` umapathy, - chitraloka.com | Kannada Movie News, Reviews | Image

umapathy,

  • Who Will Compensate Ondalla Eradalla?

    ondalla eradalla

     The screening of the much expected movie Ondalla Eradalla was disrupted in a few places today. At least 25 shows of the film were cancelled causing a huge loss to the film producer. Many fans who had come to watch the film were disappointed. But who is to blame for this fiasco?

    The Movie's executive producer Dharshan speaking to Chitraloka said, "The problem is with Scrabble, the satellite telecast provider. The movie team had given them the content to be uploaded. They were given the information that the content has not been uploaded and it has failed. But their staff had not noticed this till today morning. In most of the theatres tickets was issued more than 70% occupancy was reported. 

    In the beginning Scrabble said it was not their mistake and now they say they will rectify it by today evening. We do not know what to do now."

     

  • ಆಂಜನೇಯನಾದ ಚಾಲೆಂಜಿಂಗ್ ಸ್ಟಾರ್

    roberrt's jai shri ram is winning hearts

    ರಾಮ್ ರಾಮ್ ರಾಮ್ ಜೈ ಜೈ ಶ್ರೀರಾಮ್ ರಾಮ್ ರಾಮ್ ರಾಮ್.. ಹಾಡು ಕಿವಿಗೆ ಕೇಳುತ್ತಿದ್ದರೆ.. ಪುಟ್ಟ ರಾಮನನ್ನು ಹೆಗಲ ಮೇಲೆ ಹೊತ್ತು ಕುಣಿಯುವ ಹನುಮ. ಅವನೇ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಇಂಥಾದ್ದೊಂದು ಪೌರಾಣಿಕ ಅವತಾರದಲ್ಲಿ..ಅದರಲ್ಲೂ ಹನುಮಂತನ ವೇಷದಲ್ಲಿ ಕಂಗೊಳಿಸಿದ್ದಾರೆ.

    ರಾಬರ್ಟ್ ಚಿತ್ರದ ಎನರ್ಜೆಟಿಕ್ ಗೀತೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ತರುಣ್ ಸುಧೀರ್. ಹೋಳಿ ಹುಣ್ಣಿಮೆಗಾಗಿ ರಿಲೀಸ್ ಆದ ಹಾಡಿಗೆ ದರ್ಶನ್ ಜೊತೆ ಹೆಜ್ಜೆ ಹಾಕಿರುವುದು ವಾನರ ಸೇನೆ. ನಾಗೇಂದ್ರ ಪ್ರಸಾದ್ ಹಾಡಿಗೆ ದಿವ್ಯ ಕುಮಾರ್ ಧ್ವನಿ ಕೊಟ್ಟಿದ್ದಾರೆ. ಉಮಾಪತಿ ನಿರ್ಮಾಣದ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದೆ.

  • ಇದೂ ರೆಕಾರ್ಡು..!!!

    ಇದೂ ರೆಕಾರ್ಡು..!!!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸತತ 5ನೇ ದಿನವೂ ಭರ್ಜರಿ  ಪ್ರದರ್ಶನ ಕಂಟಿನ್ಯೂ ಮಾಡಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗುರುವಾರ ಚಿತ್ರ ಬಿಡುಗಡೆ ಆಗಿದ್ದು, ಈಗಾಗಲೇ ಚಿತ್ರದ ಕಲೆಕ್ಷನ್ 60 ಕೋಟಿ ದಾಟಿದೆ ಅನ್ನೋ ಸುದ್ದಿ ಬಂದಿದೆ.

