` arjun sarja - chitraloka.com | Kannada Movie News, Reviews | Image

arjun sarja

  • ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಕೇಸ್ : ಆಕ್ಷೇಪಣೆ ಸಲ್ಲಿಸಲೇ ಇಲ್ಲ ಶೃತಿ ಹರಿಹರನ್

    ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಕೇಸ್ : ಆಕ್ಷೇಪಣೆ ಸಲ್ಲಿಸಲೇ ಇಲ್ಲ ಶೃತಿ ಹರಿಹರನ್

    ಕನ್ನಡ ಚಿತ್ರರಂಗದಲ್ಲಿ ಸಂಚಲನ, ತಲ್ಲಣ ಎಲ್ಲವನ್ನೂ ಸೃಷ್ಟಿಸಿದ್ದ ಶೃತಿ ಹರಿಹರನ್ ಆರೋಪ ಈಗ ತಣ್ಣಗಾಗಿದೆ. ಅಧಿಕೃತವಾಗಿ. ಅರ್ಜುನ್ ಸರ್ಜಾ ನನ್ನನ್ನು ರೂಮಿಗೆ ಕರೆದಿದ್ದರು. ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕಿರುಕುಳ ನೀಡಿದ್ದರು. ನಿನ್ನನ್ನೇ ನನ್ನ ರೂಮಿಗೆ ಬರುವಂತೆ ಮಾಡುತ್ತೇನೆ ಎಂದಿದ್ದರು ಎಂದು ಶೃತಿ ಹರಿಹರನ್ ಆರೋಪ ಮಾಡಿದ್ದರು. ನಂತರ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.

    ಅರ್ಜುನ್ ಸರ್ಜಾ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸ್ಟಾರ್ ನಟ. ಹಿಂದಿ, ಮಲಯಾಳಂನಲ್ಲೂ ಖ್ಯಾತ ನಟ. ಹೀಗಾಗಿ ಸಹಜವಾಗಿಯೇ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಪ್ರಕರಣ ಫಿಲಂ ಚೇಂಬರ್ ಮೆಟ್ಟಿಲೇರಿ ಅಂಬರೀಷ್ ನೇತೃತ್ವದಲ್ಲಿ ಸಂಧಾನದ ಪ್ರಕ್ರಿಯೆಯೂ ನಡೆದಿತ್ತು. ವಿವಾದವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುತ್ತೇನೆ. ನನ್ನ ಮೇಲಿನ ಕಳಂಕವನ್ನು ಕೋರ್ಟಿನಲ್ಲೇ ಎದುರಿಸುತ್ತೇನೆ ಎಂದಿದ್ದರು ಅರ್ಜುನ್ ಸರ್ಜಾ. ಇತ್ತೀಚೆಗೆ ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆ, ವಿಚಾರಣೆ ವೇಳೆ ಶೃತಿ ಹರಿಹರನ್ ತಮ್ಮ ಆರೋಪಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸುವಲ್ಲಿ ವಿಫಲರಾಗಿದ್ದರು. ಬಿ ರಿಪೋರ್ಟ್‍ನ್ನು ಕೋರ್ಟಿಗೆ ಸಲ್ಲಿಸಿದ ನಂತರ ಕೋರ್ಟಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಲಾಗಿತ್ತು.

    ಕೋರ್ಟ್ ನೀಡಿದ್ದ ಕಾಲಾವಕಾಶವೂ ಮುಗಿದು ಶೃತಿ ಹರಿಹರನ್ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅರ್ಜುನ್ ಸರ್ಜಾ ನ್ಯಾಯಾಲಯದಲ್ಲಿಯೇ ಕಳಂಕ ಮುಕ್ತರಾಗಿದ್ದಾರೆ.

  • ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ..? - ಜಗ್ಗೇಶ್

    Jaggesh, Arjun Sarja Image

    ಮೀಟೂ ಅಭಿಯಾನ, ಅರ್ಜುನ್ ಸರ್ಜಾ ವಿರುದ್ಧದ ಶೃತಿ ಹರಿಹರನ್ ಆರೋಪಗಳಲ್ಲಿ ಜಗ್ಗೇಶ್ ನಿಂತಿರುವುದು ಅರ್ಜುನ್ ಸರ್ಜಾ ಪರ. ಶೃತಿ ಹರಿಹರನ್, ಅರ್ಜುನ್ ಸರ್ಜಾ ಅವರ 34 ವರ್ಷಗಳ ವೃತ್ತಿ ಜೀವನವನ್ನ ಒಂದೇ ಮಾತಿನಲ್ಲಿ ಹಾಳು ಮಾಡಿದ್ದಾರೆ. ನಾನು ನೋಡಿರುವಂತೆ ಅರ್ಜುನ್, ರಾಜ್, ವಿಷ್ಣು ಅವಂತೆಯೇ ಸುಸಂಸ್ಕøತ ವ್ಯಕ್ತಿ. ಏಕವಚನದಲ್ಲಿ ಕೂಡಾ ಮಾತನಾಡಿಸುವವರಲ್ಲ. ಅಂತಹವರ ವಿರುದ್ಧ ಶೃತಿ ಆರೋಪ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ತೊಂದರೆಯಾಗಿದ್ದರೆ, ಆ ದಿನವೇ ಪ್ರಶ್ನಿಸಬಹುದಿತ್ತು. ವಿಷಯ ಬಹಿರಂಗಪಡಿಸಬೇಕಿತ್ತು. ಆಗ ಏನನ್ನೂ ಮಾಡದೆ, ಈಗ ನನಗೆ ಹಂಗಾಯ್ತು.. ಹಿಂಗಾಯ್ತು.. ಎಂದರೆ ಹೇಗೆ ಎಂದಿದ್ದಾರೆ ಜಗ್ಗೇಶ್. 

    ಅರ್ಜುನ್ ಸರ್ಜಾ ಕ್ಷಮೆ ಕೇಳಬೇಕಿತ್ತು ಎಂದು ಪ್ರಕಾಶ್ ರೈ ಹೇಳಿರುವ ಮಾತಿಗೆ ಜಗ್ಗೇಶ್ ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

     

  • ಅರ್ಜುನ್ ಸರ್ಜಾಗೆ ಬಿ. ಸರೋಜಾದೇವಿ ಬೆಂಬಲ 

    b saroja devi supports arjun sarja

    ಶೃತಿ ಹರಿಹರನ್‍ರಿಂದ ಅರ್ಜುನ್ ಸರ್ಜಾ ಮೇಲೆ ಬಂದ ಆರೋಪ ಚಿತ್ರರಂಗವನ್ನು ಬಎಚ್ಚಿ ಬೀಳಿಸಿದೆ. ಪರ ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಶೃತಿ ಹರಿಹರನ್ ಬೆಂಬಲಕ್ಕೆ ಕನ್ನಡ ಅಷ್ಟೇ ಅಲ್ಲ, ಬೇರೆ ಚಿತ್ರರಂಗಗಳ ಹಿರಿಯ ಕಲಾವಿದರೆಲ್ಲ ನಿಂತಿದ್ದಾರೆ. ಅದರಲ್ಲೂ ಹಿರಿಯ ನಟಿ ಬಿ.ಸರೋಜಾದೇವಿ. ಅರ್ಜುನ್ ಸರ್ಜಾರನ್ನು ಬಾಲ್ಯದಿಂದಲೂ ನೋಡಿರುವ ಸರೋಜಾದೇವಿ, ಅವರೊಂದಿಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿ.ಸರೋಜಾದೇವಿ ಹೇಳುವುದು ಇಷ್ಟು.

