` vijay kirgandur, - chitraloka.com | Kannada Movie News, Reviews | Image

vijay kirgandur,

  • ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

    ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

    ಡೌಟೇ ಇಲ್ಲ. ಇದು ಕನ್ನಡಿಗರ.. ಕನ್ನಡ ಸಿನಿಮಾ ಪ್ರೇಮಿಗಳ ಗೋಲ್ಡನ್ ಫೆಸ್ಟಿವಲ್. ರಿಲೀಸ್ ಆದ ಪ್ರತಿ ಚಿತ್ರಮಂದಿರದಲ್ಲೂ.. ಪ್ರತೀ ಸ್ಕ್ರೀನ್‍ನಲ್ಲೂ ಹಬ್ಬವೋ ಹಬ್ಬ. ಅದು ರಾಕಿಭಾಯ್ ಸೃಷ್ಟಿಸಿರೋ ಕ್ರೇಜ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್. ಸಂಜಯ್ ದತ್, ರವೀನಾ ಟಂಡನ್ ಬಗ್ಗೆ ಹುಟ್ಟಿದ ಕುತೂಹಲ. ಶ್ರೀನಿಧಿ ಶೆಟ್ಟಿ, ಅರ್ಚನಾ ಮೇಲೆ ಕಾಣಿಸಿದ ಪ್ರೀತಿ. ಒಂದಲ್ಲ..ಎರಡಲ್ಲ.. ಎಲ್ಲವೂ ಕೂಡಿ ಬಂದು ಸೃಷ್ಟಿಯಾದ ತೂಫಾನ್ ಇದು.

    ಮೊದಲ ದಿನವೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 40 ಕೋಟಿ ದಾಟಲಿದೆ. ಎಲ್ಲ ಭಾಷೆಗಳ ಶೋಗಳದ್ದೂ ಸೇರಿಸಿ. ಇದೂ ಒಂದು ದಾಖಲೆ.

    ಅಡ್ವಾನ್ಸ್ ಬುಕ್ಕಿಂಗ್‍ನಲ್ಲಿ ದೇಶದಾದ್ಯಂತ 40 ಕೋಟಿಗಿಂತ ಹೆಚ್ಚು ಬುಕ್ಕಿಂಗ್  ಆಗಿದೆ. ಇದು ಬಾಹುಬಲಿಗಿಂತಾ ಹೆಚ್ಚು.

    ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ ಕೆಜಿಎಫ್ ಶೋಗಳು ಶುರುವಾದವು. ವಿದೇಶದಲ್ಲೂ ಕೆಲವೆಡೆ ಮಿಡ್ ನೈಟ್ ಶೋ ನಡೆದಿದ್ದು ವಿಶೇಷವಾಗಿತ್ತು.

    ಬೆಂಗಳೂರಿನ ವೆಂಕಟೇಶ್ವರ ಟಾಕೀಸ್‍ನಲ್ಲಿ ಯಶ್ ಅವರ ಮಹಿಳಾ ಅಭಿಮಾನಿಗಳಿಗಾಗಿಯೇ ವಿಶೇಷ ಶೋ ಇದೆ. ಯಶ್ ಅವರ ಮಹಿಳಾ ಫ್ಯಾನ್ಸ್ ಎಲ್ಲ ಒಟ್ಟಾಗಿ ಥಿಯೇಟರಿನ ಎಲ್ಲ ಟಿಕೆಟ್ ಖರೀದಿಸಿ ಒಟ್ಟಾಗಿ ಸಿನಿಮಾ ನೋಡುತ್ತಿದ್ದಾರೆ.

    ಗುಜರಾತ್‍ನ ಸೂರತ್‍ನಲ್ಲಿ ಇದೇ ಮೊದಲ ಬಾರಿಗೆ 6 ಗಂಟೆ ಶೋ ಪ್ರದರ್ಶನವಾಗಿದೆ. ಗುಜರಾತ್ ಇತಿಹಾಸದಲ್ಲಿಯೇ 6 ಗಂಟೆಯ ಶೋಗಳು ಅದರಲ್ಲೂ ಸೂರತ್‍ನಲ್ಲಿ ನಡೆದಿರಲಿಲ್ಲ.

    ರಿಲೀಸ್ ಆಗುವುದಕ್ಕೂ ಮುನ್ನ ರಿಲೀಸ್ ಆದ ರಣಧೀರ ಸುಲ್ತಾನಾ ಸಾಂಗ್ ಪ್ರೇಕ್ಷಕರಿಗೆ ಮತ್ತಷ್ಟು ಥ್ರಿಲ್ ಕೊಟ್ಟಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 40 ಮಿಲಿಯನ್‍ಗೂ ಹೆಚ್ಚು ವೀಕ್ಷಕರು ಹಾಡನ್ನು ನೋಡಿದರು.

    ಸ್ಸೋ.. ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ..

  • ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

    ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

    ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಹವಾ ಮೊದಲಿನಿಂದಲೂ ಕಡಿಮೆ. ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೆ ಉತ್ತಮ. ಅಕಸ್ಮಾತ್ ರಿಲೀಸ್ ಆದರೂ.. ತಮಿಳುನಾಡಿನ ಮೇನ್ ಥಿಯೇಟರುಗಳಂತೂ ಸಿಗುತ್ತಿರಲಿಲ್ಲ. ಸಿಕ್ಕರೂ ಫುಲ್ ಶೋಗಳಿರುತ್ತಿರಲಿಲ್ಲ. ಈಗ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುತ್ತಿರೋ ಮರ್ಯಾದೆ ಇದೆಯಲ್ಲ.. ಅದಕ್ಕಿಂತ ಕೆಟ್ಟದಾಗಿರುತ್ತಿತ್ತು. ಶೋ ಟೈಂ ಮತ್ತು ಸ್ಥಳ ಎಲ್ಲೋ ಊರ ಹೊರಗೆ ಸಿಗುತ್ತಿದ್ದುದೇ ಹೆಚ್ಚು. ಗಡಿ ಭಾಗದಲ್ಲಿದ್ದ ಕನ್ನಡಿಗರಂತೂ ಎಷ್ಟೋ ಬಾರಿ ಗಡಿ ದಾಟಿ ಬಂದು ಕರ್ನಾಟಕದಲ್ಲಿಯೇ ಸಿನಿಮಾ ನೋಡಿ ಹೋಗುತ್ತಿದ್ದರು. ಅದೆಲ್ಲವನ್ನೂ ಬದಲಿಸಿರೋದು ಕೆಜಿಎಫ್ ಚಾಪ್ಟರ್ 2.

