` the villain, - chitraloka.com | Kannada Movie News, Reviews | Image

the villain,

  • ಮಲ್ಟಿಪ್ಲೆಕ್ಸ್ ವಿರುದ್ಧ ಸಿಡಿದೆದ್ದ ಶಿವಣ್ಣ

    shivarajkumar expresses anger multiplex

    ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‍ಗಳು ರಾಜಕೀಯ ಮಾಡುತ್ತವೆ. ಪರಭಾಷೆ ಚಿತ್ರಗಳನ್ನು ನೋಡುವ ರೀತಿಗೂ, ಕನ್ನಡ ಚಿತ್ರಗಳನ್ನು ನೋಡುವ ರೀತಿಗೂ ವ್ಯತ್ಯಾಸಗಳಿವೆ. ಕನ್ನಡ ಚಿತ್ರ ಸಕ್ಸಸ್ ಆಗಿದ್ದರೂ, ಏಕಾಏಕಿ ಶೋ ರದ್ದು ಮಾಡಿ, ದಿಢೀರ್ ಎಂದು ಬೇರೆ ಭಾಷೆ ಸಿನಿಮಾ ಪ್ರದರ್ಶಿಸಿದ ಘಟನೆಗಳೂ ಜರುಗಿವೆ. ಕನ್ನಡ ಚಿತ್ರಗಳಿಗೆ ಶೋ ಕೊಡದೆ ಸತಾಯಿಸುವವರಿಗೆನೂ ಕೊರತೆಯಿಲ್ಲ. ಇದು ಇಂದು ನಿನ್ನೆಯ ಕಥೆಯೇನೂ ಅಲ್ಲ. ಆದರೆ, ಈ ಬಾರಿ ಮಲ್ಟಿಪ್ಲೆಕ್ಸ್‍ಗಳ ವಿರುದ್ಧ ಗುಡುಗಿರುವುದು ಶಿವರಾಜ್‍ಕುಮಾರ್.

    ಈ ಬಾರಿ ಇಂತಹ ಅನುಭವ ಅವರ ಚಿತ್ರಕ್ಕೂ ಆಗುತ್ತಿದೆ. ಮಲ್ಟಿಪ್ಲೆಕ್ಸ್‍ಗಳು ಕನ್ನಡ ಚಿತ್ರ ನಿರ್ಮಾಪಕರಿಗೆ ಬೇರೆ ಭಾಷೆಯ ಚಿತ್ರಗಳಿಗಿಂತ ಕಡಿಮೆ ಶೇರ್ ಕೊಡುತ್ತಾರೆ. ಬೇರೆ ಭಾಷೆಯವರಿಗೆ ನೀಡಿದಂತೆಯೇ ಕನ್ನಡ ಚಿತ್ರಗಳಿಗೂ ಶೇರ್ ಕೊಡಿ ಎಂದು ಮನವಿ ಮಾಡಿತ್ತು ದಿ ವಿಲನ್ ಚಿತ್ರತಂಡ. ಆದರೆ, ಇದಕ್ಕೆ ಸ್ಥಳೀಯ ಮಲ್ಟಿಪ್ಲೆಕ್ಸ್‍ನವರು ಬಿಟ್ಟರೆ, ಬೇರೆಯವರು ಕ್ಯಾರೇ ಎಂದಿಲ್ಲ. ಇದರ ವಿರುದ್ಧ ನಿರ್ದೇಶಕ ಜೋಗಿ ಪ್ರೇಮ್ ಧಿಕ್ಕಾರವನ್ನೇ ಕೂಗಿದ್ದರು. ಈಗ ಶಿವಣ್ಣ ಮಾತನಾಡಿದ್ದಾರೆ.

    ಚೆನ್ನಾಗಿ ಹೋಗುತ್ತಿರುವ ಕನ್ನಡ ಚಿತ್ರಗಳ ಶೋಗಳನ್ನು ಏಕಾಏಕಿ ರದ್ದು ಮಾಡಿದರೆ, ಅದರ ವಿರುದ್ಧ ನಾನು ನಿಲ್ಲಬೇಕಾಗುತ್ತದೆ. ಬೇರೆ ಭಾಷೆಗಳವರಿಗೆ ಕೊಡುವ ಪ್ರಾಧಾನ್ಯತೆಯನ್ನು ಕನ್ನಡಿಗರಿಗೂ ಕೊಡಿ. ಬಿಸಿನೆಸ್ ಮಾಡೋಕೆ ಎಂದು ಬಂದವರು ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕøತಿಗೆ ಗೌರವ ಕೊಡಬೇಕು. ನೀವು ಹೇಳಿದ್ದನ್ನು ಕೇಳಿಕೊಂಡು ಇರೋಕೆ ನಾವೇನೂ ಮುಠ್ಠಾಳರಲ್ಲ ಎಂದಿದ್ದಾರೆ ಶಿವಣ್ಣ.

    ಮಲ್ಟಿಪ್ಲೆಕ್ಸ್‍ಗಳ ಆಟಾಟೋಪದ ವಿರುದ್ಧ ಈ ಬಾರಿ ದೊಡ್ಡ ಸಮರವೊಂದು ಶುರುವಾಗಿದೆ. 

  • ಮಲ್ಟಿಪ್ಲೆಕ್ಸ್ ವಿವಾದ - ನಿರ್ದೇಶಕ ಪ್ರೇಮ್ ಅಕ್ರೋಶ

    prem expresses his anger against multiplexes

    ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಬುಕಿಂಗ್ ಇಂದಿನಿಂದ ಶುರುವಾಗಲಿದೆ. ಶಿವಣ್ಣ-ಸುದೀಪ್ ಕಾಂಬಿನೇಷನ್‍ನ ಈ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ದೊಡ್ಡ ಬಜೆಟ್ ಚಿತ್ರವೂ ಆಗಿರೋದ್ರಿಂದ ಮಲ್ಟಿಪ್ಲೆಕ್ಸ್‍ಗಳಲ್ಲಿ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಷೇರು ಬದಲಾವಣೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು ನಿರ್ದೇಶಕ ಪ್ರೇಮ್. ಬೇರೆ ಭಾಷೆಯ ನಿರ್ಮಾಪಕರಿಗೆ ನೀಡುವಂತೆ ಕನ್ನಡ ನಿರ್ಮಾಪಕರಿಗೂ 60:40 ಷೇರು ನೀಡುವಂತೆ ಮನವಿ ಮಾಡಿದ್ದರು. ಈ ಕುರಿತು ಫಿಲಂ ಚೇಂಬರ್‍ನಲ್ಲಿ ಸಭೆಯನ್ನೂ ನಡೆಸಲಾಗಿತ್ತು.