    ನಾನು ಅರ್ಜುನ್ ಮತ್ತು ಅವರ ಕುಟುಂಬವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅದೊಂದು ಸಂಪ್ರದಾಯಸ್ಥ, ಗೌರವಯುತ ಕುಟುಂಬ. ಅರ್ಜುನ್‍ನ್ನೂ ಹತ್ತಿರದಿಂದ ನೋಡಿದವಳು ನಾನು. ಅವನು ಚಿಕ್ಕ ವಯಸ್ಸಿನಲ್ಲೇ ಮಹಿಳೆಯರೊಂದಿಗೆ ತುಂಬಾ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದವನು. ಈಗ.. ಈ ವಯಸ್ಸಿನಲ್ಲಿ ಈ ರೀತಿ ಮಾಡುತ್ತಾನೆ ಎಂದು ನಂಬೋಕೆ ನಾನು ಸಿದ್ಧಳಿಲ್ಲ.

  • ಅರ್ಜುನ್ ಸರ್ಜಾಗೆ ಮಕ್ಕಳಿಂದ ಪುಣ್ಯಕೋಟಿ ಕಾಣಿಕೆ

    arjun sarja gets best birthday gift

    ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಅಪ್ಪ, ಅಮ್ಮ ಉಡುಗೊರೆ ಕೊಡುವುದು ಸಾಮಾನ್ಯ. ಮಕ್ಕಳೂ ಅಪ್ಪನಿಗೆ ಗಿಫ್ಟ್ ಕೊಡೋದೂ ಕಾಮನ್. ಆದರೆ, ಅರ್ಜುನ್ ಸರ್ಜಾಗೆ ಸಿಕ್ಕಿರುವ ಉಡುಗೊರೆ ಮಾತ್ರ ವಿಶೇಷಗಳಲ್ಲಿಯೇ ವಿಶೇಷ. ಸರ್ಜಾ ಪುತ್ರಿಯರು ತಮ್ಮ ಅಪ್ಪನಿಗೆ ಹಸುವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಒಂದು ಸ್ಪೆಷಲ್ ಗಿಫ್ಟ್ ಕೊಡಬೇಕು. ಅಪ್ಪ ಥ್ರಿಲ್ಲಾಗಬೇಕು ಎಂದು ಯೋಚಿಸಿದ ಅರ್ಜುನ್ ಸರ್ಜಾ ಮಕ್ಕಳು ಗಿರ್ ತಳಿಯ ಹಸುವೊಂದನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. 

    `ನನ್ನ ಮಕ್ಕಳು ಇಂಥಾದ್ದೊಂದು ಕಾಣಿಕೆ ಕೊಡ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನ ಮಕ್ಕಳಿಗೆ ಹೇಗೆ ಥ್ಯಾಂಕ್ಸ್ ಹೇಳೋದೋ ಗೊತ್ತಾಗುತ್ತಿಲ್ಲ. ನಿಜಕ್ಕೂ ಪುಣ್ಯಕೋಟಿ ಕಾಮಧೇನುವನ್ನು ಉಡುಗೊರೆಯಾಗಿ ಪಡೆಯುವುದು ನನ್ನ ಅದೃಷ್ಟ' ಎಂದಿದ್ದಾರೆ ಅರ್ಜುನ್ ಸರ್ಜಾ.

    ಕಾಣಿಕೆಯಾಗಿ ಪಡೆದ ಹಸುವಿಗೆ ಪೂಜೆ ಮಾಡಿ ಮನೆಗೆ ಕರೆದುಕೊಂಡಿದ್ದಾರೆ.

  • ಅರ್ಜುನ್, ಚಿರಂಜೀವಿ & ಧ್ರುವ ಸರ್ಜಾ ಜೊತೆ ದರ್ಶನ್

    darshan and sarja's team up

    ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ. 

    darshan_sarjas_1prema_barah.jpgಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.

    ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.

  • ಆ 5 ಸಾಕ್ಷಿಗಳ ಕೈಲಿದೆ ಸರ್ಜಾ ಭವಿಷ್ಯ - ಯಾವ ಸೆಕ್ಷನ್ ಏನೇನು..?

    5 eye witnesses to decide arjun sarja's fate

    ಶೃತಿ ಹರಿಹರನ್ ದೂರು ಕೊಟ್ಟಿದ್ದಾರೆ. 4 ಘಟನೆಗಳನ್ನು ವಿವರವಾಗಿ ಹೇಳಿದ್ದಾರೆ. ಸ್ಥಳದ ಮಹಜರು ಕೂಡಾ ಆಗಿದೆ. ಅರ್ಜುನ್ ಸರ್ಜಾ ಅರೆಸ್ಟ್ ಆಗ್ತಾರಾ..? ಈಗಲೇ ಹೇಳೋಕೆ ಸಾಧ್ಯವಿಲ್ಲ. ಮಹಿಳಾ ಸಬ್‍ಇನ್ಸ್‍ಪೆಕ್ಟರ್ ರೇಣುಕಾ ಸಮ್ಮುಖದಲ್ಲಿ ಕೇಸ್ ದಾಖಲಾಗಿದೆ. ಅರೆಸ್ಟ್ ಮಾಡುತ್ತೇವೆ ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ. ವಿಚಾರಣೆ ಈಗಷ್ಟೇ ಆರಂಭವಾಗಿದೆ ಎಂದಿದ್ದಾರೆ ಡಿಸಿಪಿ ದೇವರಾಜ್.

    ಶೃತಿ ಹರಿಹರನ್ ದೂರಿನಲ್ಲಿರುವ ಮಾಹಿತಿ ಪ್ರಕಾರ, ಶೃತಿಯವರ ಸ್ಟಾಫ್ ಬೋರೇಗೌಡ, ಕಿರಣ್, ಅಸೋಸಿಯೇಟ್ ಡೈರೆಕ್ಟರುಗಳಾದ ಭರತ್ ನೀಲಕಂಠ, ಮೋನಿಕಾ ಹಾಗೂ ಶೃತಿ ಸ್ನೇಹಿತೆ ಯಶಸ್ವಿನಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಾರೆ. ಈ ಐದೂ ಜನ ಸರ್ಜಾ ವಿರುದ್ಧವಾಗಿ, ಪ್ರತ್ಯಕ್ಷದರ್ಶಿಗಳಾಗಿ ಹೇಳಿಕೆ ನೀಡಿದರೆ, ಸರ್ಜಾ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

    ಈ ಐವರೂ ಸಾಕ್ಷಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸರ್ಜಾ ವಿರುದ್ಧ 4 ಸೆಕ್ಷನ್‍ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

    ಐಪಿಸಿ 354 : ಮಹಿಳಾ ಗೌರವಕ್ಕೆ ಧಕ್ಕೆ. 3 ವರ್ಷಗಳ ಜೈಲು ಶಿಕ್ಷ ಮತ್ತು ದಂಡ ವಿಧಿಸಬಹುದು

    ಐಪಿಸಿ 354ಎ : ಲೈಂಗಿಕ ಕಿರುಕುಳ ನೀಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದು

    ಐಪಿಸಿ 506 : ಜೀವ ಬೆದರಿಕೆ ಹಾಕಿದ್ದಕ್ಕೆ 2 ವರ್ಷ ಜೈಲು ಮತ್ತು ದಂಡ ಎರಡನ್ನೂ ವಿಧಿಸಬಹುದು

    ಐಪಿಸಿ 509 : ಸನ್ನೆ ಮೂಲಕ ಲೈಂಗಿಕ ಕಿರುಕುಳ ನೀಡಿರುವುದು. ಇದರಲ್ಲಿ ಶಿಕ್ಷೆ, ದಂಡ ಪ್ರಮಾಣ, ನ್ಯಾಯಾಧೀಶರ ವಿವೇಚನೆಗೆ ಸೇರಿರುತ್ತೆ.

