` bigg boss pratham - chitraloka.com | Kannada Movie News, Reviews | Image

bigg boss pratham

  • 99 ಲಕ್ಷಕ್ಕೊಬ್ಬ ಒಳ್ಳೆ ಹುಡ್ಗ ಪ್ರಥಮ್

    pratham launched 99lakshakobba

    ನೂರಕ್ಕೊಬ್ಬ.. ಸಾವಿರಕ್ಕೊಬ್ಬ.. ಲಕ್ಷಕ್ಕೊಬ್ಬ.. ಅನ್ನೋ ಮಾತು ಕೇಳಿರ್ತೀರಿ. ಕೋಟಿಗೊಬ್ಬ ಅಂತೂ ಬಿಡಿ, ಹೆಸರು ಕೇಳಿದ ತಕ್ಷಣ ವಿಷ್ಣು, ಕಿಚ್ಚ ನೆನಪಾಗ್ತಾರೆ. ಆದರೆ.. ಈ 99 ಲಕ್ಷಕ್ಕೊಬ್ಬ ಅನ್ನೋದಿದ್ಯಲ್ಲ.. ಅದೇ ಡಿಫರೆಂಟ್. ಅಂದಹಾಗೆ ಇದು ಪ್ರಥಮ್ ಅಭಿನಯದ ಹೊಸ ಚಿತ್ರದ ಟೈಟಲ್. ಈ ಟೈಟಲ್ ರಿಲೀಸ್ ಮಾಡಿ ಗುಡ್ ಲಕ್ ಹೇಳಿರೋದು ಅಭಿಷೇಕ್ ಅಂಬರೀಷ್.

    ತಮ್ಮ ಹುಟ್ಟುಹಬ್ಬದ ದಿನವೇ 99 ಲಕ್ಷಕ್ಕೊಬ್ಬ ಟೈಟಲ್ ಲಾಂಚ್ ಮಾಡಿದ್ದಾರೆ ಪ್ರಥಮ್. ಕೋಟಿಗೊಬ್ಬ ಅನ್ನೋದೇನಿದ್ರೂ ವಿಷ್ಣು, ಸುದೀಪ್ ಸರ್ ಅಂತಹವರಿಗೆ ಮಾತ್ರ ಹೊಂದುತ್ತೆ. ನಮ್ಮಂತಹವರಿಗಲ್ಲ. ಹೀಗಾಗಿಯೇ ಅವರಿಗಿಂತ ಒಂದು ಲಕ್ಷ ಕಡಿಮೆ ಇರಬೇಕು ಎಂದು ಈ ಟೈಟಲ್ ಓಕೆ ಮಾಡಿದೆ ಎನ್ನುವ ಪ್ರಥಮ್, ಈ ಚಿತ್ರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಥೆಯಿದೆ ಎಂಬ ಮಾಹಿತಿ ಕೊಟ್ಟಿದ್ದಾರೆ.

    ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನೀಲೇಶ್ ಈ 99 ಲಕ್ಷಕ್ಕೊಬ್ಬ ಸಿನಿಮಾ ನಿರ್ಮಾಪಕರಾಗಿದ್ದಾರೆ.

  • ಎಂಎಲ್‍ಎ ಪ್ರಥಮ್ ಬರ್ತಾವ್ನೆ.. ದಾರಿ ಬಿಡಿ

    mla pratham all set to release on nov 9th

    ಒಳ್ಳೆ ಹುಡ್ಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ಈಗ ಎಂಎಲ್‍ಎ ಆಗಿಬಿಟ್ಟಿದ್ದಾರೆ. ಇದೇ ನವೆಂಬರ್ 9ಕ್ಕೆ ಎಲ್ಲ ಚೆನ್ನಾಗಿದ್ದೀರಾ ಹೆಂಗೆ ಅಂತಾ ವಿಚಾರಿಸೋಕೆ ಬರ್ತಾನೂ ಇದ್ದಾರೆ. ಹಾಗೆ ಬಂದ ಪ್ರಥಮ್‍ರನ್ನು ನೀವೂ ಚೆನ್ನಾಗಿದ್ದೀರಾ ಎಂದು ವಿಚಾರಿಸಿ ಸತ್ಕರಿಸೋದು ಪ್ರೇಕ್ಷಕರ ಹೊಣೆ. ಪ್ರಥಮ್ ಅಭಿನಯದ ಎಂಎಲ್‍ಎ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. 