    ಆದರೆ, ಬುಕ್ಕಿಂಗ್ ಶುರುವಾಗುತ್ತಿದ್ದರೂ ಮಲ್ಟಿಪ್ಲೆಕ್ಸ್ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಸಭೆಯಲ್ಲಿ ಬಹುತೇಕ ಒಪ್ಪಿಕೊಂಡಂತೆ ಕಾಣಿಸಿದ್ದ ಮಲ್ಟಿಪ್ಲೆಕ್ಸ್ ಮಾಲೀಕರು ನಂತರ ಬೇರೆಯೇ ಮಾತನಾಡುತ್ತಿದ್ದಾರೆ. ಈ ಕುರಿತು ಆಕ್ರೋಶಗೊಂಡಿರುವ ನಿರ್ದೇಶಕ ಪ್ರೇಮ್, ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ಮನವಿ ಮಾಡಿದ್ದಾರೆ.

  • ಮುಖ್ಯಮಂತ್ರಿಯಿಂದ ದಿ ವಿಲನ್ ಟೀಸರ್ ರಿಲೀಸ್

    the villain teaser to release today

    ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಯೇ ಚಿತ್ರದ ರಿಲೀಸ್‍ನಷ್ಟು ಹವಾ ಸೃಷ್ಟಿಸಿದೆ.  ಜೂನ್ 28 ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು 500 ರೂ.ನ ಟಿಕೆಟ್ ಖರೀದಿಸಿ ಟೀಸರ್ ನೋಡೋಕೆ ರೆಡಿಯಾಗುತ್ತಿದ್ದಾರೆ. ಟೀಸರ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿಡುಗಡೆ ಮಾಡಲಿದ್ದಾರಂತೆ.

    ಟೀಸರ್ ಶೋಗೆ 500 ರೂ. ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಆ ಹಣವನ್ನು ಚಿತ್ರರಂಗದ ಅಶಕ್ತ ಕಲಾವಿದರು, ನಿರ್ದೇಶಕರಿಗೆ ನೀಡಲು ನಿರ್ಧರಿಸಲಾಗಿದೆ. ಆ ದಿನವೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಲೇ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.

    ವಿದೇಶದಲ್ಲಿ ಚಿತ್ರೀಕರಣದಲ್ಲಿರುವ ಕಾರಣ, ಸುದೀಪ್ ಇರುವುದಿಲ್ಲ. ಉಳಿದಂತೆ ಚಿತ್ರದ ಹೀರೋ ಶಿವಣ್ಣ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗ ಅಲ್ಲಿರುತ್ತೆ. ಸಿ.ಆರ್.ಮನೋಹರ್ ನಿರ್ಮಾಣ, ಜೋಗಿ ಪ್ರೇಮ್ ನಿರ್ದೇಶನದ ಅದ್ಧೂರಿ ಚಿತ್ರ, ಬಿಡುಗಡೆಗೆ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.

  • ರಕ್ಷಿತಾ ನನ್ನ ಪಾಲಿಗೆ ಅಂಬರೀಷ್ ಇದ್ದಂತೆ..!

    prems' interesting title to rakshitha

    ಕ್ರೇಜಿ ಕ್ವೀನ್ ರಕ್ಷಿತಾ, ದಿ ವಿಲನ್ ಚಿತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ವಾಪಸ್ ಬಂದಿರೋದು ಗೊತ್ತೇ ಇದೆ. ರಕ್ಷಿತಾ ಅತ್ಯುತ್ತಮವಾಗಿ ಡಬ್ಬಿಂಗ್ ಮಾಡುತ್ತಿದ್ದಾರಂತೆ. ರಕ್ಷಿತಾ ಅವರ ವಾಯ್ಸ್ ಆ್ಯಮಿ ಜಾಕ್ಸನ್ ಪಾತ್ರಕ್ಕೆ ತುಂಬಾನೇ ಸೂಟ್ ಆಗುತ್ತಿದೆಯಂತೆ. ಅಷ್ಟರಮಟ್ಟಿಗೆ ನಿರ್ದೇಶಕ ಪ್ರೇಮ್ ಹ್ಯಾಪಿ. ಆದರೆ, ಪ್ರೇಮ್‍ಗೆ ರಕ್ಷಿತಾ ಅವರನ್ನು ನಿಭಾಯಿಸೋದು ರೆಬಲ್‍ಸ್ಟಾರ್ ಅಂಬರೀಷ್ ಅವರನ್ನು ನಿಭಾಯಿಸುವಷ್ಟೇ ಕಷ್ಟವಾಗಿದೆಯಂತೆ.

    ರಕ್ಷಿತಾರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಾಕೋದೂ ಒಂದೇ. ರೆಬಲ್‍ಸ್ಟಾರ್ ಅಂಬರೀಷ್ ಅವರನ್ನ ನಿಭಾಯಿಸೋದೂ ಒಂದೇ. ರಕ್ಷಿತಾ ನನ್ನ ಪಾಲಿಗೆ ರೆಬಲ್‍ಸ್ಟಾರ್. ಅವರು ಬಂದಾಗಲೇ ನಾವು ರೆಡಿಯಾಗಿ ಡಬ್ಬಿಂಗ್ ಮಾಡಿಕೊಳ್ಳಬೇಕು. ಆದರೆ, ಡಬ್ಬಿಂಗ್ ಚೆನ್ನಾಗಿ ಮಾಡುತ್ತಿದ್ದಾರೆ. ದಿನಕ್ಕೆ ಎರಡು ಮೂರು ದೃಶ್ಯಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ ಅಂತಾರೆ ಪ್ರೇಮ್.

  • ರಾಗಿಣಿ ತಂಗಿ ಟೆರರಿಸ್ಟ್ ಕಥೆ..!

    ragini gets new sister in the villain

    ರಾಗಿಣಿ ದ್ವಿವೇದಿ ಅಭಿನಯದ, ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ ಟೆರರಿಸ್ಟ್. ಮುಂದಿನ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ರಾಗಿಣಿಯವರದ್ದು, ಮುಸ್ಲಿಂ ಹುಡುಗಿ ರೇಷ್ಮಾ ಎಂಬ ಹೆಸರಿನ ಪಾತ್ರ. ಭಯೋತ್ಪಾದನೆಯ ಹಿನ್ನೆಲೆ ಹೊಂದಿರುವ ಚಿತ್ರದಲ್ಲಿ ರಾಗಿಣಿಗೊಬ್ಬ ತಂಗಿಯಿದ್ದಾರೆ. ಮೀನಾಕ್ಷಿ. 

