` the villain, - chitraloka.com | Kannada Movie News, Reviews | Image

the villain,

  • ವಿಲನ್‍ಗೆ ಟೆರರಿಸ್ಟ್ ಚಾಲೆಂಜ್

    the terrorist release opposite the villain

    ದಿ ವಿಲನ್. ಶಿವರಾಜ್ ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್‍ನ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಹಲವಾರು ಸಿನಿಮಾಗಳು ದಾರಿ ಮಾಡಿಕೊಟ್ಟಿವೆ. ಆ ದಿನವೇ ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ.

    ನಾವು ಪ್ಲಾನ್ ಪ್ರಕಾರವೇ ಬರುತ್ತಿದ್ದೇವೆ. ಯಾವತ್ತೇ ರಿಲೀಸ್ ಮಾಡಿದ್ರೂ ಒಂದಲ್ಲ ಒಂದು ಸಿನಿಮಾ ಜೊತೆ ಸ್ಪರ್ಧೆ ಮಾಡಲೇಬೇಕು. ಅಕ್ಟೋಬರ್ 18 ಬಿಟ್ಟರೆ, ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಅಕ್ಟೋಬರ್ 18ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ದಿ ಟೆರರಿಸ್ಟ್ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಸ್ಫೋಟ, ಮುಸ್ಲಿಂ ಮಹಿಳೆಯೊಬ್ಬಳ ಕಥೆಯಾಗಿದ್ದು, ಯು ಸರ್ಟಿಫಿಕೇಟ್ ಪಡೆದಿರುವ ಚಿತ್ರ. 

  • ಶಿವಣ್ಣ ಜೊತೆ ಹೆಜ್ಜೆ ಹಾಕಿದ ಸುಂದರಿಯರ ಮಾತು

    shivanna dances sandalwood beauties

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಅದ್ಭುತ ಡ್ಯಾನ್ಸರ್ ಎಂಬುದು ಕನ್ನಡಿಗರೆಲ್ಲರಿಗೂ ಗೊತ್ತಿರುವ ವಿಚಾರವೇ. ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಜೊತೆ ಹಲವು ಸುಂದರಿಯರು ಹೆಜ್ಜೆ ಹಾಕಿದ್ದಾರೆ. ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ಶಾನ್ವಿ ಶ್ರೀವಾಸ್ತವ್.. ಶಿವಣ್ಣ ಜೊತೆ ಸ್ಟೆಪ್ ಹಾಕಿರುವ ನಟಿಯರು. ಇವರಿಗೆಲ್ಲ ಒನ್ಸ್ ಎಗೇಯ್ನ್ ಅಚ್ಚರಿಯಾಗಿರುವುದು ಶಿವರಾಜ್‍ಕುಮಾರ್ ಅವರ ಎನರ್ಜಿ. 

    ಶಿವಣ್ಣ ಜೊತೆ ಕಾಣಿಸಿಕೊಳ್ಳೋದೇ ಹೆಮ್ಮೆಯ ಸಂಗತಿ. ನಾನಂತೂ ಎಕ್ಸೈಟ್ ಆಗಿದ್ದೇನೆ. ನರ್ವಸ್ ಕೂಡಾ ಆಗಿದ್ದೇನೆ.

    ರಾಧಿಕಾ ಚೇತನ್

    ಇದು ಸುದೀಪ್, ಶಿವರಾಜ್‍ಕುಮಾರ್ ಸಿನಿಮಾ ಅನ್ನೋ ಕಾರಣಕ್ಕೆ ಒಪ್ಪಿಕೊಂಡೆ. ಶೂಟಿಂಗ್ ತುಂಬಾ ಚೆನ್ನಾಗಿತ್ತು. ಆದರೆ, ಶಿವಣ್ಣ ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ. ಅವರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಕಷ್ಟ.

    ಶ್ರದ್ಧಾ ಶ್ರೀನಾಥ್

    ಹಾಡು ರಿಚ್ ಆಗಿ ಮೂಡಿಬಂದಿದೆ. ಇನ್ನೂ ಕೆಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಸದ್ಯಕ್ಕೆ ಅವುಗಳನ್ನು ನಾವು ಬಹಿರಂಗಪಡಿಸುವ ಹಾಗಿಲ್ಲ. 

    ಭಾವನಾ ರಾವ್

    ಶಿವಣ್ಣ ಅವರ ಎನರ್ಜಿಗೆ ತಕ್ಕಂತೆ ಸ್ಟೆಪ್ ಹಾಕೋದು ಅಷ್ಟು ಸುಲಭ ಅಲ್ಲ. ನನಗೆ ಶೂಟಿಂಗ್ ವೇಳೆ ಕಾಲಿಗೆ ಸ್ವಲ್ಪ ಗಾಯವಾಗಿತ್ತು. ಇದರಿಂದಾಗಿ ವೇಗವಾಗಿ ಹೆಜ್ಜೆ ಹಾಕೋಕೆ ಆಗ್ತಾ ಇರಲಿಲ್ಲ. ಆದರೆ, ಶೂಟಿಂಗ್ ಮುಗಿದ ಮೇಲೆ ಗೊತ್ತಾಗಿದ್ದೇನೆಂದರೆ, ಶಿವಣ್ಣಂಗೂ ಅದೇ ರೀತಿ ಆಗಿತ್ತು. ಆದರೆ, ಅದನ್ನು ಅವರು ತೋರಿಸಿಕೊಳ್ಳಲೇ ಇಲ್ಲ. 

    ಶಾನ್ವಿ ಶ್ರೀವಾಸ್ತವ್

    Related Articles :-

    ಶಿವಣ್ಣ ಜೊತೆಗೆ ಡ್ಯಾನ್ಸ್‍ಗೆ ಸ್ಯಾಂಡಲ್‍ವುಡ್ ಸುಂದರಿಯರು..!

  • ಶಿವಣ್ಣ ಜೊತೆಗೆ ಡ್ಯಾನ್ಸ್‍ಗೆ ಸ್ಯಾಂಡಲ್‍ವುಡ್ ಸುಂದರಿಯರು..!

    three beauties to shake leg with shivanna

    sಶಿವರಾಜ್‍ಕುಮಾರ್ ಹೆಜ್ಜೆ ಹಾಕೋಕೆ ನಿಂತರೆ ಯುವಕರೂ ನಾಚಬೇಕು. ಡ್ಯಾನ್ಸ್ ಬರದೇ ಇರುವವರು ಜೊತೆಗಿದ್ದರೆ, ಅನುಮಾನವೇ ಅಲ್ಲ, ಅದು ಕಷ್ಟಾನೇ. ಈಗ ಅಂತಹ ಶಿವಣ್ಣ ಜೊತೆ ಹೆಜ್ಜೆ ಹಾಕೋಕೆ ಸ್ಯಾಂಡಲ್‍ವುಡ್‍ನ ಮೂವರು ಸುಂದರಿಯರು ರೆಡಿಯಾಗಿದ್ದಾರೆ.