    ಚೆನ್ನೈನ ಕೆಲವು ಥಿಯೇಟರುಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಮಿಡ್ ನೈಟ್ ಶೋಗಳು ನಡೆದಿವೆ. ಮಧ್ಯರಾತ್ರಿ 1 ಗಂಟೆ, 4 ಗಂಟೆಗೆ ಚೆನ್ನೈನಲ್ಲೇ ಕೆಜಿಎಫ್ ಚಾಪ್ಟರ್ 2 ಕನ್ನಡ ವರ್ಷನ್ ಶೋ ನಡೆದಿದೆ. ಅಫ್‍ಕೋರ್ಸ್.. ತಮಿಳು ಅವತರಣಿಕೆಯೂ ರಿಲೀಸ್ ಆಗಿದ್ದು, ತಮಿಳು ಕೆಜಿಎಫ್ ಚಾಪ್ಟರ್ 2ಗೆ, ತಮಿಳುನಾಡಿನಲ್ಲಿ ಕನ್ನಡದ ಕೆಜಿಎಫ್‍ಗಿಂತ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ. ಅದನ್ನು ಖುಷಿಯಿಂದಲೇ ವೆಲ್‍ಕಂ ಮಾಡಬೇಕು.

    ಆದರೆ.. ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದು ಮಿಡ್ ನೈಟ್ ಶೋ ಕಂಡಿದ್ದು ಇತಿಹಾಸದಲ್ಲೇ ಮೊದಲು

  • ಕೆಜಿಎಫ್ ೧ನಲ್ಲಿ ಅಧೀರನ ಮುಖ ತೋರಿಸದೇ ಇದ್ದದ್ದಕ್ಕೆ ಅವರೇ ಕಾರಣ..!

    the reason why adheera's face was not showed

    ಕೆಜಿಎಫ್ ಚಾಪ್ಟರ್ ೧ನಲ್ಲಿ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಅಧೀರ. ಆದರೆ, ಸೂರ್ಯವರ್ಧನ್ ನಂತರ ನರಾಚಿ ಗಣಿಯ ಒಡೆಯನಾಗುವುದು ಆತನ ಮಗ ಗರುಡ. ಗರುಡನನ್ನು ಹೊಡೆಯುವುದು ಸುಪಾರಿ ಕಿಲ್ಲರ್ ರಾಕಿ. ಇದು ಕೆಜಿಎಫ್ ೧ ಶಾರ್ಟ್ & ಸ್ವೀಟ್ ಸ್ಟೋರಿ. ಅಧೀರನ ಪ್ರವೇಶ ಆಗುವುದು ಚಾಪ್ಟರ್ ೨ನಲ್ಲಿ.

    ಆದರೆ, ಇಡೀ ಚಿತ್ರದಲ್ಲಿ ಎಲ್ಲಿಯೂ ಅಧೀರನ ದರ್ಶನ ಮಾಡಿಸಿರಲಿಲ್ಲ ನಿರ್ದೇಶಕ ಪ್ರಶಾಂತ್ ನೀಲ್. ಸ್ಯಾಂಪಲ್ಲಿಗೂ ಮುಖ ತೋರಿಸಿರಲಿಲ್ಲ. ಅದಕ್ಕೆ ಕಾರಣ, ಸಂಜಯ್ ದತ್. ಆ ಪಾತ್ರದ ಕಲ್ಪನೆ ಮೂಡಿದಾಗಲೇ ಸಂಜಯ್ ದತ್ ಅವರಿಂದಲೇ ಈ ಪಾತ್ರ ಮಾಡಿಸಬೇಕು ಎನಿಸಿತ್ತು. ಹೀಗಾಗಿ ಅಧೀರನ ಪಾತ್ರವನ್ನು ತೋರಿಸಿರಲಿಲ್ಲ. ಕೆಜಿಎಫ್ ಚಾಪ್ಟರ್ ೧ ನೋಡಿದರೆ, ಅವರು ಖಂಡಿತಾ ಈ ಪಾತ್ರ ಒಪ್ಪಿಕೊಳ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಸಂಜಯ್ ದತ್ ಅಧೀರನ ಪಾತ್ರ ಮಾಡಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಪ್ರಶಾಂತ್ ನೀಲ್.

  • ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

    ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

    ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು 2018ರ ಕೊನೆಯಲ್ಲಿ. ನಂತರ 2019ರ ವರ್ಷವಿಡೀ ಸದ್ದು ಮಾಡಿದ ಸಿನಿಮಾ ದುಡಿದದ್ದು 300 ಕೋಟಿಗೂ ಹೆಚ್ಚು. ಕನ್ನಡವೊಂದರಲ್ಲೇ 100 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಸಿನಿಮಾ ಅದು. ಈಗ ಕೆಜಿಎಫ್ ಚಾಪ್ಟರ್ 2 ಬರ್ತಾ ಇದೆ. ಟೀಸರ್ ಹೊರಬಿದ್ದಿದೆ.

    ತಾರಾಗಣ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಎಂಟ್ರಿಯಾಗಿದೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಜೆಟ್ ಮತ್ತು ವೇಯ್ಟೇಜ್ ಎರಡೂ ಜಾಸ್ತಿಯಾಗಿದೆ. ಒಂದು ಮೂಲದ ಪ್ರಕಾರ ಕೆಜಿಎಫ್ ಚಾಪ್ಟರ್ 2ಗಾಗಿ ಚಿತ್ರತಂಡ ಖರ್ಚು ಮಾಡಿರೋದು 100 ಕೋಟಿಗೂ ಹೆಚ್ಚು. ವಿಚಿತ್ರ ಮತ್ತು ವಿಶೇಷವೆಂದರೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣದ ವೇಳೆಯಲ್ಲೇ 2ನೇ ಭಾಗದ ಬಹುತೇಕ ಭಾಗಗಳ ಚಿತ್ರೀಕರಣವಾಗಿತ್ತು. ಹೀಗಿದ್ದರೂ 2ನೇ ಭಾಗದ ಬಾಕಿ ಚಿತ್ರೀಕರಣದ ಬಜೆಟ್ 100 ಕೋಟಿ ದಾಟಿದೆಯಂತೆ.

