` darshan birthday, - chitraloka.com | Kannada Movie News, Reviews | Image

darshan birthday,

  • 'Gandugali Madakari Nayaka' To Be Launched On Darshan's Birthday

    gandugali madakari nayaka to launch on darshan's birthday

    If everything had gone right, then Darshan starrer 'Gandugali Madakari Nayaka' was supposed to be launched on the festival day of Sankranti. Now the film's launch will be held on Darshan's birthday on the 16th of February.

    'Gandugali Madakari Nayaka' is a historical film based on the life of Madakari Nayaka of Chitradurga. The film is based on the novel of same name by B L Venu. B L Venu himself has written the screenplay and dialogues for this film.

    'Gandugali Madakari Nayaka' is being produced by Rockline Venkatesh and directed by veteran director S V Rajendra Singh Babu.

  • Darshan Celebrates His Birthday In A Simple Way

    darshan celebrated his birthday in simple way

    'Challenging Star' Darshan on Saturday celebrated his 42nd birthday in a simple manner amidst fans, friends and family.

    Darshan had announced that he will not be celebrating his birthday this year and has requested his fans to spend the money on charity instead of cakes, garlands and gifts. Likewise, the fans of the actor gave the proceeds to the Siddaganga Mutt of Tumkur.

    Like every year, Darshan met his fans who had come to wish him from all over the state. Darshan had organised food for the fans who came all over to meet him.

  • Darshan Celebrates His Birthday With Fans

    darshan cutting cake

    'Challenging Star' Darshan on Wednesday night celebrated his birthday with huge number of fans who came to wish him.

    darshan_birthday.jpgDarshan is celebrating his birthday today. But the fans of the actor thronged his residence from yesterday night itself and wished the star a happy and prosperous birthday. Darshan came from his residence and met his fans and celebrated his birthday with them.

    The fans had brought huge cakes, garlands and gifts for their favorite actor and the birthday celebrations will continue till tomorrow.

     

  • Darshan's Letter To His Fans

    darshan requests fans

    Celebrities writing letters to their fans is the latest trend in Sandalwood. Off late, many actors have written letters to fans. Now actor Darshan is also in the same way.

    Recently, the actor wrote a letter to his fans and posted in the social media. In this letter, the actor has requested his fans to not to disturb his neighbors during his birthday celebrations.

    Darshan is all set to celebrate his birthday on the 16th of February. Every year, fans of the actor come to his residence from far off places to wish him. However, after they leave, the whole area will be a mess. So, Darshan has requested his fans to not to disturb the neighborhood.

    Related Articles :-

    ಅಭಿಮಾನಿಗಳೇ.. ದರ್ಶನ್ ಮನವಿಯನ್ನೊಮ್ಮೆ ಕೇಳಿ

     

  • ಅಭಿಮಾನಿಗಳೇ.. ದರ್ಶನ್ ಮನವಿಯನ್ನೊಮ್ಮೆ ಕೇಳಿ

    darshan image

    ನಲ್ಮೆಯ ಅಭಿಮಾನಿಗಳಲ್ಲಿ

    ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟುಹಬ್ಬದ ದಿನ ನೀವೆಲ್ಲ ದೂರ ದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ, ನಿಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತೀರಿ. ಅದನ್ನು ನನ್ನ ಯಾವುದೋ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಿದ್ದೇನೆ. ಆದರೆ, ಹಾಗೆ ಸಂಭ್ರಮಪಡುವಾಗ ದಯವಿಟ್ಟು ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ. ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. 

    ಅಕ್ಕಪಕ್ಕದ ಮನೆಯವರ ಕಾಂಪೌಂಡ್ ಪ್ರವೇಶಿಸುವುದು, ಹೂಕುಂಡಗಳನ್ನು ಒಡೆಯುವುದು, ಅವರ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆಗಳನ್ನು ತೋರಿಸಬೇಡಿ. ನನ್ನ ಮೇಲೆ ಅಭಿಮಾನ ಇಟ್ಟಿರುವ ನೀವೆಲ್ಲ ನನ್ನ ಈ ಪ್ರಾರ್ಥನೆಯನ್ನು ಈಡೇರಿಸುತ್ತೀರಿ ಎಂದು ನಂಬಿದ್ದೇನೆ.