    ಕೇವಲ 4 ದಿನಕ್ಕೆ 50 ಕೋಟಿ ಕ್ಲಬ್ ಸೇರಿದ್ದು ರಾಬರ್ಟ್ ಸಾಧನೆ. 'ರಾಬರ್ಟ್' ಬಿಡುಗಡೆಯಾದ ಮೊದಲ ದಿನ  17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 3ನೇ ದಿನಕ್ಕೆ ಶನಿವಾರ 14.10 ಕೋಟಿ ರೂಪಾಯಿ ಕಲೆಕ್ಷನ್ ಆದ್ರೆ, 4ನೇ ದಿನ ಭಾನುವಾರ

    -15.68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 5ನೇ ದಿನದ ಲೆಕ್ಕ ಇನ್ನೂ ಸಿಗಬೇಕಿದೆ.

  • ಉಮಾಪತಿ ಕೊಲೆಗೆ ಸಂಚು : ಸುಂಕದಕಟ್ಟೆಯಲ್ಲಿ ಇನ್ನಿಬ್ಬರು ಅರೆಸ್ಟ್

    ಉಮಾಪತಿ ಕೊಲೆಗೆ ಸಂಚು : ಸುಂಕದಕಟ್ಟೆಯಲ್ಲಿ ಇನ್ನಿಬ್ಬರು ಅರೆಸ್ಟ್

    ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಉಮಾಪತಿ ಅವರ ಹತ್ಯೆ ಸಂಚಿನಲ್ಲಿ ಇನ್ನಿಬ್ಬರ ಬಂಧನವಾಗಿದೆ. 2020ರ ಡಿಸೆಂಬರ್‍ನಲ್ಲಿ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದು ಬಯಲಾಗಿತ್ತು. ಜಯನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುದರ್ಶನ್ 10ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಿದ್ದರು.

    ರಾತ್ರಿ ಗಸ್ತಿನಲ್ಲಿದ್ದ ಸುದರ್ಶನ್ ಮತ್ತವರ ತಂಡಕ್ಕೆ ಆಕಸ್ಮಿಕವಾಗಿ ಸಿಕ್ಕಿಬಿದ್ದ ಗ್ಯಾಂಗ್ ಅದು. ಈಗ ಇನ್ನಿಬ್ಬರ ಬಂಧನವಾಗಿದೆ. ಉಮಾಪತಿ ಹತ್ಯೆಗೆ ಬಾಂಬೆ ರವಿ ಸ್ಕೆಚ್ ಹಾಕಿದ್ದ.

    ತಲೆಮರೆಸಿಕೊಂಡಿದ್ದ ದರ್ಶನ್ ಅಲಿಯಾಸ್ ರಾಬರಿ ಮತ್ತು ಸಂಜು ಎಂಬುವವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರಿಬ್ಬರ ಬಂಧನವೂ ಸೇರಿ ಇದುವರೆಗೆ 17 ಆರೋಪಿಗಳ ಬಂಧನವಾದಂತಾಗಿದೆ.

  • ಜನ ಮೆಚ್ಚಿದ ಒಂದಲ್ಲಾ.. ಎರಡಲ್ಲಾ ಚಿತ್ರಕ್ಕೆ ಯುಎಫ್‍ಓ ಪ್ರಾಬ್ಲಂ

    ufo creates problem to ondalla eradalla

    ಒಂದಲ್ಲಾ.. ಎರಡಲ್ಲಾ... ಸಿನಿಮಾ ರಿಲೀಸ್ ಆಗಿದೆ. ಅದ್ಭುತ ಎನ್ನಿಸುವಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚಿತ್ರ ನೋಡಿದ ಪ್ರೇಕ್ಷಕರು, ವಿಮರ್ಶಕರು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದು ರಾಮಾ ರಾಮಾ ರೇ ಆಗುವ, ಅದನ್ನೂ ಮೀರಿಸುವ ಸುಳಿವು ನೀಡಿದೆ ಒಂದಲ್ಲಾ.. ಎರಡಲ್ಲಾ.. ಆದರೆ ಚಿತ್ರಕ್ಕೆ ಟೆಕ್ನಿಕಲ್ ಪ್ರಾಬ್ಲಂ. 

