` rashmika, - chitraloka.com | Kannada Movie News, Reviews | Image

rashmika,

  • ರಶ್ಮಿಕಾ ಕಣ್ಣೀರು ಹಾಕ್ಬೇಕಾ..? ಹೀಗೆ ಮಾಡಿ..

    why did rashmika cry during geetha govindam shooting

    ರಶ್ಮಿಕಾ ಮಂದಣ್ಣ ಅಂದರೆ ಕಣ್ಣೆದುರು ಬರೋದು ನಗು. ಆ ನಗುಮೊಗದಲ್ಲೇ ಎಲ್ಲವನ್ನೂ ನಿಭಾಯಿಸುವ ಈ ಚೆಲುವೆ ಕಣ್ಣೀರಿಟ್ಟಿದ್ದನ್ನು ನೋಡಿದವರೇ ಇಲ್ಲ ಎನ್ನಬೇಕು. ಇಷ್ಟಕ್ಕೂ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಬೇಕೆಂದರೆ ಏನು ಮಾಡಬೇಕು. ಉತ್ತರ ಸಿಂಪಲ್, ಆಕೆಯ ಜೊತೆಯಲ್ಲಿದ್ದವರು ಅರ್ಧ ಗಂಟೆ ಆಕೆಯ ಜೊತೆ ಮಾತನಾಡದೆ ಹೋದರೆ ಸಾಕು. ಅಂಥಾದ್ದೊಂದು ಅನುಭವವನ್ನ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ.

    ಗೀತ ಗೋವಿಂದಂ ಚಿತ್ರದ ಶೂಟಿಂಗ್ ವೇಳೆ ಒಂದು ದಿನ ರಶ್ಮಿಕಾ ಸೆಟ್‍ಗೆ ಹೋದರಂತೆ. ಆದರೆ, ಪ್ರತಿದಿದ ಹೋದ ತಕ್ಷಣ ವಿಶ್ ಮಾಡುತ್ತಿದ್ದವರೆಲ್ಲ ಆ ದಿನ ಫುಲ್ ಸೈಲೆಂಟ್. ಏನೇ ಕೇಳಿದ್ರೂ ಎಲ್ಲರದ್ದೂ ಒನ್ ವರ್ಡ್ ಆನ್ಸರ್. ಎಲ್ಲರ ಮುಖದಲ್ಲೂ ಮೌನ. ಆದರೆ, ಉಳಿದವರ ಜೊತೆ ಅವರೆಲ್ಲ ಆರಾಮಾಗಿಯೇ ಮಾತನಾಡುತ್ತಿದ್ದಾರೆ. ಕನ್‍ಫ್ಯೂಸ್ ಆಗೋಕೆ ಶುರುವಾಯ್ತಂತೆ. ಏನಾದರೂ ತಪ್ಪು ಮಾಡಿಬಿಟ್ಟೆನಾ ಅನ್ನಿಸೋಕೆ ಶುರುವಾಯ್ತಂತೆ. ಕೊನೆಗೆ ಕ್ಯಾರವಾನ್‍ನಲ್ಲಿ ಕುಳಿತು ಕಣ್ಣೀರಿಟ್ಟರಂತೆ. ನಂತರ ಶೂಟಿಂಗ್ ಮಾಡೋಕೆ ಮೂಡ್ ಇಲ್ಲ ಎಂದು ನಿರ್ದೇಶಕರಿಗೆ ಹೇಳಿ ಹೊರಟಾಗ ರಿಯಲ್ ವಿಷಯ ಗೊತ್ತಾಯ್ತಂತೆ.

    ರಶ್ಮಿಕಾ ಅವರನ್ನು 15 ನಿಮಿಷ ಯಾರೂ ಮಾತನಾಡಿಸದೆ ಹೋದರೆ ಅತ್ತು ಬಿಡ್ತಾರೆ ಎಂದು ಯಾರೋ ನಿರ್ದೇಶಕ ಪರಶುರಾಮ್‍ಗೆ ಹೇಳೀದ್ರಂತೆ. ಅದನ್ನು ಟೆಸ್ಟ್ ಮಾಡೋಣ ಎಂದು ಇಡೀ ಚಿತ್ರತಂಡ ಪ್ಲಾನ್ ಮಾಡಿಯೇ ರಶ್ಮಿಕಾ ಅವರನ್ನು ಹಾಗೆ ಗೋಳು ಹೊಯ್ದುಕೊಂಡಿತ್ತಂತೆ. ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಇಬ್ಬರೂ ಹೇಳಿದರೂ, ರಶ್ಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ಕೊನೆಗೆ ಇಡೀ ಚಿತ್ರತಂಡದವರೆಲ್ಲ ರಶ್ಮಿಕಾ ಬಳಿ ಬಂದು ಸಾರಿ ಕೇಳಿ ಸಮಾಧಾನ ಮಾಡಿದ್ರಂತೆ.

  • ರಶ್ಮಿಕಾ ಜಾಗಕ್ಕೆ ಮಣಿರತ್ನಂ ಚಿತ್ರದ ನಿತ್ಯಶ್ರೀ

    nithya sri replaces rashmika in vritha

    ವೃತ್ರ' ಎಂಬ ಹೆಸರಿನ ಈ ಚಿತ್ರ ಇಷ್ಟೊತ್ತಿಗೆ ಸೆಟ್ಟೇರಿ ಚಿತ್ರೀಕರಣ ಶುರುವಾಗಬೇಕಿತ್ತು. ಮೊದಲು ಖುಷಿಯಿಂದ ಚಿತ್ರ ಒಪ್ಪಿಕೊಂಡಿದ್ದ ರಶ್ಮಿಕಾ ಮಂದಣ್ಣ, ನಂತರ ವೃತ್ತಿ ಜೀವನದ ಆರಂಭದಲ್ಲೇ ಇಂತಹ ಪಾತ್ರ ಬೇಡ ಎಂದು ಎದ್ದುಹೋಗಿದ್ದರು. ಈಗ ಅ ಜಾಗಕ್ಕೆ ನಿತ್ಯಶ್ರೀ ಎಂಬ ಹುಡುಗಿ ನಾಯಕಿಯಾಗಿದ್ದಾರೆ.

