` rashmika, - chitraloka.com | Kannada Movie News, Reviews | Image

rashmika,

  • ಅಂಜನೀಪುತ್ರನಿಗೆ ಮತ್ತಷ್ಟು ಪವರ್..!

    anjaniputra image

    ಅಂಜನೀಪುತ್ರ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಈ ಸಿನಿಮಾ 25 ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಅಂಜನೀಪುತ್ರನಿಗೆ ನಿರ್ದೇಶಕ ಮತ್ತು ನಿರ್ಮಾಪಕರು ಇನ್ನಷ್ಟು ಪವರ್ ಕೊಟ್ಟಿದ್ದಾರೆ.

    ಇಂದಿನಿಂದ ಚಿತ್ರಮಂದಿರಗಳಲ್ಲಿ ಒಂದು ಎಕ್ಸ್‍ಟ್ರಾ ಫೈಟ್ ಹಾಗೂ ಒಂದಿಷ್ಟು ದೃಶ್ಯಗಳನ್ನು ಸೇರಿಸಿದ್ದಾರೆ. ಇದು 25 ದಿನ ಪೂರೈಸಿರುವ ಸಂಭ್ರಮಕ್ಕೆ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾ.. ಇನ್ನಷ್ಟು..ಮತ್ತಷ್ಟು.. ಯಶಸ್ವಿಯಾಗಲಿ. 

  • ಅಜ್ಜಿ ಸೀರೆಯ ಅಲಂಕಾರದಲ್ಲಿ ರಶ್ಮಿಕಾ

    rakshith shetty, rashmika image

    ರಶ್ಮಿಕಾ ಮಂದಣ್ಣ. ಕೊಡಗಿನ ಕುವರಿ. ಕಿರಿಕ್ ಸುಂದರಿ. ಈ ಚೆಲುವೆ ಮಾಡರ್ನ್ ಸೀರೆ ತೊಟ್ಟರೂ ಚೆಂದ. ಸಂಪ್ರದಾಯಿಕ ಸೀರೆಯುಟ್ಟರೂ ಚೆಂದ. ಇಂತಹ ರಶ್ಮಿಕಾ ಇತ್ತೀಚೆಗೆ ಒಂದು ಸೀರೆಯುಟ್ಟು ಬಂದಿದ್ದರು. ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸ್ವೀಕರಿಸೋಕೆ ಬಂದಿದ್ದ ರಶ್ಮಿಕಾ ಅವರ ಸೀರೆ ಎಲ್ಲರ ಗಮನ ಸೆಳೆದಿತ್ತು. 

    ಅಪ್ಟಟ ಕೊಡವರಂತೆಯೇ ಸೀರೆಯುಟ್ಟು ಬಂದಿದ್ದ ರಶ್ಮಿಕಾ, ಆ ಸೀರೆಯ ಕಥೆ ಹೇಳಿದ್ದಾರೆ. ಆ ಸೀರೆ ಈಗಿನ ಕಾಲದ್ದಲ್ಲ. ಆ ಸೀರೆಗೆ 61 ವರ್ಷಗಳ ಇತಿಹಾಸವಿದೆ. ಆ ಸೀರೆಯನ್ನು ಉಡುತ್ತಿದ್ದವರು ರಶ್ಮಿಕಾ ಅವರ ಅಜ್ಜಿ. ಅವರು ಅವರ ಮದುವೆಯಲ್ಲಿ ಉಟ್ಟುಕೊಂಡಿದ್ದ ಆ ಸೀರೆಯನ್ನು ರಶ್ಮಿಕಾ ಅವರ ತಾಯಿಗೆ ಕೊಟ್ಟಿದ್ದರಂತೆ. ಈಗ ಅದೇ ಸೀರೆ ರಶ್ಮಿಕಾಗೆ ಬಂದಿದೆ. 

    `ನೀನು ತುಂಬಾ ಎತ್ತರಕ್ಕೆ ಹೋಗುತ್ತೀಯಾ' ಎಂದು ಅಜ್ಜಿ ಹೇಳುತ್ತಿದ್ದರಂತೆ. ನಾನು ಹೆಚ್ಚಾಗಿ ಬೆಳೆದದ್ದು ಅಜ್ಜಿಯ ಬಳಿಯಲ್ಲೇ. ಅಜ್ಜಿ ನನ್ನನ್ನು ಬಿಟ್ಟು ಹೋದಾಗ ನಾನು ತುಂಬಾ ಕೋಪಗೊಂಡಿದ್ದೆ. ಈಗ ಅವರ ಸೀರೆಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿರುವುದು ಏನೋ ಒಂದು ಸಮಾಧಾನ. ಅವರು ಅಲ್ಲಿಂದಲೇ ನೋಡಿ ಹೆಮ್ಮೆಪಟ್ಟುಕೊಳ್ಳುತ್ತಿರಬಹುದು ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ ರಶ್ಮಿಕಾ.

  • ಅಂದು ವಿಷ್ಣು.. ಈಗ ದರ್ಶನ್ ಯಜಮಾನ

    darshan becomes yajamana

    18 ವರ್ಷಗಳ ಹಿಂದೆ, ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರ ತೆರೆಕಂಡಿತ್ತು. ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರದಲ್ಲಿ ಪ್ರೇಮಾ, ಶಶಿಕುಮಾರ್, ಅಭಿಜಿತ್.. ಮೊದಲಾದವರು ನಟಿಸಿದ್ದರು. ಸೋದರ ಬಾಂಧವ್ಯದ ಆ ಚಿತ್ರ ಬಾಕ್ಶಾಫೀಸ್‍ನಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು. ಅದಾದ ನಂತರ ಅದೇ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ. ಹೊಸ ಯಜಮಾನನಾಗುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

    ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ನಿರ್ಮಾಪಕರಾದ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಯಜಮಾನ ಟೈಟಲ್‍ನ್ನು ಅಂತಿಮಗೊಳಿಸಿದ್ದಾರೆ. ಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿತ್ತು. ಚಿತ್ರದ ಫಸ್ಟ್ ಲುಕ್, ದರ್ಶನ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ. ದರ್ಶನ್‍ರ ಯಜಮಾನ ಚಿತ್ರ ಕೂಡಾ, ವಿಷ್ಣು ಯಜಮಾನನಂತೆಯೇ ದಾಖಲೆ ಸೃಷ್ಟಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

    Related Articles :-

    Darshan's 51st Film Titled 'Yajamana'

    Darshan's 51st Film From Feb 19th

     

  • ಅಪ್ಪು ಅಂಜನೀಪುತ್ರ ಒಪ್ಪಿಕೊಳ್ಳೋಕೆ `ಅಮ್ಮ' ಕಾರಣ

    anjaniputra

    ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ನಾಳೆಯಿಂದ ಆವರಿಸಿಕೊಳ್ಳಲಿದ್ದಾನೆ. ಹರ್ಷ-ಪುನೀತ್-ರಶ್ಮಿಕಾ-ರಮ್ಯಕೃಷ್ಣ ಕಾಂಬಿನೇಷನ್‍ನ ಚಿತ್ರವನ್ನು ಪುನೀತ್ ಒಪ್ಪಿಕೊಳ್ಳೋಕೆ ಕಾರಣ ಏನ್ ಗೊತ್ತಾ..? ಅದು ಅಮ್ಮ. ರಾಜಕುಮಾರ ಚಿತ್ರದ ನಂತರ ಪುನೀತ್ ನಟಿಸಿದ ಚಿತ್ರ ಅಂಜನೀಪುತ್ರ. ಅಷ್ಟು ದೊಡ್ಡ ಸ್ವಮೇಕ್ ಹಿಟ್ ಕೊಟ್ಟಿದ್ದ ಪುನೀತ್, ರೀಮೇಕ್ ಚಿತ್ರ ಒಪ್ಪಿಕೊಳ್ಳೋಕೆ ಕಾರಣ, ಅಮ್ಮ.