    ಚಿತ್ರವನ್ನು ಥಿಯೇಟರುಗಳಲ್ಲಿ ಪ್ರದರ್ಶನ ಮಾಡುವ ಯುಎಫ್‍ಓ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದಾಗಿ, ಚಿತ್ರದ ಸುಮಾರು 60 ಶೋಗಳು ರದ್ದಾಗಿವೆ. ಶಿವಮೊಗ್ಗ, ಮಣಿಪಾಲ್, ಮಂಗಳೂರು ಸೇರಿದಂತೆ ಹಲವಾರು ಕಡೆ ಚಿತ್ರ ಪ್ರದರ್ಶನ ಆಗಿಲ್ಲ.

    ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾಗೆ ಉಮಾಪತಿ ನಿರ್ಮಾಪಕರು. ಒಂದು ಹಸು ಹಾಗೂ ಒಬ್ಬ ಪುಟ್ಟ ಹುಡುಗನ ಮೂಲಕ, ವಿಭಿನ್ನ ಸಂದೇಶ ಇರುವ ಸಿನಿಮಾ ನೀಡಿರುವ ನಿರ್ದೇಶಕ, ನಿರ್ಮಾಪಕರು ಈಗ ಯುಎಫ್‍ಓ ಸಂಸ್ಥೆಯ ವಿರುದ್ಧ ಸಿಟ್ಟಾಗಿದ್ದಾರೆ.

  • ದಚ್ಚುಗೆ ಜಗಪತಿ ಬಾಬು ವಿಲನ್

    jagapathi babu in darshan's robert

    ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ ವಿಲನ್ ಯಾರು..? ಉತ್ತರ ಸಿಕ್ಕಿದೆ. ಸದ್ಯಕ್ಕೆ ಸೌಥ್ ಇಂಡಿಯಾ ಸಿನಿಮಾಗಳಲ್ಲಿ ಸೆನ್ಸೇಷನಲ್ ವಿಲನ್ ಆಗಿರುವ ಜಗಪತಿ ಬಾಬು, ರಾಬರ್ಟ್ ಚಿತ್ರದ ಖಳನಾಯಕ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ, ಅದ್ಧೂರಿಯಾಗಿರಲಿದೆ ಎನ್ನುವುದರ ಮೊದಲ ಸುಳಿವು ಇದು.

    ಜಗಪತಿ ಬಾಬು, ಕನ್ನಡಿಗರಿಗೆ ಹೊಸಬರೇನಲ್ಲ. ಈಗಾಗಲೇ ಸುದೀಪ್, ನಿಖಿಲ್ ಚಿತ್ರಗಳಲ್ಲಿ ನಟಿಸಿದ್ದವರೇ. ಇಷ್ಟೆಲ್ಲ ಆದ ಮೇಲೂ ಅದೊಂದು ಪ್ರಶ್ನೆ ಹಾಗೆಯೇ ಇದೆ. ಜಗಪತಿ ಬಾಬು, ಈ ಚಿತ್ರದಲ್ಲಿ ಖಳನಾಯಕರೋ.. ಪೋಷಕ ನಟರೋ.. ಉಮಾಪತಿ ನಿರ್ಮಾಣದ ಸಿನಿಮಾದ ಕುತೂಹಲ ಹೆಚ್ಚಿಸುತ್ತಿರುವುದಂತೂ ಸತ್ಯ. ಅಂದಹಾಗೆ.. ಹೀರೋಯಿನ್ ಯಾರು ಅನ್ನೋದನ್ನ ರಾಬರ್ಟ್ ಟೀಂ ಇನ್ನೂ ಹೇಳಿಲ್ಲ.

