` rajendra ponappa, - chitraloka.com | Kannada Movie News, Reviews | Image

rajendra ponappa,

  • Radhika Is The Heroine For Rajendra Ponnappa

    actress radhika in rajendra ponappa

    Actress Radhika has been selected as the heroine for Ravichandran starrer 'Rajendra Ponnappa' and the actress will be joining the set soon.

    Three films of Ravichandran were launched on the Shivaratri festival and among the three films, 'Rajendra Ponnappa' is being directed and produced by Ravichandran himself. The title is derived from Ravichandran's name from 'Drishya'. Ravichandran plays a criminal lawyer in this film.

    'Rajendra Ponnappa' has cinematography by G S V Seetharam, while Gowtham Srivatsa is the music director.

    Related Articles :-

    Ravichandran's Three Films Launched On Shivaratri Festival

    Ravichandran's Three Films To Be Launched Tomorrow

  • Ravichandran Releases The Posters 'Rajendra Ponnappa'

    rajendra ponappa movie image

    The sheeting for Ravichandran starrer 'Rajendra Ponnappa' is nearing completion. Meanwhile, Ravichandran has released the posters of the film.

    'Rajendra Ponnappa' is being directed and produced by Ravichandran himself. The title is derived from Ravichandran's name from 'Drishya'. Ravichandran plays a criminal lawyer in this film. Radhika Kumaraswamy is the heroine.

    'Rajendra Ponnappa' has cinematography by G S V Seetharam, while Gowtham Srivatsa is the music director.

  • ರಾಜೇಂದ್ರ ಪೊನ್ನಪ್ಪ ಫ್ಯಾಮಿಲಿಗೆ ಕಿಚ್ಚ

    ರಾಜೇಂದ್ರ ಪೊನ್ನಪ್ಪ ಫ್ಯಾಮಿಲಿಗೆ ಕಿಚ್ಚ

    ದೃಶ್ಯ 2. ಮಲಯಾಳಂ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈಗಾಗಲೇ ಬಂದಾಯ್ತು. ಈಗ ಕನ್ನಡದ ಸರದಿ. ಕನ್ನಡದಲ್ಲಿಯೂ ದೃಶ್ಯ ಸೂಪರ್ ಹಿಟ್ ಆಗಿತ್ತು. ರಾಜೇಂದ್ರ ಪೊನ್ನಪ್ಪನ ಹೋರಾಟಕ್ಕೆ ಪ್ರೇಕ್ಷಕ ಜೈ ಎಂದಿದ್ದ. ಈಗ ದೃಶ್ಯ 2 ಬರುತ್ತಿದೆ. ರಾಜೇಂದ್ರ ಪೊನ್ನಪ್ಪನ ಫ್ಯಾಮಿಲಿಗೆ ಈಗ ಕಿಚ್ಚನ ಪ್ರವೇಶವಾಗುತ್ತಿದೆ.

    ರವಿಚಂದ್ರನ್ ಅವರ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆಗೆ ಬರುತ್ತಿದ್ದಾರೆ. ಟ್ರೇಲರ್ ರಿಲೀಸ್‍ನ್ನು ದೃಶ್ಯ 2 ನಿರ್ಮಾಪಕರು ಅದ್ಧೂರಿಯಾಗಿಯೇ ಮಾಡುತ್ತಿದ್ದಾರೆ. ಇ4 ಎಂಟರ್‍ಟೈನ್‍ಮೆಂಟ್‍ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನವ್ಯಾ ನಾಯರ್ ನಾಯಕಿ. ಅನಂತ್‍ನಾಗ್ ದೃಶ್ಯ 2 ನಲ್ಲಿ ಎಂಟ್ರಿ ಕೊಟ್ಟಿರುವ ಇನ್ನೊಬ್ಬ ಸ್ಟಾರ್. ಪಿ.ವಾಸು ನಿರ್ದೇಶನದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ.