    ಇಂತಿ 

    ನಿಮ್ಮ ಪ್ರೀತಿಯ ದಾಸ 

    ದರ್ಶನ್

    ಅಂದಹಾಗೆ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬವಿದೆ. ದರ್ಶನ್, ಅಭಿಮಾನಿಗಳನ್ನು ಯಾವತ್ತಿಗೂ ಮಿಸ್ ಮಾಡಿಕೊಳ್ಳೋದಿಲ್ಲ. ಅಭಿಮಾನಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಅವರ ಈ ಮನವಿಯನ್ನು ಅಭಿಮಾನಿಗಳೂ ಈಡೇರಿಸ್ತಾರಾ..ನೋಡೋಣ.

  • ಅಭಿಮಾನಿಗಳೇ.. ಹುಟ್ಟುಹಬ್ಬ ಬೇಡ - ದರ್ಶನ್ ಮನವಿ

    darshan requests fans not to celebrate birthday

    ಇದು ಅನಿರೀಕ್ಷಿತವೇನಲ್ಲ. ಅಂಬರೀಷ್ ಮತ್ತು ದರ್ಶನ್ ನಡುವಿನ ಬಾಂಧವ್ಯ ನೋಡಿದ್ದವರಿಗೆ ಇದು ಅಚ್ಚರಿಯೂ ಅಲ್ಲ. ದರ್ಶನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ಯಾರೇ ಕೇಕ್ ತಂದರೂ ಕೇಕ್ ಕತ್ತರಿಸುವುದಿಲ್ಲ. ದಯವಿಟ್ಟು ಒತ್ತಾಯ ಮಾಡಬೇಡಿ. ಇದೊಂದು ವರ್ಷ ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ ದರ್ಶನ್. ಅವರು ಅಂಬಿ ಹೆಸರು ಹೇಳುತ್ತಿಲ್ಲ.. ಅಷ್ಟೆ..

    ಇತ್ತ.. ತಿಂಗಳಿಗೆ ಮೊದಲೇ ದರ್ಶನ್ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿಕೊಂಡಿರೋ ಅಭಿಮಾನಿಗಳು, ಡಿ ಬಾಸ್ ಎಂಬ ಬೆಳ್ಳಿ ಕಡಗಗಳನ್ನು ಮಾಡಿಸಿ, ಗಿಫ್ಟ್ ಕೊಡೋಕೆ ರೆಡಿಯಾಗುತ್ತಿದ್ದಾರೆ. 

  • ಓಕೆ ಬಾಸ್ ಎಂದುಬಿಟ್ರು ಡಿ ಬಾಸ್ ಫ್ಯಾನ್ಸ್

    darshan requests his fans

    ಅಭಿಮಾನಿಗಳೇ, ದಯವಿಟ್ಟು ಹುಟ್ಟುಹಬ್ಬದ ದಿನ ಮನೆಯ ಬಳಿ, ಪಕ್ಕದ ಮನೆಯವರ ಕಾಂಪೌಂಡ್ ಹತ್ತಿ, ಅವರಿಗೆ ತೊಂದರೆ ಕೊಡಬೇಡಿ. ಹುಟ್ಟುಹಬ್ಬದ ದಿನವನ್ನು ಸಾರ್ಥಕವಾಗಿ ಆಚರಿಸೋಣ ಎಂದು ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ದರ್ಶನ್‍ರನ್ನು ಡಿ ಬಾಸ್ ಎಂದರೆ ಕರೆಯುವ ಅಭಿಮಾನಿಗಳು ದರ್ಶನ್ ಮನವಿಯನ್ನು ಆದೇಶದಂತೆ ಪಾಲಿಸಲು ನಿರ್ಧರಿಸಿದ್ದಾರೆ.

    ಈ ಬಾರಿಯ ದರ್ಶನ್ ಹುಟ್ಟುಹಬ್ಬದಂದು ದರ್ಶನ್ ಮನೆಯ ಸುತ್ತ ಪಟಾಕಿ ಸಿಡಿಯುವುದಿಲ್ಲ. ಕೇಕ್ ತರುತ್ತಾರೆ. ಚೆಲ್ಲುವುದಿಲ್ಲ. ಸದ್ದು, ಗದ್ದಲ ಇರಲ್ಲ. ಬದಲಿಗೆ ಅದೇ ಅಭಿಮಾನಿಗಳು, ಅಕ್ಕಿ, ಬೇಳೆ, ಹಣ ಸಂಗ್ರಹಿಸಿ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಿತರಿಸಲು ತೀರ್ಮಾನಿಸಿದ್ದಾರೆ. 