    ನಿತ್ಯಶ್ರೀ, ಕಾಟ್ರು ವೆಲಿಯಿಡೈ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿದ್ದರು. ಅದು ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಸಿನಿಮಾ. ಭರತನಾಟ್ಯ ಪ್ರವೀಣೆಯಾಗಿರುವ ನಿತ್ಯಶ್ರೀಗೆ `ನೀನು ಚೆನ್ನಾಗಿ ಅಭಿನಯಿಸಬಲ್ಲೆ' ಎಂದು ಹೇಳಿ ಸಿನಿಮಾ ಮಾಡಿಸಿದ್ದರು ಮಣಿರತ್ನಂ. ಅದಾದ ಮೇಲೆ ದುಲ್ಕರ್ ಸಲ್ಮಾನ್‍ರ `ಸೋಲೋ' ಎಂಬ ಮಲಯಾಳಂ ಚಿತ್ರಕ್ಕೆ ಸಹ ನಿರ್ದೇಶಕಿಯಾಗಿದ್ದರು. ನೃತ್ಯದಲ್ಲಿ ಮಯೂರಿ ಉಪಾಧ್ಯ ಅವರ ಶಿಷ್ಯೆ. ಈಗ ವೃತ್ರ ಚಿತ್ರಕ್ಕೆ ನಾಯಕಿ. ಮೂಲತಃ ಕನ್ನಡತಿ.

    ಪೊಲೀಸ್ ಅಧಿಕಾರಿಯಾಗಿ ಕೆಲಸ ಆರಂಭಿಸುವ ಹುಡುಗಿಯೊಬ್ಬಳು ಎದುರಿಸುವ ಮೊದಲ ಕೇಸ್‍ನ ಕಥೆ ವೃತ್ರ ಚಿತ್ರದಲ್ಲಿದೆ. ನಿರ್ಮಾಪಕ ಗೌತಮ್ ಅಯ್ಯರ್. `ಸ್ಕ್ರಿಪ್ಟ್ ಚೆನ್ನಾಗಿದೆ. ಚಿತ್ರೀಕರಣದಲ್ಲಿ ಭಾಗವಹಿಸೋಕೆ ಕಾಯುತ್ತಿದ್ದೇನೆ' ಎಂದಿದ್ದಾರೆ ನಿತ್ಯಶ್ರೀ.

  • ರಶ್ಮಿಕಾ ಡ್ರಾಪ್ ಮಾಡಿದ ಪಾತ್ರದಲ್ಲಿ ನಿತ್ಯಶ್ರೀ

    nithyashri bags vritha movie

    ವೃತ್ರ ಅನ್ನೋ ವಿಚಿತ್ರ ಹೆಸರಿನ ಸಿನಿಮಾ ತನ್ನ ವಿಭಿನ್ನ ಟೈಟಲ್ ಹಾಗೂ ರಶ್ಮಿಕಾ ಮಂದಣ್ಣರ ಕಾರಣದಿಂದಾಗಿ ಸುದ್ದಿಯಾಗಿತ್ತು. ಕೆಲವು ತಿಂಗಳ ಹಿಂದೆಯೇ ಶುರುವಾಗಬೇಕಿದ್ದ ಸಿನಿಮಾ, ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರ ನಡೆಯುವುದರೊಂದಿಗೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರ ಮತ್ತೆ ಟೇಕಾಫ್ ಆಗಿದ್ದು, ರಶ್ಮಿಕಾ ಜಾಗಕ್ಕೆ ನಿತ್ಯಶ್ರೀ ಬಂದಿದ್ದಾರೆ. ಈಕೆ, ಈಗಾಗಲೇ ಮಣಿರತ್ನಂ ಚಿತ್ರಗಳಲ್ಲಿ ನಟಿಸಿರುವ ಹುಡುಗಿ. ಮಲಯಾಳಂ ಚಿತ್ರವೊಂದಕ್ಕೆ ಸಹನಿರ್ದೇಶಕಿಯಾಗಿಯೂ ಅನುಭವವಿರುವ ನಿತ್ಯಶ್ರೀ, ವೃತ್ರದ ನಾಯಕಿಯಾಗಿದ್ದಾರೆ.

    ಇದು ನಿತ್ಯಶ್ರೀಗೆ ಮೊದಲ ಕನ್ನಡ ಸಿನಿಮಾ. ಇಂದಿರಾ ಅನ್ನೋ ಹೆಸರಿನ ಪೊಲೀಸ್ ಆಫೀಸರ್ ಪಾತ್ರ ಅವರದ್ದು. ಚಿತ್ರದಲ್ಲಿ ಸಾಹಸ ಸನ್ನಿವೇಶಗಳೇನಿಲ್ಲ. ಬುದ್ದಿವಂತಿಕೆಯ ಆಟವಿದೆ. ಗೌತಮ್ ಅಯ್ಯರ್ ನಿರ್ದೇಶನದ ಸಿನಿಮಾಗೆ, ಚಿತ್ರದ ಕಥೆಗೆ ಕಿರಣ್ ಬೇಡಿ ಸ್ಫೂರ್ತಿಯಂತೆ.

  • ರಶ್ಮಿಕಾ ಪೊಗರಿನ ಸಂಭಾವನೆ ಲಕ್ಷಾನಾ..? ಕೋಟಿನಾ..?

    rashmika's remuneration creates sensation

    ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿಯಲ್ಲಿರಲ್ಲಿ ಒಬ್ಬರು. ಅವರೀಗ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆ ಚಿತ್ರಕ್ಕೆ ಅವರು ಪಡೆದಿರುವ ಸಂಭಾವನೆಯೇ ಭರ್ಜರಿ ಸದ್ದು ಮಾಡುತ್ತಿದೆ. 

    ಒಂದು ಮೂಲದ ಪ್ರಕಾರ, ರಶ್ಮಿಕಾ ಪಡೆದಿರುವ ಸಂಭಾವನೆ 64 ಲಕ್ಷ. ಇದುವರೆಗೆ ಕನ್ನಡದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ನಿರ್ಮಾಪಕ ಗಂಗಾಧರ್ ಆಗಲೀ, ನಿರ್ದೇಶಕ ನಂದಕಿಶೋರ್ ಆಗಲೀ.. ಈ ಬಗ್ಗೆ ನೋ ಕಮೆಂಟ್ಸ್.

    ಇನ್ನೊಂದು ಮೂಲದ ಪ್ರಕಾರ ಇದು ಭಾರಿ ಮೊತ್ತವೇನೂ ಅಲ್ಲ. ತೆಲುಗು, ತಮಿಳಿನಲ್ಲಿ ಇದಕ್ಕಿಂತಲೂ ಒಳ್ಳೆಯ ಸಂಭಾವನೆ ಇದೆ. ಅದು ಕೋಟಿ ದಾಟಿದೆ. ಕನ್ನಡದಲ್ಲಿ ರಶ್ಮಿಕಾ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.