    ತಮಿಳಿನ ಪೂಜೈ ಚಿತ್ರದ ರೀಮೇಕ್ ಅಂಜನೀಪುತ್ರ. ಆ ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಪುನೀತ್‍ಗೆ ತುಂಬಾ ಇಷ್ಟವಾಯ್ತಂತೆ. ಇನ್ನು ಸ್ವತಃ ಪುನೀತ್, ತಮ್ಮ ತಾಯಿಯಿಂದ ಬಹಳವಾಗಿ ಪ್ರೇರಿತರಾದವರು. ಆದರೆ, ನನ್ನ ತಾಯಿಯ ಪ್ರೀತಿಯನ್ನು ನಾನು ಯಾವುದರೊಂದಿಗೆ ಕನೆಕ್ಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ ಪುನೀತ್.

    ಅಂಜನೀಪುತ್ರದಲ್ಲಿ ಪುನೀತ್ ತಾಯಿಯಾಗಿ ನಟಿಸಿರುವುದು ರಮ್ಯಕೃಷ್ಣ. ನಾಯಕನಷ್ಟೇ ತೂಕದ ಪಾತ್ರವದು. ಕಣ್ಣು ಮತ್ತು ಧ್ವನಿಯಲ್ಲೇ ಪ್ರೇಕ್ಷಕರ ಎದೆಗಿಳಿಯುವ ರಮ್ಯಕೃಷ್ಣ ಅಂಜನೀಪುತ್ರದಲ್ಲೂ ಆವರಿಸಿಕೊಳ್ಳುತ್ತಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ.

  • ಅವಲಕ್ಕಿ.. ಬುವಲಕ್ಕಿ.. ಚಮಕ್ಕು..ಚಮಕ್ಕು..

    avalakki buvalakki

    ಅವಲಕ್ಕಿ ಪವಲಕ್ಕಿ.. ಕಾಂಚಣ ಮಿಣಮಿಣ.. ಏನ್ ನೆನಪಾಗುತ್ತೆ..? ಕಣ್ಣಾಮುಚ್ಚೆ ಕಾಡೇಗೂಡೆ.. ಉದ್ದಿನಮೂಟೆ.. ಉರುಳೇಹೋಯ್ತು.. ಕಣ್ಣ ಮುಂದೆ ಏನ್ ಬಂತು..? 

    ಗೇರ್ ಗೇರ್ ಮಂಗಣ್ಣ.. ಒಂದೂ ಎರಡು.. ರತ್ತೋ ರತ್ತೋ ರಾಯನ ಮಗಳೇ.. ಅರೆ ಇವೆಲ್ಲ ನಾವು ಚಿಕ್ಕ ವಯಸ್ಸಿನಲ್ಲಿದ್ದಾಗ ಹಾಡುತ್ತಿದ್ದ ಹಾಡುಗಳು ಅಂದ್ಕೊಂಡ್ರಾ..? ನಾವು ಕೇಳಿ, ಹಾಡಿ ಮರೆತಿರಬಹುದು. ಆದರೆ, ಸಿಂಪಲ್ ಸುನಿ ಮರೆತಿಲ್ಲ. ಅವರು ಅವುಗಳನ್ನೇ ಇಟ್ಟುಕೊಂಡು ಹಾಡು ಹೊಸೆದು ಒಂದು ಚಮಕ್ ಕೊಟ್ಟೇಬಿಟ್ಟಿದ್ದಾರೆ.

    ಈ ಎಲ್ಲ ಹಾಡುಗಳನ್ನೂ ಇಟ್ಟುಕೊಂಡು ಒಂದು ಹಾಡು ಮಾಡೋದು ಹೇಗೆ ಸಾಧ್ಯ..? ಅನ್ನೋದು ನಿಮ್ಮ ಪ್ರಶ್ನೆಯಾದರೆ, ಸಿಂಪಲ್ ಸುನಿಗೆ ಸಿಂಪಲ್ಲಾಗಿ ಹೇಳೋಕೆ ಬರೊಲ್ವಾ ಅನ್ನೋ ರೀತಿ ನಕ್ಕಿದ್ದಾರೆ ಸುನಿ. ಹಾಡು ಕೇಳಿದರೆ, ಹೀರೋ-ಹೀರೋಯಿನ್ ಒಬ್ಬರಿಗೊಬ್ಬರು ಸವಾಲು ಹಾಕಿಕೊಳ್ಳೋ ಸ್ಟೈಲ್‍ನಲ್ಲಿರೋ ಹಾಗಿದೆ.

    ಗಣೇಶ್-ರಶ್ಮಿಕಾ ಅದೆಂಥಾ ಚಮಕ್ ಕೊಟ್ಟಿದ್ದಾರೆ ನೋಡೋಣ. ಪೊಗರಿನ ಮೂಟೆ.. ನಮ್ಮ ಚಿಟ್ಟೆ.. ಬಿಟ್ಟೆ ಬಿಟ್ಟೆ.. ಬಿಟ್ಟೆ.. ಬಿಟ್ಟೆ ಡಿ.29ಕ್ಕೆ..

  • ಆಗೋಯ್ತು ಮರ್ಯಾದೆ ಸಸ್ತಾ ಮಾಲು..

    yajamana shooting completed

    ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಹಾಡನ್ನು ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಮೇಲೆ ಚಿತ್ರೀಕರಿಸಲಾಗಿದ್ದು, ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಈ ಹಾಡಿನೊಂದಿಗೆ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಮುಂದೆ ಬರಲಿದ್ದಾನೆ ಯಜಮಾನ.

