` mugulunage, - chitraloka.com | Kannada Movie News, Reviews | Image

mugulunage,

  • ಕಾಂಬಿನೇಷನ್ ಕೇಳಿದೆ, ಕಥೆ ಕೇಳಲಿಲ್ಲ - ಮುಗುಳುನಗೆ ನಿರ್ಮಾಪಕ

    syed salam

    ಮುಗುಳುನಗೆ ನಿರ್ಮಾಪಕ ಸೈಯ್ಯದ್ ಸಲಾಂ. ಈ ಹಿಂದೆ ಲೈಫು ಇಷ್ಟೇನೆ ಚಿತ್ರಕ್ಕೆ ದುಡ್ಡು ಹಾಕಿದ್ದವರು. ಈ ಬಾರಿ ಮುಗುಳುನಗೆಗೂ ಬಂಡವಾಳ ಹೂಡಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕರು ಕಥೆ ಕೇಳಿ ಹಣ ಹಾಕಿದರೆ, ಸೈಯ್ಯದ್ ಸಲಾಂ ಡಿಫರೆಂಟ್. ಅವರು ಕಾಂಬಿನೇಷನ್ ಕೇಳಿದ ತಕ್ಷಣ ಸಿನಿಮಾ ನಿರ್ಮಾಣಕ್ಕೆ ಓಕೆ ಎಂದರಂತೆ. ಹಾಗೆಂದು ಅವರು ಕಥೆಯನ್ನು ಕೇಳುವುದೇ ಇಲ್ಲ ಎಂದುಕೊಂಡರೆ, ಅದು ತಪ್ಪಾದೀತು.

    ಭಟ್ಟರು ಗಣೇಶ್ ಕಾಂಬಿನೇಷನ್ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ನಂಬಿಕೆ ಮತ್ತು ಅವರು ಒಳ್ಳೆಯ ಚಿತ್ರ ಕೊಟ್ಟೇ ಕೊಡುತ್ತಾರೆ ಎನ್ನುವ ಭರವಸೆಯಷ್ಟೇ ಹಾಗೆ ಮಾಡಲು ಕಾರಣ ಎನ್ನುತ್ತಾರೆ ಸೈಯ್ಯದ್. 

    ಚಿತ್ರ ಇದೇ ಶುಕ್ರವಾರ, 275ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದ ಸೈಯದ್, ಥಿಯೇಟರ್ ಮಾಲೀಕರ ಒತ್ತಾಯದ ಮೇರೆಗೆ 275 ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಗೆದ್ದರೆ, ಗಣೇಶ್-ಭಟ್ಟರ ಜೋಡಿಗೆ ಹ್ಯಾಟ್ರಿಕ್ ಸಾಧನೆಯಾಗಲಿದೆ.

  • ಟಾಕೀಸ್​ಗೆ ಬಂತು ಮುಗುಳುನಗೆ ಹಾಡು

    mugulunage image

    ಮುಗುಳುನಗೆ ಸಿನಿಮಾ ಹಿಟ್ ಆಗುವ ಹಾದಿಯಲ್ಲಿದೆ. ಮುಂಗಾರು ಮಳೆ ದಾಖಲೆ ಮುರಿದರೂ ಆಶ್ಚರ್ಯವಿಲ್ಲ. ಆದರೆ, ಸಿನಿಮಾ ನೋಡಿದವರಿಗೆ ಚಿತ್ರದ ಟೈಟಲ್ ಸಾಂಗ್ ಮಿಸ್ಸಾಗಿದೆ ಎಂಬ ಬೇಸರ ಕಾಡಿತ್ತು. ಚಿತ್ರ ನೋಡಿದ ಹಲವರು ಈ ಬಗ್ಗೆ ಬೇಸರ ತೋಡಿಕೊಂಡಿದ್ದರು. 