    ದುಡ್ಡಿನ ವಿಷ್ಯ. ಕೇಳಿದ್ರೆ ಎಲ್ಲರೂ ಶ್‍ಶ್‍ಶ್‍ಶ್‍ಶ್‍ಶ್ ಅಂತಾರೆ.

  • ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಿಪ್ ಲಾಕ್

    rashika lip locks with vijay devarakonda

    ಸೌಥ್ ಇಂಡಿಯಾ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ. ಒನ್ಸ್ ಎಗೇಯ್ನ್ ವಿಜಯ್ ದೇವರಕೊಂಡ ಅವರ ಜೊತೆ. ಮತ್ತೊಮ್ಮೆ ತೆಲುಗು ಚಿತ್ರದಲ್ಲೇ. ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಎಂಬ ಚಿತ್ರಕ್ಕೆ ರಶ್ಮಿಕಾ-ವಿಜಯ್ ದೇವರಕೊಂಡ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಮಳೆಯಲ್ಲಿ ನೆನೆಯುವ ದೃಶ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಲಿಪ್‍ಲಾಕ್ ಮಾಡಿದ್ದಾರೆ.

    ಈ ಹಿಂದೆ ಗೀತಗೋವಿಂದಂ ಚಿತ್ರದಲ್ಲಿಯೂ ತುಟಿಗೆ ತುಟಿ ಬೆಸೆಯುವ ದೃಶ್ಯವಿತ್ತು. ಬಿಡುಗಡೆಗೆ ಮೊದಲೇ ಆ ದೃಶ್ಯ ಲೀಕ್ ಆಗಿತ್ತು. ನಂತರ ರಿಲೀಸ್ ಆದ ಕೆಲ ದಿನಗಳ ನಂತರ ಆ ದೃಶ್ಯವನ್ನು ಚಿತ್ರದಿಂದ ರಿಮೂವ್ ಮಾಡಲಾಗಿತ್ತು. ಅಫ್‍ಕೋರ್ಸ್.. ಆ ದೃಶ್ಯ ಈಗಲೂ ಆನ್‍ಲೈನ್‍ನಲ್ಲಿ ಸಿಗುತ್ತೆ.ಈಗ ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದಾರೆ ರಶ್ಮಿಕಾ. 

  • ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು..?

    which is rashmika;s next movie

    ತೆಲುಗು ಇಂಡಸ್ಟ್ರಿಯಲ್ಲಿ ಕ್ಯೂಟ್ ಕ್ಯೂಟ್ ಆಗಿ ಹಾಟ್ ಅಲೆ ಎಬ್ಬಿಸಿರುವ ಚೆಲುವೆ ರಶ್ಮಿಕಾ ಮಂದಣ್ಣ. ತೆಲುಗಿನಲ್ಲಿ ಅಲ್ಲು ಅರ್ಜುನ್, ನಿತಿನ್ ಜೊತೆ ನಟಿಸುತ್ತಿರುವ ರಶ್ಮಿಕಾ, ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿದ್ದಾರೆ. ಆದರೆ.. ಕನ್ನಡದಲ್ಲಿ ನಟಿಸಿರುವ ಪೊಗರು ಇನ್ನಷ್ಟೇ ರಿಲೀಸ್ ಆಗಬೇಕಿದೆ. ಯಜಮಾನ ನಂತರ ಪೊಗರು ಎದುರು ನೋಡುತ್ತಿರುವ ಪ್ರೇಕ್ಷಕ ಪ್ರಭು ಕೇಳುತ್ತಿರುವ ಪ್ರಶ್ನೆ.. ರಶ್ಮಿಕಾ ಮುಂದಿನ ಕನ್ನಡ ಸಿನಿಮಾ ಯಾವುದು..?

    ಈ ಪ್ರಶ್ನೆಗೆ ಅವರ ಉತ್ತರ ‘ಕನ್ನಡ ಸಿನಿಮಾ ಇದೆ. ನಾನು ಹೇಳಲ್ಲ. ಸದ್ಯಕ್ಕೆ ಅದು ಸೀಕ್ರೆಟ್’ ಎಂದಿದ್ದಾರೆ. ಒಂದು ಕಡೆ ಮದಗಜ ಸೃಷ್ಟಿಸಿರೋ ಕುತೂಹಲ.. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಅವರ ಈ ಸ್ಟೇಟ್ಮೆಂಟ್ ಲಿಂಕ್ ಆದರೆ.. ಅದು ಯಾವ ಚಿತ್ರ ಇರಬಹುದು ಅನ್ನೋ ಕುತೂಹಲ ಮೂಡಿದ್ರೆ ಆಶ್ಚರ್ಯವೇನೂ ಇಲ್ಲ. ಹೌದಾ ರಶ್ಮಿಕಾ..?

  • ರಶ್ಮಿಕಾ ಮಂದಣ್ಣಗೆ ನಾಗಾರ್ಜುನ ಹೇಳಿದ ಭವಿಷ್ಯ..!

    nagarjuna appreciates rashmika

    ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗಿನಲ್ಲಿ ಇದುವರೆಗೆ ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 5. ವಿಶೇಷ ಅಂದ್ರೆ ಐದಕ್ಕೆ ಐದೂ ಚಿತ್ರಗಳು ಹಿಟ್. ಈಗ ತೆಲುಗಿನಲ್ಲಿ ದೇವದಾಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಶ್ಮಿಕಾಗೆ ಈ ಚಿತ್ರದಲ್ಲಿ ತೆಲುಗು ಇಂಡಸ್ಟ್ರಿಯ ರೊಮ್ಯಾಂಟಿಕ್ ಸ್ಟಾರ್ ನಾಗಾರ್ಜುನ ಜೊತೆ ನಟಿಸುವ ಅದೃಷ್ಟ ಖುಲಾಯಿಸಿದೆ. ನಾಗಾರ್ಜುನ ಹಾಗೂ ನಾನಿ ಚಿತ್ರದ ಹೀರೋಗಳು. ಚಿತ್ರದ ಆಡಿಯೋ ರಿಲೀಸ್ ವೇದಿಕೆಯಲ್ಲಿ ಅಕ್ಕಿನೇನಿ ನಾಗಾರ್ಜುನ ರಶ್ಮಿಕಾ ಬಗ್ಗೆ ಭವಿಷ್ಯ ನುಡಿದಿದ್ದಾರೆ.