    ಯಜಮಾನ ಮುಗಿಯುತ್ತಿದ್ದಂತೆ ಚುರುಕಾಗುವುದು ಒಡೆಯ ಚಿತ್ರದ ಚಿತ್ರೀಕರಣ. ಜೊತೆ ಜೊತೆಯಲ್ಲೇ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 2019ರಲ್ಲಿ ಯಜಮಾನ ಚಿತ್ರವೇ ಮೊದಲು ತೆರೆಗೆ ಬರಲಿದ್ದು, ಕುರುಕ್ಷೇತ್ರ ಆನಂತರ ರಿಲೀಸ್ ಆಗಲಿದೆ ಎನ್ನಲಾಗಿದೆ.

  • ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

    anjaniputra shooting image

    ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಬಾಲಕೃಷ್ಣ ಮತ್ತು ಕನ್ನಡ ಚಿತ್ರರಂಗದ ಬಾಂಧವ್ಯ ಹೊಸದೇನಲ್ಲ. ಇತ್ತೀಚೆಗಷ್ಟೇ ಮಾಸ್ ಲೀಡರ್ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಬಂದಿದ್ದರು. ಕನ್ನಡದಲ್ಲಿಯೇ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದರು. ಬಾಲಯ್ಯ ಅಭಿನಯದ ನೂರನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿ ನಟನಾಗಿ ನಟಿಸಿದ್ದರು. ಆ ಬಾಂಧವ್ಯ ಇನ್ನೂ ಮುಂದುವರೆಯುತ್ತಿದೆ.

    ಪುನೀತ್ ರಾಜ್ ಕುಮಾರ್, ರಶ್ಮಿಕಾ, ರಮ್ಯ ಕೃಷ್ಣ ಮುಖ್ಯಭೂಮಿಕೆಯಲ್ಲಿರುವ ಆಂಜನಿಪುತ್ರ ಸೆಟ್​ಗೆ ಭೇಟಿ ನೀಡಿರುವ ಬಾಲಕೃಷ್ಣ, ಚಿತ್ರತಂಡದ ಜೊತೆ ಹರಟಿದ್ದಾರೆ. ರಾಜ್ ಕುಟುಂಬವನ್ನು ಬಹಳ ಇಷ್ಟಪಡುವ ಬಾಲಯ್ಯ, ಆಂಜನಿಪುತ್ರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

    Related Articles :-

    Anjaniputra Shooting Put On Hold

    Puneeth's New Film Titled Anjaniputra

  • ಆಂಜನಿಪುತ್ರದಲ್ಲಿ ಕ್ರೂರ್​ಸಿಂಗ್ V/S ಅಪ್ಪು

    anjaniputra

    ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ, ಗಾಂಧಿನಗರ ಮತ್ತು ಅಭಿಮಾನಿಗಳು ಭಾರಿ ನಿರೀಕ್ಷೆಯಿಟ್ಟುಕೊಂಡಿರುವ ಸಿನಿಮಾ. ಸಿನಿಮಾದಲ್ಲಿ ಪುನೀತ್ ಎದುರು ಖಳರಾಗಿ ನಟಿಸುತ್ತಿರುವುದು ಸಣ್ಣಪುಟ್ಟ ಕಲಾವಿದರೇನಲ್ಲ. ಅಭಿನವ ವಜ್ರಮುನಿ ಎಂದೇ ಫೇಮಸ್ ಆಗುತ್ತಿರುವ ರವಿಶಂಕರ್, ಬಾಲಿವುಡ್​ನ ಮುಖೇಶ್ ತಿವಾರಿ ಈಗಾಗಲೇ ಅಂಜನಿ ಪುತ್ರದ ಖಳರ ಪಟ್ಟಿಯಲ್ಲಿದ್ದಾರೆ.

    ಈ ಇಬ್ಬರ ಜೊತೆ ಹೊಸ ಸೇರ್ಪಡೆ ಕ್ರೂರ್ ಸಿಂಗ್. ಕ್ರೂರ್ ಸಿಂಗ್ ಯಾರು ಅಂಥಾ ನೆನಪಾಗಲಿಲ್ಲವಾ..? ಒಂದ್ಸಲ ಚಂದ್ರಕಾಂತ ಸೀರಿಯಲ್ ನೆನಪಿಸಿಕೊಳ್ಳಿ. ಆ ಸೀರಿಯಲ್​ನ ಕ್ರೂರ್​ಸಿಂಗ್ ಪಾತ್ರಧಾರಿ ಅಖಿಲೇಂದ್ರ ಮಿಶ್ರಾ ಅವರೇ, ಅಂಜನಿಪುತ್ರದ 3ನೇ ವಿಲನ್.

    ಲಗಾನ್, ಗಂಗಾಜಲ್ ಮೊದಲಾದ ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಖ್ಯಾತರಾಗಿರುವ ಅಖಿಲೇಂದ್ರ ಮಿಶ್ರಾಗೆ, ಸ್ಯಾಂಡಲ್​ವುಡ್​ನಲ್ಲಿ ಇದು ಮೊದಲ ಅನುಭವ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರದಲ್ಲಿ ರಮ್ಯಕೃಷ್ಣ ಅಂಜನಿ ದೇವಿ. ಅವರ ಮಗನಾಗಿ ನಟಿಸ್ತಾ ಇರೋದು ಅಪ್ಪು. ಸಾಧುಕೋಕಿಲ, ಚಿಕ್ಕಣ್ಣ, ಗಿರಿ, ಧರ್ಮ ಮೊದಲಾದವರು ನಟಿಸಿರುವ ಚಿತ್ರ ನವೆಂಬರ್​ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

    Related Articles :-

    Akhilendra Mishra Returns To Kannada

    ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

    ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

    Anjaniputra Shooting Put On Hold

    Puneeth's New Film Titled Anjaniputra

     

     

  • ಇಡೀ ಡಿಸೆಂಬರ್ ತಿಂಗಳು ರಶ್ಮಿಕಾಗೆ ಮೀಸಲು

    chamak movie image

    ಹೌದು ಅಂದ್ರೆ  ಹೌದು ಅನ್ನಿ, ಇಲ್ಲ ಅನ್ನಿಸಿದ್ರೆ ಇಲ್ಲ ಅನ್ನಿ. ಇದಂತೂ ಕರೆಕ್ಟು. ಇಡೀ ಡಿಸೆಂಬರ್ ತಿಂಗಳು ರಶ್ಮಿಕಾಗೆ ರಿಸರ್ವ್ ಆಗಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ಈ ತಿಂಗಳಲ್ಲಿ ರಶ್ಮಿಕಾರ 3 ಸಿನಿಮಾ ರಿಲೀಸ್ ಆಗುತ್ತಿದ್ದರೆ, ಒಂದು ಸಿನಿಮಾ ಸೆಟ್ಟೇರುತ್ತಿದೆ.

    ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಒಪ್ಪಿಕೊಂಡ ಮೊದಲ ಚಿತ್ರ ಅಂಜನೀಪುತ್ರ. ಅದು ಡಿ.22ಕ್ಕೆ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು ಗಣೇಶ್ ಜೊತೆಗಿನ ಚಮಕ್, ಡಿ.29ಕ್ಕೆ ರಿಲೀಸ್ ಆಗುವುದು ಪಕ್ಕಾ.