    ಮೀನಾಕ್ಷಿ ಎಂದರೆ ಯಾರು ಎಂಬ ಪ್ರಶ್ನೆ ಮೂಡೋದು ಸಹಜ. ಮೀನಾಕ್ಷಿ ಮದುವೆ ಧಾರಾವಾಹಿ ನೆನಪಿಸಿಕೊಂಡರೆ, ಮೀನಾಕ್ಷಿ ಥಟ್ಟಂತ ನೆನಪಾಗ್ತಾರೆ. ಇದು ಅವರಿಗೆ ಮೊದಲ ಸಿನಿಮಾ. 

    ರಾಗಿಣಿ ಜೊತೆ ನಟಿಸಬೇಕು ಎಂದಾಗ ಮೊದ ಮೊದಲು ಆತಂಕವಾಗಿದ್ದು ನಿಜ. ಆದರೆ, ಈಗ ಅವರು ನನಗೆ ಸೋದರಿಯೇ ಆಗಿಬಿಟ್ಟಿದ್ದಾರೆ. ಚಿತ್ರದಲ್ಲಿ ನನ್ನದು ಪಟಪಟಾಂತ ಮಾತನಾಡುವ ಹುಡುಗಿಯ ಪಾತ್ರ. ನನಗೆ ಹಲವಾರು ಮುಸ್ಲಿಂ ಗೆಳತಿಯರಿದ್ದಾರೆ. ಹೀಗಾಗಿ ಚಿತ್ರದಲ್ಲಿ ನಟಿಸುವುದು ಕಷ್ಟವೇನೂ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಮೀನಾಕ್ಷಿ.

  • ರಿಲೀಸ್‍ಗೂ ಮೊದಲೇ ದುಬೈಯಲ್ಲಿ ವಿಲನ್ ಅಬ್ಬರ

    the villain

    ದಿ ವಿಲನ್, ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‍ನ ಈ ಚಿತ್ರ ಬಿಡುಗಡೆಗೂ ಮೊಲದೇ ಭರ್ಜರಿಯಾಗಿ ಸದ್ದು ಮಾಡ್ತಿದೆ. ಚಿತ್ರದ ಒಂದೊಂದು ಅಪ್‍ಡೇಟ್ ಕೂಡಾ ಕುತೂಹಲ ಕೆರಳಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸುದೀಪ್ ಹುಟ್ಟುಹಬ್ಬದ ದಿನ, ಒಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕ ಪ್ರೇಮ್.

    ಆ ಮೋಷನ್ ಪೋಸ್ಟರ್ ಈಗ ದುಬೈ, ಅಬುದಾಬಿ, ಶಾರ್ಜಾ, ಮಸ್ಕಟ್‍ಗಳಲ್ಲಿ ದಾಖಲೆ ಬರೆದಿದೆ. ಅಲ್ಲಿನ ಚಿತ್ರಮಂದಿರಗಳಲ್ಲಿ ಚಿತ್ರದ ಮೋಷನ್ ಪೋಸ್ಟರ್ ಪ್ರಸಾರವಾಗಿದೆ. ಕನ್ನಡ ಚಿತ್ರವೊಂದರ ಮೋಷನ್ ಪೋಸ್ಟರ್, 

    ವಿದೇಶದ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿರುವುದು ಇದೇ ಮೊದಲು. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಮನೋಹರ್ ಮತ್ತೊಂದು ದಾಖಲೆ ಬರೆದಿದ್ದಾರೆ.

  • ಲಂಡನ್ನಲ್ಲಿ ವಿಲನ್ ಜೊತೆ ಸೇರಿದ ಶಿವರಾಜ್ ಕುಮಾರ್

    shivarajkumar joins the viallian set

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ಶೂಟಿಂಗ್ ಟೀಂ ಸೇರ್ಪಡೆಯಾಗಿದ್ದಾರೆ. ಲಂಡನ್ನಲ್ಲಿ ಚಿತ್ರದ ಶೂಟಿಂಗ್ ನಡೀತಿದೆ. ವಿಭಿನ್ನ ಲುಕ್ನಲ್ಲಿರುವ ಶಿವರಾಜ್ ಕುಮಾರ್, ತಮ್ಮ ಭಾಗದ ದೃಶ್ಯಗಳ ಚಿತ್ರೀಕರಣದ ಬ್ಯುಸಿಯಾಗಿದ್ದಾರೆ.

    ಉದ್ದನೆಯ ಕೂದಲಿನ ಶಿವರಾಜ್ ಕುಮಾರ್ ಲುಕ್ ಎಲ್ಲರ ಕುತೂಹಲ ಕೆರಳಿಸುತ್ತಿದೆ. ಸುದೀಪ್, ಆಮಿ ಜಾಕ್ಸನ್ ಕೂಡಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ವಿಲನ್ ಚಿತ್ರದ ಒಂದೊಂದು ಹಂತವೂ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ನಿರೀಕ್ಷೆಯ ಭಾರ ಹೆಚ್ಚಿಸುತ್ತಲೇ ಇದೆ.

  • ಲಂಡನ್ನಲ್ಲಿ ಸುದೀಪ್-ಶಿವಣ್ಣ-ಪ್ರೇಮ್ ಬ್ಯುಸಿನೋ ಬ್ಯುಸಿ

    sudeep, shivarajkumar shooting together

    ದಿ ವಿಲನ್ ಚಿತ್ರದ ಚಿತ್ರೀಕರಣಕ್ಕೆ ಶಿವರಾಜ್ ಕುಮಾರ್ ಹಾಜರಾಗಿದ್ದೇ ತಡ, ಶೂಟಿಂಗ್ಗೆ ಮಿಂಚಿನ ವೇಗ ಸಿಕ್ಕಿಬಿಟ್ಟಿದೆ. ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

    thevillain_shooting1.jpgಲಂಡನ್ನ ಗ್ರೀನ್ವಿಚ್ ಪಾರ್ಕ್ನಲ್ಲಿ ಶಿವರಾಜ್ ಕುಮಾರ್, ಸುದೀಪ್, ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಒಟ್ಟಿಗೇ ಇರುವ ಫೋಟೋಗಳನ್ನು ನಿರ್ದೇಶಕ ಪ್ರೇಮ್ ಬಹಿರಂಗಪಡಿಸಿದ್ದಾರೆ. ನಟಿ ಆಮಿ ಜಾಕ್ಸನ್ ಕೂಡಾ ತಂಡದೊಂದಿಗೆ ಇದ್ದಾರೆ.

    thevillain_shooting3.jpgಅಭಿಮಾನಿಗಳಿಗೆ ಸುದೀಪ್ ಮತ್ತು ಶಿವಣ್ಣ ಒಟ್ಟಿಗೇ ಶೂಟಿಂಗ್ನಲ್ಲಿರುವ ಫೋಟೋಗಳನ್ನು ನೋಡೋದೇ ಖುಷಿ.