    ರಶ್ಮಿಕಾ ಈಗಾಗಲೇ ತೆಲುಗಿನಲ್ಲಿ 2 ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಈ ಸಿನಿಮಾ ಕೂಡಾ ಹಿಟ್ ಆಗಲಿದೆ. ಇದಾದ ನಂತರ ಹ್ಯಾಟ್ರಿಕ್ ಹಿಟ್ ಸಾಧಿಸಲಿರೋ ರಶ್ಮಿಕಾ, ಸೌತ್ ಇಂಡಸ್ಟ್ರಿಯ ಟಾಪ್ ನಟಿ ಎನಿಸಿಕೊಳ್ಳಲಿದ್ದಾರೆ ಎನ್ನುವುದು ನಾಗಾರ್ಜುನ ರಶ್ಮಿಕಾ ಬಗ್ಗೆ ಹೇಳಿರೋ ಭವಿಷ್ಯ.

    ರಶ್ಮಿಕಾ ಸದಾ ನಗು ನಗುತ್ತಾ ಮಾತನಾಡುವ ಹುಡುಗಿ, ಎನರ್ಜೆಟಿಕ್ ಎನ್ನುವ ನಾಗಾರ್ಜುನ, ಆಕೆ ಜೊತೆಯಲ್ಲಿದ್ದರೆ, ಅಲ್ಲಿ ನಗು ಗ್ಯಾರಂಟಿ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

  • ರಶ್ಮಿಕಾ ಮಂದಣ್ಣಗೆ ಮೆಗಾ ಬಂಪರ್..!

    will rashmika act in vijay's next film ?

    ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್, ಗಣೇಶ್ ಜೊತೆ ಹಿಟ್ ಸಿನಿಮಾ ನೀಡಿರುವ ರಶ್ಮಿಕಾ, ದರ್ಶನ್ ಮತ್ತು ಧ್ರುವ ಸರ್ಜಾ ಜೊತೆ ನಟಿಸುತ್ತಿದ್ದಾರೆ. ಅತ್ತ ತೆಲುಗಿನಲ್ಲಿ ವಿಜಯ್ ದೇವರಕೊಂಡ, ಅಲ್ಲು ಸುರೇಶ್, ನಾನಿ ಜೊತೆ ಹಿಟ್ ನೀಡಿದ್ದಾರೆ. ಈಗ ತಮಿಳಿಗೂ ಹಾರುತ್ತಿದ್ದಾರೆ.

    ತಮಿಳಿನಲ್ಲಿ ವಿಜಯ್ ಅಭಿನಯದ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಅನ್ನೋ ಸುದ್ದಿ ಜೋರಾಗಿದೆ. ಇನ್ನೂ ಕನ್‍ಫರ್ಮ್ ಆಗಿಲ್ಲ ಎನ್ನುತ್ತಿದ್ದಾರೆ ರಶ್ಮಿಕಾ. ಅದು ವಿಜಯ್ ಮತ್ತು ನಿರ್ದೇಶಕ ಅಟ್ಲೀಕುಮಾರ್ ಕಾಂಬಿನೇಷನ್‍ನ ಸಿನಿಮಾ. ಥೆರಿ ಮತ್ತು ಮರ್ಸೆಲ್ ಎಂಬ ಎರಡು ಹಿಟ್ ನೀಡಿರುವ ಜೋಡಿ, 3ನೇ ಬಾರಿಗೆ ಒಂದಾಗುತ್ತಿದೆ. ಆ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗಿದ್ದು, ಮಾತುಕತೆಗಳು ಫೈನಲ್ ಹಂತದಲ್ಲಿವೆ.

  • ರಶ್ಮಿಕಾ ಸೋಷಿಯಲ್ ಸರ್ವಿಸ್ ಸೀಕ್ರೆಟ್

    fans share rashmika's secret social services

    ರಶ್ಮಿಕಾ ಮಂದಣ್ಣ, ಕನ್ನಡಿಗರು ಮತ್ತು ತೆಲುಗರ ಹಾರ್ಟ್ ಫೇವರಿಟ್ ನಟಿ. ಸಿನಿಮಾಗಳ ಮೂಲಕ ಇಲ್ಲವೇ ವಿವಾದಗಳ ಮೂಲಕ ಸುದ್ದಿಯಲ್ಲಿದ್ದೇ ಇರುತ್ತಾರೆ. ಈ ಬಾರಿ ಒಂದೊಳ್ಳೆ ಸುದ್ದಿಯಿಂದ ಸದ್ದು ಮಾಡಿದ್ದಾರೆ ರಶ್ಮಿಕಾ.

    ರಸ್ತೆ ಬದಿಯ ಅಶಕ್ತರಿಗೆ ರಶ್ಮಿಕಾ ಮಂದಣ್ಣ ಊಟ ಬಡಿಸುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಸೆರೆ ಹಿಡಿದು, ರಶ್ಮಿಕಾಗೇ ಟ್ಯಾಗ್ ಮಾಡಿದ್ದಾರೆ. ನಾವು ನಿಮ್ಮ ಅಭಿಮಾನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ಪೂರ್ತಿ ವಿವರ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

    ಫೋಟೋಗೆ ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಸಂಪೂರ್ಣ ವಿವರ ನೀಡಿಲ್ಲ. ನಿಮಗೆ ಫೋಟೋ ಎಲ್ಲಿ ಸಿಕ್ಕಿತು ಎಂದು ಅಚ್ಚರಿ ವ್ಯಕ್ತಪಡಿಸಿರುವ ರಶ್ಮಿಕಾ, ಪ್ರತಿದಿನ ಬಿಸಿಲಿನಲ್ಲಿ ಆ ಕುಟುಂಬಗಳು ಬಳಲುವುದನ್ನು ನೋಡುತ್ತಿದ್ದೆ. ಅವರು ಕ್ಯಾನ್ಸರ್ ಪೀಡಿತ ಕುಟುಂಬದವರು. ಬಡವರು. ಏನಾದರೂ ಮಾಡಬೇಕು ಎನ್ನಿಸಿತು. ತೋಚಿದ್ದು ಮಾಡಿದ್ದೇನೆ ಅಷ್ಟೆ ಎಂದಿದ್ದಾರೆ ರಶ್ಮಿಕಾ.

  • ರಶ್ಮಿಕಾ ಸ್ಟಾರ್ ದರ್ಶನ್

    rashmika to act with darshan

    ನನ್ನ ಮುಂದಿನ ಚಿತ್ರ ಕೂಡಾ ಸ್ಟಾರ್ ನಟರ ಜೊತೆ ಎಂದಿದ್ದರು ರಶ್ಮಿಕಾ ಮಂದಣ್ಣ. ಅದು ಯಾರು..? ಯಾವ ಸಿನಿಮಾ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದ್ದರು. ಈಗ ಆ ಗುಟ್ಟು ರಟ್ಟಾಗಿದೆ.