    ಚಿತ್ರದ ಅತಿ ದೊಡ್ಡ ಖರ್ಚು ಚಿತ್ರದ ಕ್ಲೈಮಾಕ್ಸ್. ಸಂಜಯ್ ದತ್ ಮತ್ತು ಯಶ್ ಮಧ್ಯೆ ನಡೆಯೋ ಅದೊಂದು ಕ್ಲೈಮಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು ಮಾಡಿದ್ದಾರಂತೆ ವಿಜಯ್ ಕಿರಗಂದೂರು. ಪ್ರಶಾಂತ್ ನೀಲ್ ಕಲ್ಪನೆಯಂತೆ ಆ ದೃಶ್ಯ ಅದ್ಭುತವಾಗಿ ಮೂಡಿಬಂದಿದೆಯಂತೆ.

    ಕನ್ನಡದಲ್ಲಿ 12 ಕೋಟಿಯಲ್ಲಿ ಅದ್ಧೂರಿ ಚಿತ್ರವನ್ನೇ ರೆಡಿ ಮಾಡುತ್ತಾರೆ. ಅಂಥಾದ್ದರಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರವೊಂದರ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕೇ 12 ಕೋಟಿ ಸುರಿದಿದ್ದಾರೆ ಎಂದರೆ.. ಆ ಸೀನ್ ಹೇಗಿರಬೇಕು..

  • ಕೆಜಿಎಫ್ 2ಗೆ ಯಶ್ ಎಂಟ್ರಿ ಯಾವಾಗ..?

    yash to start shooting for kgf2 from next week

    ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.

    ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.

    ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ. 

  • ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

    ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

    ಕೆಜಿಎಫ್ ಚಾಪ್ಟರ್ 2 ಸೂಪರ್ ಡ್ಯೂಪರ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿರೋವಾಗಲೇ ಚಾಪ್ಟರ್ 3 ಬರೋದು ಪಕ್ಕಾ ಆಯ್ತಾ? ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಅಂಥಾದ್ದೊಂದು ಸುಳಿವು ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಚಾಪ್ಟರ್ 1 ಮತ್ತು ಚಾಪ್ಟರ್ 2 ಎರಡೂ ಸೂಪರ್ ಹಿಟ್ ಎನ್ನಿಸಿಕೊಂಡಿರೋದ್ರಿಂದ.. 3ನೇ ಭಾಗಕ್ಕೆ ಪ್ಲಾನ್ ಮಾಡಿದ್ದರೂ ಮಾಡಿರಬಹುದು.

    ಆದರೆ.. ಈಗಾಗಲೇ ಚಿತ್ರದ ಕೆಲವೊಂದಿಷ್ಟು ಸೀನ್‍ಗಳ ಬಗ್ಗೆ ನೀಲ್ ಮತ್ತು ಯಶ್ ಮಾತನಾಡಿಕೊಂಡಿದ್ದಾರಂತೆ. ಸ್ವತಃ ಯಶ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಷ್ಟು ಬಿಟ್ಟರೆ ಮತ್ತೇನನ್ನೂ ಹೇಳಿಲ್ಲ. ಪಾರ್ಟ್ 3 ಮಾಡೋಕೆ ಸಾಕಷ್ಟು ಅವಕಾಶ ಇದೆ. ಸ್ಟೋರಿ ಡೆವಲಪ್ ಮಾಡೋಕೂ ಚಾನ್ಸ್‍ಗಳಿವೆ ಎಂದಿರೋ ಯಶ್ ಪಾರ್ಟ್ 3 ಬಂದೇ ಬರುತ್ತೆ ಅನ್ನೋದನ್ನೂ ಹೇಳಿಲ್ಲ. ಪ್ರಶಾಂತ್ ನೀಲ್ ಕೂಡಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಬಾಯಿಬಿಟ್ಟಿಲ್ಲ.

    ಕೆಜಿಎಫ್ ನಂತರ ಮುಂದೇನು ಎಂಬ ಬಗ್ಗೆ ಯಶ್ ಓಪನ್ ಆಗಿ ಇದೂವರೆಗೆ ಮಾತನಾಡಿಲ್ಲ. ನರ್ತನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆಯಾದರೂ, ಅದು ಅಧಿಕೃತವಾಗಿಲ್ಲ. ಪ್ರಶಾಂತ್ ನೀಲ್ ಅವರೇನೋ ಸದ್ಯಕ್ಕೆ ಪ್ರಭಾಸ್ ಜೊತೆ ಸಲಾರ್ ಮಾಡುತ್ತಿದ್ದಾರೆ. ಅದಾದ ನಂತರ ಎನ್‍ಟಿಆರ್ ಸಿನಿಮಾ ಇದೆ. ಶ್ರೀಮುರಳಿ ಜೊತೆ ಬಘೀರ ಇದೆ. ಸಲಾರ್ ಮುಗಿದ ನಂತರ ಕೆಜಿಎಫ್ ಚಾಪ್ಟರ್ 3 ಕೈಗೆತ್ತಿಕೊಳ್ತಾರಾ..? ಈಗಲೇ ಏನೂ ಹೇಳೋಕೆ ಆಗಲ್ಲ.

  • ಕೆಜಿಎಫ್ ಅಧಿಕೃತ ಕಲೆಕ್ಷನ್ ಎಷ್ಟು..? 200 ಕೋಟಿ ನಿಜಾನಾ..?

    producer clarifies about kgf's collection

    ಕೆಜಿಎಫ್ ಚಿತ್ರ 200 ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ಚಿತ್ರ ಇನ್ನೂ 600 ಸ್ಕ್ರೀನ್‍ಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಒಂದು ತಿಂಗಳು ಸುಮ್ಮನಿರಿ. ನಾನೇ ಎಲ್ಲವನ್ನೂ ನಿಮ್ಮ ಮುಂದೆ ಲೆಕ್ಕ ಹೇಳುತ್ತೇನೆ' ಎಂದಿದ್ದಾರೆ ವಿಜಯ್ ಕಿರಗಂದೂರು.

    200 ಕೋಟಿ ದಾಟಿದೆ ಎನ್ನುವ ಸುದ್ದಿಯನ್ನು ವಿಜಯ್ ನಿರಾಕರಿಸಿದ್ದಾರೆ. ಚಿತ್ರ ಹಿಂದಿಯಲ್ಲಿಯೇ 600 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗಿರುವ ಎಲ್ಲ ಸೆಂಟರ್‍ಗಳಲ್ಲಿ ಈಗಲೂ ಚೆನ್ನಾಗಿ ಹೋಗುತ್ತಿದೆ. ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಎಲ್ಲ ಲೆಕ್ಕವನ್ನೂ ಮುಂದಿನ ತಿಂಗಳು ಕೊಡುತ್ತೇನೆ ಎಂದಿದ್ದಾರೆ ಕೆಜಿಎಫ್‍ನ ಮಾಲೀಕ ವಿಜಯ್ ಕಿರಗಂದೂರು.

