` hamsalekha, - chitraloka.com | Kannada Movie News, Reviews | Image

hamsalekha,

  • ಹಂಸಲೇಖ ಆರೋಗ್ಯ ಹೇಗಿದೆ..?

    hamsalekha recovering

    ನಾದಬ್ರಹ್ಮ ಹಂಸಲೇಖ ಅವರ ಆರೋಗ್ಯಕ್ಕೆ ಏನಾಗಿದೆ..? ಅಭಿಮಾನಿಗಳು ಆತಂಕಗೊಂಡು ಈ ಪ್ರಶ್ನೆ ಕೇಳೋಕೆ ಶುರುವಾಗಿದ್ದರು. ಆಗಿರೋದು ಇಷ್ಟು. ಕಿರುತೆರೆ ರಿಯಾಲಿಟಿ ಶೋ ಶೂಟಿಂಗ್‍ನಲ್ಲಿದ್ದ ಹಂಸಲೇಖ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈಗಾಗಲೇ ಒಮ್ಮೆ ಲಘು ಹೃದಯಾಘಾತಕ್ಕೆ ಒಳಗಾಗಿರುವ ಕಾರಣ, ಸೆಟ್‍ನಲ್ಲಿದ್ದವರೆಲ್ಲರೂ ಗಾಬರಿಯಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.

    ಹಂಸಲೇಖ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು. ಈ ಕುರಿತು ಹಂಸಲೇಖ ಮನೆಯವರು ಸ್ಪಷ್ಟನೆ ನೀಡಿದ್ದು, ಹಂಸಲೇಖ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಅಂದಹಾಗೆ ಹಂಸಲೇಖ ಅವರಿಗೆ ಹೃದಯಾಘಾತವಾಗಿಲ್ಲ. ಅವರು ಆರೋಗ್ಯವಾಗಿದ್ದಾರೆ.

  • ಹಂಸಲೇಖ ನಿರ್ದೇಶನದಲ್ಲಿ ಸಿದ್ಧಗಂಗಾ ಶ್ರೀಗಳ ಸಿರೀಸ್ : ಶ್ರೀಗಳ ಪಾತ್ರ ಯಾರಿಗೆ..?

    ಹಂಸಲೇಖ ನಿರ್ದೇಶನದಲ್ಲಿ ಸಿದ್ಧಗಂಗಾ ಶ್ರೀಗಳ ಸಿರೀಸ್ : ಶ್ರೀಗಳ ಪಾತ್ರ ಯಾರಿಗೆ..?

    ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತ ಮಿನಿ ಸಿರೀಸ್ ಮಾಡೋ ಕೆಲಸಕ್ಕೆ ಹಂಸಲೇಖ ಕೈಹಾಕಿದ್ದಾರೆ. ಇದು ಸಿನಿಮಾ ಅಲ್ಲ. ಒಟ್ಟಾರೆ 52 ಎಪಿಸೋಡ್‍ಗಳ ಸಿರೀಸ್. ನಿರ್ದೇಶನ ನಾದಬ್ರಹ್ಮ ಹಂಸಲೇಖ ಅವರದ್ದು.

    ರುದ್ರಾ ಕಿರುಚಿತ್ರ ಸಂಸ್ಥೆ ಮತ್ತು ಐದನಿ ಎಂಟರ್‍ಪ್ರೈಸಸ್ ಈ ಸಿರೀಸ್‍ಗೆ ಬಂಡವಾಳ ಹೂಡುತ್ತಿವೆ. ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್, ಎಂ.ಪಿ.ರೇಣುಕಾಚಾರ್ಯ, ನಿರ್ಮಾಪಕ ರುದ್ರೇಶ್, ದೀಪಕ್, ಸದಾಶಿವಯ್ಯ.. ಮೊದಲಾದವರು ಈ ಸಿರೀಸ್‍ಗೆ ಕೈಜೋಡಿಸುತ್ತಿದ್ದಾರೆ.

    ಅಂದಹಾಗೆ ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಚಿಂತನೆ ನಡೆಸಿದೆ. ಇನ್ನೂ ಅಂತಿಮವಾಗಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕøತ ಭಾಷೆಗಳಲ್ಲಿ ಸಿರೀಸ್ ಸಿದ್ಧವಾಗಲಿದ್ದು, ಎಲ್ಲರಿಗೂ ಪರಿಚಿತವಾಗಿರೋ ಸ್ಟಾರ್ ನಟರನ್ನೇ ಆಯ್ಕೆ ಮಾಡಿಕೊಳ್ಳೋಕೆ ಚಿತ್ರತಂಡ ಮುಂದಾಗಿದ್ದು, ಬಚ್ಚನ್ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

  • ಹಂಸಲೇಖ ಹೇಳಿದ ಕರಿ ಕಾರ್ನಾಡ್ ಯಾರು..?