     

  • ಜೈ ಹೋ ದರ್ಶನ್ ಫ್ಯಾನ್ಸ್..

    darshan fans

    ನಾಳೆ (ಫೆಬ್ರವರಿ 16)ರಂದು ದರ್ಶನ್ ಹುಟ್ಟುಹಬ್ಬ. ಈ ಬಾರಿ ಕೇಕ್, ಹಾರ, ಜೈಕಾರ, ಸಂಭ್ರಮಗಳಿಲ್ಲ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಸಂಭ್ರಮವನ್ನು ದೂರವಿಟ್ಟಿರುವ ದರ್ಶನ್, ಅಭಿಮಾನಿಗಳಿಗೆ ಬೇರೆಯದೇ ಸಂದೇಶ ಕೊಟ್ಟಿದ್ದರು. ಅಫ್‍ಕೋರ್ಸ್.. ಆ ಸಂದೇಶಕ್ಕೆ ಕಾರಣವಾಗಿದ್ದೂ ಅಭಿಮಾನಿಗಳೇ. ಸಿದ್ಧಗಂಗಾ ಮಠದ ದಾಸೋಹಕ್ಕೆ ದಿನಸಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದರು. ಇದನ್ನು ಕಂಡು ಥ್ರಿಲ್ಲಾದ ದರ್ಶನ್, ಹುಟ್ಟುಹಬ್ಬಕ್ಕೆ ಆ ರೀತಿ ದಿನಸಿ ಸಂಗ್ರಹಿಸುವವರಿಗೆ ಸಂದೇಶ ಕೊಟ್ಟರು. 

    ಸಂಗ್ರಹಿಸಿದ ದಿನಸಿಯನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವ ಹೊಣೆಯನ್ನು ತಾವು ನಿರ್ವಹಿಸುವುದಾಗಿ ಹೇಳಿದ್ರು. 

    ಈಗ ದರ್ಶನ್ ಮನೆ ಮುಂದೆ ದಿನಸಿಗಳ ರಾಶಿಯೇ ಬಿದ್ದಿದೆ. ಪ್ರತಿದಿನವೂ ಬರುತ್ತಿರುವ ಅಭಿಮಾನಿಗಳು, ಸಮಾಜ ಸೇವೆಗೆ ಕೈ ಜೋಡಿಸುತ್ತಿದ್ದಾರೆ. ಅದಕ್ಕೆ ಹೇಳಿದ್ದು.. ದರ್ಶನ್ ಫ್ಯಾನ್ಸ್‍ಗೆ ಜೈ ಹೋ ಎಂದು. 

    ಅಂದಹಾಗೆ ದರ್ಶನ್ ಕೂಡಾ ಸಿದ್ಧಗಂಗಾ ಮಠಕ್ಕೆ ಪ್ರತಿತಿಂಗಳೂ ದಿನಸಿ ನೀಡುತ್ತಾರೆ. 

  • ದರ್ಶನ್ ಬರ್ತ್‍ಡೇ ಚಿತ್ರರಂಗ ಸ್ಪೆಷಲ್

    darshan birthday is industry special

    ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಿ ಉತ್ಸವ ಎಂದೇ ಆಚರಿಸಲು ನಿರ್ಧರಿಸಿದ್ದರೆ, ಚಿತ್ರರಂಗ ಬೇರೆಯೇ ರೀತಿಯಲ್ಲಿ ಅದನ್ನು ಹಬ್ಬವನ್ನಾಗಿಸುತ್ತಿದೆ. ಒಟ್ಟಿನಲ್ಲಿ ಫೆಬ್ರವರಿ 16, ಕನ್ನಡ ಚಿತ್ರರಂಗದ ಪಾಲಿಗೆ ಡಿ ಉತ್ಸವವಾಗಲಿದೆ. ಅಂದು ಅಭಿಮಾನಿಗಳ ಸಂಭ್ರಮವನ್ನು ಪಕ್ಕಕ್ಕಿಡಿ, ಅದು ಇಡೀ ರಾಜ್ಯಾದ್ಯಂತ ಇರುತ್ತೆ. ಕೇವಲ ಚಿತ್ರರಂಗದ ಸಂಭ್ರಮ ನೋಡಿದರೂ ಖುಷಿಯಾಗುತ್ತೆ.