    ಇದು ಕನ್ನಡದ ಮಾತಾದರೆ, ತೆಲುಗಿನಲ್ಲಿ ನಾಗಶೌರ್ಯ ಜೊತೆ ನಟಿಸಿರುವ `ಚಲೋ' ಚಿತ್ರ ಕೂಡಾ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಗೆ ರೆಡಿಯಾಗಿದೆ. ಇದೆಲ್ಲದರ ಮಧ್ಯೆ ಇಂದು ರಶ್ಮಿಕಾ ನಾಯಕಿಯಾಗಿರುವ ಪೊಗರು ಚಿತ್ರ ಸೆಟ್ಟೇರುತ್ತಿದೆ.  ಹೀಗಾಗಿ ಇಡೀ ತಿಂಗಳನ್ನು ರಶ್ಮಿಕಾ ಆವರಿಸಿಕೊಳ್ಳಲಿದ್ದಾರೆ. 

    Related Articles :-

    Rashmika's Back To Back Release In December

    ರಶ್ಮಿಕಾಗೆ ಡಿಸೆಂಬರ್ ಸುನಾಮಿ

  • ಇನ್ಸ್ ಪೆಕ್ಟರ್ ರಶ್ಮಿಕಾ ಮಂದಣ್ಣ

    rashmik to act as sub inspector for her next movie

    ರಶ್ಮಿಕಾ ಮಂದಣ್ಣ ಅವರ ಸ್ಪೆಷಾಲಿಟಿ ಅವರ ನಗು. ಮುಗ್ದತೆಯೇ ಹೊರಸೂಸುವ ಅವರ ಮುಖ. ಅವರು ಕ್ರೈಂ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ ಮಾಡಿದರೆ ಹೇಗಿರುತ್ತೆ..? ಹೇಗಿರುತ್ತೆ ಅಂದ್ರೇನು.. ಆಗಲೇ ರಶ್ಮಿಕಾ ಅಂಥಾದ್ದೊಂದು ಪಾತ್ರ ಮಾಡೋಕೆ ಓಕೆ ಎಂದುಬಿಟ್ಟಿದ್ದಾರೆ.

    ಪರಂವಾ ಸ್ಟುಡಿಯೋಸ್‍ನಲ್ಲಿಯೆ ಇರುವ ಗೌತಮ್ ಅಯ್ಯರ್ ಎಂಬುವವರು ಹೇಳಿದ ಕಥೆ ರಶ್ಮಿಕಾಗೆ ಇಷ್ಟವಾಗಿದೆ. ರಕ್ಷಿತ್ ಶೆಟ್ಟಿಗೂ ಇಷ್ಟವಾಗಿದೆ. ಓಕೆ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಶ್ಮಿಕಾ. ಹೊಸದಾಗಿ ಪೊಲೀಸ್ ಇಲಾಖೆ ಸೇರುವ ಸಬ್ ಇನ್ಸ್‍ಪೆಕ್ಟರ್ ರಶ್ಮಿಕಾಗೆ ಸಿಗುವ ಮೊದಲ ಕೇಸ್, ಆಕೆಯ ಜೀವನದ ಮೇಲೆ ಏನೆಲ್ಲ ಪರಿಣಾಮ ಬೀರುತ್ತೆ ಅನ್ನೋದು ಚಿತ್ರದ ಕಥೆ.

    ಚಿತ್ರದಲ್ಲಿ ರಶ್ಮಿಕಾ ಪಾತ್ರ, ಚೆಸ್ ಪ್ಲೇಯರ್ ಕೂಡಾ ಹೌದು. ಎರಡನ್ನೂ ಲೆಕ್ಕ ಹಾಕಿದರೆ, ಅದೊಂದು ಇಂಟೆಲಿಜೆಂಟ್ ಆಫೀಸರ್ ಪಾತ್ರ ಅನ್ನಿಸುತ್ತೆ. ನಾನಂತೂ ಎಕ್ಸೈಟ್ ಆಗಿದ್ದೇನೆ. ನಮ್ಮ ತಂದೆಗೆ ನನ್ನನ್ನು ಪೊಲೀಸ್ ಆಫೀಸರ್ ಆಗಿ ನೋಡಬೇಕು ಎಂಬ ಆಸೆಯಿತ್ತು. ಈ ಚಿತ್ರದಲ್ಲಿ ಅದು ಈಡೇರುತ್ತಿದೆ. ಈ ಚಿತ್ರ ನನ್ನ ತಂದೆಗೆ ಅರ್ಪಣೆ ಎಂದಿದ್ದಾರೆ ರಶ್ಮಿಕಾ.

    ಅಂದಹಾಗೆ ಚಿತ್ರಕ್ಕೆ ನಿರ್ಮಾಪಕರು ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ತೆಲುಗಿನಲ್ಲಿ ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ ಮೊದಲಾದ ಸ್ಟಾರ್‍ಗಳ ಜೊತೆ ನಟಿಸುತ್ತಿರುವ ರಶ್ಮಿಕಾ, ಕನ್ನಡದಲ್ಲಿ ಸದ್ಯಕ್ಕೆ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೈಯ್ಯಲ್ಲಿ ಭಾರಿ ಸ್ಟಾರ್‍ಗಳ ಸಿನಿಮಾಗಳನ್ನೇ ಇಟ್ಟುಕೊಂಡಿರುವ ರಶ್ಮಿಕಾ, ಇದೇ ಮೊದಲ ಬಾರಿಗೆ ಹೀರೋಯಿನ್ ಓರಿಯಂಟೆಡ್ ಸಿನಿಮಾ ಒಪ್ಪಿಕೊಂಡಿದ್ದಾರೆ.

  • ಉಘೇ.. ಉಘೇ.. ಉಘೇ.. ಯಜಮಾನ

    yajamana trailer breaks all records

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವೇಯ್ಟಿಂಗ್ ಮುಗಿಯುವ ಕಾಲ ಹತ್ತಿರ ಬಂದಿದೆ. ಯಜಮಾನನ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ಸಿಂಪ್ಲಿ ಸೂಪರ್ಬ್. ಇದುವರೆಗಿನ ದರ್ಶನ್ ಚಿತ್ರದ ಟ್ರೇಲರ್‍ಗಳಿಗಿಂತ ಡಿಫರೆಂಟ್ ಆಗಿದೆ ಅಷ್ಟೇ ಅಲ್ಲ, ಟೆಕ್ನಿಕಲಿ ಸೂಪರ್ ಆಗಿದೆ. ಹೀಗಾಗಿಯೇ.. ಸಂತಸದ ಮುಗಿಲು ಮುಟ್ಟಿರುವ ಅಭಿಮಾನಿಗಳು ಯಜಮಾನನ ಟ್ರೇಲರ್‍ನ್ನೇ ನೋಡಿ ನೋಡಿ.. ಆನಂದಿಸುತ್ತಿದ್ದಾರೆ.