  • ಲವ್ವಾಗೋಯ್ತು ಹಾಡ್ ಮ್ಯಾಲೆ

    the villain 3rd song is also super hit

    ದಿ ವಿಲನ್ ಚಿತ್ರದ 3ನೇ ಹಾಡು ಬಿಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಲವ್ವಾಗೋಯ್ತೇ ನಿನ್‍ಮ್ಯಾಲೆ.. ಅನ್ನೋ ಹಾಡನ್ನು ಸ್ವತಃ ಪ್ರೇಮ್ ಬರೆದು ಹಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ಎರಡೂ ಮಜಬೂತಾಗಿವೆ.

    ಈ ಹಾಡನ್ನು ಪ್ರೇಮ್ ಅವರಿಂದಲೇ ಹಾಡಿಸಬೇಕು ಎಂದು ಮನಸ್ಸು ಮಾಡಿದ್ದು ಸ್ವತಃ ಸುದೀಪ್. ಆದರೆ, ಪ್ರೇಮ್ ಅವರನ್ನು ಒಪ್ಪಿಸೋದು ಅಷ್ಟು ಸುಲಭವಾಗಿರಲಿಲ್ಲ. ಹೇಗೋ ಕನ್ವಿನ್ಸ್ ಮಾಡಿಸಿ ಒಪ್ಪಿಸಿದ ಹಾಡು ಸಖತ್ತಾಗಿದೆ ಎಂದಿದ್ದಾರೆ ಸುದೀಪ್.

    ನೀವು ಬಿಡಿ.. ಎಂಥವರನ್ನೂ ಕನ್ವಿನ್ಸ್ ಮಾಡ್ತೀರಿ. ಈ ಹಾಡು ನಿಮಗೇ ಅರ್ಪಣೆ, ಲವ್ ಯು ಡಾರ್ಲಿಂಗ್ ಎಂದಿದ್ದಾರೆ ಪ್ರೇಮ್.

    ಈ ಮೊದಲು ಎರಡು ಬಿಲ್ಡಪ್ ಸಾಂಗ್ ರಿಲೀಸ್ ಮಾಡಿದ್ದ ಪ್ರೇಮ್, ಈ ಬಾರಿ ಪ್ರೇಮಗೀತೆ ತಂದಿದ್ದಾರೆ. ಎಂದಿನಂತೆ ಹಾಡುಗಳಲ್ಲಿ ಪ್ರೇಮ್ ಸ್ಪರ್ಶವಿದೆ. ನಾನು ರಾಮ, ನೀನೇನ್ ಸೀತೆ ಅಲ್ಲ. ಲವ್ವಾಗೋಯ್ತೇ ನಿನ್‍ಮ್ಯಾಲೆ, ನಾನೇನ್ ಕೃಷ್ಣ ಅಲ್ಲ, ನೀನೇನ್ ರುಕ್ಕು ಅಲ್ಲ, ಲವ್ವಾಗೋಯ್ತೇ ನಿನ್‍ಮ್ಯಾಲೆ ಅನ್ನೋ ಸಾಲುಗಳು ಇಷ್ಟವಾಗುತ್ತಿವೆ.

  • ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ V/s ಸುದೀಪ್..?

    sudeep vs sudeep ?

    ಆಗಸ್ಟ್ 24ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಕನ್ನಡಿಗರಿಗೆ ಡಬಲ್ ಧಮಾಕಾ ಕಾದಿದೆಯಾ..? ಶಿವರಾಜ್‍ಕುಮಾರ್-ಸುದೀಪ್ ಕಾಂಬಿನೇಷನ್‍ನ ದಿ ವಿಲನ್ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡೋದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದರು. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವ ಪ್ರೇಮ್, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತಿತ್ತಿದ್ದಾರೆ. ಚಿತ್ರ ಅಂತಿಮ ಹಂತದಲ್ಲಿದೆ. ಸಿನಿಮಾ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

    ಇನ್ನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ. ಬಹಳ ವರ್ಷಗಳ ನಂತರ ಅಂಬರೀಷ್ ನಾಯಕರಾಗಿ ನಟಿಸಿರುವ ಚಿತ್ರ. ಸುದೀಪ್ ಅವರೇ ಇಷ್ಟಪಟ್ಟು ಯಂಗ್ ಅಂಬರೀಷ್ ಆಗಿ ನಟಿಸಿರುವ ಚಿತ್ರ. ಚಿತ್ರ ರೆಡಿಯಾಗಿದ್ದು, ಸೆನ್ಸಾರ್ ಮುಂದೆ ಹೋಗೋ ಸಿದ್ಧತೆಯಲ್ಲಿದೆ. ಆ ಚಿತ್ರವೂ ಆಗಸ್ಟ್ 24ಕ್ಕೆ ರಿಲೀಸ್ ಆದರೆ ಅಚ್ಚರಿಯಿಲ್ಲ.

    ಸಿ.ಆರ್.ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರವನ್ನು ಕಾಂಬಿನೇಷನ್ ಕಾರಣಕ್ಕೆ ಇಡೀ ಕರ್ನಾಟಕ ಎದುರು ನೋಡುತ್ತಿದೆ. ಇದೇ ವೇಳೆ ಜಾಕ್ ಮಂಜು ನಿರ್ಮಾಣದ ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರ.. ಅಂಬರೀಷ್-ಸುದೀಪ್ ಕಾರಣಕ್ಕೇ ಕ್ರೇಜ್ ಸೃಷ್ಟಿಸಿದೆ. ಹಬ್ಬ ಆಗುತ್ತಾ..? ಕಾದು ನೋಡೋಣ..

  • ವಿಲನ್ ಚಿತ್ರದ ಕಾನ್ಸೆಪ್ಟ್ - ಹೀಗೂ ಉಂಟೆ..?

    the villain poster

    ಪೋಸ್ಟರ್ ತುಂಬಾ ಬೆಂಕಿ. ಬ್ಯಾಕ್‍ಗ್ರೌಂಡ್‍ನಲ್ಲಿ ರಣ ರಣ ರಾವಣ ಎಂಬ ಮ್ಯೂಸಿಕ್. ನೋಡ ನೋಡುತ್ತಿದ್ದಂತೆಯೇ ಶಿವರಾಜ್ ಕುಮಾರ್ ತಲೆ ಉರುಳಿ ಬರುತ್ತೆ. ಬೆನ್ನಲ್ಲೇ ಸುದೀಪ್ ತಲೆ ಉರುಳುತ್ತೆ. ದೇಹವೆಲ್ಲ ಬೆಂಕಿ..ಶಿವಣ್ಣದ ಮುಖದಿಂದ ಸುದೀಪ್ ಮುಖ ಹೊರಬಂದರೆ, ಸುದೀಪ್ ಮುಖದಿಂದ ಶಿವರಾಜ್ ಕುಮಾರ್ ಮುಖ ಚಿಮ್ಮುತ್ತೆ. ಇದು ದಿ ವಿಲನ್ ಚಿತ್ರದ ಮೋಶನ್ ಪೋಸ್ಟರ್.