    ರಶ್ಮಿಕಾ ಮಂದಣ್ಣ ದರ್ಶನ್ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಕುರುಕ್ಷೇತ್ರ ಚಿತ್ರದ ನಂತರ ಶೈಲಜಾ ನಾಗ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶನ್‍ಗೆ ರಶ್ಮಿಕಾ ನಾಯಕಿ. ಬಿ.ಕುಮಾರ್ ನಿರ್ದೇಶನದ ಚಿತ್ರ, ಇದೇ ತಿಂಗಳು ಸೆಟ್ಟೇರಲಿದೆ.

    Related Articles :-

    Rashmika Mandanna To Star In A Big Budget Film

  • ರಶ್ಮಿಕಾ-ರಕ್ಷಿತ್ ಬ್ರೇಕಪ್‍ಗೆ ವಿಜಯ್ ದೇವರಕೊಂಡ ಹೇಳಿದ್ದೇನು..?

    vijay devarakonda talks about rakshit rashmika

    ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿಗೆ ಗೀತ ಗೋವಿಂದಂ ಚಿತ್ರದ ಹೀರೋ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವಿನ ಮುನಿಸಿಗೆ ಗೀತಗೋವಿಂದಂ ಸಿನಿಮಾದ ಲಿಪ್‍ಲಾಕ್ ದೃಶ್ಯವೂ ಕಾರಣ ಎನ್ನಲಾಗಿತ್ತು. ಈ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ ವಿಜಯ್ ದೇವರಕೊಂಡ.

    `ಅವರ ಪರ್ಸನಲ್ ಲೈಫ್ ಬಗ್ಗೆ ಮಾತನಾಡೋಕೆ ನಾನು 3ನೇ ವ್ಯಕ್ತಿ. ನನಗೆ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರೂ ಗೊತ್ತು. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಕೇಳಿ ನನಗೂ ಬೇಜಾರಾಯ್ತು. ಈ ವಿಚಾರದ ಬಗ್ಗೆ ಅವರಿಬ್ಬರೇ ಮಾತನಾಡಬೇಕು' ಎಂದಿದ್ದಾರೆ ವಿಜಯ್ ದೇವರಕೊಂಡ.

  • ರಶ್ಮಿಕಾಗೆ ಕಾದಿದೆ ಅಮ್ಮನ ಪ್ರೀತಿಯ ಉಡುಗೊರೆ

    rashmika awaits her mothers gift

    ರಶ್ಮಿಕಾ ಮಂದಣ್ಣಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 22ನೇ ವರ್ಷಕ್ಕೆ ಕಾಲಿಡುತ್ತಿರುವ ರಶ್ಮಿಕಾ, ಹುಟ್ಟುಹಬ್ಬದ ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್‍ನಲ್ಲಿರ್ತಾರೆ. ಆ ದಿನ ರಶ್ಮಿಕಾಗೆ ಒಂದು ಪ್ರೀತಿಯ ಉಡುಗೊರೆ ಕಾದಿದೆ. ಅದು ಕಾರು, ಬೈಕು, ವಜ್ರ, ವೈಢೂರ್ಯ ಅಲ್ಲ..ಆದರೆ, ಅವೆಲ್ಲವುಗಳಿಗಿಂತ ಅಮೂಲ್ಯವಾದದ್ದು. ಅಂಥಾದ್ದೊಂದು ಅಮೂಲ್ಯ ಕಾಣಿಕೆ ನೀಡುತ್ತಿರುವುದು ರಶ್ಮಿಕಾ ಅವರ ತಾಯಿ ಸುಮನ್. 

    ಅಂಥಾ ಕಾಣಿಕೆ ಏನಿರಬಹುದು ಅಂತೀರಾ.. ಅದೊಂದು ಪತ್ರ. ತಾಯಿಯೊಬ್ಬರು ಮಗಳಿಗೆ ಬರೆಯಬಹುದಾದ ಒಂದು ಪತ್ರವನ್ನು ಮಗಳ ಹುಟ್ಟುಹಬ್ಬಕ್ಕೆ ಕೊಡುತ್ತಿದ್ದಾರೆ ಸುಮನ್. ಆ ಪತ್ರದಲ್ಲಿ ರಶ್ಮಿಕಾಗೆ ಅವರ ಜೀವನದ ಅತ್ಯಂತ ಪ್ರಮುಖ ವಿಷಯವೊಂದನ್ನು ಹೇಳಲಿದ್ದಾರಂತೆ ಸುಮನ್.

    ಏನದು ಎಂದರೆ, ಅದು ರಶ್ಮಿಕಾಗೆ ಹೇಳಬೇಕು ಎಂದುಕೊಂಡಿರೋದು. ಈಗಲೇ ಹೇಳಿಬಿಟ್ಟರೆ ಹೇಗೆ ಅಂತಾರೆ ಸುಮನ್. ಆ ಪತ್ರದಲ್ಲಿ ತಮ್ಮ ಜೀವನ ಹಾಗೂ ರಶ್ಮಿಕಾ ಬದುಕಿನ ಕೆಲವು ಪ್ರಮುಖ ಘಟ್ಟಗಳು, ತಿರುವುಗಳ ಕಥೆಯೂ ಇರಲಿದೆ. ಅದೊಂದು ಭಾವನಾತ್ಮಕ ಪತ್ರ. ಆ ಪತ್ರ ಇಂದು ಮಧ್ಯರಾತ್ರಿ 12 ಗಂಟೆಗೆ ರಶ್ಮಿಕಾ ಕೈ ಸೇರಲಿದೆ. ಅದು ರಶ್ಮಿಕಾಗೆ ನಾನು ಕೊಡುತ್ತಿರುವ ಕಾಣಿಕೆ ಎಂದಿದ್ದಾರೆ ಸುಮನ್.

    ರಶ್ಮಿಕಾ ಕಾಯುತ್ತಿದ್ದಾರೆ. ಕಾಯಲೇಬೇಕಲ್ಲವೇ. ಅಮ್ಮನ ಗಿಫ್ಟು ಅಮೂಲ್ಯವಾದದ್ದೇ ತಾನೆ. 

  • ರಶ್ಮಿಕಾಗೆ ಕಿಸ್ ಮಾಡಿದ್ದು ನಾನಲ್ಲ - ವಿಜಯ್ ದೇವರಕೊಂಡ..!!!

    rashmika and vijay's  kiss philosophy

    ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲೂ. ಆದರೆ, ಚಿತ್ರದಲ್ಲಿ ಹೈಲೈಟ್ ಆಗುತ್ತಿರುವುದು ರಶ್ಮಿಕಾ ಮತ್ತು ವಿಜಯ್ ನಡುವಣ ಕಿಸ್ಸಿಂಗ್ ಸೀನ್ಸ್. 