  • ನಿರ್ಮಾಪಕರು, ನಿರ್ದೇಶಕರನ್ನು ಹಿಂಗೆಲ್ಲ ಹೊಗಳಿಬಿಟ್ರು..!

    producer and director happy with ondalla eradalla movie

    ಹೊಗಳಿರುವುದು ನಿರ್ಮಾಪಕ ಉಮಾಪತಿ. ಹೊಗಳಿಸಿಕೊಂಡಿರುವುದು ನಿರ್ದೇಶಕ ಸತ್ಯಪ್ರಕಾಶ್. ಉಮಾಪತಿಯವರಿಗಾಗಿ ಸತ್ಯಪ್ರಕಾಶ್ ನಿರ್ದೇಶಿಸಿರುವ ಒಂದಲ್ಲಾ.. ಎರಡಲ್ಲಾ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

    ಒಂದಲ್ಲಾ.. ಎರಡಲ್ಲಾ.. ಸಿನಿಮಾ ಮಾಡೋಕೆ ಸತ್ಯಪ್ರಕಾಶ್ ಹಾಗೂ ಅವರಲ್ಲಿದ್ದ ಕಾನ್ಫಿಡೆನ್ಸ್ ಕಾರಣ. ಅವರಿಗೆ ಸಿನಿಮಾ ಮಾಡೋಕೆ ಯೆಸ್ ಎಂದಾಗ ನಾನು ಅವರ ರಾಮಾ ರಾಮಾ ರೇ ಸಿನಿಮಾ ನೋಡಿಯೇ ಇರಲಿಲ್ಲ. ನಾಲ್ಕೈದು ಸಿನಿಮಾ ಕದ್ದು, ಒಂದು ಸಿನಿಮಾ ಮಾಡುವ ನಿರ್ದೇಶಕರಿಗಿಂತ, ತಾನೇ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಜನ ಮೆಚ್ಚುವಂತಹ ಸಿನಿಮಾ ಮಾಡುವ ಸತ್ಯಪ್ರಕಾಶ್ ಅಂತಹವರಿಗೆ ಪ್ರೋತ್ಸಾಹ ಕೊಡಬೇಕು. ಅದು ನನಗೆ ಅತ್ಯಂತ ಸಂತೋಷ ಕೊಟ್ಟ ಸಂಗತಿ.

    ಇದು ಉಮಾಪತಿ, ಸತ್ಯಪ್ರಕಾಶ್ ಅವರನ್ನು ಹೊಗಳಿರುವ ರೀತಿ. ಇದು ಇಷ್ಟಕ್ಕೇ ನಿಲ್ಲಲ್ಲ. ಸತ್ಯಪ್ರಕಾಶ್ ತುಂಬಾ ಸ್ವಾಭಿಮಾನಿಯಂತೆ. ಈ ಸಿನಿಮಾವನ್ನು ನಾನು ಕೇವಲ ಆತ್ಮತೃಪ್ತಿಗೋಸ್ಕರ ಮಾಡುತ್ತಿದ್ದೇನೆ. ಸಿನಿಮಾದ ಸೋಲು, ಗೆಲುವು ನನಗೆ ಮುಖ್ಯವೇ ಅಲ್ಲ. ಮುಂದೆಯೂ ಕೂಡಾ ಸತ್ಯಪ್ರಕಾಶ್ ಜೊತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸದಿಂದ ಹೇಳ್ತಾರೆ ಉಮಾಪತಿ.

    ಚಿತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯದ ಸಂದೇಶವೂ ಇದೆ. ಅದನ್ನು ಮುಗ್ಧ ಮಗುವಿನ ಕಣ್ಣಿನಲ್ಲಿ ನೋಡುವ ಪ್ರಯತ್ನ ಚಿತ್ರದಲ್ಲಿದೆ ಅಂತಾರೆ ಉಮಾಪತಿ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ರಾಬರ್ಟ್ ಚಿತ್ರದ ಸೆಟ್‍ನಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ

    robert movie adapts rank student concept

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸೆಟ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಯುಪಿಎಸ್‍ಸಿ ರ್ಯಾಂಕ್ ಸ್ಟೂಡೆಂಟ್‍ಗಳ ಫಾರ್ಮುಲಾ ಅಳವಡಿಸಿಕೊಳ್ಳಲಾಗ್ತಿದೆ. ಇಷ್ಟಕ್ಕೂ ಏನದು ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ ಅಂದ್ಕೊಂಡ್ರಾ..?