    ಪ್ರತಿ ರಾಮನ ಒಳಗೂ ಒಬ್ಬ ರಾವಣ ಇರುತ್ತಾನೆ. ಪ್ರತಿಯೊಬ್ಬ ರಾವಣನಲ್ಲೂ ಒಬ್ಬ ರಾಮನಿರುತ್ತಾನೆ ಎಂಬ ಕಾನ್ಸೆಪ್ಟ್‍ನಲ್ಲಿ ಸಿದ್ಧವಾಗುತ್ತಿರುವ ಚಿತ್ರ ದಿ ವಿಲನ್. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಮೇಲೆ ಸ್ಯಾಂಡಲ್‍ವುಡ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದೆ. ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದೆ.

    Related Articles :-

    Motion poster Of 'The Villain' Released!

    ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

    The Villain Rights Sold

    ದಿ ವಿಲನ್, ಲಂಡನ್ ಶೂಟಿಂಗ್ ಮುಗೀತು - ಭಾನುವಾರದ ಕಿಚ್ಚನ ಪ್ಲಾನ್ ಏನು?

     

     

  • ವಿಲನ್ ಚಿತ್ರದಿಂದ ಹೊರಬಿದ್ದರಾ ಶ್ರುತಿ ಹರಿಹರನ್..?

    actress sruthi hariharan

    ದಿ ವಿಲನ್ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗಲೇ ಚಿತ್ರತಂಡದಿಂದ ನಟಿ ಶ್ರುತಿ ಹರಿಹರನ್ ಹೊರಬಿದ್ದಿರುವ ಸುದ್ದಿ ಬರುತ್ತಿದೆ. ಚಿತ್ರದಲ್ಲಿ ಶ್ರುತಿ ಹರಿಹರನ್, ಶಿವರಾಜ್ ಕುಮಾರ್ ಜೋಡಿಯಾಗಿ ನಟಿಸಬೇಕಿತ್ತು. ಅದು ಹಳ್ಳಿಯಲ್ಲಿರುವಾಗ ಶಿವರಾಜ್ ಕುಮಾರ್ ಅವರನ್ನು ಪ್ರೀತಿಸುವ ಹುಡುಗಿಯ ಪಾತ್ರ. ಕಥೆ ಇಷ್ಟವಾಗಿದ್ದ ಕಾರಣ, ಚಿಕ್ಕ ಪಾತ್ರವಾದರೂ ನಟಿಸಲು ಶ್ರುತಿ ಒಪ್ಪಿದ್ದರಂತೆ.

    ಈಗ ಬಂದಿರುವ ಮಾಹಿತಿ ಪ್ರಕಾರ, ನಿರ್ದೇಶಕ ಪ್ರೇಮ್, ಸಿನಿಮಾದ ಕಥೆಯಲ್ಲಿ ಶ್ರುತಿ ಅವರ ಪಾತ್ರವನ್ನೇ ತೆಗೆದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಿನಿಮಾ ತಂಡದಿಂದ ಶ್ರುತಿ ಹರಿಹರನ್ ಹೊರಬಿದ್ದಿದ್ದಾರಂತೆ. ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಇನ್ನೂ 25 ದಿನಗಳ ಶೂಟಿಂಗ್ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಬಹುದು.

  • ವಿಲನ್ ಚೆನ್ನಾಗಿಲ್ಲ ಎಂದವರಿಗೆ ಸುದೀಪ್ ಹೇಳಿದ್ದೇನು..?

    sudeep replies to people who disliked the villain

    ದಿ ವಿಲನ್. ರಾಜ್ಯಾದ್ಯಂತ ರಿಲೀಸ್ ಆಗಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಬ್ಬರೂ ಖುಷಿಯಾಗಿದ್ದಾರೆ. ತಾಯಿಯ ಸೆಂಟಿಮೆಂಟ್ ಪ್ಲೇ ಮಾಡಿರುವ ಜೋಗಿ ಪ್ರೇಮ್ ಗೆದ್ದುಬಿಟ್ಟಿದ್ದಾರೆ. ಸಿ.ಆರ್. ಮನೋಹರ್ ಮುಖದಲ್ಲಿ ಗೆಲುವಿನ ಸಂಭ್ರಮ. ಅಭಿಮಾನಿಗಳ ಶಿಳ್ಳೆ ಚಪ್ಪಾಳೆಯ ನಡುವೆ ವಿಲನ್ ಹ್ಯಾಪಿ ಹ್ಯಾಪಿ.

    ಹಾಗಂತ ಎಲ್ಲರೂ ಖುಷಿಯಾಗಿದ್ದಾರೆ ಎಂದರ್ಥವಲ್ಲ. ಇಡೀ ಸಿನಿಮಾ ಸ್ವಲ್ಪವೂ ಚೆನ್ನಗಿಲ್ಲ ಎಂದು ದೂರಿದವರೂ ಇದ್ದಾರೆ. ಅಂಥವರಿಗೆಲ್ಲ ಸುದೀಪ್ ಕೊಟ್ಟಿರೋ ಉತ್ತರ ಇದು.

    ಒಂದು ಹೋಟೆಲ್‍ಗೆ ಪ್ರತಿದಿನ ತುಂಬಾ ಜನ ಬರ್ತಾರೆ. ಕೆಲವರು ದೋಸೆ ಸರಿಯಿಲ್ಲ ಅಂತಾರೆ. ಇನ್ನೂ ಕೆಲವರು ಇಡ್ಲಿ ಸರಿಯಿಲ್ಲ ಅಂತಾರೆ. ಮತ್ತೂ ಕೆಲವರು ಚಟ್ನಿ ಸರಿಯಿಲ್ಲ ಅಂತಾರೆ. ಹಾಗೆ ಕಮೆಂಟ್ ಮಾಡುವವರ ಬಗ್ಗೆ ಹೋಟೆಲ್ ಮಾಲೀಕ ತಲೆಕೆಡಿಸಿಕೊಳ್ಳಲ್ಲ. ದಿನದ ಕೊನೆಗೆ ವ್ಯವಹಾರ ಎಷ್ಟಾಯ್ತು ಅಂತಾ ನೋಡ್ತಾನೆ. ಹಾಗೆ ಟೀಕಿಸುವವರು ಕೂಡಾ ಮತ್ತೊಮ್ಮೆ ಅದೇ ಹೋಟೆಲ್‍ಗೆ ಬರ್ತಾರೆ. ಹೀಗೆ ಹೇಳಿರುವ ಸುದೀಪ್, ಇದೇ ಚಿತ್ರದ ಬಗ್ಗೆ ಲಕ್ಷಾಂತರ ಜನ ನೋಡಿ ಥ್ರಿಲ್ಲಾಗಿರುವುದನ್ನು ಮರೆಯಬೇಡಿ. ಚಿತ್ರವನ್ನು ಮೆಚ್ಚಿಕೊಂಡಿರುವವರೇ ಹೆಚ್ಚು ಎಂದೂ ಹೇಳಿದ್ದಾರೆ.