    ಪ್ರೇಕ್ಷಕರಿಗೆ ಇಷ್ಟೊಂದು ಇಷ್ಟವಾಗಿದ್ದ ಆ ಹಾಡನ್ನು ಈಗ ಚಿತ್ರತಂಡ ಥಿಯೇಟರಿಗೆ ಬಿಟ್ಟಿದೆ. ಮೊದಲ ವಾರದಲ್ಲಿ ಮಿಸ್ ಆಗಿದ್ದ ಮುಗುಳುನಗೆಯ ಹಾಡು ಇನ್ನು ಮೇಲೆ ಚಿತ್ರಮಂದಿರದಲ್ಲೂ ಕಾಣಿಸಲಿದೆ.ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಶೀರ್ಷಿಕೆ ಗೀತೆಯನ್ನ ಸೇರಿಸಲಾಗಿದೆ.

  • ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..

    ganesh image

    ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ದಾಸರು ಹೇಳಿದರೆ, ನಿಮ್ಮ ನಿಮ್ಮ ಪ್ರೀತಿಯನ್ನ ನೀವೇ ಹುಡುಕಿಕೊಳ್ಳಿ ಎನ್ನುತ್ತಿದ್ದಾರೆ ಭಟ್ಟರು. ಪ್ರೀತಿಯ ಆಧ್ಯಾತ್ಮ ಹೇಳ್ತಾ ಇರೋವ್ರು ಯೋಗರಾಜ ಭಟ್ಟರು.

    ಚಿತ್ರದಲ್ಲಿ ನಾಯಕ ಪುಲಿಕೇಶಿ ಬಾಳಲ್ಲಿ ಬಂದು ಹೋಗುವ ಪ್ರೀತಿಯ ಕಥೆಗಳೇ ಮುಗುಳುನಗೆ ಸಿನಿಮಾ. ನಗುವುದನ್ನೇ ಜೀವನ ಧರ್ಮವನ್ನಾಗಿಸಿಕೊಂಡಿರುವ ನಾಯಕ ಮತ್ತು ಆತನ ಬದುಕಿನಲ್ಲಿ ಬಂದು ಹೋಗುವ ಪ್ರೇಮಿಗಳೇ ಚಿತ್ರದ ಪಾತ್ರಧಾರಿಗಳು.

    ಚಿತ್ರದಲ್ಲಿ ನಾಲ್ವರು ನಾಯಕಿಯರು. ಅಶಿಕಾ ರಂಗನಾಥ್, ಗಣೇಶ್ ಟೀನೇಜ್ ಲೈಫಲ್ಲಿ ಬಂದು ಹೋಗುವ ಹುಡುಗಿ. ಪ್ರೀತಿಯೋ..ಆಕರ್ಷಣೆಯೋ.. ಗೊತ್ತಾಗದ ವಯಸ್ಸಿನಲ್ಲಿ ಮೊಳಕೆಯೋ..ಮೊಗ್ಗೋ ಆಗಿ ಮರೆತುಹೋಗುವ ಪ್ರೇಮ.

    ಇನ್ನೊಬ್ಬ ನಾಯಕಿ ನಿಖಿತಾ ನಾರಾಯಣನ್. ಸ್ವಾತಂತ್ರ್ಯ ಮತ್ತು ಕೆರಿಯರ್‍ನ್ನೇ ಆರಾಧಿಸುವ ಮಾಡರ್ನ್ ಹುಡುಗಿ. ಆಕೆ ಗಿಟಾರ್ ವಾದಕಿಯೂ ಹೌದು. ಮೂರನೇ ನಾಯಕಿ ಅಪೂರ್ವ ಅರೋರಾ. ಪಕ್ಕಾ ಸಂಪ್ರದಾಯಸ್ಥ ಮನೆತನದ ಹುಡುಗಿ. ಮೌಲ್ಯಗಳನ್ನೇ ಜೀವನ ಎಂದು ನಂಬಿದವಳು.

    ಇನ್ನು ಕಡೆಯದಾಗಿ ಬರುವುದು ಅಮೂಲ್ಯ. ಆಕೆಯದ್ದು ಚಿತ್ರದಲ್ಲಿ ಅತಿಥಿ ಪಾತ್ರ. ನಾಯಕನಿಗೆ ಮಾರ್ಗದರ್ಶನ ನೀಡುವ ಹುಡುಗಿ. 

