` pratham, - chitraloka.com | Kannada Movie News, Reviews | Image

pratham,

  • ಪುನೀತ್ ವೃದ್ಧಾಶ್ರಮಕ್ಕೆ ಒಳ್ಳೆ ಹುಡುಗ ಪ್ರಥಮ್ ದೇಣಿಗೆ

    pratham donates to shaktidama

    ಒಳ್ಳೆ ಹುಡುಗ ಪ್ರಥಮ್, ಬಿಗ್‍ಬಾಸ್‍ನಲ್ಲಿ ಗೆದ್ದ ಹಣದ ಬಹುಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು ಸುದ್ದಿಯಾದವರು. ರೈತರು, ಸೈನಿಕರು, ಊರಿನ ದೇವಸ್ಥಾನ.. ಹೀಗೆ ತಮಗೆ ಕೊಡಬೇಕು ಎನಿಸಿದ ತಕ್ಷಣ, ತಮ್ಮ ಕೈಲಾದಷ್ಟು ನೆರವು ನೀಡುತ್ತಾ ಬಂದಿದ್ದಾರೆ ಪ್ರಥಮ್. ಇದೀಗ ಮತ್ತೊಮ್ಮೆ ಅಂಥದ್ದೇ ಗುಣ ಮೆರೆದಿದ್ದಾರೆ.

    ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯ ಸಿಕ್ಸ್ತ್ ಸೆನ್ಸ್ ಗೇಮ್‍ಶೋಗೆ ಹೋಗಿದ್ದ ಪ್ರಥಮ್, ಸ್ಪರ್ಧೆಯಲ್ಲಿ 10 ಸಾವಿರ ರೂ. ಬಹುಮಾನ ಗೆದ್ದರು. 10 ಲಕ್ಷ ಗೆಲ್ಲುವ ಅವಕಾಶ ಮಿಸ್ ಮಾಡಿಕೊಂಡ ಪ್ರಥಮ್, ತಾವು ಗೆದ್ದ ಅಷ್ಟೂ ಹಣವನ್ನು ಅಲ್ಲಿಯೇ ಶಕ್ತಿಧಾಮ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು.

    ಮೈಸೂರಿನಲ್ಲಿರುವ ಶಕ್ತಿಧಾಮ ಸಂಸ್ಥೆ, ರಾಜ್ ಕುಟುಂಬದವರದ್ದು. ದಶಕಗಳ ಹಿಂದೆ ಪಾರ್ವತಮ್ಮ ರಾಜ್‍ಕುಮಾರ್ ಆರಂಭಿಸಿದ್ದ ಈ 

    ಸಂಸ್ಥೆಯಲ್ಲಿ ವೃದ್ಧರು, ಅಶಕ್ತ ಮಹಿಳೆಯರಿಗೆ ಬದುಕು ಕಲ್ಪಿಸಲಾಗುತ್ತಿದೆ. ಅಶಕ್ತ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ, ಸ್ವಯಂ ಉದ್ಯೋಗ ಹಾಗೂ ನೆಲೆ ಕಲ್ಪಿಸುತ್ತಿರುವ ಸಂಸ್ಥೆ, ಪ್ರತಿವರ್ಷ ನೂರಾರು ಮಹಿಳೆಯರ ಬಾಳಿಗೆ ಬೆಳಕಾಗುತ್ತಿದೆ. ಆ ಸಂಸ್ಥೆಗೆ ತಾವು ಗೆದ್ದ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ. ಹಾಗಂತ ಪ್ರಥಮ್ ಕೋಟ್ಯಧಿಪತಿಯೇನೂ ಅಲ್ಲ. ಕೊಡುವ ಮನಸ್ಸಿರುವವರು ಅಷ್ಟೆ.

     

  • ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

    pratham image

    ಬಿಗ್​ಬಾಸ್ ಪ್ರಥಮ್ ಸಹನಟ ಭುವನ್​ ತೊಡೆಗೇ ಕಚ್ಚಿ, ಟಿವಿ ನ್ಯೂಸ್​ನಲ್ಲಿ ಮಾತನಾಡಿ, ನಂತರ ನಾಪತ್ತೆಯಾಗಿ ಹೋಗಿದ್ದಾರೆ. ಆದರೆ, ಪ್ರಥಮ್ ಮೇಲೆ ಕಂಪ್ಲೇಂಟುಗಳ ಸರಮಾಲೆಯೇ ಬರತೊಡಗಿದೆ. 

    ಸಂಜು ಮತ್ತು ನಾನು ಸೀರಿಯಲ್​ನಲ್ಲಿ ನಟಿಸುತ್ತಿದ್ದ ಪ್ರಥಮ್, ಸೀರಿಯಲ್​ನ ದೃಶ್ಯವೊಂದರಲ್ಲಿ ಸಂಜನಾ ಜೊತೆ ನಟಿಸಬೇಕಿತ್ತು. ಪ್ರಥಮ್ ಎಂದರೇನೇ ಉರಿದು ಬೀಳುತ್ತಿದ್ದ ನಟಿ ಸಂಜನಾ, ಆತನ ಕೈ ಮೇಲೆ ಕೈ ಇಟ್ಟು ಪ್ರಾಮಿಸ್ ಮಾಡುವ ದೃಶ್ಯಕ್ಕೂ ಒಲ್ಲೆ ಎಂದು ಕೂತುಬಿಟ್ಟಿದ್ದರು. ನಂತರ ಭುವನ್ ಹೇಳಿದ ಮೇಲೆ ಒಪ್ಪಿ ನಟಿಸಿದರಂತೆ. ಆದರೆ, ಅದಾದ ಮೇಲೆ ಇನ್ನಷ್ಟು ಕೆರಳಿದ ಪ್ರಥಮ್, ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಭುವನ್ ಪೊನ್ನಣ್ಣ ದೂರು.

    ಸಂಜನಾಗೆ ಕೂಡಾ ಪ್ರಥಮ್ ವರ್ತನೆ ಇಷ್ಟವಾಗುತ್ತಿರಲಿಲ್ಲ. ಅವರಷ್ಟೇ ಅಲ್ಲ, ಸೀರಿಯಲ್ ತಂಡದ ಹಲವು ತಂತ್ರಜ್ಞರು, ಸಹ ಕಲಾವಿದರು ಪ್ರಥಮ್ ವರ್ತನೆಯ ಬಗ್ಗೆ ದೂರುಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ.

    ಇದೆಲ್ಲದರ ಮಧ್ಯೆ ಭುವನ್, ಪ್ರಥಮ್ ವಿರುದ್ಧ ದೂರು ಕೊಟ್ಟಾಗಿದೆ. ಆದರೆ, ಪ್ರಥಮ್ ಇದುವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ. 

    ಇದೆಲ್ಲದರ ಮಧ್ಯೆ ಬಚ್ಚನ್ ಖ್ಯಾತಿಯ ಉದಯ್ ಮೆಹ್ತಾ ಅವರು ನನ್ನನ್ನು ಹೀರೋ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದಿದ್ದು, ನಂತರ ಅದನ್ನು ಉದಯ್ ಮೆಹ್ತಾ ನಿರಾಕರಿಸಿದ್ದು ಪ್ರಥಮ್ ಹುಚ್ಚಾಟಕ್ಕೆ ಇನ್ನೊಂದು ಉದಾಹರಣೆಯಷ್ಟೆ. 

    ಪ್ರಥಮ್ ವಿರುದ್ಧದ ದೂರುಗಳ ಲಿಸ್ಟು ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆತನ ಜೊತೆ ಕೆಲಸ ಮಾಡಿರುವವರು ನೀಡುತ್ತಿರುವ ಸಲಹೆಯೇನು ಗೊತ್ತೇ, ಪ್ರಥಮ್​ಗೆ ಒಬ್ಬ ಒಳ್ಳೆಯ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಬೇಕು ಎನ್ನುವುದು.

    Related Articles :-

    ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ

  • ಪ್ರಥಮ್ ಕಾಟಕ್ಕೆ ಒಟ್ಟಿಗೇ ಬಂದ್ರು ಧ್ರುವ-ಪ್ರೇರಣಾ

    olle hudga pratham meets dhruva sarja and his fiancee

    ಒಳ್ಳೆಯ ಹುಡುಗ ಪ್ರಥಮ್ ಕಾಟ ಕೊಡೋದ್ರಲ್ಲಿ ಫೇಮಸ್. ಆದರೆ, ಅದ್ಯಾವತ್ತೂ ಪ್ರೀತಿಯಿಂದ ಆಗೋದ್ರಿಂದ ಎಂಥವರೂ ಕರಗುತ್ತಾರೆ. ಹಾಗೆ ಕರಗಿದವರಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಯೂ ಇದೆ. ಧ್ರುವ-ಪ್ರೇರಣಾ ಲವ್ ಸ್ಟೋರಿ ಕೇಳಿದ ಮೇಲೆ ಪ್ರಥಮ್ ಸ್ವತಃ ಧ್ರುವ ಮನೆಗೆ ಹೋಗಿದ್ದಾರೆ. ಅವರನ್ನು ಪ್ರೀತಿಯಿಂದ ಒತ್ತಾಯ ಮಾಡಿ ಪ್ರೇರಣಾ ಮನೆಗೆ ಕರೆದುಕೊಂಡು ಹೋಗಿದ್ದಾರೆ.

    ಧ್ರುವ ಸರ್ಜಾ ಅವರನ್ನು ಮದುವೆಯಾಗುತ್ತಿರುವ ಪ್ರೇರಣಾ ಅಷ್ಟೇ ಅದೃಷ್ಟವಂತೆಯಲ್ಲ, ಅವರನ್ನು ಮದುವೆಯಾಗುತ್ತಿರುವ ಧ್ರುವಾ ಕೂಡಾ ಅದೃಷ್ಟವಂತ. ಮೀಡಿಯಾಗಳಿಂದ, ಪಬ್ಲಿಸಿಟಿಯಿಂದ ದೂರ ಇರುವ ಪ್ರೇರಣಾ, ನಿಜಕ್ಕೂ ಧ್ರುವ ಸರ್ಜಾಗೆ ಒಳ್ಳೆಯ ಸಂಗಾತಿ ಎಂದಿದ್ದಾರೆ. 

    ಪ್ರೇರಣಾ ಅವರ ಕುಟುಂಬಕ್ಕೆ ಧ್ರುವ ಬಗ್ಗೆ ಹೆಮ್ಮೆಯಿದೆ. ಅವರು ಅಳಿಯ ಅನ್ನೋದಕ್ಕಿಂತ ಹೆಚ್ಚಾಗಿ ಗೆಳೆಯರಂತಿದ್ದಾರೆ. ಇನ್ನು ಪ್ರೇರಣಾ ಅವರ ತಂದೆ, ಅರ್ಜುನ್ ಸರ್ಜಾರ ಬೆಸ್ಟ್ ಫ್ರೆಂಡ್ ಎಂದು ಪ್ರೀತಿಯಿಂದ ವಿಷಯ ತಿಳಿಸಿದ್ದಾರೆ.