    ನೀವೇ ನೋಡಿ.. ಇತ್ತೀಚೆಗೆ ಹಾಗೆ ರ್ಯಾಂಕ್ ಬಂದ ವಿದ್ಯಾರ್ಥಿಗಳೆಲ್ಲ ಹೇಳಿರೋದು ಬಹುತೇಕ ಒಂದೇ ವಿಷಯ. ಅವರು ಫೋನ್, ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಓದಿದವರು. ಹಲವರ ಈ ಯಶಸ್ಸಿನ ಗುಟ್ಟನ್ನೇ ತನ್ನ ಸೆಟ್ಟಲ್ಲಿ ಅಳವಡಿಸಿಕೊಳ್ಳೋಕೆ ಮುಂದಾಗಿದ್ದಾರೆ ನಿರ್ದೇಶಕ ತರುಣ್ ಸುಧೀರ್.

    ಅವರ ಈ ನಿರ್ಧಾರಕ್ಕೆ ಕಾರಣ ಇಷ್ಟೆ, ಸಿನಿಮಾ ಚೆನ್ನಾಗಿ ಬರಬೇಕು, ಕೆಲಸಗಳು ಬೇಗ ಬೇಗ ಸರಾಗವಾಗಿ ಆಗಬೇಕು, ಮಧ್ಯೆ ಮಧ್ಯೆ ಡೈವರ್ಷನ್‍ಗಳು ಇರಬಾರದು. ಇದ್ಯಾವುದೂ ಆಗಬಾರದು ಎಂದರೆ, ಸೆಟ್ಟಿನಲ್ಲಿದ್ದವರ ಬಳಿ ಮೊಬೈಲ್ ಇರಬಾರದು. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಚಿತ್ರದ ಶೂಟಿಂಗ್ ಸ್ಥಳದ ಫೋಟೋ, ವಿಡಿಯೋ ಲೀಕ್ ಆಗುವುದನ್ನೂ ತಪ್ಪಿಸಬಹುದು. ಹೀಗೆ ಹಲವು ಲೆಕ್ಕಾಚಾರ ಹಾಕಿಕೊಂಡೇ ನಿರ್ಧಾರಕ್ಕೆ ಬಂದಿದ್ದಾರೆ ತರುಣ್. ನಿರ್ದೇಶಕರೇ ಸಮಯದ ಉಳಿತಾಯಕ್ಕೆ, ಕೆಲಸದ ವೇಗಕ್ಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವಾಗ ನಿರ್ಮಾಪಕರು ಖುಷಿಯಾಗದೇ ಇರ್ತಾರಾ..? ಪ್ರೊಡ್ಯೂಸರ್ ಉಮಾಪತಿ ಫುಲ್ ಹ್ಯಾಪಿ.

  • ರಾಬರ್ಟ್‍ಗಾಗಿ ಅನ್ನ ಬಿಟ್ಟ ದರ್ಶನ್

    darshan on strict diet for robert

    ರಾಬರ್ಟ್ ಚಿತ್ರ ಶುರುವಾಗಿದೆ. ದರ್ಶನ್, ತರುಣ್ ಸುಧೀರ್, ಉಮಾಪತಿ ಕಾಂಬಿನೇಷನ್ನಿನ ಸಿನಿಮಾ ಇದು. ಒಂದೇ ಒಂದು ಪೋಸ್ಟರ್‍ನಿಂದ ಸಂಚಲನ ಸೃಷ್ಟಿಸಿದ್ದ ತರುಣ್, ಚಿತ್ರದ ಚಿತ್ರೀಕರಣಕ್ಕೆ ಭರ್ಜರಿಯಾಗಿ ರೆಡಿಯಾಗಿದ್ದಾರೆ.

