧ್ಯೆ ಉದ್ಭವವಾದ ಮತ್ತೊಂದು ಸುದ್ದಿ, ರಾಜೇಶ್ ಬಿ.ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋದು.

    ರಮ್ಯಾ ಕಥೆ ಕೇಳಿದ್ದಾರಂತೆ. ಇಷ್ಟವಾಗಿದೆಯಂತೆ. ನಟಿಸೋದಷ್ಟೇ ಅಲ್ಲ, ಅವರೇ ಪ್ರೊಡ್ಯೂಸ್ ಕೂಡಾ ಮಾಡ್ತಾರಂತೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿ ಸುತ್ತಿ ಮೀಡಿಯಾ ಮನೆಗಳಿಗೆ ಕಾಲಿಟ್ಟಿತ್ತು. ಈಗ ರಾಜೇಶ್ ಬಿ.ಶೆಟ್ಟಿಯವರಿಂದಲೇ ಉತ್ತರ ಸಿಕ್ಕಿದೆ.

    ಇಲ್ಲ. ರಮ್ಯಾ ಅವರಿಗ ನಾನು ಕಥೆ ಹೇಳಿಲ್ಲ. ಅವರು ಕೇಳಿಲ್ಲ. ಎಲ್ಲವೂ ಗಾಸಿಪ್ ಎಂದಿದ್ದಾರೆ ರಾಜೇಶ್ ಬಿ.ಶೆಟ್ಟಿ.

     

  • ರಾಜ್ ಬಿ.ಶೆಟ್ಟಿ ಕನಸಿನಲ್ಲಿ ಶುಭಾ ಪೂಂಜಾ, ಕಾರುಣ್ಯ ರಾಮ್

    who are raj b shetty's dream girls

    ಸ್ವಾಗತಂ ಕೃಷ್ಣಾ.. ಶರಣಾಗತಂ ಕೃಷ್ಣಾ.. ಎಂದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ ಹಾಡುತ್ತಿದ್ದರೆ.. ನಾಚಿಕೊಳ್ಳುತ್ತಲೇ ರೋಮಾಂಚನಗೊಳ್ಳುತ್ತಾರೆ ರಾಜ್ ಬಿ.ಶೆಟ್ಟಿ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹಾಡು.. ಕನಸಿನ ಹಾಡು. ಆ ಕನಸಿನ ಹಾಡಿನಲ್ಲಿ ರಾಜ್ ಬಿ.ಶೆಟ್ಟಿಯ ಮನಸ್ಸು, ಹೃದಯಕ್ಕೆ ಲಗ್ಗೆ ಹಾಕುವುದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ.

    ಇಲ್ಲಿಯೂ ಮೊಟ್ಟೆ ಶೆಟ್ಟರಿಗೆ ಒಳ್ಳೆಯ ಸಂಬಳ ಬರುವ ಕೆಲಸವಿದ್ದರೂ ಹುಡುಗಿ ಸಿಕ್ಕಿರೋದಿಲ್ಲ. ಹಾಗೆ ಹುಡುಗಿಯರೆ ಸಿಗದ ಬರಗಾಲದಲ್ಲಿರುವ ರಾಜ್ ಬಿ.ಶೆಟ್ಟಿ ಕನಸಿನಲ್ಲಿ ಇವರೆಲ್ಲ ಬಂದು ಡಿಸೈನ್ ಡಿಸೈನಾಗಿ ಸ್ವಾಗತ ಗೀತೆ ಹಾಡುತ್ತಾರೆ.

    ನಿರ್ದೇಶಕ ಸುಜಯ್ ಶಾಸ್ತ್ರಿಯವರೇ ಹಾಡು ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತವಿದೆ. ಮೈತ್ರಿ ಅಯ್ಯರ್ ಹಾಡಿರುವ ಹಾಡಿನಲ್ಲಿ ಯುವಕರ ಕನಸುಗಳೇ ತುಂಬಿವೆ. 

    ಆ ಕನಸುಗಳ ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗುವುದು ಮುಂದಿನ ವಾರ. ರಾಜ್ ಬಿ.ಶೆಟ್ಟಿಗೆ ಇಲ್ಲಿ ಕವಿತಾ ಗೌಡ ನಾಯಕಿ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರವಿದು.

  • ರಾಜ್ ಬಿ.ಶೆಟ್ಟಿ ನಟನೆಗೆ ಬ್ರೇಕ್. ಮತ್ತೇನು..?

    raj b shetty takes a break from acting

    ಒಂದು ಮೊಟ್ಟೆಯ ಕಥೆ ಅನ್ನೋ ವಿಶಿಷ್ಟ ಸಿನಿಮಾದಿಂದ ಚಿತ್ರರಂಗಕ್ಕೆ ಪರಿಚಯವಾದ ರಾಜ್ ಬಿ.ಶೆಟ್ಟಿ, ನಂತರ ಹಲವು ಚಿತ್ರಗಳಲ್ಲಿ ನಟಿಸಿದರು ಕೂಡಾ. ಸದ್ಯಕ್ಕೆ ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮಾಯಾಬಜಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ರಾಜ್ ಬಿ.ಶೆಟ್ಟಿ ಮೂಲತಃ ನಿರ್ದೇಶಕ. ಒಂದು ಮೊಟ್ಟೆಯ ಕಥೆ ಚಿತ್ರಕ್ಕೂ ಅವರೇ ನಿರ್ದೇಶಕ. ಈಗ ನಟನೆಗೆ ಬ್ರೇಕ್ ಕೊಟ್ಟಿದ್ದಾರೆ ರಾಜ್ ಬಿ.ಶೆಟ್ಟಿ.

    ಮೊಟ್ಟೆ ಸ್ಟಾರ್ ಎಂದೇ ಖ್ಯಾತರಾಗಿದ್ದ ರಾಜ್ ಬಿ.ಶೆಟ್ಟಿ `ನನಗೆ ನಟನೆಗಿಂತ ನಿರ್ದೇಶನವೇ ಇಷ್ಟ. ಹೀಗಾಗಿಯೇ ಹೊಸ ಕಥೆ ಬರೆಯುತ್ತಿದ್ದೇನೆ. ನಟನೆಗೆ ಬ್ರೇಕ್ ಕೊಡುತ್ತಿದ್ದೇನೆ. ನಿರ್ದೇಶಕನಾಗಿರುವುದೇ ಹೆಚ್ಚು ಕಿಕ್ ಕೊಡುತ್ತೆ' ಎಂದಿರುವ ರಾಜ್ ಬಿ.ಶೆಟ್ಟಿ, ಮಂಗಳೂರಿನಲ್ಲಿ ನಡೆಯುವ ಗ್ಯಾಂಗ್‍ಸ್ಟರ್‍ಗಳ ಕಥೆ ಬರೆಯುತ್ತಿದ್ದಾರಂತೆ. ಅಲ್ಲಿಗೆ.. ಮುಂದಿನ ವರ್ಷ ಮತ್ತೊಮ್ಮೆ ರಾಜ್ ಬಿ.ಶೆಟ್ಟಿ ಡೈರೆಕ್ಟರ್ ಆಗಲಿದ್ದಾರೆ ಎಂದಾಯ್ತು