    ಸಾಮಾನ್ಯ ಹುಡುಗನೊಬ್ಬ ಎಂಎಲ್‍ಎ ಆಗುವ ಗುರಿ ಇಟ್ಟುಕೊಂಡು ಗೆಲ್ಲುವ ಕಥೆ ಚಿತ್ರದ್ದು. ಪ್ರಥಮ್ ಜೊತೆಗೆ ಸೋನಾಲ್ ಮಾಂಟೆರೋ ನಾಯಕಿಯಾಗಿದ್ದರೆ, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸಿದ್ದಾರೆ. ವೆಂಕಟೇಶ್ ರೆಡ್ಡಿ ನಿರ್ಮಾಣದ ಸಿನಿಮಾಗೆ ಮೌರ್ಯ ನಿರ್ದೇಶನವಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನಟಿಸಿರುವುದು ವಿಶೇಷ.

  • ಚಿತ್ರರಂಗಕ್ಕೆ ಬಿಗ್‍ಬಾಸ್ ಪ್ರಥಮ್ ಗುಡ್‍ಬೈ

    olle hudge pratham quits film industry

    ಬಿಗ್‍ಬಾಸ್ ಪ್ರಥಮ್, ಚಿತ್ರರಂಗವನ್ನೇ ಬಿಟ್ಟು ಸ್ವಂತ ಊರಿಗೆ ಹೊರಟು ನಿಂತಿದ್ದಾರೆ. ಸಿನಿಮಾ ಸಾಕು. ಊರಿನಲ್ಲಿ ಜಮೀನಿದೆ. ಕೃಷಿ, ಹೈನುಗಾರಿಕೆ ಮಾಡಿಕೊಂಡು ಇರುತ್ತೇನೆ ಎಂದಿದ್ದಾರೆ ಪ್ರಥಮ್.

    ಬೆಂಗಳೂರು, ಈ ಸಿನಿಮಾ, ಈ ಒತ್ತಡದ ಲೈಫು ನನಗೆ ಆಗಿ ಬರ್ತಾ ಇಲ್ಲ. ಈ ಸ್ಪೀಡ್‍ಲೈಫ್‍ಗೆ ಅಡ್ಜಸ್ಟ್ ಆಗೋಕೆ ಆಗುತ್ತಿಲ್ಲ. ಹೀಗಾಗಿ ಊರಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ ಪ್ರಥಮ್.

    ಬಿಗ್‍ಬಾಸ್ ಪ್ರಶಸ್ತಿ ಗೆದ್ದಿರುವ ಪ್ರಥಮ್, ನಿರ್ದೇಶಕರೂ ಹೌದು. ಕೆಲವು ಸಿನಿಮಾ ನಿರ್ದೇಶನ ಮಾಡಿರುವ, ಹೀರೋ ಆಗಿರುವ ಪ್ರಥಮ್‍ರ ಎಂಎಲ್‍ಎ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಟಭಯಂಕರ ಸಿನಿಮಾ ಶುರುವಾಗಬೇಕಿದೆ. ನಟಭಯಂಕರ ಸಿನಿಮಾವೇ ನನ್ನ ಕೊನೆಯ ಚಿತ್ರ ಎಂದಿದ್ದಾರೆ ಪ್ರಥಮ್.

    Related Articles :-

    Olle Hudga Pratham Decide To Quit Film Industry & Leave Bengaluru!