  • ಪ್ರಥಮ್ ಕಾರ್ ನಲ್ಲಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..?

    pratham's car gets checked

    ಒಳ್ಳೆಯ ಹುಡುಗ ಪ್ರಥಮ್ ಅವರ ಕಾರ್‍ನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಅದೂ ದಾವಣಗೆರೆಯಲ್ಲಿ. ತಮ್ಮ ಕಾರ್‍ನಲ್ಲಿ ದಾವಣಗೆರೆಗೆ ಹೋಗುತ್ತಿದ್ದ ಪ್ರಥಮ್ ಅವರ ಕಾರ್‍ನ್ನು ತಡೆದ ಅಧಿಕಾರಿಗಳು ಪ್ರಥಮ್ ಅವರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ. ಕೋಡ್ ಆಫ್ ಕಂಡಕ್ಟ್ ಇರುವ ಕಾರಣ, ಕಾರ್‍ನ್ನು ಪರಿಶೀಲನೆ ಮಾಡಿದ್ದಾರೆ.

    ಅಧಿಕಾರಿಗಳಿಗೆ ಸಹಕಾರ ಕೊಟ್ಟಿರುವ ಪ್ರಥಮ್, ಮೋದಿಯೇ ಬಂದರೂ ನಿಮ್ಮ ಕರ್ತವ್ಯ ನೀವು ಮಾಡಲೇಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇನ್ನು ಪರಿಶೀಲನೆ ನಡೆಸಿದವರ ಗುಂಪಿನಲ್ಲಿ ಒಬ್ಬ ಅಧಿಕಾರಿ ಪ್ರಥಮ್ ಅವರ ಅಭಿಮಾನಿ. ಅವರ ಜೊತೆಗೊಂದು ಸೆಲ್ಫಿ ತೆಗೆದುಕೊಟ್ಟಿರುವ ಪ್ರಥಮ್ ಅಧಿಕಾರಿಗಳ ಪರಿಶೀಲನೆ, ತನಿಖೆಗೆ ಸಹಕರಿಸಿ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಅಲ್ಲಿಗೆ.. ಪ್ರಥಮ್ ಕಾರು ಪರಿಶೀಲನೆ ಮಾಡಿದವರಿಗೆ ಕೊನೆಗೂ ಸಿಕ್ಕಿದ್ದು ಸೆಲ್ಫಿ ಮಾತ್ರ..!

  • ಪ್ರಥಮ್ ನಿಜವಾದ ಹೆಸರೇನು ಗೊತ್ತಾ..? ಪುನೀತ್..!

    pratham reveals name secret

    ಒಳ್ಳೆ ಹುಡುಗ ಪ್ರಥಮ್ ಅವರ ನಿಜವಾದ ಹೆಸರೇನು..? ನಿಮಗೆ ಅಚ್ಚರಿಯಾಗಬಹುದೇನೋ. ಅವರ ನಿಜವಾದ ಹೆಸರು ಪುನೀತ್. ಅವರ ಆಧಾರ್ ಕಾರ್ಡ್‍ನಲ್ಲಿರೋ ಹೆಸರು ಕೂಡಾ ಪುನೀತ್. ಅವರು ಬಣ್ಣದ ಲೋಕದಲ್ಲಷ್ಟೇ ಪ್ರಥಮ್. ರಿಯಲ್ ಲೈಫ್‍ನಲ್ಲಿ ಪುನೀತ್. 

    ಇದನ್ನು ಬಹಿರಂಗಪಡಿಸಿರುವುದು ಸ್ವತಃ ಪ್ರಥಮ್. ಪುನೀತ್ ರಾಜ್‍ಕುಮಾರ್ ಅವರ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪ್ರಥಮ್, ಅಪ್ಪು ಎದುರೇ ಈ ಸತ್ಯ ಬಿಚ್ಚಿಟ್ಟಿದ್ದಾರೆ. ಪುನೀತ್ ಅವರಿಗೆ ತಮ್ಮ ಆಧಾರ್ ಕಾರ್ಡ್‍ನ್ನೂ ತೋರಿಸಿದ್ದಾರೆ. ಆಗ ಶಾಕ್ ಆಗುವ ಸರದಿ ಪುನೀತ್ ರಾಜ್‍ಕುಮಾರ್ ಅವರದ್ದಾಗಿತ್ತು.

    ಅದಕ್ಕೆ ಕಾರಣ ಇಷ್ಟೆ, ಪ್ರಥಮ್ ಅವರ ತಂದೆ, ತಾಯಿ ಇಬ್ಬರೂ ಡಾ.ರಾಜ್ ಅಭಿಮಾನಿಗಳು. ಪುನೀತ್ ಅವರ ಸಿನಿಮಾಗಳನ್ನು ಬಹಳ ಇಷ್ಟಪಡುತ್ತಿದ್ದರು. ಇನ್ನು ಪ್ರಥಮ್, ಸಿನಿಮಾ ಲೋಕಕ್ಕೆ ಬಂದಾಗ, ಸಿನಿಮಾಗೆ ಒಬ್ಬರೇ ಪುನೀತ್ ಇರಬೇಕು. ಅದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೇ ಆಗಿರಬೇಕು. ಅವರ ಕಾಪಿ, ರಿಪ್ಲೇಸ್‍ಮೆಂಟ್ ಯಾವುದೂ ಇರಬಾರದು ಎಂಬ ಕಾರಣಕ್ಕೆ ಪ್ರಥಮ್ ಎಂದು ಹೆಸರು ಬದಲಾಯಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್.

     

  • ಪ್ರಥಮ್ ಪಾಲಿಟಿಕ್ಸ್. ಕಾಂಗ್ರೆಸ್ಸಾ..? ಬಿಜೆಪಿನಾ..?

    pratham politics

    ನೀವು ಒಪ್ತೀರೋ, ಬಿಡ್ತೀರೋ.. ಆದರೆ, ಪ್ರಥಮ್ ತಮ್ಮ ಒಲವು ನಿಲುವುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವ ಮನುಷ್ಯ. ಅವರ ಕೆಲವು ನಿಲುವುಗಳು ಇವರ ಪಕ್ಕಾ ಬಿಜೆಪಿಯಿರಬೇಕು ಎನಿಸಿಬಿಟ್ಟರೆ, ಇನ್ನೂ ಕೆಲವು ನಿಲುವುಗಳು ಇವರು ಕಾಂಗ್ರೆಸ್ಸಿಗನಾಗಿರಬಹುದು ಎನಿಸಿಬಿಡುತ್ತವೆ. ಕೆಲವೊಮ್ಮೆ ಜೆಡಿಎಸ್‍ನವರಿದ್ದರೂ ಇರಬಹುದು ಎನಿಸುತ್ತದೆ. ಏಕೆಂದರೆ, ಪ್ರಥಮ್ ಪ್ರಕಾಶ್ ರೈ ವಿರುದ್ಧ ಹರಿಹಾಯುತ್ತಾರೆ. ಮತ್ತೊಂದು ಕಡೆ ಸಿದ್ದರಾಮಯ್ಯನವರನ್ನ ವೈಯಕ್ತಿಕವಾಗಿ ಗೌರವಿಸುತ್ತಲೇ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಾರೆ. ಅಷ್ಟೆಲ್ಲ ಅಗಿ  ಯಾರಾದರೂ ದೇವೇಗೌಡರ ಬಗ್ಗೆ ಕೆಮ್ಮಿದರೂ ಸಾಕು, ಪ್ರಥಮ್ ಕೆಂಡಾಮಂಡಲವಾಗಿಬಿಡುತ್ತಾರೆ. ಹೀಗಾಗಿಯೇ ಪ್ರಥಮ್ ಯಾವ ಪಾರ್ಟಿ ಅನ್ನೋದು ಕನ್‍ಫ್ಯೂಷನ್.

    ಪ್ರಥಮ್ ಈ ಚುನಾವಣೆಯಲ್ಲಿ ನಾಲ್ವರು ಸೋಲಬೇಕು ಎಂದು ಬಯಸುತ್ತಿದ್ದಾರೆ. ಅವರ ಸೋಲಿಗಾಗಿ ಪ್ರಚಾರವನ್ನೂ ಮಾಡ್ತಾರಂತೆ. ಹಿಂದೂ ಧರ್ಮವನ್ನು ಒಡೆಯಲು ಯತ್ನಿಸುತ್ತಿರುವ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಅವರನ್ನು ಸೋಲಿಸಬೇಕು. ದೇವೇಗೌಡರನ್ನು ಬಾಯಿಗೆ ಬಂದಂತೆ ಬೈದ ಜಮೀರ್ ಅಹ್ಮದ್‍ರನ್ನು ಸೋಲಿಸಬೇಕು ಹಾಗೂ ದ.ಕನ್ನಡದಲ್ಲಿ ಕೋಮುಗಲಭೆ ತಡೆಯಲು ವಿಫಲವಾಗಿರುವ ರಮಾನಾಥ್ ರೈರನ್ನು ಸೋಲಿಸಬೇಕು ಎನ್ನುತ್ತಾರೆ.

    ಹಾಗಾದರೆ, ಪ್ರಥಮ್ ಕಾಂಗ್ರೆಸ್ ವಿರೋಧಿನಾ ಎಂದರೆ, ಅದೂ ಅಲ್ಲ. ಸಿಎಂ ಸಿದ್ದರಾಮಯ್ಯನವರ ಮಗ ಯತೀಂದ್ರ ಗೆಲ್ಲಬೇಕು. ಅವರು ಬಹಳ ಒಳ್ಳೆಯ ವ್ಯಕ್ತಿ. ಅಂತಹವರನ್ನು ಕಳೆದುಕೊಳ್ಳಬಾರದು. ಅವರು ಕರೆಯದಿದ್ದರೂ ಅವರು ನಿಂತರೆ ನಾನು ಅವರ ಪರ ಪ್ರಚಾರ ಮಾಡ್ತೇನೆ ಎನ್ನುತ್ತಾರೆ ಪ್ರಥಮ್.

    ಸದ್ಯಕ್ಕಂತೂ ಪ್ರಥಮ್ ದೇವ್ರಂತ ಮನುಷ್ಯ ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ.