    ಗೀತ ಗೋವಿಂದಂನಲ್ಲಿ ಒಂದು ಕಿಸ್ಸಿಂಗ್ ಸೀನ್ ಸೃಷ್ಟಿಸಿದ್ದ ಸೆನ್ಸೇಷನ್ ನೋಡಿದವರಿಗೆ ಈ ಚಿತ್ರದಲ್ಲಿ ಹಲವು ದೃಶ್ಯಗಳಿವೆ. ಈ ಲಿಪ್‍ಲಾಕ್ ಕಥೆ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ಇಬ್ಬರದ್ದೂ ಒಂದೇ ವಾದ.

    ಲಿಪ್‍ಲಾಕ್ ಅನ್ನೋದೇ ತಪ್ಪು. ಇಷ್ಟಕ್ಕೂ ಆ ಚಿತ್ರದಲ್ಲಿ ಕಿಸ್ ಮಾಡಿರುವುದು ನಾನಲ್ಲ. ಕಿಸ್ ಮಾಡಿಸಿಕೊಂಡಿರುವುದು ರಶ್ಮಿಕಾ ಅಲ್ಲ. ಬಾಬಿ ಅನ್ನೋ ಪಾತ್ರ, ಲಿಲ್ಲಿ ಅನ್ನೋ ಪಾತ್ರಕ್ಕೆ ಮುತ್ತು ಕೊಡುತ್ತೆ. ಅಳು, ನಗು ಹೇಗೆ ಭಾವನೆಯೋ.. ಹಾಗೆಯೇ ಮುತ್ತು ಕೊಡುವುದು ಕೂಡಾ ಒಂದು ಭಾವನೆ ಎನ್ನುತ್ತಾರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ.

  • ರಶ್ಮಿಕಾಗೆ ಡಿಸೆಂಬರ್ ಸುನಾಮಿ

    rashmika's busy december

    ಕಿರಿಕ್ ಪಾರ್ಟಿಯ ಸಕ್ಸಸ್ ಹಾಗೂ ರಕ್ಷಿತ್ ಶೆಟ್ಟಿಯ ಜೊತೆಗಿನ ಎಂಗೇಜ್‍ಮೆಂಟ್‍ನಿಂದಲೇ ಸುದ್ದಿಯಾಗಿದ್ದ ರಶ್ಮಿಕಾಗೆ ಡಿಸೆಂಬರ್‍ನಲ್ಲಿ ಸಿನಿಮಾಗಳ ಸುನಾಮಿಯೇ ಇದೆ. ಕಿರಿಕ್ ಪಾರ್ಟಿ ನಂತರ ಒಪ್ಪಿಕೊಂಡಿದ್ದ ಅಂಜನೀಪುತ್ರ, ಈ ತಿಂಗಳಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ. ಆಡಿಯೋ ಬಿಡುಗಡೆಯಾಗಿದ್ದು, ಹಾಡುಗಳು ಹಿಟ್ ಆಗಿವೆ.

    ಇನ್ನು ಚಮಕ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 4ರಂದು ಚಮಕ್ ಚಿತ್ರದ ಆಡಿಯೋ ರಿಲೀಸ್ ಇದೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಆಡಿಯೋ ಬಿಡುಗಡೆಗೆ ವಿಶೇಷ ಅತಿಥಿ. ಈ ಸಿನಿಮಾನೂ ಡಿಸೆಂಬರ್‍ನಲ್ಲೇ ರಿಲೀಸ್ ಆಗುವ ಚಾನ್ಸ್ ಇದೆ.

    ಇನ್ನು ತೆಲುಗಿನ ಚಲೋ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದ್ದು, ಆ ಚಿತ್ರವೂ ಡಿಸೆಂಬರ್‍ನಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ. ಎಲ್ಲವೂ ಪ್ಲಾನ್‍ನಂತೆಯೇ ನಡೆದುಬಿಟ್ಟರೆ, ಒಂದೇ ತಿಂಗಳಲ್ಲಿ ರಶ್ಮಿಕಾ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದ ದಾಖಲೆ ಸೃಷ್ಟಿಯಾಗಲಿದೆ.

  • ರಶ್ಮಿಕಾಗೆ ತಾಳಿ ಕಟ್ಟಿದರು ಗಣೇಶ್..!

    ganesh ties knot to rashmika

    ಹೌದಾ ಮೊನ್ನೆ ಮೊನ್ನೆಯಷ್ಟೇ ರಕ್ಷಿತ್ ಶೆಟ್ಟಿ ಪ್ರೀತಿಯ ವಿಚಾರ ಹೇಳಿಕೊಂಡಿದ್ರಲ್ಲ..ಗಣೇಶ್​ಗೂ ಈಗಾಗಲೇ ಮದುವೆಯಾಗಿ ಮಕ್ಕಳೂ ಇದ್ದಾರಲ್ಲ..ಏನಾಯ್ತು ಅಂತಾ ಹುಬ್ಬೇರಿಸಬೇಡಿ.

    ಇದು ಚಮಕ್ ಚಿತ್ರದ ದೃಶ್ಯವೊಂದರ ಶೂಟಿಂಗ್ ಅಷ್ಟೆ. ಅದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ಚಿತ್ರದಲ್ಲಿ ಹೀರೋಯಿನ್ ರಶ್ಮಿಕಾ ಮಂದಣ್ಣ. ಚಿತ್ರದಲ್ಲಿ ಬರುವ ಮದುವೆ ದೃಶ್ಯದಲ್ಲಿ ಗಣೇಶ್, ರಶ್ಮಿಕಾಗೆ ಅರುಂಧತಿ ನಕ್ಷತ್ರ ತೋರಿಸಿದ್ದಾರೆ. ಅಷ್ಟೆ.

  • ರಶ್ಮಿಕಾಳಂತ ಮಗಳಿರಬೇಕಿತ್ತು ಎಂದರೇಕೆ ಶಂಕರ್ ಅಶ್ವತ್ಥ್..?

    shankar ashwath says he would be glad to have a daughter like rashmika

    ಯಜಮಾನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ದರ್ಶನ್‍ಗೆ ರಶ್ಮಿಕಾ ಮಂದಣ್ಣ ಜೋಡಿ. ಇದೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಶಂಕರ್ ಅಶ್ವತ್ಥ್. ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಶಂಕರ್ ಅಶ್ವತ್ಥ್, ನನಗೂ ರಶ್ಮಿಕಾರಂತಹ ಮಗಳಿರಬೇಕಿತ್ತು ಎಂದಿರಬೇಕಿತ್ತು.