  • ಬಿಗ್‍ಬಾಸ್ ಪ್ರಥಮ್ ಕಟ್ಟಿಸಿದ ದೇವಸ್ಥಾನ 

    pratham

    ಒಳ್ಳೆಯ ಹುಡುಗ ಪ್ರಥಮ್, ತಮ್ಮ ಬಿಗ್‍ಬಾಸ್ ಸಂಭಾವನೆಯಲ್ಲಿ ಊರಿನಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿದ್ದರು.. ನೆನಪಿದೆ ತಾನೇ.. ಆ ದೇವಸ್ಥಾನ ಮುಕ್ತಾಯಗೊಂಡಿದ್ದು, ಪೂಜೆ ಪುನಸ್ಕಾರಗಳೂ ಆರಂಭವಾಗಿವೆ.

    ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ನಮ್ಮೂರಲ್ಲಿ ಹಿರಿಯರೆಲ್ಲರ ಜೊತೆ ನಿರ್ಮಿಸಿದ ಈ ದೇವಸ್ಥಾನ ನನಗೆ ಅಂತಾ ಆತ್ಮತೃಪ್ತಿ ಕೊಟ್ಟಿದೆ. ಊರಿನವರ ಕೆಲಸಕ್ಕೆ ನಾನು ಸಣ್ಣದಾಗಿ ಕೈಜೋಡಿಸಿದೆ. ಉದ್ಘಾಟನೆಗೆ ನನ್ನನ್ನೇ ಅತಿಥಿಯಾಗಿ ಕರೆದ್ರು. 

    ಯಾಕೋ ನಮ್ಮೂರಲ್ಲಿ ದೊಡ್ಡವರ ಎದುರು ಸ್ಟೇಜ್ ಮೇಲೆ ಕೂತ್ಕೊಳ್ಳೋಕೆ ಒಂಥರಾ ಆಯ್ತು. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ದೇವಸ್ಥಾನ ನೋಡಿಕೊಂಡು ಖುಷಿಯಾಗಿ ಬಂದೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್.

    ಅಂದಹಾಗೆ ದೇವಸ್ಥಾನಕ್ಕೊಂದು ಬೋರ್‍ವೆಲ್ ಹಾಕಿಸಬೇಕಂತೆ. ಆದಷ್ಟು ಬೇಗ ಮಾಡಿಸ್ತೀನಿ, ನನ್ನೂರು ನನಗೆ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್. 

    ಹಲಗಾಪುರ, ಪ್ರಥಮ್ ಅವರ ಊರು. ಅಲ್ಲಿ ಪ್ರಥಮ್ ಸಹಾಯ ಹಸ್ತದೊಂದಿಗೆ ನಿರ್ಮಾಣವಾದ ದೇವಸ್ಥಾನ ಶಿವಾಲಂಕಾರೇಶ್ವರ. 

  • ಬಿಗ್​ಬಾಸ್ ಪ್ರಥಮ್, ಈಗ ನಗರಾಭಿವೃದ್ಧಿ ಸಚಿವ

    mla movie image

    ಬಿಗ್​ಬಾಸ್ ಮೂಲಕ ಖ್ಯಾತಿಗೆ ಬಂದ ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೀಗ ಬಡ್ತಿ ಸಿಕ್ಕಿದೆ.  MLA ಪ್ರಥಮ್ ಈಗ ಕ್ಯಾಬಿನೆಟ್ ಮಿನಿಸ್ಟರ್ ಆಗಿ, ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಕನ್​ಫ್ಯೂಸ್ ಏನೂ ಬೇಡ. ಇದೆಲ್ಲಾ ಸಾಧ್ಯವಾಗಿರುವುದು ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಗರಾಭಿವೃದ್ಧಿ ಸಚಿವ ಪ್ರಥಮ್ ಅವರ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ 

    ‘ಮಜಾ ಟಾಕೀಸ್'ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ  ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ನಾಯಕಿ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ರಾಜಕೀಯದ ಕಥೆ. ಅಸಾಮಾನ್ಯ ಚಿಂತನೆ ಇರುವ ಸಾಮಾನ್ಯ ಹುಡುಗ ಅಚಾನಕ್ ಆಗಿ ಎಂ.ಎಲ್‌.ಎ ಆಗಿ, ಮಂತ್ರಿಯಾದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.

  • ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

    Bigg boss winner pratham image

    ಸಹನಟ ಭುವನ್​ ತೊಡೆ ಕಚ್ಚಿದ್ದ ಪ್ರಕರಣದಲ್ಲಿ ಬಿಗ್​​ಬಾಸ್​ ಪ್ರಥಮ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. 5 ಸಾವಿರ ರೂ. ನಗದ ಶ್ಯೂರಿಟಿ ಹಾಗೂ ಷರತ್ತು ವಿಧಿಸಿ ಜಾಮೀನು ನೀಡಿದೆ. ನಿಖೆಗೆ ಸಹಕರಿಸುವಂತೆ ಸೂಚಿಸಿದೆ.

    ಜಾಮೀನು ನೀಡುವಾಗ ನ್ಯಾಯಾಧೀಶರು ಪ್ರಥಮ್​ಗೆ ಬುದ್ಧಿವಾದ ಹೇಳಿದ್ದಾರೆ. ಏನಿದು ಹುಚ್ಚಾಟ..? ಸಾರ್ವಜನಿಕರ ಜೊತೆ ಇರುವವರು ಹೀಗೆ ಇರಬಾರದು. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಬುದ್ಧಿ ಹೇಳಿದ್ದಾರೆ. ವಿಚಾರಣೆ ವೇಳೆ ಕೇಳದೇ ಇದ್ದರೂ ತಾನು ಬಿಗ್​ಬಾಸ್ ವಿನ್ನರ್. 50 ಲಕ್ಷ ಬಹುಮಾನ ಗೆದ್ದಿದ್ದೆ. ಅದನ್ನು ಯೋಧರಿಗೆ ರೈತರಿಗೆ ನೀಡಿದ್ದೆ ಎಂದು ಹೇಳಿದ ಪ್ರಥಮ್. ದೂರು ನೀಡಲು ತಡವಾಗಿದ್ದಕ್ಕೆ ಕಾರಣ ಕೇಳಿದಾಗ, ಕುತ್ತಿಗೆ ನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದೆ ಎಂದು ವಿವರಣೆ ನೀಡಿದ್ದಾರೆ.

  • ಮಾತು ತಪ್ಪದ ಪ್ರಥಮ್ - ಪ್ರಧಾನಿ ಪರಿಹಾರ ನಿಧಿಗೆ ಬಿಗ್ ದಾನ

    pratham donates 10 lakhs

    ಬಿಗ್‍ಬಾಸ್ ಪ್ರಥಮ್ ಕೊನೆಗೂ ನುಡಿದಂತೆ ನಡೆದುಕೊಂಡಿದ್ದಾರೆ. ಬಿಗ್‍ಬಾಸ್ ಸ್ಪರ್ಧೆ ಗೆದ್ದಾಗಲೇ ಬಹುಮಾನದ ಹಣದಲ್ಲಿ ರೈತರಿಗಿಷ್ಟು, ಸೈನಿಕರಿಗಿಷ್ಟು, ಊರಿಗೆ ಇಷ್ಟು ಎಂದು ಹಂಚಿದ್ದ ಪ್ರಥಮ್, ಈಗ 10 ಲಕ್ಷ ರೂ. ಹಣವನ್ನು ಪ್ರಧಾನಮಂತ್ರಿಗಳಿಗೇ ಹಸ್ತಾಂತರಿಸಿದ್ದಾರೆ.