    ದರ್ಶನ್ ಬರ್ತ್‍ಡೇ ಸ್ಪೆಷಲ್ 01 - ಕುರುಕ್ಷೇತ್ರ ಚಿತ್ರದಿಂದ ಚಿತ್ರದ ಮೊದಲ ಟ್ರೇಲರ್ ಹೊರ ಬರುವ ಸಾಧ್ಯತೆ ಇದೆ. ಕೇವಲ ಟೀಸರ್ ನೋಡಿಯೇ ಥ್ರಿಲ್ ಆಗಿರುವ ಅಭಿಮಾನಿಗಳಿಗೆ ಆ ದಿನ ಕುರುಕ್ಷೇತ್ರದ ಟ್ರೇಲರ್ ಸಿಗಲಿದೆ.

    ದರ್ಶನ್ ಬರ್ತ್‍ಡೇ ಸ್ಪೆಷಲ್ 02 - ದರ್ಶನ್ 51ನೇ ಸಿನಿಮಾದ ಫಸ್ಟ್ ಲುಕ್ ಆ ದಿನ ಬಿಡುಗಡೆಯಾಗಲಿದೆ. ಶೈಲಜಾ ನಾಗ್ ಮತ್ತು ಸುರೇಶ್ ನಿರ್ಮಾಣದ, ಕುಮಾರ್ ನಿರ್ದೇಶನದ ಆ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ.

    ದರ್ಶನ್ ಬರ್ತ್‍ಡೇ ಸ್ಪೆಷಲ್ 03 - ಕರಿಯಾ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಅದು 2ನೇ ಬಾರಿ ರಿಲೀಸ್ ಆದಾಗಲೇ ಸೂಪರ್ ಹಿಟ್ ಆಗಿತ್ತು. ಈಗ ದರ್ಶನ್ ಹುಟ್ಟುಹಬ್ಬಕ್ಕಾಗಿ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.

    ಇನ್ನೂ ಕೆಲವು ವಿಶೇಷಗಳು ನಿಮಗಾಗಿ ಕಾದಿವೆ. 

  • ದರ್ಶನ್ ಹುಟ್ಟುಹಬ್ಬಕ್ಕೆ ಗಂಡುಗಲಿ ಮದಕರಿ ನಾಯಕ ಶುರು..?

    will darshan's madakari nayaka strat on his birthday?

    ಸಂಕ್ರಾಂತಿ ಹಬ್ಬಕ್ಕೇ ಆರಂಭವಾಗಬೇಕಿದ್ದ ಗಂಡುಗಲಿ ಮದಕರಿ ನಾಯಕ ಚಿತ್ರದ ಸ್ಕ್ರಿಪ್ಟ್ ಪೂಜೆ, ಮುಹೂರ್ತ ಈಗ ದರ್ಶನ್ ಹುಟ್ಟುಹಬ್ಬದ ದಿನ ನಡೆಯುವ ಸಾಧ್ಯತೆ ಇದೆ. ಫೆಬ್ರವರಿ 16ರಂದು ಚಿತ್ರಕ್ಕೆ ಮುಹೂರ್ತವಾಗುವ ಸಾಧ್ಯತೆಗಳಿವೆ.

    ಚಿತ್ರಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಚಿತ್ರತಂಡ, ಈಗ ಚಿತ್ರದ ಸ್ಕ್ರಿಪ್ಟ್‍ನ್ನು 7ನೇ ಬಾರಿಗೆ ತಿದ್ದುತ್ತಿದೆ. ಶೂಟಿಂಗ್ ಶುರುವಾಗುವ ಮುನ್ನವೇ ಚಿತ್ರದ ಸ್ಕ್ರಿಪ್ಟ್‍ನ್ನು ಚೆಂದವಾಗಿಸಿಕೊಳ್ಳಬೇಕು ಅನ್ನೋದು ಚಿತ್ರತಂಡದ ಆಸೆ. ಸಣ್ಣ ಸಣ್ಣ ಓರೆಕೋರೆಗಳನ್ನೂ ರಿಪೇರಿ ಮಾಡುತ್ತಿದೆ ತಂಡ.

    ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರಕ್ಕಾಗಿ ಮಂಬೈ, ಹೈದರಾಬಾದ್ ಸುತ್ತುತ್ತಿದ್ದಾರೆ. ಬಾಜೀರಾವ್ ಮಸ್ತಾನಿ ಸೆಟ್ ನೋಡಿದ್ದಾರೆ. ರಾಮೋಜಿ ಫಿಲಂ ಸಿಟಿಯಲ್ಲಿ ಸುತ್ತಿದ್ದಾರೆ. ಅರಮನೆ ಸೆಟ್‍ಗಳನ್ನು ನೋಡುತ್ತಿದ್ದಾರೆ. 

    ರಾಕ್‍ಲೈನ್ ವೆಂಕಟೇಶ್ ಕನಸಿನ ಚಿತ್ರವಾಗಿರೋ ಗಂಡುಗಲಿ ಮದಕರಿ ನಾಯಕ ಸಿನಿಮಾ, ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ 16ರಂದು ಮುಹೂರ್ತ ಕಾಣಲಿದೆ. ಸದ್ಯಕ್ಕೆ ರಾಕ್‍ಲೈನ್, ನಟಸಾರ್ವಭೌಮ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿ.

  • ನಂಬರ್ 1 ಅಲ್ಲ, `0'ಯಲ್ಲಿರುವುದೇ ಇಷ್ಟ ಎಂದ ದರ್ಶನ್..!

    darshan not interested in number game

    ಕನ್ನಡದಲ್ಲಿ ನಂಬರ್ ಒನ್ ಸ್ಟಾರ್ ಯಾರು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅದು ಅತಿರೇಕಕ್ಕೂ ಹೋಗಿದ್ದಿದೆ. ಆದರೆ, ಹುಟ್ಟುಹಬ್ಬದ ಸಂಭ್ರಮದಲ್ಲಿರೋ ದರ್ಶನ್ ಹೇಳಿರೋದು ಮಾತ್ರ ಬೇರೆ.

    ಎಲ್ಲರಿಗೂ ಸೊನ್ನೆ ಅನ್ನೋ ಸಂಖ್ಯೆ ಇಷ್ಟವಾಗೋದಿಲ್ಲ. ನನಗೆ ಆ ಶೂನ್ಯವೇ ಇಷ್ಟ. ನಂಬರ್ ಒನ್ ರೇಸ್‍ನಲ್ಲಿ ನನಗೆ ನಂಬಿಕೆಯಿಲ್ಲ. ಅಭಿಮಾನಿಗಳ ಹೃದಯಲ್ಲಿರೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ ದರ್ಶನ್.

    ಪ್ರತಿ ವರ್ಷ ಹುಟ್ಟುಹಬ್ಬವನ್ನು ನಾನು ಎದುರು ನೋಡುತ್ತೇನೆ. ಆ ದಿನ, ನಾನು ನನ್ನ ಅಭಿಮಾನಿಗಳೊಂದಿಗೆ ಕಳೆಯುವ ದಿನ. ಅವರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವ ದಿನ. ಇದು ನನ್ನ ಹುಟ್ಟುಹಬ್ಬವಷ್ಟೇ ಅಲ್ಲ, ಅವರ ಹಬ್ಬವೂ ಹೌದು. ಈ ದಿನ ಅವರಿಗಾಗಿ ಮೀಸಲು ಅಂತಾರೆ ದರ್ಶನ್.

    ನನ್ನನ್ನು ಪ್ರೀತಿಸುವ ಜನರಿಗೆ ನಾನೂ ಏನಾದರು ಕೊಡಬೇಕು. ಅದನ್ನು ಸಿನಿಮಾ ಮೂಲಕವೋ, ಬೇರ್ಯಾವುದಾದರೂ ಮಾರ್ಗದ ಮೂಲಕವೋ ಕೊಡುತ್ತೇನೆ. ಅದನ್ನು ರಾಜಕೀಯಕ್ಕೆ ಬರದೆಯೂ ಮಾಡಬಹುದು ಎಂದಿದ್ದಾರೆ ದರ್ಶನ್.