  • ಕೆಜಿಎಫ್‌ ಚಾಪ್ಟರ್‌ 2ಗೆ ರೌಡಿ ತಂಗಂ ಟ್ರಬಲ್

    kgf chapter 2 lands in new trouble

    ಇತ್ತೀಚೆಗಷ್ಟೇ ಸೈನೇಡ್ ಗುಡ್ಡದ ಶೂಟಿಂಗ್ ಸಂಕಟದಿಂದ ಪಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಅದು ಬಂದಿರೋದು ರೌಡಿ ತಂಗಂ ತಾಯಿಯಿಂದ. ಕೆಜಿಎಫ್ 1 ಸಿನಿಮಾದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಹೇಳಿ, ಅವನನ್ನು

     ಕೆಟ್ಟದಾಗಿ ತೋರಿಸಿದ್ದಾರೆ. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ತಂಗಂ ತಾಯಿ ಪೌಳಿ, 2ನೇ  ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ರೌಡಿ ತಂಗಂ ಹಲವು ವರ್ಷಗಳ ಹಿಂದೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ರೌಡಿ. ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್‌ ಕಂಪೆನಿಗೆ ಸಮನ್ಸ್ ನೀಡಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ನಿಗಧಿಯಾಗಿದೆ.

  • ಕೆಜಿಎಫ್ ಟೀಂ ಹೈದರಾಬಾದ್ ಶಿಫ್ಟ್

    kgf team busy shooting in hyderabad

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ಮುಕ್ತಾಯವಾಗಿದೆ. 2ನೇ ಶೆಡ್ಯೂಲ್ ಚಿತ್ರೀಕರಣ ಹೈದರಾಬಾದ್‍ನಲ್ಲಿ ಶುರುವಾಗಿದೆ. ಇಡೀ ಚಿತ್ರತಂಡ ಈಗ ಹೈದರಾಬಾದ್‍ನಲ್ಲಿ ಬೀಡುಬಿಟ್ಟಿದೆ.

    ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅನಂತನಾಗ್, ಮಾಳವಿಕಾ ಅವಿನಾಶ್ ಸೇರಿದಂತೆ ಮತ್ತೊಮ್ಮೆ ಕಲಾವಿದರ ತಂಡ ಒಗ್ಗೂಡಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಗಿಸುವ ತವಕದಲ್ಲಿದೆ ಕೆಜಿಎಫ್ ಟೀಂ.

    ಹೊಂಬಾಳೆ ಫಿಲಂಸ್‍ನಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

  • ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರೋ ಸಿನಿಮಾಗೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಬಲವೂ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಮ್ಯಾಜಿಕ್ ನೋಡೋಕೆ ಇಡೀ ಸಿನಿಮಾ ಜಗತ್ತು ಕುತೂಹಲದಿಂದ ಕಾಯುತ್ತಿರುವಾಗ.. ಇನ್ನೊಂದೆಡೆ ಸಿನಿಮಾ ಒಂದರ ಹಿಂದೊಂದು ದಾಖಲೆಗಳನ್ನು ಬರೆಯುತ್ತಾ ಹೋಗುತ್ತಿದೆ.

    ಅಭಿಮಾನಿಗಳು ಸಿದ್ಧಪಡಿಸಿದ ಪೋಸ್ಟರ್‍ಗಳನ್ನು ಬಳಸಿಕೊಳ್ಳುತ್ತಿದೆ ಕೆಜಿಎಫ್ ಟೀಂ. ಇದೊಂದು ರೀತಿ ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳ ಪ್ರಚಾರ ಎನ್ನಬಹುದು.

    ರಿಲೀಸ್ ಆಗುವುದಕ್ಕೂ ಮೊದಲೇ ಹಿಟ್ ಎಂದು ಸಲೀಸಾಗಿ ಘೋಷಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಚಿತ್ರ ಗ್ರೀಸ್‍ನಲ್ಲೂ ರಿಲೀಸ್ ಆಗುತ್ತಿದೆ.ಗ್ರೀಸ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಮತ್ತು ದ.ಭಾರತದ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ಏಪ್ರಿಲ್ 13ರಂದು ಅಮೆರಿಕದಲ್ಲಿ ಸಿನಿಮಾ ಪ್ರೀಮಿಯರ್ ಶೋ ಇದೆ. ಕೆಜಿಎಫ್ ಟೀಂ ಅಲ್ಲಿಯೇ ಇರಲಿದೆ. ವಿದೇಶಿ ಮಾರುಕಟ್ಟೆಯನ್ನು ಈ ರೀತಿ ಆಕ್ರಮಿಸಿಕೊಳ್ಳುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ರಷ್ಯಾದಲ್ಲಿಯೂ ರಿಲೀಸ್ ಆಗುತ್ತಿರೋ ಕೆಜಿಎಫ್ ಚಾಪ್ಟರ್ 2, ಅಲ್ಲಿಯೂ ದಾಖಲೆ ಬರೆಯುತ್ತಿದೆ. ಎಲ್ಲ ಭಾಷೆಗಳ ವರ್ಷನ್ ಕೂಡಾ ಅಲ್ಲಿ ರಿಲೀಸ್ ಆಗಲಿದೆ.

    ಅಮೆರಿಕ, ಬ್ರಿಟನ್, ಸೇರಿದಂತೆ ವಿದೇಶಗಳಲ್ಲಿ ಆಗಲೇ ಟಿಕೆಟ್ ಬುಕಿಂಗ್‍ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ ಕೆಜಿಎಫ್.

    ರಾಕಿಂಗ್ ಫ್ಯಾನ್ಸ್ ಕ್ಲಬ್ ಕ್ರೇಜ್ ಹೇಗಿದೆಯೆಂದರೆ ಭೂಮಿಯಂದ 14 ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ 155 ಮಿಲಿಯನ್ ಕ್ರಾಸ್ ಮಾಡಿ ಮುನ್ನುಗ್ಗುತ್ತಿದ್ದರೆ, ಟೀಸರ್ ವೀಕ್ಷಣೆ 250 ಮಿಲಿಯನ್ ಕ್ರಾಸ್ ಮಾಡಿದೆ. ಎರಡೂ ದಾಖಲೆಯೇ..