    ಕಥೆ, ದರ್ಶನ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಎಂದಿರೋ ತರುಣ್, ಚಿತ್ರದ ಕಥೆ, ಚಿತ್ರಕಥೆಗಾಗಿ 2 ವರ್ಷ ಸಮಯ ತೆಗೆದುಕೊಂಡಿದ್ದಾರೆ. ದರ್ಶನ್ ಕೂಡಾ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದು, ಅದರ ಮೊದಲ ಹಂತವಾಗಿ ಅನ್ನವನ್ನು ತ್ಯಾಗ ಮಾಡಿದ್ದಾರೆ. ಫಿಟ್‍ನೆಸ್ ಮುಖ್ಯ.

    ಇನ್ನು ಚಿತ್ರಕ್ಕೆ ಹೀರೋಯಿನ್ ಐಶ್ವರ್ಯಾ ರೈ ಎಂಬ ಅಂತೆಕಂತೆಗಳನ್ನೆಲ್ಲ ಒಂದೇ ಏಟಿಗೆ ತಳ್ಳಿ ಹಾಕಿದೆ ಚಿತ್ರತಂಡ. 

  • ರಾಮಾ ರಾಮಾ ರೆ, ಹೆಬ್ಬುಲಿ ಮಿಲನ..!

    ass producer class director

    ರಾಮಾ ರಾಮಾ ರೇ ಎಂಬ ಕ್ಲಾಸಿಕ್ ಚಿತ್ರದ ಮೂಲಕ, ಪ್ರೇಕ್ಷಕರ ಮನಸು ಗೆದ್ದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾಗೆ ರೆಡಿಯಾಗಿದ್ದಾರೆ. ಅವರಿಗೆ ಜೊತೆಯಾಗಿರುವುದು ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ. ಕ್ಲಾಸ್ ಚಿತ್ರದ  ನಿರ್ದೇಶಕ ಹಾಗೂ ಮಾಸ್ ಚಿತ್ರದ ನಿರ್ಮಾಪಕ ಇಬ್ಬರೂ ಸೇರಿ ಮಾಡಲು ಹೊರಟಿರುವ ಸಿನಿಮಾದ ಕಥೆ, ಮಲೆನಾಡಿನದ್ದು. ಆ ಚಿತ್ರಕ್ಕೆ ಸತ್ಯಪ್ರಕಾಶ್‍ಗೆ 10 ವರ್ಷದ ಬಾಲಕ ಬೇಕಂತೆ.

    ಅಂತಹ ಹುಡುಗನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ ಸತ್ಯಪ್ರಕಾಶ್. ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲೇ ಹುಡುಕುತ್ತಿದ್ದಾರಂತೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿರುವ ಸತ್ಯಪ್ರಕಾಶ್, ಚಿತ್ರ ಜನವರಿಯಲ್ಲಿ ಶುರುವಾಗಬಹುದು ಎಂದಿದ್ದಾರೆ. ಚಿತ್ರದ ಟೈಟಲ್ ಇದೇ ವಾರ ಫೈನಲ್ ಆಗಲಿದೆಯಂತೆ.

  • ಹಂತಕರ ಟಾರ್ಗೆಟ್ ರಾಬರ್ಟ್ ನಿರ್ಮಾಪಕ ಆಗಿರಲಿಲ್ಲ.!

    robert-film-producer-was-not-the-target-inside-story

    ಬೆಂಗಳೂರು ನಗರ ಮತ್ತು ಗಾಂಧಿನಗರ ಎರಡನ್ನೂ ಬೆಚ್ಚಿ ಬೀಳಿಸಿದ್ದ ಘಟನೆಯ ಒಂದೊಂದೇ ಮಾಹಿತಿ ಹೊರಬರುತ್ತಿದ್ದಂತೆ ಕಥೆ ಬೇರೆಯದೇ ತಿರುವು ಪಡೆದುಕೊಳ್ಳುತ್ತಿದೆ. ಮುಂಜಾನೆ ಬೀಟಿನಲ್ಲಿದ್ದ ಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದ 7 ಜನ ಸುಪಾರಿ ಕಿಲ್ಲರ್‍ಗಳು ಭಯಾನಕ ಸಂಗತಿಗಳನ್ನೇ ಬಾಯಿ ಬಿಡುತ್ತಿದ್ದಾರೆ.