    ಇಷ್ಟೂ ನಾಯಕಿಯರ ಮಧ್ಯೆ ಇರುವ ಏಕೈಕ ಕೊಂಡಿ ಪುಲಿಕೇಶಿ ಗಣೇಶ್ ಮತ್ತು ಮುಗುಳುನಗೆ. ಇದು ಮುಂಗಾರು ಮಳೆ ಮತ್ತು ಗಾಳಿಪಟದ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ಟರು ಒಟ್ಟಾಗಿರುವ ಸಿನಿಮಾ. ನಿರೀಕ್ಷೆ ಭರ್ಜರಿಯಾಗಿದೆ. ಹಾಡು ಹಿಟ್ಟಾಗಿದೆ. ಸಿನಿಮಾ ರೆಡಿಯಾಗಿದೆ. ರಿಲೀಸ್ ಡೇಟ್ ಅನೌನ್ಸಾಗಿದೆ. ಪ್ರೇಕ್ಷಕ ಕಾದು ಕುಳಿತಿದ್ದಾಗಿದೆ. ಈ ವಾರ ತಡ್ಕೊಂಡ್‍ಬಿಡಿ.

  • ಮುಂಗಾರು ಮಳೆಯಾಗುತ್ತಾ.. ಮುಗುಳುನಗೆ..?

    mugulunage image

    ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನ ಮುಗುಳುನಗೆ ಚಿತ್ರ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಇಬ್ಬರೂ ಮೊದಲು ಜೋಡಿಯಾಗಿದ್ದು ಮುಂಗಾರುಮಳೆಯಲ್ಲಿ. ಅದು ಕನ್ನಡದಲ್ಲಿ ದಾಖಲೆಯನ್ನೇ ಬರೆಯಿತು. ಎರಡನೇ ಚಿತ್ರ ಗಾಳಿಪಟ ಕೂಡಾ ಸೂಪರ್ ಹಿಟ್. ಅದಾದ ಮೇಲೆ ಇಬ್ಬರೂ ಒಟ್ಟಾಗಿರುವ ಚಿತ್ರ ಮುಗುಳುನಗೆ.

    ನಾಲ್ವರು ನಾಯಕಿಯರ ಜೊತೆ ನಟಿಸಿರುವ ಗಣೇಶ್‍ಗೆ ಈ ಚಿತ್ರದಲ್ಲಿ ಅಮೂಲ್ಯ ಮಾರ್ಗದರ್ಶನ ನೀಡುತ್ತಾರೆ ಎನ್ನುವ ವಿಚಾರವೇ ಕುತೂಹಲ ಮೂಡಿಸಿದೆ. ಮುಂಗಾರುಮಳೆಯಲ್ಲಿ ನಟಿಸಿದ್ದ ಅನಂತ್ ನಾಗ್, ಅದ್ಭುತ ಹಾಡು ಕೊಟ್ಟಿದ್ದ ಜಯಂತ್ ಕಾಯ್ಕಿಣಿ ಈ ಚಿತ್ರದಲ್ಲೂ ಇದ್ದಾರೆ. ನಟ ಜಗ್ಗೇಶ್ ಪುಟ್ಟದೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

    ರಂಗಾಯಣ ರಘು, ಅಚ್ಯುತ್ ಕುಮಾರ್, ರಾಮರಾಮಾ ರೆ ಧರ್ಮಣ್ಣ, ಚಂದನ್, ಮಂಜುನಾಥ್ ಹೆಗ್ಡೆ, ಸಾಗರ್..ಹೀಗೆ ತಾರಾಬಳಗ ದೊಡ್ಡದಾಗಿಯೇ ಇದೆ.

    ಮುಗುಳುನಗೆಯೇ ನೀ ಹೇಳು, ಕೆರೆ ಏರಿ ಮ್ಯಾಲೆ, ರೂಪಸಿ ಸುಮ್ಮನೆ, ಹೊಡಿ ಒಂಭತ್.. ಹಾಡುಗಳು ಜನಪ್ರಿಯವಾಗಿವೆ. ಸಾಹಿತ್ಯವನ್ನು ಅಭಿಮಾನಿಗಳು ಈಗಾಗಲೇ ಗುನುಗತೊಡಗಿದ್ದಾರೆ. ಸೈಯ್ಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.