  • ರಾಜೇಂದ್ರ ಪೊನ್ನಪ್ಪನ ನಿರೀಕ್ಷೆ 50 ಕೋಟಿ..!

    ravichandran expects mega hit from rajendra ponappa

    57ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ರವಿಚಂದ್ರನ್, ಖುಷಿ ಖುಷಿಯಾಗಿದ್ದಾರೆ. ಮಗಳು ಕೊಟ್ಟ ಕೂಲಿಂಗ್ ಗ್ಲಾಸ್ ಉಡುಗೊರೆ, ಮಗ ಕೊಟ್ಟ ಕ್ರೇಜಿ ಟೀಷರ್ಟ್ ಕಾಣಿಕೆ, ಪಡ್ಡೆಹುಲಿಯ ಸ್ಪೆಷಲ್ ಟೀಸರ್ ಗಿಫ್ಟ್.. ಅಭಿಮಾನಿಗಳು ತಂದಿದ್ದ ಅಭಿಮಾನದ ಕೇಕ್.. ರವಿಚಂದ್ರನ್ ಹುಟ್ಟುಹಬ್ಬದ ಸಂಭ್ರಮಕ್ಕೆ ನೂರಾರು ಕಾರಣಗಳಿದ್ದವು.

    ಆದರೆ, ರವಿಚಂದ್ರನ್ ಎಂದಿನಂತೆ ಸಿನಿಮಾ ಭಕ್ತ. ಸಿನಿಮಾ ಹೊರತುಪಡಿಸಿ ಬೇರೇನನ್ನೂ ಚಿಂತಿಸದ ರವಿಚಂದ್ರನ್, ಎಂದಿನಂತೆ ತಮ್ಮ ಕನಸಿನ ಮಂಜಿನ ಹನಿ ಸಿನಿಮಾದ ಕನಸು ಹಂಚಿಕೊಂಡರು. ಆ ಸಿನಿಮಾಗಾಗಿ ಈಗಾಗಲೇ 8 ಕೋಟಿ ಖರ್ಚು ಮಾಡಿದ್ದಾರಂತೆ ರವಿಚಂದ್ರನ್. 

    ರಾಜೇಂದ್ರ ಪೊನ್ನಪ್ಪ ಸಿನಿಮಾ ಮೇಲೆ ನಿರೀಕ್ಷೆ ಇದೆ. ಅದು ಕ್ಲಾಸ್-ಮಾಸ್ ಸಿನಿಮಾ. ಆ ಸಿನಿಮಾದ ಮೂಲಕ ನೀವು ಮತ್ತೊಮ್ಮೆ ರಣಧೀರನನ್ನು ನೋಡ್ತೀರಿ ಎಂದಿರುವ ರವಿಚಂದ್ರನ್, ಆ ಸಿನಿಮಾ ಏನಾದರೂ 50 ಕೋಟಿ ದುಡಿದುಬಿಟ್ಟರೆ, ಮಂಜಿನ ಹನಿ ಮತ್ತೆ ಟೇಕಾಫ್ ಆಗಲಿದೆ ಅಂದ್ರು. 

    ಕನಸುಗಾರನ ಕನಸುಗಳಲ್ಲಿ ಸಿನಿಮಾ ಬಿಟ್ಟು ಬೇರೇನೂ ಇಲ್ಲ. ರಾಜೇಂದ್ರ ಪೊನ್ನಪ್ಪ ಚಿತ್ರ ಯಶಸ್ವಿಯಾಗಲಿ ಅನ್ನೋದು ಅಭಿಮಾನಿಗಳ ಹಾರೈಕೆ. ಆದರೆ, ಸದ್ಯಕ್ಕೆ ಆ ದೊಡ್ಡ ಬಜೆಟ್‍ನ ಕಾರಣಕ್ಕಾಗಿಯೇ ಮಂಜಿನ ಹನಿಯನ್ನು ಡ್ರಾಪ್ ಮಾಡಿದ್ದಾರಂತೆ ರವಿಚಂದ್ರನ್.

  • ರಾಜ್ಯೋತ್ಸವಕ್ಕೆ ರಾಜೇಂದ್ರ ಪೊನ್ನಪ್ಪ

    rajendra ponappa movie image

    ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಹಾಗೂ ನಿರ್ದೇಶನದ ರಾಜೇಂದ್ರ ಪೊನ್ನಪ್ಪ, ರಾಜ್ಯೋತ್ಸವಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಳೆದ 10 ವರ್ಷಗಳಲ್ಲಿ ಸ್ವತಃ ರವಿಚಂದ್ರನ್ ನಿರ್ದೇಶಿಸಿರುವ 3ನೇ ಸಿನಿಮಾ ಇದು. ರಾಜೇಂದ್ರ ಪೊನ್ನಪ್ಪ, ರವಿಚಂದ್ರನ್ ಅವರ ಹಿಟ್ ಸಿನಿಮಾ ಆಗಿರುವ ದೃಶ್ಯ ಚಿತ್ರದ ಪಾತ್ರಧಾರಿಯ ಹೆಸರು. ಆದರೆ, ಇದು ದೃಶ್ಯ ಚಿತ್ರದ ಮುಂದುವರಿದ ಭಾಗ ಅಲ್ಲ.