    ಇಷ್ಟೆಲ್ಲ ಆಗಿಯೂ, ದೂರು ಕೊಟ್ಟಿರುವಂತೆ ಈ ಸೆಕ್ಷನ್‍ಗಳಡಿಯಲ್ಲಿ ಕೇಸು ದಾಖಲಾಗಿದೆಯೇ ಹೊರತು, ಯಾವುದೂ ಸಾಬೀತಾಗಿಲ್ಲ. ಈ ಕುರಿತು ಪೊಲೀಸರು ವಿಚಾರಣೆ ಮಾಡಿ, ಚಾರ್ಜ್‍ಶೀಟ್ ಸಲ್ಲಿಸಬೇಕು. ಈ ವೇಳೆ ಸರ್ಜಾ ಅವರನ್ನು ಬಂಧಿಸಿಯೇ ವಿಚಾರಣೆ ನಡೆಸಬೇಕು ಎಂದು ಕಂಡುಬಂದರೆ ಕೋರ್ಟ್ ಅನುಮತಿ ಪಡೆಯಬೇಕಾಗಬಹುದು. ಅರೆಸ್ಟ್ ಮಾಡದೆಯೂ ವಿಚಾರಣೆ ನಡೆಸಬಹುದು. ಪೊಲೀಸರ ವಿಚಾರಣೆಗೆ ಅರ್ಜುನ್ ಸರ್ಜಾ ಸಂಪೂರ್ಣ ಸಹಕಾರ ನೀಡಿದರೆ ಅರೆಸ್ಟ್ ಮಾಡುವ ಸಾಧ್ಯತೆ ಇರುವುದಿಲ್ಲ.

  • ಆ ದಿನ ಸೆಟ್‍ನಲ್ಲಿ ನಡೆದಿದ್ದು ಏನು..? - ವಿಸ್ಮಯ ಟೀಂ ಹೇಳಿದ್ದು

    vismaya team image

    ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿದ್ದರೆ, ಅರ್ಜುನ್ ಸರ್ಜಾ ಪರ ಇಡೀ ವಿಸ್ಮಯ ಚಿತ್ರತಂಡವೇ ನಿಂತಿದೆ. ವಿಸ್ಮಯ ಚಿತ್ರದ ನಿರ್ಮಾಪಕ, ನಿರ್ದೇಶಕ, ಕ್ಯಾಮೆರಾಮನ್, ಕ್ಯಾರವಾನ್ ಉಸ್ತುವಾರಿ ಎಲ್ಲರೂ ಅರ್ಜುನ್ ಸರ್ಜಾ ಪರ ಹೇಳಿಕೆ ನೀಡಿದ್ದಾರೆ.

    ಅರುಣ್ ವೈದ್ಯನಾಥನ್, ವಿಸ್ಮಯ ಚಿತ್ರದ ನಿರ್ದೇಶಕ : ಶೃತಿ ಹರಿಹರನ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳುವವರೆಗೆ ನಮಗೆ ಏನೊಂದೂ ಗೊತ್ತಿರಲಿಲ್ಲ. ಶೃತಿ ಹೇಳಿಕೆ ನಮಗೂ ಶಾಕ್ ಆಗಿತ್ತು. ಚಿತ್ರೀಕರಣದ ವೇಳೆಯಲ್ಲಿ ಶೃತಿ ಹೇಳಿದಂತಹ ಯಾವುದೇ ಘಟನೆಗಳು ನಡೆದಿಲ್ಲ. ಅಷ್ಟೇ ಅಲ್ಲ, ಶೃತಿ ಎಲ್ಲ ರಿಹರ್ಸಲ್‍ಗಳಲ್ಲೂ ಪಾಲ್ಗೊಂಡಿದ್ದರು.

    ಉಮೇಶ್, ವಿಸ್ಮಯ ಚಿತ್ರದ ನಿರ್ಮಾಪಕ : ನನಗೆ ಗೊತ್ತಿರುವಂತೆ ಸಿನಿಮಾ ಚಿತ್ರೀಕರಣ ವೇಳೆ ಇಂತಹ ಯಾವುದೇ ಘಟನೆ ನಡೆದಿಲ್ಲ. ಶೃತಿ ಮಾಡ್ತಿರೋದೆಲ್ಲ ನಾಟಕ. ಶೃತಿ ಮಾಡಿರುವ ಆರೋಪಗಳಲ್ಲಿ ಒಂದೂ ಸತ್ಯವಿಲ್ಲ.

    ಅನಿರೀತ್, ವಿಸ್ಮಯ ಚಿತ್ರದ ಪ್ರೊಡಕ್ಷನ್ ಕಂಟ್ರೋಲರ್ : ಶೂಟಿಂಗ್ ನಡೆಯುತ್ತಿದ್ದ ಅಷ್ಟೂ ದಿನ ಶೃತಿ ಚೆನ್ನಾಗಿಯೇ ಇದ್ದರು. ಈಗ ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಇದು ಇಡೀ ವಿಸ್ಮಯ ಚಿತ್ರ ತಂಡಕ್ಕೇ ಮಾಡುತ್ತಿರುವ ಅವಮಾನ.

    ಅರವಿಂದ ಕೃಷ್ಣನ್, ವಿಸ್ಮಯ ಚಿತ್ರದ ಛಾಯಾಗ್ರಾಹಗ : ಶೃತಿ ಅವರ ಆರೋಪ ಕೇಳಿ ನನಗೆ ನಿಜಕ್ಕೂ ಶಾಕ್ ಆಯ್ತು. ಶೂಟಿಂಗ್ ವೇಳೆ ಇಡೀ ಟೀಂ ಪ್ರೊಫೆಷನಲ್ಲಾಗಿತ್ತು. ಜನ ತಪ್ಪಾಗಿ ಕಲ್ಪಿಸಿಕೊಳ್ಳೋದು ಬೇಡ. ಅಂತಹ ಯಾವುದೇ ಘಟನೆ ನಡೆದಿಲ್ಲ.