    ಬುಲ್‍ಬುಲ್ ರಚಿತಾ ರಾಮ್, ರಂಗಿತರಂಗ ರಾಧಿಕಾ ಚೇತನ್ ಹಾಗೂ ಯು ಟರ್ನ್ ಶ್ರದ್ಧಾ ಶ್ರೀನಾಥ್. ಈ ಮೂವರೂ ಶಿವಣ್ಣ ಜೊತೆ ಸ್ಪೆಷಲ್ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ. ದಿ ವಿಲನ್ ಚಿತ್ರದ ಶೂಟಿಂಗ್‍ನ ಈಗಿನ ವೇಗ ನೋಡಿದರೆ, ಸಿನಿಮಾ ಶೂಟಿಂಗ್ ಮಾರ್ಚ್ ಕೊನೆಗೆ ಮುಗಿಯುವುದು ಹೆಚ್ಚೂ ಕಡಿಮೆ ಪಕ್ಕಾ. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

  • ಶಿವಣ್ಣ ಸ್ಟಂಟ್ಸ್‍ಗೆ ವಿಲನ್ ಟೀಂ ಫಿದಾ

    shivarajkumar, prem

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಟಂಟ್ಸ್‍ಗಳನ್ನು ಡ್ಯೂಪ್ ಇಲ್ಲದೆ ಮಾಡ್ತಾರೆ ಅನ್ನೋದು ಹೊಸ ಸುದ್ದಿಯೇನೂ ಅಲ್ಲ. ಆದರೆ, ಈಗ.. 50 ದಾಟಿದ ಮೇಲೂ ಶಿವರಾಜ್ ಕುಮಾರ್ ಅವರು ಅದೇ ರೀತಿ ಡ್ಯೂಪ್ ಇಲ್ಲದೆ ಸ್ಟಂಟ್ ಮಾಡ್ತಾರೆ ಅಂದ್ರೆ, ಅಚ್ಚರಿ ಆಗದೇ ಇರುತ್ತಾ..?

    ದಿ ವಿಲನ್ ಚಿತ್ರದ ಸಾಹಸ ದೃಶ್ಯಗಳ ಶೂಟಿಂಗ್ ವೇಳೆ ಖುದ್ದು ನಿರ್ದೇಶಕ ಪ್ರೇಮ್ ಕೂಡಾ ಬೆರಗಾಗುವಂತೆ, ಸಾಹಸ ನಿರ್ದೇಶಕರು ಅಚ್ಚರಿ ಪಡುವಂತೆ ಸ್ಟಂಟ್ಸ್ ಮಾಡಿದ್ದಾರೆ ಶಿವರಾಜ್ ಕುಮಾರ್. ಅದೂ ಡ್ಯೂಪ್ ಇಲ್ಲದೆ.

    ಬ್ಯಾಂಕಾಕ್‍ನಲ್ಲಿ ಚಿತ್ರದ ಈ ಸಾಹಸ ದೃಶ್ಯಗಳ ಶೂಟಿಂಗ್ ನಡೆದಿದ್ದು, ಈ ಸಾಹಸವನ್ನು ಪಾರ್ಕರ್ ಚೇಸ್ ಎಂದು ಕರೀತಾರಂತೆ. ಯುವಕರ ಗ್ಯಾಂಗ್‍ನ್ನು ಬೆನ್ನತ್ತಿ ಹಿಡಿಯುವ ದೃಶ್ಯ ಅದು. ಭಾಗವಹಿಸಿದ್ದವರೆಲ್ಲ 25ರ ವಯಸ್ಸಿನ ಯುವಕರು. ಅವರೆಲ್ಲರನ್ನೂ ದಾಟಿ, ಶತ್ರುಗಳನ್ನು ಹಿಡಿಯುವ ದೃಶ್ಯದಲ್ಲಿ ಶಿವಣ್ಣ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. 

  • ಶಿವಣ್ಣ, ಸುದೀಪ್ ಇಬ್ಬರಲ್ಲಿ ರಿಯಲ್ ವಿಲನ್ ಯಾರು..?

    who is the real villain in the villain

    ದಿ ವಿಲನ್ ಚಿತ್ರದ ಟ್ರೈಲರ್ ಹಾಗೂ ಹಾಡಿನ ಲಿರಿಕಲ್ ವಿಡಿಯೋಗಳನ್ನಷ್ಟೇ ಹೊರಬಿಟ್ಟಿರುವ ದಿ ವಿಲನ್ ಟೀಂ, ಒಂದು ಬಹುದೊಡ್ಡ ಪ್ರಶ್ನೆಯನ್ನು ಹಾಗೆಯೇ ಉಳಿಸಿಬಿಟ್ಟಿದೆ. ಕನ್ನಡ ಚಿತ್ರರಂಗದ ಇಬ್ಬರು ಸೂಪರ್‍ಸ್ಟಾರ್‍ಗಳನ್ನಿಟ್ಟುಕೊಂಡು ದಿ ವಿಲನ್ ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡಿರುವ ಜೋಗಿ ಪ್ರೇಮ್, ಚಿತ್ರದಲ್ಲಿ ವಿಲನ್ ಯಾರು ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆ ಗುಟ್ಟನ್ನು ಅಕ್ಟೋಬರ್ 1ರಂದು ರಟ್ಟು ಮಾಡಲಿದ್ದಾರಂತೆ.

    ಅರೆ.. ಸಿನಿಮಾ ರಿಲೀಸ್ ಆಗೋದು ಅಕ್ಟೋಬರ್ 18ಕ್ಕೆ. ಅಕ್ಟೋಬರ್ 1ಕ್ಕೇ ಹೇಗೆ ರಟ್ಟು ಮಾಡ್ತಾರೆ ಅಂತಿರಾ..? ಅದು ಪ್ರೇಮ್ ಸ್ಟೈಲ್. ಅ.1ನೇ ತಾರೀಕು ಚಿತ್ರದ ಇನ್ನೊಂದು ಟ್ರೈಲರ್ ರಿಲೀಸ್ ಆಗಲಿದೆ. ಅದು ಶಿವಣ್ಣ ಮತ್ತು ಸುದೀಪ್ ಪಾತ್ರಗಳು ಮುಖಾಮುಖಿಯಾಗುವ ಟ್ರೈಲರ್. ಅದನ್ನು ಸೂಕ್ಷ್ಮವಾಗಿ ನೋಡಿದರೆ ವಿಲನ್ ಯಾರು ಅನ್ನೋ ಸೀಕ್ರೆಟ್‍ಗೆ ಉತ್ತರ ಸಿಗಲಿದೆ ಎಂದಿದ್ದಾರೆ ಪ್ರೇಮ್.

    ಸಿ.ಆರ್.ಮನೋಹರ್ ನಿರ್ಮಾಣದ ಈ ಅದ್ಧೂರಿ ಸಿನಿಮಾದಲ್ಲಿ ಬಾಲಿವುಡ್, ಹಾಲಿವುಡ್ ತಾರೆಯರೆಲ್ಲ ನಟಿಸಿದ್ದಾರೆ. ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಯಾವಾಗ ಅನ್ನೋದು ಅಕ್ಟೋಬರ್ 2ರಂದು ಗೊತ್ತಾಗಲಿದೆಯಂತೆ.

  • ಶಿವಣ್ಣ, ಸುದೀಪ್ ಜೊತೆ ಡೈನಮಿಕ್ ಸ್ಟಾರ್

    devraj jouns villain team

    ದಿ ವಿಲನ್. 2018ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ. ಶಿವಣ್ಣ, ಸುದೀಪ್ & ಪ್ರೇಮ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್. ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಚಿತ್ರದ ತಾರಾಬಳಗದಲ್ಲಿ ಸ್ಟಾರ್‍ಗಳೇ ತುಂಬಿ ಹೋಗಿದ್ದಾರೆ. ಈಗ ಆ ತಾರಾಬಳಗಕ್ಕೆ ಡೈನಮಿಕ್ ಸ್ಟಾರ್ ದೇವರಾಜ್ ಸೇರ್ಪಡೆಯಾಗಿದ್ದಾರೆ.