    ದರ್ಶನ್ ಅವರ ಲುಕ್, ಗೆಟಪ್ ಎಲ್ಲವೂ ಮಾಸ್ ಆಗಿದೆ. ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿನಿಂದ ಕಟ್ಟಿದ ಸ್ವಂತ ಬ್ರ್ಯಾಂಡ್ ಇದು ಎನ್ನುವ ಡೈಲಾಗ್ ಕಿಕ್ಕೇರಿಸುತ್ತೆ. ರಶ್ಮಿಕಾ ಮಂದಣ್ಣ, ದೇವರಾಜ್, ಡಾಲಿ ಧನಂಜಯ್, ರವಿಶಂಕರ್, ಅನೂಪ್ ಸಿಂಗ್ ಮೊದಲಾದವರು ನಟಿಸಿರುವ ಯಜಮಾನನ ಹಬ್ಬ ಮಾರ್ಚ್ 1ರಿಂದ ಆರಂಭ. 

  • ಒಲವಿನ ಕಚಗುಳಿ ಶುರುವಾಗಿದ್ದು ಯಾವಾಗ..? ರಕ್ಷಿತ್ ಶೆಟ್ಟಿ ಮಾತನಾಡಿದಾಗ

    Rakshith - Rashmika Love story

    ಹೌದು, ಮದುವೆಯಾಗುತ್ತಿದ್ದೇವೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದು, ಎಂಜೇಜ್‍ಮೆಂಟ್ ಫಿಕ್ಸ್ ಆಗಿರುವುದು ಹಳೆಯ ವಿಚಾರ. ಆದರೆ, ಪ್ರೀತಿ ಶುರುವಾಗಿದ್ದು ಹೇಗೆ ಅನ್ನೋದರ ಬಗ್ಗೆ ರಕ್ಷಿತ್ ಬಾಯಿಬಿಟ್ಟಿರಲೇ ಇಲ್ಲ.

    ಆಗೆಲ್ಲ ನಾಚಿಕೊಳ್ಳುತ್ತಿದ್ದ ರಕ್ಷಿತ್ ಶೆಟ್ಟಿ, ಈಗ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾದಾಗಿನಿಂದ ಶೂಟಿಂಗ್ ಮುಗಿಯುವವರೆಗೂ ಇಬ್ಬರ ಮಧ್ಯೆ ಅಂಥದ್ದೇನೂ ಇರಲಿಲ್ಲವಂತೆ. ತಮ್ಮ ಪಾತ್ರದ ಶೂಟಿಂಗ್ ಮುಗಿದ ಮೇಲೂ ಆಗಾಗ್ಗೆ ಸೆಟ್‍ಗೆ ಬರುತ್ತಿದ್ದ ರಶ್ಮಿಕಾರನ್ನು ನೋಡುತ್ತಿದ್ದ ರಕ್ಷಿತ್‍ಗೆ, ರಶ್ಮಿಕಾ ಇಷ್ಟವಾಗ್ತಾ ಹೋದರಂತೆ.

    ರಶ್ಮಿಕಾಗೂ ಹಾಗೇ ಅನ್ನಿಸೋಕೆ ಶುರುವಾಗಿತ್ತು. ಆದರೆ, ಒಬ್ಬರಿಗೊಬ್ಬರು ಇದುವರೆಗೆ ಐ ಲವ್ ಯೂ ಎಂದು ಹೇಳಿಕೊಂಡಿಲ್ಲ. ಕಳೆದ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 20 ಉಡುಗೊರೆ ಕೊಟ್ಟರಂತೆ ರಶ್ಮಿಕಾ. ಅದು ರಕ್ಷಿತ್‍ಗೆ ಇಷ್ಟವಾದರೂ, ಆಗಲೂ ರಕ್ಷಿತ್ ಬಾಯಿ ಬಿಡಲಿಲ್ಲ. ರಶ್ಮಿಕಾ ಹುಟ್ಟುಹಬ್ಬಕ್ಕೆ ಉಂಗುರ ಕೊಟ್ಟಾಗಲೂ ಇಬ್ಬರೂ ಪ್ರೀತಿಯ ಮಾತನಾಡಲಿಲ್ಲ.

    ಸಿಕ್ಕರೆ ಇಂತಹ ಸೊಸೆ ಸಿಗಬೇಕು ಎಂದು ತಾಯಿ, ನಿನಗೆ ಇಂತಹ ಹುಡುಗಿಯನ್ನೇ ನೋಡ್ತೀವಿ ಎಂದು ಅಣ್ಣ-ಅತ್ತಿಗೆ, ರಶ್ಮಿಕಾರನ್ನು ತೋರಿಸಿಕೊಂಡೇ  ಹೇಳುತ್ತಿದ್ದಾಗಲೂ ರಕ್ಷಿತ್ ಶೆಟ್ಟಿ, ಪ್ರೀತಿಯನ್ನ ಹೇಳಿಕೊಂಡಿರಲಿಲ್ಲ.

    ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಇಬ್ಬರ ತಂದೆ ತಾಯಿಯೂ ಕರೆದು ಕೇಳಿದ್ದಾರೆ. ಇಬ್ಬರೂ ಅವರವರ ಮನೆಗಳವರಿಗೆ ಒಪ್ಪಿಗೆ ಕೊಟ್ಟಿದ್ದಾರೆ. ಪ್ರೀತಿ ಎಂಗೇಜ್‍ಮೆಂಟ್ ತನಕ ಬಂದಿದೆ. ಕಚಗುಳಿ ಶುರುವಾಗಿದೆ.

    Related Articles :-

    ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

    ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

    Rakshith - Rashmika Engagement On July 3rd?

    Rakshith Shetty Says Marriage Only After Two Years

  • ಕಥೆಯಲ್ಲೇ ಇದೆ ಚಮಕ್ ಥ್ರಿಲ್..!

    producer liked chamak's story

    ಚಮಕ್ ಚಿತ್ರ, ಪ್ರೇಕ್ಷಕರಿಗೆ ಚಮಕ್ ಕೊಡೋಕೆ ರೆಡಿಯಾಗಿ ನಿಂತಿದೆ. ಚಮಕ್ ಕೊಡೋರ್ಯಾರು..? ಗಣೇಶ್‍ಗೆ ರಶ್ಮಿಕಾ ಕೊಡ್ತಾರಾ..? ರಶ್ಮಿಕಾಗೆ ಗಣೇಶ್ ಕೊಡ್ತಾರಾ..? ಗೊತ್ತಾಗೋದು ಶುಕ್ರವಾರ. ಸುನಿಯವರಂತೂ ಚಮಕ್ ಕೊಟ್ಟಾಗಿದೆ. ಆದ್ರೆ ಸುನಿ ನಿಜಕ್ಕೂ ಮೊದಲು ಚಮಕ್ ಕೊಟ್ಟಿದ್ದು ಚಿತ್ರದ ನಿರ್ಮಾಪಕರಿಗೆ. 