    ಆಗಿದ್ದಿಷ್ಟೆ, ಶೂಟಿಂಗ್ ವೇಳೆ ಶಂಕರ್ ಅಶ್ವತ್ಥ್ ಭುಜದ ನೋವಿನಿಂದ ಬಳಲುತ್ತಿದ್ದರಂತೆ. ಸುಸ್ತಾಗಿ ಕುಳಿತಿದ್ದಾಗ ರಶ್ಮಿಕಾ ಮಂದಣ್ಣ, ಶಂಕರ್ ಅಶ್ವತ್ಥ್ ಅವರ ಭುಜಗಳನ್ನು ಒತ್ತಿ, ಮಸಾಜ್ ಮಾಡಿದ್ರಂತೆ. ರಶ್ಮಿಕಾ ಹಾಗೆ ಭುಜಗಳನ್ನು ಒತ್ತುತ್ತಿದ್ದಾಗ, ನನಗೂ ಇಂತಹ ಮಗಳಿರಬೇಕಿತ್ತು ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.

    ಇದು ನನಗೆ ಸಿಕ್ಕ ಅತಿದೊಡ್ಡ ಉಡುಗೊರೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಅಷ್ಟೇ ಅಲ್ಲ, ಅಪ್ಪನ ಪ್ರೀತಿಯ ಎದುರು ಮಗಳು ಖಂಡಿತಾ ಕಣ್ಣೀರಾಗುತ್ತಾಳೆ. ಅಷ್ಟು ಸಣ್ಣ ಕೆಲಸಕ್ಕೆ ನೀವು ನನಗೆ ಮಗಳ ಸ್ಥಾನ ಕೊಟ್ಟಿರಿ. ಥ್ಯಾಂಕ್ಯೂ ಅಪ್ಪಾ ಎಂದಿದ್ದಾರೆ.

  • ರಾಜಕುಮಾರನ ಭಾರ ಹೊತ್ತಿಲ್ಲ ಪುನೀತ್

    puneeth rajkumar Image

    ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಇದೇ ವಾರ ರಿಲೀಸಾಗುತ್ತಿದೆ. ಮುಂದಿನ ಗುರುವಾರ ಮಧ್ಯರಾತ್ರಿಯೇ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಆದರೆ, ಚಿತ್ರದ ಬಗ್ಗೆ ಅತಿ ದೊಡ್ಡ ನಿರೀಕ್ಷೆ ಯಾವುದು ಗೊತ್ತಾ..? ಅಂಜನೀಪುತ್ರ, ರಾಜಕುಮಾರ ಚಿತ್ರದ ನಂತರ ಬರುತ್ತಿರುವ ಮೊದಲ ಪುನೀತ್ ಸಿನಿಮಾ. ನಿರೀಕ್ಷೆಯ ಭಾರ ಸಹಜವಾಗಿಯೇ ಹೆಚ್ಚಾಗಿದೆ.

    ಆದರೆ, ಅದರ ಭಾರ ನಾನು ಹೊರುವುದಿಲ್ಲ. ರಾಜಕುಮಾರ ದೊಡ್ಡ ಸಕ್ಸಸ್ ನಿಜ. ಆದರೆ, ಸಿನಿಮಾದಿಂದ ಸಿನಿಮಾಗೆ ನಾವು ಬದಲಾಗಲೇಬೇಕು. ಇಲ್ಲಿ ನಾನು ಒಂದು ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಪಾತ್ರವಷ್ಟೇ ಆಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಪುನೀತ್.

    ಅಂಜನೀಪುತ್ರದ ನಿರ್ದೇಶಕ ಹರ್ಷ. ಪುನೀತ್ & ಹರ್ಷ ಸುಮಾರು 18 ವರ್ಷಗಳಿಂದ ಸ್ನೇಹಿತರು. ಆ ಸ್ನೇಹ ಸಿನಿಮಾ ನಿರ್ಮಾಣದಲ್ಲೂ ಕೆಲಸ ಮಾಡಿದೆ. 

  • ವಿದೇಶಿ ಹುಡುಗ ಚಮಕ್ಸ್ ದೇಸೀ ಹುಡುಗಿ

    desi girl and foreign boy

    ಚಮಕ್ ಸಿನಿಮಾದ ಫಸ್ಟ್ ನೈಟ್ ಲೈಟ್ ಆಫ್ ಟೀಸರ್ ಅದೆಂತ ಸೆನ್ಸೇಷನ್ ಸೃಷ್ಟಿಸಿಬಿಟ್ಟಿದೆಯಂದರೆ, ಸಿನಿಮಾದಲ್ಲಿ ಲೈಟ್ ಆಫ್ ಆಗುತ್ತಾ ಇಲ್ವಾ ಅನ್ನೋ ಕುತೂಹಲಕ್ಕೇ ಥಿಯೇಟರ್‍ನತ್ತ ಹೋಗೋಕೆ ಪ್ರೇಕ್ಷಕರು ಸಿದ್ಧರಾಗಿರುವ ಹಾಗಿದೆ. ಇಷ್ಟಕ್ಕೂ ಆ ದೃಶ್ಯದ ಹಿನ್ನೆಲೆ ಏನು..? ಸಿನಿಮಾ ಕಥೆ ಏನು..? ಅಂಥಾ ಹುಡುಕಿದಾರ ಹೊರಬಿದ್ದಿರುವುದೇ ಈ ಮ್ಯಾಟರ್ರು. ವಿದೇಶಿ ಹುಡುಗ ಚಮಕ್ಸ್ ದೇಸೀ ಹುಡುಗಿ.

    ಸಿನಿಮಾದಲ್ಲಿ ಗಣೇಶ್ ಗೈನಕಾಲಜಿಸ್ಟ್ ಮತ್ತು ಫಾರಿನ್ ಹುಡುಗ. ಮದುವೆಯೊಂದರಲ್ಲಿ ಗಣೇಶ್ ದೇಸೀ ಹುಡುಗಿ ರಶ್ಮಿಕಾರನ್ನು ನೋಡಿ ಲವ್ವಲ್ಲಿ ಬಿದ್ದು ಮದುವೆಯೂ ಆಗಿಬಿಡ್ತಾರೆ. ನಾಯಕನ ನಿರೀಕ್ಷೆಯೇ ಬೇರೆ. ನಾಯಕಿ ಇರುವ ರೀತಿಯೇ ಬೇರೆ. ಆಗ ಸೃಷ್ಟಿಯಾಗುವ ರೊಮ್ಯಾಂಟಿಕ್ ಕಾಮಿಡಿಯ ಸರಿಗಮವೇ ಚಮಕ್.