    ಇದರಿಂದ ಖುಷಿಯಾಗಿರೋದು ನಿರ್ಮಾಪಕ ವಿಜಯ್ ಕಿರಗಂದೂರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿರೋ ಚಿತ್ರದಲ್ಲಿ ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ, ಬಿ.ಸುರೇಶ್.. ಮೊದಲಾದವರು ಇನ್ನಷ್ಟು ಸೆನ್ಸೇಷನ್ ಸೃಷ್ಟಿಸಿದ್ದಾರೆ.

  • ಕ್ರಿಸ್ಟಿಯಾನೋ ರೊನಾಲ್ಡೋ ಇರೋ ಫುಟ್'ಬಾಲ್ ಕ್ಲಬ್`ಗೂ ಕೆಜಿಎಫ್ ಕಿಕ್

    ಕ್ರಿಸ್ಟಿಯಾನೋ ರೊನಾಲ್ಡೋ ಇರೋ ಫುಟ್'ಬಾಲ್ ಕ್ಲಬ್`ಗೂ ಕೆಜಿಎಫ್ ಕಿಕ್

    ಒಂದು ಸಿನಿಮಾ ಎಲ್ಲಿಂದ ಎಲ್ಲಿಗೆ ಹೋಗಬಹುದು.. ಯಾವ ರೇಂಜ್ ತಲುಪಬಹುದು.. ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದೆ ಕೆಜಿಎಫ್. ಜಗತ್ತಿನ ಮೂಲೆ ಮೂಲೆಯಲ್ಲಿರೋ ಇಂಡಿಯನ್ಸ್ ಅಷ್ಟೇ ಅಲ್ಲ.. ಬೇರೆ ಬೇರೆ ದೇಶದ ಜನರೂ ಸಿನಿಮಾ ಇಷ್ಟಪಡುತ್ತಿದ್ದಾರೆ. ಅಲ್ಲೆಲ್ಲ ರಾಕಿಭಾಯ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಪರಿಚಯವಾಗಿದೆ.

    ಅದಕ್ಕೆ ಉದಾಹರಣೆ ಇಲ್ಲಿದೆ.

    ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಸಿಟಿಯಲ್ಲಿರೋ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್ ಇದ್ಯಲ್ಲ.. ಇದು ಜಗತ್ತಿನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ 3ನೇ ಅತೀದೊಡ್ಡ ಫುಟ್‍ಬಾಲ್ ಕ್ಲಬ್. ಈ ಟೀಂನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕೂಡಾ ಇದ್ದಾರೆ ಅನ್ನೋದು ಜಸ್ಟ್ ಇನ್‍ಫರ್ಮೇಷನ್.

    ಆ ತಂಡವೀಗ ತಂಡದಲ್ಲಿರೋ ಕೆವಿನ್, ಗುಂಡೊಕನ್, ಫೊಡೆನ್ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಟ್ವೀಟ್ ಮಾಡಿದೆ.

    ಅತ್ತ ಅಮುಲ್ ಜಾಹೀರಾತಿನಲ್ಲೂ ಯಶ್ ಕ್ಯಾರಿಕೇಚರ್ ಬಳಸಲಾಗಿದೆ. ಆರ್.ಸಿ.ಬಿ. ಜೊತೆ ಅಧಿಕೃತ ಸಹಭಾಗಿತ್ವ ಮಾಡಿಕೊಂಡಿದೆ. ಆರ್‍ಸಿಬಿ ಆಗಲೇ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಫಾಪ್ ಡುಪ್ಲೆಸಿ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಈಗಾಗಲೇ ಘೋಷಿಸಿ ಆಗಿದೆ...ಒಟ್ಟಿನಲ್ಲಿ ಕೆಜಿಎಫ್ ಹವಾ ಬಾಕ್ಸಾಫೀಸ್‍ನಲ್ಲಷ್ಟೇ ಅಲ್ಲ.. ಅದರ ವ್ಯಾಪ್ತಿಯನ್ನೂ ಮೀರಿ ಮುನ್ನುಗ್ಗುತ್ತಿದೆ.

  • ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಟೀಸರ್ನಲ್ಲೇ ಸಂಚಲನ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಇನ್ನು 6 ತಿಂಗಳು. ಥಿಯೇಟರಿನಲ್ಲಿ ಚಿನ್ನದ ಗಣಿಯ ದೂಳು ಏಳಲಿದೆ. ರಾಕಿಭಾಯ್ ಯಶ್, ಅಧೀರ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ಎಲ್ಲರನ್ನೂ ಆ ದಿನ ತೆರೆಯ ಮೇಲೆ ನೋಡಿ ಎಂಜಾಯ್ ಮಾಡಬಹುದು.

    ಚಾಪ್ಟರ್ 2 ಸೂಪರ್ ಸಕ್ಸಸ್ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಮೇ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಮತ್ತೊಮ್ಮೆ ಭಾರತೀಯ ಚಿತ್ರರಂದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು.

  • ತಮ್ಮದೇ ದಾಖಲೆ ಮುರಿದ ರಾಜಕುಮಾರ ವಿಜಯ್ ಕಿರಗಂದೂರು

    vijay kiragandur breaks his own record

    ಕೆಜಿಎಫ್ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ದಾಖಲೆಗಳಲ್ಲಿ 2ನೇ ಸ್ಥಾನಕ್ಕೆ ಇಳಿದಿರುವುದು ವಿಜಯ್ ಕಿರಗಂದೂರು ಅವರ ಸಿನಿಮಾ. ಅಫ್‍ಕೋರ್ಸ್.. ಮೊದಲನೇ ಸ್ಥಾನಕ್ಕೆ ಏರಿರುವುದೂ ಅವರೇ. ಈ ಮೊದಲು ಕನ್ನಡದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದುದು ರಾಜಕುಮಾರ.

    ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ, 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆ ಚಿತ್ರದ ನಿರ್ಮಾಪಕರೂ ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು. ಈಗ.. ಕೆಜಿಎಫ್ ಒಂದೇ ವಾರದಲ್ಲಿ ಆ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಕನ್ನಡದಲ್ಲಿಯೇ, ಮೊದಲ ವಾರದಲ್ಲಿಯೇ 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್.

    ಮೂಲಗಳ ಪ್ರಕಾರ ಕರ್ನಾಟಕದಲ್ಲಿ, ನಿರ್ಮಾಪಕರಿಗೆ ಸಿಕ್ಕಿರುವ ಮೊದಲ ವಾರದ ಷೇರ್ ಸುಮಾರು 30 ಕೋಟಿ. ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿ ಹಾಗೂ ತಮಿಳಿನಲ್ಲಿ ಸುಮಾರು 5 ಕೋಟಿ ಷೇರ್ ಸಿಕ್ಕಿದೆ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಷೇರ್ 8 ಕೋಟಿ ದಾಟಿದೆ.