  • ಪ್ರಥಮ್ ಭುವನ್ ಜಗಳ್‍ಬಂದಿಯ ಹಿಂದೆ ಗೋಮಾಂಸದ ಕಥೆ..! - ಚಿತ್ರಲೋಕ ಎಕ್ಸ್‍ಕ್ಲೂಸಿವ್ ಭಾಗ 02

    pratham bhuvan story

    ಭಾಗ 01ರ ವಿವರ

    ಪ್ರಥಮ್ ಭುವನ್ ಮಧ್ಯೆ ಜಗಳವಾಗಿದ್ದು ನಿಜ. ಆದರೆ ಕಚ್ಚಿರುವುದು ಧಾರಾವಾಹಿ ತಂಡದವರಿಗೆ ಗೊತ್ತಿಲ್ಲ. ಆ ದಿನ ಜಗಳವಾದ ನಂತರವೂ ರಾತ್ರಿವರೆಗೆ ಶೂಟಿಂಗ್ ಆಗಿತ್ತು. ಭುವನ್ ನಾರ್ಮಲ್ಲಾಗಿಯೇ ಇದ್ದರು. ಮಾರನೇ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಯ್ತು. ಮೊದಲು ಬುದ್ದಿ ಹೇಳಿದ್ದ ತಲಘಟ್ಟಪುರ ಠಾಣೆಯ ಇನ್ಸ್‍ಪೆಕ್ಟರ್, ನ್ಯೂಸ್ ಚಾನೆಲ್‍ಗಳಲ್ಲಿ ವಿಡಿಯೋ, ಫೋಟೋ ಬಹಿರಂಗವಾದ ಮೇಲೆ ಎಫ್‍ಐಆರ್ ದಾಖಲಿಸಿದರು. ನ್ಯೂಸ್ ಚಾನೆಲ್ಲುಗಳಿಗೆ ವಿವರ ನೀಡಿದ ಅಸೋಸಿಯೇಟ್ ಡೈರೆಕ್ಟರ್ ಪವನ್ ಯಾರೆಂಬುದು ಧಾರಾವಾಹಿ ನಿರ್ದೇಶಕ ರಾಜೇಶ್‍ಗೆ ಗೊತ್ತಿಲ್ಲ. ಇಷ್ಟೆಲ್ಲ ಆದ ಮೇಲೆ ಎಂಎಲ್‍ಎ ಚಿತ್ರದ  ಶೂಟಿಂಗ್‍ನಲ್ಲಿದ್ದ ಪ್ರಥಮ್, ಚಿತ್ರ ನಿರ್ದೇಶಕರ ಸಲಹೆಯಂತೆ ಕೋರ್ಟ್‍ಗೆ ಶರಣಾಗಿ ಜಾಮೀನು ಪಡೆದರು. 

    ಭಾಗ 02

    ಮೊದಲ ಭಾಗದಲ್ಲಿ ಇಡೀ ಘಟನೆಯ ವಿವರ ಓದಿದಿರಿ. ಈ ಇಬ್ಬರ ಮಧ್ಯೆ ಮುನಿಸು ಶುರುವಾಗಲು ಏನು ಕಾರಣ..? ಯಾರು ಕಾರಣ..? ಪ್ರಥಮ್ ಮತ್ತು ಭುವನ್ ಮಧ್ಯೆ ಇಷ್ಟೆಲ್ಲ ಜಗಳವಾಗೋಕೆ ಸಂಜನಾ ಕಾರಣ ಎಂದುಕೊಂಡರೆ, ತಪ್ಪಾದೀತು. 

    ಬಿಗ್‍ಬಾಸ್‍ನಿಂದ ಶುರುವಾಗಿತ್ತು ಜಗಳ್‍ಬಂದಿ

    ಇಬ್ಬರ ಮಧ್ಯೆ ಮುನಿಸು, ಮನಸ್ತಾಪ, ಜಗಳ, ಬೈಗುಳ ಶುರುವಾಗಿದ್ದು ಸಂಜು ಮತ್ತು ನಾನು ಧಾರಾವಾಹಿ ಶೂಟಿಂಗ್‍ನಲ್ಲಿ ಅಲ್ಲ. ಬಿಗ್‍ಬಾಸ್ ಸೀಸನ್4ಗೆ ಎಂಟ್ರಿ ಕೊಟ್ಟಾಗಿನಿಂದ ಶುರುವಾಗಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರಥಮ್ ಆಗ ಸೆಲಬ್ರಿಟಿಯೇನೂ ಆಗಿರಲಿಲ್ಲ. ಆದರೆ, ತಮ್ಮ ಬಿಗ್‍ಬಾಸ್ ಪ್ರವೇಶಕ್ಕೆ ಹೆಚ್.ಡಿ. ದೇವೇಗೌಡರ ಶುಭಾಶಯದ ಹೇಳಿಕೆಯನ್ನೂ ತೆಗೆದುಕೊಂಡು ಬಂದಿದ್ದ ಚತುರ. ಹಾಗೆ ಬಿಗ್‍ಬಾಸ್‍ಗೆ ಎಂಟ್ರಿ ಕೊಟ್ಟ ದಿನದಿಂದ ಪ್ರಥಮ್ ಎಲ್ಲರ ಆಕರ್ಷಣೆಯ ಬಿಂದುವಾಗುತ್ತಾ ಹೋದರು. ಅಷ್ಟು ಹೊತ್ತಿಗೆ ಭುವನ್ ಮತ್ತು ಸಂಜನಾ ಎಷ್ಟು ಅನ್ಯೋನ್ಯವಾಗಿದ್ದರು ಎಂದರೆ, ನೋಡಿದವರಿಗೆ ಅವರು ಪ್ರೇಮಿಗಳೇ ಇರಬಹುದಾ ಎಂಬ ಅನುಮಾನವೂ ಬಂದಿತ್ತು.

    ಅಲ್ಲಿದೆ ಗೋಮಾಂಸದ ಕಥೆ..!

    ಹಾಗಾದರೆ ಬಿಗ್‍ಬಾಸ್‍ನಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಚಿತ್ರಲೋಕ ಬೆನ್ನು ಹತ್ತಿದಾಗಬಿಗ್‍ಬಾಸ್ ಮನೆಯಲ್ಲಿ ಸಂಜನಾ ವಿಚಾರಕ್ಕೆ ಕುರಿತಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಪ್ರಥಮ್ ಬಡಬಡನೆ ಮಾತನಾಡುವ ಮಾತುಗಾರನಾದರೆ, ಭುವನ್ ಸೈಲೆಂಟ್. ಭುವನ್ ಮಾಂಸಾಹಾರಿಯಾದರೆ, ಪ್ರಥಮ್ ಸಸ್ಯಾಹಾರಿ. ಹಾಗೆಂದು ಪ್ರಥಮ್ ಮಾಂಸಾಹಾರಿಗಳನ್ನು ದ್ವೇಷಿಸುವ ವ್ಯಕ್ತಿಯೇನಲ್ಲ. ಆದರೆ, ಗೋಮಾಂಸ ತಿನ್ನುವವರನ್ನು ಕಂಡರೆ ಉರಿದುಬೀಳುವ ಆಸಾಮಿ. ಜೋರಾಗಿ ಕೂಗಾಡಿ, ಬೀಫ್ ತಿನ್ನುವವರನ್ನು ಬಾಯಿಗೆ ಬಂದಂತೆ ಬೈದುಬಿಡುತ್ತಿದ್ದರು. ಈ ವೀಕ್‍ನೆಸ್‍ನ್ನು ಭುವನ್ ಅರ್ಥ ಮಾಡಿಕೊಂಡಿದ್ದರು ಮತ್ತು ಭುವನ್‍ಗೆ ಬೀಫ್ (ಗೋಮಾಂಸ) ಎಂದರೆ ಇಷ್ಟ.

    ಬೀಫ್ ತಿನ್ನು, ಚೆನ್ನಾಗಿ ಆಗ್ತೀಯ ಎನ್ನುತ್ತಿದ್ದ ಭುವನ್

    ಬೀಫ್ ತಿಂದರೆ ಬಲಿಷ್ಠನಾಗುತ್ತೀಯ ಎಂದು ಪದೇ ಪದೇ ಹೇಳುತ್ತಿದ್ದ ಭುವನ್, ಪ್ರಥಮ್‍ನನ್ನು ಆಗಾಗ್ಗೆ ಬೀಫ್ ವಿಚಾರಕ್ಕೆ ಕೆಣಕುತ್ತಿದ್ದರು. ನೋಡೋಕೆ ಕೋತಿ ಥರಾ ಇದ್ದೀಯಾ, ಬೀಫ್ ತಿನ್ನು, ಹೀರೋ ತರಹ ಆಗ್ತೀಯ ಎಂದು ರೇಗಿಸುತ್ತಿದ್ದರು. ಭುವನ್ ಹಾಗೆ ಹೇಳಿದಾಗಲೆಲ್ಲ ಪ್ರಥಮ್ ಸಿಡಿದುಬೀಳುತ್ತಿದ್ದರು. ಕೂಗಾಡುತ್ತಿದ್ದರು. ಬಾಯಿಗೆ ಬಂದಂತೆ ಭುವನ್‍ನ್ನು ಬಯ್ಯುತ್ತಿದ್ದರು. ಆಮೇಲೆ ಪ್ರಥಮ್ ಬಿಗ್‍ಬಾಸ್ ವಿನ್ನರ್ ಆದರು ಅದು ಬೇರೆ ಕಥೆ.

    ಧಾರಾವಾಹಿ ಶೂಟಿಂಗ್‍ನಲ್ಲಾಗಿದ್ದು ಕೂಡಾ ಅದೇ. ಮತ್ತದೇ ಬೀಫ್ ವಿಚಾರಕ್ಕೆ ಪ್ರಥಮ್‍ನನ್ನು ಕೆಣಕಿದ ಭುವನ್, ಗಲಾಟೆ ಮಾಡಿಕೊಂಡಿದ್ದಾರೆ. ಇಡೀ ಘಟನೆ ಶುರುವಾಗಿರುವುದೇ ಅಲ್ಲಿಂದ. ಇದನ್ನು ಪ್ರಥಮ್ ಕೂಡಾ ಹೇಳಿಕೊಂಡಿದ್ದಾರೆ. 

    ಪ್ರಥಮ್ ಹೇಳುತ್ತಿರುವುದೇನು..?