    ಚಿತ್ರದಲ್ಲಿ ಆ್ಯಮಿ ಜಾಕ್ಸನ್. ನಾಯಕಿಯ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆಯಂತೆ. ತಮಿಳು ನಟಿ ಸರಣ್ಯ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೆಲ್ಲರ ನಡುವೆ ದೇವರಾಜ್ ಅವರಿಗೆ ಅತ್ಯಂತ ಪ್ರಮುಖ ಪಾತ್ರವಿದೆ. ಅವರ ಪಾತ್ರವೇನು..? ವಿಶೇಷವೇನು..? ಎಂಬ ಗುಟ್ಟನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. 

    ಎಲ್ಲವನ್ನೂ ಗುಟ್ಟಾಗಿಟ್ಟೇ ಚಿತ್ರದ ಬಗ್ಗೆ ಲಕ್ಷಾಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಪ್ರೇಮ್, ಚಿತ್ರವನ್ನು ಏಪ್ರಿಲ್‍ನಲ್ಲಿ ರಿಲೀಸ್ ಮಾಡುವ ಸಿದ್ಧತೆಯಲ್ಲಿದ್ದಾರೆ.

  • ಶಿವಣ್ಣದ ಫೇವರಿಟ್ ವಿಲನ್ ಡೈಲಾಗ್ ಯಾವ್ದು..?

    shivanna talks about his favourite the villain dialogue

    ದಿ ವಿಲನ್ ಚಿತ್ರ ಥಿಯೇಟರುಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ವಿಲನ್ ತಂಡ ಸೆಲಬ್ರೇಷನ್‍ನಲ್ಲಿ ಮುಳುಗಿದೆ. ಚಿತ್ರದಲ್ಲಿ ಶಿವಣ್ಣನ ಫೇವರಿಟ್ ಡೈಲಾಗ್ ಯಾವ್ದು. ಶಿವಣ್ಣನ ಡೈಲಾಗ್ ಅಂದ್ಕೋಬೇಡಿ. ಶಿವಣ್ಣಂಗೆ ಸಿಕ್ಕಾಪಟ್ಟೆ ಇಷ್ಟ ಆಗಿರೋದು ಸುದೀಪ್ ಅವರು ಹೇಳೋ ಡೈಲಾಗ್.. ಓ..ಭ್ರಮೆ..

    ಮನೆಯಲ್ಲಿರೋವಾಗ, ವಾಕಿಂಗ್ ಮಾಡುವಾಗ..ಬೇರೆಯವರ ಜೊತೆ ಮಾತನಾಡುವಾಗ.. ಎಲ್ಲೆಲ್ಲೂ ಶಿವಣ್ಣ ಆ ಡೈಲಾಗ್ ಬಳಸ್ತಾನೇ ಇರ್ತಾರಂತೆ. ಅಷ್ಟರಮಟ್ಟಿಗೆ ಅದು ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ. ಅದೂ ಬಿಗ್‍ಬಾಸ್ ಮನೆಯಲ್ಲಿ.

    ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಶಿವರಾಜ್‍ಕುಮಾರ್, ಮುಂದಿನ ದಿನಗಳಲ್ಲಿ ಕೂಡಾ ಡೈರೆಕ್ಟರ್ ಪ್ರೇಮ್‍ಗೆ ಕಾಲ್‍ಶೀಟ್ ಕೊಡೋಕೆ ರೆಡಿ ಎಂದರು. ಪ್ರೇಮ್‍ಗೆ ತನ್ನ ತಪ್ಪನ್ನು ತಿದ್ದಿಕೊಳ್ಳೋ ಗುಣ ಇದೆ ಎಂದರು.

    ದಿ ವಿಲನ್ ಸಿನಿಮಾದ ನಿರ್ಮಾಪಕ ಸಿ.ಆರ್.ಮನೋಹರ್‍ಗೆ ಶಿವಣ್ಣ, ಸುದೀಪ್, ಪ್ರೇಮ್ ವಿಶೇಷ ಥ್ಯಾಂಕ್ಸ್ ಹೇಳಿದರು. ತೆಲುಗು ನಟ ಶ್ರೀಕಾಂತ್ ಕೂಡಾ ಸುದೀಪ್ ಅವರ ಆನೆ ಬಂತೊಂದಾನೆ ಡೈಲಾಗ್ ಹೇಳಿದ್ದು ಗಮನ ಸೆಳೆಯಿತು.

  • ಶಿವಣ್ಣಂದೂ ವಿಲನ್ ಲುಕ್ಕೇ.. ಹಾಗಾದ್ರೆ..

    shivarajkumar's look too creates curiosity

    ಕಿಚ್ಚ ಸುದೀಪ್ ಅವರ ಒಂದು ಫಸ್ಟ್ ಲುಕ್ ನೋಡಿದವರಿಗೆ, ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ಆದರೆ, ಒಂದ್ಸಲ ಈ ಫೋಟೋ ನೋಡಿ, ಇದು ಶಿವರಾಜ್‍ಕುಮಾರ್ ಅವರದ್ದು.

    ಸುದೀಪ್ ಬ್ಲಾಕ್ ಡ್ರೆಸ್ ಮತ್ತು ರಗಡ್ ಲುಕ್‍ನಲ್ಲಿದ್ದರೆ, ಶಿವಣ್ಣಂದು ಇನ್ನೂ ರಗಡ್ ಲುಕ್ಕು. ಉದ್ದನೆಯ ಕೂದಲು, ತಲೆಗೊಂದು ಸ್ಕಾರ್ಫ್, ಬಿಳಿಬಿಳಿಯಾದ ಕುರುಚಲು ಗಡ್ಡ, ಕಣ್ಣಿಗೆ ದಪ್ಪನೆಯ ಕನ್ನಡಕ, ಜೀನ್ಸ್ ಜಾಕೆಟ್ಟು.. 

    ಈ ಲುಕ್ ನೋಡಿದ್ರೆ, ಶಿವರಾಜ್ ಕುಮಾರ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ನಿರ್ದೇಶಕ ಪ್ರೇಮ್ ಬಾಯ್ಬಿಡಲ್ಲ, ಬಾಯಿಬಿಟ್ಟರೂ ಇನ್ನಷ್ಟು ಹುಳ ಬಿಡ್ತಾರೆ. ಕಿಚ್ಚ ಸುದೀಪ್ ಹೇಳಲ್ಲ, ಶಿವರಾಜ್‍ಕುಮಾರ್ ಕೂಡಾ ಡೈರೆಕ್ಟರ್ ಕಡೆ ಬೆರಳು ತೋರಿಸ್ತಾರೆ.

    ಒಟ್ಟಿನಲ್ಲಿ ದಿ ವಿಲನ್ ಸಿನಿಮಾ ಹೇಗಿದೆ ಅನ್ನೋದನ್ನ ತಿಳಿಯೋಕೆ ರಿಲೀಸ್‍ವರೆಗೂ ಕಾಯೋದು ಅನಿವಾರ್ಯ.