    ಅಂದಹಾಗೆ ಇದು ನಿರ್ಮಾಪಕರಿಗೆ ಸಿಕ್ಕಿರುವ ಷೇರ್‍ನ ಮಾಹಿತಿ. ಕಲೆಕ್ಷನ್‍ನಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ಈಗಾಗಲೇ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ.

  • ಪವರ್ ಸ್ಟಾರ್ ಪವನ್ ಕುಮಾರ್'ಗೆ  ಹಾಕಿರೋದು ಒಂದೇ ಕಂಡೀಷನ್..!

    ಪವರ್ ಸ್ಟಾರ್ ಪವನ್ ಕುಮಾರ್'ಗೆ  ಹಾಕಿರೋದು ಒಂದೇ ಕಂಡೀಷನ್..!

    ಸಹಜವಾಗಿಯೇ ಎಲ್ಲ ನಿರ್ದೇಶಕರಿಗೂ ಇರುವಂತೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಿನಿಮಾ ಮಾಡಬೇಕು ಅನ್ನೋ ಕನಸು ಲೂಸಿಯಾ ಪವನ್ ಅವರಿಗೂ ಇತ್ತು. ಭಟ್ಟರ ಜೊತೆ ಭೇಟಿ ಮಾಡಿದ್ದಾಗ ಪುನೀತ್ ಅವರ ಸರಳತೆ ಮತ್ತು ಕಥೆ ಕೇಳುವ ಗುಣಕ್ಕೆ ಮಾರು ಹೋಗಿದ್ದರಂತೆ ಪವನ್. ಹೀಗಾಗಿಯೇ ಒಮ್ಮೆ ಹೀಗೆ ಒಂದು ಕಥೆ ಬರೆದಿದ್ದೇನೆ ಎಂದಿದ್ದರಂತೆ. ತೆಗೆದುಕೊಂಡು ಬನ್ನಿ, ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರಂತೆ ಪುನೀತ್.

    ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಥೆ ಒಪ್ಪಿಸಲು ಕಷ್ಟ ಎನ್ನುತ್ತಾರೆ. ನನಗೋ ಕಥೆ ಹೇಳೋಕೆ ಬರಲ್ಲ. ಕಂಪ್ಲೀಟ್‌ ಸ್ಕ್ರಿಪ್ಟ್ ಬರೆದು ಕೊಡುತ್ತೇನೆ. ಅದನ್ನು ಓದಬೇಕು. ಕೆಲವರು ಓದುವುದಿಲ್ಲ ಎಂದೂ ಹೇಳಿದ್ದಾರೆ ಎಂದಿರುವ ಪವನ್‌, ನಂತರ ಕಥೆಯನ್ನು ಮೇಲ್ ಮಾಡಿದರಂತೆ.

    ಎರಡು ದಿನದ ನಂತರ ರಿಯಾಕ್ಷನ್ ಬಂತು. ಬ್ರಿಲಿಯಂಟ್ ಸ್ಕ್ರಿಪ್ಟ್‌ ಮಾಡಿದ್ದೀರಾ, ಇದನ್ನು ನಾನು ಮಾಡುತ್ತೇನೆ ಎಂದರು. ಜತೆಗೆ ನೀವೇನು ಬರೆದುಕೊಂಡಿದ್ದೀರೋ ಅಷ್ಟನ್ನೂ ಡಿಟೇಲ್‌ ಆಗಿ ತೆರೆಮೇಲೆ ತರಬೇಕು ಎಂದು ಹೇಳಿದರು. ಕಥೆಯನ್ನು ನಂತರ ವಿಜಯ್‌ ಕಿರಗಂದೂರು ಕೇಳಿದರು. ನಿರ್ಮಾಣ ಮಾಡೋಕೆ ಮುಂದೆ ಬಂದರು ಎನ್ನುವ ಪವನ್, ಇದು ಯಾವ ಜಾನರ್ ಸಿನಿಮಾ ಎಂದರೆ, ಕಂಟೆಂಟ್ ಇರೋ ಸಿನಿಮಾ ಎನ್ನುತ್ತಾರೆ.

    ಇನ್ನೂ ಚಿತ್ರಕ್ಕೆ ಟೈಟಲ್ ಇಟ್ಟಿಲ್ಲ. ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎನ್ನುವ ಪವನ್ ಅವರಿಗೆ ಜುಲೈನಲ್ಲಿ ಶೂಟಿಂಗ್ ಶುರು ಮಾಡೋ ಪ್ಲಾನ್ ಇದೆ.

     

    ಪವನ್ ಅವರು ತುಂಬಾ ವಿಶಿಷ್ಟ ಸಬ್ಜೆಕ್ಟ್ಗಳನ್ನ ತೆರೆಮೇಲೆ ತರ್ತಾರೆ. ಅವರ ಜೊತೆ ಸುಮಾರು ಸಾರಿ ಚರ್ಚೆ ಮಾಡಿದ್ದೇನೆ. ಈ ಕಥೆ ಇಷ್ಟವಾಯ್ತು. ನಿರ್ಮಾಪಕರಿಗೂ ಇಷ್ಟವಾಗಿದೆ. ಜೇಮ್ಸ್ ಮುಗಿದ ತಕ್ಷಣ ಪವನ್ ಸಿನಿಮಾ ಶುರುವಾಗುತ್ತೆ ಎಂದಿದ್ದಾರೆ ಪುನೀತ್. ಯಾವ ಜಾನರ್ ಕಥೆ ಅನ್ನೋ ಪ್ರಶ್ನೆಗೆ ಪುನೀತ್ ಅವರದ್ದು ಒಂದೇ ಉತ್ತರ. ನಂಗೆ ಜಾನರ್ ಗೊತ್ತಿಲ್ಲ. ಸಿನಿಮಾ ಅನ್ನೋದಷ್ಟೇ ಗೊತ್ತು.

  • ಪುನೀತ್ + ಹೊಂಬಾಳೆ + ಲೂಸಿಯಾ ಪವನ್ = ?

    ಪುನೀತ್ + ಹೊಂಬಾಳೆ + ಲೂಸಿಯಾ ಪವನ್ = ?