    ನೀವು ಹಾಕಿದ ವೋಟಿನ ಭಿಕ್ಷೆಯಿಂದ ನನಗೆ ಗೆಲುವು ಸಿಕ್ಕಿದೆ ಜೀವನ ರೂಪಿಸಿಕೊಂಡಿದ್ದೇನೆ. ನನ್ನ ಮತ್ತು ಭುವನ್‍ರ ನಡುವಿನ ಇಷ್ಟೂ ಗಲಾಟೆಗೆ ಕಾರಣ ಏನೆಂದರೆ, ಭುವನ್‍ರ ಅತಿಯಾದ ಗೋಮಾಂಸ ಪ್ರೀತಿ. ಅವರು ಯಾವಾಗಲೂ ನನ್ನನ್ನು ಬೀಫ್ ತಿನ್ನುವಂತೆ ಹೇಳಿ ರೇಗಿಸುತ್ತಿದ್ದರು. ಪ್ರಥಮ್, ನೀವು ಕೋತಿ ತರಹಾ ಇದ್ದೀರ.. ಈಗ ಹೀರೋ ಬೇರೆ ಆಗಿದ್ದೀರಾ.. ಬೀಫ್ ತಿನ್ನಿ. ಪರ್ಸನಾಲಿಟಿ ಡೆವಲಪ್ ಮಾಡಿಕೊಳ್ಳಿ ಎಂದು ನನ್ನ ಭಾವನೆ ಕೆರಳಿಸುತ್ತಿದ್ದರು. ಹಸುವಿನ ಗಂಜಲದಲ್ಲಿ ನಾವು ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು ಎಂದು ನಂಬಿರುವವನು ನಾನು. 

    ನಾನು ನಿಮ್ಮ ನಂಬಿಕೆಗೆ ಮೋಸ ಮಾಡಿಲ್ಲ. ನಾನು ಕಚ್ಚಿಲ್ಲ. ನಿಮ್ಮ ಕಾಲನ್ನು ಕಚ್ಚುತ್ತಾ ಇದ್ದರೆ, ಯಾರೂ ರಕ್ತ ಬರುವ ತನಕ ಸುಮ್ಮನಿರಲ್ಲ. ಝಾಡಿಸಿ ಒದೀತೀರ..ದಯವಿಟ್ಟು ಸತ್ಯ ಅರ್ಥ ಮಾಡಿಕೊಳ್ಳಿ. 

    ಪ್ರಥಮ್ ಮತ್ತು ಭುವನ್ ಮಧ್ಯೆ ನಡೆದಿರುವ ಘಟನೆಯ ಹಿಂದು ಮುಂದಿನ ಚಿತ್ರಗಳ ಸಂಪೂರ್ಣ ಚಿತ್ರಣ ಇದು. ಸದ್ಯಕ್ಕೆ ಪ್ರಥಮ್ ಸಿನಿಮಾ ಶೂಟಿಂಗ್‍ನಲ್ಲಿದ್ದರೆ, ಭುವನ್ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ.  

  • ಪ್ರಥಮ್ ಭುವನ್ ಜಗಳ್‍ಬಂದಿಯ ಹಿಂದೆ ಗೋಮಾಂಸದ ಕಥೆ..! - ಥ್ರಿಲ್ಲರ್ ಸಿನಿಮಾಗಿಂತ ಕಡಿಮೆಯೇನಿಲ್ಲ - ಚಿತ್ರಲೋಕ ಎಕ್ಸ್‍ಕ್ಲೂಸಿವ್ ಭಾಗ 01

    pratham bhuvan sotry

    ಇದುವರೆಗೆ ಪ್ರಥಮ್, ಭುವನ್ ಜಗಳದ ಕಥೆ ನೋಡಿದವರಿಗೆ ಪ್ರಥಮ್ ಖಳನಾಯಕನಂತೆಯೂ, ಭುವನ್ ಸಂತ್ರಸ್ತನಂತೆಯೂ ಕಾಣಿಸಿದೆ. ಆದರೆ, ಕಥೆ ಇಷ್ಟೇ ಅಲ್ಲ. ಹೀಗಾಗಿಯೇ ನಿಜವಾಗಿಯೂ ನಡೆದದ್ದೇನು ಎಂದು ಪತ್ತೆ ಮಾಡಲು ಚಿತ್ರಲೋಕ ಬೆನ್ನು ಹತ್ತಿದಾಗ ಒಂದೊಂದೇ ಕಥೆ ಬಿಚ್ಚಿಕೊಳ್ಳುತ್ತಾ ಹೋಯ್ತು. ಯಾವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತಾ ಕಥೆಯೊಂದು ಓಪನ್ ಆಯ್ತು.

    ಇದುವರೆಗೆ ಎಲ್ಲರಿಗೂ ಗೊತ್ತಿರೋದು ಇಷ್ಟು. ಭಾನುವಾರ ಸಂಜೆಯ ಹೊತ್ತಿಗೆ ಪ್ರಥಮ್, ಸಂಜು ಮತ್ತು ನಾನು ಧಾರಾವಾಹಿಯ ಶೂಟಿಂಗ್‍ನಲ್ಲಿ ಸಹನಟ ಭುವನ್ ತೊಡೆಗೆ ಕಚ್ಚಿದ್ದಾನೆ ಎಂದು ನ್ಯೂಸ್ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟವಾಯ್ತು. ಅದಾದ ನಂತರ ಭುವನ್ ದೂರು ಕೊಟ್ಟಿದ್ದು, ಪ್ರಥಮ್ ಜಾಮೀನು ಪಡೆದಿದ್ದು, ನಂತರ ಪ್ರಥಮ್ ಭುವನ್ ವಿರುದ್ಧ ದೂರು ಕೊಟ್ಟಿದ್ದು, ನಾನು ಹಲ್ಲೆ ಮಾಡಿಲ್ಲ ಎಂದು ಹೇಳುತ್ತಿರುವುದು. ಇದೆಲ್ಲ ಇಡೀ ಘಟನೆಯ ಸಂಕ್ಷಿಪ್ತ ಚಿತ್ರಣ. ಆದರೆ, ಇಡೀ ಘಟನೆ ಇಷ್ಟೇ ಅಲ್ಲ. ಈ ಬಗ್ಗೆ ಚಿತ್ರಲೋಕ ಮೊದಲು ಸಂಪರ್ಕಿಸಿದ್ದು ಸಂಜು ಮತ್ತು ನಾನು ಧಾರಾವಾಹಿಯ ನಿರ್ದೇಶಕ ರಾಜೇಶ್ ಅವರನ್ನ.

    ನಿರ್ದೇಶಕ ರಾಜೇಶ್ ಹೇಳಿದ್ದು

    ಇಡೀ ಘಟನೆ ನಡೆದಿದ್ದು ಶನಿವಾರ ಅಂದರೆ ಜುಲೈ 22ನೇ ತಾರೀಕು. ಸಂಜೆ 4.45ರಿಂದ 5.15ರ ಮಧ್ಯೆ. ಗಲಾಟೆ ಆಗಿದ್ದು ನಿಜ. ಆದರೆ, ಎಲ್ಲರೂ ಹೇಳುವಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಪ್ರತಿದಿನವೂ ಜಗಳ ನಡೆಯುತ್ತಿರಲಿಲ್ಲ. ಇಬ್ಬರೂ ಪರಸ್ಪರ ಮಾತನಾಡುತ್ತಿದ್ದುದೇ ಕಡಿಮೆ. ಕೆಲವು ಬಾರಿ ಪ್ರಥಮ್ ಅವರೇ ಭುವನ್ ಬಳಿ ಹೋಗಿ ಸೆಲ್ಫೀ ತೆಗೆದುಕೊಂಡು ತಮ್ಮ ಫೇಸ್‍ಬುಕ್ ಪೇಜ್‍ಗೆ ಹಾಕುತ್ತಿದ್ದರು.

    ಅದು ಪ್ರಥಮ್‍ಗೆ ಲಾಸ್ಟ್ ಡೇ

    ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಪ್ರಥಮ್ ಭಾಗದ ಶೂಟಿಂಗ್ ಮುಗಿದಿತ್ತು.ಶನಿವಾರವೇ ಕೊನೆಯ ದಿನ. ಸಂಜೆ 4.45ರ ಸುಮಾರಿಗೆ ಗಲಾಟೆ ನಡೆಯಿತು. ನಂತರ ನನ್ನ ತಂಡದ ಸದಸ್ಯರ ಬಳಿ ಘಟನೆಯ ವಿವರ ತಿಳಿದುಕೊಂಡೆ. ಪ್ರಥಮ್‍ಗೆ ಮೊದಲು ಹೊಡೆದಿದ್ದು ಭುವನ್. ಪ್ರಥಮ್ ಏಕಾಏಕಿ ಹಲ್ಲೆ ಮಾಡಲಿಲ್ಲ. ನಂತರ ಇಡೀ ಚಿತ್ರತಂಡದ ಸದಸ್ಯರು ಇಬ್ಬರನ್ನೂ ಹಿಡಿದು ಸಮಾಧಾನ ಪಡಿಸುವ ಯತ್ನ ಮಾಡಿದರು. ಹೊಡೆದಾಡುತ್ತಿದ್ದವರನ್ನು ಬೇರೆ ಮಾಡಿದರು. ನಂತರ ಇಬ್ಬರೂ ತಮ್ಮ ತಮ್ಮ ರೂಮುಗಳಿಗೆ ತೆರಳಿದರು.

    ಭುವನ್ ಗಾಯದ ವಿಚಾರ ಹೇಳಿದ್ದು ಭುವನ್ ಅಲ್ಲ..!

    ಕೆಲವು ನಿಮಿಷಗಳ ನಂತರ ಓನರ್ ವಿಶಾಲಾಕ್ಷಮ್ಮ ಭುವನ್ ತೊಡೆಯಲ್ಲಿ ಗಾಯವಾಗಿದೆ ಎಂದು ಹೇಳಿದರು. ಅದಾದ ನಂತರವೇ ಪ್ರಥಮ್ ಭುವನ್‍ನ ತೊಡೆಗೆ ಕಚ್ಚಿದ್ದಾನೆ ಎಂಬ ಸುದ್ದಿ ಹಬ್ಬಿದ್ದು. ನಂತರ ಶೂಟಿಂಗ್ ಶುರು ಮಾಡಿದೆವು. ಭುವನ್ ನನ್ನ ಕೈ ನೋಯುತ್ತಿದೆ ಎಂದು ಹೇಳಿದರು. ಇದು ಹೊಡೆದಾಟದ ಎಫೆಕ್ಟ್. ಏನೂ ಆಗಲ್ಲ. ಕೆಲಸದ ಕಡೆ ಗಮನ ಕೊಡು, ಎಲ್ಲ ಸರಿ ಹೋಗುತ್ತೆ ಎಂದು ಹೇಳಿದೆ. 

    ಭುವನ್ ಆರಾಮಾಗಿಯೇ ಇದ್ದ..!