  • ಕ್ಷಮೆ ಕೇಳಿದ್ರೆ ಏನಾಗ್ತಿತ್ತು..? - ಪ್ರಕಾಶ್ ರೈ

    prakash rai arjun sarja image

    ಮೀಟೂ ಅಭಿಯಾನ, ಶೃತಿ ಹರಿಹರನ್ ಆರೋಪಗಳ ಕುರಿತಂತೆ ಬೆಂಬಲವಾಗಿ ನಿಂತಿದ್ದಾರೆ. ಶೃತಿ ಹರಿಹರನ್ ಅವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ ಎಂದಿರುವ ಪ್ರಕಾಶ್ ರೈ, ನಾನು ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ಕೆಲವು ಬಾರಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳಾಗಿರುತ್ತವೆ. ಗೊತ್ತಿದ್ದೋ.. ಗೊತ್ತಿಲ್ಲದೆಯೋ.. ಯಾವುದೋ ಒಂದು ಸ್ಪರ್ಶ ನಾಯಕಿಗೆ ಕೆಟ್ಟದ್ದು ಎನಿಸಿರಬಹುದು. ನಾಯಕನಿಗೂ ಅನ್ನಿಸಿರಬಹುದು. ಇದನ್ನು ಹೇಳಿದಾಗ.. ಹೌದೇ.. ಹಾಗಿದ್ದರೆ, ಅದು ಉದ್ದೇಶಪೂರ್ವಕವಾಗಿರಲಿಲ್ಲ.

    ನನಗೆ ಗೊತ್ತೂ ಆಗಲಿಲ್ಲ ಎನ್ನುವುದಕ್ಕೆ ಅಹಂಕಾರ ಯಾಕೆ ಅಡ್ಡಿಬರಬೇಕು ಎಂದಿದ್ದಾರೆ ಪ್ರಕಾಶ್ ರೈ.

  • ಚಿರಂಜೀವಿ ಸರ್ಜಾ V/S ಅರ್ಜುನ್ ಸರ್ಜಾ

    chiranjeevi sarja vs arjun sarja

    ಚಿರಂಜೀವಿ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಗಾಡ್‍ಫಾದರ್ ಅನ್ನೊದು ರಹಸ್ಯವೇನೂ ಅಲ್ಲ. ಮಾವ ಅರ್ಜುನ್ ಸರ್ಜಾ ಹಾಕಿದ ಗೆರೆಯನ್ನು ಚಿರಂಜೀವಿ ಸರ್ಜಾ ಆಗಲೀ, ಧ್ರುವ ಸರ್ಜಾ ಆಗಲೀ ಇದುವರೆಗೂ ದಾಟಿಲ್ಲ. ಮುಂದೆಯೂ ಅಂತಹ ಯಾವುದೇ ಸೂಚನೆಗಳಿಲ್ಲ. ಹೀಗಿದ್ದರೂ ಅರ್ಜುನ್ ಸರ್ಜಾ ವಿರುದ್ಧವೇ ಚಿರಂಜೀವಿ ಸರ್ಜಾ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ.

    ಚಿರಂಜೀವಿ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಪ್ರೇಮ ಬರಹ ಚಿತ್ರದ ಹೀರೋಯಿನ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ. ಅದು ಐಶ್ವರ್ಯಾ ಅವರ ಪ್ರಥಮ ಚಿತ್ರವೂ ಹೌದು.

    ಅದೇ ದಿನ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಕೂಡಾ ಬಿಡುಗಡೆಯಾಗುತ್ತಿದೆ. ಗುರು ದೇಶ್‍ಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿರಂಜೀವಿ ಸರ್ಜಾ, ಆ ದಿನ ಪೈಪೋಟಿ ನೀಡಬೇಕಿರುವುದು ತನ್ನ ಮಾವನ ನಿರ್ದೇಶನದ, ಮಾವನ ಮಗಳ ಚಿತ್ರಕ್ಕೆ. 

    ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆಗೆ ಬರುತ್ತಿರುವುದು ಸ್ಯಾಂಡಲ್‍ವುಡ್ ವಿಶೇಷ ಎಂದಷ್ಟೇ ಈಗ ಹೇಳೋಬಹುದು.

     

  • ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  

    ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.

    ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?

    ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.

    ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.

    ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.

  • ಪೇಜಾವರ ಶ್ರೀ, ವಿನಯ್ ಗುರೂಜಿ ಸಾನಿಧ್ಯದಲ್ಲಿ ಸರ್ಜಾರ ರಾಮಾಂಜನೇಯ ದೇಗುಲ ಉದ್ಘಾಟನೆ

    ಪೇಜಾವರ ಶ್ರೀ, ವಿನಯ್ ಗುರೂಜಿ ಸಾನಿಧ್ಯದಲ್ಲಿ ಸರ್ಜಾರ ರಾಮಾಂಜನೇಯ ದೇಗುಲ ಉದ್ಘಾಟನೆ

    ತಮಿಳುನಾಡಿನ ಚೆನ್ನೈ ಸಮೀಪದಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸಿರುವ ಶ್ರೀರಾಮಾಂಜನೇಯ ದೇಗುಲವನ್ನು ಉಡುಪಿಯ ಕೃಷ್ಣ ಮಠದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅವದೂತ ವಿನಯ್ ಗುರೂಜಿ ಸಾನಿಧ್ಯದಲ್ಲಿ ಉದ್ಘಾಟನೆಯಾಗಿದೆ.

    ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳು, ಈ ದೇವಸ್ಥಾನದ ಉದ್ಘಾಟನೆಗಾಗಿಯೇ ಬಂದು ಕುಂಭಾಭಿಷೇಕ ನೆರವೇರಿಸಿದರೆ, ಅವದೂತ ವಿನಯ್ ಗುರೂಜಿ ಈ ಕೈಂಕರ್ಯಕ್ಕೆ ಸಾಕ್ಷಿಯಾದರು.

    ಇದು ನನ್ನ ದಶಕದ ಕನಸು. ಈ ಸಂದರ್ಭಕ್ಕೆ ಸ್ವತಃ ಪೇಜಾವರ ಶ್ರೀಗಳು ಬರುತ್ತಾರೆ ಎಂದುಕೊಂಡಿರಲಿಲ್ಲ. ದೇವರು ಭಗವಂತನ ಸೇವೆಗೆ ಅವಕಾಶ ಕೊಟ್ಟಿದ್ದಾನೆ. ಮಾಡಿದ್ದೇನೆ ಅಷ್ಟೆ ಎಂದಿದ್ದಾರೆ ಅರ್ಜುನ್ ಸರ್ಜಾ.