    ಯುವರತ್ನ ಚಿತ್ರಕ್ಕೆ ಸಿಕ್ಕಿರುವ ಮೆಚ್ಚುಗೆಯಿಂದ ಖುಷಿಯಲ್ಲಿರೋ ಪುನೀತ್ ರಾಜ್‍ಕುಮಾರ್ ಮತ್ತು ಹೊಂಬಾಳೆ ಫಿಲಂಸ್ ಹೊಸದೊಂದು ಸಿನಿಮಾ ಘೋಷಿಸಿದೆ. ಈ ಹೊಸ ಚಿತ್ರದಲ್ಲಿ ಪುನೀತ್ ಅವರೇ ಹೀರೋ. ಹೊಂಬಾಳೆಯವರದ್ದೇ ಪ್ರೊಡಕ್ಷನ್. ಡೈರೆಕ್ಷನ್ ಹೊಣೆ ಲೂಸಿಯಾ ಪವನ್ ಅವರದ್ದು.

    ಲೂಸಿಯಾ, ಯು-ಟರ್ನ್ ನಂತಾ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನೀಡಿದ ಪವನ್, ಹೊಸ ಬಗೆಯ ಚಿತ್ರಗಳ ಹುಡುಕಾಟದಲ್ಲಿ ಎತ್ತಿದ ಕೈ. ಸದ್ಯಕ್ಕೆ ಪುನೀತ್ ಭರ್ಜರಿ ಚೇತನ್ ಅವರ ಜೇಮ್ಸ್‍ನಲ್ಲಿ ಬ್ಯುಸಿ. ಅದು ಮುಗಿದ ಕೂಡಲೇ ದಿನಕರ್ ತೂಗುದೀಪ್ ಅವರ ಸಿನಿಮಾ ಇದೆ. ಆ ಎರಡೂ ಪ್ರಾಜೆಕ್ಟ್ ಮುಗಿದ ಮೇಲೆ ವಿಜಯ್ ಕಿರಗಂದೂರು ಜೊತೆಯಾಗ್ತಾರಾ..? ಅಥವಾ ಎರಡೆರಡು ಪ್ರಾಜೆಕ್ಟ್‍ಗಳನ್ನು ಒಟ್ಟಿಗೇ ಶುರು ಮಾಡಿಕೊಳ್ತಾರಾ..? ಸದ್ಯಕ್ಕೆ ಉತ್ತರವಿಲ್ಲ.

    ಅತ್ತ ಪವನ್ ಕೂಡಾ ತೆಲುಗಿನ ಕುಡಿ ಎಡಮೈತೆ ವೆಬ್ ಸಿರೀಸ್‍ನಲ್ಲಿ ಬ್ಯುಸಿಯಿದ್ದಾರೆ. ಇತ್ತ ವಿಜಯ್ ಕಿರಗಂದೂರು ಕೂಡಾ ಯುವರತ್ನದ ಕೆಲಸ ಮುಗಿಸಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

  • ಬಾಹುಬಲಿಗೆ ಆದ ಗತಿಯೇ ಕೆಜಿಎಫ್ ಚಿತ್ರಕ್ಕೂ ಆಗುತ್ತಾ..?

    kgf to premiere on tv soon

    ಕೆಜಿಎಫ್ ಇನ್ನೂ ಥಿಯೇಟರುಗಳಲ್ಲಿ ಓಡುತ್ತಿದೆ. ವೀಕೆಂಡ್ ಹೌಸ್‍ಫುಲ್ ಆಗುತ್ತಿದೆ. ಹೀಗಿರುವಾಗಲೇ.. ಇನ್ನೂ 50 ದಿನ ಪೂರೈಸುವ ಮುನ್ನವೇ ಚಿತ್ರ ಟಿವಿಯಲ್ಲಿ ಪ್ರಸಾರವಾಗೋಕೆ ರೆಡಿಯಾಗಿಬಿಟ್ಟಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಸೋನಿ ಮ್ಯಾಕ್ಸ್‍ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಕೆಜಿಎಫ್ ಪ್ರಸಾರದ ಪ್ರೋಮೋ ಹೊರಬಿಟ್ಟಿದೆ ಸೋನಿ ಮ್ಯಾಕ್ಸ್.

    ಈ ಹಿಂದೆ ಬಾಹುಬಲಿ ಸಿನಿಮಾವನ್ನೂ ಹೀಗೆಯೇ ಮಾಡಿತ್ತು ಹಿಂದಿ ಚಾನೆಲ್. ಚಿತ್ರ ಥಿಯೇಟಿನಲ್ಲಿರುವಾಗಲೇ ಟಿವಿಯಲ್ಲಿ ಪ್ರಸಾರ ಮಾಡಿತ್ತು. ಅದು ಚಿತ್ರದ ಬಾಕ್ಸಾಫೀಸ್‍ಗೂ ಹೊಡೆತ ಕೊಟ್ಟಿತ್ತು. ಈಗ ಅದೇ ರೀತಿಯಲ್ಲಿ ಕೆಜಿಎಫ್‍ಗೂ ಆಗುತ್ತಾ..? ಗೊತ್ತಿಲ್ಲ. ಪ್ರೋಮೋದಲ್ಲಿ ನಿರೀಕ್ಷಿಸಿ ಎಂದು ಪ್ರೋಮೋ ಬರುತ್ತಿದೆಯೇ ಹೊರತು, ಡೇಟ್ ಮತ್ತು ಟೈಂ ಹೇಳಿಲ್ಲ.

  • ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ

    ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ

    ನಟ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ದೇಗುಲ ದರ್ಶನ ಮುಂದುವರೆದಿದೆ. ಇಬ್ಬರೂ ಕಟೀಲು ದುರ್ಗಾಪರಮೇಶ್ವರಿ ಹಾಗೂ ಉಡುಪಿಯ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ.

    ಯಶ್ ಮತ್ತು ವಿಜಯ್ ಕಿರಗಂದೂರು ಕಾಂಬಿನೇಷನ್`ನ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗಲಿದ್ದು, ಬಿಡುಗಡೆಗೆ ಮುನ್ನ ದೇವರ ಆಶೀರ್ವಾದ ಪಡೆಯುವುದು ವಿಜಯ್ ಅವರ ಪದ್ಧತಿ. ಆ ಪದ್ಧತಿಯೇ ಇಡೀ ಚಿತ್ರತಂಡ ದೇಗುಲ ಯಾತ್ರೆ ಕೈಗೊಳ್ಳುತ್ತದೆ. ಇದಿನ್ನೂ ಆರಂಭ.. ದೇಗುಲ ಯಾತ್ರೆ ಮುಗಿಸಿದ ನಂತರವೇ ಚಿತ್ರದ ಪ್ರಚಾರ ಆರಂಭಿಸಲಿದೆ ಕೆಜಿಎಫ್ ಟೀಂ.