    Related Articles :-

    ಫಸ್ಟ್ ಲುಕ್ ತೋರಿಸಿ ಮತ್ತೆ ಹುಳ ಬಿಟ್ಟ ಪ್ರೇಮ್

  • ಶಿವಣ್ಣನ ಎಂಟ್ರಿಗೇ 6 ಹೀರೋಯಿನ್ಸ್..!

    shivarajkumar image from the villain

    ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಚಿತ್ರೀಕರಣ ಬಿರುಸಾಗಿ ಸಾಗುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ಎಂಟ್ರಿ ಸೀನ್ ಶೂಟಿಂಗ್ ಆಗಿದೆಯಂತೆ. ಈಗ ಆಗಬೇಕಿರೋದು ಶಿವಣ್ಣ ಎಂಟ್ರಿ ಸೀನ್. ಶಿವರಾಜ್ ಕುಮಾರ್ ಎಂಟ್ರಿ ಸೀನ್ ಕೂಡಾ ಗ್ರ್ಯಾಂಡ್ ಆಗಿಯೇ ಇರಬೇಕು ಎಂದು ಪ್ಲಾನ್ ಮಾಡಿರುವ ನಿರ್ದೇಶಕ ಪ್ರೇಮ್, ಅದಕ್ಕಾಗಿ 6 ನಾಯಕಿಯರನ್ನು ಸಂಪರ್ಕಿಸಿದ್ದಾರೆ.

    ಸಿನಿಮಾದಲ್ಲಿರುವುದು ಒಬ್ಬರೇ ನಾಯಕಿ. ಆ್ಯಮಿ ಜಾಕ್ಸನ್. ಆದರೆ, ಶಿವಣ್ಣನ ಇಂಟ್ರೊಡಕ್ಷನ್ ಸಾಂಗ್‍ನಲ್ಲಿ ಮಾತ್ರ 6 ಜನ ಹೀರೋಯಿನ್ಸ್ ಹೆಜ್ಜೆ ಹಾಕಲಿದ್ದಾರೆ. ಅವರು ಯಾರು ಅನ್ನೋದು ಪ್ರೇಮ್‍ಗಷ್ಟೇ ಗೊತ್ತಿರುವ ಸೀಕ್ರೆಟ್.

  • ಸಿನಿಮಾ ಕೆಟ್ಟದಾಗಿದ್ದರೆ ಬಯ್ಯಿರಿ, ಆದರೆ.. - ಜೋಗಿ ಪ್ರೇಮ್

    the villain bangkok shooting

    ಶಿವರಾಜ್‍ಕುಮಾರ್, ಸುದೀಪ್ ಒಟ್ಟಿಗೇ ನಟಿಸುತ್ತಿರುವ ದಿ ವಿಲನ್ ಸಿನಿಮಾ ತಡವಾಗುತ್ತಿರುವುದಕ್ಕೆ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರೇಮ್ ಸರಿಯಾಗಿ ಪ್ಲಾನ್ ಮಾಡಿಕೊಂಡು ಸಿನಿಮಾ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಾಗ, ಸ್ವತಃ ಕಿಚ್ಚ ಸುದೀಪ್ ಪ್ರೇಮ್ ರಕ್ಷಣೆಗೆ ಬಂದಿದ್ದರು. ಪ್ರೇಮ್ ಒಬ್ಬ ಫ್ಯಾಷನೇಟ್ ನಿರ್ದೇಶಕ. ಪ್ಲಾನ್ ಇಟ್ಟುಕೊಂಡೇ ಮಾಡಿದ್ದಾರೆ. ಕೆಲವು ಸಂದರ್ಭ, ಸನ್ನಿವೇಶ ಹಾಗೂ ವ್ಯಕ್ತಿಗಳಿಂದಾಗಿ ಚಿತ್ರ ನಿಧಾನವಾಯ್ತು. ಪ್ರೇಮ್‍ರನ್ನು ದೂಷಿಸಬೇಡಿ ಎಂದು ಅಭಿಮಾನಿಗಳಲ್ಲೂ ಕೇಳಿಕೊಂಡಿದ್ದರು. ಈಗ ಸ್ವತಃ ಪ್ರೇಮ್, ಈ ಎಲ್ಲ ಆಕ್ಷೇಪಗಳಿಗೆ ಉತ್ತರ ಕೊಟ್ಟಿದ್ದಾರೆ.

    ಈ ತಿಂಗಳ ಕೊನೆಯ ಹೊತ್ತಿಗೆ ಚಿತ್ರದ ಶೂಟಿಂಗ್ ಮುಗಿಯುವ ವಿಶ್ವಾಸ ಇದೆ. ಚಿತ್ರದ 3 ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಯಾರೊಬ್ಬರೂ ತಮ್ಮ ಸಿನಿಮಾ ನಿಧಾನವಾಗಲಿ ಎಂದು ಕೆಲಸ ಮಾಡುವುದಿಲ್ಲ. ದಿ ವಿಲನ್, ನಟರಷ್ಟೇ ಅಲ್ಲ, ತಂತ್ರಜ್ಞರೂ ಸೇರಿದಂತೆ ಸಂಪೂರ್ಣವಾಗಿ ಸ್ಟಾರ್‍ಗಳೇ ಇರುವ ಚಿತ್ರ. ಒಂದು ಏರುಪೇರಾದಾಗ, ಉಳಿದ ಎಲ್ಲವೂ ಏರುಪೇರಾಗುವುದು ಸಹಜ. ಏನೇ ಇರಲಿ, ಈ ತಿಂಗಳ ಕೊನೆಯ ಹೊತ್ತಿಗೆ ಸಿನಿಮಾ ಶೂಟಿಂಗ್ ಮುಗಿಸುತ್ತೇನೆ ಎಂದು ವಿಶ್ವಾಸದಿಂದ ಹೇಳಿದ್ದಾರೆ ಪ್ರೇಮ್.

    ಸಿನಿಮಾ ಚೆನ್ನಾಗಿಲ್ಲ ಅಂದ್ರೆ, ನನ್ನನ್ನು ಬಯ್ಯಿರಿ. ನಾನು ಟೀಕೆಗಳನ್ನು ಸ್ವೀಕರಿಸುತ್ತೇನೆ. ದಯವಿಟ್ಟು ವೈಯಕ್ತಿಕವಾಗಿ ಟೀಕಿಸಬೇಡಿ. ವೈಯಕ್ತಿಕ ಟೀಕೆಗಳು ನಿಜಕ್ಕೂ ನೋಯಿಸುತ್ತವೆ. ಸಿನಿಮಾ ನಿಧಾನವಾದರೆ, ಹಣ ಕಳೆದುಕೊಳ್ಳುವುದು ನಿರ್ಮಾಪಕರೇ ಹೊರತು, ಅಭಿಮಾನಿಗಳಲ್ಲ. ನಾನು ಸಿನಿಮಾವನ್ನು ಕೇವಲ ಅಭಿಮಾನಿಗಳಿಗಾಗಿ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಈ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಾರೆ. ಆ ವಿಶ್ವಾಸ ನನಗಿದೆ ಎಂದಿದ್ದಾರೆ ಪ್ರೇಮ್. 