    ಅದಾದ ನಂತರ ಧಾರಾವಾಹಿಯ ಚಿತ್ರೀಕರಣ ರಾತ್ರಿ 9.45ರವರೆಗೂ ನಡೆಯಿತು. ಭುವನ್ ನಾರ್ಮಲ್ ಆಗಿಯೇ ಓಡಾಡಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಮುಗಿದಿತ್ತು. ಮಾರನೇ ದಿನ ಅದು ನ್ಯೂಸ್ ಆಯ್ತು. ಕೆಲವು ಚಾನೆಲ್ಲಿನವರು ನನ್ನನ್ನು ಕೇಳಿದರು. ನಾನು ಘಟನೆಯ ವಿವರ ನೀಡಿದೆ. 

    ಪವನ್ ಎಂಬುವ ವ್ಯಕ್ತಿಯೇ ಇಲ್ಲ..!

    ಅದು ನಿಜಕ್ಕೂ ನನಗೂ ಶಾಕಿಂಗ್ ನ್ಯೂಸ್. ಆ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಪವನ್ ಎಂಬ ವ್ಯಕ್ತಿ ಮಾತನಾಡಿದ. ಸಂಜು ಮತ್ತು ನಾನು ಧಾರಾವಾಹಿಯ ಅಸೋಸಿಯೇಟ್ ಡೈರೆಕ್ಟರ್ ಎಂದು ಹೇಳಿಕೊಂಡು ಮಾತನಾಡಿದ. ಆದರೆ, ಪವನ್ ಎಂಬ ವ್ಯಕ್ತಿ ಯಾರೋ ನಿರ್ದೇಶಕನಾದ ನನಗೂ ಗೊತ್ತಿಲ್ಲ. ನನ್ನ ಟೀಂನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಇಲ್ಲ. ನ್ಯೂಸ್ ಚಾನೆಲ್‍ಗಳಿಗೆ ಮಾತನಾಡಿದ ಆ ವ್ಯಕ್ತಿ ಯಾರು..? ನನಗೆ ಗೊತ್ತಿಲ್ಲ.

    ದೂರು ಕೊಟ್ಟಿದ್ದು 20 ಗಂಟೆಗಳ ನಂತರ..!

    ಘಟನೆ ನಡೆದಿರೋದು ಜುಲೈ 22ನೇ ತಾರೀಕು. ದೂರು ಕೊಟ್ಟಿರೋದು 23ನೇ ತಾರೀಕು ಸಂಜೆ. ಘಟನೆ ಮತ್ತು ದೂರಿನ ಮಧ್ಯೆ 20 ಗಂಟೆಗಳ ಗ್ಯಾಪ್ ಇದೆ. ಅಷ್ಟು ದೊಡ್ಡ ಗಾಯವಾಗಿದ್ದರೆ, ಭುವನ್ ಯಾಕೆ ಘಟನೆ ನಡೆದ ತಕ್ಷಣ ದೂರು ಕೊಡಲಿಲ್ಲ. ತಕ್ಷಣ ಯಾಕೆ ಚಿಕಿತ್ಸೆಯನ್ನೂ ಪಡೆಯಲಿಲ್ಲ. ಅದು ಯಕ್ಷ ಪ್ರಶ್ನೆ.

    ಚಿತ್ರಲೋಕದ ತನಿಖೆಯಲ್ಲಿ ಗೊತ್ತಾದ ಅಂಶವೆಂದರೆ, ತಲಘಟ್ಟಪುರ ಠಾಣೆಗೆ ಭುವನ್ ನಾರ್ಮಲ್ ಆಗಿಯೇ ನಡೆದುಕೊಂಡು ಬಂದರು. ಆಗ ಠಾಣೆಯಲ್ಲಿದ್ದ ಇನ್ಸ್‍ಪೆಕ್ಟರ್ ಇದನ್ನು ಗಮನಿಸಿ, ಕಂಪ್ಲೇಂಟ್ ತೆಗೆದುಕೊಂಡಿಲ್ಲ. ಫ್ರೆಂಡ್‍ಶಿಪ್ ಮಧ್ಯೆ ನಡೆದ ಸಣ್ಣ ಜಗಳವನ್ನು ಸ್ಟೇಷನ್‍ಗೇಕೆ ತರುತ್ತೀರಿ. ನೀವೇ ಮಾತನಾಡಿ ಸರಿಪಡಿಸಿಕೊಳ್ಳಿ.. ಎಂದು ಬುದ್ದಿಮಾತು ಹೇಳಿದ್ದಾರೆ. ಆದರೆ ಯಾವಾಗ ಪ್ರಕರಣ ನ್ಯೂಸ್ ಚಾನೆಲ್‍ಗಳಲ್ಲಿ ಬಂದು, ಟಿವಿಗಳಲ್ಲಿ ಭುವನ್ ತಮ್ಮ ತೊಡೆಗೆ ಪ್ರಥಮ್ ಕಚ್ಚಿದ್ದಾನೆ ಎಂದು ಫೋಟೋ ಮತ್ತು ವಿಡಿಯೋಗಳು ಹೊರಬಂದವೋ, ಆಗ ಪೊಲೀಸರು ದೂರು ಸ್ವೀಕರಿಸಿ, ಎಫ್‍ಐಆರ್ ಮಾಡಿಕೊಂಡಿದ್ದಾರೆ.

    ಎಲ್ಲಿ ಹೋಗಿದ್ದರು ಪ್ರಥಮ್..?

    ಇಷ್ಟೂ ಘಟನೆ ನಡೆಯುವಾಗ ಪ್ರಥಮ್ ಎಂಎಲ್‍ಎ ಚಿತ್ರದ ಶೂಟಿಂಗ್‍ನಲ್ಲಿದ್ದರು. ಧಾರಾವಾಹಿಯ ಶೂಟಿಂಗ್ ಮುಗಿಸಿ, ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ್‍ಗೆ ಭುವನ್ ತನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿದ್ದು ನ್ಯೂಸ್ ಚಾನೆಲ್ಲುಗಳಲ್ಲಿ ಬಹಿರಂಗವಾದ ನಂತರ. ಎಂಎಲ್‍ಎ ಚಿತ್ರದ ನಿರ್ದೇಶಕರೇ, ಪ್ರಥಮ್‍ಗೆ ಮೊದಲು ಕೋರ್ಟ್‍ಗೆ ಹೋಗಿ ಜಾಮೀನು ತೆಗೆದುಕೊಂಡು ಬರುವಂತೆ ಸಲಹೆ ನೀಡಿದರು. ಅದರಂತೆ ಪ್ರಥಮ್, ಕೋರ್ಟ್‍ನಲ್ಲಿ ಶರಣಾಗಿ ಜಾಮೀನು ಪಡೆದುಕೊಂಡರು. ನಂತರ ಭುವನ್ ವಿರುದ್ಧ ದೂರು ನೀಡಿದರು. 

    ಈಗ ಭುವನ್ ಮನೆಯಲ್ಲಿಲ್ಲ. ಇಬ್ಬರ ಮಧ್ಯೆ ಇಷ್ಟು ದೊಡ್ಡ ಜಗಳ ಶುರುವಾಗಲು ಕಾರಣ ಏನು..? ಎಲ್ಲಿಂದ ಶುರುವಾಯ್ತು..? ಗೋಮಾಂಸದ ಕಥೆ ಏನು..?

    ಮುಂದಿನ ಭಾಗದಲ್ಲಿ ನೋಡಿ. 

     

  • ಪ್ರಥಮ್.. ಏನಪ್ಪಾ ನಿನ್ ಸೀಕ್ರೆಟ್ಟು..?

    pratham's secret

    ಬಿಗ್‍ಬಾಸ್ ಪ್ರಥಮ್, ಬಿಲ್ಡಪ್ ಸೃಷ್ಟಿಸೋದ್ರಲ್ಲಿ ಎತ್ತಿದ ಕೈ. ಅದೂ ಸುಮ್ಮನೆ ಬಿಲ್ಡಪ್ ಹುಟ್ಟೋದಿಲ್ಲ. ಹೇಳಿದ್ದನ್ನು ಮಾಡಿ ತೋರಿಸಿರುವ ಹುಡುಗ ಪ್ರಥಮ್. ನಿಮಗೆಲ್ಲ ಗೊತ್ತಿರೋ ಹಾಗೆ, ಪ್ರಥಮ್ ಅವರ ಮೊದಲ ಚಿತ್ರ `ದೇವ್ರಂತಾ ಮನುಷ್ಯ' ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಹೆಚ್.ಡಿ. ದೇವೇಗೌಡ. ಎರಡನೇ ಸಿನಿಮಾ `ಎಂಎಲ್‍ಎ' ಚಿತ್ರಕ್ಕೆ ಕ್ಲಾಪ್ ಮಾಡಿದ್ದವರು ಸಿದ್ದರಾಮಯ್ಯ. 

    ಈಗ ಅವರ 3ನೇ ಸಿನಿಮಾ `ಬಿಲ್ಡಪ್' ರೆಡಿಯಾಗುತ್ತಿದೆ. ಹೇಳಿದಂತೆ ಶಿವರಾಜ್ ಕುಮಾರ್ ಅವರಿಂದಲೇ ಟೈಟಲ್ ಲಾಂಚ್ ಮಾಡಿಸಿರುವ ಪ್ರಥಮ್, ಈಗ ಚಿತ್ರಕ್ಕೆ ಕ್ಲಾಪ್ ಮಾಡೋಕೆ ದೇಶದ ಅತಿಗಣ್ಯ ವ್ಯಕ್ತಿಯೊಬ್ಬರನ್ನು ಕರೆಸುತ್ತಿದ್ದಾರಂತೆ. ಅವರ ಹೆಸರು ಕೇಳಿದರೆ ಸಾಕು, ಇಡೀ ದೇಶ ಎದ್ದು ನಿಂತು ಗೌರವಿಸುತ್ತೆ ಅಂತಾರೆ ಪ್ರಥಮ್. ಆದರೆ ಅವರ್ಯಾರು ಅನ್ನೋದನ್ನು ಮಾತ್ರ ಪ್ರಥಮ್ ಹೇಳೋದಿಲ್ಲ. 

    ಇನ್ನು ಚಿತ್ರದಲ್ಲಿ ಭಾರತ ಚಿತ್ರರಂಗದಲ್ಲೇ ಖ್ಯಾತರಾಗಿರುವ ನಟಿಯೊಬ್ಬರು ನಟಿಸಲಿದ್ದಾರಂತೆ. ಇನ್ನು ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಹಿರಿಯ ಕಲಾವಿದರೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇವೆಲ್ಲವನ್ನೂ ಹೇಳಿಕೊಳ್ಳುವ ಪ್ರಥಮ್, ಅವರ್ಯಾರು ಅನ್ನೋ ವಿಷಯವನ್ನು ಮಾತ್ರ ಗುಟ್ಟಾಗಿಡ್ತಾರೆ. ಒಟ್ಟಿನಲ್ಲಿ ಸೀಕ್ರೆಟ್ ಮೈಂಟೇನ್ ಮಾಡಿಕೊಂಡೇ `ಬಿಲ್ಡಪ್' ತೆಗೆದುಕೊಳ್ಳೊದ್ರಲ್ಲಿ, ಪ್ರಥಮ್‍ಗೆ ಪ್ರಥಮ್ ಅವರೇ ಸಾಟಿ.