  • ರಾಜ್ಯೋತ್ಸವಕ್ಕೆ ಕೆಜಿಎಫ್ ಮತ್ತೆ ರಿಲೀಸ್

    kgf rajyotsava special

    ಕೆಜಿಎಫ್ ಚಾಪ್ಟರ್ 1 ಸಿನಿಮಾ ಇದೇ ರಾಜ್ಯೋತ್ಸವಕ್ಕೆ ಮತ್ತೆ ಬಿಡುಗಡೆಯಾಗುತ್ತಿದೆ. 25 ರಿಂದ 30 ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಇದು ರಾಜ್ಯೋತ್ಸವ ಸ್ಪೆಷಲ್. ಊರ್ವಶಿ, ಕಾವೇರಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲೂ ಕೆಜಿಎಫ್ ಮತ್ತೆ ತೆರೆ ಕಾಣುತ್ತಿದೆ.

    ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 1, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತೆರೆ ಕಂಡಿತ್ತು. ಚಾಪ್ಟರ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.

  • ಸರಣ್ ಪಕ್ಕಾ.. ಆದರೆ ರಾಕಿಭಾಯ್ ಜೂನಿಯರ್ ಅಲ್ಲ

    saran shakthi in kgf

    ಕೆಜಿಎಫ್ 2ನಲ್ಲಿ ತಮಿಳು ನಟ  ಸರಣ್ ಶಕ್ತಿ ನಟಿಸುತ್ತಿದ್ದಾರೆ. ಅವರು ರಾಕಿಭಾಯ್ ಅವರ ಹದಿಹರೆಯದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಚಿತ್ರಲೋಕ ವರದಿ ಮಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಕೆಜಿಎಫ್-2 ಸಹನಿರ್ಮಾಪಕರೂ ಆಗಿರುವ ಕಾರ್ತಿಕ್ ಗೌಡ. ಚಿತ್ರಲೋಕದ ವರದಿಯನ್ನೇ ರೀ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಸರಣ್ ಶಕ್ತಿ ನಟಿಸುತ್ತಿರುವುದು ನಿಜ. ಆದರೆ, ರಾಕಿಭಾಯ್ ಜೂನಿಯರ್ ಪಾತ್ರದಲ್ಲಿ ಅಲ್ಲ ಎಂದಿದ್ದಾರೆ. ಸರಣ್ ಶಕ್ತಿ ಪಾತ್ರ ಏನು ಎಂಬ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಹೀರೋಯಿಸಂ, ಸಂಜಯ್ ದತ್, ರವೀನಾ ಟಂಡನ್ ಕಾಂಬಿನೇಷನ್, ವಿಜಯ್ ಕಿರಗಂದೂರು ನಿರ್ಮಾಣ.. ಹೀಗೆ ಭರ್ಜರಿ ಕಾಂಬಿನೇಷನ್ನುಗಳ ಕೆಜಿಎಫ್-2 ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ.

  • ಸಳಾ ಹೊಯ್.. ಹೊಯ್ಸಳ

    ಸಳಾ ಹೊಯ್.. ಹೊಯ್ಸಳ

    ಹೊಯ್ಸಳ. ಕರ್ನಾಟಕವನ್ನಾಳಿದ್ದ ಹೆಮ್ಮೆಯ ರಾಜ ವಂಶ. ಹೊಯ್ಸಳ ಚಕ್ರವರ್ತಿಯ ಚಕ್ರವರ್ತಿ. ಹುಲಿಯನ್ನು ಬರಿಗೈನಲ್ಲೇ ಕೊಂದ ಎನ್ನುವುದು ಹೊಯ್ಸಳನ ಬಗ್ಗೆ ಇರೋ ದಂತಕಥೆ. ಬೇಲೂರು, ಹಳೇಬೀಡು, ಸೋಮನಾಥಪುರ, ಶ್ರವಣ ಬೆಳಗೊಳ.. ಇವೆಲ್ಲ ಹೊಯ್ಸಳರ ಕಾಲದ ಕೊಡುಗೆಗಳು. ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ದೊರೆ ಬಿಟ್ಟಿದೇವ ವಿಷ್ಣುವರ್ಧನ. ಆದರೆ ಇದು ಆ ಕಥೆಯಲ್ಲ. ಹೊಯ್ಸಳ ಅನ್ನೋ ಸಿನಿಮಾ ಸೆಟ್ಟೇರಿದೆ.

    ಡಾಲಿ ಧನಂಜಯ್ ಹೀರೋ ಆಗಿರೋ ಚಿತ್ರ ಹೊಯ್ಸಳಕ್ಕೆ ವಿಜಯ್ ನಿರ್ದೇಶಕ. ಗೀತಾ ಚಿತ್ರದ ನಂತರ ವಿಜಯ್ ನಿರ್ದೇಶನ ಮಾಡುತ್ತಿರೋ ಚಿತ್ರ ಹೊಯ್ಸಳ. ಡಾಲಿಗೆ 25ನೇ ಸಿನಿಮಾ. ಪೊಲೀಸ್ ಆಧಿಕಾರಿಯಾಗಿ ನಟಿಸುತ್ತಿರೋ ಡಾಲಿಯ ಪಾತ್ರಕ್ಕೆ ರಿಯಲ್ ಪೊಲೀಸ್ ಅವರ ವೃತ್ತಿ ಬದುಕೇ ಸ್ಫೂರ್ತಿಯಂತೆ.

    ವಿಜಯ್ ಕಿರಗಂದೂರು ಅರ್ಪಿಸುತ್ತಿತೋ ಚಿತ್ರಕ್ಕೆ ಕೆಆರ್‍ಜಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಹೊಣೆ ಹೊತ್ತಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ನಿರ್ಮಾಣ ಮಾಡುತ್ತಿರೋ ಚಿತ್ರ ತಂಡದಲ್ಲಿ ಬಹುತೇಕ ರತ್ನನ್ ಪ್ರಪಂಚ ಟೀಂ ಇದೆ. ಬಡವ ರಾಸ್ಕಲ್ ನಂತರ ಡಾಲಿಗೆ ಹಿಟ್ ಜೋಡಿಯಾಗಿರೋ ಅಮೃತಾ ಅಯ್ಯಂಗಾರ್ ಈ ಚಿತ್ರಕ್ಕೆ ನಾಯಕಿ.