    Related Articles :-

    ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್

    ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು

    ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..

    ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ

    Jaggesh Dances For Mugulunage

    Mugulunage Shooting In Pondicherry

    Yogaraj Bhatt's New Film Titled Mugulunage

  • ಮುಗುಳುನಗೆಗೆ ಪ್ರೇಕ್ಷಕರಿಂದ ಗೆಲುವಿನ ಕಾಣಿಕೆ

    mugulunage tweets

    ಮುಗುಳುನಗೆ.. ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್‍ಮಿಲನದ ಚಿತ್ರ. ಮುಂಗಾರು ಮಳೆಯ ಹ್ಯಾಂಗೋವರ್‍ನಲ್ಲೇ ಇದ್ದ ಪ್ರೇಕ್ಷಕರಿಗೆ ಮುಗುಳುನಗೆ ಹೊಸ ಅನುಭವವನ್ನೇ ನೀಡಿದೆ. 10 ವರ್ಷಗಳ ನಂತರ ಒಂದಾಗಿದ್ದ ಜೋಡಿ, ಮುಂಗಾರು ಮಳೆಯನ್ನು ಮರೆಯುವ ಚಿತ್ರವೊಂದನ್ನು ಕೊಟ್ಟಿದೆ. ಈ ಮಾತು ಹೇಳ್ತಿರೋದು ಪ್ರೇಕ್ಷಕರು.

    ಪ್ರೇಕ್ಷಕರಿಗೆ ಚಿತ್ರದ ಕಥೆಯ ಎಳೆಯೇ ಮೊದಲು ಇಷ್ಟವಾಗಿದೆ. ಅಳುವುದು ಬರದೇ ಇರುವ ನಾಯಕ ಎನ್ನುವ ಕಲ್ಪನೆಯೇ ಥ್ರಿಲ್ ಕೊಟ್ಟಿದೆ. ಕ್ಲೈಮಾಕ್ಸ್ ಬಗ್ಗೆ ಕೂಡಾ ಎಲ್ಲ ಪ್ರೇಕ್ಷಕರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಳೆಯ ಪ್ರೇಮಕಥೆಗಳನ್ನು ನೆನಪಿಸುವ ಚಿತ್ರ, ಹೊಟ್ಟೆ ಹುಣ್ಣಾಗುವಂತೆ ನಗಿಸುವ, ಕ್ಲೈಮಾಕ್ಸ್‍ನಲ್ಲಿ ಇದ್ದಕ್ಕಿದ್ದಂತೆ ಕಣ್ಣಿರು ಹಾಕಿಸುವ ಚಿತ್ರ ಎಂದೆಲ್ಲ ಪ್ರೇಕ್ಷಕರು ವಿಮರ್ಶೆ ಬರೆದಿದ್ದಾರೆ.

    ಭಟ್ಟರ ಕಥೆ, ಗಣೇಶ್ ಅಭಿನಯ ಹರಿಕೃಷ್ಣ ಸಂಗೀತ, ಭಟ್-ಕಾಯ್ಕಿಣಿ ಜುಗಲ್‍ಬಂದಿಯ ಸಾಹಿತ್ಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಆದರೆ, ಚಿತ್ರದಲ್ಲಿ ಮುಗುಳುನಗೆಯೇ ನೀ ಹೇಳು ಟೈಟಲ್ ಟ್ರ್ಯಾಕ್ ಇಲ್ಲ ಎನ್ನುವ ಬೇಸರವನ್ನೂ ಹೊರಹಾಕಿದ್ದಾರೆ. ಮೊದಲ ದಿನದ ಗೆಲುವು ಸಿಕ್ಕಿದೆ. ಮುಂಗಾರು ಮಳೆಯ ಇತಿಹಾಸ ಮರುಕಳಿಸುತ್ತಾ..? 