    ಒಂದಂತೂ ಸತ್ಯ, ದಿ ವಿಲನ್ ವಿಳಂಬವಾಗುತ್ತಿರುವುದಕ್ಕೆ ಪ್ರೇಮ್ ಅವರನ್ನು ದೂಷಿಸುತ್ತಿರುವ ಅಭಿಮಾನಿಗಳು, ಒಂದು ಹಂತದಲ್ಲಿ ಗೌರವದ ಎಲ್ಲೆ ದಾಟಿದ್ದಾರೆ. ಅದು ಪ್ರೇಮ್ ಅವರನ್ನು ನೋಯಿಸಿದೆ. ಕನಸಿನ ಸಿನಿಮಾ ಮಾಡುತ್ತಿರುವ ಪ್ರೇಮ್, ಸಿನಿಮಾವನ್ನು ಯಶಸ್ವಿಯಾಗಿ, ಶೀಘ್ರವಾಗಿ ಮುಗಿಸಿ ತೆರೆಗೆ ತರಲಿ.

    Related Articles :-

    ವಿಲನ್ ವಿಳಂಬಕ್ಕೆ ಪ್ರೇಮ್ ಕಾರಣ ಅಲ್ಲ - ಸುದೀಪ್

    ದಿ ವಿಲನ್ ವಿಳಂಬಕ್ಕೆ ಯಾರು ಕಾರಣ..?

  • ಸುದೀಪ್ ಬಗ್ಗೆ ಹೆಮ್ಮೆ ಪಡಬೇಕು - ಶಿವಣ್ಣ

    sudeep shivarajkumar praise each other

    ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ಯಾರೀ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದವರು ಸುದೀಪ್ ಮತ್ತು ಪ್ರೇಮ್. ಈ ವೇಳೆ ಸುದೀಪ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಶಿವರಾಜ್‍ಕುಮಾರ್, ಸುದೀಪ್ ಈಗ ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಹ್ಯಾಟ್ಸ್ ಆಫ್ ಟು ಯೂ ಸುದೀಪ್. ಕರ್ನಾಟಕದಲ್ಲಿ ಇಂತಹ ಆ್ಯಕ್ಟರ್ ಇರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ಇದು ಶಿವರಾಜ್‍ಕುಮಾರ್ ಹೇಳಿದ ಮಾತು.

    ಗಾಂಧಿನಗರದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ ಕಣ್ರಿ ಎನ್ನುವವರಿಗೆ ಕನ್ನಡ ಚಿತ್ರರಂಗದ ಕಲಾವಿದರು ಹಲವು ಬಾರಿ ಇಂತಹ ಉತ್ತರ ಕೊಟ್ಟಿದ್ದಾರೆ. ಅಂದಹಾಗೆ ಇಷ್ಟೆಲ್ಲ ಹೊಗಳಿದ ಶಿವರಾಜ್‍ಕುಮಾರ್‍ಗೆ ಸುದೀಪ್ ಅದೇ ಶೋನಲ್ಲಿ ಒಂದು ಸೀರಿಯಸ್ಸಾದ ಸಲಹೆಯನ್ನೂ ಕೊಟ್ಟಿದ್ದಾರೆ. ಟೈಟಲ್ ಕೇಳುತ್ತಿದ್ದ ಹಾಗೆಯೇ ಕಾಲ್‍ಶೀಟ್ ಕೊಡೋದನ್ನು ನಿಲ್ಲಿಸಬೇಕು. ಇದು ಸುದೀಪ್ ಶಿವರಾಜ್‍ಕುಮಾರ್‍ಗೆ ಕೊಟ್ಟಿರುವ ಸಲಹೆ. ಶಿವರಾಜ್‍ಕುಮಾರ್ ಪಾಲಿಸ್ತಾರಾ..?

     

  • ಸುದೀಪ್ ಮೆಚ್ಚಿದ ಜೋಗಿ ಪ್ರೇಮ್‍ರ ಆ ಗುಣ

    the villain shooting image in chikkamangalur

    ಜೋಗಿ ಪ್ರೇಮ್ ನಿರ್ದೇಶನದಲ್ಲಿ ದಿ ವಿಲನ್ ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್‍ಗೆ ಅವರ ಜೊತೆ ಕೆಲಸ ಮಾಡಿದ ಮೇಲೆ ತಾವು ಕೇಳಿದ್ದೇ ಬೇರೆ. ಇರುವ ಪ್ರೇಮ್ ಅವರೇ ಬೇರೆ ಎಂದು ಗೊತ್ತಾಗಿದೆಯಂತೆ. ಪ್ರೇಮ್ ಬಗ್ಗೆ ಅವರು ತುಂಬಾ ಬಿಲ್ಡಪ್ ಕೊಡ್ತಾರೆ. ಶೋ ಅಪ್ ಮಾಡ್ತಾರೆ ಅಂತಾ ಕೇಳಿದ್ದೆ. ಆದರೆ, ಅವರ ನಿರ್ದೇಶನದ  ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ ಗೊತ್ತಾಯ್ತು. ಅವರು ತುಂಬಾ ಫ್ಯಾಷನೇಟ್. ಚಿತ್ರದ ಪ್ರತಿ ಫ್ರೇಂ ಕೂಡಾ ಹೀಗೇ ಬರಬೇಕು ಎಂದು ಬಯಸುತ್ತಾರೆ. ಅವರು ಬಯಸಿದ್ದು ಸಿಗುವವರೆಗೆ ಬಿಡುವುದೇ ಇಲ್ಲ ಎಂದು ಶಹಬ್ಬಾಸ್‍ಗಿರಿ ಕೊಟ್ಟಿದ್ದಾರೆ ಸುದೀಪ್.

    ಪ್ರೇಮ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸೋದಿಲ್ಲ. ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ. ಯಾರೊಬ್ಬರಿಗೂ ಬಯ್ಯಲ್ಲ. ಆದರೆ, ತನಗೆ ಬೇಕಾದ ಅಷ್ಟೂ ಕೆಲಸವನ್ನು ಪ್ರೀತಿಯಿಂದಲೇ ಮಾಡಿಸಿಕೊಂಡುಬಿಡ್ತಾರೆ ಅಂತಾರೆ ಸುದೀಪ್. ಸೆಟ್‍ನಲ್ಲಿ ಎಷ್ಟೋ ಬಾರಿ ಸುದೀಪ್ ಅವರೇ ಬೈದು ಊಟ ಮಾಡಿಸಿದ್ದೂ ಇದೆಯಂತೆ.

    ಇನ್ನು ಶಿವರಾಜ್ ಕುಮಾರ್ ಜೊತೆಗಿನ ಅನುಭವನ್ನೂ ಹಂಚಿಕೊಂಡಿದ್ದಾರೆ ಸುದೀಪ್. ಶಿವಣ್ಣ ಸೆಟ್‍ಗೆ ಯಾವಾಗ ಬರ್ತಾರೆ..ಯಾವಾಗ ಹೋಗ್ತಾರೆ ಗೊತ್ತೇ ಅಗಲ್ಲ. ಅಹಂ ಇಲ್ಲ. ಅವರ ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತೆ ಎಂದಿದ್ದಾರೆ ಸುದೀಪ್.