  • ವಿಲನ್ ಟಿಕೆಟ್ ಬುಕ್ಕಿಂಗ್ ಅಕ್ಟೋಬರ್ 11ರಿಂದ

    the villain ticket booking from oct 1

    ದಿ ವಿಲನ್. ಚಿತ್ರದ 4 ಟೀಸರ್‍ಗಳನ್ನು ಬಿಟ್ಟಿರೋ ನಿರ್ದೇಶಕ ಪ್ರೇಮ್, ಅಭಿಮಾನಿಗಳನ್ನು ಕುತೂಹಲ, ಕಾತುರದ ತುತ್ತತುದಿಗೆ ಕೊಂಡೊಯ್ದಿದ್ದಾರೆ. ಪ್ರೇಮ್ ಇಷ್ಟವಾಗೋದು ಈ ಕಾರಣಕ್ಕೆ. ಒಂದು ಸಿನಿಮಾವನ್ನು ಎಷ್ಟು ಅದ್ಭುತವಾಗಿ ಹೇಗೆ ಪ್ರಮೋಟ್ ಮಾಡಬೇಕು ಅನ್ನೋದು ಪ್ರೇಮ್‍ಗೆ ಚೆನ್ನಾಗಿ ಗೊತ್ತು. ದಿ ವಿಲನ್ ಚಿತ್ರದಲ್ಲಂತೂ, ಚಿತ್ರ ಪ್ರಚಾರದ ಸಾಧ್ಯತೆಗಳನ್ನೆಲ್ಲ ತೆರೆದಿಟ್ಟ ಪ್ರೇಮ್, ಇಡೀ ಚಿತ್ರರಂಗವೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತೆ ಮಾಡಿದ್ದಾರೆ. 

    4 ಟೀಸರ್ ಬಿಟ್ಟರೂ, ಚಿತ್ರದ ಕಥೆ ಏನಿರಬಹುದು ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ ಪ್ರೇಮ್. ಇದೇ ವೇಳೆ ಚಿತ್ರದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಡೇಟ್‍ನ್ನು ಅನೌನ್ಸ್ ಮಾಡಿದ್ದಾರೆ. ಅಕ್ಟೋಬರ್ 11ರಿಂದ ಅಂದರೆ ಸಿನಿಮಾ ಬಿಡುಗಡೆಯಾಗುವುದಕ್ಕೆ ಒಂದು ವಾರ ಮೊದಲಿನಿಂದಲೇ ನೀವು ಆನ್‍ಲೈನ್‍ನಲ್ಲಿ ದಿ ವಿಲನ್‍ಗೆ ಟಿಕೆಟ್ ಬುಕ್ ಮಾಡಬಹುದು. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಲಿದೆ. 1000+ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಸಿದ್ಧರಾಗಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್.

  • ವಿಲನ್ ಪ್ರೇಮ್​ಗೆ ಶಹಬ್ಬಾಸ್ ಎಂದ ಸುದೀಪ್

    sudeep praises prem

    ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ದಿ ವಿಲನ್' ಶೂಟಿಂಗ್​ ಬ್ಯಾಂಕಾಕ್​ನಲ್ಲಿ ಭರ್ಜರಿಯಾಗಿ ಸಾಗಿದೆ. ಪ್ರೇಮ್ ಕೆಲಸದ ವೈಖರಿಗೆ ಸುದೀಪ್ ಖುಷಿಗೊಂಡಿದ್ದಾರೆ. 

    ಸದ್ಯ, ಬ್ಯಾಂಕಾಕ್ ಶೂಟಿಂಗ್ನಲ್ಲಿರುವ ಸುದೀಪ್, ಬ್ಯಾಂಕಾಕ್ ಚಿತ್ರೀಕರಣದ ಅನುಭವ ಅದ್ಭುತ ಎಂದು ಹೇಳಿದ್ದಾರೆ. ''ಬ್ಯಾಂಕಾಕ್​ನಲ್ಲಿ ಚಿತ್ರೀಕರಣ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆ, ಪ್ರೊಡಕ್ಷನ್ ಕೆಲಸ, ಇಡೀ ಚಿತ್ರತಂಡ ಮತ್ತು ತಾಂತ್ರಿಕವರ್ಗದ ಕೆಲಸಗಳು ಉತ್ತಮವಾಗಿದ್ದವು'' ಎಂದು ಟ್ವೀಟ್ ಮಾಡಿದ್ದಾರೆ.

    ಮುಂದಿನ 10 ದಿನ ಚೇಸಿಂಗ್ ದೃಶ್ಯಗಳನ್ನ ಶೂಟ್ ಮಾಡುತ್ತಿದ್ದೇವೆ. ಚಿತ್ರದ ಸ್ಟೋರಿ ಬೋರ್ಡ್ ನೋಡಿದೆ. ಸಖತ್ ಥ್ರಿಲ್ಲಿಂಗ್. ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದಿದ್ದಾರೆ ಸುದೀಪ್.

    ಸುದೀಪ್ ಹೊಗಳಿಕೆ, ದಿ ವಿಲನ್ ಚಿತ್ರದ ಬಗ್ಗೆ ಇದ್ದ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ.

    Related Articles :-

    Amy Jackson Joins The Villain

    Storm Hampers The Shooting Of The Villain

    Sudeep Joins The Villain Second Schedule

    Mithun Chakraborty Joins The Sets Of The Villain

    Amy Jackson Is The Heroine For The Villain

    Puneeth Visits The Villain Set - Exclusive

    First look Of The Villain Released

    First Look Of The Villain Today Night At 7 PM

    First Look Of The Villain On April 1st

    Sudeep Starts Shooting For The Villain

    Sruthi Hariharan For 'The Villain'

    The Villain Starting Next Week

     

  • ವಿಲನ್ ಬರೋದ್ಯಾವಾಗ..? ಚೌತಿಗೆ ಹೇಳ್ತಾರೆ

    the villain release date will be announced on ganesha festival

    ದಿ ವಿಲನ್. ಇಡೀ ಕನ್ನಡ ಚಿತ್ರರಂಗ, ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ಸಿನಿಮಾ. ಶಿವರಾಜ್‍ಕುಮಾರ್, ಸುದೀಪ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ಕಾಯುವಿಕೆಗೆ ಗಣೇಶನ ಹಬ್ಬದ ದಿನ ಉತ್ತರ ಸಿಗಲಿದೆ. ಅಂದ್ರೆ, ಇನ್ನೇನಲ್ಲ, ಆ ದಿನ ಸಿನಿಮಾ ಬಿಡುಗಡೆ ಯಾವಾಗ ಅಂತಾ ಹೇಳ್ತಾರಂತೆ. ಅದನ್ನು ಹೇಳಿಕೊಂಡಿರೋದು ನಿರ್ದೇಶಕ ಪ್ರೇಮ್.