  • ಪ್ರೇಮ ಬರಹದಲ್ಲಿ ವಿಜಯನಾರಸಿಂಹ ಗೀತೆ..!

    vijay narasimha's lyrics in prema baraha

    ಭಾದ್ರಪದ ಶುಕ್ಲದ ಚೌತಿಯಂದು../ ಚಂದಿರನ ನೋಡಿದರೆ ಅಪವಾದ ತಪ್ಪದು../ ಗಜಮುಖನೆ ಗಣಮುಖನೆ ನಿನಗೆ ವಂದನೆ.. /ಕಾಪಾಡು ಶ್ರೀಸತ್ಯನಾರಾಯಣ../ ಈ ದೇಹದಿಂದ ದೂರನಾದೆ ಏಕೆ ಆತ್ಮನೆ../ ಸಕಲ ಕಾರ್ಯಕಾರಣೆಗೆ ಸಾಷ್ಟಾಂಗ ವಂದನೆ../ ನೀ ನಡೆವ ದಾರಿಯಲ್ಲಿ ನಗೆ ಹೂವು ಬಾಡದಿರಲಿ../ ಪಂಚಮವೇದ ಪ್ರೇಮದ ನಾದ../ಬಾರೆ ಬಾರೆ ಚಂದದ ಚೆಲುವಿನ ತಾರೆ../ ವಿರಹಾ ನೂರು ನೂರು ತರಹ../ ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಪಾಲಿಗೆ../ ಭಾರತ ಭೂಶಿರ ಮಂದಿರ ಸುಂದರಿ../ ಆ ದೇವರೆ ನುಡಿದಾ ಮೊದಲ ನುಡಿ ಪ್ರೇಮ.. ಪ್ರೇಮ.. ಪ್ರೇಮವೆಂಬಾ ಹೊನ್ನುಡಿ/ ಈ ಸಂಭಾಷಣೆ.. ನಮ್ಮ ಈ ಪ್ರೇಮ ಸಂಭಾಷಣೆ../ ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ../ ಆಸೆಯ ಭಾವ ಒಲವಿನ ಜೀವ../ ನೋಡು ಬಾ ನೋಡು ಬಾ ನಮ್ಮೂರ../ ನೀನೇ ಸಾಕಿದಾ ಗಿಣಿ.. 

    ಒಂದಾ..ಎರಡಾ.. ವಿಜಯ ನಾರಸಿಂಹ ಬರೆದ ಎಲ್ಲ ಗೀತೆಗಳನ್ನೂ ಬಿಡಿ, ಅಮರಗೀತೆಗಳನ್ನಷ್ಟೇ ಹಿಡಿದು ಕುಳಿತರೆ ಪುಟಗಳು ತುಂಬಿ ಹೋಗುತ್ತವೆ. ಡಾ.ರಾಜ್ ಚಿತ್ರಗಳಲ್ಲಿ, ಪುಟ್ಟಣ್ಣ, ಸಿದ್ದಲಿಂಗಯ್ಯನವರ ಚಿತ್ರಗಳಲ್ಲಿ ವಿಜಯನಾರಸಿಂಹ ಹಾಡುಗಳು ಮುತ್ತುರತ್ನವಜ್ರಗಳಂತೆ ಕಂಗೊಳಿಸಿದ್ದವು. ಅವರು ನಿಧನರಾಗಿದ್ದು 2001ರಲ್ಲಿ. ಆ ಅದ್ಭುತ ಗೀತರಚನೆಕಾರನ ಹಾಡೊಂದು ಪ್ರೇಮಬರಹ ಚಿತ್ರದಲ್ಲಿದೆ. 

    ನಿಮಗೆಲ್ಲ ಗೊತ್ತಿರುವ ಹಾಗೆ, ಪ್ರೇಮಬರಹ, ಅರ್ಜುನ್ ಸರ್ಜಾ ಅವರ ಮಗಳ ಸಿನಿಮಾ. ಮಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಲಾಂಚ್ ಮಾಡುತ್ತಿರುವ ಅರ್ಜುನ್ ಸರ್ಜಾ ಅವರಿಗೆ, ಚಿತ್ರದಲ್ಲಿ ಆಂಜನೇಯನ ಮೇಲೊಂದು ಹಾಡು ಬೇಕಿತ್ತು. ಯಾರಿಂದ ಬರೆಸುವುದು ಎಂದು ಯೋಚಿಸಿದಾಗ, ಹಿಂದೆಂದೋ ವಿಜಯ ನಾರಸಿಂಹ ಅವರು ಬರೆದಿದ್ದ ಹಾಡು ನೆನಪಾಯಿತು. ಎರಡನೇ ಯೋಚನೆಯನ್ನೇ ಮಾಡದೆ, ಆ ಹಾಡನ್ನು ಸಂಗೀತಕ್ಕೆ ಕೊಟ್ಟರು. ಅರ್ಜುನ್ ಜನ್ಯಾ ಅದ್ಭುತ ಸಂಗೀತವನ್ನೂ ಸಂಯೋಜಿಸಿದರು.

    ಆ ಹಾಡು ಪ್ರೇಮ ಬರಹ ಚಿತ್ರದಲ್ಲಿ ಮುತ್ತುರತ್ನವಜ್ರದಂತೆ ಮಿನುಗಲಿದೆ ಅನ್ನೊದು ಅರ್ಜುನ್ ಸರ್ಜಾ ಭರವಸೆ. ಆ ಹಾಡನ್ನಷ್ಟೇ  ಅಲ್ಲ, ನೀವು ಪ್ರೇಮ ಬರಹ ಚಿತ್ರದಲ್ಲಿ ಪ್ರತಾಪ್ ಚಿತ್ರದಲ್ಲಿ ಅರ್ಜುನ್ ಸರ್ಜಾ-ಸುಧಾರಾಣಿ ಮೇಲೆ ಚಿತ್ರಿತವಾಗಿದ್ದ ಪ್ರೇಮ ಬರಹ ಕೋಟಿ ತರಹ ಹಾಡನ್ನೂ ಕೇಳಬಹುದು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

  • ಪ್ರೇಮ ಬರಹದಲ್ಲಿ ಸ್ಟಾರ್‍ಗಳ ಸಮ್ಮಿಲನ

    four stars in one frame

    ಪ್ರೇಮ ಬರಹ ಚಿತ್ರದಲ್ಲಿನ ಅತಿ ದೊಡ್ಡ ಸ್ಟಾರ್ ಯಾರು ಎಂದರೆ, ಅನುಮಾನವೇ ಇಲ್ಲದಂತೆ ಅದು ಅರ್ಜುನ್ ಸರ್ಜಾ ಎಂದು ಹೇಳಬಹುದು. ಚಿತ್ರದ ಕ್ಯಾಪ್ಟನ್ ಅಂದರೆ ನಿರ್ದೇಶಕರು ಅವರೇ. ಕಥೆ, ಚಿತ್ರಕಥೆಯೂ ಅವರದ್ದೇ. ಅವರ ಮಗಳೇ ಹೀರೋಯಿನ್. ಚಂದನ್ ಹೀರೋ. ಆದರೆ, ಇವರೆಲ್ಲರ ಹೊರತಾಗಿ ಇನ್ನೂ ಕೆಲವು ಹೀರೋಗಳಿದ್ದಾರೆ. 

    ಸರ್ಜಾ ಕುಟುಂಬದವರು ಆಂಜನೇಯನ ಭಕ್ತರು ಎನ್ನುವುದು ಇಡೀ ಚಿತ್ರರಂಗಕ್ಕೆ ಗೊತ್ತು. ಅಭಿಮಾನಿಗಳಿಗೂ ಗೊತ್ತು. ಚಿತ್ರದಲ್ಲಿ ಆಂಜನೇಯನ ಮೇಲೊಂದು ಹಾಡಿದೆ. ಅದೂ, ವಿಜಯ ನಾರಸಿಂಹ ಬರೆದಿದ್ದ ಗೀತೆ. ಆ ಹಾಡಿನಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕುಣಿದು ಕುಪ್ಪಳಿಸಿದ್ದಾರೆ. ಬಂಪರ್ ಎನ್ನುವಂತೆ ಹಾಡಿನಲ್ಲಿ ನಟ ದರ್ಶನ್ ಕೂಡಾ ಹೆಜ್ಜೆ ಹಾಕಿದ್ದಾರೆ. ಒಂದೇ ಹಾಡಿನಲ್ಲಿ ಚಿತ್ರರಸಿಕರಿಗೆ ನಾಲ್ವರು ಸ್ಟಾರ್‍ಗಳನ್ನು ನೋಡುವ ಭಾಗ್ಯ. ಇದೇ ವಾರ ತೆರೆಗೆ ಬರುತ್ತಿದೆ. ಎಂಜಾಯ್ ಮಾಡಿ.