    ಇನ್ನು ಚಿತ್ರದ ಕಥೆ, ಪಾತ್ರದ ಬಗ್ಗೆ ಸುದೀಪ್ ಏನನ್ನೂ ಬಾಯ್ಬಿಡಲ್ಲ. ನಂಗೇನೂ ಗೊತ್ತಿಲ್ಲ. ಪ್ರೇಮ್ ಏನ್ ಹೇಳ್ತಿದ್ದಾರೋ, ಅಷ್ಟನ್ನು ಮಾತ್ರ ಮಾಡ್ತಿದ್ದೇನೆ ಅಂತಾರೆ ಸುದೀಪ್. ಅಫ್‍ಕೋರ್ಸ್, ಸುದೀಪ್ ಏನೇ ಹೇಳಿದರೂ, ಕಥೆ ಮತ್ತು ಪಾತ್ರದ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ಸುದೀಪ್ ಸಿನಿಮಾ ಒಪ್ಪಿಕೊಳ್ಳಲ್ಲ ಎನ್ನುವುದು ಚಿತ್ರರಂಗದ ಪ್ರತಿಯೊಬ್ಬರಿಗೂ ಗೊತ್ತು. 

  • ಸುದೀಪ್ ಸ್ಪೀಕಿಂಗ್.. ವಿಲನ್ ಲಾಫಿಂಗ್..

    sudeep talks about the villain moments

    ಶಿವಣ್ಣನ ಮಗಳ ಮದುವೆ ಆಯ್ತು. ಅವರೀಗ ಅಜ್ಜ ಆಗೋ ಸಮಯ ಬಂತು. ಆದರೂ ಸಿನಿಮಾ ರಿಲೀಸ್ ಮಾಡ್ತಾ ಇಲ್ಲ. ಈ ಪ್ರೇಮ್, ನನ್ನ ಮಗಳ ಮದುವೆವರೆಗೂ ಕಾಯ್ತಾನೇನೋ ಗೊತ್ತಿಲ್ಲ. ನನ್ನ ಎರಡು ಬೆರಳು ಇಟ್ಟುಕೊಂಡೇ ಟೀಸರ್ ರಿಲೀಸ್ ಮಾಡಿ ಸುದ್ದಿ ಮಾಡಿದ್ರು ಪ್ರೇಮ್. ಅದೇನೋ ದೊಡ್ಡ ಸೌಂಡ್ ಮಾಡ್ತು. ಅದರ ಕಷ್ಟ ಏನು ಅಂಥಾ ನಿರ್ಮಾಪಕರಿಗಷ್ಟೇ ಗೊತ್ತು.

    ಪ್ರೇಮ್ ಕಥೆ ಹೇಳೋಕೆ ಒಂದ್ ವರ್ಷ ಮಾಡಿದ್ರು. ಇನ್ನೊಂದ್ ವರ್ಷ ಕ್ಲೈಮಾಕ್ಸ್ ಹೇಳಿದ್ರು. ಅದಾದ ಮೇಲೆ ಒಂದ್ ವರ್ಷ ಪ್ರೊಡ್ಯೂಸರ್ ಫಿಕ್ಸ್ ಮಾಡಿದ್ರು. ಆಮೇಲೆ ಗೊತ್ತಾಯ್ತು. ನಾನು ಶಿವಣ್ಣ ನಟಿಸ್ತಿದ್ದೀವಿ ಅಂಥಾ. ಆಮೇಲೆ, ನಾನಾಗ್ಲೀ, ಶಿವಣ್ಣ ಆಗಲೀ ಕಥೆ ಕೇಳಲೇ ಇಲ್ಲ.

    ಇದು ದಿ ವಿಲನ್ ಆಡಿಯೋ ರಿಲೀಸ್ ವೇಳೆ ಸುದೀಪ್ ಹೇಳಿದ ಮಾತುಗಳು. ಸುದೀಪ್ ಹಾಗೆ ಶಿವಣ್ಣ, ಪ್ರೇಮ್ ಇಬ್ಬರ ಕಾಲು ಎಳೆಯುತ್ತಾ, ವೇದಿಕೆಯಲ್ಲಿದ್ದವರನ್ನೆಲ್ಲ ನಕ್ಕು ನಗಿಸುತ್ತಾ ಹೋದರು. ಜೊತೆ ಜೊತೆಗೆ ವಿಲನ್ ಚಿತ್ರದ ಹಾಡುಗಳೂ ಹೊರಬಿದ್ದವು. ಪ್ರೇಮ್ ಅವರ ಬಿಲ್ಡಪ್ ಬಗ್ಗೆ ಸಮರ್ಥನೆ ಮಾಡಿಕೊಂಡ ಸುದೀಪ್, ಪ್ರೇಮ್ ಅವರ ಸಿನಿಮಾಗೆ ಬಿಲ್ಡಪ್ ಕೊಡೋದ್ರಲ್ಲಿ ತಪ್ಪೇನಿದೆ. ಅವರಲ್ಲಿ ಸಿನಿಮಾ ಬಗ್ಗೆ ಒಂದು ಪ್ಯಾಷನ್ ಇದೆ. ಹೀಗೆಲ್ಲ ಮಾತಾಡಿಕೊಳ್ಳೋವ್ರು ಕೈಲಾಗದವರು ಮಾತ್ರ. ಅಂಥಾದ್ದೊಂದು ಪ್ಯಾಷನ್ ಇಲ್ಲದೇ ಇದ್ರೆ, ಅವರ ಜೊತೆ ಶಿವಣ್ಣ ಮೂರು ಸಿನಿಮಾ ಮಾಡ್ತಾ ಇರಲಿಲ್ಲ. ದಿ ವಿಲನ್ ಏನಾಗುತ್ತೋ ಏನೋ.. ನೋಡಬೇಕು. ಆದರೆ, ಪ್ರೇಮ್ ವೆರಿ ಗುಡ್ ವರ್ಕರ್. ಪ್ರೇಮ್ ಬಗ್ಗೆ ನನ್ನ ಅಭಿಪ್ರಾಯ ಯಾವತ್ತಿಗೂ ಬದಲಾಗಲ್ಲ ಅಂದ್ರು ಸುದೀಪ್.

    ನಟಿ ಆಮಿ ಜಾಕ್ಸನ್‍ಗೆ ಪ್ರೇಮ್ ದೃಶ್ಯಗಳ ಬಗ್ಗೆ ವಿವರಣೆ ನೀಡುತ್ತಿದ್ದನ್ನು ಮನಸಾರೆ ಎಂಜಾಯ್ ಮಾಡಿ ಹೇಳಿದರು ಸುದೀಪ್.

    ಪ್ರೇಮ್ ಆಮಿ ಜಾಕ್ಸನ್ ಅವರನ್ನ ಏಮಿ ಜಾಕ್ಸನ್ ಅಂತಾನೇ ಕರೀತಿದ್ರಂತೆ. ಅವರು ಪ್ರೇಮ್ ಜೀ ಎಂದ್ರೆ,  ಯೆಸ್ ಅಮ್ಮಿ, ವಾಟ್ ಎನ್ನುತ್ತಿದ್ದರಂತೆ ಪ್ರೇಮ್. ಆಮಿ ಏನಾದ್ರೂ ಪಟಪಟ ಅಂಥಾ ಇಂಗ್ಲಿಷ್‍ನಲ್ಲಿ ಹೇಳಿಬಿಟ್ಟರೆ.. ಪ್ರೇಮ್ ಅಸಿಸ್ಟೆಂಟ್‍ಗಳನ್ನ ಕರೀತಿದ್ರಂತೆ. ನಿಮ್ಮಜ್ಜಿ ಬರ್ರಲೇ.. ಆಯಮ್ಮಂಗೆ ಸೀನ್ ಹೇಳ್ರೋ ಅನ್ನೋರಂತೆ. ಅವರೋ.. ಹೇಳಿ ಕೇಳಿ ಪ್ರೇಮ್ ಶಿಷ್ಯರು. ಕೊನೆಗೆ ಅದೂ ಫೇಲ್ ಆದಾಗ.. ಏಮಿ ಜಾಕ್ಸನ್ ಯು ಸೀ.. ಜಸ್ಟ್ ಯು ಫಾಲ್.. ಅಂಡ್ ಲುಕ್.. ಅಂಡ್ ಗೋ.. ದಟ್ಸ್ ಇಟ್ ಎಂದುಬಿಡ್ತಿದ್ದರಂತೆ. 