    ಚಿತ್ರದ ನಿರ್ಮಾಪಕ ಚಂದ್ರಶೇಖರ್, ಉದ್ಯಮಿಯಷ್ಠೇ ಅಲ್ಲ, ಸಾಹಿತ್ಯ, ಸಂಘಟನೆಗಳಲ್ಲೂ ಸಕ್ರಿಯರಾಗಿರುವವರು. ಚಂದ್ರಶೇಖರ್ ಅವರಿಗೆ ಮೊದಲು ಇಷ್ಟವಾಗಿದ್ದೇ ಚಿತ್ರದ ಕಥೆ. ಚಿತ್ರದ ಕಥೆ ಹೇಗಿತ್ತೋ.. ಅದನ್ನು ಅಷ್ಟೇ ಚೆಂದವಾಗಿ ತೆರೆಯ ಮೇಲೆ ತಂದಿದ್ದಾರಂತೆ ಸುನಿ. ಅದನ್ನು ಪ್ರೀತಿಯಿಂದ ಹೇಳಿಕೊಳ್ಳುವ ಚಂದ್ರಶೇಖರ್, ಇದು ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಬಣ್ಣಿಸುತ್ತಾರೆ. 

    ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಪರಭಾಷೆಯ ಗಾಯಕರ ಕೈಲಿ ಹಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಈ ಚಿತ್ರದಲ್ಲಿ ಅದನ್ನು ಮುರಿದಿದ್ದಾರೆ ಚಂದ್ರಶೇಖರ್. ಚಿತ್ರದ ಎಲ್ಲ ಹಾಡುಗಳನ್ನು ಕನ್ನಡದವರಿಂದಲೇ ಹಾಡಿಸಿದ್ದಾರೆ. ಚಿತ್ರದಲ್ಲಿ ಪರಭಾಷಿಕರಿಲ್ಲ ಎನ್ನುವುದು ವಿಶೇಷ.

    ಉತ್ತಮ ಮನರಂಜನೆ, ಉತ್ತಮ ಸಂದೇಶ ಎರಡೂ ಇರುವ ಚಮಕ್, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ ಎನ್ನುವುದು ನಿರ್ಮಾಪಕರ ವಿಶ್ವಾಸ.

  • ಕನ್ನಡದ ಚಮಕ್, ತೆಲುಗಿನಲ್ಲಿ ಗೀತಾ ಚಲೋ

    chamak is geetha chalo in telugu

    ಕನ್ನಡದಲ್ಲಿ ಯಶಸ್ವಿಯಾದ ಸಿನಿಮಾ ಚಮಕ್. ಸಿಂಪಲ್ ಸುನಿ ನಿರ್ದೇಶನದ ಚಮಕ್ ಮೂಲಕ ಗಣೇಶ್-ರಶ್ಮಿಕಾ ಜೋಡಿ ಹಿಟ್ ಆಗಿತ್ತು. ಈಗ ಅದೇ ಸಿನಿಮಾವನ್ನು ತೆಲಗಿನಲ್ಲಿ ತರಲು ಹೊರಟಿದ್ದಾರೆ. ತೆಲುಗಿನಲ್ಲಿ ಚಿತ್ರದ ಹೆಸರು ಗೀತಾ ಚಲೋ.

    ಅಂದಹಾಗೆ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ಚಲೋ. ಸೂಪರ್ ಡ್ಯೂಪರ್ ಹಿಟ್ ಚಿತ್ರ ಗೀತಗೋವಿಂದಂ. ಎರಡೂ ಚಿತ್ರಗಳ ಟೈಟಲ್‍ನ್ನು ಮಿಕ್ಸ್ ಮಾಡಿ ಗೀತಾ ಚಲೋ ಎಂದು ನಾಮಕರಣ ಮಾಡಿ, ತೆಲುಗಿನಲ್ಲಿ ರಿಲೀಸ್ ಮಾಡಲಾಗುತ್ತಿದೆ.

    ಅಂದಹಾಗೆ ಏಪ್ರಿಲ್ 26ರಂದು ಗಣೇಶ್ ಅಭಿನಯದ 99 ತೆರೆಗೆ ಬರುತ್ತಿದೆ. ಅದೇ ದಿನ, ತೆಲುಗಿನ ಗೀತಾ ಚಲೋ ಚಿತ್ರವೂ ರಿಲೀಸ್ ಆಗುತ್ತಿದೆ.

  • ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

    rakshith shetty rashmika mandana

    ನಾನು ನೋಡಿದ ತುಂಬಾ ಒಳ್ಳೆ ಹುಡುಗರಲ್ಲಿ ರಕ್ಷಿತ್ ಶೆಟ್ಟಿ ಒಬ್ಬರು. ಅವರಿಗೆ ಹುಟ್ಟುಹಬ್ಬದ ಶುಭಾಶಯ. ರಕ್ಷಿತ್ ಅವರೇ, ನಮ್ಮ ಪುಟ್ಟ ಕುಟುಂಬಕ್ಕೆ ನಿಮಗೆ ಸ್ವಾಗತ. ಕಿರಿಕ್ ಪಾರ್ಟಿಯ ಸಾನ್ವಿ ಫೇಸ್​ಬುಕ್​ನಲ್ಲಿ ಇಂಥಾದ್ದೊಂದು ಸ್ಟೇಟಸ್ ಹಾಕಿಕೊಂಡಾಗ, ಎಲ್ಲರ ಹುಬ್ಬೇರಿದ್ದು ನಿಜ.

    ಇತ್ತೀಚೆಗೆ ಸ್ಯಾಂಡಲವುಡ್​ನಲ್ಲಿ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿಯ ಪ್ರೀತಿ-ಪ್ರೇಮದ ಸುದ್ದಿ ಓಡಾಡುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುದ್ದಿ ಹುಟ್ಟೋದು, ರಕ್ಷಿತ್ ಶೆಟ್ಟಿ ನಿರಾಕರಿಸೋದು ನಡೆದೇ ಇತ್ತು.