    ಚಿತ್ರದಲ್ಲಿ ಗಣೇಶ್-ರಶ್ಮಿಕಾ ಅವರಷ್ಟೇ ಪ್ರಮುಖ ಪಾತ್ರದಲ್ಲಿ ಕಾಣಿಸಿರೋದು ಸಾಧು ಕೋಕಿಲ. ಅವತಾರ ಪುರುಷ ಸಾಧುಕೋಕಿಲ, ಇಲ್ಲಿ ಅವಾಂತರ ಪುರುಷರಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಸುನಿ ರಿಲ್ಯಾಕ್ಸ್ ಆಗಿರೋಕೆ ಇನ್ನೂ ಒಂದು ಕಾರಣವಿದೆ. ಅವರ ಹಿಂದಿನ ಚಿತ್ರಗಳಿಗೆ ಇದ್ದಷ್ಟು ಪೈಪೋಟಿ ಈ ಚಿತ್ರಕ್ಕಿಲ್ಲ. ಸುನಿ ಅವರ ಹಿಂದಿನ ಸಿನಿಮಾಗಳೆಲ್ಲ ಒಂದಲ್ಲ ಒಂದು ದೊಡ್ಡ ಸ್ಟಾರ್ ಚಿತ್ರದೊಂದಿಗೆ ಪೈಪೋಟಿ ಮಾಡಿಕೊಂಡೇ ಬಂದಿದ್ದಂಥವು. ಈ ಬಾರಿ ಅಂತಹ ದೊಡ್ಡ ಸ್ಟಾರ್ ಚಿತ್ರಗಳ ಪೈಪೋಟಿ ಚಮಕ್‍ಗೆ ಇಲ್ಲ. ಮೋಸ್ಟ್ ಲೀ, ಈ ಬಾರಿ ಸುನಿ ಸ್ಟಾರ್‍ನ್ನೇ ಇಟ್ಟುಕೊಂಡು ಚಮಕ್ ಕೊಟ್ಟಿರೋದು ಕಾರಣ ಇರಬಹುದು.

  • ವೃತ್ರ ಜೊತೆ ರಶ್ಮಿಕಾ ಬ್ರೇಕಪ್

    rashmika drops vritha

    ರಶ್ಮಿಕಾ ಮಂದಣ್ಣ, ತಾವು ಎಕ್ಸೈಟ್ ಆಗಿ ಒಪ್ಪಿಕೊಂಡಿದ್ದ ವೃತ್ರ ಚಿತ್ರದಿಂದ ಹೊರನಡೆದಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿಯೇ ಇಂಥಾದ್ದೊಂದು ಸಿನಿಮಾ ಮಾಡುವುದು ಸೂಕ್ತವಲ್ಲ ಎನಿಸಿತು. ನಿರ್ದೇಶಕರಿಗೆ ಅದನ್ನೇ ಹೇಳಿ, ಚಿತ್ರದಿಂದ ಹೊರಬಂದಿದ್ದೇನೆ. ನಿರ್ಮಾಪಕರು ಹಾಗೂ ನಿರ್ದೇಶಕರು ನನ್ನ ಭಾವನೆ ಅರ್ಥ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ಬೇರೆ ನಾಯಕಿ ಮಾಡಿದರೆ ಚೆನ್ನಾಗಿರುತ್ತೆ. ಅವರು ಆ ಪಾತ್ರಕ್ಕೆ ಜೀವ ತುಂಬುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿ ಚಿತ್ರದಿಂದ ಹೊರನಡೆದಿದ್ದಾರೆ.

    ಗೌತಮ್ ಅಯ್ಯರ್ ಎಂಬುವವರು ವೃತ್ರಕ್ಕೆ ನಿರ್ದೇಶಕರು. ಆರಂಭದಲ್ಲಿ ಕಥೆ ಕೇಳಿ ಥ್ರಿಲ್ ಆಗಿದ್ದ ರಶ್ಮಿಕಾ, ತಮ್ಮ ತಂದೆಯ ಕನಸಿನಂತೆ ಪೊಲೀಸ್ ಆಗಲಿಲ್ಲ, ಆದರೆ, ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ ಎಂದು ಖುಷಿಯಾಗಿಯೇ ಹೇಳಿಕೊಂಡಿದ್ದರು. ಈಗ ಚಿತ್ರದಿಂದ ಹೊರನಡೆದಿದ್ದಾರೆ. ನಿರ್ದೇಶಕರ ಪ್ರಕಾರ, ಸಿನಿಮಾ ಕೈಬಿಡೋಕೆ ಕಾರಣ ಡೇಟ್ಸ್ ಸಮಸ್ಯೆಯಂತೆ.

    ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ನಿತಿನ್, ಜ್ಯೂ.ಎನ್‍ಟಿಆರ್ ಜೊತೆಗಿನ ಚಿತ್ರಗಳಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಇನ್ನೂ ಫೈನಲ್ ಆಗಿಲ್ಲ.

  • ಸಂಕ್ರಾಂತಿಗೆ ದರ್ಶನ್ ಶಿವನಂದಿ ಕಾಣಿಕೆ

    shivanandi song on sankranthi

    ಸಂಕ್ರಾಂತಿಯಲ್ಲಿ ಚಿತ್ರರಂಗದಿಂದ ಸಹಜವಾಗಿಯೇ ವಿಶೇಷ ಕಾಣಿಕೆಗಳಿರುತ್ತವೆ. ಅದು ಅಭಿಮಾನಿಗಳಿಗಾಗಿ. ಹೀಗಾಗಿಯೇ ಈ ಬಾರಿ ದರ್ಶನ್ ಸಂಕ್ರಾಂತಿಗೆ ವಿಶೇಷ ಉಡುಗೊರೆ ಕೊಡುತ್ತಿದ್ದಾರೆ. ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡು ಸಂಕ್ರಾಂತಿಗೇ ರಿಲೀಸ್ ಆಗುತ್ತಿದೆ. 

    ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನದ ಯಜಮಾನ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಬಹದ್ದೂರ್ ಚೇತನ್. ಶೈಲನಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರವಿದು. ದರ್ಶನ್ ಸಿನಿಮಾಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಿಗೆ ಇದು ಊಟಕ್ಕೆ ಮೊದಲಿನ ಉಪ್ಪಿನಕಾಯಿ.