    ಇನ್ನೂ ಕೆಲವೊಮ್ಮೆ ಆಯಮ್ಮಂಗೆ ನೀನೇ ಸೀನ್ ಹೇಳಿಬಿಡು ಡಾರ್ಲಿಂಗ್ ಎಂದು ಸುದೀಪ್ ಬೆನ್ನು ಹತ್ತುತ್ತಿದ್ದರಂತೆ ಪ್ರೇಮ್. ನೀನೇ ಹೇಳು, ನಾನೇನು ನಿನ್ ಅಸಿಸ್ಟೆಂಟಾ ಅಂತಿದ್ರಂತೆ ಸುದೀಪ್. 

    ಪ್ರೇಮ್ ಇಂಗ್ಲಿಷ್ ಕೇಳಿದ್ರೆ, ಅಕ್ಸ್‍ಫರ್ಡ್ ಯುನಿವರ್ಸಿಟಿ ಬಾಗಿಲು ಮುಚ್ಚುತ್ತೆ ಎಂದು ನಕ್ಕರು ಸುದೀಪ್.

    ಆಡಿಯೋ ರಿಲೀವ್ ವೇಳೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ಶಿವರಾಜ್‍ಕುಮಾರ್, ಕೊಡಗಿನ ಸಂತ್ರಸ್ತರನ್ನು ಸ್ಮರಿಸಿದರು. ನಾನು ನಿರ್ದೇಶಕ ಹೇಳಿದಂತೆ ಕೇಳೋವ್ನು. ನಿರ್ದೇಶಕರು ಕಸ ಗುಡಿಸೋ ಪಾತ್ರ ಕೊಟ್ಟರೂ ಸೈ. ಮಾಡ್ತೀನಿ ಅಷ್ಟೆ ಎಂದರು. ರೆಬಲ್ ಸ್ಟಾರ್ ಅಂಬರೀಷ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ರು.

  • ಸುದೀಪ್, ಶಿವಣ್ಣರನ್ನು ಬಿಡ್ತಾನೇ ಇಲ್ಲ ಪ್ರೇಮ್

    the villain team

    ದಿ ವಿಲನ್. ಪ್ರೇಮ್ ನಿರ್ದೇಶನದ, ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಎಲ್ಲವೂ ಹೇಳಿದಂತೆಯೇ ಅಂದುಕೊಂಡಂತೆಯೇ ಆಗಿದ್ದರೆ, ಇಷ್ಟು ಹೊತ್ತಿಗೆ ಚಿತ್ರ ಕಂಪ್ಲೀಟ್ ಎಡಿಟಿಂಗ್ ಟೇಬಲ್ ಮೇಲಿರಬೇಕಿತ್ತು. ಹಾಗಾಗಿಲ್ಲ. ಹೀಗಾಗಿ ನಿರ್ದೇಶಕ ಪ್ರೇಮ್ ಎಂದಿನಂತೆ ಆರೋಪಕ್ಕೊಳಗಾಗಿದ್ದಾರೆ. ಪ್ರೇಮ್ ಅವರಿಂದಾಗಿ ಸುದೀಪ್ ಮತ್ತು ಶಿವಣ್ಣ ಬೇರೆಯವರಿಗೆ ಸಿಗ್ತಿಲ್ಲ ಅನ್ನೋದು ಅವರ ಮೇಲಿರೋ ದೂರು.

    ಆದರೆ ಇವುಗಳಿಗೆಲ್ಲ ಪ್ರೇಮ್ ಹೇಳ್ತಿರೋದೇ ಬೇರೆ. 3 ತಿಂಗಳಿಗೆ ಸಿನಿಮಾ ಮಾಡಿ ಮುಗಿಸೋಕೆ ಇದು ಒಂದೇ ಮನೆಯೊಳಗೆ ಶೂಟಿಂಗ್ ಆಗುತ್ತಿರುವ ಸಿನಿಮಾ ಅಲ್ಲ. 14 ಲೊಕೇಶನ್‍ಗಳಲ್ಲಿ ಶೂಟಿಂಗ್ ಆಗುತ್ತಿದೆ. ಇಬ್ಬರು ದೊಡ್ಡ ಸ್ಟಾರ್‍ಗಳ ಡೇಟ್ಸ್ ಹೊಂದಿಸೋದು ಸುಲಭ ಅಲ್ಲ. ಇದೆಲ್ಲದರ ಜೊತೆ ಆ್ಯಮಿ ಜಾಕ್ಸನ್ ಅವರ ವೀಸಾ ಸಮಸ್ಯೆ ಕೂಡಾ ಚಿತ್ರೀಕರಣ ತಡವಾಗಲು ಕಾರಣವಾಯಿತು ಅಂತಾರೆ ಪ್ರೇಮ್.

    ಇದೆಲ್ಲದರಿಂದ ನಿಜಕ್ಕೂ ಸಮಸ್ಯೆಯಾಗಿರುವುದು ಸುದೀಪ್‍ಗೆ. ಏಕೆಂದರೆ, ಸುದೀಪ್ ಕನ್ನಡಕ್ಕಷ್ಟೇ ಸೀಮಿತರಾಗಿರುವ ನಟ ಅಲ್ಲ. ತಮಿಳು, ತೆಲುಗು, ಹಾಲಿವುಡ್, ಕ್ರಿಕೆಟ್, ನಿಮಾಣ ಹೀಗೆ.. ಬಿಡುವಿಲ್ಲದೆ ತೊಡಗಿರುವ ನಟ. ಇಷ್ಟೆಲ್ಲದರ ನಡುವೆಯೂ ಸುದೀಪ್ ನಮಗೆ ತುಂಬಾ ಚೆನ್ನಾಗಿ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಪ್ರೇಮ್. ಈ ತಿಂಗಳಲ್ಲಿ ಸುದೀಪ್ ಭಾಗವನ್ನು ಮುಗಿಸ್ತಾರಂತೆ. ಅಲ್ಲಿಗೆ ಜನವರಿ ಅಂತ್ಯದೊಳಗೆ ಸುದೀಪ್ ಪ್ರೇಮ್‍ರಿಂದ ಮುಕ್ತರಾಗ್ತಾರೆ.

    ನಂತರ ಶಿವರಾಜ್ ಕುಮಾರ್ ಪೋರ್ಷನ್ ಶೂಟಿಂಗ್ ಶುರುವಾಗುತ್ತೆ. ಇಬ್ಬರೂ ಒಟ್ಟಿಗೇ ನಟಿಸುವ ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಗಿದಿರುವ ಕಾರಣ ನೋ ಪ್ರಾಬ್ಲಂ.