    ಮೊದಲಿಗೆ ಹಂತಕರ ಟಾರ್ಗೆಟ್ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎನ್ನಲಾಗಿತ್ತು. ಆದರೆ, ಈಗ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ಉಮಾಪತಿ ಶ್ರೀನಿವಾಸ್, ಹಂತಕರ ಲಿಸ್ಟಿನಲ್ಲೇ ಇರಲಿಲ್ಲ. ಬದಲಿಗೆ ಉಮಾಪತಿ ಅವರ ದೊಡ್ಡಪ್ಪನ ಮಗ ದೀಪಕ್ ಇದ್ದ. ಹಂತಕರಿಗೆ ಸುಪಾರಿ ಕೊಟ್ಟಿದ್ದವನು ಬಾಂಬೆ ರವಿ.

    ಆದರೆ ಬಾಂಬೆ ರವಿ, ಟಾರ್ಗೆಟ್ ಯಾರು ಅನ್ನೋದನ್ನ ಹೇಳದೆ ಗುಟ್ಟಾಗಿ ಇಟ್ಟಿದ್ದ. ಕೊನೆಯ ಕ್ಷಣದಲ್ಲಿ ಹಂತಕರಿಗೆ ತಮ್ಮ ಟಾರ್ಗೆಟ್ ಯಾರು ಅನ್ನೋದು ಗೊತ್ತಾಗಿತ್ತು. ಅರೆಸ್ಟ್ ಆಗಿದ್ದವರೂ ಕೂಡಾ ಪೊಲೀಸರನ್ನು ಕನ್‍ಫ್ಯೂಸ್ ಮಾಡಲೆಂದು ಉಮಾಪತಿ ಹೆಸರು ಹೇಳಿದ್ದರು. ಸದ್ಯಕ್ಕೆ ಬಾಂಬೆ ರವಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.

    ನಿರ್ಮಾಪಕ ಉಮಾಪತಿ ಪೊಲೀಸ್ ಕಮಿಷನರ್ ಕಮಲ್ ಪಂತ್‍ರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ನನಗೆ ಈ ಬಾಂಬೆ ರವಿ ಯಾರು ಅನ್ನೋದೇ ಗೊತ್ತಿಲ್ಲ. ಸುಖಾಸುಮ್ಮನೆ ನನ್ನ ಹೆಸರು ಪ್ರಕರಣದಲ್ಲಿ ಥಳುಕು ಹಾಕಿಕೊಂಡಿದೆ. ಎಲ್ಲಿಯೂ ನನ್ನ ಹೆಸರಿಲ್ಲ ಎಂದು ಕಮಿಷನರೇ ನನಗೆ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಉಮಾಪತಿ.

  • ಹೆಬ್ಬುಲಿ ನಿರ್ಮಾಪಕರ ಜೊತೆ ಅಪ್ಪು ಹೊಸ ಚಿತ್ರ - ಯಾವ ಕಥೆ ಇಷ್ಟವಾಗುತ್ತೋ..?