    ಈಗ ಆ ಎಲ್ಲ ಸುದ್ದಿಗಳಿಗೂ ಬ್ರೇಕ್​ ಬಿದ್ದಿದೆ. ರಶ್ಮಿಕಾ ಸ್ಟೇಟಸ್​ ನೋಡಿ ಕುತೂಹಲಗೊಂಡು ರಕ್ಷಿತ್​ಗೆ ಫೋನ್ ಮಾಡಿದಾಗ, ಹೌದು ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    ಮಾಧ್ಯಮಗಳಲ್ಲಿ ಸುದ್ದಿಯಾದಾಗ ಏನಿದೆಲ್ಲ ಎಂದು ಕೇಳಿದ್ದರಂತೆ ರಶ್ಮಿಕಾ ತಂದೆ. ಮಾಧ್ಯಮಗಳ ಎದುರು ಸುದ್ದಿ ನಿರಾಕರಿಸಿದ್ದ ರಕ್ಷಿತ್ ಶೆಟ್ಟಿಗೆ ಭಾವೀ ಮಾವನ ಎದುರು ನಿರಾಕರಿಸಲು ಆಗಲಿಲ್ಲ. ಒಪ್ಪಿಕೊಂಡಿದ್ದಾರೆ. ಇದನ್ನು ಖುದ್ದು ರಕ್ಷಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

     ಜುಲೈ3ಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಎಂಗೇಜ್​ಮೆಂಟ್ ಖಚಿತ. ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

     

  • ಕೊಡಗಿನ ಕಣ್ಣೀರಿಗೆ ಮಿಡಿದ ರಶ್ಮಿಕಾ ಹೃದಯ

    rashmika writes an heartfelt letter about kogadu floods

    ಕೊಡಗು ಜನರ ಸಂಕಷ್ಟ ಕನ್ನಡದ ಕೋಟ್ಯಂತರ ಹೃದಯಗಳಲ್ಲಿ ಕರುಣೆಯನ್ನು ಬಡಿದೆಬ್ಬಿಸಿದೆ. ಮಾನವೀಯತೆಯ ಪ್ರವಾಹವೂ ಹರಿದಿದೆ. ಸ್ವತಃ ಕೊಡಗಿನವರೇ ಆದ ರಶ್ಮಿಕಾ ಮಂದಣ್ಣ ಕೂಡಾ ಹೊರತಲ್ಲ. ಕೊಡಗಿನ ಸಂಕಷ್ಟ ಕಂಡು ಪತ್ರವೊಂದನ್ನು ಬರೆದಿರುವ ರಶ್ಮಿಕಾ, ಕೊಡಗಿನ ಜೊತೆಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

    ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ. ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಏನೆಂದು ಕೂಗುವುದು. ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಲ್ಲ ನೀರಿನಲ್ಲಿಕೊಚ್ಚಿ ಹೋಗಿವೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ.  ಮಳೆಯ ಶಬ್ಧ, ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ನೀರು.ನೀರು..ನೀರು... ಬಿಟ್ಟರೆ ಕಣ್ಣೀರು. 

    ಧೈರ್ಯವಾಗಿ. ನಾವಿದ್ದೇವೆ ಎಂಬ ನಿಮ್ಮಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ. ಕೋಟ್ಯಾನುಕೋಟಿ ಮಂದಿ ಕೈ ಮೀರಿ ಸಹಾಯ ಮಾಡಿದ್ದೀರಿ. ನಿಮಗೆಲ್ಲರಿಗೂ ಮನಃಪೂರ್ವಕವಾಗಿ ಒದ್ದೆ ಕಣ್ಣಿನಿಂದಲೇ ವಂದಿಸುತ್ತಿದ್ದೇನೆ. ನೊಂದು ಬೆಂಬ ಬದುಕನ್ನು ಪುನಃ ನಿರ್ಮಿಸಬೇಕಾಗಿದೆ. ಕೈ ಜೋಡಿ. ನಾನೂ ನಿಮ್ಮೊಂದಿಗೆ ಇರುತ್ತೇನೆ.

    ಇದು ರಶ್ಮಿಕಾ ಬರೆದಿರುವ ಪತ್ರ. ಕೊಡಗಿನವರೇ ಆಗಿರುವ ರಶ್ಮಿಕಾ, ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವನ್ನೂ ಮಾಡಿದ್ದಾರೆ.

  • ಕೊನೆಗೂ ರಶ್ಮಿಕಾ ಮಂದಣ್ಣ ಮೌನ ಮುರಿದಾಗ..

    rashmika breaks her silence on break up issue

    ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಹಾರಾಡುತ್ತಿರುವಾಗ, ರಶ್ಮಿಕಾ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿರುವಾಗ.. ಹಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದ ರಶ್ಮಿಕಾ ಮಂದಣ್ಣ, ಕೊನೆಗೂ ಮೌನ ಮುರಿದಿದ್ದಾರೆ. ಉತ್ತರ ಕೊಟ್ಟಿದ್ದಾರೆ. 

    ಕಳೆದ ಹಲವು ದಿನಗಳಿಂದ ನನ್ನ ಬಗ್ಗೆ ಕೇಳಿ ಬರುತ್ತಿರುವ ರೂಮರ್, ಸುದ್ದಿ ಹಾಗೂ ಟ್ರೋಲ್‍ಗಳ ಬಗ್ಗೆ ಗಮನಿಸುತ್ತಿದ್ದೇನೆ. ಸುಮ್ ಸುಮ್ನೆ ಕೇಳಿ ಬರುವ ಇಂತಹ ಟ್ರೋಲ್‍ಗಳು ಕಿರಿಕಿರಿ ಮಾಡುತ್ತವೆ. ನನ್ನನ್ನು ಬಿಂಬಿಸಿರುವ ರೀತಿಯಿಂದಾಗಿ ನಿಜಕ್ಕೂ ಬೇಸರ ತರಿಸಿದೆ.

    ಹಾಗಂತ, ನಾನು ನಿಮ್ಮನ್ನು ದೂರುವುದಿಲ್ಲ. ನೀವು ನಂಬಿರೋದನ್ನ ನೀವು ಮಾಡಿದ್ದೀರಿ. ನಾನೀಗ ಯಾವುದನ್ನೂ ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗಲ್ಲ. ಅದು ಅಗತ್ಯವೂ ಇಲ್ಲ.

    ಇನ್ನು ನಾನಾಗಲೀ, ರಕ್ಷಿತ್ ಆಗಲೀ, ಸಿನಿಮಾ ರಂಗದ ಯಾರೇ ಆಗಲೀ.. ಇದನ್ನು ನೋಡಿಕೊಂಡು ಮುನ್ನಡೆಯುವುದಿಲ್ಲ. ಪ್ರತಿ ನಾಣ್ಯಕ್ಕೂ ಎರಡು ಮುಖಗಳಿರುವಂತೆ, ಪ್ರತಿ ಕಥೆಗೂ ಎರಡು ಮುಖಗಳಿರುತ್ತವೆ. 

    ನಾನು ನಿಮಗೆ ಕೇಳಿಕೊಳ್ಳೋದು ಇಷ್ಟೆ. ನಮ್ಮನ್ನು ಸ್ವಲ್ಪ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟುಬಿಡಿ. ಅಷ್ಟೆ. ಅಂದಹಾಗೆ, ನಾನು ಕನ್ನಡ ಚಿತ್ರರಂಗ ಬಿಟ್ಟು ಹೋಗುತ್ತಿಲ್ಲ. ನಾನು ಇಲ್ಲಿಯೇ ಇರುತ್ತೇನೆ. ಯಾವುದೇ ಚಿತ್ರವಾಗಲಿ, ನನ್ನೊಳಿಗೆ ಬೆಸ್ಟ್‍ನ್ನು ಕೊಡುತ್ತೇನೆ. ಧನ್ಯವಾದ.