    ನವದೆಹಲಿಗೆ ಹೋಗಿ, ಪ್ರಧಾನಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಬಂದಿದ್ದಾರೆ. ಯೋಧರ ಕಲ್ಯಾಣಕ್ಕಾಗಿ ಈ ಹಣ ನೀಡುತ್ತಿದ್ದೇನೆ. ಯೋಧರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರ ನಿಧಿಗೇ ಹಣ ನೀಡಿದ್ದೇನೆ ಎಂದಿದ್ದಾರೆ ಪ್ರಥಮ್.

  • ವಿವಾದಿತ ಸ್ಟಾರ್ ಪ್ರಥಮ್ ಸ್ಟೋರಿಗೆ ಟ್ವಿಸ್ಟ್ - ಈಗ ಭುವನ್ ವಿರುದ್ಧ ಪ್ರಥಮ್ ಕಂಪ್ಲೇಂಟ್ 

    pratham files complaint aganist bhuvan

    ಸಹನಟ ಭುವನ್​ ತೊಡೆಗೆ ಕಚ್ಚಿ, ಗಾಯಗೊಳಿಸಿದ್ದ ಪ್ರಥಮ್, ಈಗ ಭುವನ್ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಎಂಬ ಆರೋಪ ಮಾಡಿ ದೂರು ಕೊಟ್ಟಿದ್ದಾರೆ. ಶನಿವಾರ ಸಂಜೆ 4.30ರ ವೇಳೆಯಲ್ಲಿ ಭುವನ್ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರಂತೆ. ದೂರಿನ ಪ್ರಕಾರ, ಭುವನ್ ಪ್ರಥಮ್​ಗೆ ‘‘ಲೇ ಪ್ರಥಮ್ ಇವತ್ತು ನನಗೆ ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಕೊನೆ ದಿನ. ಆದರೆ, ನಿನಗೆ ಇವತ್ತೇ ಕೊನೆ ದಿನ’’ ಎಂದು ಹೇಳಿ ಹಿಗ್ಗಾಮುಗ್ಗಾ ಹೊಡೆದರಂತೆ. ಕುತ್ತಿಗೆ, ಬೆನ್ನಿಗೆಲ್ಲ ಗಾಯವಾಯಿತಂತೆ. ಆಗ ಧಾರಾವಾಹಿ ತಂಡದಲ್ಲಿದ್ದ ಕೆಲವರೇ ನನ್ನನ್ನು ಭುವನ್​ನಿಂದ ರಕ್ಷಿಸಿದರು ಎಂದು ದೂರಿದ್ದಾರೆ ಪ್ರಥಮ್. 

    ಘಟನೆ ನಡೆದ ಮೇಲೆ ಊರಿಗೆ ಹೋಗಿದ್ದ ಪ್ರಥಮ್​ಗೆ ವಿಷಯ ಗೊತ್ತಾಗಿದ್ದು ಮಾಧ್ಯಮಗಳ ಮೂಲಕ ಅಂತೆ. ಅದೂವರೆಗೆ ಪ್ರಥಮ್ ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದೇ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಜಾಮೀನು ಪಡೆದು, ನಂತರ ಚಿಕಿತ್ಸೆ ಪಡೆದು ಈಗ ದೂರು ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

    ಅಂದಹಾಗೆ ಪ್ರಥಮ್, ಭುವನ್ ವಿರುದ್ಧ ದೂರು ದಾಖಲಿಸಿರುವುದು ನಿನ್ನೆ ಅಂದ್ರೆ ಜುಲೈ 24ರ ರಾತ್ರಿ 11.30ರ ವೇಳೆಯಲ್ಲಿ.

    Related Articles :-

    ಕಚ್ಚಿಂಗ್ ಸ್ಟಾರ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..?

    ಸೈಕೋ ಪ್ರಥಮ್​ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ

    Is Pratham The New Venkat?

    ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

    ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

    ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

    Udaya Mehta Not Producimg Pratham Movie 

    ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