  • ಪ್ರಥಮ್‍ಗೆ ಧರ್ಮಸ್ಥಳ ಧರ್ಮಾಧಿಕಾರಿ ಉಡುಗೊರೆ

    pratham meets veerendra hegde

    ಒಳ್ಳೆಯ ಹುಡುಗ ಪ್ರಥಮ್‍ಗೆ ಈಗ ಒಂದು ಮರೆಯಲಾರದ ಉಡುಗೊರೆ ಸಿಕ್ಕಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದ ಪ್ರಥಮ್, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಹೆಗ್ಗಡೆಯವರು, ಪ್ರಥಮ್‍ಗೆ ವಿದೇಶಿ ವಾಚ್‍ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಚಿಕಾಗೊದಿಂದ ತರಿಸಿದ್ದ ವಾಚ್‍ನ್ನು ಹೆಗ್ಗಡೆಯವರಿಂದಲೇ ಕಾಣಿಕೆಯಾಗಿ ಪಡೆದ ಪ್ರಥಮ್‍ಗೆ ಅದು ಮರೆಯಲಾಗದ ಕ್ಷಣ. ಭಾವುಕರಾಗಿಯೇ ಉಡುಗೊರೆಯನ್ನು ಸ್ವೀಕರಿಸಿರುವ ಪ್ರಥಮ್, ಇದು ನನ್ನ ಜೀವಮಾನದಲ್ಲೇ ನಾನು ಪಡೆಯುತ್ತಿರುವ ಅತಿ ಶ್ರೇಷ್ಟ ಗಿಫ್ಟ್ ಎಂದಿದ್ದಾರೆ.

  • ಬಿಗ್ ಪ್ರಥಮ್ ಜೊತೆ ಗಾಂಚಾಲಿ ಗೀತಾ..!

    pratham gets natabhayankari

    ಬಿಗ್‍ಬಾಸ್ ಪ್ರಥಮ್ ಜೊತೆ ಗಾಂಚಾಲಿ ಗೀತಾ ಬರುತ್ತಿದ್ದಾರೆ. ಪ್ರಥಮ್ ನಟಭಯಂಕರನಾದರೆ, ಆಕೆ ಗಾಂಚಾಲಿ ಗೀತಾ. ಇದು ನಟಭಯಂಕರ ಚಿತ್ರದ ಹೊಸ ಬ್ರೇಕಿಂಗ್ ನ್ಯೂಸ್.

    ಪ್ರಥಮ್ ಅಭಿನಯದ ನಟಭಯಂಕರ ಚಿತ್ರದ ಮೂಲಕ ರನ್ ಆ್ಯಂಟನಿ ಚಿತ್ರದಲ್ಲಿ ನಟಿಸಿದ್ದ ಸುಷ್ಮಿತಾ ಮತ್ತೊಮ್ಮೆ ಬಂದಿದ್ದಾರೆ. ಚಿತ್ರದಲ್ಲಿ ಹೀರೋಗಿಂತಲೂ ಹೆಚ್ಚು ಪ್ರಾಧಾನ್ಯತೆ ಹೀರೋಯಿನ್ ಪಾತ್ರಕ್ಕಿದೆಯಂತೆ. ಇದನ್ನು ಹೇಳಿಕೊಂಡಿರೋದು ಸ್ವತಃ ಪ್ರಥಮ್. 

    ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ ಚಿತ್ರೀಕರಣ ಶೇ.70ರಷ್ಟು ಮುಗಿದಿದೆ. 

  • ಬಿಗ್ ಬಾಸ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..?

    preethse incident recalls

    ಬಿಗ್​ಬಾಸ್ ಪ್ರಥಮ್ ಕೆಟ್ಟ ಕಾರಣಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಮೊದಲು ಬಿಗ್​ಬಾಸ್ ವಿನ್ನರ್ ಆಗಿ, ನಂತರ ಪ್ಲೇಬಾಯ್ ಆಗಿ, ಮತ್ತೊಮ್ಮೆ ಸೂಸೈಡ್ ಸ್ಟಾರ್​ ಆಗಿ, ಈಗ ಬಿಗ್ ಬಾಸ್ ಸ್ಟಾರ್ ಆಗಿದ್ದಾರೆ. ಆದರೆ, ವಿಷಯ ಇದಲ್ಲ. ಇಡೀ ಪ್ರಕರಣದಲ್ಲಿ ಪ್ರಥಮ್, ಭುವನ್ ಮತ್ತು ಸಂಜನಾ ಕಥೆ ಕೇಳುತ್ತಿದ್ದರೆ, ಮತ್ತೆ ಮತ್ತೆ ನೆನಪಾಗುತ್ತಿರುವುದು ಪ್ರೀತ್ಸೆ ಸಿನಿಮಾ.

    ನಿಮಗೆಲ್ಲ ಗೊತ್ತಿರುವಂತೆ ಪ್ರೀತ್ಸೆ ಸಿನಿಮಾ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಸೋನಾಲಿ ಬೇಂದ್ರೆ ನಟಿಸಿದ್ದ ಸಿನಿಮಾ 2000ನೇ ಇಸವಿಯಲ್ಲಿ ಬಂದಿದ್ದ ಆ ಚಿತ್ರದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್. ನಿರ್ದೇಶಕ ಡಿ. ರಾಜೇಂದ್ರ ಬಾಬು.

    ಆ ಚಿತ್ರದಲ್ಲಿ ಉಪೇಂದ್ರ ಕಿ.ಕಿ..ಕಿರಣ್ ಎನ್ನುತ್ತಲೇ ಸೋನಿಯಾ ಬೇಂದ್ರೆಯನ್ನು ಕಾಡುತ್ತಾರೆ. ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಕೀಳರಿಮೆ ವ್ಯಕ್ತಿತ್ವದ ಪಾತ್ರದಲ್ಲಿ ಉಪೇಂದ್ರ ಮನೋಜ್ಞವಾಗಿ ನಟಿಸಿದ್ದರು. ಆಕೆಯಿಂದ ಸೋನಾಲಿಯನ್ನು ರಕ್ಷಿಸುವ ಪಾತ್ರ ಶಿವರಾಜ್ ಕುಮಾರ್​ ಅವರದ್ದು. 

    ಇಲ್ಲಿ ಪ್ರಥಮ್ ಕಚ್ಚಾಟದ ಸ್ಟೋರಿಯಲ್ಲೂ ಇಂಥದ್ದೇ ಕಥೆಯ ನೆರಳು ಕಾಣುತ್ತಿದೆ. ಭುವನ್, ಪ್ರಥಮ್ ಮತ್ತು ಸಂಜನಾ ಮೂವರ ಮಾತನ್ನೂ ಕೇಳಿದಾಗ ಗೊತ್ತಾಗುವುದೇನೆಂದರೆ, ಸಂಜನಾಗೆ ಪ್ರಥಮ್ ಕಂಡರೆ ಆಗಲ್ಲ. ಪ್ರಥಮ್​ಗೆ, ಅದೇ ಸಂಜನಾ ಭುವನ್ ಜೊತೆಯಲ್ಲಿದ್ದರೆ ತಡೆದುಕೊಳ್ಳಲಾಗದ ಅಸಹನೆ. ಆ ಅಸಹನೆ ಈಗ ಕಚ್ಚಾಟದ ಮೂಲಕ ಹೊರಬಿದ್ದಿದೆ. ಪ್ರಥಮ್, ಸಂಜನಾ ಮೇಲೆ ವಿಪರೀತ ಎನ್ನುವಷ್ಟು ಪೊಸೆಸಿವ್ ಆಗಿದ್ದಾರಾ..? ಅದು ಪ್ರೀತಿನಾ..? ಗೊತ್ತಿಲ್ಲ. ಆದರೆ, ಸಂಜನಾರನ್ನು ಪ್ರಥಮ್​ರಿಂದ ರಕ್ಷಿಸುವಂತಹ ಕೆಲಸ ಮಾಡುತ್ತಿರುವುದು ಭುವನ್. 

    ಈ ಪ್ರಕರಣ ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಪ್ರಕರಣದಲ್ಲಿ ಹೊರಗೆ ಕಾಣದೇ ಹೋದರೂ ನರಳುತ್ತಿರುವುದು ನಟಿ ಸಂಜನಾ. ಥೇಟು ಪ್ರೀತ್ಸೆ ಚಿತ್ರದ ಸೋನಾಲಿ ಬೇಂದ್ರೆಯ ಹಾಗೆ.

    Related Articles :-

    ಸೈಕೋ ಪ್ರಥಮ್​ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ

    Is Pratham The New Venkat?

    ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

    ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

    ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

    Udaya Mehta Not Producimg Pratham Movie 

    ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ

  • ಬಿಗ್‍ಬಾಸ್ ಪ್ರಥಮ್ ಕಟ್ಟಿಸಿದ ದೇವಸ್ಥಾನ 

    pratham

    ಒಳ್ಳೆಯ ಹುಡುಗ ಪ್ರಥಮ್, ತಮ್ಮ ಬಿಗ್‍ಬಾಸ್ ಸಂಭಾವನೆಯಲ್ಲಿ ಊರಿನಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿದ್ದರು.. ನೆನಪಿದೆ ತಾನೇ.. ಆ ದೇವಸ್ಥಾನ ಮುಕ್ತಾಯಗೊಂಡಿದ್ದು, ಪೂಜೆ ಪುನಸ್ಕಾರಗಳೂ ಆರಂಭವಾಗಿವೆ.

    ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ನಮ್ಮೂರಲ್ಲಿ ಹಿರಿಯರೆಲ್ಲರ ಜೊತೆ ನಿರ್ಮಿಸಿದ ಈ ದೇವಸ್ಥಾನ ನನಗೆ ಅಂತಾ ಆತ್ಮತೃಪ್ತಿ ಕೊಟ್ಟಿದೆ. ಊರಿನವರ ಕೆಲಸಕ್ಕೆ ನಾನು ಸಣ್ಣದಾಗಿ ಕೈಜೋಡಿಸಿದೆ. ಉದ್ಘಾಟನೆಗೆ ನನ್ನನ್ನೇ ಅತಿಥಿಯಾಗಿ ಕರೆದ್ರು. 