    Hebbuli producer & puneeth team up in 2018

    ಎಸ್ಜಿಬಿ ಮೈನ್ಸ್ & ಕನ್ಸ್ಟ್ರಕ್ಷನ್ನ ಮಾಲೀಕ ಉಮಾಪತಿ, ಹೆಬ್ಬುಲಿ ಸಿನಿಮಾ ಮೂಲಕ ಖ್ಯಾತರಾದವರು. ಈಗ ಉಮಾಪತಿ ಪುನೀತ್ ಜೊತೆಗೊಂದು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಚಿತ್ರ ಸೆಟ್ಟೇರೋದು 2018ರಲ್ಲಿ. ಪುನೀತ್ಗೆ ಈಗ ಮೂವರು ನಿರ್ದೇಶಕರು

    ಕಥೆ ಹೇಳುತ್ತಿದ್ದಾರಂತೆ. ಆ ಮೂವರಲ್ಲಿ ಯಾರ ಕಥೆ ಇಷ್ಟವಾಗುತ್ತೋ, ಅದು ಸಿನಿಮಾ ಆಗಲಿದೆ. ಆ ಚಿತ್ರದಲ್ಲಿ ಪುನೀತ್, ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ಲೀಕ್ ಆಗಿದೆ. ಸದ್ಯಕ್ಕೆ ಆಂಜನಿಪುತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ

    ಪುನೀತ್ ರಾಜ್ಕುಮಾರ್, ನಂತರ ಇನ್ನೆರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಆ ಎರಡೂ ಚಿತ್ರಗಳು ಮುಗಿದ ನಂತರ, 3ನೇ ಸಿನಿಮಾ ಹೆಬ್ಬುಲಿ ನಿರ್ಮಾಪಕರ ಪಾಲಿಗೆ ದಕ್ಕಿದೆ.

     

     

     

  • ಹೆಬ್ಬುಲಿ ನಿರ್ಮಾಪಕರಿಂದ ಒಂದಲ್ಲಾ..ಎರಡಲ್ಲಾ..

    hebbuli and rama rama rey team up

    ಹೆಬ್ಬುಲಿ. ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಆ ಚಿತ್ರದ ನಿರ್ಮಾಪಕರು ಉಮಾಪತಿ. ರಾಮಾ ರಾಮಾ ರೇ.. ಅದ್ಭುತ ಸಂದೇಶ ಇದ್ದ ವಿಭಿನ್ನ ಚಿತ್ರ, ಬಾಕ್ಸಾಫೀಸ್‍ನಲ್ಲೂ ಸದ್ದು ಮಾಡಿತ್ತು. ಆ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್. ಈಗ ಅವರಿಬ್ಬರೂ ಜೊತೆಯಾಗಿದ್ದಾರೆ. ಒಂದಲ್ಲಾ.. ಎರಡಲ್ಲಾ..

    umapathi_saryaprakash_team.jpgಒಂದಲ್ಲಾ.. ಎರಡಲ್ಲಾ.. ಅನ್ನೋದು ಚಿತ್ರದ ಟೈಟಲ್. ಗೊಂದಲ ಬೇಡ. ಚಿತ್ರದ ಮುಖ್ಯ ಪಾತ್ರಧಾರಿ 8ರಿಂದ 12 ವರ್ಷದ ಹುಡುಗ. ಆಡಿಷನ್ ಮೂಲಕವೇ ಆಯ್ಕೆ ನಡೆದಿದೆ. ಉಳಿದಂತೆ ಇಡೀ ಸಿನಿಮಾದಲ್ಲಿ ರಂಗಭೂಮಿ ಕಲಾವಿದರೇ ಇರಲಿದ್ದಾರೆ. ಅಂದಹಾಗೆ ಈ ಚಿತ್ರದ ನಾಯಕ ಯಾರು..? ನಾಯಕಿ ಯಾರು ಎಂದೆಲ್ಲ ಕೇಳೋಕೇ ಬರಬೇಡಿ. ಅಂತಹ ಕಲ್ಪನೆಯೇ ಇಲ್ಲಿಲ್ಲ. ಚಿತ್ರದ ಕಥೆಯೇ ಚಿತ್ರದ ಹೀರೋ.

    Related Articles :-

    Satyaprakash To Do A Film For Umapathi