  • ಲವ್‍ಸ್ಟೋರಿ ಮಾಡೋದೇ ಕಷ್ಟ ಅಂದ್ರು ಭಟ್ಟರು..!

    mugulunage image

    ಈ ಮಾತನ್ನು ಬೇರೆ ಯಾರಾದರೂ ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ..ಆದರೆ, ಹೀಗಂತ ಹೇಳಿರೋದು ಯೋಗರಾಜ್ ಭಟ್. ಮಣಿ, ಮುಂಗಾರುಮಳೆಯಿಂದ, ಈಗಿನ ಮುಗುಳುನಗೆಯವರೆಗೆ ಅವರು ಹೇಳಿದ್ದೆಲ್ಲ ಪ್ರೇಮಕಥೆಗಳೇ. ಆದರೆ, ಪ್ರೇಮಕಥೆ ಹೇಳೋದು ಬಲು ದೊಡ್ಡ ರಿಸ್ಕು ಅಂತಾರೆ ಯೋಗರಾಜ್ ಭಟ್.

    ಏಕೆ ಅಂತಾ ಕೇಳಿದ್ರೆ, ``ಏನ್ಮಾಡೋದು..ಸಿನಿಮಾ ನೋಡುವ ಯುವಕರಿಗೂ, ಯುವತಿಯರಿಂದ ಹಿಡಿದು 80ರ ಮುದುಕರವರೆಗೆ ಅದು ಟಚ್ ಆಗಬೇಕು. ಹಾಗೆ ಪ್ರೇಮಕಥೆ ರೂಪಿಸೋದು ಮತ್ತು ಅದನ್ನು ಆಕರ್ಷಕವಾಗಿ ಹೇಳೋದು ಸುಲಭವಲ್ಲ'' ಅಂತಾರೆ.

    ಮುಗುಳುನಗೆಯಲ್ಲಿ ಈಗಿನ ಯುವಜನಾಂಗದವರ ಪ್ರೇಮಕಥೆಯಿದೆಯಂತೆ. ಪ್ರತಿದಿನ ಕ್ರೈಂ ಮಾಡಬಹುದು, ಕಾಮಿಸಲೂ ಬಹುದು. ಆದರೆ, ಪ್ರತಿದಿನ ಪ್ರೇಮ ಸಾಧ್ಯವಿಲ್ಲ ಎಂದು ಪ್ರೇಮವನ್ನೇ ಸಾಕ್ಷಾತ್ಕರಿಸಿಕೊಂಡ ಬುದ್ದನಂತೆ ಹೇಳುವುದು ಭಟ್ಟರಿಗೆ ಮಾತ್ರ ಸಾಧ್ಯವೇನೋ..

    ಚಿತ್ರದಲ್ಲಿ ಹಲವು ಕಥೆಗಳಿವೆ. ಅವೆಲ್ಲ ಕಥೆಗಳಿಗೆ ನಿಷ್ಕಲ್ಮಶವಾಗಿ ನಗುವ ಮುಖ ಬೇಕಿತ್ತು. ಅಂಥಾದ್ದೊಂಗು ನಗು ಗಣೇಶ್‍ಗಿದೆ.ಹಾಗಾಗಿಯೇ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿದೆವು ಅನ್ನೋದು ಭಟ್ಟರ ವ್ಯಾಖ್ಯಾನ. ಏಕೆಂದರೆ, ಗಣೇಶ್ ಅವರದ್ದು ಚಿತ್ರದುದ್ದಕ್ಕೂ ನಗುವ ಪಾತ್ರ. ಅಳುವುದು ಒಮ್ಮೆ ಮಾತ್ರ. ಹುಟ್ಟಿದಾಗಿನಿಂದ ಒಮ್ಮೆಯೂ ಕಣ್ಣಿರು ಹಾಕದ ಗಣೇಶ್, ಕಣ್ಣೀರು ಹಾಕೋದ್ಯಾಕೆ ಅನ್ನೋದಕ್ಕೆ ಉತ್ತರ ತಿಳಿದುಕೊಳ್ಳಬೇಕೆಂದರೆ, ಮುಗುಳುನಗೆ ನೋಡಲೇಬೇಕು.

  • ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು

    mugulunage

    ಅದೊಂಥರಾ ಹಾಗೆ. ಯೋಗರಾಜ ಭಟ್ಟರು ಮತ್ತು ಜಯಂತ್ ಕಾಯ್ಕಿಣಿ ಸೇರಿದರೆ, ತುಂಟತನ, ಅಮರ ಪ್ರೇಮ, ಪೋಲಿತನ, ಸಜ್ಜನಿಕೆಯ ಪ್ರೇಮ.. ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಬಿಡುತ್ತವೆ. ಮುಗುಳುನಗೆಯಲ್ಲೂ ಅದೇ ಆಗಿದೆ.

    ಮುಗುಳುನಗೆಯ ಹಾಡುಗಳು ಆನ್‍ಲೈನ್‍ನಲ್ಲಿ ಸದ್ದಿಲ್ಲದೇ ಸದ್ದು ಮಾಡುತ್ತಿವೆ. ಸಭ್ಯ ಪ್ರೇಮಿಗಳಿಗೆ ನಿರ್ಮಲ ಏಕಾಂತದಲ್ಲಿ ಇಷ್ಟವಾಗುವಂತಹ ಹಾಡುಗಳನ್ನು ಬರೆದ ಭಟ್ಟರು, ಕಾಯ್ಕಿಣಿ ಮೊದಲ ಸವಾಲು ಗೆದ್ದುಬಿಟ್ಟಿದ್ದಾರೆ.

    ರೂಪಸಿ ಹಾಡಿನಲ್ಲಿ ಪ್ರಿಯತಮೆಯನ್ನು ಹುಡುಕುವ ಸಾಚಾತನ, ಕೆರೆ ಏರಿ ಮ್ಯಾಲ್ ಹಾಡಿನಲ್ಲಿ ಕನಸಿನಲ್ಲಿ ಯಾರೊಬ್ಬರ ಮೈಮೇಲೂ ಬಟ್ಟೆ ನೋಡಿಲ್ಲ, ಕ್ಷಮಿಸಿ ಎನ್ನುವ ಪೋಲಿತನ... ನೋಡುಗರಿಗೆ ಇಷ್ಟವಾಗುತ್ತಿದೆ. ಹಾಡು ನೋಡಿದವರು, ಕೇಳಿದವರು ಮುಗುಳ್ನಗುತ್ತಲೇ ಎಂಜಾಯ್ ಮಾಡುತ್ತಿದ್ದಾರೆ.

    ಬಹುಶಃ, ಮುಗುಳುನಗೆಯ ಮೇಲೊಂದು ಹಾಡು ಬರೆಯುವ ಧೈರ್ಯವನ್ನು ಇದುವರೆಗೆ ಯಾರೂ ಮಾಡಿರಲಿಕ್ಕಿಲ್ಲವೇನೋ..ಅಂಥಾದ್ದೊಂದು ಧೈರ್ಯ ಮಾಡಿ ಗೆದ್ದಿದ್ದಾರೆ ಯೋಗರಾಜ್ ಭಟ್.

    ಇನ್ನು ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್ 10 ವರ್ಷಗಳ ನಂತರ ಬರುತ್ತಿರುವುದೇ ಪ್ರೇಕ್ಷಕರಲ್ಲಿ ಏನೋ ರೋಮಾಂಚನ. ಆ ರೋಮಾಂಚನ ಥಿಯೇಟರಲ್ಲೂ ಸಿಕ್ಕುಬಿಟ್ಟರೆ, ಮತ್ತೊಂದು ಮುಂಗಾರು ಮಳೆ ಗ್ಯಾರಂಟಿ.

  • ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ

    mugulunage movie image

    ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್ ಮಿಲನದ ಚಿತ್ರ ಮುಗುಳುನಗೆ. ಚಿತ್ರೀಕರಣ ಪೂರೈಸಿರುವ ಚಿತ್ರ, ಈಗ ರಾಜ್ಯಾದ್ಯಂತ ಟೂರ್ ಹೊಡೆಯಲು ಸಿದ್ಧವಾಗಿದೆ. ಅದು ಹಾಡುಗಳ ಬಿಡುಗಡೆಗಾಗಿ. ಈಗಾಗಲೇ ಹೊಡಿ ಒಂಭತ್ತ್ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲಾಗಿತ್ತು.

    ಇನ್ನೊಂದು ಹಾಡು ಬೆಂಗಲೂರಿನಲ್ಲೇ ಬಿಡುಗಡೆಯಾಗಿದೆ. ಗಣೇಶ್ ಮನೆಯಲ್ಲಿ. ಜುಲೈ 14ರಂದು ಶಿಲ್ಪಾ ಗಣೇಶ್ ಹುಟ್ಟುಹಬ್ಬ. ಆ ದಿನವೇ ಎರಡನೇ ಹಾಡು ರಿಲೀಸ್ ಆಗಲಿದೆ. 3ನೇ ಹಾಡು ಜುಲೈ 16ಕ್ಕೆ ದಾವಣಗೆರೆಯಲ್ಲಿ ಬಿಡುಗಡೆಯಾದರೆ, ನಾಲ್ಕನೇ ಹಾಡು ಜುಲೈ 18ಕ್ಕೆ ಬಿಡುಗಡೆಯಾಗಲಿದೆ.

    ಈ ನಾಲ್ಕನೇ ಹಾಡಿನ ಬಿಡುಗಡೆಯ ಸ್ಥಳ ನಿರ್ಧಾರವಾಗಿಲ್ಲ. 5 & 6ನೇ ಹಾಡು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಒಟ್ಟಿನಲ್ಲಿ ಹಾಡು ಬಿಡುಗಡೆಯ ಮೂಲಕವೇ ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಚಾರ ನೀಡುತ್ತಿದೆ ಚಿತ್ರತಂಡ.

    Related Articles :-

    Hodi Ombatt Of Mugulu Nage Released In Hubli

    Mugulu Nage Shooting Completed With A Song

    Mugulu Nage Audio In July First Week

    Sharan Sings A Goan Song For Mugulu Nage

    Mugulu Nage Shooting Completed 

    Ganesh's New Look In Mugulu Nage Revealed

  • ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್

    mugulnage special

    ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದು ಬರೆದ ಯೋಗರಾಜ್ ಭಟ್ಟರು, ಮುಗುಳುನಗೆ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಮುಗುಳುನಗೆ ಚಿತ್ರದ ಸ್ಪೆಷಲ್ ಶೋವೊಂದನ್ನು ಹೆಣ್ಣು ಮಕ್ಕಳಿಗಾಗಿಯೇ ಆಯೋಜಿಸುವ ಪ್ಲಾನ್ ಮಾಡಿದ್ದಾರೆ. 

    ಚಿತ್ರದಲ್ಲಿ ನಾಲ್ವರು ಹೆಣ್ಣುಮಕ್ಕಳ ಪಾತ್ರಗಳಿವೆ. ಭಟ್ಟರ ಮೇಲಿರೋ ಕಂಪ್ಲೇಂಟು ಎಂದರೆ, ಅವರ ಚಿತ್ರಗಳಲ್ಲಿ ಪಾತ್ರಗಳಿರುತ್ತವೆ, ಕಥೆಗಳಿರಲ್ಲ ಅನ್ನೋದು. ಅದೆಲ್ಲ ಸೇಡು ತೀರಿಸಿಕೊಳ್ಳುವವರ ಹಾಗೆ, ಈ ಚಿತ್ರದಲ್ಲಿ 5 ಕಥೆ ಹೇಳುತ್ತಾರಂತೆ ಭಟ್ಟರು.

    ಅದೇನೇ ಇರಲಿ, ಭಟ್ಟರ ಸ್ಟ್ರಾಂಗ್ ಹೆಣ್ಮಕ್ಕಳ ಪ್ರೀತಿಗೆ ಜಯವಾಗಲಿ.