    ಯಾಕೋ ನಮ್ಮೂರಲ್ಲಿ ದೊಡ್ಡವರ ಎದುರು ಸ್ಟೇಜ್ ಮೇಲೆ ಕೂತ್ಕೊಳ್ಳೋಕೆ ಒಂಥರಾ ಆಯ್ತು. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ದೇವಸ್ಥಾನ ನೋಡಿಕೊಂಡು ಖುಷಿಯಾಗಿ ಬಂದೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್.

    ಅಂದಹಾಗೆ ದೇವಸ್ಥಾನಕ್ಕೊಂದು ಬೋರ್‍ವೆಲ್ ಹಾಕಿಸಬೇಕಂತೆ. ಆದಷ್ಟು ಬೇಗ ಮಾಡಿಸ್ತೀನಿ, ನನ್ನೂರು ನನಗೆ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್. 

    ಹಲಗಾಪುರ, ಪ್ರಥಮ್ ಅವರ ಊರು. ಅಲ್ಲಿ ಪ್ರಥಮ್ ಸಹಾಯ ಹಸ್ತದೊಂದಿಗೆ ನಿರ್ಮಾಣವಾದ ದೇವಸ್ಥಾನ ಶಿವಾಲಂಕಾರೇಶ್ವರ. 

  • ಬಿಗ್‍ಬಾಸ್ ವಿನ್ನರ್ ಪ್ರಥಮ್‍ನ ಬಿಲ್ಡಪ್

    big boss winner pratham

    ಬಿಗ್‍ಬಾಸ್ ಪ್ರಥಮ್ ಅಂಥಾನೇ ಸದ್ಯಕ್ಕೆ ಫೇಮಸ್ ಆಗಿರೋ   ಪ್ರಥಮ್, ಮತ್ತೊಂದು ಬಿಲ್ಡಪ್ ಕೊಡೋಕೆ ರೆಡಿಯಾಗಿದ್ದಾರೆ. ಬಿಗ್‍ಬಾಸ್ ವಿನ್ನರ್ ಪ್ರಥಮ್ ಅನ್ನೋ ಹೆಸರಿನಲ್ಲೇ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಚಿತ್ರದ ಟ್ಯಾಗ್‍ಲೈನ್ ಈ ನನ್ನ ಮಗಂದು ಎದೆ ಅತ್ತಿತು ಗುರು.

    ಈ ಚಿತ್ರಕ್ಕೆ ಪ್ರಥಮ್ ಹೀರೋ ಅಷ್ಟೆ ಅಲ್ಲ, ನಿರ್ದೇಶಕನೂ ಆತನೇ.ಚಿತ್ರದ ಕಥೆ ನೀಡಿರುವುದು ಉದ್ಯಮಿ ಉದಯ್ ಮೆಹ್ತಾ ಮತ್ತು ಶ್ರೀಮತಿ ವಾಸವಿ ಮೆಹ್ತಾ. ಆದರೆ, ಹಣ ಹೂಡುತ್ತಿರುವುದು ಅವರಲ್ಲ. 

    ಪ್ರಥಮ್ ಸದ್ಯಕ್ಕೆ ಎಂಎಲ್‍ಎ, ದೇವರಂತಾ ಮನುಷ್ಯ ಚಿತ್ರಗಳಲ್ಲಿ ಬ್ಯುಸಿ. ದೇವರಂತಾ ಮನುಷ್ಯ ಚಿತ್ರದ ಆಡಿಯೋ ರಿಲೀಸ್, ಸೆಪ್ಟೆಂಬರ್ ಮೊದಲ ವಾರಕ್ಕೆ ಫಿಕ್ಸಾಗಿದೆ. ಚಿತ್ರದ ಎರಡನೇ ಟೀಸರ್, ಸೋಮವಾರ ಬಿಡುಗಡೆಯಾಗ್ತಾ ಇದೆ.

    ಅದಕ್ಕೂ ಮುನ್ನ ಅಂದರೆ ಭಾನುವಾರವೇ `ಬಿಲ್ಡಪ್' ಸಿನಿಮಾದ ಫೋಟೋಶೂಟ್ ನಡೆಯಲಿದೆ. ಎಂಎಲ್‍ಎ ಚಿತ್ರಕ್ಕೆ ಸಂಗೀತ ನೀಡಿರುವ ವಿಕ್ರಮ್, ಬಿಲ್ಡಪ್ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿರುವ ಖ್ಯಾತ ನಟಿಯೊಬ್ಬರು ಹೀರೋಯಿನ್ ಆಗುವ ನಿರೀಕ್ಷೆಯಿದೆ. ಚಿತ್ರದ ಕಥೆ ಕಂಪ್ಲೀಟ್ ಕಾಮಿಡಿ ಸಬ್ಜೆಕ್ಟ್ ಎಂದಿದ್ದಾರೆ ಪ್ರಥಮ್.

    Related Articles :-

    Pratham's Build Up

  • ಬಿಲ್ಡಪ್ ಕೊಟ್ಟಿದ್ದ ಪ್ರಥಮ್ ಮಾಡಿ ತೋರಿಸಿಬಿಟ್ಟರು

    pratham's build up

    ಬಿಗ್‍ಬಾಸ್ ಪ್ರಥಮ್, ಬಿಲ್ಡಪ್ ಕೊಡೋದ್ರಲ್ಲಿ ಹೆಸರುವಾಸಿ. ಆದರೆ, ಆ ಬಿಲ್ಡಪ್‍ಗಳನ್ನು ಹಾಗೆಯೇ ಬಿಟ್ಟವರೂ ಅಲ್ಲ. ಕೊಟ್ಟ ಬಿಲ್ಡಪ್‍ಗಳಿಗೆ ತಕ್ಕಂತೆ ಮಾಡಿ ತೋರಿಸಿದವರು. ಅವರು ತಮ್ಮ ಹೊಸ ಚಿತ್ರದ ಟೈಟಲ್ ಲಾಂಚ್ ಬಗ್ಗೆಯೂ ಇಂಥದ್ದೇ ಬಿಲ್ಡಪ್ ಕೊಟ್ಟಿದ್ದರು. ಸ್ಯಾಂಡಲ್‍ವುಡ್ ಸ್ಟಾರ್ ನಟರೊಬ್ಬರಿಂದ ತಮ್ಮ ಚಿತ್ರದ ಟೈಟಲ್ ಲಾಂಚ್ ಮಾಡಿಸುವುದಾಗಿ ಹೇಳಿಕೊಂಡಿದ್ದರು. ಆ ಬಿಲ್ಡಪ್‍ನಲ್ಲಿಯೂ ಗೆದ್ದಿದ್ದಾರೆ ಪ್ರಥಮ್.

    ಪ್ರಥಮ್ ಅವರ ಹೊಸ ಚಿತ್ರದ ಟೈಟಲ್ ಲಂಚ್ ಮಾಡಿರುವುದು ಸ್ಯಾಂಡಲ್‍ವುಡ್ ಸ್ಟಾರ್ ಶಿವರಾಜ್ ಕುಮಾರ್. ಚಿತ್ರದ ಹೆಸರೂ ಅದೇ `ಬಿಲ್ಡಪ್'. 

    ತಮ್ಮ ಎಂಎಲ್‍ಎ ಚಿತ್ರಕ್ಕೆ ಸಿದ್ದರಾಮಯ್ಯನವರಿಂದಲೇ ಕ್ಲಾಪ್ ಮಾಡಿಸಿದ್ದ, ಹಾಲಿ ಸಚಿವ ಎಚ್.ಎಂ. ರೇವಣ್ಣನವರಿಂದ ಸಿಎಂ ಪಾತ್ರ ಮಾಡಿಸುತ್ತಿರುವ ಪ್ರಥಮ್, ಬಿಲ್ಡಪ್ ಚಿತ್ರಕ್ಕೆ ನಾಯಕರಷ್ಟೇ ಅಲ್ಲ, ನಿರ್ದೇಶಕರೂ ಹೌದು.

  • ಮುಖ್ಯಮಂತ್ರಿ ಹೆಚ್.ಎಂ.ರೇವಣ್ಣ ಡಬ್ಬಿಂಗ್‍ನಲ್ಲಿ

    hm revanna dubs for mla

    ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವ ಹೆಚ್.ಎಂ.ರೇವಣ್ಣ ಪ್ರಥಮ್ ಅವರ ಎಂಎಲ್‍ಎ ಸಿನಿಮಾದಲ್ಲಿ ಮುಖ್ಯಮಂತ್ರಿಯೇ ಆಗಿದ್ದಾರೆ. ಆ ಸಿನಿಮಾದಲ್ಲಿ ಪ್ರಥಮ್ ಅವರದ್ದು ಶಾಸಕ ಮತ್ತು ಸಚಿವರ ಪಾತ್ರ.

    ಸಿನಿಮಾದ ಶೂಟಿಂಗ್ ಮುಗಿಸಿದ್ದ ಹೆಚ್.ಎಂ.ರೇವಣ್ಣ ಚಿತ್ರಕ್ಕೆ ಡಬ್ಬಿಂಗ್‍ನ್ನೂ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ 4 ದಿನ ಬಿಡುವು ಮಾಡಿಕೊಂಡು ಭಾಗವಹಿಸಿದ್ದ ಹೆಚ್.ಎಂ.ರೇವಣ್ಣ ಅವರಿಗೆ ಪ್ರಥಮ್ ಕೃತಜ್ಞತೆ ಸಲ್ಲಿಸಿದರು.

    ನಿಜ ಜೀವನದಲ್ಲಿಯೂ ಹೆಚ್.ಎಂ.ರೇವಣ್ಣ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು. ಹಾಲಿ ರಾಜಕೀಯದ ದಾಳಗಳನ್ನು ನೋಡಿರುವ ಅನುಭವಸ್ಥ ರಾಜಕಾರಣಿ ಹೆಚ್.ಎಂ.ರೇವಣ್ಣ, ಪ್ರಥಮ್ ಅವರ ರಿಯಲ್ ಸಿಎಂ ಆಗುವ ಹಾರೈಕೆಯನ್ನು ನಗುನಗುತ್ತಲೇ ನಿರಾಕರಿಸಿ, ತಮಗೆ ಅಂತಹ ಆಸೆಯೇ ಇಲ್ಲ ಎಂದು ಹೇಳಿಕೊಂಡಿದ್ದು ವಿಶೇಷ.