  • ಸೆನ್ಸಾರ್‍ಗೆ ಹೊರಟ ವಿಲನ್

    the villain reached censor office

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಜನಪ್ರಿಯಗೊಂಡಿವೆ. ಒಂದೊಂದು ಹಾಡೂ ಒಂದೊಂದು ರೀತಿ ಸ್ಪೆಷಲ್. ಹೀಗಿರುವಾಗಲೇ ಶೀಘ್ರದಲ್ಲೇ ರಿಲೀಸ್ ಡೇಟ್ ಪ್ರಕಟಿಸೋದಾಗಿ ಘೋಷಿಸಿದ್ದಾರೆ ನಿರ್ದೇಶಕ ಪ್ರೇಮ್.

    ಕಾಯುವಿಕೆ ಮುಗಿಯಿತು. ಅಭಿಮಾನಿಗಳೇ.. ಉಸಿರು ಬಿಗಿ ಹಿಡಿದುಕೊಳ್ಳಿ. ಚಿತ್ರ ಸೆನ್ಸಾರ್‍ಗೆ ಹೊರಟಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ ಜೋಗಿ ಪ್ರೇಮ್.

    ಸಿ.ಆರ್. ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರಕ್ಕೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂಬುದು ನಿರ್ವಿವಾದ.

  • ಸೆಪ್ಟೆಂಬರ್ 20ಕ್ಕೆ ದಿ ವಿಲನ್ ಹಬ್ಬ..?

    the villain to release on sep 20th

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾ, ರಿಲೀಸ್‍ಗೂ ಮೊದಲೇ ಹವಾ ಸೃಷ್ಟಿಸಿದೆ. ರಾಜ್ಯದ ಹಲವಾರು ಥಿಯೇಟರುಗಳಲ್ಲಿ ಈಗಾಗಲೇ ದಿ ವಿಲನ್ ನಮ್ಮ ಥಿಯೇಟರ್‍ಗೇ ಬರಲಿದೆ ಎಂಬ ಪೋಸ್ಟರ್‍ಗಳು ರಾರಾಜಿಸುತ್ತಿವೆ. ನಿರ್ಮಾಪಕ ಸಿ.ಆರ್.ಮನೋಹರ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ, ಇದುವರೆಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರಲೋಕಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ದಿ ವಿಲನ್ ಸಿನಿಮಾ, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗಲಿದೆ.

    ಅಲ್ಲಿಗೆ ಗೌರಿ ಗಣೇಶ ಹಬ್ಬವನ್ನು ಮುಗಿಸಿಕೊಂಡೇ ದಿ ವಿಲನ್ ಬರಲಿದ್ದಾನೆ. ಹಾಗೆಂದು ಸೆಪ್ಟೆಂಬರ್ 20ಕ್ಕೆ ರಿಲೀಸ್ ಆದರೂ, ದಿ ವಿಲನ್‍ಗೆ ಲಾಭಗಳೂ ಇವೆ. ಗೌರಿ ಗಣೇಶ ಹಬ್ಬದಂತೆಯೇ, 20ರ ನಂತರವೂ ಸಾಲು ಸಾಲು ರಜೆ ಸಿಗಲಿವೆ. ಸೆಪ್ಟೆಂಬರ್ 21ಕ್ಕೆ ಮೊಹರಂ ಹಬ್ಬ. ಸೆಪ್ಟೆಂಬರ್ 22, 4ನೇ ಶನಿವಾರ, ಬ್ಯಾಂಕ್ ರಜಾ. ಸೆಪ್ಟೆಂಬರ್ 21 ಭಾನುವಾರ. ಅಲ್ಲಿಗೆ ದಿ ವಿಲನ್‍ಗೆ ರಜೆಗಳ ಸೌಭಾಗ್ಯವೂ ಸಿಗಲಿದೆ. ಅಬ್ಬರಕ್ಕೆ ಅಷ್ಟು ಸಾಕಲ್ಲವೇ.

    ಆ್ಯಮಿ ಜಾಕ್ಸನ್ ನಾಯಕಿಯಾಗಿರುವ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಅಕ್ಷರಶಃ ಮೋಡಿ ಮಾಡಿಬಿಟ್ಟಿವೆ. ಸಿನಿಮಾ ರಿಲೀಸ್‍ಗೆ ಅಭಿಮಾನಿಗಳೇ ಏನು, ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.

  • ಸೆಪ್ಟೆಂಬರ್‍ನಲ್ಲಿ ವಿಲನ್, ಕೆಜಿಎಫ್ ಮುಖಾಮುಖಿ..?

    will the villain and kgf release together?

    ಶಿವರಾಜ್‍ಕುಮಾರ್, ಸುದೀಪ್, ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಬಿನೇಷನ್ ಸಿನಿಮಾ ದಿ ವಿಲನ್. ಶೂಟಿಂಗ್ ಮುಗಿಸಿ ಸೆನ್ಸಾರ್ ಮೆಟ್ಟಿಲೇರಿದೆ.

    ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಕೆಜಿಎಫ್ ಚಿತ್ರ ಕೂಡಾ ಶೂಟಿಂಗ್ ಮುಗಿಸಿ, ಎಡಿಟಿಂಗ್ ಫೈನಲ್ ಸ್ಟೇಜ್‍ನಲ್ಲಿದೆ.

    ಎರಡೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಚಿತ್ರಗಳು ಸೆಪ್ಟೆಂಬರ್‍ನಲ್ಲಿಯೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಲನ್ ಚಿತ್ರದ ಆಡಿಯೋ ರಿಲೀಸ್‍ಗೆ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದರೆ ಅಚ್ಚರಿಯಿಲ್ಲ. ಕೆಜಿಎಫ್ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಸೆಪ್ಟೆಂಬರ್ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳದ್ದೇ ಹಬ್ಬ.

  • ಹಸಿರು ಹಂಚಿದರು ಜೋಗಿ ಪ್ರೇಮ್

    the villain team

    ಶಿವರಾಜ್ ಕುಮಾರ್ ಮತ್ತು ಸುದೀಪ್ ಎಂಬ ಎರಡು ಧೃವತಾರೆಗಳನ್ನು ಒಂದುಗೂಡಿಸಿ, ದಿ ವಿಲನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಪ್ರೇಮ್, ಈ ಬಾರಿಯ ದೀಪಾವಳಿಯನ್ನು ಹಸಿರು ಹಂಚುವ ಮೂಲಕ ಆಚರಿಸಿದ್ದಾರೆ. ದಿ ವಿಲನ್ ಚಿತ್ರತಂಡದ ಸದಸ್ಯರಿಗೆ ಸಸಿ ಹಂಚಿದ್ದಾರೆ.

    ಇದಕ್ಕೆಲ್ಲ ಯಾರು ಕಾರಣ ಎಂದರೆ, ಅವರ ಮಗನಂತೆ, ದೀಪಾವಳಿಗೆ ಯಾವ ಪಟಾಕಿ ಬೇಕು ಎಂದು ಕೇಳಿದಾಗ, ಅವರ ಮಗ ಬೇಡ ಪಪ್ಪಾ, ಪೊಲ್ಯೂಷನ್ ಆಗುತ್ತೆ. ಬೊಂಬೆ ತಂದುಕೊಡು ಎಂದನಂತೆ. ಮಗ ಸೂರ್ಯ ಹೇಳಿದ ಮಾತು ಪ್ರೇರನೆಯಾಯಿತು. ಹೀಗಾಗಿ ಚಿತ್ರತಂಡದವರಿಗೂ ಪಟಾಕಿ ಬದಲು, ಸಸಿ ಹಂಚಿದೆ ಎಂದಿದ್ದಾರೆ ಪ್ರೇಮ್.