    ಸಿನಿಮಾ 2 ಗಂಟೆ, 55 ನಿಮಿಷ ಇದ್ಯಂತೆ. ಹಾಗಂತ ಸಿನಿಮಾ ಉದ್ದ ಅಂದ್ಕೋಬೇಡಿ. ಒಂದು ನಿಮಿಷವೂ ಸಿನಿಮಾ ಬೋರ್ ಹೊಡೆಸಲ್ಲ. ಫುಲ್ ಎಂಟರ್‍ಟೈನ್‍ಮೆಂಟ್ ಎಂದಿದ್ದಾರೆ ಪ್ರೇಮ್.

    ಸಿನಿಮಾದ ದೃಶ್ಯವೊಂದರಲ್ಲಿನ ಬ್ಲಡ್‍ಶೇಡ್ ಕಡಿಮೆ ಮಾಡಿ, ಒಂದ ಡೈಲಾಗ್‍ಗೆ ಮ್ಯೂಟ್ ಮಾಡಿಸಿ, ಯು/ಎ ಸರ್ಟಿಫಿಕೇಟ್ ಪಡೆದಿದ್ದೇವೆ. ಸಿನಿಮಾ ಸಂಪೂರ್ಣ ಸಿದ್ಧವಾಗಿದೆ. ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಗಣೇಶನ ಹಬ್ಬದ ದಿನ ಹೇಳ್ತೀವಿ ಅಂದಿದ್ದಾರೆ.

    ಗಣಪತಿ ಬಪ್ಪಾ ಮೋರಯಾ.. 

  • ವಿಲನ್ ಮೂಲಕ ರಕ್ಷಿತಾ ರೀ ಎಂಟ್ರಿ

    rakshitha re entry with the villan

    ಅಪ್ಪು ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಕ್ಷಿತಾ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ತೆಲುಗು, ತಮಿಳುನಲ್ಲೂ ಹವಾ ಸೃಷ್ಟಿಸಿದ್ದವರು. ಮದುವೆಯಾದ ಮೇಲೆ ಅಪ್ಪಟ ಗೃಹಿಣಿಯಾದ ರಕ್ಷಿತಾ ಕಿರುತೆರೆಗಷ್ಟೇ ಸೀಮಿತರಾಗಿಬಿಟ್ಟಿದ್ದಾರೆ. ಈಗ ಮತ್ತೊಮ್ಮೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿಯಾಗಿ ಅಲ್ಲ, ಕಂಠದಾನ ಕಲಾವಿದೆಯಾಗಿ.

    ದಿ ವಿಲನ್ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್‍ಗೆ ಧ್ವನಿ ನೀಡುತ್ತಿರುವುದು ರಕ್ಷಿತಾ. ಯಾರ್ಯಾರದ್ದೋ ಧ್ವನಿ ಟೆಸ್ಟ್ ಮಾಡಿದ್ದ ಪ್ರೇಮ್‍ಗೆ, ಅದ್ಯಾವುದೂ ಇಷ್ಟವಾಗದೆ ಕೊನೆಗೆ ಓಕೆಯಾಗಿದ್ದು ರಕ್ಷಿತಾ ಅವರ ಧ್ವನಿ. ರಕ್ಷಿತಾ ಧ್ವನಿ ಡಿಫರೆಂಟಾಗಿದೆ ಅನ್ನೋ ಕಾರಣಕ್ಕೆ ರಕ್ಷಿತಾ ಅವರ ಧ್ವನಿಯನ್ನೇ ಫೈನಲ್ ಮಾಡಿದ್ದಾರೆ ಪ್ರೇಮ್. ಇದುವರೆಗೆ ತಮ್ಮ ಪಾತ್ರಕ್ಕಷ್ಟೇ ಧ್ವನಿ ನೀಡಿದ್ದ ರಕ್ಷಿತಾ, ಈ ಚಿತ್ರದ ಮೂಲಕ ಬೇರೊಬ್ಬರ ಪಾತ್ರಕ್ಕೂ ಧ್ವನಿ ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

    ಅಂದಹಾಗೆ ರಕ್ಷಿತಾ ಅವರ ಧ್ವನಿಯನ್ನು ಆ್ಯಮಿ ಜಾಕ್ಸನ್ ಪಾತ್ರಕ್ಕೆ ಹೊಂದುತ್ತೆ ಎಂದು ಗುರುತಿಸಿದ ಮೊದಲಿಗರು ಪ್ರೇಮ್ ಅಲ್ಲ, ನಿರ್ದೇಶಕ ಮಹೇಶ್ ಬಾಬು ಹಾಗೂ ಸೌಂಡ್ ಎಂಜಿನಿಯರ್ ಆನಂದ್ ಅಂತೆ. ಒಟ್ಟಿನಲ್ಲಿ ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಅದ್ಧೂರಿ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.

  • ವಿಲನ್ ವಿಳಂಬಕ್ಕೆ ಪ್ರೇಮ್ ಕಾರಣ ಅಲ್ಲ - ಸುದೀಪ್

    the villain delay issue clarified by sudeep

    ದಿ ವಿಲನ್ ವಿಳಂಬಕ್ಕೆ ಯಾರು ಕಾರಣ ಎಂಬ ಬಗ್ಗೆ ಶಿವರಾಜ್‍ಕುಮಾರ್ ಮಾತನಾಡಿದ್ದರು. ಅವರು ನೇರವಾಗಿ ಪ್ರೇಮ್ ಅವರೇ ಕಾರಣ ಎಂದೇನೂ ಹೇಳಿರಲಿಲ್ಲ. ಆದರೆ, ಚಿತ್ರವನ್ನು ನಿರ್ದೇಶಿಸಲು ಹೊರಡುವಾಗ ನಿರ್ದೇಶಕರಿಗೆ ಒಂದು ಪ್ಲಾನ್ ಇರಬೇಕು ಎಂಬರ್ಥದಲ್ಲಿ ಮಾತನಾಡಿದ್ದರು. ಈ ಕುರಿತು ಚಿತ್ರಲೋಕ ಕೂಡಾ ವರದಿ ಮಾಡಿತ್ತು.

    ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, `ದಿ ವಿಲನ್' ವಿಳಂಬಕ್ಕೆ ಪ್ರೇಮ್ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂದಿದ್ದಾರೆ. ಪ್ರೇಮ್ ಒಬ್ಬ ಫ್ಯಾಷನೇಟ್ ನಿರ್ದೇಶಕ. ಅವರು ಪ್ಲಾನ್ ಇಲ್ಲದೆ ಚಿತ್ರವನ್ನು ಶುರು ಮಾಡಿಲ್ಲ. ಸನ್ನಿವೇಶ ಹಾಗೂ ಪರಿಸ್ಥಿತಿಗಳು ಇದಕ್ಕೆಲ್ಲ ಕಾರಣ. ಪ್ರೇಮ್ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂದಿದ್ದಾರೆ ಸುದೀಪ್.

    `ದಿ ವಿಲನ್' ಹೇಳಿಕೇಳಿ ಶಿವರಾಜ್‍ಕುಮಾರ್, ಸುದೀಪ್ ಹಾಗೂ ಪ್ರೇಮ್ ಕಾಂಬಿನೇಷನ್ನಿನ ಸಿನಿಮಾ. ಒಂದೊಂದು ದಿನ ವಿಳಂಬವಾದಷ್ಟೂ ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚುತ್ತಲೇ ಹೋಗುತ್ತೆ. ಕೇವಲ ಕಾಂಬಿನೇಷನ್ ಕಾರಣಕ್ಕೇ ದಿ ವಿಲನ್ ಚಿತ್ರ ಮೌಂಟ್‍ಎವರೆಸ್ಟ್‍ನಷ್ಟು ಎತ್ತರದ ನಿರೀಕ್ಷೆ ಮೂಡಿಸಿರುವುದು ನಿಜ. 

    ಇನ್ನು ಚಿತ್ರದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಶಿವರಾಜ್‍ಕುಮಾರ್, ಪ್ರೇಮ್, ನಿರ್ಮಾಪಕ ಮನೋಹರ್ ಸೇರಿದಂತೆ ಪ್ರತಿಯೊಬ್ಬರೂ ಸಿನಿಮಾ ಹುಚ್ಚರೇ. ಏನೇ ಮಾಡಿದರೂ ಅದ್ಭುತವಾಗಿ ಮಾಡಬೇಕು ಎನ್ನುವವರು. ಸಿನಿಮಾ ಆದಷ್ಟು ಬೇಗ ತೆರೆ ಕಾಣಲಿ.

  • ವಿಲನ್ ಶೂಟಿಂಗ್ ಮುಗೀತು..!

    the villain shooting completed

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಅದ್ದೂರಿ ಚಿತ್ರ ದಿ ವಿಲನ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಚ್ಚೂ ಕಡಿಮೆ ಒಂದೂವರೆ ವರ್ಷ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದನ್ನು ಪ್ರೇಮ್ ಖುಷಿಯಿಂದ ಹೇಳಿಕೊಂಡಿದ್ದಾರೆ.

    ಚಿತ್ರಕ್ಕಾಗಿ 118 ದಿನಗಳ ಶೂಟಿಂಗ್ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ಕೊನೆಯ ದಿನದ ಶೂಟಿಂಗ್ ಮುಗಿಸಿದ ಪ್ರೇಮ್, ಶಿವಣ್ಣ ಡಾರ್ಲಿಂಗ್, ಸುದೀಪ್ ಹಾಗೂ ಆ್ಯಮಿ ಜಾಕ್ಸನ್‍ಗೆ ಧನ್ಯವಾದ ಹೇಳಿದ್ದಾರೆ. ಪ್ರೇಮ್ ಅವರನ್ನು ಫ್ಯಾಷನೇಟ್ ಡೈರೆಕ್ಟರ್ ಎಂದು ಹೊಗಳಿರುವ ಸುದೀಪ್, ಇಂಥಾದ್ದೊಂದು ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

    ಸಿನಿಮಾದ ಆಡಿಯೋ ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಸಿನಿಮಾ ಅಕ್ಟೋಬರ್‍ನಲ್ಲಿ ಬರಬಹುದು.

  • ವಿಲನ್‍ಗೆ ಟೀಂಗೆ ಈಗ ಆ್ಯಮಿಯೇ ವಿಲನ್..!

    prem disappointed over amy jackson

    ದಿ ವಿಲನ್ ಚಿತ್ರತಂಡ ಅದ್ಧೂರಿ ಬಿಡುಗಡೆಗೆ ಭರ್ಜರಿಯಾಗಿ ಸಿದ್ಧವಾಗುತ್ತಿರುವಾಗಲೇ, ಚಿತ್ರದ ನಾಯಕಿಯ ವಿರುದ್ಧ ಗರಂ ಆಗಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಕಾರಣ ಇಷ್ಟೆ, ಚಿತ್ರದ ಪ್ರಚಾರದಲ್ಲಿ ಆ್ಯಮಿ ಕಾಣಿಸಿಕೊಳ್ತಾನೇ ಇಲ್ಲ. ದುಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮವೊಂದನ್ನು ಬಿಟ್ಟರೆ, ಆ್ಯಮಿ ವಿಲನ್ ಪ್ರಚಾರದಿಂದ ದೂರವೇ ಉಳಿದಿದ್ದಾರೆ.

    ಆ್ಯಮಿ ಜಾಕ್ಸನ್, ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ ವಿಷಯದಲ್ಲಿ ನನಗೆ ಅವರ ಬಗ್ಗೆ ಗೌರವ ಇದೆ. ಆದ್ರೆ, ಸಿನಿಮಾ ಪ್ರಮೋಷನ್ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಪ್ರಚಾರದ ವಿಚಾರವಾಗಿ ಕಾಂಟ್ಯಾಕ್ಟ್ ಮಾಡಿದ್ರೆ, ಎಷ್ಟೋ ದಿನ ಆದ ಮೇಲೆ ಅಲ್ಲಿಂದ ರಿಯಾಕ್ಷನ್ ಬರುತ್ತೆ ಅನ್ನೋದು ಪ್ರೇಮ್ ಬೇಸರಕ್ಕೆ ಕಾರಣ.

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್ ಎಂಬ ಕಾರಣಕ್ಕೆ ಇಡೀ ಚಿತ್ರರಂಗ, ಕೋಟ್ಯಂತರ ಕನ್ನಡಿಗರು ದಿ ವಿಲನ್ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ಆರ್. ಮನೋಹರ್ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.