  • ಮೇಘನಾ ರಾಜ್`ಗೆ ಸಿದ್ದರಾಮಯ್ಯ ಸೊಸೆ ಸಾಂತ್ವನ

    ex cm siddaramaiah's daughter in law visits meghana raj

    ಪತಿಯನ್ನು ಕಳೆದುಕೊಂಡ ದುಃಖದಲ್ಲಿರುವ ಮೇಘನಾ ರಾಜ್ ಅವರಿಗೆ ಹಲವರು ಸಾಂತ್ವನ ಹೇಳಿದ್ದಾರೆ. ಸಿದ್ದರಾಮಯ್ಯನವರ ಸೊಸೆ ಕೂಡಾ ಮೇಘನಾ ಅವರ ಮನೆಗೆ ತೆರಳಿ ಸುಮಾರು 3 ಗಂಟೆಗಳ ಕಾಲ ಅವರ ಜೊತೆ ಕಳೆದಿದ್ದಾರೆ. ಸಾಂತ್ವನ ಹೇಳಿರುವುದು ಸಿದ್ದರಾಮಯ್ಯನವರ ಹಿರಿಯ ಮಗ ದಿವಂಗತ ರಾಕೇಶ್ ಅವರ ಪತ್ನಿ ಸ್ಮಿತಾ ರಾಕೇಶ್. ಪತಿಯನ್ನು ಕಳೆದುಕೊಂಡವರ ದುಃಖ, ಪತಿಯನ್ನು ಕಳೆದುಕೊಂಡವರಿಗೆ ಇನ್ನೂ ಹೆಚ್ಚು ಅರ್ಥವಾಗುತ್ತದೆ.. ಅಲ್ಲವೇ..

    ಸ್ಮಿತಾ ರಾಕೇಶ್, ಮೇಘನಾ ರಾಜ್ ಕುಟುಂಬದ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದವರು. ಸ್ಮಿತಾ ಅವರೊಂದಿಗೆ ನಟ ಒಳ್ಳೆ ಹುಡ್ಗ ಪ್ರಥಮ್ ಕೂಡಾ ಮೇಘನಾ ಅವರ ಮನೆಗೆ ತೆರಳಿದ್ದರು.

  • ಯಶ್ ಟೀಕಾಕಾರರಿಗೆ ಪ್ರಥಮ್ ಚಾಲೆಂಜ್

    pratham hits back at yash trollers

    ಕಿಚ್ಚ ಸುದೀಪ್ ಮತ್ತು ಯಶ್ ನಡುವೆ ಉತ್ತಮ ಸ್ನೇಹವಿದೆ. ಸುದೀಪ್‍ರ ಫಿಟ್‍ನೆಸ್ ಚಾಲೆಂಜ್‍ಗೆ ಯಶ್ ವಿಡಿಯೋ ಮಾಡಿ ಕಳಿಸಿದ್ದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಆದರೆ, ಆ ವಿಡಿಯೋದಲ್ಲಿ ಸುದೀಪ್‍ರನ್ನು ಸುದೀಪ್ ಸರ್ ಎನ್ನಬೇಕಿತ್ತು ಎಂದು ಕೆಲವು ಅತಿರೇಕಿ ಅಭಿಮಾನಿಗಳು ರೊಚ್ಚಿಗೆದ್ದುಬಿಟ್ಟಿದ್ದಾರೆ. ಸ್ವತಃ ಸುದೀಪ್, ಯಶ್‍ರನ್ನು ಹಾಗೆಲ್ಲ ಟೀಕಿಸಬೇಡಿ ಎಂದು ಮನವಿ ಮಾಡಿದ್ದರೂ, ಇನ್ನೂ ಕೆಲವರು ಕಂಟಿನ್ಯೂ ಮಾಡ್ತಾನೇ ಇದ್ದಾರೆ. ಅಂತಹವರಿಗೆ ಪ್ರಥಮ್ ಈಗ ಒಂದು ಚಾಲೆಂಜ್ ಹಾಕಿದ್ದಾರೆ.

    ನಿಮಗೆ ಯಶ್‍ರನ್ನು ಕಾಲೆಳೆಯಬೇಕು ಅಂತಿದ್ರೆ, ಒಂದ್ಸಲ ಅವರನ್ನು ತಲೆಯೆತ್ತಿ ನೋಡಿ. ಅವರು ಆಗಲೇ ತುಂಬಾ ಮೇಲಿದ್ದಾರೆ.ಸ್ಸೋ.. ಕೆಳಗೆ ನಿಂತು ಕಲ್ಲೆಸೆಯೋ ಪ್ರಯತ್ನ ಬೇಡ. ಅದು ನಿಮ್ಮ ತಲೆ ಮೇಲೇ ಬೀಳುತ್ತೆ. ಇದು ಪ್ರಥಮ್ ಮಾತು.

    ಅವರನ್ನು ಟೀಕಿಸುವವರು ಮೊದಲು ಅವರು ಏರಿರುವ ಎತ್ತರಕ್ಕೆ ಬೆಳೆಯಲಿ ಎಂದಿದ್ದಾರೆ ಪ್ರಥಮ್.

    Related Articles :-

    ಅಭಿಮಾನಿಗಳ ಅತಿರೇಕ - ಸುದೀಪ್ ಬುದ್ದಿವಾದ

     

  • ರಾಜ್ಯೋತ್ಸವಕ್ಕೆ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

    pratham's new movie title launch

    ಬಿಗ್‍ಬಾಸ್ ಪ್ರಥಮ್, ಒಳ್ಳೆ ಹುಡ್ಗ ಪ್ರಥಮ್ ಅವರ ಹೊಸ ಚಿತ್ರದ ಟೈಟಲ್ ನಾಳೆ ಲಾಂಚ್ ಆಗಲಿದೆ. ಕನ್ನಡದ ಪ್ರಖ್ಯಾತ ನಟರೊಬ್ಬರು ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಹಲವಾರು ಖ್ಯಾತ ನಿರ್ಮಾಪಕರು ಟೈಟಲ್ ಲಾಂಚ್‍ಗೆ ಸಾಕ್ಷಿಯಾಗಲಿದ್ದಾರೆ. ನಾಳೆ ಸಂಜೆ 7 ಗಂಟೆಗೆ ರಾಜ್ಯೋತ್ಸವದ ಪ್ರಯುಕ್ತ ಸಿನಿಮಾದ ಟೈಟಲ್ ಲಾಂಚ್ ಆಗಲಿದ್ದು, ನವೆಂಬರ್‍ನಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

    ಪ್ರಥಮ್ ಬಿಲ್ಡಪ್ ಕೊಡೋದ್ರಲ್ಲಿ ಫೇಮಸ್. ತಮ್ಮ ಈ ಹಿಂದಿನ ಚಿತ್ರಗಳಿಗೆ ಸಿಎಂ ಸಿದ್ದರಾಮಯ್ಯನವರನ್ನೇ ಕರೆಸಿದ್ದ, ಯಡಿಯೂರಪ್ಪ ಭಾಗಿಯಾಗುವಂತೆ ಮಾಡಿದ್ದ ಹಾಗೂ ಹೆಚ್.ಎಂ. ರೇವಣ್ಣನವರನ್ನೆ ತಮ್ಮ ಚಿತ್ರದಲ್ಲಿ ಸಿಎಂ ಪಾತ್ರದಲ್ಲಿ ನಟಿಸುವಂತೆ ಒಪ್ಪಿಸಿ ಗೆದ್ದಿರುವ ಪ್ರಥಮ್, ಈ ಚಿತ್ರದಲ್ಲಿ ಏನೇನು ಬಿಲ್ಡಪ್ ಕೊಡಲಿದ್ದಾರೋ.. ನೋಡಬೇಕು.

  • ವಿವಾದಿತ ಸ್ಟಾರ್ ಪ್ರಥಮ್ ಸ್ಟೋರಿಗೆ ಟ್ವಿಸ್ಟ್ - ಈಗ ಭುವನ್ ವಿರುದ್ಧ ಪ್ರಥಮ್ ಕಂಪ್ಲೇಂಟ್ 

    pratham files complaint aganist bhuvan

    ಸಹನಟ ಭುವನ್​ ತೊಡೆಗೆ ಕಚ್ಚಿ, ಗಾಯಗೊಳಿಸಿದ್ದ ಪ್ರಥಮ್, ಈಗ ಭುವನ್ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಎಂಬ ಆರೋಪ ಮಾಡಿ ದೂರು ಕೊಟ್ಟಿದ್ದಾರೆ. ಶನಿವಾರ ಸಂಜೆ 4.30ರ ವೇಳೆಯಲ್ಲಿ ಭುವನ್ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರಂತೆ. ದೂರಿನ ಪ್ರಕಾರ, ಭುವನ್ ಪ್ರಥಮ್​ಗೆ ‘‘ಲೇ ಪ್ರಥಮ್ ಇವತ್ತು ನನಗೆ ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಕೊನೆ ದಿನ. ಆದರೆ, ನಿನಗೆ ಇವತ್ತೇ ಕೊನೆ ದಿನ’’ ಎಂದು ಹೇಳಿ ಹಿಗ್ಗಾಮುಗ್ಗಾ ಹೊಡೆದರಂತೆ. ಕುತ್ತಿಗೆ, ಬೆನ್ನಿಗೆಲ್ಲ ಗಾಯವಾಯಿತಂತೆ. ಆಗ ಧಾರಾವಾಹಿ ತಂಡದಲ್ಲಿದ್ದ ಕೆಲವರೇ ನನ್ನನ್ನು ಭುವನ್​ನಿಂದ ರಕ್ಷಿಸಿದರು ಎಂದು ದೂರಿದ್ದಾರೆ ಪ್ರಥಮ್. 

    ಘಟನೆ ನಡೆದ ಮೇಲೆ ಊರಿಗೆ ಹೋಗಿದ್ದ ಪ್ರಥಮ್​ಗೆ ವಿಷಯ ಗೊತ್ತಾಗಿದ್ದು ಮಾಧ್ಯಮಗಳ ಮೂಲಕ ಅಂತೆ. ಅದೂವರೆಗೆ ಪ್ರಥಮ್ ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದೇ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಜಾಮೀನು ಪಡೆದು, ನಂತರ ಚಿಕಿತ್ಸೆ ಪಡೆದು ಈಗ ದೂರು ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

    ಅಂದಹಾಗೆ ಪ್ರಥಮ್, ಭುವನ್ ವಿರುದ್ಧ ದೂರು ದಾಖಲಿಸಿರುವುದು ನಿನ್ನೆ ಅಂದ್ರೆ ಜುಲೈ 24ರ ರಾತ್ರಿ 11.30ರ ವೇಳೆಯಲ್ಲಿ.

    Related Articles :-

    ಕಚ್ಚಿಂಗ್ ಸ್ಟಾರ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..?

    ಸೈಕೋ ಪ್ರಥಮ್​ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ

    Is Pratham The New Venkat?

    ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

    ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

    ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

    Udaya Mehta Not Producimg Pratham Movie 

    ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