    ಚಿತ್ರ ತಮಿಳಿನಲ್ಲೂ ಬರುತ್ತಿದ್ದು ಸೊಲ್ಲಿವಿಡವಾ ಅನ್ನೋ ಹೆಸರಿನಲ್ಲಿ ಬರುತ್ತಿದೆ.

     

  • ಫಿಲಂ ಚೇಂಬರ್, ಅಂಬರೀಷ್ ಮೀಟೂ ಸಂಧಾನ ವಿಫಲ

    me too meeting failed

    ಅರ್ಜುನ್ ಸರ್ಜಾ ವರ್ಸಸ್ ಶೃತಿ ಹರಿಹರನ್ ಮೀಟೂ ಆರೋಪ ಪ್ರತ್ಯಾರೋಪಗಳ ಕುರಿತಂತೆ ಫಿಲಂಚೇಂಬರ್‍ನಲ್ಲಿ ನಡೆದ 3 ತಾಸುಗಳ ಸುದೀರ್ಘ ಸಂಧಾನ ಸಭೆ ವಿಫಲಗೊಂಡಿದೆ. ಶೃತಿ ಹರಿಹರನ್ ಆಗಲೀ, ಅರ್ಜುನ್ ಸರ್ಜಾ ಆಗಲೀ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಂಬರೀಷ್ ಕೂಡಾ ವಿವಾದ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. 

    ಕೋರ್ಟ್‍ನಲ್ಲಿ ಕೇಸು ಹಾಕಿದ್ದೇನೆ. ಅಲ್ಲಿಯೇ ನೋಡಿಕೊಳ್ಳುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳಿದರೆ, ನಾನೂ ಅಲ್ಲಿಯೇ ನೋಡಿಕೊಳ್ತೇನೆ ಎಂದಿದ್ದಾರೆ ಶೃತಿ ಹರಿಹರನ್. ಚಿತ್ರೋದ್ಯಮದ ಗೌರವ, ಕಲಾವಿದರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಅಂಬರೀಷ್ ನೇತೃತ್ವದ ಸಮಿತಿ ವಿನಂತಿ ಮಾಡಿಕೊಂಡಿತು. ಆದರೆ, ಇಬ್ಬರೂ ಕೂಡಾ ತಮಗೆ ಅನ್ಯಾಯವಾಗಿದೆ. ನೋವಾಗಿದೆ. ಸಂಧಾನ ಸಾಧ್ಯವಿಲ್ಲ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದರು. ಈಗಾಗಿ ಸಭೆ ವಿಫಲಗೊಂಡಿತು.

    ಸಂಧಾನ ಸಭೆಯಲ್ಲಿ ಅಂಬರೀಷ್, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಚೇಂಬರ್‍ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಭಾಗವಹಿಸಿದ್ದರು.

  • ಮಗಳ ಪ್ರೇಮಕ್ಕೆ ಅಪ್ಪನದ್ದೇ ಡೈರೆಕ್ಷನ್..!

    father directs daughters prema baraha

    ಸಾಮಾನ್ಯವಾಗಿ ಮಕ್ಕಳ ಪ್ರೇಮಕ್ಕೆ ಅಪ್ಪ, ಅಮ್ಮಂದಿರು ವಿರೋಧ ವ್ಯಕ್ತಪಡಿಸೋದು ಸಹಜ. ಆದರೆ, ಇಲ್ಲಿ ಹಾಗಲ್ಲ. ಮಗಳು ಸರಿಯಾಗಿ ಲವ್ ಮಾಡ್ತಿಲ್ಲ ಅಂದ್ರೆ, ಅಪ್ಪನೇ ಸರಿಯಾಗಿ ಹೇಳಿಕೊಡಬೇಕು. ಪ್ರೀತಿ, ಪ್ರೇಮದ ವಿಚಾರದಲ್ಲಿ ಅಪ್ಪನೇ ಮಗಳಿಗೆ ಮಾರ್ಗದರ್ಶನ ಮಾಡಬೇಕು. ಮಗಳಿಗಷ್ಟೇ ಅಲ್ಲ, ಮಗಳನ್ನು ಪ್ರೀತಿಸುವ ಹುಡುಗನಿಗೂ ಈ ಹುಡುಗಿಯ ಅಪ್ಪನೇ ಗೈಡ್. ಹೇಗೆ ಲವ್ ಮಾಡಬೇಕು ಅನ್ನೋದನ್ನು ಆತನಿಗೂ ಹೇಳಿಕೊಡಬೇಕು.

    ಇದು ಸಿನಿಮಾ ಕಥೆಯಲ್ಲ. ಆದರೆ, ಸಿನಿಮಾಗಾಗಿ ವಾಸ್ತವದಲ್ಲಿ ನಡೆದ ಕಥೆ. ಚಿತ್ರ ಪ್ರೇಮಬರಹ. ಈ ಚಿತ್ರಕ್ಕೆ ಅಪ್ಪ ಅರ್ಜುನ್ ಸರ್ಜಾ ನಿರ್ದೇಶಕರಾದರೆ, ಮಗಳು ಐಶ್ವರ್ಯಾ ನಾಯಕಿ. ಅಪ್ಪ ನಿರ್ದೇಶಿಸಿ, ಮಗಳು ನಟಿಸಿರುವ ಪ್ರೇಮಬರಹ ಈ ವಾರ ತೆರೆಗೆ ಬರುತ್ತಿದೆ. 

     

     

  • ಮಧ್ಯರಾತ್ರಿ ದೂರು ನೀಡಿದ ಶೃತಿ ಹರಿಹರನ್

    sruthi hariharan files complaint at night

    ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಶೃತಿ ಹರಿಹರನ್, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ಮಧ್ಯರಾತ್ರಿ 12 ಗಂಟೆ ವೇಳೆ ದೂರು ಕೊಟ್ಟಿದ್ದಾರೆ.