  • ಫ್ಯಾನ್ಸ್ ಅತಿರೇಕದ ವರ್ತನೆ : ದರ್ಶನ್ ಮನೆ ಎದುರು ಹುಟ್ಟುಹಬ್ಬ ಆಚರಣೆಗೆ ಬ್ರೇಕ್

    extreme level celebrations breaks darshan's public celebration

    ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಪಟಾಕಿ, ಹಾರ, ಕೇಕುಗಳನ್ನು ದೂರವಿಟ್ಟು, ಸರಳವಾಗಿ ಆಚರಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಮನೆ ಹತ್ತಿರ ಬನ್ನಿ, ದವಸ ಧಾನ್ಯ ತನ್ನಿ. ಅನಾಥಾಶ್ರಮ, ವೃದ್ಧಾಶ್ರಮ, ಮಠಗಳಿಗೆ ಹಂಚುವ ಕೆಲಸ ನನ್ನದು ಎನ್ನುವ ದರ್ಶನ್ ಕಳೆದೆರಡು ವರ್ಷಗಳಿಂದ ಹುಟ್ಟುಹಬ್ಬದ ಸಂಭ್ರಮಕ್ಕೆ ಸ್ವತಃ ತಾವೇ ಬ್ರೇಕ್ ಹಾಕಿದ್ದಾರೆ.

    ದರ್ಶನ್ ಹೇಳಿದ ಎಲ್ಲ ಮಾತನ್ನೂ ಪಾಲಿಸುತ್ತಿರೋ ಅಭಿಮಾನಿಗಳು, ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ ಎಂಬ ಮನವಿಯನ್ನು ಮಾತ್ರ ಪುರಸ್ಕರಿಸುತ್ತಿಲ್ಲ. ಬರುವ ಸಾವಿರಾರು ಅಭಿಮಾನಿಗಳಲ್ಲಿ ಕೆಲವೇ ಕೆಲವು ಅಭಿಮಾನಿಗಳು ಮಾಡಿರುವ ದುರ್ವರ್ತನೆ, ಈಗ ದರ್ಶನ್ ಮನೆಯೆದುರಿನ ಹುಟ್ಟುಹಬ್ಬಕ್ಕೇ ಸಂಚಕಾರ ತಂದಿದೆ.

    ಹುಟ್ಟುಹಬ್ಬದ ದಿನ ದರ್ಶನ್ ಮನೆಗೆ ಬಂದಿದ್ದ ಕೆಲವು ಅಭಿಮಾನಿಗಳು, ಪಕ್ಕದ ಮನೆಯವರ ಕಾರ್‍ನ್ನು ಗೀಚಿ ಕೆಡಿಸಿದ್ದಾರೆ. ಇನ್ನೂ ಕೆಲವರ ಮನೆಯ ಹೂಕುಂಡಗಳನ್ನು ಒಡೆದು ಹಾಕಿದ್ದಾರೆ. ಪಕ್ಕದ ಮನೆಯವರ ಕಾಂಪೌಂಡ್ ಹತ್ತಿ ಗಲೀಜು ಮಾಡಿದ್ದಾರೆ. ರಸ್ತೆಯಲ್ಲಿ ವಾಹನಗಳೂ ಚಲಿಸಲು ಅವಕಾಶ ನೀಡದೆ ಕಿರಿಕಿರಿ ಮಾಡಿದ್ದಾರೆ. ಕೆಲವರ ಮನೆಯ ಟೆರೇಸ್ ಹತ್ತಿ ಮನೆಯವರಿಗೇ ಕಿರಿಕಿರಿ ಮಾಡಿದ್ದಾರೆ. ಅಷ್ಟೇ ಅಲ್ಲ, ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆಯೊಬ್ಬರಿಗೆ ನೂಕುನುಗ್ಗಲಿನಲ್ಲಿ ಮೂಗು ಡ್ಯಾಮೇಜ್ ಆಗಿ ಆಸ್ಪತ್ರೆ ಸೇರಿದ್ದಾರೆ.

    ಇದೆಲ್ಲದರ ಎಫೆಕ್ಟ್ `ಮುಂದಿನ ಬಾರಿ ದರ್ಶನ್ ಮನೆ ಎದುರು ಹುಟ್ಟುಹಬ್ಬದ ಸೆಲಬ್ರೇಷನ್ ಇಲ್ಲ'.

    ದಕ್ಷಿಣ ವಲಯ ಡಿಸಿಪಿ ರಮೇಶ್ ಅವರೇ ಈ ಕುರಿತು ಹೇಳಿಕೆ ನೀಡಿದ್ದು ಇನ್ನು ಮುಂದೆ ದರ್ಶನ್ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.