    ರವಿಚಂದ್ರನ್ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್‍ಗಳಲ್ಲಿ ಒಬ್ಬರು. ಅವರು ಇದುವರೆಗೆ ನಿರ್ದೇಶಿಸಿರುವುದು 23 ಸಿನಿಮಾ. ಇದು ಅವರ 24ನೇ ಸಿನಿಮಾ ಆಗಲಿದೆ. ಅಪೂರ್ವ ಸಿನಿಮಾ ನಂತರ ರವಿಚಂದ್ರನ್ ನಿರ್ದೇಶಿಸುತ್ತಿರುವ ಸಿನಿಮಾ ಇದು. ಇತ್ತೀಚೆಗೆ ಹೀರೋ ಪಾತ್ರಗಳನ್ನು ಬಿಟ್ಟು, ಯಂಗ್‍ಸ್ಟಾರ್‍ಗಳ ಜೊತೆ ಹಿರಿಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ರವಿಚಂದ್ರನ್, ಈ ಚಿತ್ರದಲ್ಲಿ ಹೀರೋ. ಅವರೇ ಹೀರೋ.. ಅವರೇ ಡೈರೆಕ್ಟರ್.

    ರವಿಚಂದ್ರನ್‍ಗೆ ನಾಯಕಿಯಾಗಿರೋದು ರಾಧಿಕಾ ಕುಮಾರಸ್ವಾಮಿ. ಆದರೆ, ಚಿತ್ರದ ಪೋಸ್ಟರ್‍ಗಳಲ್ಲಿ ಕೇವಲ ರವಿಚಂದ್ರನ್ ಮಾತ್ರ ಕಾಣಿಸುತ್ತಿದ್ದಾರೆ. ಹಾಗಾದರೆ, ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಂಟಿನ್ಯೂ ಆಗಿದ್ದಾರಾ.. ಇಲ್ಲವಾ.. ಅದಕ್ಕೆ ಉತ್ತರ ಸಿಕ್ಕಿಲ್ಲ.

    ಆದರೆ ಪೋಸ್ಟರ್ ಮೇಲಿರುವ ಡೈಲಾಗುಗಳು ವಿಚಿತ್ರ ಕುತೂಹಲ ಹುಟ್ಟಿಸಿವೆ. ಸುಮ್ಮನೆ ಸ್ಯಾಂಪಲ್ ನಓಡಿ. ಕಾಸಿದ್ದೋನೇ ಇಲ್ಲಿ ಯಜಮಾನ, ತಲೆ ಇದ್ದೋನು ಇಲ್ಲಿ ಜವಾನ.. ತಪ್ ಮಾಡ್ದೋನ್ಗೆ ಇಲ್ಲಿ ಸನ್ಮಾನ, ತೆಪ್ಗಿದ್ದೋನ್ಗೆ ಬರೀ ಅವಮಾನ..  ನನ್ನ ಕಾಲ ಮೇಲೆ ನಿಂತು ಸಾಯ್ತೀನೇ ಹೊರತು, ಮಂಡಿಯೂರಿ ಸಾಯಲ್ಲ..  ನಿನಗೆ ಸರಿ ಅನ್ಸಿದ್ದಕ್ಕೆ ನಿಂತ್ಕೋ, ಏಕಾಂಗಿ ಆದ್ರೂ ಸರಿ...  ಇಂತಹ ತರಹೇವಾರಿ ಡೈಲಾಗುಗಳು ಪೋಸ್ಟರ್ ಮೇಲಿವೆ. ಕುತೂಹಲ ಹುಟ್ಟಿಸೋಕೆ ಅಷ್ಟು ಸಾಕೇನೋ..