    ಇದು ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ. ಹಲವು ದಿನಗಳ ನಂತರ ಮೌನ ಮುರಿದಿರುವ ರಶ್ಮಿಕಾ, ನೇರವಾಗಿ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆಯನ್ನೇನೂ ಕೊಟ್ಟಿಲ್ಲ.

  • ಗುರು ರಾಯರ ಸನ್ನಿಧಿಯಲ್ಲಿ ರಕ್ಷಿತ್, ರಶ್ಮಿಕಾ ಜೋಡಿ

    rakshith, rashmika in matralaya

    ಒಂದು ಕಡೆ ಕಿರಿಕ್ ಪಾರ್ಟಿ ಚಿತ್ರ 200 ದಿನ ಪೂರೈಸಿದ ಸಂಭ್ರಮ, ಮತ್ತೊಂದೆಡೆ ಬಾಳ ಸಂಗಾತಿಗಳಾಗಲು ನಿರ್ಧರಿಸಿರುವ ಸಡಗರ.. ಈ ಎರಡೂ ಸಡಗರಕ್ಕೆ ಸಾಕ್ಷಿಯಾಗುತ್ತಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ.

    ನಿಶ್ಚಿತಾರ್ಥ ಮಾಡಿಕೊಂಡ ನಂತರ ಇಬ್ಬರೂ ಮಂತ್ರಾಲಯಕ್ಕೆ ಭೇಟಿ ನೀಡಿ, ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ರಿಷಬ್ ಶೆಟ್ಟಿ ಸೇರಿದಂತೆ ಎರಡೂ ಕುಟುಂಬ ಸದಸ್ಯರು ಮಂತ್ರಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

  • ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್

    dr ganesh as luv uvacha

    ನಿಮಗೆ ಲೈಂಗಿಕ ಸಮಸ್ಯೆಗಳಿವೆಯೇ.. ಸ್ತ್ರೀ ರೋಗ ಸಮಸ್ಯೆಗಳಿವೆಯೇ.. ವೈದ್ಯರು ಸಿಗುತ್ತಿಲ್ಲವೇ.. ತಡಮಾಡಬೇಡಿ. ಇದೇ ಶುಕ್ರವಾರದಿಂದ ನಿಮಗೆ ಹೊಸ ಡಾಕ್ಟರ್ ಸಿಗುತ್ತಿದ್ದಾರೆ. ಅವರ ಹೆಸರು ಡಾ.ಗಣೇಶ್. ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್ ಆಗಿದ್ದಾರೆ. ಅವರೀಗ ಗೈನಕಾಲಜಿಸ್ಟ್. ಸ್ತ್ರೀರೋಗ ತಜ್ಞರು. ಗರ್ಭಧಾರಣೆ, ಶಿಶುಪಾಲನೆ, ಹೆರಿಗೆ ಎಲ್ಲದಕ್ಕೂ ಅವರು ಚಿಕಿತ್ಸೆ ಕೊಡ್ತಾರೆ. ಚಿಕಿತ್ಸೆ ಕೊಡದೇ ಹೋದರೂ ಚಮಕ್ ಅಂತೂ ಗ್ಯಾರಂಟಿ.

    ನಗಬೇಡಿ, ಇದೂ ಚಮಕ್ಕೇ. ಚಮಕ್‍ನಲ್ಲಿ ಸಿಂಪಲ್ ಸುನಿ, ರಿಯಲ್ ಲೈಫಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್ ಒದಿರುವ ಗಣೇಶ್‍ರನ್ನು ಎಂಬಿಬಿಎಸ್ ಓದಿಸಿ ಡಾಕ್ಟರ್ ಮಾಡಿಸಿದ್ದಾರೆ. ಸ್ಟೆತಾಸ್ಕೋಪು ಹಿಡಿಯೋದು, ಮೆಡಿಕಲ್ ಸ್ಟೋರ್‍ನವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಪ್ರಿಸ್ಕಿಪ್ಷನ್ ಬರೆಯೋದು ಮೊದಲಾದ ಡಾಕ್ಟರ್ ಕಸುಬುದಾರಿಕೆಗಳನ್ನು ಗಣೇಶ್ ಕಲಿತಿದ್ದಾರೆ.

    ಈ ಡಾಕ್ಟರ್‍ಗೆ ಚಮಕ್ ಕೊಡೋದು ಅಂದ, ಅದೃಷ್ಟದ ಗೊಂಬೆ ರಶ್ಮಿಕಾ. ಇವರೆಲ್ಲರನ್ನೂ ಒಟ್ಟಿಗೇ ಕೂರಿಸಿರೋದು ಚಂದ್ರಶೇಖರ್. ಚಮಕ್, ಚಮಕ್ ಕೊಡೋಕೆ ರೆಡಿ.

  • ಚಂದಮಾಮ ಓದೋ ವಯಸ್ಸಲ್ಲೇ ಕೃಷ್ಣಂಗೂ, ಕಾವೇರಿಗೂ ಲವ್ವು..!

    love stroy between krishna and kauveri in yajamana

    ದರ್ಶನ್ ಚಿತ್ರಗಳಲ್ಲಿ ಕಾವೇರಿ ಅನ್ನೋ ಹೀರೋಯಿನ್ ಹೆಚ್ಚು. ಯಜಮಾನನಲ್ಲೂ ಅಷ್ಟೆ, ದರ್ಶನ್ ಕೃಷ್ಣನಾದರೆ, ರಶ್ಮಿಕಾ ಕಾವೇರಿ. ಇಬ್ಬರೂ ಪ್ರೀತಿಗೆ ಬೀಳ್ತಾರೆ. ಹೋಲ್ಡಾನ್..

    ಅವರಿಬ್ಬರಿಗೂ ಆಗೋದು ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಅವರಿಬ್ಬರದ್ದೂ ಬಾಲ ಪ್ರೇಮ ಕಥೆ. ಬಾಲಮಿತ್ರ, ಚಂದಮಾಮ ಓದೋ ವಯಸ್ಸಲ್ಲೇ ಇಬ್ರಿಗೂ ಲವ್ವಾಗುತ್ತಂತೆ. ದೊಡ್ಡವರಾದ್ ಮೇಲೆ ಮರ ಸುತ್ತುತ್ತಾರೆ.. ಅಷ್ಟೆ..

    ಇಷ್ಟೆಲ್ಲ ಹೇಳಿರೋದು ಕಾವೇರಿ ರಶ್ಮಿಕಾ ಮಂದಣ್ಣ. ಮುಂದಿನದ್ದೆಲ್ಲ ಹೇಳೋಕೆ ಶೈಲಜಾ ನಾಗ್, ಹರಿಕೃಷ್ಣ ಬಿಟ್ಟಿಲ್ವಂತಣ್ಣ.