    hamsalekha's title to yogaraj bhat

    ತುಂಬ ವರ್ಷಗಳ ಹಿಂದೆಯೇ ಹಂಸಲೇಖ ಅವರಿಗೊಂದು ಹೆಸರಿಟ್ಟಿದ್ದರು. ಕೆಕೆ ಎಂದು ಕರೆಯುತ್ತಿದ್ದರು. ಏಕೆಂದರೆ, ಅವರನ್ನು ನೋಡಿದಾಗಲೆಲ್ಲ ಹಂಸಲೇಖ ಅವರಿಗೆ ಗಿರೀಶ್ ಕಾರ್ನಾಡ್ ನೆನಪಾಗುತ್ತಿತ್ತು. ಆದರೆ, ಇವರು ಅವರಷ್ಟು ಕಲರ್ ಇಲ್ಲ. ಸ್ವಲ್ಪ ಕಪ್ಪು. ಹೀಗಾಗಿಯೇ ಕೆಕೆ ಎಂದು ಹೆಸರಿಟ್ಟಿದ್ದರು ಹಂಸಲೇಖ. ಅಂದಹಾಗೆ ಹಂಸಲೇಖ ಹಾಗೆ ಕೆಕೆ ಎಂದು ನಾಮಕರಣ ಮಾಡಿದ್ದು ಯಾರಿಗೆ ಅಂದುಕೊಂಡಿದ್ದೀರಿ.. ಯೋಗರಾಜ್ ಭಟ್ಟರಿಗೆ. ಕೆಕೆ ಎಂದರೆ ಕರಿ ಕಾರ್ನಾಡ್ ಎಂದರ್ಥ.. ಅಷ್ಟೆ.

    ಭಟ್ಟರ ಪಂಚರಂಗಿ ಆಡಿಯೋ ಕಂಪೆನಿ ಉದ್ಘಾಟನೆ ವೇಳೆ ಈ ಮಾತು ಹೇಳಿಕೊಂಡ ಹಂಸಲೇಖ, ತಮ್ಮ ಹಾಗೂ ಭಟ್ಟರ ನಡುವಿನ ಸಾಮ್ಯತೆಯನ್ನು ಹೇಳಿಕೊಂಡರು.  ಚಿ.ಉದಯಶಂಕರ್ ಬರೆದದ್ದನ್ನೇ ನಾನು ಬರೆಯಬಾರದು, ಹೊಸದೇನನ್ನಾದರೂ ಬರೆಯಬೇಕು ಎಂಬ ಹಠಕ್ಕೆ ಬಿದ್ದು ನಾನು ಬರೆದೆ. ಹಂಸಲೇಖ ಬರೆದಿದ್ದನ್ನು ನಾನು  ಬರೆಯಬಾರದು ಎಂದು ಹಠ ತೊಟ್ಟವರಂತೆ ಯೋಗರಾಜ್ ಭಟ್ ಬರೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ ಹಂಸಲೇಖ.

  • ಹಂಸಲೇಖಾಗೆ ಭಟ್ಟರಿಂದ ಹಾರ್ಮೋನಿಯಂ ಕಾಣಿಕೆ

    yogaraj bhatt starts new venture with hamsalekha

    ಯೋಗರಾಜ್ ಭಟ್ಟರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪಂಚರಂಗಿ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ಯೋಗರಾಜ್ ಭಟ್, ಈಗ ಅದೇ ಹೆಸರಿನಲ್ಲಿ ಆಡಿಯೋ ಕಂಪೆನಿ ಹುಟ್ಟುಹಾಕಿದ್ದಾರೆ. ಆ ಕಂಪೆನಿ ಉದ್ಘಾಟಿಸಿದ್ದು ನಾದಬ್ರಹ್ಮ ಹಂಸಲೇಖ ಅನ್ನೋದು ವಿಶೇಷ. ಹಾಗೆ ತಮ್ಮ ಆಡಿಯೋ ಕಂಪೆನಿ ಉದ್ಘಾಟಿಸಿದ ಸಂಗೀತ ಸಾಮ್ರಾಟನಿಗೆ ಯೋಗರಾಜ್ ಭಟ್ ಕೊಟ್ಟ ಉಡುಗೊರೆ ಹಾರ್ಮೋನಿಯಂ.

    ಕಂಪೆನಿಯಿಂದ ಮೊದಲನೆಯದಾಗಿ ಬಿಡುಗಡೆಯಾದ ಆಡಿಯೋ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮೂಲಕ ಭಟ್ಟರು ಹೊಸ ಸಾಹಸ ಆರಂಭಿಸಿಬಿಟ್ಟಿದ್ದಾರೆ. ಶುಭವಾಗಲಿ.