    ಫಿಲಂ ಚೇಂಬರ್‍ನಲ್ಲಿ ಚಿನ್ನೇಗೌಡರು ಹಾಗೂ ಅಂಬರೀಷ್ ಅವರ ಜೊತೆ ಸಭೆ ನಡೆಯುವಾಗ, ಚೇಂಬರ್‍ನ ಹೊರಗೆ ಪ್ರಶಾಂತ್ ಸಂಬರಗಿ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ವಿರುದ್ಧ ಒಂದು ಧರ್ಮದವರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದವರನ್ನು ಸೇರಿಸಿ, ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಅವರ ಬಳಿ ನನ್ನ 3 ಫೇಸ್‍ಬುಕ್ ಅಕೌಂಟ್‍ಗಳ ಮಾಹಿತಿ ಇದೆಯಂತೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಮಾಧ್ಯಮಗಳ ಎದುರು ಶೃತಿ ಹರಿಹರನ್ ಅವರ ಈ ಆರೋಪದ ಹಿಂದೆ ಕ್ರೈಸ್ತ ಮಿಷನರಿಗಳು, ಅಮೆರಿಕ, ದುಬೈನ ಕೆಲವು ಹಿತಾಸಕ್ತಿಗಳು ಹಾಗೂ ಇಬ್ಬರು ಹಿರಿಯ ನಟರ ಕೈವಾಡವಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಇದೇ ವೇಳೆ ಅರ್ಜುನ್ ಸರ್ಜಾರ ಕೆಲವು ಅಭಿಮಾನಿಗಳು ಚೇಂಬರ್ ಎದುರು ಆಗಮಿಸಿ ಶೃತಿ ವಿರುದ್ಧ ಘೋಷಣೆ ಕೂಗಿದ್ದರು.

  • ಮಾಸ್ ಮಾರ್ಟಿನ್.. ಮತ್ತೆ ಅರ್ಜುನ್.. ಕನ್ನಡದಲ್ಲಿ ನಂ.1

    ಮಾಸ್ ಮಾರ್ಟಿನ್.. ಮತ್ತೆ ಅರ್ಜುನ್.. ಕನ್ನಡದಲ್ಲಿ ನಂ.1

    ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.

    ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?

    ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.

    ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.

    ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.

  • ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

    ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

    ಸುಮಾರು 3 ವರ್ಷಗಳ ಹಿಂದೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣ ಮೀಟೂ ಕೇಸ್. ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ನಟಿ ಶೃತಿ ಹರಿಹರನ್ ತಾವು ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷ್ಯ ನೀಡುವಲ್ಲಿ ವಿಫಲರಾಗಿರುವ ಕಾರಣ ಬಿ ರಿಪೋರ್ಟ್ ಸಲ್ಲಿಸಲಾಗಿದೆ.

    ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿರುವ ನ್ಯಾಯಾಲಯ, ಬಿ ರಿಪೋರ್ಟ್ ಬಗ್ಗೆ ಯಾವುದೇ ಆಕ್ಷೇಪವಿದ್ದಲ್ಲಿ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಿದೆ. ಬಿ ರಿಪೋರ್ಟ್ ಸಲ್ಲಿಸುವುದಕ್ಕೂ ಮುನ್ನ ಪೊಲೀಸರು ಶೃತಿ ಹರಿಹರನ್ ಅವರಿಗೆ ಮಾಹಿತಿ ನೀಡಿದ್ದರಾದರೂ, ಶೃತಿ ಹರಿಹರನ್ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ.

  • ಮೀಟೂ ಕೇಸ್ - ಅರ್ಜುನ್ ಸರ್ಜಾ ಪರ ಹೀಗಿತ್ತು ಬಿ.ವಿ.ಆಚಾರ್ಯ ವಾದ

    arjun sarja image

    ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳದ ಆರೋಪ, ಈಗ ಕೋರ್ಟ್‍ನಲ್ಲಿದೆ. ಇದೊಂದು ಸುಳ್ಳು ಆರೋಪ. ಹೀಗಾಗಿ ಎಫ್‍ಐಆರ್ ರದ್ದು ಮಾಡಬೇಕು ಎಂದು ಅರ್ಜುನ್ ಸರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ಆರಂಭಿಸಿರುವ ನ್ಯಾಯಾಲಯ, ವಿಚಾರಣೆಗೇನೂ ತಡೆ ಕೊಟ್ಟಿಲ್ಲ. ಆದರೆ, ನವೆಂಬರ್ 14ರವರೆಗೆ ಸರ್ಜಾರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಈ ವಿಚಾರಣೆ ವೇಳೆ ದೇಶದ ಪ್ರಖ್ಯಾತ ವಕೀಲರಲ್ಲಿ ಒಬ್ಬರಾದ ಬಿ.ವಿ.ಆಚಾರ್ಯ, ಹೈಕೋರ್ಟ್‍ನಲ್ಲಿ ಮಂಡಿಸಿದ ವಾದ ಹೀಗಿತ್ತು.

    ಇಡೀ ಪ್ರಕರಣ ಅಕ್ಟೋಬರ್ 20ರಿಂದ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕುವುದರಿಂದ ಶುರುವಾಯ್ತು. ಅರ್ಜುನ್ ಸರ್ಜಾಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳಿಗೆ ಶೃತಿಯವರಷ್ಟೇ ವಯಸ್ಸು. ಅಜುನ್, ದಕ್ಷಿಣ ಭಾರತದ ಖ್ಯಾತ. ಹಲವು ಭಾಷೆಗಳಲ್ಲಿ ನಟಿಸಿರುವ ಸರ್ಜಾ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಮೀಟೂ ಅಭಿಯಾನ ಕ್ಯಾತೆ ತೆಗೆಯುವ ಅಭಿಯಾನವಾಗಿದೆ. ವಿಸ್ಮಯ ಚಿತ್ರದಲ್ಲಿ ಅವರಿಬ್ಬರೂ ಗಂಡ ಹೆಂಡತಿಯ ಪಾತ್ರ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ತಬ್ಬಿಕೊಳ್ಳುವ ದೃಶ್ಯಗಳಲ್ಲಿ ನಟಿಸಿದ್ದಾರೆ. ಗಂಡ ಹೆಂಡತಿ ಪಾತ್ರಧಾರಿಗಳು ಪರಸ್ಪರ ದೇಹ ಸ್ಪರ್ಶಿಸದೇ ನಟಿಸಲು ಹೇಗೆ ಸಾಧ್ಯ..? ಹಿಂದೆ ಟಚ್ ಮಾಡಿದ್ದಾರೆ ಎನ್ನುತ್ತಿರುವ ಶೃತಿ ಆಗ ಏನು ಮಾಡ್ತಾ ಇದ್ರು. ನಿರ್ದೇಶಕರು ಈ ದೃಶ್ಯಗಳ ಬಗ್ಗೆ ಮೊದಲೇ ಹೇಳಿರುತ್ತಾರೆ. ನಿರ್ದೇಶಕರು ದೃಶ್ಯ ಸರಿಯಾಗಿ ಬರುವವರೆಗೂ ರಿಹರ್ಸಲ್ ಮಾಡಿಸುತ್ತಾರೆ. ಶೂಟಿಂಗ್‍ನಲ್ಲಿ ಅರ್ಜುನ್ ಸರ್ಜಾ ಕೈಗಳು ಅಕ್ಕಪಕ್ಕದಲ್ಲಿ ಚಲಿಸಿದವು ಎನ್ನುತ್ತಾರೆ. ಆ ಶೂಟಿಂಗ್ ನಡೆಯುವಾಗ 50ರಿಂದ 60 ಜನ ಇರುತ್ತಾರೆ. ಅಷ್ಟೂ ಜನರ ಎದುರು ಲೈಂಗಿಕ ಕಿರುಕುಳ ಕೊಡೋಕೆ ಸಾಧ್ಯವೇ..? ಕಿರುಕುಳ ಆಗಿದ್ದರೆ ಅಂದೇ ಹೇಳಬಹುದಿತ್ತು. ತಬ್ಬಿಕೊಳ್ಳುವ ಉರುಳಾಡುವ ದೃಶ್ಯಗಳಲ್ಲಿ ಕೈಗಳು ದೇಹಕ್ಕೆ ಟಚ್ ಆಗೋದು ಸಹಜ. ಸಹಜ ನಟನೆಗೆ ಅಲ್ಲಿಬೇಡಿಕೆ ಇರುತ್ತೆ. 

    ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಾನೂ ಖಂಡಿಸುತ್ತೇನೆ. ಆದರೆ, ಇಲ್ಲಿ ಕಾನೂನು ದುರ್ಬಳಕೆ ಆಗಿದೆ. ಕುಪ್ಪಸವನ್ನು ಮುಟ್ಟಿದ್ದರು ಎನ್ನುವ ಶೃತಿ ಆರೋಪವಿದೆಯಲ್ಲ, ಅದು ಕಾನೂನು ಪಂಡಿತರಿಂದ ಕೇಸ್‍ನ್ನು ಸ್ಟ್ರಾಂಗ್ ಮಾಡಲು ಸೇರಿಸಿರುವ ಆರೋಪ. 

    ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ಆಗಿದ್ದರೆ, ಆಗಲೇ ಸುದ್ದಿ ಹೊರಬರುತ್ತಿತ್ತು. ಎಫ್‍ಐಆರ್‍ನಲ್ಲಿ 354, 354ಎ, 506, 509 ಸೆಕ್ಷನ್‍ಗಳನ್ನು ಹಾಕಲಾಗಿದೆ. ಅಂದ್ರೆ, ದೂರಿನಲ್ಲೇ ಸೆಕ್ಷನ್‍ಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದಲೇ ಇದೊಂದು ಸರ್ಜಾರನ್ನು ಕಾನೂನಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವುದಕ್ಕೆ ಸಾಕ್ಷಿ.

    ಚಿತ್ರೀಕರಣ ಹೊರತುಪಡಿಸಿ, ಸರ್ಜಾ.. ಶೃತಿ ಅವರನ್ನು ಹೊರಗೆ ಭೇಟಿ ಮಾಡಿಯೇ ಇಲ್ಲ. ಚಿತ್ರದಲ್ಲಿ ಹತ್ತು ಹಲವಾರು ದೃಶ್ಯಗಳಿವೆ. ದೃಶ್ಯವೊಂದರಲ್ಲಿ ಶೃತಿಯೇ ಸರ್ಜಾಗೆ ಮುತ್ತು ಕೊಡುವ ಸನ್ನಿವೇಶ ಇದೆ. ಇಷ್ಟೆಲ್ಲ ಮುಜುಗರ ಇರುವವರು ನಟಿಸೋಕೆ ಯಾಕೆ ಒಪ್ಪಿಕೊಳ್ಳಬೇಕಿತ್ತು? 

    ಸಿನಿಮಾ ರಿಹರ್ಸಲ್ ವೇಳೆ ಇದೆಲ್ಲ ನಡೆದಿದೆ ಅಂತಾರೆ. ರಿಹರ್ಸಲ್‍ನಲ್ಲಿ ನಡೆಯೋದು ದೃಶ್ಯಗಳ ತಯಾರಿ. ಅದನ್ನು ಲೈಂಗಿಕ ಕಿರುಕುಳ ಎಂದು ಕರೆಯುವುದು ಹೇಗೆ..? ಹೀಗೆ ಬಿ.ವಿ. ಆಚಾರ್ಯ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದ್ದಾರೆ.

    ತನಿಖೆಗೆ ತಡೆಯಾಜ್ಞೆ ನೀಡದ ಹೈಕೋರ್ಟ್, ತನಿಖೆಗೆ ಸಹಕರಿಸಿ ಎಂದು ಅರ್ಜುನ್ ಸರ್ಜಾಗೆ ಸೂಚಿಸಿದೆ. ನವೆಂಬರ್ 14ರಂದು ಮುಂದಿನ ವಿಚಾರಣೆಗೆ ದಿನ ನಿಗದಿ ಮಾಡಿದೆ. ಅದುವರೆಗೂ ಸರ್ಜಾರನ್ನು ಬಂಧಿಸಬೇಡಿ ಎಂದು ಪೊಲೀಸರಿಗೂ ಸೂಚನೆ ಕೊಟ್ಟಿದೆ. 

  • ಶೃತಿ V/s ಅರ್ಜುನ್ ವಿವಾದವನ್ನು ಅಂಬರೀಷ್ ಬಗೆಹರಿಸ್ತಾರಾ..?

    will ambareesh resolve sruthi hariharan's arjun sarja's issue

    ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ವಿವಾದ ಈಗ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ಅರ್ಜುನ್ ಸರ್ಜಾ ಅವರ ಮಾವ ಕಲಾತಪಸ್ವಿ ರಾಜೇಶ್, ಶೃತಿ ವಿರುದ್ಧ ದೂರು ನೀಡಿದ್ದಾರೆ. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗಿರುವ ವಾಣಿಜ್ಯ ಮಂಡಳಿ, ಸಂಧಾನ ಸಮಿತಿ ರಚಿಸಲು ಮುಂದಾಗಿದೆ. ಮಂಡಳಿಯ ಪದಾಧಿಕಾರಿಗಳ ಸಭೆ ನಂತರ ಫಿಲಂಚೇಂಬರ್ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಈ ನಿರ್ಧಾರ ಪ್ರಕಟಿಸಿದ್ದಾರೆ.

    ವಿವಾದ ಬಗೆಹರಿಸಲು ಸಂಧಾನ ಸಮಿತಿ ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ. ಇಬ್ಬರಿಗೂ ನ್ಯಾಯ ಸಿಗಲಿದೆ ಎನ್ನುವ ನಂಬಿಕೆ ನಮಗಿದೆ. ಸಂಧಾನ ಸಮಿತಿ ಧಿಕ್ಕರಿಸಿ ಕೋರ್ಟ್‍ಗೆ ಹೋದರೆ, ಇಡೀ ಪ್ರಕರಣದಿಂದ ಮಂಡಳಿ ಅಂತರ ಕಾಯ್ದುಕೊಳ್ಳಲಿದೆ ಎಂದು ಹೇಳಿದ್ದಾರೆ ಚಿನ್ನೇಗೌಡ.

    ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಹಿರಿಯ ನಟಿ ಬಿ.ಸರೋಜಾದೇವಿ, ಲೋಕನಾಥ್ ಸೇರಿದಂತೆ ಹಿರಿಯತೇ ಈ ಸಮಿತಿಯಲ್ಲಿ ಇರುತ್ತಾರೆ ಎಂದು ಚಿನ್ನೇಗೌಡ ತಿಳಿಸಿದ್ದಾರೆ. ಚಿತ್ರರಂಗದ ಇಂತಹ ವೈಮನಸ್ಯಗಳು ಒಂದೇ ಮಾತಿನಲ್ಲಿ ಬಗೆಹರಿಸಿದ ಖ್ಯಾತಿ ಹೊಂದಿರುವ ಅಂಬರೀಷ್, ಈ ವಿವಾದ ಬಗೆಹರಿಸುತ್ತಾರಾ..? ವಿವಾದ ಮುಗಿಯುತ್ತಾ..? ಕಾದು ನೋಡಬೇಕು.